2026-27ರ ದೇಶಿ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್ ತಂಡಕ್ಕೆ ವಿನಯ್ ಕುಮಾರ್ ಹೆಡ್ ಕೋಚ್?
2026-27ರ ಸಾಲಿನ ದೇಶಿ ಕ್ರಿಕೆಟ್ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಆಗಿ ಭಾರತ ತಂಡದ ಮಾಜಿ ವೇಗಿ ವಿನಯ್ ಕುಮಾರ್ ಅವರನ್ನು ನೇಮಿಸುವ ಸಾಧ್ಯತೆ ಇದೆ. ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಕರ್ನಾಟಕ ಕ್ರಿಕೆಟ್ ತಂಡಕ್ಕೆ ವಿನಯ್ ಕುಮಾರ್ ಹೆಡ್ ಕೋಚ್ ಆಗುವ ಸಾಧ್ಯತೆ ಇದೆ. -
ಬೆಂಗಳೂರು: ಮುಂಬರುವ 2026-27ರ ಸಾಲಿನ ದೇಶಿ ಕ್ರಿಕೆಟ್ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್ ತಂಡಕ್ಕೆ (Karnataka) ಭಾರತ ತಂಡದ ಮಾಜಿ ವೇಗಿ ವಿನಯ್ ಕುಮಾರ್ (Vinay Kumar) ಅವರು ಹೆಡ್ ಕೋಚ್ ಆಗಿ ನೇಮಕವಾಗುವ ಸಾಧ್ಯತೆ ಇದೆ. ಇಷ್ಟು ದಿನಗಳ ಕಾಲ ರಾಜ್ಯ ತಂಡಕ್ಕೆ ಹೆಡ್ ಕೋಚ್ ಆಗಿದ್ದ ಯರೇ ಗೌಡ ಅವರು ಬಿಸಿಸಿಐ ಸೆಂಟರ್ ಆಫ್ ಎಕ್ಸ್ಲೆನ್ಸ್ನಲ್ಲಿ ಬ್ಯಾಟಿಂಗ್ ಕೋಚಿಂಗ್ ವಿಭಾಗಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ತಂಡದಲ್ಲಿ ತೆರವಾಗುತ್ತಿರುವ ಸ್ಥಾನವನ್ನು ಇದೀಗ ವಿನಯ್ ಕುಮಾರ್ ತುಂಬಲು ಸಜ್ಜಾಗುತ್ತಿದ್ದಾರೆ.
ಇಂಡಿಯಾ ಟುಡೇಯ ವರದಿಯ ಪ್ರಕಾರ, ವಿನಯ್ ಕುಮಾರ್ ಅವರನ್ನು ಕರ್ನಾಟಕ ತಂಡದ ಕೋಚ್ ಆಗಿ ನೇಮಿಸುವ ನಿರ್ಧಾರಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ಅವರೊಂದಿಗೆ ಕರ್ನಾಟಕದ ಮಾಜಿ ಸಹ ಆಟಗಾರ ದೀಪಕ್ ಚೌಗುಲೆ ಫೀಲ್ಡಿಂಗ್ ಕೋಚ್ ಆಗಿ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದು, ಸಹಾಯಕ ಸಿಬ್ಬಂದಿಯಲ್ಲಿ ಕೆಲ ಮಟ್ಟಿನ ನಿರಂತರತೆ ಉಳಿಯಲಿದೆ.
IPL 2027: ಜಾಶ್ ಹೇಝಲ್ವುಡ್ ಔಟ್, 20ನೇ ಆವೃತ್ತಿಯ ಟೂರ್ನಿಗೆ ಆಸೀಸ್ ಆಟಗಾರರು ಅಲಭ್ಯ?
ಎಂಟು ಬಾರಿ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕ ತಂಡವು ಹೊಸ ಋತುವನ್ನು ಮಹತ್ವದ ಘಟ್ಟದಲ್ಲಿ ಆರಂಭಿಸುತ್ತಿದೆ. ಕಳೆದ ಋತುವಿನಲ್ಲಿ ತಂಡ ರಣಜಿ ಟ್ರೋಫಿ ಫೈನಲ್ವರೆಗೆ ಮುನ್ನಡೆದಿದ್ದರೂ, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸೋತು ರನ್ನರ್ಅಪ್ ಆಗಿತ್ತು. ಇದೀಗ ಕರ್ನಾಟಕ ತಂಡ ಪರಿವರ್ತನೆಯ ಹಂತದಲ್ಲಿದೆ. ದೇವದತ್ ಪಡಿಕ್ಕಲ್ ತಂಡವನ್ನು ಮುನ್ನಡೆಸುತ್ತಿದ್ದು, ಹಲವು ಯುವ ಆಟಗಾರರು ಹಿರಿಯರ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಹೊಸ ಕೋಚಿಂಗ್ ಸಿಬ್ಬಂದಿಯ ನೇಮಕದೊಂದಿಗೆ ಕರ್ನಾಟಕ ತಂಡ ಮುಂದಿನ ಋತುವಿನಲ್ಲಿ ಹೊಸ ಸವಾಲುಗಳಿಗೆ ಸಜ್ಜಾಗುತ್ತಿದೆ.
ಕರ್ನಾಟಕ ಕ್ರಿಕೆಟ್ನೊಂದಿಗೆ ವಿನಯ್ ಕುಮಾರ್ ಅವರ ನಂಟು ಅತ್ಯಂತ ಬಲವಾಗಿದೆ. ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡ 2013-14 ಮತ್ತು 2014-15ರ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು. ಈ ಸತತ ಸಾಧನೆಯು ಅವರನ್ನು ಕರ್ನಾಟಕ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ನಿಲ್ಲಿಸಿದೆ. ದೇಶಿ ಕ್ರಿಕೆಟ್ನಲ್ಲಿ ಪ್ರಶಸ್ತಿ ಗೆಲ್ಲಲು ಏನು ಬೇಕು ಎಂಬುದರ ಬಗ್ಗೆ ಅವರಿಗಿರುವ ಅನುಭವ, ಜೊತೆಗೆ ಕರ್ನಾಟಕ ತಂಡದ ವ್ಯವಸ್ಥೆಯ ಕುರಿತಾದ ಆಳವಾದ ಅರಿವು, ಪ್ರಸ್ತುತ ಪುನರ್ನಿರ್ಮಾಣದ ಹಂತದಲ್ಲಿರುವ ತಂಡವನ್ನು ಮುನ್ನಡೆಸಲು ಅವರನ್ನು ಸೂಕ್ತ ಅಭ್ಯರ್ಥಿಯನ್ನಾಗಿ ಮಾಡಿದೆ.
SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್ ಸರಣಿಯಿಂದ ಸಾಯಿ ಸುದರ್ಶನ್ ಔಟ್!
ನಾಯಕತ್ವದ ದಾಖಲೆ ಮಾತ್ರವಲ್ಲದೆ, ಆಟಗಾರನಾಗಿಯೂ ವಿನಯ್ ಕುಮಾರ್ ಅವರು ಗಮನಾರ್ಹ ವೃತ್ತಿಜೀವನ ಹೊಂದಿದ್ದಾರೆ. ಹಲವು ವರ್ಷಗಳ ಕಾಲ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದ ಅವರು, ಬಳಿಕ ಭಾರತ ತಂಡವನ್ನು ಮೂರು ಮಾದರಿಗಳಲ್ಲೂ ಪ್ರತಿನಿಧಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಯೂ ಅವರು ಹಲವು ಫ್ರಾಂಚೈಸಿಗಳ ಪರ ಆಡಿದ್ದು, ಹೊಸ ಚೆಂಡಿನಲ್ಲಿ ವೇಗ ಹಾಗೂ ಸ್ವಿಂಗ್ ಮೂಲಕ ಎದುರಾಳಿ ಬ್ಯಾಟರ್ಗಳಿಗೆ ಸವಾಲೊಡ್ಡುವ ಸಾಮರ್ಥ್ಯವನ್ನು ತೋರಿದ್ದರು.
ಇದೀಗ ಅನುಭವ ಹಾಗೂ ಯುವ ಪ್ರತಿಭೆಗಳ ಮಿಶ್ರಣ ಹೊಂದಿರುವ ಕರ್ನಾಟಕ ತಂಡದ ನಾಯಕತ್ವವನ್ನು ದೇವದತ್ ಪಡಿಕ್ಕಲ್ ವಹಿಸಿಕೊಂಡಿದ್ದಾರೆ. ಈ ವೇಳೆ ವಿನಯ್ ಕುಮಾರ್ ಅವರ ಕೋಚ್ ಆಗಿ ನೇಮಕಗೊಂಡಿರುವುದು ಕರ್ನಾಟಕ ತಂಡದ ಉತ್ತಮ ಪ್ರದರ್ಶನಗಳನ್ನು ಪ್ರಶಸ್ತಿ ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಲಿದೆ.
ಬಿಸಿಸಿಐ ಸೆಂಟರ್ ಆಫ್ ಎಕ್ಸ್ಲೆನ್ಸ್ಗೆ ಸೇರಿರುವ ಯರೇ ಗೌಡ
ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಯೆರೆ ಗೌಡ್, ಬಳಿಕ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ಸ್ವೀಕರಿಸಿದರು. ಅವರು ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ತರಬೇತಿ ಕೇಂದ್ರಕ್ಕೆ ತೆರಳಿದ ಹಿನ್ನೆಲೆಯಲ್ಲಿ ಕರ್ನಾಟಕ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ತೆರವಾದ ಸ್ಥಾನವನ್ನು ಇದೀಗ ವಿನಯ್ ಕುಮಾರ್ ಭರಿಸುವ ನಿರೀಕ್ಷೆಯಿದೆ.