ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ahmedabad Plane Crash: ಗುಜರಾತ್‌ ವಿಮಾನ ಪತನ; ಎಲ್ಲ 242 ಪ್ರಯಾಣಿಕರು ಸಾವು

Gujarat Plane Crash: ಗುಜರಾತ್‌ನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ಎಲ್ಲ 242 ಮಂದಿ ಬಲಿಯಾಗಿದ್ದಾರೆ. ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾದ ಬೋಯಿಂಗ್ 787-8 ಡ್ರೀಮ್​​ಲೈನರ್ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನವಾಗಿದೆ. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿದ್ದು, ವಿದ್ಯಾರ್ಥಿಗಳೂ ಮೃತಪಟ್ಟಿರುವ ಸಾಧ್ಯತೆ ಇದೆ.

ಗುಜರಾತ್‌ ವಿಮಾನ ಪತನ; ಎಲ್ಲ 242 ಪ್ರಯಾಣಿಕರು ಸಾವು

Profile Ramesh B Jun 12, 2025 6:41 PM

ಗಾಂಧಿನಗರ: ಕಂಡು ಕೇಳರಿಯದೆ ಭೀಕರ ವಿಮಾನ ಅಪಘಾತಕ್ಕೆ ಭಾರತ ಜೂ. 12ರಂದು ಸಾಕ್ಷಿಯಾಗಿದ್ದು, ಸುಮಾರು 242 ಮಂದಿ ಬಲಿಯಾಗಿದ್ದಾರೆ (Ahmedabad Plane Crash). ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾದ ಬೋಯಿಂಗ್ 787-8 ಡ್ರೀಮ್​​ಲೈನರ್ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನವಾಗಿದ್ದು, ಪೈಲಟ್‌, ಸಿಬ್ಬಂದಿ, ಪ್ರಯಾಣಿಕರು ಸೇರಿ ಒಟ್ಟ 242 ಮಂದಿ ಇದ್ದರು. ಪತನವಾಗುತ್ತಿದ್ದಂತೆ ಬೆಂಕಿ ಉಂಡೆಯಂತಾದ ವಿಮಾನ ಸುಮಾರು 625 ಅಡಿ ಎತ್ತರದಿಂದ ಕೆಳಗೆ ಉರಳಿತು. ಮೆಡಿಕಲ್‌ ಕಾಲಾಜು ಹಾಸ್ಟೆಲ್‌ ಕಟ್ಟಡಕ್ಕೆ ಇದು ಅಪ್ಪಳಿದ್ದು, ಈ ವೇಳೆ ವಿದ್ಯಾರ್ಥಿಗಳೂ ಬಲಿಯಾಗಿರುವ ಸಾಧ್ಯತೆ ಇದೆ. ತಾಂತ್ರಿಕ ದೋಷದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು, ಒಬ್ಬರು ಪೈಲಟ್‌ಗಳು ಮತ್ತು 10 ಮಂದಿ ಸಿಬ್ಬಂದಿ ಇದ್ದರು. ಪ್ರಯಾಣಿಕರ ಪೈಕಿ 169 ಮಂದಿ ಭಾರತೀಯರು, 53 ಬ್ರಿಟಿಷ್‌ ಪ್ರಜೆಗಳು, 7 ಮಂದಿ ಪೋರ್ಚುಗೀಸರು ಮತ್ತು ಕೆನಡಾದ ಓರ್ವ ಪ್ರಜೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತರ ಪೈಕಿ 5 ವಿದ್ಯಾರ್ಥಿಗಳು ಇದ್ದಾರೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: Ahmedabad Plane Crash: ಗುಜರಾತ್‌ ವಿಮಾನ ಪತನ; ಟೇಕ್‌ಆಫ್‌ ವೇಳೆ ಆಪಘಾತವಾಗಿದ್ದೇಕೆ?

ಅಪಘಾತ ಸ್ಥಳದ ದೃಶ್ಯಗಳಲ್ಲಿ ಹಾಸ್ಟೆಲ್‌ನ ಊಟದ ಕೋಣೆಯ ಗೋಡೆಯನ್ನು ಭೇದಿಸಿರುವುದು ಕಂಡು ಬಂದಿದೆ. ಲಂಡನ್‌ಗೆ ಸುಮಾರು 5 ಗಂಟೆ ಅವಧಿಯ ಪ್ರಯಾಣ ಇರುವುದರಿಂದ ವಿಮಾನದಲ್ಲಿ ಇಂಧನ ತುಂಬಿಸಿಡಲಾಗಿತ್ತು. ಹತ್ತಿಕೊಂಡ ಬೆಂಕಿ ಕ್ಷಿಪ್ರವಾಗಿ ಹರಡಲು ಇದೂ ಒಂದು ಕಾರಣ ಎನ್ನಲಾಗಿದೆ.

ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ, ಪೈಲಟ್ ಮೇಡೇ ಕರೆ ಮಾಡಿದ್ದರು. ಬಳಿಕ ನಿಯಂತ್ರಣ ಕಳೆದುಕೊಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 825 ಅಡಿಯಷ್ಟು ಎತ್ತರದಿಂದ ಕೆಳಕ್ಕಿಳಿದ ವಿಮಾನವನ್ನು ಮೇಲೆಕ್ಕೆತ್ತಲು ಪೈಲಟ್‌ ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ವಾಯುಯಾನ ತಜ್ಞ ಸಂಜಯ್ ಲಾಜರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ವೈರಲ್‌ ಆದ ವಿಡಿಯೊದಲ್ಲಿ ವಿಮಾನದ ಸುಟ್ಟು ಕರಕಲಾದ ಅವಶೇಷಗಳು, ಸ್ಥಳದಿಂದ ದಟ್ಟ ಹೊಗೆ ಏರುತ್ತಿರುವುದು ಮತ್ತು ತುರ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಕನಿಷ್ಠ ಎರಡು ಡಜನ್ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಪೊಲೀಸರು ಆ ಪ್ರದೇಶಕ್ಕೆ ಸಂಚಾರ ನಿರ್ಬಂಧಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪೈಲಟ್‌ಗಳಾದ 8,200 ಗಂಟೆಗಳ ಅನುಭವ ಹೊಂದಿರುವ ಸುಮೀತ್ ಸಭರ್ವಾಲ್ ಮತ್ತು 1,100 ಗಂಟೆಗಳ ಅನುಭವ ಹೊಂದಿರುವ ಕ್ಲೈವ್ ಕುಂದರ್ ವಿಮಾನವು ಅಪಘಾತಕ್ಕೆ ಸ್ವಲ್ಪ ಮೊದಲು ಮೇಡೇ ಕರೆ ಮಾಡಿದ್ದರು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತಿಳಿಸಿದೆ. ಕ್ಲೈವ್‌ ಕುಂದರ್‌ ಕರ್ನಾಟಕ ಮೂಲದವರಾಗಿದ್ದು, ಹಲವು ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಒದಗಿಸಲು ಏರ್ ಇಂಡಿಯಾ 1800 5691 444 ಸಂಖ್ಯೆಯ ಹೆಲ್ಪ್‌ಲೈನ್‌ ಆರಂಭಿಸಿದೆ.