Heart Attack: ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡ್ತಿದ್ದ ಯುವಕ ಹಠಾತ್ ಕುಸಿದು ಬಿದ್ದ ಸಾವು! ಶಾಕಿಂಗ್ ವಿಡಿಯೊ ನೋಡಿ
ಕೆಟ್ ಆಡುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪಂಜಾಬ್ನ ಫಿರೋಜ್ಪುರದಲ್ಲಿ ನಡೆದಿದೆ. ಹರ್ಜೀತ್ ಸಿಂಗ್ ಸಾವನ್ನಪ್ಪಿದ ಯುವಕ. ಸಾವಿಗೂ ಕೆಲ ಕ್ಷಣ ಮೊದಲು ಆತ ಸಿಕ್ಸ್ ಹೊಡೆದಿದ್ದಾನೆ. ಫಿರೋಜ್ಪುರದ ಡಿಎವಿ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ.


ಫಿರೋಜ್ಪುರ: ಕ್ರಿಕೆಟ್ ಆಡುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪಂಜಾಬ್ನ ಫಿರೋಜ್ಪುರದಲ್ಲಿ ನಡೆದಿದೆ. ಹರ್ಜೀತ್ ಸಿಂಗ್ ಸಾವನ್ನಪ್ಪಿದ ಯುವಕ. ಸಾವಿಗೂ ಕೆಲ ಕ್ಷಣ ಮೊದಲು ಆತ ಸಿಕ್ಸ್ ಹೊಡೆದಿದ್ದಾನೆ. ಫಿರೋಜ್ಪುರದ ಡಿಎವಿ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಕೂಡಲೇ ಹರ್ಜೀತ್ ಸಿಂಗ್ ಗೆ ಅಲ್ಲಿದ್ದವರು ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸಿಕ್ಸ್ ಹೊಡೆದ ಅನಂತರ ಹರ್ಜೀತ್ ಸಿಂಗ್ ಗೆ ಹೃದಯಾಘಾತವಾಗಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಪಂಜಾಬ್ನ ಫಿರೋಜ್ಪುರದ ಫಿರೋಜ್ಪುರದ ಡಿಎವಿ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹರ್ಜೀತ್ ಸಿಂಗ್ ಸಿಕ್ಸ್ ಹೊಡೆದು ಸ್ವಲ್ಪ ವಿಶ್ರಾಂತಿ ಪಡೆಯಲು ಕುಳಿತಾಗ ಹೃದಯಾಘಾತಕ್ಕೆ ಒಳಗಾಗಿ ಅಲ್ಲೇ ಕುಸಿದು ಬಿದ್ದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸಿಕ್ಸ್ ಹೊಡೆದು ಬಾಲ್ ಗಡಿ ದಾಟಿದ್ದನ್ನು ನೋಡಿದ ತಕ್ಷಣವೇ ಹರ್ಜೀತ್ ಸಿಂಗ್ ಗೆ ಹೃದಯಾಘಾತವಾಗಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.
ಏನಿದೆ ವಿಡಿಯೊದಲ್ಲಿ?
ಬ್ಯಾಟಿಂಗ್ ಮಾಡುತ್ತಿದ್ದ ಹರ್ಜೀತ್ ಸಿಂಗ್ ಸಿಕ್ಸ್ ಹೊಡೆದಿದ್ದು ಬಾಲ್ ಬೌಂಡರಿ ದಾಟಿದ ಬಳಿಕ ಆತ ಸುಮಾರು ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ಮೊಣಕಾಲುಗಳ ಮೇಲೆ ಕುಳಿತಿದ್ದಾನೆ. ಹತ್ತಿದಲ್ಲೇ ಇನ್ನೊಬ್ಬ ಬ್ಯಾಟ್ಸ್ ಮ್ಯಾನ್ ಕುಳಿತಿದ್ದು, ಆಗಲೇ ಹರ್ಜೀತ್ ಸಿಂಗ್ ಗೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾನೆ. ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ಉಳಿದ ಆಟಗಾರರು ಆತನಿಗೆ ತುರ್ತು ಚಿಕಿತ್ಸೆ ನೀಡಲು ಮುಂದಾದರೂ ಪ್ರಯೋಜನವಾಗಲಿಲ್ಲ. ಹೃದಯಾಘಾತದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: Black Magic: ಮಾಟ ಮಂತ್ರ ಮಾಡುವುದಾಗಿ ಜನರಿಗೆ ಮೋಸ; ಸ್ವಯಂ ಘೋಷಿತ ದೇವಮಾನವ ಅರೆಸ್ಟ್
2024ರಲ್ಲಿ ಮುಂಬೈನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. 42 ವರ್ಷದ ವ್ಯಕ್ತಿಯೊಬ್ಬ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸಾವನ್ನಪ್ಪಿದ್ದನು. ಮುಂಬೈ ನಗರದ ಕಾಶ್ಮೀರ ಪ್ರದೇಶದ ತೋಟದ ಮನೆಯಲ್ಲಿ ಕಂಪನಿಯೊಂದು ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದ ಅನಂತರ ರಾಮ್ ಗಣೇಶ್ ತೇವರ್ ಎಂಬಾತ ಸಾವನ್ನಪ್ಪಿದ್ದ. ತೇವರ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಆತ ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದರು.