ಪೂರ್ಣ ಫಿಟ್ ಅಲ್ಲದಿದ್ದರೂ ನಾಲ್ವರು ಆಟಗಾರರು ಭಾರತದ ಟಿ20ಐ ತಂಡದಲ್ಲಿ ಸ್ಥಾನ ಪಡೆದಿರುವುದು ಏಕೆ?
India vs Afghanistan T20I series: ಹರ್ಷೀತ್ ರಾಣಾ, ನಿತೀಶ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ವೇಳೆ ಬಲ ಮಂಡಿರಜ್ಜು ನೋವಿಗೆ ಒಳಗಾಗಿದ್ದರು. ಬಳಿಕ ಬೆಂಗಳೂರಿನ ಪುನಶ್ಚೇತನ ಶಿಬಿರದಲ್ಲಿ ತೊಡಗಿದ್ದರು.
Harshit Rana, Jasprit Bumrah and Nitish Reddy -
ನವದೆಹಲಿ, ಸೆ.2: ಅಫ್ಗಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಗೆ ಭಾರತ 15 ಸದಸ್ಯರ ತಂಡವನ್ನು ಮಂಗಳವಾರ ಪ್ರಕಟಿಸಿತ್ತು. ಆದರೆ ಈ ಪೈಕಿ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಹಾಗೂ ಆಲ್ರೌಂಡರ್ಗಳಾದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಫಿಟ್ನೆಸ್ ಹೊಂದಿದರಷ್ಟೇ ಸರಣಿಗೆ ಲಭ್ಯರಾಗಲಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 13, 15 ಮತ್ತು 17ರಂದು ಪಂದ್ಯಗಳು ನಡೆಯಲಿವೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ವೇಳೆ ಬುಮ್ರಾ ಮೊಣಕಾಲಿನ ನೋವಿಗೆ ಒಳಗಾಗಿದ್ದರು. ಹೀಗಾಗಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದ್ದರು. ಕೆಲದ ಒತ್ತಡ ನಿರ್ವಹಣೆ ಮತ್ತು ಭವಿಷ್ಯದ ಸರಣಿಗಳ ಜತೆಗೆ, 2027ರ ಏಕದಿನ ವಿಶ್ವಕಪ್ ಗಮನದಲ್ಲಿರಿಸಿಕೊಂಡು ಆಯ್ಕೆಗಾರರು ಬುಮ್ರಾ ಮರ್ತು ಹಾರ್ದಿಕ್ ಪಾಂಡ್ಯ ಅವರನ್ನು ಏಕದಿನ ಪಂದ್ಯಗಳಲ್ಲಿ ಹೆಚ್ಚು ಆಡಿಸಲು ಒತ್ತು ನೀಡುತ್ತಿದ್ದಾರೆ.
ಹರ್ಷೀತ್ ರಾಣಾ, ನಿತೀಶ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ವೇಳೆ ಬಲ ಮಂಡಿರಜ್ಜು ನೋವಿಗೆ ಒಳಗಾಗಿದ್ದರು. ಬಳಿಕ ಬೆಂಗಳೂರಿನ ಪುನಶ್ಚೇತನ ಶಿಬಿರದಲ್ಲಿ ತೊಡಗಿದ್ದರು.
ಸರ್ರೆ ಕೌಂಟಿ ತಂಡ ಸೇರಿದ ಕಾಶ್ಮೀರದ ವೇಗಿ ಔಕಿಬ್ ನಬಿ
ಮೊಣಕಾಲಿನ ಗಾಯದಿಂದಾಗಿ ಐದು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ರಾಣಾ, ಈ ವರ್ಷದ ಆರಂಭದಲ್ಲಿ ಭಾರತದ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅಂತಾರಾಷ್ಟ್ರೀಯ ತಂಡಕ್ಕೆ ಮರಳಿದರು. ಪ್ರವಾಸದ ಎಲ್ಲಾ ಐದು ಟಿ20 ಪಂದ್ಯಗಳಲ್ಲಿ ಅವರು ಆಡಿದ್ದರು ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಇಂಗ್ಲೆಂಡ್ನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದ ಕಾರಣ ಪ್ರಿನ್ಸ್ ಯಾದವ್ ಅವರನ್ನು ಆಯ್ಕೆ ಮಾಡಲಾಯಿತು.
ಷರತ್ತುಬದ್ಧ ಆಯ್ಕೆಗಳನ್ನು ವಿವರಿಸಿದ ಬಿಸಿಸಿಐ
ಕಳೆದ ತಿಂಗಳು, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಆಯ್ಕೆ ಸಮಿತಿಯು ಸಂಪೂರ್ಣವಾಗಿ ಫಿಟ್ ಆಗಿಲ್ಲದ ಆಟಗಾರರನ್ನು ಏಕೆ ಆಯ್ಕೆ ಮಾಡುತ್ತದೆ ಎಂಬುದನ್ನು ವಿವರಿಸಿದರು.
"ತಂಡ ಹೊರಡುವ ಕನಿಷ್ಠ ಮೂರರಿಂದ ನಾಲ್ಕು ವಾರಗಳ ಮೊದಲು ನಾವು ನಮ್ಮ ಆಯ್ಕೆ ಸಭೆಗಳನ್ನು ನಡೆಸುತ್ತೇವೆ. ಆದ್ದರಿಂದ, ಮೂರು ವಾರಗಳ ಮೊದಲು ಅಥವಾ ನಾಲ್ಕು ವಾರಗಳ ಮೊದಲು, ಆಟಗಾರನ ನಿಖರವಾದ ಸ್ಥಿತಿ ನಮಗೆ ತಿಳಿದಿಲ್ಲ. ಆದ್ದರಿಂದ, ಆ ನಿರ್ದಿಷ್ಟ ಆಟಗಾರನು ಪುನರ್ವಸತಿ ಕಾರ್ಯಕ್ರಮದಡಿಯಲ್ಲಿರುವುದರಿಂದ ಫಿಟ್ನೆಸ್ಗೆ ಒಳಪಟ್ಟ ನಕ್ಷತ್ರ ಚಿಹ್ನೆಯನ್ನು ನೀಡಲಾಗಿದೆ. ಆದ್ದರಿಂದ ಅವನು 21 ದಿನಗಳು ಅಥವಾ 28 ದಿನಗಳ ಅವಧಿಯಲ್ಲಿ ಫಿಟ್ ಆಗಿದ್ದರೆ, ಅವನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ" ಎಂದು ಸೈಕಿಯಾ ಹೇಳಿದರು.
ಭಾರತ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪ ನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್*, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬೂಮ್ರಾ*, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ*. (*ಫಿಟ್ನೆಸ್ ಹೊಂದಿರಬೇಕೆಂಬ ಷರತ್ತು ಹೊಂದಿರುವವರು