ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನಸೂರೆಗೊಂಡ ʻರಾಮಾಯಣʼ ಸಿನಿಮಾದ ಟ್ರೇಲರ್‌; ಸಿನಿಪ್ರಿಯರ ಗಮನಸೆಳೆದ ಆ 5 ಅಂಶಗಳೇನು?

ಮಹಾಕಾವ್ಯ ಆಧಾರಿತ ‘ರಾಮಾಯಣ: ಪಾರ್ಟ್ 1’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದ್ಭುತ ವಿಎಫ್‌ಎಕ್ಸ್ ಹಾಗೂ ದೃಶ್ಯ ವೈಭವದಿಂದ ಜಾಗತಿಕವಾಗಿ ಭಾರಿ ಸದ್ದು ಮಾಡುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಾವಣನಾಗಿ ಯಶ್, ರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಮಿಂಚಿದ್ದಾರೆ.

ʻರಾಮಾಯಣʼ ಸಿನಿಮಾದ ಟ್ರೇಲರ್‌ನಲ್ಲಿ ಸಿನಿಪ್ರಿಯರ ಗಮನಸೆಳೆದ 5 ಅಂಶಗಳಿವು!

-

Avinash GR
Avinash GR Jul 30, 2026 2:48 PM

ಮಹಾಕಾವ್ಯ ‘ರಾಮಾಯಣ’ವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಅದ್ಭುತ ದೃಶ್ಯ ವೈಭವ ಹಾಗೂ ತಾಂತ್ರಿಕತೆಯಿಂದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಜಂಟಿಯಾಗಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸದ್ಯ ಈ ಟ್ರೇಲರ್‌ನ 5 ಪ್ರಮುಖ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಟ್ರೇಲರ್‌ನಲ್ಲಿ ಎದ್ದು ಕಾಣುವ 5 ಪ್ರಮುಖ ಅಂಶಗಳು

1.ರಾವಣನಾಗಿ ಯಶ್ ಅಬ್ಬರ:

ಮೂರು ಲೋಕಗಳ ಅಧಿಪತಿಯಾಗಿ ರಾಕ್ಷಸ ರಾಜ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚಿದ್ದಾರೆ. ಲಕ್ಷಾಂತರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ರಾವಣ, "ಮೂರು ಲೋಕಗಳು ರಾವಣ ರಾಜ್ಯವನ್ನು ವೀಕ್ಷಿಸಲಿವೆ" ಎಂದು ಘೋಷಿಸುವ ಸನ್ನಿವೇಶವು ರಾವಣನ ಭವ್ಯತೆ ಮತ್ತು ಆಡಳಿತದ ಶಕ್ತಿಯನ್ನು ತೋರಿಸುತ್ತದೆ. ಈವರೆಗೆ ಸಿನಿಮಾಗಳಲ್ಲಿ ತೋರಿಸಿರುವ ರಾವಣ ಪಾತ್ರವು ಇಲ್ಲಿ ಭಿನ್ನವಾಗಿ ಮೂಡಿಬಂದಿದೆ.

2.ಶ್ರೀಮನ್ನಾರಾಯಣನ ದಿವ್ಯ ರೂಪ:

ಭೂಮಿಗೆ ಕಂಟಕ ಬಂದಾಗ ಜಗತ್ತಿನ ರಕ್ಷಕ ಅವತರಿಸುವ ಸನ್ನಿವೇಶವನ್ನು ವಿವರಿಸುತ್ತಾ, ಶೇಷನಾಗನ ಸಮ್ಮುಖದಲ್ಲಿ ಕಮಲ ಮತ್ತು ಶಂಖವನ್ನು ಹಿಡಿದು ಭಗವಾನ್ ವಿಷ್ಣುವು ಪರಮ ದಿವ್ಯ ರೂಪದಲ್ಲಿ ಕಾಣಿಸಿಕೊಳ್ಳುವ ಸನ್ನಿವೇಶವು ಇಲ್ಲಿ ಅತ್ಯಂತ ಭಕ್ತಿಪೂರ್ವಕ ಹಾಗೂ ಅಲೌಕಿಕ ಅನುಭವ ನೀಡುತ್ತದೆ.

Yash: ಬ್ರಹ್ಮ ಮುಹೂರ್ತದಲ್ಲೇ ‘ರಾಮಾಯಣ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದೇಕೆ? ಏನಿದರ ವಿಶೇಷತೆ?

3.ಶ್ರೀರಾಮನ ಕಮಲದ ದಳಗಳ ಧ್ಯಾನದ ದೃಶ್ಯ:

ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಂಡಿದ್ದಾರೆ. ರಾಮನು ಧ್ಯಾನದಲ್ಲಿ ಮುಳುಗಿದ್ದಾಗ ಅವನ ಸುತ್ತಲೂ ಬೃಹತ್ ಕಮಲದ ದಳಗಳು ಸೃಷ್ಟಿಯಾಗುವ ದೃಶ್ಯವು ಶಕ್ತಿ ಮತ್ತು ಶಾಂತಿಯ ಸಂಕೇತವಾಗಿ ಮೂಡಿಬಂದಿದೆ.

4.ಖಡ್ಗ ಬೀಸುವ ಸೀತೆ:

ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಅವರು ಕತ್ತಿ ಬೀಸುವ ದೃಶ್ಯವು ವೀಕ್ಷಕರಿಗೆ ಆಶ್ಚರ್ಯ ತಂದಿದೆ. ಸಾಂಪ್ರದಾಯಿಕವಾಗಿ ಸೀತೆಯನ್ನು ಕರುಣೆ ಮತ್ತು ಧೈರ್ಯದ ಸಂಕೇತವಾಗಿ ನೋಡಲಾಗುತ್ತಿತ್ತಾದರೂ, ಪ್ರಾಚೀನ ಕಥನಗಳಲ್ಲಿರುವಂತೆ ಆಕೆಯ ಜ್ಞಾನ, ಧೈರ್ಯ ಮತ್ತು ಆತ್ಮರಕ್ಷಣೆಯ ಮತ್ತೊಂದು ಶಕ್ತಿಶಾಲಿ ಆಯಾಮವನ್ನು ಈ ದೃಶ್ಯದಲ್ಲಿ ಪರಿಚಯಿಸಲಾಗಿದೆ.

5.ಬ್ರಹ್ಮಾಸ್ತ್ರ ಆಹ್ವಾನಿಸುವ ಸನ್ನಿವೇಶ:

"ಇದು ರಾಮಯುಗದ ಆರಂಭ" ಎಂದು ಘೋಷಿಸುತ್ತಾ ಶ್ರೀರಾಮನು ಬ್ರಹ್ಮಾಸ್ತ್ರವನ್ನು ಆಹ್ವಾನಿಸುವ ದೃಶ್ಯದೊಂದಿಗೆ ಟ್ರೇಲರ್ ಮುಕ್ತಾಯಗೊಳ್ಳುತ್ತದೆ. ಪಂಚಭೂತಗಳು ಒಂದಾಗಿ ಉರಿಯುವ ಈ ಸನ್ನಿವೇಶವು ಚಿತ್ರದ ಉನ್ನತ ಮಟ್ಟದ ವಿಎಫ್‌ಎಕ್ಸ್ (VFX) ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

Ramayana Movie: ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

ರಾಮಾಯಣದ ಮೇಲಿರುವ ಅಪಾರ ನಂಬಿಕೆ ಮತ್ತು ಭಾವನೆಗಳನ್ನು ಗೌರವಿಸಿ, ಅತ್ಯಂತ ಕಾಳಜಿಯಿಂದ ಈ ಬಿಗ್ ಬಜೆಟ್ ಸಿನಿಮಾವನ್ನು ಮರುಸೃಷ್ಟಿಸಲಾಗಿದ್ದು, ಸದ್ಯ ಪ್ರಪಂಚದಾದ್ಯಂತ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. 2026ರ ದೀಪಾವಳಿ ಹಬ್ಬದ ವೇಳೆಯಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.