Daily Horoscope: ಧನಿಷ್ಠ ನಕ್ಷತ್ರದ ಈ ದಿನ ಈ ರಾಶಿಗೆ ಮಾನಸಿಕ ನೆಮ್ಮದಿ ಜೊತೆ ಕಾರ್ಯಕ್ಷೇತ್ರದಲ್ಲೂ ಯಶಸ್ಸು!
Daily Horoscope: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ದಶಮಿ ತಿಥಿ, ದನಿಷ್ಠ ನಕ್ಷತ್ರದ ಅಕ್ಟೋಬರ್ 31ನೇ ತಾರೀಖಿನ ಶುಕ್ರವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.
 
                                ದಿನ ಭವಿಷ್ಯ -
 Pushpa Kumari
                            
                                Oct 31, 2025 6:00 AM
                                
                                Pushpa Kumari
                            
                                Oct 31, 2025 6:00 AM
                            ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ದನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಯಶಸ್ಸು ಆಗಲಿದೆ. ಅದೇ ರೀತಿ ಧನ ಆಗಮನದ ಸೂಚನೆ ಇದ್ದು ಹಣ ಕೂಡ ಕೈ ಹಿಡಿಯಲಿದೆ..
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಧನ ಆಗಮನ ವಾಗುವ ಸಾಧ್ಯತೆಗಳು ಹೆಚ್ಚು ಇದ್ದು ಪ್ರಮೋಷನ್ ಇತ್ಯಾದಿ ಆಗುವ ಸಾಧ್ಯತೆ ಜಾಸ್ತಿ ಇದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿರಿಯರಿಂದಲೂ ಉತ್ತಮ ಆಶೀರ್ವಾದ ನಿಮಗೆ ಸಿಗಲಿದೆ..ನಿಮ್ಮ ಪ್ರೀತಿ ಪಾತ್ರ ರಿಂದ ಬೇಕಾದಂತಹ ಸಹಕಾರ ಸಿಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಅದೇ ರೀತಿ ಧನ ವ್ಯಯವಾಗಲಿದೆ. ಮನಸ್ಸಿಗೆ ಹೆಚ್ಚಿನ ಕ್ಷೇಷ ಉಂಟಾಗಲಿದೆ. ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ, ಬೇರೆಯವರಿಂದ ಸಹಕಾರ ಪ್ರಾಪ್ತಿಯಾಗಲಿದೆ. ಮತ್ತು ಹಣಕಾಸಿನ ವಿಚಾರದಲ್ಲೂ ನೆಮ್ಮದಿ ಸಿಗುತ್ತದೆ.
ಇದನ್ನೂ ಓದಿ:Vastu Tips: ಅಪ್ಪಿತಪ್ಪಿಯೂ ಟೆರೇಸ್ ಮೇಲೆ ಇವುಗಳನ್ನು ಇಡಬೇಡಿ
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಉತ್ತಮವಾದ ದಿನ ವಾಗಿದೆ. ಸಾಮಾಜಿಕ ವ್ಯವಹಾರ ದಲ್ಲಿ ಮುನ್ನಡೆ ಪ್ರಾಪ್ತಿ ಯಾಗುತ್ತದೆ. ಮಾನಸಿಕ ನೆಮ್ಮದಿಯ ಜೊತೆಗೆ ಧನ ಆಗಮನ ಕೂಡ ಆಗಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ.ಬೇರೆಯವರಿಂದ ಸಹಕಾರ ನಿಮಗೆ ಇರುವುದಿಲ್ಲ. ಧನ ನಷ್ಟ ವಾಗುವ ಸಾಧ್ಯತೆ ಹೆಚ್ಚು, ಬಿನೆನೆಸ್ ವ್ಯವಹಾರ ಮಾಡಲು ಇಂದು ಸೂಕ್ತ ದಿನ ಅಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಮನೆ, ತಾಯಿ,ಆಸ್ತಿ ಪಾಸ್ತಿ ವಿಚಾರವಾಗಿ ತಾಪತ್ರಯಗಳು ಹೆಚ್ಚು ಇರುತ್ತದೆ. ಆದರೆ ಮನೆಯವರಿಂದಲೇ ಹೆಚ್ಚಿನ ನೆಮ್ಮದಿ ನಿಮಗೆ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ನಿಮ್ಮ ಮನೆಯ ವ್ಯವಹಾರ, ಬಂಧು ಮಿತ್ರರಿಂದ ಹೆಚ್ಚಿನ ನೆಮ್ಮದಿ ಸಿಗಲಿದೆ. ಅಣ್ಣ ತಮ್ಮಂದಿರು- ಸಹೋದರ- ಸಹೋದರಿಯರಿಂದ ನೆಮ್ಮದಿ ಸಿಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ನಿಮ್ಮ ರಾಶಿಯಲ್ಲೇ ಚಂದ್ರ ಬಂದಿರುವುದರಿಂದ ಅತೀ ಹೆಚ್ಚಿನ ನೆಮ್ಮದಿ ಸಿಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ತೊಂದರೆ ಪರಿಹಾರವಾಗಲಿದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಸಾಂಸರಿಕ ವಿಚಾರದಲ್ಲಿ ಯೋಚನೆ ಹೆಚ್ಚಾಗಿ ಇರುತ್ತದೆ. ಆರ್ಥಿಕ ಸುಭದ್ರತೆ, ಮನೆಯ ವೆಚ್ಚದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಕಷ್ಟಕರವಾದ ದಿನ ವಾಗಿದೆ. ಮುಖ್ಯವಾದ ನಿರ್ಧಾರಗಳು ಇಂದು ಬೇಡ. ಎರಡು ದಿನಗಳ ಬಳಿಕ ಎಲ್ಲವೂ ಸರಿಯಾಗಲಿದೆ. ಆದರೂ ಕೂಡ ಗುರು ಬಲ ಇರುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.
