"ಭಾರತ ನಕ್ಸಲ್ ಹಿಂಸಾಚಾರದಿಂದ ಮುಕ್ತ": ಸಂಸತ್ತಿನಲ್ಲಿ ಅಮಿತ್ ಶಾ ಮಹತ್ವದ ಘೋಷಣೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ದೇಶವು ನಕ್ಸಲ್ ಹಿಂಸಾಚಾರದಿಂದ ಬಹುತೇಕ ಮುಕ್ತವಾಗಿದೆ ಎಂದು ಘೋಷಿಸಿದರು. ಛತ್ತೀಸ್ಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ಪ್ರಭಾವ ಕುಸಿದಿದ್ದು, ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. ಶರಣಾಗುವವರಿಗೆ ಪುನರ್ವಸತಿ ಸೌಲಭ್ಯ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಅಮಿತ್ ಶಾ -
ನವದೆಹಲಿ, ಮಾ. 30: ದೇಶದಲ್ಲಿ ಮಾವೋವಾದಿ (Maoist) ಹಾವಳಿ ಈಗ ಸಂಪೂರ್ಣವಾಗಿ ಕೊನೆಗೊಂಡಿದೆ ಮತ್ತು ಅವರ ಕೊನೆಯ ಭದ್ರಕೋಟೆಯಾಗಿದ್ದ ಛತ್ತೀಸ್ಗಢದ (Chhattisgarh) ಬಸ್ತಾರ್ ಈಗ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ಘೋಷಿಸಿದ್ದಾರೆ. ನಕ್ಸಲ್ ಹಿಂಸಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರವು ಮಾರ್ಚ್ 31ರ ಗಡುವನ್ನು ನಿಗದಿಪಡಿಸಿತ್ತು. ಈ ಗಡುವಿಗೂ ಮುನ್ನ ಲೋಕಸಭೆಯಲ್ಲಿ (Loka Sabha) ನಡೆದ ಚರ್ಚೆಗೆ ಉತ್ತರಿಸಿದ ಶಾ, "ದೇಶದಲ್ಲಿ ನಕ್ಸಲಿಸಂ ಕೊನೆಯ ಅಂಚಿನಲ್ಲಿದೆ. ಅಧಿಕೃತ ಪ್ರಕ್ರಿಯೆ ಪೂರ್ಣಗೊಂಡ ನಂತರ ದೇಶಕ್ಕೆ ಮಾಹಿತಿ ನೀಡಲಾಗುವುದು. ಆದರೆ ಸದ್ಯಕ್ಕೆ ನಾವು ನಕ್ಸಲ್ ಮುಕ್ತವಾಗಿದ್ದೇವೆ ಎಂದು ನಾನು ಹೇಳಬಲ್ಲೆ" ಎಂದರು.
ಬಸ್ತಾರ್ ಪ್ರಾಂತ್ಯದಲ್ಲಿ ಈಗ ನಕ್ಸಲಿಸಂ ಬಹುತೇಕ ನಿರ್ಮೂಲನೆಯಾಗಿದೆ ಎಂದು ತಿಳಿಸಿದ ಅವರು, ಅಲ್ಲಿನ ಪ್ರತಿ ಹಳ್ಳಿಯಲ್ಲಿ ಶಾಲೆ ಮತ್ತು ಪಡಿತರ ಅಂಗಡಿಗಳನ್ನು ಸ್ಥಾಪಿಸುವ ಅಭಿಯಾನವನ್ನು ಸರ್ಕಾರ ಯಶಸ್ವಿಯಾಗಿ ನಡೆಸಿದೆ ಎಂದು ವಿವರಿಸಿದರು. "ಬಸ್ತಾರ್ನ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ನೀಡಲಾಗಿದ್ದು, ಅವರು ಈಗ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಹಿಂದೆ 'ಕೆಂಪು ಭಯೋತ್ಪಾದನೆ'ಯ ನೆರಳು ಇದ್ದಿದ್ದರಿಂದಲೇ ಈ ಪ್ರದೇಶದಲ್ಲಿ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ, ಆದರೆ ಈಗ ಆ ನೆರಳು ಸರಿದಿದೆ" ಎಂದು ಶಾ ಹೇಳಿದರು.
ಸಂಸತ್ನಲ್ಲಿ ಅಮಿತ್ ಶಾ ಭಾಷಣ:
"If Naxals think they'll threaten us, I wanna tell them 👉 This is not a Govt that FEARS. We will deliver JUSTICE"
— Sunny Raj (@SunnyRajBJP) March 30, 2026
– Home minister @AmitShah ji 🔥 pic.twitter.com/BpkJSrizSp
ಆಯುಧಗಳನ್ನು ತ್ಯಜಿಸಿ ಶರಣಾಗುವವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಸಿದ್ಧವಿದೆ, ಆದರೆ ಹಿಂಸಾಚಾರದ ಹಾದಿ ಹಿಡಿಯುವವರಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಅವರು ಎಚ್ಚರಿಸಿದರು.
ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವನ್ನು ದೃಢಪಡಿಸಿದ ಇರಾನ್
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ದೇಶದಲ್ಲಿ ಮಾವೋವಾದ ಹರಡಲು ಕಾಂಗ್ರೆಸ್ನ 60 ವರ್ಷಗಳ ಆಡಳಿತವೇ ಕಾರಣ ಎಂದು ಆರೋಪಿಸಿದರು. ನಕ್ಸಲ್ ಹಿಂಸಾಚಾರದಿಂದಾಗಿ 20,000 ಯುವಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 12 ಕೋಟಿ ಜನರು ಬಾಧಿತರಾಗಿದ್ದಾರೆ ಎಂದು ಅವರು ಅಂಕಿಅಂಶ ನೀಡಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಕ್ಸಲಿಸಂ ದೇಶದ ದೊಡ್ಡ ಸವಾಲು ಎಂದು ಒಪ್ಪಿಕೊಂಡಿದ್ದರೂ, ಕಾಂಗ್ರೆಸ್ ಸರ್ಕಾರಗಳು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಏನನ್ನೂ ಮಾಡಲಿಲ್ಲ ಎಂದು ಅಮಿತ್ ಶಾ ಟೀಕಿಸಿದರು.