RCB vs LSG: ʻಮಂಡಿ ನೋವಿತ್ತುʼ-ಆರೆಂಜ್ ಕ್ಯಾಪ್ ತೊಟ್ಟು ಹೆಲ್ತ್ ಅಪ್ಡೇಟ್ ಕೊಟ್ಟ ವಿರಾಟ್ ಕೊಹ್ಲಿ!
Virat kohli Health Update: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಅವರು ಈ ಪಂದ್ಯದಲ್ಲಿ 49 ರನ್ ಗಳಿಸಿದರು ಹಾಗೂ ಆರೆಂಜ್ ಕ್ಯಾಪ್ ಪಡೆದರು. ಈ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್ಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಪ್ರವೇಶ ಮಾಡಿತು.
ಗಾಯ, ಆರೋಗ್ಯದ ಬಗ್ಗೆ ವಿರಾಟ್ ಕೊಹ್ಲಿ ಅಪ್ಡೇಟ್. -
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ (RCB vs LSG Match Highlights) ಗೆಲುವು ಸಾಧಿಸಿದ ನಂತರ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ತಮ್ಮ ಗಾಯ ಮತ್ತು ಆರೋಗ್ಯದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಏಪ್ರಿಲ್ 15 ಬುಧವಾರ ನಡೆದಿದ್ದ ಈ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಆರ್ಸಿಬಿ, ಎಲ್ಎಸ್ಜಿ ವಿರುದ್ಧ ಐದು ವಿಕೆಟ್ಗಳ ಜಯ ಸಾಧಿಸಿತು. 147 ರನ್ಗಳ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ ಇನ್ನೂ 29 ಬಾಲ್ಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡಿ, ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಆರೆಂಜ್ ಕ್ಯಾಪ್ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ಗಾಯದ ಬಗ್ಗೆ ಮಾಹಿತಿ ಒದಗಿಸಿದರು. ಕಳೆದ ಪಂದ್ಯದಲ್ಲಿ ನಾನು ಮೊಣಕಾಲು ನೋವಿನಿಂದ ಬಳಲುತ್ತಿದ್ದೆ ಮತ್ತು ಕಳೆದ ಕೆಲವು ದಿನಗಳಿಂದ ಆರೋಗ್ಯವೂ ಸರಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
RCB vs LSG: ರಸಿಖ್ ಸಲಾಮ್ ಮಾರಕ ದಾಳಿ, ಲಖನೌ ಎದುರು ಗೆದ್ದು ಅಗ್ರ ಸ್ಥಾನಕ್ಕೇರಿದ ಆರ್ಸಿಬಿ!
"ಕಳೆದ ಪಂದ್ಯಕ್ಕಿಂತ ಈ ಪಂದ್ಯದಲ್ಲಿ ನನ್ನ ಪರಿಸ್ಥಿತಿ ತುಂಬಾ ಉತ್ತಮವಾಗಿತ್ತು. ನಾನು ಇನ್ನೂ ಶೇಕಡಾ 100 ರಷ್ಟು ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ನನ್ನ ಮೊಣಕಾಲಿನಲ್ಲಿ ಸ್ವಲ್ಪ ನೋವಿತ್ತು. ಆರೋಗ್ಯದ ದೃಷ್ಟಿಯಿಂದಲೂ ಕಳೆದ ನಾಲ್ಕು ಅಥವಾ ಐದು ದಿನಗಳಿಂದ ಸ್ವಲ್ಪ ಅಸ್ವಸ್ಥನಾಗಿದ್ದೆ. ಈಗ ನಿಧಾನವಾಗಿ ಮತ್ತೆ ಉತ್ತಮ ಸ್ಥಿತಿಗೆ ಮರಳುತ್ತಿದ್ದೇನೆ. ಇಂದು ನಾನು ಉತ್ತಮ ಆರಂಭ ಪಡೆದೆ ಹಾಗೂ ನನ್ನ ಆಟದಿಂದ ನನಗೆ ಸಂತೋಷವಾಗಿದೆ,” ಎಂದು ಹೇಳಿದ್ದಾರೆ.
"ಮತ್ತೊಮ್ಮೆ ನಾನು ಪಂದ್ಯವನ್ನು ಮುಗಿಸುವವರೆಗೆ ಕ್ರೀಸ್ನಲ್ಲಿ ಉಳಿಯಲು ಇಷ್ಟಪಟ್ಟಿದ್ದೆ. ಕೆಲವೊಮ್ಮೆ ಪರಿಸ್ಥಿತಿಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪಿಚ್ ತುಂಬಾ ನಿಧಾನಗತಿಯಿಂದ ಕೂಡಿತ್ತು ಮತ್ತು ನಾನು ಅದೇ ರೀತಿಯಲ್ಲಿ ಆಟ ಮುಂದುವರಿಸಲು ಬಯಸಿದೆ. ಆದರೆ ಕೊನೆಯಲ್ಲಿ ಪಂದ್ಯವನ್ನು ನಾನೇ ಮುಗಿಸಬೇಕಾಗಿತ್ತು,” ಎಂದು ಕೊಹ್ಲಿ ತಿಳಿಸಿದ್ದಾರೆ.
- Orange Cap Holder in 2016
— Sam (@Cricsam01) April 15, 2026
- Orange Cap holder in 2024
- Now Orange Cap holder in 2026
VIRAT KOHLI STILL DOMINATE, WHERE POWER HITTER YOUNGERSTER PLAY 🔥🫡
pic.twitter.com/GSqrynFXyk
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ
ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಹಿಂದಿನ ಪಂದ್ಯಗಳಿಗಿಂತ ಭಿನ್ನವಾಗಿ ನಿಧಾನವಾಗಿತ್ತು. ಈ ಬಗ್ಗೆ ವಿರಾಟ್ ಕೊಹ್ಲಿ ಅವರು ಪ್ರತಿಕ್ರಿಯಿಸಿ, ಈ ಪರಿಸ್ಥಿತಿಯಲ್ಲಿ ಪವರ್ಪ್ಲೇ ಹಂತ ಹೆಚ್ಚು ಮಹತ್ವ ಪಡೆದಿತ್ತು ಎಂದು ಒಪ್ಪಿಕೊಂಡರು.
IPL 2026: 4 ವಿಕೆಟ್ ಕಿತ್ತು ಆರ್ಸಿಬಿ ಡೆತ್ ಬೌಲಿಂಗ್ ಬಲ ಹೆಚ್ಚಿಸಿದ ರಸಿಖ್ ದಾರ್ ಸಲಾಂ ಯಾರು?
“ಹೌದು, ಪಿಚ್ ಸಾಮಾನ್ಯಕ್ಕಿಂತ ನಿಧಾನವಾಗಿತ್ತು. ನೀವು ನೋಡಿದರೆ, ಪಿಚ್ ಮೇಲೆ ಸಾಕಷ್ಟು ಹುಲ್ಲು ಇರಲಿಲ್ಲ. ಕಳೆದ 3-4 ದಿನಗಳು ಬಹಳ ಬಿಸಿಯಾಗಿತ್ತು ಮತ್ತು ಒಣಹವೆಯೂ ಇತ್ತು. ಆದ್ದರಿಂದ, ಚಿನ್ನಸ್ವಾಮಿಯಲ್ಲಿ ನಾವು ಸಾಮಾನ್ಯವಾಗಿ ಕಾಣುವ ತೇವದ ಪಿಚ್ಗಿಂತ ಇದು ಒಣ ಮತ್ತು ನಿಧಾನವಾದ ಪಿಚ್ ಆಗಿರಬಹುದು ಎಂದು ನಾವು ಭಾವಿಸಿದ್ದೆವು. ಹೀಗಾಗಿ, ಮೊದಲ ಐದು-ಆರು ಓವರ್ಗಳಲ್ಲಿ ಎದುರಾಳಿ ತಂಡದಿಂದ ಪಂದ್ಯವನ್ನು ದೂರ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶವಾಗಿತ್ತು. ಆ ಕಾರಣಕ್ಕಾಗಿ ಪವರ್ಪ್ಲೇ ಬ್ಯಾಟಿಂಗ್ ಬಹಳ ಮುಖ್ಯವಾಗಿತ್ತು. ಅದಕ್ಕಾಗಿ ನಾನು ಇಂದು ನನ್ನ ಆಟದಿಂದ ಸಂತೋಷವಾಗಿದ್ದೇನೆ. ಆರಂಭದಲ್ಲೇ ತಂಡವನ್ನು ಮುನ್ನಡೆಸಲು ನನಗೆ ಸಾಧ್ಯವಾಯಿತು,” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.