Vishwavani Editorial: ದುರದೃಷ್ಟಕರ ದುರಂತ
ದುರದೃಷ್ಟಕರ ದುರಂತ ಗುಜರಾತ್ನ ಅಹಮದಾಬಾದ್ನಿಂದ ಲಂಡನ್ನತ್ತ ಹೊರಟಿದ್ದ ಏರ್ ಇಂಡಿಯಾ ಸಂಸ್ಥೆಯ ಬೋಯಿಂಗ್ 787 ವಿಮಾನವು, ಟೇಕಾಫ್ ಆದ ಐದೇ ನಿಮಿಷಗಳಲ್ಲಿ ನಗರದ ಕಟ್ಟಡವೊಂದರ ಮೇಲೆ ಪತನಗೊಂಡು ಸ್ಫೋಟಿಸಿದ ದುರಂತ ಘಟನೆ ನಿಜಕ್ಕೂ ಮನವನ್ನು ಕಲಕುವಂಥದ್ದು.


ದುರದೃಷ್ಟಕರ ದುರಂತ ಗುಜರಾತ್ನ ಅಹಮದಾಬಾದ್ನಿಂದ ಲಂಡನ್ನತ್ತ ಹೊರಟಿದ್ದ ಏರ್ ಇಂಡಿಯಾ ಸಂಸ್ಥೆಯ ಬೋಯಿಂಗ್ 787 ವಿಮಾನವು, ಟೇಕಾಫ್ ಆದ ಐದೇ ನಿಮಿಷಗಳಲ್ಲಿ ನಗರದ ಕಟ್ಟಡವೊಂದರ ಮೇಲೆ ಪತನಗೊಂಡು ಸ್ಫೋಟಿಸಿದ ದುರಂತ ಘಟನೆ ನಿಜಕ್ಕೂ ಮನವನ್ನು ಕಲಕುವಂಥದ್ದು.
ವಿಮಾನದಲ್ಲಿದ್ದ 230 ಪ್ರಯಾಣಿಕರು ಮತ್ತು 12 ವಿಮಾನ ಸಿಬ್ಬಂದಿ ಪೈಕಿ ಒಬ್ಬ ಪ್ರಯಾಣಿಕರಷ್ಟೇ ಬದುಕುಳಿದಿದ್ದಾರೆ ಎನ್ನಲಾಗಿದೆ. ವಿಮಾನ ಪತನಗೊಂಡ ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿದ್ದ ಐವರು ವಿದ್ಯಾರ್ಥಿಗಳು ಕೂಡ ದುರ್ಘಟನೆಯಲ್ಲಿ ಅಸುನೀಗಿದ್ದಾರೆ. 2010ರಲ್ಲಿ ಮಂಗಳೂರಿನಲ್ಲಿ ಘಟಿಸಿದ ಏರ್ಇಂಡಿಯಾದ ವಿಮಾನ ದುರಂತದಲ್ಲಿ, ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 166 ಜನರಲ್ಲಿ 158 ಮಂದಿ ಅಸುನೀಗಿದ್ದರು. ಈ ಬಳಿಕ ದೇಶದಲ್ಲಿ ನಡೆದ ಅತಿ ದೊಡ್ಡ ವಿಮಾನ ದುರಂತವಿದು.
Vishwavani Editorial: ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ
ಟಾಟಾ ಸಂಸ್ಥೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದ ಬಳಿಕ ನಡೆದ ಅತಿ ದೊಡ್ಡ ದುರ್ಘಟನೆ ಇದಾಗಿದೆ. ಪ್ರಸ್ತುತ ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿ ನೋಡುವುದಾದರೆ, ವಿಮಾನ ಪತನವಾಗುವುದಕ್ಕೂ ಮುನ್ನ ಅದರ ಪೈಲಟ್ ಅಹಮದಾಬಾದ್ನ ನಿಯಂತ್ರಣ ಕೇಂದ್ರಕ್ಕೆ ‘ಮೇ ಡೇ‘ ಸಂದೇಶ (ವಿಮಾನಯಾನದ ವೇಳೆಯ ಕೊನೆಯ ಅಪಾಯದ ಎಚ್ಚರಿಕೆ ಸಂದೇಶ) ರವಾನಿಸಿದ್ದರು.
ದುರಂತಕ್ಕೆ ಎಂಜಿನ್ ವೈಫಲ್ಯ ಸೇರಿದಂತೆ ತಾಂತ್ರಿಕ ದೋಷ ಕಾರಣವಾಗಿದೆಯೇ ಅಥವಾ ಪೈಲಟ್ ತಪ್ಪಿನಿಂದ ಘಟನೆ ನಡೆದಿದೆಯೇ ಎಂಬುದರ ಕೂಲಂಕಷ ಪರಿಶೀಲನೆ ನಡೆಸಬೇಕಿದ್ದು, ವಿಮಾನ ದಲ್ಲಿ ಅಡಕವಾಗಿರುವ ‘ಬ್ಲ್ಯಾಕ್ ಬಾಕ್ಸ್’ ಈ ನಿಟ್ಟಿನಲ್ಲಿ ಒಂದಷ್ಟು ಪೂರಕ ಮಾಹಿತಿಗಳನ್ನು ನೀಡುವ ಸಾಧ್ಯತೆಯಿದೆ.
ಇವಿಷ್ಟನ್ನು ಹೊರತುಪಡಿಸಿ, ಈ ದುರಂತದ ಹಿಂದೆ ಯಾವುದಾದರೂ ವಿಧ್ವಂಸಕ ಶಕ್ತಿಗಳ ಕೈವಾಡ ವೇನಾದರೂ ಇದೆಯೇ ಎಂಬುದನ್ನು ಕೂಡ ಕೇಂದ್ರ ಸರಕಾರವು ಕಂಡುಕೊಳ್ಳುವ ಅನಿವಾರ್ಯತೆ ಯಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಅಮಾಯಕರ ಮಾರಣಹೋಮ ನಡೆಸಿದಾಗಲೂ ಆ ಕುರಿತು ಸುಳಿವು ಸಿಕ್ಕಿರಲಿಲ್ಲ. ತರುವಾಯದಲ್ಲಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಿಂದಾಗಿ ಉಗ್ರವಾದಿಗಳು ಕೆರಳಿ ಕೆಂಡವಾಗಿರುವುದನ್ನು ಬಿಡಿಸಿ ಹೇಳಬೇಕಿಲ್ಲ.
ಅಂಥ ಯಾರಾದರೂ ಇಂಥ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿರಬಹುದೇ ಎಂಬ ಅಂಶವನ್ನು ಪತ್ತೆಹಚ್ಚುವುದಕ್ಕೂ ಈ ಸಂದರ್ಭದಲ್ಲಿ ಮುಂದಾಗಬೇಕಿದೆ.