Jackie Shroff: ಪಾಪರಾಜಿಗಳ ವರ್ತನೆ ಕಂಡು ನಟ ಜಾಕಿ ಶ್ರಾಫ್ ಗರಂ! ಆಶಾ ಭೋಸ್ಲೆ ಬಗ್ಗೆ ಕೇಳಿದ್ದೇನು?
Jackie Shroff: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ (ಏ.13) ನೆರವೇರಿತು. ಪುತ್ರ ಆನಂದ್ ಭೋಸ್ಲೆ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನ ಪೂರೈಸಿದರು. ಇದಕ್ಕೂ ಮುಂಚೆ ಸೆಲೆಬ್ರಿಟಿಗಳು ಮತ್ತು ಗಣ್ಯರು ಆಶಾ ಭೋಸ್ಲೆ ಅವರ ನಿವಾಸಕ್ಕೆ ಆಗಮಿಸಿ, ಗಾಯಕಿಯ ಅಂತಿಮ ದರ್ಶನ ಪಡೆದರು. ಅವರಲ್ಲಿ ಹಿರಿಯ ನಟ ಜಾಕಿ ಶ್ರಾಫ್ ಕೂಡ ಇದ್ದರು , ನಿಧನದಿಂದ ತೀವ್ರ ದುಃಖಿತರಾಗಿದ್ದರು. ಆದಾಗ್ಯೂ, ಹೊರಗೆ ನಿಂತಿದ್ದ ಪಾಪರಾಜಿಗಳ ಪ್ರಶ್ನೆಗಳಿಂದ ಅವರು ಕೋಪಗೊಂಡಂತೆ ತೋರುತ್ತಿತ್ತು ಮತ್ತು ಅಂತಿಮವಾಗಿ ತಾಳ್ಮೆಯನ್ನು ಕಳೆದುಕೊಂಡರು.
ನಟ ಜಾಕಿ ಶ್ರಾಫ್ ಗರಂ -
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಂತ್ಯಕ್ರಿಯೆಯು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ (ಏ.13) ನೆರವೇರಿತು. ಪುತ್ರ ಆನಂದ್ ಭೋಸ್ಲೆ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನ ಪೂರೈಸಿದರು. ಇದಕ್ಕೂ ಮುಂಚೆ ಸೆಲೆಬ್ರಿಟಿಗಳು ಮತ್ತು ಗಣ್ಯರು ಆಶಾ ಭೋಸ್ಲೆ ಅವರ ನಿವಾಸಕ್ಕೆ ಆಗಮಿಸಿ, ಗಾಯಕಿಯ (Singer) ಅಂತಿಮ ದರ್ಶನ ಪಡೆದರು. ಅವರಲ್ಲಿ ಹಿರಿಯ ನಟ ಜಾಕಿ ಶ್ರಾಫ್ (Jackie Shroff) ಕೂಡ ಇದ್ದರು , ನಿಧನದಿಂದ ತೀವ್ರ ದುಃಖಿತರಾಗಿದ್ದರು. ಆದಾಗ್ಯೂ, ಹೊರಗೆ ನಿಂತಿದ್ದ ಪಾಪರಾಜಿಗಳ ಪ್ರಶ್ನೆಗಳಿಂದ ಅವರು ಕೋಪಗೊಂಡಂತೆ ತೋರುತ್ತಿತ್ತು ಮತ್ತು ಅಂತಿಮವಾಗಿ ತಾಳ್ಮೆಯನ್ನು ಕಳೆದುಕೊಂಡರು.
ಆಶಾ ಭೋಸ್ಲೆ ಅವರ ನಿಧನದ ಬಗ್ಗೆ ‘ನಿಮಗೆ ಹೇಗನ್ನಿಸುತ್ತಿದೆ’ ಎಂಬ ಸಾಮಾನ್ಯ ಹಾಗೂ ವಿವೇಚನಾರಹಿತ ಪ್ರಶ್ನೆಯನ್ನು ಅವರು ನಟನಿಗೆ ಕೇಳಿದರು.
ಯಾರದ್ದಾದರೂ ತಾಯಿ ತೀರಿಕೊಂಡಾಗ ಹೇಗನ್ನಿಸುತ್ತದೆ? ನಮ್ಮ ತಾಯಿ ನಿಧನರಾಗಿದ್ದಾರೆ. ಯಾರಾದರೂ ತಮ್ಮ ತಾಯಿಯನ್ನು ಕಳೆದುಕೊಂಡಾಗ ಹೇಗನ್ನಿಸುತ್ತದೆ ಎಂದು ಕೇಳುವುದರಲ್ಲಿ ಅರ್ಥವಿದೆಯೇ? ನೀವು ಈ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಹೇಗನಿಸುತ್ತದೆ’ ಎಂದು ಅವರು ಕೇಳಿದರು.
ಇದನ್ನೂ ಓದಿ: Athiya Shetty: ಆಶಾ ಭೋಸ್ಲೆ ಬದಲಿಗೆ ಬೇರೆ ಫೋಟೋ ಪೋಸ್ಟ್; ಅಥಿಯಾ ಶೆಟ್ಟಿ ಹಿಗ್ಗಾಮುಗ್ಗಾ ಟ್ರೋಲ್
ಇದು ಅಂತಹ ವಿಷಯಗಳನ್ನು ಹೇಳುವ ಸಮಯವಲ್ಲ ಎಂದು ಹೇಳಿದರು. . ಬಿಟ್ಟುಬಿಡಿ ಸಹೋದರರೇ, ಮನೆಗೆ ಹೋಗಿ’ ಎಂದು ಹೇಳಿ ಅಲ್ಲಿಂದ ಹೊರನಡೆದರು. ಜಾಕಿ ಶ್ರಾಫ್ ಅವರು ಕ್ಲಾಸ್ ತೆಗೆದುಕೊಂಡ ಈ ವಿಡಿಯೋ ವೈರಲ್ ಆಗಿದೆ.
ಮುಂಬೈನಲ್ಲಿ ಸೋಮವಾರ (ಏ.13) ಸಕಲ ಸರ್ಕಾರಿ ಗೌರವಗಳೊಂದಿಗೆ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಕುಟುಂಬ ಸದಸ್ಯರು ಮತ್ತು ಸಾವಿರಾರು ಅಭಿಮಾನಿಗಳು ಆಶಾ ತಾಯಿಗೆ ಅಂತಿಮ ವಿದಾಯ ಸಲ್ಲಿಸಿದರು.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 92 ವರ್ಷದ ಭೋಸ್ಲೆ ಅವರು ಭಾನುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಇಂದು ಅವರ ಅಂತ್ಯಕ್ರಿಯೆಯನ್ನು ಮುಂಬೈನ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ನೆರವೇರಿಸಲಾಯಿತು. ಅವರ ಪುತ್ರ ಆನಂದ್ ಭೋಸ್ಲೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಕುಟುಂಬ ಸದಸ್ಯರ ದುಃಖ ಮುಗಿಲುಮುಟ್ಟಿತ್ತು.
ಅದಕ್ಕೂ ಮುನ್ನ ಆಶಾ ಅವರ ಪಾರ್ಥಿವ ಶರೀರವನ್ನು ಲೋವರ್ ಪರೆಲ್ನಲ್ಲಿರುವ ಅವರ ನಿವಾಸದಿಂದ ಚಿತಾಗಾರದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಶಾ ಭೋಸ್ಲೆ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಇದನ್ನೂ ಓದಿ: Annayya Serial: ಕರುಳು ಬಳ್ಳಿಗಳ ಒಂದಾಗಿಸೋಕೆ ಪಾರು ನಾನಾ ಪಾತ್ರ; ಪಾಪ ಶಿವು ಬಡವಾಗ್ತಿದ್ದಾನೆ!
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಶಿವಸೇನೆ ನಾಯಕಿ ಶೈನಾ ಎನ್ಸಿ ಮತ್ತು ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಉಪಸ್ಥಿತರಿದ್ದರು.