ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮಿಂಚಬಲ್ಲ ಭಾರತೀಯ ಆಟಗಾರರನ್ನು ಆರಿಸಿದ ಸೌರವ್‌ ಗಂಗೂಲಿ!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜೂನ್‌ 20 ರಂದು ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆರಂಭಿಸಲಿವೆ. ಆ ಮೂಲಕ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನು ಆರಂಭಿಸಲಿವೆ. ಈ ಸರಣಿಯಲ್ಲಿ ಭಾರತ ತಂಡದ ಪರ ವೇಗಿ ಜಸ್‌ಪ್ರೀತ್‌ ಬುಮ್ರಾ ಮಿಂಚಲಿದ್ದಾರೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಭವಿಷ್ಯ ನುಡಿದಿದ್ದಾರೆ.

ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮಿಂಚಬಲ್ಲ ಆಟಗಾರನನ್ನು ಆರಿಸಿದ ಗಂಗೂಲಿ!

Profile Ramesh Kote Jun 11, 2025 3:47 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ (IND vs ENG) ಭಾರತ ತಂಡ ಸಜ್ಜಾಗುತ್ತಿದೆ. ಜೂನ್‌ 20 ರಂದು ಮೊದಲು ಪಂದ್ಯದ ಮೂಲಕ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಆರಂಭಿಸಲಿವೆ. ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ನಾಯಕ ಶುಭಮನ್‌ ಗಿಲ್‌ ಈ ಸರಣಿಯಲ್ಲಿ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ಅಂದ ಹಾಗೆ ಈ ಸರಣಿಯಲ್ಲಿ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಂತೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಅವರು ಇಂಗ್ಲೆಂಡ್‌ ಟೆಡಸ್ಟ್‌ ಸರಣಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಮಿಂಚಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ರೆವ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸೌರವ್‌ ಗಂಗೂಲಿ, ನಾಯಕ ಶುಭಮನ್‌ ಗಿಲ್‌ ಅವರು ಜಸ್‌ಪ್ರೀತ್‌ ಬುಮ್ರಾ ಅವರನ್ನು ಉತ್ತಮವಾಗಿ ಬಳಿಸಿಕೊಳ್ಳಲಿದ್ದಾರೆ. ಒಂದು ದಿನಕ್ಕೆ ಅವರಿಗೆ 12 ಓವರ್‌ಗಳನ್ನು ಮಾತ್ರ ನೀಡಬೇಕು. ಆ ಮೂಲಕ ಅವರನ್ನು ಚೀಫ್‌ ವಿಕೆಟ್‌ ಟೇಕರ್‌ ಆಗಿ ಬಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

"ಜಸ್‌ಪ್ರೀತ್‌ ಬುಮ್ರಾ ಪ್ರಮುಖ ಆಟಗಾರ. ಅವರಿಗೆ ಪದೇ-ಪದೆ ಬೌಲಿಂಗ್‌ ಕೊಡಲು ಸಾಧ್ಯವಿಲ್ಲ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಇದನ್ನು ಶುಭಮನ್‌ ಗಿಲ್‌ಗೆ ಈ ಸೂಚನೆಯನ್ನು ನೀಡಲಾಗಿದೆ. ಅವರನ್ನು ವಿಕೆಟ್‌ ಪಡೆಯುವ ಬೌಲರ್‌ ಆಗಿ ಬಳಿಸಿಕೊಳ್ಳಬೇಕಾಗಿದೆ. ಒಂದು ದಿನಕ್ಕೆ 12 ಓವರ್‌ಗಳಿಗಿಂತ ಜಾಸ್ತಿ ಅವರನ್ನು ಬಳಿಸಿಕೊಳ್ಳಬಾರದು. ಆ ಮೂಲಕ ಇತರೆ ಬೌಲರ್‌ಗಳನ್ನು ಹೆಚ್ಚಾಗಿ ಬಳಿಸಿಕೊಳ್ಳಬೇಕು. ನೀವು ಅವರನ್ನು (ಬುಮ್ರಾ) ರಕ್ಷಿಸಿದರೆ, ಅವರು ನಿಮಗೆ ವಿಕೆಟ್‌ ಪಡೆಯಬಲ್ಲ ಬೌಲರ್‌ ಆಗುತ್ತಾರೆ," ಎಂದು ಸೌರವ್‌ ಗಂಗೂಲಿ ತಿಳಿಸಿದ್ದಾರೆ.

IND vs ENG: ʻಕೇವಲ 5 ವಿಕೆಟ್‌ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಜಸ್‌ಪ್ರೀತ್‌ ಬುಮ್ರಾ!

ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ, ಜಸ್‌ಪ್ರೀತ್‌ ಬುಮ್ರಾ ಅವರನ್ನು ಉತ್ತಮವಾಗಿ ಬಳಿಸಿಕೊಂಡರೆ ಭಾರತ ತಂಡ ಈ ಟೆಸ್ಟ್‌ ಸರಣಿಯನ್ನು ಗೆಲ್ಲಬಹುದು ಎಂದು ಟೀಮ್‌ ಇಂಡಿಯಾ ಮಾಜಿ ನಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ ಕಂಡೀಷನ್ಸ್‌ ಆತಿಥೇಯ ತಂಡಕ್ಕೆ ನೆರವು ನೀಡಿದರೂ, ಭಾರತ ತಂಡ ಈ ಕೆಲಸವನ್ನು ಸರಿಯಾಗಿ ಮಾಡಿದರೆ ಫಲಿತಾಂಶ ನಮ್ಮ ಪರವಾಗಲಿದೆ ಎಂದು ಹೇಳಿದ್ದಾರೆ.

"ಈ ಕಂಡೀಷನ್ಸ್‌ನಲ್ಲಿ ಇಂಗ್ಲೆಂಡ್‌ ಉತ್ತಮ ತಂಡವಾಗಿದೆ. ಆದರೆ, ಒಂದು ವೇಳೆ ಭಾರತ ತಂಡ ಉತ್ತಮವಾಗಿ ಬ್ಯಾಟ್‌ ಮಾಡಿದರೆ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ಸರಿಯಾಗಿ ನಿರ್ವಹಿಸಿದರೆ, ಈ ಸರಣಿಯನ್ನು ಗೆಲ್ಲಲು ಭಾರತ ತಂಡಕ್ಕೆ ಅವಕಾಶವಿದೆ. ಎಜ್‌ಬಾಸ್ಟನ್‌ ಅಥವಾ ಲಾರ್ಡ್ಸ್‌ಗೆ ನಾನು ಮರಳುತ್ತೇನೆ, ಭಾರತಕ್ಕೆ ಈ ಬಾರಿ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.

IND vs ENG: ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್‌ ವಾನ್‌ ಪ್ರತಿಕ್ರಿಯೆ!

ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಗಿಲ್‌ ಸಾಕಷ್ಟು ಕೆಲಸ ಮಾಡಬೇಕಾಗಿದೆ: ದಾದಾ

ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಸುಧಾರಣೆ ಕಂಡುಕೊಳ್ಳಲು ಶುಭಮನ್‌ ಗಿಲ್‌ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಗಿಲ್‌ ದೀಗ ಯುವ ನಾಯಕನಾಗಿದ್ದು, ಇಂಗ್ಲೆಂಡ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಿದರೆ, ಅವರು ಹೀರೋ ಆಗಲಿದ್ದಾರೆಂದು ದಾದಾ ಹೇಳಿದ್ದಾರೆ.

"ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಅವರು ಇನ್ನು ಸ್ವಲ್ಪ ಕೆಲಸ ಮಾಡಬೇಕಾಗಿದೆ. ಇಂಥಾ ಕಂಡೀಷನ್ಸ್‌ನಲ್ಲಿ ಅವರು ಹೆಚ್ಚಿನ ರನ್‌ಗಳನ್ನು ಗಳಿಸಬೇಕಾದ ಅಗತ್ಯವಿದೆ. ಅವರಿನ್ನೂ ಯುವ ಬ್ಯಾಟ್ಸ್‌ಮನ್‌ ಹಾಗೂ ಅವರು ಇನ್ನಷ್ಟು ಕಲಿಯಲಿದ್ದಾರೆ. ಅವರು ಚೆನ್ನಾಗಿ ಆಡಿದರೆ, ರನ್‌ಗಳನ್ನು ಗಳಿಸಿದರೆ, ಇಂಗ್ಲೆಂಡ್‌ನಲ್ಲಿ ಹೀರೋ ಆಗಲಿದ್ದಾರೆ. ಆಟಗಾರನಾಗಿ ಇಂಥಾ ಕಂಡೀಷನ್ಸ್‌ ಎದುರಾಗಲಿದೆ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.