Fact Check: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 20 ಲಕ್ಷ ರೂಪಾಯಿ ಸಾಲ ಸಿಗುತ್ತಾ? ವೈರಲ್ ಪತ್ರದ ಅಸಲಿಯತ್ತೇನು?
Pradhan Mantri Mudra Yojana: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕೇವಲ ಶೇಕಡಾ 1ರಷ್ಟು ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಲಾಗಿದೆ ಎಂದು ಹೇಳಲಾದ ಸಾಲ ಅನುಮೋದನೆ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 13: ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಕೇವಲ ಶೇಕಡಾ 1ರಷ್ಟು ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಲಾದ ಸಾಲ ಅನುಮೋದನೆ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪಿಐಬಿ (PIB Fact Check) ನಡೆಸಿದ ಸತ್ಯಶೋಧನೆಯಲ್ಲಿ ಈ ಪತ್ರವು ಸಂಪೂರ್ಣವಾಗಿ ನಕಲಿ ಎಂದು ದೃಢಪಟ್ಟಿದೆ.
ಈ ವಂಚನೆಯ ಸಾಲ ಅನುಮೋದನೆ ಪತ್ರವು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಮೆಸೇಜಿಂಗ್ ಆ್ಯಪ್ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಧಿಕೃತ ದಾಖಲೆಯಂತೆ ತೋರುತ್ತಿದ್ದು, ಸಣ್ಣ ಉದ್ಯಮಿಗಳು ಹಾಗೂ ಆರ್ಥಿಕ ನೆರವು ಬಯಸುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕೇವಲ ಶೇಕಡಾ 1ರಷ್ಟು ಬಡ್ಡಿದರದಲ್ಲಿ 5 ವರ್ಷಗಳ ಅವಧಿಗೆ 20 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿರುವುದಾಗಿ ಇದರಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷ ರೂಪಾಯಿ ಸಾಲಕ್ಕೆ ಕೇವಲ ಶೇ.1ರಷ್ಟು ಬಡ್ಡಿ ದರವನ್ನು ವಿಧಿಸಲಾಗುತ್ತಿದೆ ಎಂಬುದು ಸುಳ್ಳು. ಇದು ನಿಜವಲ್ಲ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಹೇಳಿದೆ. ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆ ಸಾಲದ ಪತ್ರವು ಸಂಪೂರ್ಣವಾಗಿ ನಕಲಿ. ಮುದ್ರಾ ಯೋಜನೆ ಎನ್ನುವುದು ಬ್ಯಾಂಕ್ಗಳಿಗೆ ಮರು-ಹಣಕಾಸು ಒದಗಿಸುವ ಒಂದು ಸಂಸ್ಥೆಯಾಗಿದೆಯೇ ಹೊರತು, ಇದು ಸಾರ್ವಜನಿಕರಿಗೆ ಅಥವಾ ಸಣ್ಣ ಉದ್ಯಮಿಗಳಿಗೆ ನೇರವಾಗಿ ಸಾಲವನ್ನು ವಿತರಿಸುವುದಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳು, ಆರ್ಬಿಐ ನೋಂದಾಯಿತ ಎನ್ಬಿಎಫ್ಸಿಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಮಾತ್ರವೇ ಪಡೆದುಕೊಳ್ಳಬಹುದು ಎಂದು ಪಿಐಬಿ ತಿಳಿಸಿದೆ.
ಇಲ್ಲಿದೆ ಪೋಸ್ಟ್:
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ₹3,250 ಒಪ್ಪಂದದ ಶುಲ್ಕವನ್ನು ಪಾವತಿಸಿದರೆ ₹20 ಲಕ್ಷ ಸಾಲ ಮಂಜೂರು ಮಾಡಲಾಗುವುದು ಎಂದು ತಿಳಿಸುವ ಸಾಲ ಮಂಜೂರಾತಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.#PIBFactCheck
— PIB in Karnataka (@PIBBengaluru) September 13, 2026
ಈ ಪತ್ರ ಸಂಪೂರ್ಣ ನಕಲಿಯಾಗಿದೆ.
ಮುದ್ರಾ ಯೋಜನೆಯು ವ್ಯಕ್ತಿಗಳಿಗೆ ಅಥವಾ ಸೂಕ್ಷ್ಮ ಉದ್ಯಮಿಗಳಿಗೆ ನೇರವಾಗಿ… https://t.co/b59XbkJYId pic.twitter.com/fRF2BBEAHq
ಇದಲ್ಲದೆ, ಮುದ್ರಾ ಸಾಲವನ್ನು ಪಡೆಯಲು ಯಾವುದೇ ಮುಂಗಡ ಶುಲ್ಕಗಳಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ನಾಗರಿಕರು ಪಿಎಂ ಮುದ್ರಾ ಯೋಜನೆಯ ಅಧಿಕೃತ ಸಾಲ ಮಾರ್ಗಗಳನ್ನು ಮಾತ್ರ ಅವಲಂಬಿಸಬೇಕು ಮತ್ತು ಅಂತಹ ಮೋಸಗಳ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂದು ಪಿಐಬಿ ಸೂಚಿಸಿದೆ.
ಅನೇಕ ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಿಬಿಐ ತನಿಖೆಗೆ ಆಗ್ರಹಿಸಿದ ಸಹಪಾಠಿ
ಮೈಕ್ರೋ-ಯೂನಿಟ್ಸ್ ಡೆವಲಪ್ಮೆಂಟ್ ಆ್ಯಂಡ್ ರಿಫೈನಾನ್ಸ್ ಏಜೆನ್ಸಿಯನ್ನು ಮುದ್ರಾ ಎಂದು ಕರೆಯಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶೇಕಡಾ 1ರಷ್ಟು ಬಡ್ಡಿದರದ ಹೇಳಿಕೆಗೆ ತದ್ವಿರುದ್ಧವಾಗಿ, ನಿಜವಾದ ಮುದ್ರಾ ಸಾಲದ ಬಡ್ಡಿದರಗಳು ಸಾಮಾನ್ಯವಾಗಿ ವಾರ್ಷಿಕ ಸುಮಾರು ಶೇಕಡಾ 8ರಿಂದ 24ರ ವರೆಗೆ ಇರುತ್ತವೆ. ಈ ಬಡ್ಡಿದರದ ವ್ಯತ್ಯಾಸವು ಸಾಲ ನೀಡುವ ಬ್ಯಾಂಕ್, ನಿರ್ದಿಷ್ಟ ಸಾಲದ ವರ್ಗ, ಅರ್ಜಿದಾರರ ಕ್ರೆಡಿಟ್ ಪ್ರೊಫೈಲ್ (ಸಿಬಿಲ್ ಸ್ಕೋರ್) ಮತ್ತು ಮಾರುಕಟ್ಟೆಯ ಪರಿಸ್ಥಿತಿಗಳ ಮೇಲೆ ಆಧಾರಿತವಾಗಿರುತ್ತದೆ.
ಉದಾಹರಣೆಗೆ, ಕೆಲವು ಬ್ಯಾಂಕ್ಗಳು ಸುಮಾರು ಶೇ. 8.85ರಷ್ಟು ಬಡ್ಡಿದರದಿಂದಲೇ ಮುದ್ರಾ ಸಾಲಗಳನ್ನು ನೀಡುತ್ತವೆ. ಈ ಯೋಜನೆಯು ಸಾಮಾನ್ಯವಾಗಿ 1ರಿಂದ 7 ವರ್ಷಗಳವರೆಗೆ ಮರುಪಾವತಿ ಅವಧಿಯನ್ನು ಒದಗಿಸುತ್ತದೆ. ಸಣ್ಣ ಮೊತ್ತದ ಮುದ್ರಾ ಸಾಲಗಳಿಗೆ (ಅಂದರೆ 5 ಲಕ್ಷ ರೂಪಾಯಿವರೆಗಿನ ಕಿರು ಸಾಲಗಳು) ಅನೇಕ ಬ್ಯಾಂಕ್ಗಳು ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡುತ್ತವೆಯಾದರೂ, ಹೆಚ್ಚಿನ ಮೊತ್ತದ ಸಾಲದ ವಿಭಾಗಗಳಿಗೆ ಕೆಲವು ಬ್ಯಾಂಕ್ಗಳು ಪ್ರಕ್ರಿಯೆ ಶುಲ್ಕ ಅಥವಾ ದಾಖಲಾತಿ ಶುಲ್ಕಗಳನ್ನು ವಿಧಿಸುತ್ತವೆ.
ಪ್ರಧಾನ ಮಂತ್ರಿ ಮುದ್ರಾ ಸಾಲ ಅನುಮೋದನೆ ಪತ್ರ ನಿಜವೇ?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಶೇಕಡಾ 1ರಷ್ಟು ಬಡ್ಡಿದರದಲ್ಲಿ 2,00,000 ರೂಪಾಯಿ ಸಾಲ ಪಡೆಯುವ ಅನುಮೋದನೆ ಪತ್ರವು ನಿಸ್ಸಂದೇಹವಾಗಿ ನಕಲಿ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ವ್ಯಕ್ತಿಗಳಿಗೆ ಇಷ್ಟು ಕಡಿಮೆ ಬಡ್ಡಿದರದಲ್ಲಿ ನೇರ ಸಾಲವನ್ನು ನೀಡುವುದಿಲ್ಲ ಅಥವಾ ಯಾವುದೇ ಮುಂಗಡ ಶುಲ್ಕವನ್ನು ವಿಧಿಸುವುದಿಲ್ಲ. ವೈರಲ್ ಪತ್ರವು ನಕಲಿ ಎಂದು ಪಿಐಬಿಯ ಫ್ಯಾಕ್ಟ್ ಚೆಕ್ ಪುನರುಚ್ಚರಿಸಿದೆ.