IND vs ENG: ಭಾರತ ತಂಡದ ಬೌಲಿಂಗ್ ವಿಭಾಗವನ್ನು ಟೀಕಿಸಿದ ಮೊಹಮ್ಮದ್ ಶಮಿ!
Mohammed Shami criticises India's bowling: ಲೀಟ್ಸ್ನ ಹೆಡಿಂಗ್ಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಳಿಂದ ಸೋಲು ಅನುಭವಿಸಿತ್ತು. ಭಾರತ ತಂಡದ ಬೌಲಿಂಗ್ ಪ್ರದರ್ಶನವನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಕಟುವಾಗಿ ಟೀಕಿಸಿದ್ದಾರೆ. ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾಗೆ ಇತರೆ ಬೌಲರ್ಗಳು ಸಾಥ್ ನೀಡಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಶಮಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಬೌಲಿಂಗ್ ಬಗ್ಗೆ ಮೊಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ ಮೊಹಮ್ಮದ್ ಶಮಿ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡದ ಬೌಲಿಂಗ್ ಪ್ರದರ್ಶನವನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ (Mohammed shami) ಕಟುವಾಗಿ ಟೀಕಿಸಿದ್ದಾರೆ. ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಬಿಟ್ಟು ಇನ್ನುಳಿದ ಬೌಲರ್ಗಳು 4.5ರ ಸರಾಸರಿಗಿಂತಲೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರಿಂದ ಇಂಗ್ಲೆಂಡ್ 371 ರನ್ಗಳ ಗುರಿಯನ್ನು ಸುಲಭವಾಗಿ ಮುಟ್ಟಿ, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಇದೀಗ ಉಭಯ ತಂಡಗಳು ಜುಲೈ 2 ರಂದು ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿವೆ.
ಪ್ರಥಮ ಇನಿಂಗ್ಸ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಸಾಧನೆ ಮಾಡಿದ ಹೊರತಾಗಿಯೂ ಎರಡನೇ ಇನಿಂಗ್ಸ್ನಲ್ಲಿ ವಿಕೆಟ್ ಪಡೆಯಲು ಎಡವಿದ್ದರು. ಆದರೂ ಇಂಗ್ಲೆಂಡ್ ಆಟಗಾರರು ಬುಮ್ರಾ ಬೌಲಿಂಗ್ನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪಂದ್ಯದಲ್ಲಿ ಇನ್ನುಳಿದ ಬೌಲರ್ಗಳು ಬುಮ್ರಾ ಅವರಿಂದ ಸಲಹೆ ಪಡೆಯಬೇಕು ಎಂದು ಶಮಿ ಹೇಳಿದ್ದಾರೆ.
IND vs ENG: ಜಸ್ಪ್ರೀತ್ ಬುಮ್ರಾ ಔಟ್, ಎರಡನೇ ಟೆಸ್ಟ್ಗೆ ಭಾರತ ತಂಡದಲ್ಲಿ 4 ಬದಲಾವಣೆ ಸಾಧ್ಯತೆ!
ಜಸ್ಪ್ರೀತ್ ಬುಮ್ರಾ ಸಲಹೆ ಪಡೆಯಿರಿ: ಶಮಿ
ತಮ್ಮದೇ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋಲಿನ ಕುರಿತು ಮೊಹಮ್ಮದ್ ಶಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪಂದ್ಯದಲ್ಲಿ ಭಾರತ ತಂಡದ ಇನ್ನುಳಿದ ಬೌಲರ್ಗಳು ಅನುಭವಿ ವೇಗಿ ಜಸ್ಪ್ರೀತ್ ಅವರಿಂದ ಸಲಹೆ ಪಡೆಯಬೇಕಿತ್ತು. ವಿಕೆಟ್ ಪಡೆಯುವ ಕುರಿತ ರಣತಂತ್ರದ ಕುರಿತು ಬುಮ್ರಾ ಜೊತೆ ಚರ್ಚೆ ನಡೆಸಬೇಕಾಗಿತ್ತು. ಇದರ ಜೊತೆಗೆ ಅವರಿಗೆ ಬೆಂಬಲ ನೀಡಬೇಕಿತ್ತು. ಒಂದು ವೇಳೆ ತಂಡದ ಇತರೆ ಬೌಲರ್ಗಳು ಬುಮ್ರಾಗೆ ಉತ್ತಮ ಸಾಥ್ ನೀಡಿದ್ದರೆ, ಆಗ ನಾವು ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು. ಮೊದಲ ಟೆಸ್ಟ್ ಪಂದ್ಯದ ಕುರಿತು ನಾನು ಪ್ರಸ್ತಾಪಿಸುವುದಾದರೆ, ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಶ್ರಮವಹಿಸಿ ಅಭ್ಯಾಸ ಮಾಡಬೇಕು," ಎಂದು ಅನುಭವಿ ವೇಗಿ ಹೇಳಿದ್ದಾರೆ.
IND vs ENG: ಜೋಫ್ರಾ ಆರ್ಚರ್ ಆಗಮನ, ಎರಡನೇ ಟೆಸ್ಟ್ಗೆ ಇಂಗ್ಲೆಂಡ್ ತಂಡ ಪ್ರಕಟ!
ಪಂದ್ಯ ಆಗಲೇ ಕೈ ಜಾರಿತ್ತು
ಇಂಗ್ಲೆಂಡ್ ವಿರುದ್ಧದ ಎರಡನೇ ಇನಿಂಗ್ಸ್ನಲ್ಲಿ ಪ್ರಸಿಧ್ ಕೃಷ್ಣ ಹಾಗೂ ಶಾರ್ದುಲ್ ಠಾಕೂರ್ ವಿಕೆಟ್ ಪಡೆಯುವ ವೇಳೆಗೆ ಪಂದ್ಯವು ಟೀಮ್ ಇಂಡಿಯಾದ ಕೈಯಿಂದ ಜಾರಿ ಹೋಗಿತ್ತು ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ.
"ಎರಡನೇ ಇನಿಂಗ್ಸ್ನಲ್ಲಿ ಪ್ರಸಿಧ್ ಕೃಷ್ಣ ಹಾಗೂ ಶಾರ್ದುಲ್ ಠಾಕೂರ್ ಅವರು ತಲಾ ಎರಡು ವಿಕೆಟ್ ಪಡೆದರು. ಶಾರ್ದುಲ್ ಠಾಕೂರ್ ಬ್ಯಾಕ್ ಟು ಬ್ಯಾಕ್ ಇಬ್ಬರು ಇಂಗ್ಲೆಂಡ್ ಆಟಗಾರರ ವಿಕೆಟ್ ಪಡೆದಿದ್ದರು ಆದರೆ ಆ ವೇಳೆಗೆ ಪಂದ್ಯವು ಭಾರತ ತಂಡದ ಕೈಯಿಂದ ಜಾರಿ ಹೋಗಿತ್ತು. ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ. ಉಳಿದ ಬೌಲರ್ಗಳು ಜಸ್ಪ್ರೀತ್ ಬೂಮ್ರಾಗೆ ಬೆಂಬಲ ನೀಡಬೇಕು. ನಾವು ಪಂದ್ಯದಲ್ಲಿ ಸುಲಭವಾಗಿ ರನ್ ನೀಡಿದ್ದರಿಂದ ಇಂಗ್ಲೆಂಡ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಮುಂದಿನ ಪಂದ್ಯಗಳಲ್ಲಿ ಬೌಲಿಂಗ್ನಲ್ಲಿ ಹೆಚ್ಚು ನಿಯಂತ್ರಣ ಸಾಧಿಸುವತ್ತ ಗಮನಹರಿಸಬೇಕು," ಎಂದು ಮೊಹಮ್ಮದ್ ಶಮಿ ಸಲಹೆ ನೀಡಿದ್ದಾರೆ.
IND vs ENG: ʻನಿಮಗೆ ಅಪಾಯ ಎದುರಾಗಲಿದೆʼ-ರಿಷಭ್ ಪಂತ್ ಬ್ಯಾಟಿಂಗ್ ಸ್ವಭಾವದ ಬಗ್ಗೆ ಎಬಿಡಿ ಎಚ್ಚರಿಕೆ!
ಗಾಯದ ಸಮಸ್ಯೆಯಿಂದ ಸಂಪೂರ್ಣ ಫಿಟ್ನೆಸ್ ಪಡೆಯುವಲ್ಲಿ ಎಡವಿರುವ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಲಭ್ಯತೆ ಕುರಿತು ಇನ್ನೂ ಸ್ಪಷ್ಟತೆ ದೊರೆತಿಲ್ಲ. ಒಂದು ವೇಳೆ ಬುಮ್ರಾ ತಂಡದಿಂದ ಹೊರಗುಳಿದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.