DC vs CSK: ʻಶತಕ ಮುಖ್ಯವಲ್ಲ, ತಂಡದ ಗೆಲುವು ಮುಖ್ಯʼ-ಗೆಲುವಿನ ಬಳಿಕ ಸಂಜು ಸ್ಯಾಮ್ಸನ್ ಹೇಳಿದ್ದಿದು!
Sanju Samon on his 87 Runs: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಶತಕ ಗಳಿಸಬಹುದಾದ ಅವಕಾಶವನ್ನು ಸಂಜು ಸ್ಯಾಮ್ಸನ್ ಕೈಚೆಲ್ಲಿಕೊಂಡಿದ್ದರು. ಅವರು ಅಜೇಯ 87 ರನ್ ಗಳಿಸಿದರು ಹಾಗೂ ಸಿಎಸ್ಕೆಗೆ 8 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಶತಕ ಕೈ ತಪ್ಪಿದ ಬಗ್ಗೆ ಸಂಜು ಸ್ಯಾಮ್ಸನ್ ಹೇಳಿಕೆ. -
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಅಜೇಯ 87 ರನ್ಗಳನ್ನು ಬಾರಿಸಿದ ಸಂಜು ಸ್ಯಾಮ್ಸನ್ (Sanju Samson) ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (CK) ಗೆಲ್ಲಿಸಿದರು. ಆದರೆ, ಅವರು ಕೇವಲ 13 ರನ್ಗಳಿಂದ ಶತಕ ಸಿಡಿಸಬಹುದಾದ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದರು. ಈ ಬಗ್ಗೆ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ ನೀಡಿದ್ದಾರೆ. ವೈಯಕ್ತಿಕ ದಾಖಲೆಗಿಂತ ತಂಡದ ಗೆಲುವು ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 156 ರನ್ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್, ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ಪ್ರದರ್ಶಿಸಿದರು. ಅವರು ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕಿದ ಸಂಜು, 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 87 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ತಂಡವನ್ನು ಇನ್ನೂ ಎರಡು ಓವರ್ಗಳು ಬಾಕಿ ಇರುವಾಗಲೇ ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
"ಶತಕ ಯಾವಾಗಲೂ ವಿಶೇಷವೇ,” ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಹೇಳಿದ ಸಂಜು ಸ್ಯಾಮ್ಸನ್, ಶತಕದ ಅಂಚಿನಲ್ಲಿ ಇದ್ದರೂ, ತಂಡದ ಗೆಲುವೇ ಮುಖ್ಯವೆಂದು ಸ್ಪಷ್ಟಪಡಿಸಿದರು. “ಶತಕ ಸಾಧಿಸಲು ನಾನು ಸ್ವಾರ್ಥಿಯಾಗಿರಬೇಕಾಗುತ್ತಿತ್ತು. ಇನ್ನೊಬ್ಬ ಬ್ಯಾಟ್ಸ್ಮನ್ ಚೆನ್ನಾಗಿ ಆಡುತ್ತಿದ್ದರಿಂದ, ಶತಕಕ್ಕಾಗಿ ನಾನು ಸ್ಟ್ರೈಕ್ ಕೇಳಲಿಲ್ಲ. ಇನ್ನೂ ಹಲವು ಪಂದ್ಯಗಳು ಬಾಕಿಯಿವೆ, ಮುಂದಿನ ಸಂದರ್ಭಗಳಲ್ಲಿ ಅದನ್ನು ಸಾಧಿಸುವ ನಿರೀಕ್ಷೆಯಿದೆ,” ಎಂದು ಅವರು ಹೇಳಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್!
ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ, ಸ್ಯಾಮ್ಸನ್ ಅವರು ಐಪಿಎಲ್ ಆವೃತ್ತಿಯಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಕೆಲವೊಮ್ಮೆ ಅದ್ಭುತ ಪ್ರದರ್ಶನ ನೀಡಿದರೆ, ಇನ್ನೊಮ್ಮೆ ಸ್ಥಿರತೆಯ ಕೊರತೆ ಕಾಣಿಸಿಕೊಂಡಿದೆ. ಈ ಸೀಸನ್ನ ಆರಂಭದಲ್ಲೇ ಎರಡು ಶತಕಗಳನ್ನು ಗಳಿಸಿದ್ದ ಅವರ ಪ್ರದರ್ಶನವು ಒಂದೇ ಮಾದರಿಯನ್ನು ಅನುಸರಿಸುತ್ತಿತ್ತು.
ಆದರೆ ಈ ಬಾರಿ, ತಮ್ಮ ಆಟದ ವಿಭಿನ್ನ ಮುಖವನ್ನು ಅವರು ತೋರಿಸಿದರು. ಸಮಾಧಾನ ಮತ್ತು ಜಾಗೃತಿಯನ್ನು ಪ್ರದರ್ಶಿಸಿದ ಸ್ಯಾಮ್ಸನ್, ಅನುಭವಿಗಳಂತೆ ಚೇಸ್ ಅನ್ನು ಕಟ್ಟಿಕೊಂಡು ಸಾಗಿಸಿದರು. ಸ್ಪಿನ್ಗೆ ಹೆಚ್ಚಿನ ನೆರವು ನೀಡುತ್ತಿದ್ದ ಪಿಚ್ನಲ್ಲೂ ಯಾವುದೇ ಅಡಚಣೆಗಳಿಲ್ಲದಂತೆ ಪಂದ್ಯವನ್ನು ಸುಗಮವಾಗಿ ಮುನ್ನಡೆಸಿ, ತಂಡದ ಗೆಲುವನ್ನು ಖಚಿತಪಡಿಸಿದರು.
IPL 2026: ಆರ್ಸಿಬಿ ಫ್ಯಾನ್ಸ್ಗೆ ನಿರಾಶೆ, ಬೆಂಗಳೂರಿನಲ್ಲಿ ಫೈನಲ್ ನಡೆಯುವುದು ಅನುಮಾನ!
ಆರಂಭದಲ್ಲೇ ಪಿಚ್ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡ ಸ್ಯಾಮ್ಸನ್, ಡೆಲ್ಲಿ ತಂಡದ ಸ್ಪಿನ್ ಜೋಡಿ—ವಿಶೇಷವಾಗಿ ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ವಿರುದ್ಧ ಆಕ್ರಮಣಕಾರಿ ಹೊಣೆ ಹೊತ್ತರು. ಅವರು ತಮ್ಮ ಲಯಕ್ಕೆ ಮರಳಲು ಅವಕಾಶ ನೀಡಿದರೆ ಚೇಸ್ ಕಠಿಣವಾಗಬಹುದು ಎಂದು ಅರಿತು, ಲೆಕ್ಕಾಚಾರದಿಂದ ಆಕ್ರಮಣಾತ್ಮಕ ಆಟವನ್ನು ಆಯ್ದುಕೊಂಡು ಬೌಲರ್ಗಳ ಮೇಲೆ ನಿರಂತರ ಒತ್ತಡವನ್ನು ಹೇರಿದರು.
ಸಂಜುಗೆ ಸಾಥ್ ನೀಡಿದ್ದ ಕಾರ್ತಿಕ್ ಶರ್ಮಾ
ಇನ್ನೊಂದು ತುದಿಯಲ್ಲಿ ಕಾರ್ತಿಕ್ ಶರ್ಮಾ ಸಿಎಸ್ಕೆ ಪರ ತಮ್ಮ ವೇಗದ ಬ್ಯಾಟಿಂಗ್ ಮುಂದುವರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಅವರು, ಆ ಪಾತ್ರಕ್ಕೆ ಬೇಗನೆ ಹೊಂದಿಕೊಂಡಿದ್ದಾರೆ. ಕಳೆದ ವಾರ ಚೆನ್ನೈನಲ್ಲಿ ತಮ್ಮ ಮೊದಲ ಐಪಿಎಲ್ ಅರ್ಧಶತಕ ದಾಖಲಿಸಿದ್ದ ಅವರು, ಅದೇ ಆತ್ಮವಿಶ್ವಾಸವನ್ನು ಈ ಪಂದ್ಯದಲ್ಲೂ ಮುಂದುವರಿಸಿ ಮಹತ್ವದ ಬೆಂಬಲ ನೀಡಿದರು.
ಈ ಜೋಡಿ ಸೇರಿ 114 ರನ್ಗಳ ಗೆಲುವಿನ ಜೊತೆಯಾಟ ನಿರ್ಮಿಸಿ ಪಂದ್ಯವನ್ನು ಸಿಎಸ್ಕೆ ಪರ ತಿರುಗಿಸಿದರು. ಕಾರ್ತಿಕ್, ಸ್ಯಾಮ್ಸನ್ ಅವರ ಆಧಿಪತ್ಯಕ್ಕೆ ಸರಿಯಾದ ಬೆಂಬಲ ನೀಡುತ್ತಾ, ಸ್ಟ್ರೈಕ್ ಅನ್ನು ಪರಿಣಾಮಕಾರಿಯಾಗಿ ರೋಟೇಟ್ ಮಾಡಿ, ಸರಿಯಾದ ಸಮಯದಲ್ಲಿ ದಾಳಿಗೆ ಮುಂದಾದರು. ಕುಲ್ದೀಪ್ ಯಾದವ್ ವಿರುದ್ಧ ಇನ್ಸೈಡ್ ಔಟ್ ಶಾಟ್ಗಳನ್ನು ಅಚ್ಚುಕಟ್ಟಾಗಿ ಆಡಿದ ಕ್ಷಣವು ಅವರ ಆತ್ಮವಿಶ್ವಾಸ ಮತ್ತು ಕ್ಲಾಸ್ ಬ್ಯಾಟಿಂಗ್ ಅನ್ನು ತೋರಿಸಿತು.