ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2027ರ ವಿಶ್ವಕಪ್ ವರೆಗೆ ಅಜಿತ್‌ ಅಗರ್ಕರ್ ಅಧಿಕಾರಾವಧಿ ವಿಸ್ತರಣೆ ಸಾಧ್ಯತೆ

Ajit Agarkar: ಅಗರ್ಕರ್‌ ಅಧಿಕಾರವಧಿಯಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಟಿ20 ಐಗಳಿಂದ ನಿವೃತ್ತಿ ಘೋಷಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 1998 ರಿಂದ 2007ರವರೆಗೆ ಭಾರತದ ಪರ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದು, ಒಟ್ಟಾರೆಯಾಗಿ 349 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2027ರ ವಿಶ್ವಕಪ್ ವರೆಗೆ ಅಜಿತ್‌ ಅಗರ್ಕರ್ ಅಧಿಕಾರಾವಧಿ ವಿಸ್ತರಣೆ?

Ajith Agarkar -

Abhilash BC
Abhilash BC Apr 19, 2026 1:50 PM

ನವದೆಹಲಿ, ಎ.19: ಭಾರತೀಯ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ(BCCI Chief Selector) ಯ ಅಧ್ಯಕ್ಷರಾಗಿರುವ ಅಜಿತ್‌ ಅಗರ್ಕರ್(Ajit Agarkar) ಅವರ ಅಧಿಕಾರವಧಿಯನ್ನು 2027ರ ವಿಶ್ವಕಪ್‌(2027 World Cup) ವರಗೂ ಮುಂದುವರಿಸುವಂತೆ ಬಿಸಿಸಿಐ(BCCI) ನಿರ್ಧರಿಸಿದೆ ಎಂದು ವರದಿಯಾಗಿದೆ. ಭಾರತ ತಂಡದ ಮಾಜಿ ಆಟಗಾರರಾಗಿರುವ ಅಜಿತ್‌ ಅಗರ್ಕರ್‌ ಅವರನ್ನು ಬಿಸಿಸಿಐ 2023ರಲ್ಲಿ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. 2025ರಲ್ಲಿ ಇವರ ಅಧಿಕಾರವಧಿಯನ್ನು ಹೆಚ್ಚುವರಿಯಾಗಿ ಒಂದು ವರ್ಷಕ್ಕೆ ವಿಸ್ತರಿಸಿತ್ತು.

ಅಗರ್ಕರ್ ಅವರ ಪ್ರಸ್ತುತ ಅಧಿಕಾರಾವಧಿ ಜೂನ್ 2026 ರಲ್ಲಿ ಮುಕ್ತಾಯಗೊಳ್ಳಲಿದೆ, ಆದರೆ ಅವರ ಅಧಿಕಾರಾವಧಿಯಲ್ಲಿ, ಭಾರತವು 2024ರಲ್ಲಿ ಟಿ20 ವಿಶ್ವಕಪ್‌, 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಮತ್ತು 2026ರಲ್ಲಿ ಮತ್ತೊಂದು ಟಿ20 ವಿಶ್ವಕಪ್‌ ಗೆದ್ದುಕೊಂಡಿತು. ಈ ನಿಟ್ಟಿನಲ್ಲಿ ಬಿಸಿಸಿಐ ಮುಂಬರುವ ಏಕದಿನ ವಿಶ್ವಪಕ್‌ ವರೆಗೂ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.‌

IPL 2026: ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಅಭಿಷೇಕ್‌ ಶರ್ಮ

ಇವರ ಅಧಿಕಾರವಧಿಯಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಟಿ20 ಐಗಳಿಂದ ನಿವೃತ್ತಿ ಘೋಷಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಕ್ರಿಕೆಟ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 1998 ರಿಂದ 2007ರವರೆಗೆ ಭಾರತದ ಪರ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದು, ಒಟ್ಟಾರೆಯಾಗಿ 349 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

"ಅಗರ್ಕರ್ ಅವರ ಅಧಿಕಾರಾವಧಿಯಲ್ಲಿ, ತಂಡವು ಸುಗಮ ಪರಿವರ್ತನೆಯನ್ನು ಹೊಂದಿತ್ತು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿರ್ಭಯವಾಗಿತ್ತು ಮತ್ತು ಅದಕ್ಕಾಗಿಯೇ ಅವರು ಅಗರ್ಕರ್ ಅವರ ಒಪ್ಪಂದವನ್ನು ಮುಂದುವರಿಸಬೇಕೆಂದು ಮಂಡಳಿಯು ಭಾವಿಸಿದೆ" ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಒಟ್ಟಾರೆ ಕಾರ್ಯವೈಖರಿ, ವಿಶೇಷವಾಗಿ ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ, ಅಗರ್ಕರ್ ಅವರ ನಾಯಕತ್ವವು ಆಯ್ಕೆ ಪ್ರಕ್ರಿಯೆಗೆ ಸ್ಪಷ್ಟತೆ ಮತ್ತು ನಿರ್ದೇಶನವನ್ನು ತಂದಿದೆ ಎಂದು ಬಿಸಿಸಿಐಗೆ ಮನವರಿಕೆ ಮಾಡಿಕೊಟ್ಟಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಹೊಸ ಪೀಳಿಗೆಯ ಆಟಗಾರರನ್ನು ಬೆಂಬಲಿಸುವ ಅವರ ಇಚ್ಛೆಯು ಭಾರತದ ಇತ್ತೀಚಿನ ಯಶಸ್ಸಿಗೆ ಕೇಂದ್ರಬಿಂದುವಾಗಿದೆ ಎಂದು ಪರಿಗಣಿಸಲಾಗಿದೆ.