ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ಸೆಮಿ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ ತಂದ ಗ್ರೀನ್‌ ಪಿಚ್‌

Wankhede Pitch Report: ಪಂದ್ಯವು ಮಧ್ಯದ ಓವರ್‌ಗಳಿಗೆ ಸಾಗುತ್ತಿದ್ದಂತೆ, ಮೇಲ್ಮೈ ಸ್ಥಿರವಾಗಬಹುದು, ಇದು ಸ್ಪಿನ್ನರ್‌ಗಳಿಗೆ ಹಿಡಿತ ಮತ್ತು ತಿರುವು ಪಡೆಯಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಹುಲ್ಲು ಸವೆದುಹೋದರೆ ಅಥವಾ ಪಿಚ್ ಸ್ವಲ್ಪ ಒರಟಾಗಿದ್ದರೆ ಮಾತ್ರ. ಪಂದ್ಯದಲ್ಲಿ ಇಬ್ಬನಿಯು ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಸೆಮಿ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ ತಂದ ಗ್ರೀನ್‌ ಪಿಚ್‌

Brendon McCullum analysing Wankhede pitch -

Abhilash BC
Abhilash BC Mar 5, 2026 10:43 AM

ಮುಂಬಯಿ, ಮಾ.5: ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್‌ ಸೆಮಿಫೈನಲ್(T20 World Cup Semifinal)‌ ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗುತ್ತಿರುವಾಗಲೇ ಇಲ್ಲಿನ ಪಿಚ್‌ ಬಗ್ಗೆ ಭಾರತ ತಂಡಕ್ಕೆ ಕಳವಳ ಉಂಟು ಮಾಡಿದೆ. ವಾಂಖೆಡೆ ಮೈದಾನದ ಪಿಚ್(Wankhede Pitch Report) ಹಸಿರು ಛಾಯೆಯನ್ನು ಹೊಂದಿದ್ದು ಭಾರತೀಯ ಬ್ಯಾಟರ್‌ಗಳಿಗೆ ಆತಂಕ ತಂದಿದೆ.

ಹೌದು, ಹಸಿರು ಪಿಚ್​ನಲ್ಲಿ ಇಂಗ್ಲೆಂಡ್‌ ವೇಗಿಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಬಲ್ಲರು. ಇಂಗ್ಲೆಂಡ್​ನ ಬಹುತೇಕ ಪಿಚ್​ ಮೇಲ್ಮೈ ಹಸಿರು ಹುಲ್ಲಿನಿಂದ ಕೂಡಿರುತ್ತದೆ. ಹೀಗಾಗಿ ಅಂತಹ ಪಿಚ್​ನಲ್ಲಿ ಹೇಗೆ ದಾಳಿ ಸಂಘಟಿಸಬೇಕು, ಹೇಗೆ ಬ್ಯಾಟಿಂಗ್‌ ನಡೆಸಬೇಕು ಎನ್ನುವುದು ಆಂಗ್ಲರಿಗೆ ಚೆನ್ನಾಗಿ ಗೊತ್ತಿದೆ. ಆಟದ ಆರಂಭದಲ್ಲಿ, ಹುಲ್ಲು ಮತ್ತು ಕೆಂಪು ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳಾದ ಸ್ಥಿರವಾದ ಬೌನ್ಸ್ ಮತ್ತು ಕೆಲವು ಕ್ಯಾರಿಗಳಿಂದಾಗಿ ವೇಗಿಗಳು ಸೀಮ್ ಚಲನೆ ಮತ್ತು ಹೆಚ್ಚುವರಿ ಬೌನ್ಸ್‌ನಿಂದ ಪ್ರಯೋಜನ ಪಡೆಯಬೇಕು. ವೇಗದ ಬೌಲರ್‌ಗಳು ಪವರ್‌ಪ್ಲೇನಲ್ಲಿ ಸೀಮ್‌ನಿಂದ ಹೊರಗೆ ಚಲನೆಯೊಂದಿಗೆ ಆರಂಭಿಕರಿಗೆ ತೊಂದರೆ ನೀಡಬಹುದು.

ಪಂದ್ಯವು ಮಧ್ಯದ ಓವರ್‌ಗಳಿಗೆ ಸಾಗುತ್ತಿದ್ದಂತೆ, ಮೇಲ್ಮೈ ಸ್ಥಿರವಾಗಬಹುದು, ಇದು ಸ್ಪಿನ್ನರ್‌ಗಳಿಗೆ ಹಿಡಿತ ಮತ್ತು ತಿರುವು ಪಡೆಯಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಹುಲ್ಲು ಸವೆದುಹೋದರೆ ಅಥವಾ ಪಿಚ್ ಸ್ವಲ್ಪ ಒರಟಾಗಿದ್ದರೆ ಮಾತ್ರ. ಪಂದ್ಯದಲ್ಲಿ ಇಬ್ಬನಿಯು ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

ಶತಕ ಸಿಡಿಸಿ ಹಲವು ದಾಖಲೆ ಬರೆದ ಫಿನ್‌ ಆ್ಯಲೆನ್‌; ದಾಖಲೆ ಪಟ್ಟಿ ಇಲ್ಲಿದೆ

ಮುಂಬೈನ ತಾಪಮಾನಕ್ಕೆ ಪಿಚ್ ಬೇಗನೆ ಒಣಗಿ ಬಿರುಕು ಬಿಡಬಾರದು ಎಂಬ ಕಾರಣಕ್ಕೆ ಐಸಿಸಿ ಕ್ಯುರೇಟರ್‌ಗಳು ಈ ಬಾರಿ ಹೆಚ್ಚಿನ ಹುಲ್ಲನ್ನು ಉಳಿಸಿಕೊಂಡಿದ್ದಾರೆ. ಗ್ರೀನ್‌ ಪಿಚ್‌ ಬಗ್ಗೆ ಟೀಮ್‌ ಇಂಡಿಯಾ ಕೋಚ್‌ ಗೌತಮ್‌ ಗಂಭೀರ್‌ ಅವರು ಅಸಾಮಾಧನಗೊಂಡಿದ್ದು ಮುಂಬೈ ಪಿಚ್‌ ಕ್ಯೂರೇಟರ್‌ ಜತೆ ವಾಗ್ವಾದ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಭಾರತದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಕೂಡ ಇಬ್ಬನಿಯ ಸಂಭಾವ್ಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಇಬ್ಬನಿ ಯಾವಾಗಲೂ ಒಂದು ದೊಡ್ಡ ಕಾಳಜಿ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಮತ್ತೊಮ್ಮೆ ನೀವು ನಿಯಂತ್ರಿಸಲು ಸಾಧ್ಯವಿಲ್ಲದ ವಿಷಯ. ವಾಂಖೆಡೆಯಲ್ಲಿ ಯಾವಾಗಲೂ ಹೆಚ್ಚುವರಿ ಬೌನ್ಸ್ ಇರುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದರು.

"ಬೌನ್ಸ್ ಅನ್ನು ನಂಬಿ ಲೈನ್ ಮೂಲಕ ಆಡಬಹುದು, ಇದು ಬೌಲರ್ ಆಗಿ ನಿಮ್ಮನ್ನು ಆಟದಲ್ಲಿ ಹಿಡಿತ ಸಾಧಿಸುವಂತೆ ಮಾಡಲಿದೆ. ಇಲ್ಲಿನ ಬೌಂಡರಿಗಳು ತುಂಬಾ ಚಿಕ್ಕದಾಗಿದೆ ಎಂದು ನಾನು ಭಾವಿಸುತ್ತೇನೆ. ಚೆಂಡು ವೇಗವಾಗಿ ಚಲಿಸುತ್ತದೆ. ಇದು ತುಂಬಾ ಸಣ್ಣ ಮೈದಾನ. ಹೀಗಾಗಿ ಬೌಲರ್‌ಗಳಿಗೆ ಹೆಚ್ಚಿನ ಸವಾಲು ಎದುರಾಗುವುದ ಖಚಿತ" ಎಂದು ಅವರು ವಿವರಿಸಿದರು.