IND vs ENG 2nd Test: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ; ಮೊದಲ ದಿನ ಬುಮ್ರಾ, ಪ್ರಸಿದ್ಧ್ ಗೈರು
ಬುಮ್ರಾ ಜತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಅಭ್ಯಾಸಕ್ಕೆ ಗೈರಾಗಿದ್ದರು. ಇದು ಆತಂಕಕ್ಕೆ ಕಾರಣವಾಗಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ವೇಗಿಗಳಾದ ಆಕಾಶ್ದೀಪ್ ಸಿಂಗ್ ಮತ್ತು ಅರ್ಶ್ದೀಪ್ ಸಿಂಗ್ ಜತೆ ದೀರ್ಘ ಕಾಲ ಚರ್ಚಿಸುತ್ತಿರುವುದು ಕಂಡು ಬಂತು. ಅಚ್ಚರಿ ಎಂದರೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಅಭ್ಯಾಸದ ವೇಳೆ ಹಾಜರಿದ್ದು ಆಟಗಾರರಿಗೆ ಬೌಲಿಂಗ್ ಸಲಹೆ ನೀಡಿದ್ದಾರೆ.


ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ(IND vs ENG Test Series) ಸೋಲು ಕಂಡಿದ್ದ ಭಾರತ ತಂಡ ಇದೀಗ ಗೆಲುವಿನ ಹಳಿ ಏರು ನಿಟ್ಟಿನಲ್ಲಿ ಬರ್ಮಿಂಗ್ಹ್ಯಾನ್ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುವ ದ್ವಿತೀಯ ಟೆಸ್ಟ್(IND vs ENG 2nd Test) ಪಂದ್ಯಕ್ಕೆ ಕಠಿಣ ಅಭ್ಯಾಸ(India resume training) ಆರಂಭಿಸಲಿದೆ. ಆದರೆ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮೊದಲ ದಿನ ಅಭ್ಯಾಸದಿಂದ ಹೊರಗುಳಿದರು. ಹೀಗಾಗಿ ಅವರು ದ್ವಿತೀಯ ಟೆಸ್ಟ್ನಲ್ಲಿ ಆಡದಿರುವುದು ಬಹುತೇಕ ಖಚಿತವಾದಂತಿದೆ.
ಬುಮ್ರಾ ಜತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ಅಭ್ಯಾಸಕ್ಕೆ ಗೈರಾಗಿದ್ದರು. ಇದು ಆತಂಕಕ್ಕೆ ಕಾರಣವಾಗಿದ್ದು, ಮುಖ್ಯ ಕೋಚ್ ಗೌತಮ್ ಗಂಭೀರ್ ವೇಗಿಗಳಾದ ಆಕಾಶ್ದೀಪ್ ಸಿಂಗ್ ಮತ್ತು ಅರ್ಶ್ದೀಪ್ ಸಿಂಗ್ ಜತೆ ದೀರ್ಘ ಕಾಲ ಚರ್ಚಿಸುತ್ತಿರುವುದು ಕಂಡು ಬಂತು. ಅಚ್ಚರಿ ಎಂದರೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಅಭ್ಯಾಸದ ವೇಳೆ ಹಾಜರಿದ್ದು ಆಟಗಾರರಿಗೆ ಬೌಲಿಂಗ್ ಸಲಹೆ ನೀಡಿದ್ದಾರೆ.
ಮೊದಲ ಪಂದ್ಯಲ್ಲಿ ಬಾಲಗೊಂಚಿಗಳು ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲವಾದದ್ದು ಕೂಡ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಈ ತಪ್ಪು ಮರುಕಳಿಸಬಾರದೆಂಬ ನಿಟ್ಟಿನಲ್ಲಿ ಬೌಲರ್ಗಳಿಗೆ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ನಡೆಸಲಾಯಿತು.
ಇದನ್ನೂ ಓದಿ IND vs ENG: ಭಾರತ ತಂಡದ ಬೌಲಿಂಗ್ ವಿಭಾಗವನ್ನು ಟೀಕಿಸಿದ ಮೊಹಮ್ಮದ್ ಶಮಿ!
ಒಂದೊಮ್ಮೆ ಬಮ್ರಾ ಅವರ ಅನುಪಸ್ಥಿತಿ ಕಾಡಿದರೆ, ಆಗ ತಂಡದ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಹೊಣೆ ಮೊಹಮ್ಮದ್ ಸಿರಾಜ್ ಹೆಗಲಿಗೆ ಬೀಳಲಿದೆ. ಸಿರಾಜ್ ಇತರ ಬೌಲರ್ಗಳಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಸ್ವತಃ ತಾವೂ ಸ್ಫೂರ್ತಿ ಪಡೆಯಬೇಕಿದೆ. ಬುಮ್ರಾ ಈ ಪಂದ್ಯದಿಂದ ಹೊರಗುಳಿದರೆ ಅವರ ಜಾಗವನ್ನು ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ತುಂಬುವ ಸಾಧ್ಯತೆ ಹೆಚ್ಚು. ಅರ್ಶ್ದೀಪ್ ಇತ್ತೀಚೆಗೆ ಇಂಗ್ಲೆಂಡ್ ಕೌಂಟಿಯಲ್ಲಿ ಆಡಿ ಅನುಭವ ಗಳಿಸಿದ್ದರು. ಜತೆಗೆ ಈಗಾಗಲೇ ಸೀಮಿತ ಓವರ್ ಕ್ರಿಕೆಟ್ನಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.