ಹರೀಶ್ ರಾಣಾಗೆ ದಯಾಮರಣ ಆದೇಶ: ಯಾವ ಪೋಷಕರು ತಮ್ಮ ಮಕ್ಕಳಿಗೆ ಈ ರೀತಿಯ ಸಾವನ್ನು ಬಯಸುತ್ತಾರೆ? ತಂದೆ ಭಾವುಕ
ಮಹಡಿಯಿಂದ ಬಿದ್ದು ತೀವ್ರ ಗಾಯಗೊಂಡು ಕೋಮಾದಲ್ಲಿರುವ ಹರೀಶ್ ರಾಣಾ ಅವರಿಗೆ ಸುಪ್ರೀಂ ಕೋರ್ಟ್ ದಯಾಮರಣವನ್ನು ಅನುಮತಿಸಿದ ಬಳಿಕ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ ಅಶೋಕ್ ರಾಣಾ, ಯಾವ ಪೋಷಕರು ತಾನೇ ನಮ್ಮ ಮಕ್ಕಳಿಗೆ ಈ ರೀತಿಯ ಪರಿಸ್ಥಿತಿ ಬರಲಿ ಎಂದು ಬಯಸುತ್ತಾರೆ ಎಂದು ಹೇಳಿದರು.
ಸಂಗ್ರಹ ಚಿತ್ರ -
ನವದೆಹಲಿ: ಚಂಡೀಗಢ ವಿಶ್ವವಿದ್ಯಾಲಯದಲ್ಲಿ (Chandigarh University) ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ಹರೀಶ್ ರಾಣಾ (Harish Rana case) 2013ರ ಆಗಸ್ಟ್ 20ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು ಬಳಿಕ ಕೋಮಾದಲ್ಲಿದ್ದರು. ಸಂಪೂರ್ಣ ಅಂಗವೈಕಲ್ಯಕ್ಕೆ ಗುರಿಯಾಗಿದ್ದ ಅವರಿಗೆ ಜೀವರಕ್ಷಕ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಅವರ ಚೇತರಿಕೆಯ ಯಾವುದೇ ಲಕ್ಷಣ ಇಲ್ಲವಾಗಿರುವುದರಿಂದ ಸುಪ್ರೀಂ ಕೋರ್ಟ್ (Supreme Court ) ಬುಧವಾರ ದಯಾಮರಣವನ್ನು (Right To Die) ನೀಡಲು ಅನುಮತಿಸಿದೆ. ಇದರ ಬಳಿಕ ಮೊದಲ ಬಾರಿಗೆ ಹರೀಶ್ ರಾಣಾ ಅವರ ತಂದೆ ಅಶೋಕ್ ರಾಣಾ ಅವರು ಮಾಧ್ಯಮದೊಂದಿಗೆ ಮಾತನಾಡಿ, ಯಾವ ಪೋಷಕರು ತಾನೇ ನಮ್ಮ ಮಕ್ಕಳಿಗೆ ಈ ರೀತಿಯ ಪರಿಸ್ಥಿತಿ ಬರಲಿ ಎಂದು ಬಯಸುತ್ತಾರೆ ಎಂದು ಹೇಳಿದರು.
13 ವರ್ಷಗಳಿಂದ ಜೀವರಕ್ಷಕ ಸ್ಥಿತಿಯಲ್ಲಿರುವ ತಮ್ಮ 31 ವರ್ಷದ ಮಗುವಿಗೆ ಸುಪ್ರೀಂ ಕೋರ್ಟ್ ದಯಾಮರಣವನ್ನು ಅನುಮತಿಸಿದೆ. ಯಾವುದೇ ಪೋಷಕರು ತಮ್ಮ ಮಗುವಿಗೆ ಈ ರೀತಿಯ ಸಾವನ್ನು ಬಯಸುವುದಿಲ್ಲ ಎಂದು ಹೇಳುವಾಗ ಭಾವುಕರಾದರು.
ಆದೇಶ ನೀಡುವಾಗ ಕಣ್ಣೀರಿಟ್ಟ ನ್ಯಾಯಮೂರ್ತಿ; ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ
2013 ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಹರೀಶ್ ರಾಣಾ ಅವರ ಮೆದುಳಿಗೆ ಗಂಭೀರ ಗಾಯಗಳಾಗಿದ್ದು, ಅಂದಿನಿಂದ ಅವರು ಜೀವರಕ್ಷಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟಕ್ಕಾಗಿ ಅವರಿಗೆ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ಅನ್ನು ಅಳವಡಿಸಲಾಗಿದೆ.
Supreme Court allows withdrawal of medical treatment to 32-year-old Harish Rana, who has been in a vegetative state for the last 13 years with negligible hope of recovery.
— ANI (@ANI) March 11, 2026
Harish Rana's father, Ashok Rana, says," We had been fighting for this. Which parents would want this for… pic.twitter.com/KU9FFuJt3u
ನ್ಯಾಯಾಲಯವು ಹರೀಶ್ ರಾಣಾ ಅವರಿಗೆ ಬುಧವಾರ ದಯಾ ಮರಣ ನೀಡಲು ಅವಕಾಶ ನೀಡಿದ್ದು, ಬಳಿಕ ಅವರನ್ನು ದೆಹಲಿಯ ಏಮ್ಸ್ಗೆ ಸ್ಥಳಾಂತರಿಸಲಾಗುವುದು. ಅಲ್ಲಿ ಅವರನ್ನು ಜೀವರಕ್ಷಕ ಚಿಕಿತ್ಸೆಯಿಂದ ತೆಗೆದುಹಾಕಲಾಗುವುದು.
ಸುಪ್ರೀಂ ಕೋರ್ಟ್ನ ಈ ಮಹತ್ವದ ತೀರ್ಪಿಗೆ ಧನ್ಯವಾದ ಹೇಳಿದ ಅಶೋಕ್ ರಾಣಾ, ನಾವು ಬಯಸಿದ್ದನ್ನು ಪಡೆದುಕೊಂಡಿದ್ದೇವೆ. ನಾನು ಮೂರು ವರ್ಷಗಳಿಂದ ಹೋರಾಡಿದೆ. ಯಾವ ತಂದೆ ಮತ್ತು ತಾಯಿ ಕೂಡ ತಮ್ಮ ಮಗನಿಗಾಗಿ ಇದನ್ನು ಬಯಸುತ್ತಾರೆ ಎಂದ ಅವರು, ಹರೀಶ್ ಅವರಂತಹ ಸ್ಥಿತಿಯಲ್ಲಿ ಎಷ್ಟು ಜನರಿದ್ದಾರೆಂದು ನಮಗೆ ತಿಳಿದಿಲ್ಲ. ಇದು ಅವರಿಗೂ ಪ್ರಯೋಜನವಾಗಲಿ. ಈ ವಿಷಯ ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ಗೆ ಹೋಯಿತು ಮತ್ತು ಇಂದು ನಮಗೆ ಯಶಸ್ಸು ಸಿಕ್ಕಿತು ಎಂದರು.
Ghaziabad, Uttar Pradesh: The Supreme Court has allowed passive euthanasia for Harish Rana, who has been in a vegetative state since 2013.
— IANS (@ians_india) March 11, 2026
Harish Rana's father, Ashok Rana, says, "...We are eternally grateful to the honourable judges of the Supreme Court..." pic.twitter.com/Cp0qLesDDj
13 ವರ್ಷಗಳಿಂದ ಹರೀಶ್ ಅವರನ್ನು ಪತ್ನಿ ನೋಡಿಕೊಳ್ಳುತ್ತಿದ್ದಾಳೆ. ಅವಳು ನಾಲ್ಕು ವರ್ಷಗಳ ಹಿಂದೆಯೇ ಇದನ್ನು ಯೋಚಿಸಿದ್ದಳು. ಇದಕ್ಕಾಗಿ ನನ್ನನ್ನು ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಗೆ ಬರೆಯಲು ಹೇಳಿದಳು. ನಾನು ಅವಳಿಗೆ ಇದು ಸಾಧ್ಯವಿಲ್ಲ ಎಂದು ಹೇಳಿದೆ.ಅವಳು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯಾದ ಬ್ರಹ್ಮ ಕುಮಾರೀಸ್ನೊಂದಿಗೆ ಸಂಪರ್ಕ ಹೊಂದಿದ್ದಾಳೆ. ಇದರಿಂದ ವಕೀಲರನ್ನು ಹುಡುಕಿದೆವು. ಬಳಿಕ ದೀರ್ಘ ಹೋರಾಟ ಪ್ರಾರಂಭಿಸಿದೆವು. ನಮಗೂ ವಯಸ್ಸಾಗುತ್ತಿದೆ ಎಂದು ಹೇಳಿದರು.