ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಾಸ್ತು ಲೋಕ
Vastu Tips: ಅದೃಷ್ಟ ಹೊತ್ತು ತರುತ್ತಾನೆ ನಗುವ ಬುದ್ಧ

ಬುದ್ಧನ ಪ್ರತಿಮೆ ಮನೆಯಲ್ಲಿ ಎಲ್ಲಿ ಇಡಬೇಕು?

ಹೆಚ್ಚಿನವರು ಮನೆ, ಕಚೇರಿಯಲ್ಲಿ ನಗುವ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ. ಇದು ಯಾಕೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ನಗುವ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಳ್ಳುವುದು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇದು ಸರಿಯೇ, ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ, ಯಾವ ರೀತಿಯ ಬುದ್ಧನ ಪ್ರತಿಮೆ ಇಟ್ಟುಕೊಳ್ಳಬೇಕು ? ಈ ಬಗ್ಗೆ ವಾಸ್ತು ಶಾಸ್ತ್ರ (Vastushastra) ಏನು ಹೇಳಿದೆ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Vastu Tips: ಮಹಡಿ ಮೇಲಿನ ಶೌಚಾಲಯದಿಂದ ಎಷ್ಟೆಲ್ಲ ಸಮಸ್ಯೆ ಇದೆ ಗೊತ್ತೇ?

ಮಹಡಿ ಮೇಲೆ ಶೌಚಾಲಯ ನಿರ್ಮಾಣ ಸರಿಯೇ ?

ಮನೆಯ ಶೌಚಾಲಯದಿಂದಲೇ ಹೆಚ್ಚಿನ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಹೀಗಾಗಿ ಮನೆಯ ಶೌಚಾಲಯಕ್ಕೆ ಸಂಬಂಧಿಸಿ ವಾಸ್ತು ನಿಯಮಗಳನ್ನು (vastu Tips) ಪಾಲಿಸುವುದು ಅತ್ಯಗತ್ಯ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದಿದ್ದರೆ ಮನೆಯಲ್ಲಿ ಕೆಟ್ಟ ಪರಿಣಾಮಗಳು ಗೋಚರವಾಗತೊಡಗುತ್ತದೆ. ಇದರಿಂದ ಏನೆಲ್ಲಾ ಸಮಸ್ಯೆಗಳು ಉದ್ಭವಾಗುತ್ತದೆ ಗೊತ್ತೇ? ಈ ಬಗ್ಗೆ ವಾಸ್ತು ತಜ್ಞರು ಹೇಳುವುದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

Vastu Tips: ನೆಮ್ಮದಿಯ ನಿದ್ರೆಗಾಗಿ ಈ ವಸ್ತುಗಳು ದೂರವಿರಲಿ

ಮಲಗುವ ಕೋಣೆಯಲ್ಲಿ ಈ ಐದು ವಸ್ತುಗಳು ಇರಲೇಬಾರದು

ಮನುಷ್ಯ ದಿನವಿಡಿ ಅಲ್ಲಿ ಇಲ್ಲಿ ಎಂದು ಎಷ್ಟೇ ಓಡಾಡಿದರೂ ಸುಖವಾದ ವಿಶ್ರಾಂತಿ ಬೇಕೆಂದಾಗ ಬರುವುದು ಮನೆಗೆ. ಅದರಲ್ಲೂ ತಮ್ಮದೇ ಆದ ಮಲಗುವ ಕೋಣೆಗೆ. ತಾಯಿ ಮಡಿಲಿನಷ್ಟೇ ಸುಖ ಶಾಂತಿ, ನೆಮ್ಮದಿಯನ್ನು ಕೊಡುವ ನಮ್ಮ ಮಲಗುವ ಕೋಣೆಯಲ್ಲಿ ಪ್ರತಿಯೊಬ್ಬರೂ ಅವರವರಿಗೆ ಇಷ್ಟವಾಗುವ ಎಲ್ಲ ವಸ್ತುಗಳನ್ನು ಇಟ್ಟುಕೊಂಡಿರುತ್ತೇವೆ. ತಮ್ಮ ಅಭಿರುಚಿಗೆ ತಕ್ಕಂತೆ ಮಲಗುವ ಕೋಣೆಯನ್ನು ಅಲಂಕರಿಸುತ್ತಾರೆ. ಹೀಗಿರುವಾಗ ಕೆಲವೊಂದು ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಲೇಬಾರದು ಎಂಬುದು ನಿಮಗೆ ಗೊತ್ತಿದೆಯೇ?

Vastu Tips: ಹಣಕಾಸಿನ ತೊಂದರೆಯನ್ನು ದೂರ ಮಾಡುತ್ತದೆ ನವಿಲು

ಹಣಕಾಸಿನ ತೊಂದರೆಯೇ ? ಇಲ್ಲಿದೆ ಪರಿಹಾರ

ಹಣವಿದ್ದರೆ ಮಾತ್ರ ಜೀವನ ಎನ್ನುವಂತ ಕಾಲವಿದು. ಹೀಗಾಗಿಯೇ ಬಹುತೇಕ ಎಲ್ಲರೂ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆಯನ್ನು ಸದಾ ಮಾಡುತ್ತಿರುತ್ತಾರೆ. ಹಣಕಾಸಿನ ತೊಂದರೆಗಳು ಎದುರಾದರೆ ಬದುಕೇ ಬೇಡ ಎನ್ನುವಷ್ಟು ನಿರಾಶರಾಗುತ್ತಾರೆ. ಇದಕ್ಕಾಗಿಯೇ ಹಣ ಮಾಡುವುದು ಹೇಗೆ, ಇರುವ ಹಣವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವ ಮಾರ್ಗದರ್ಶನಗಳನ್ನು ಬಲ್ಲವರಿಂದ ಕೇಳುತ್ತಿರುತ್ತಾರೆ.

Vastu Tips: ಸಹಿಯ ಕೆಳಗೆ ನೀವು ಹಾಕುವ ಗೆರೆ ಸರಿಯಾಗಿದೆಯೇ ?

ಸಹಿಯ ಕೆಳಗಿನ ಗೆರೆ ನಿಮ್ಮ ಭವಿಷ್ಯವನ್ನೇ ಬರೆಯುತ್ತದೆ

ಯಾವುದೇ ಅರ್ಜಿಯಾಗಿರಲಿ, ಪತ್ರವಾಗಿರಲಿ ಕೊನೆಯಲ್ಲೊಂದು ಸಹಿ ಇದ್ದರೆ ಮಾತ್ರ ಅದಕ್ಕೆ ಮಹತ್ವ. ಇಲ್ಲವಾದರೆ ಕಸದ ಬುಟ್ಟಿ ಸೇರುತ್ತದೆ. ಹೀಗಾಗಿ ಶಾಲಾ ದಿನಗಳಲ್ಲೇ ನಾವು ಸಹಿ ಹಾಕುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೇವೆ. ಇದು ಮುಂದೆ ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ. ಕೆಲವೊಂದು ಶುಭ ಕಾರ್ಯದ ಪತ್ರಗಳಿಗೆ ಸಹಿ ಹಾಕುವಾಗ ದಿನ, ಘಳಿಗೆ ನೋಡುತ್ತೇವೆ. ಆದರೆ ಸಹಿ ಹಾಕುವ ವಿಧಾನಕ್ಕೆ ವಾಸ್ತು ನೋಡಿದ್ದೇವೆಯೇ? ಬಹುಶಃ ಯಾರೂ ನೋಡಿರಲಿಕ್ಕಿಲ್ಲ. ಸಹಿ ಹಾಕುವ ವಿಧಾನಕ್ಕೂ ವಾಸ್ತುವಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

Vastu Tips: ಪಕ್ಷಿಗಳಿಗೆ ಆಹಾರ ನೀಡಿ; ಮನೆಗೆ ಸುಖ ಸಮೃದ್ಧಿಯನ್ನು ಆಹ್ವಾನಿಸಿ

ಪಕ್ಷಿಗಳಿಗೆ ಆಹಾರ ನೀಡುವಾಗಲೂ ಪಾಲಿಸಬೇಕಿದೆ ಈ ನಿಯಮ

ಹಸಿದವರಿಗೆ ಅನ್ನ, ನೀರು ನೀಡುವುದು ಪುಣ್ಯದ ಕೆಲಸವೆಂದೇ ಹಿಂದೂ ಸಂಪ್ರದಾಯಗಳು ಹೇಳುತ್ತವೆ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ಆಹಾರ ನೀಡುವ ಸಂಪ್ರದಾಯ ಹಿಂದೂಗಳದ್ದು. ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಕೊಡಲು ಏನಾದರೂ ನಿಯಮಗಳಿವೆಯೇ, ಹೀಗೆ ಮಾಡುವುದರಿಂದ ಏನು ಪ್ರಯೋಜನವಿದೆ? ಈ ಕುರಿತು ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎನ್ನುವ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಅದಕ್ಕೆಲ್ಲ ಉತ್ತರ ಇಲ್ಲಿದೆ.

Vastu Tips: ಬೆಂಕಿಕಡ್ಡಿ ಪೆಟ್ಟಿಗೆ ಎಲ್ಲೆಂದರಲ್ಲಿ ಇಟ್ಟರೆ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆ..!

ದೇವರ ಕೋಣೆಯಲ್ಲಿ ಅಪ್ಪಿತಪ್ಪಿಯೂ ಬೆಂಕಿ ಕಡ್ಡಿ ಪೆಟ್ಟಿಗೆ ಇಡಬೇಡಿ

ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ ಬಹು ಉಪಯೋಗವಾಗುವ ಬೆಂಕಿ ಕಡ್ಡಿ ಪೆಟ್ಟಿಗೆಯನ್ನು ಅಲ್ಲಿ ಇಲ್ಲಿ ಇಡಬಾರದು ಎನ್ನುತ್ತಾರೆ ಮನೆ ಹಿರಿಯರು. ಏನೋ ಬೆಂಕಿಯ ಭಯ ಇರಬಹುದು ಎಂದು ಎಲ್ಲರೂ ಅಂದುಕೊಂಡಿರಬಹುದು. ಆದರೆ ಇದು ವಾಸ್ತು ದೋಷಕ್ಕೂ ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹೌದು ಮನೆಯಲ್ಲಿ ಬೆಂಕಿ ಕಡ್ಡಿ ಪೆಟ್ಟಿಗೆಯನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಅದರಲ್ಲೂ ಮುಖ್ಯವಾಗಿ ದೇವರ ಪೂಜಾ ಕೋಣೆಯಲ್ಲಿ ಅದನ್ನು ಇರಿಸಲೇಬಾರದು.

Vastu Tips: ಕಚೇರಿ ಮೇಜಿನಲ್ಲಿ ಲಕ್ಷ್ಮೀ ಪಾದುಕೆ ಇರಿಸಿ; ಕಷ್ಟಗಳನ್ನೂ ದೂರವಿರಿಸಿ

ಕಚೇರಿ ಮೇಜಿನಲ್ಲಿ ಲಕ್ಷ್ಮೀ ಪಾದುಕೆ ಇರಿಸಬಹುದೇ?

ಸಾಮಾನ್ಯವಾಗಿ ದೇವರ ಮೇಲೆ ಹೆಚ್ಚಿನ ಭಕ್ತಿ ಶ್ರದ್ದೆ ಇರುವವರು ತಮ್ಮ ಕಚೇರಿಗಳಲ್ಲೂ ತಾವು ಬಳಕೆ ಮಾಡುವ ಮೇಜಿನ ಮೇಲೆ ದೇವರ ಫೋಟೋ, ಮೂರ್ತಿ ಅಥವಾ ಪಾದುಕೆಗಳ ಚಿತ್ರಗಳನ್ನು ಇರಿಸುತ್ತಾರೆ. ಇದರಿಂದ ಕೆಲಸದಲ್ಲಿ ಪ್ರಗತಿಯಾಗುತ್ತದೆ ಎಂಬುದು ಅವರವರ ವಿಶ್ವಾಸ. ಆದರೆ ಇದನ್ನು ಸುಮ್ಮನೆ ಇಡಬಹುದೇ?, ಇದರಿಂದ ನಮ್ಮ ಜೀವನದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆಯೇ? ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿ ಇದ್ದೇ ಇರುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಉತ್ತರವಿದೆ.

VastuTips: ನವವಿವಾಹಿತರ ಕೋಣೆ ಅಲಂಕಾರ; ಗಮನದಲ್ಲಿರಲಿ ಈ ವಿಚಾರ

ನವವಿವಾಹಿತರ ಕೋಣೆ ಅಲಂಕಾರದಲ್ಲೂ ಪಾಲಿಸಿ ವಾಸ್ತು ನಿಯಮ

ಏಪ್ರಿಲ್, ಮೇ ಎಂದರೆ ಮದುವೆಯ ಸೀಸನ್. ಹೀಗಾಗಿ ಈ ಸಂದರ್ಭದಲ್ಲಿ ನವವಿವಾಹಿತರು ಮಲಗುವ ಕೋಣೆಯ ಅಲಂಕಾರ ಮಹತ್ವದ ವಿಷಯವೇ ಆಗಿರುತ್ತದೆ. ನವ ದಂಪತಿಯ ಇಷ್ಟಕ್ಕೆ ಅನುಗುಣವಾಗಿ ಸುಂದರವಾಗಿ ಅಲಂಕಾರ ಮಾಡಿದರಾಯ್ತು ಎಂದು ಯೋಚಿಸುವುದು ತಪ್ಪಲ್ಲ. ಆದರೆ ಇಲ್ಲಿ ವಾಸ್ತು ವಿಚಾರವಾಗಿಯೂ ಕೆಲವೊಂದು ಅಂಶಗಳನ್ನು ಗಮನಿಸಬೇಕಿದೆ. ಅದೇನು ಎನ್ನುವ ವಿವರ ಇಲ್ಲಿದೆ.

Vastu Tips: ಮನೆಯಲ್ಲಿ ನೀವು ಹಣವಿಡುವ ಜಾಗ ಸರಿಯಾಗಿದೆಯೇ?

ಅಪ್ಪಿತಪ್ಪಿಯೂ ಇಲ್ಲಿ ಹಣವನ್ನು ಇಡಬೇಡಿ

ಚಿನ್ನ, ಬೆಳ್ಳಿ, ಹಣ, ಆಸ್ತಿ ಪತ್ರಗಳು ಸಾಮಾನ್ಯವಾಗಿ ನಾವು ಮನೆಯಲ್ಲಿ ಭದ್ರವಾಗಿಡಲು ಬಯಸುವ ವಸ್ತುಗಳು. ಇವುಗಳನ್ನು ಎಲ್ಲೆಲ್ಲಿ ಇಟ್ಟರೆ ಕಳ್ಳರ ಪಾಲಾಗುವ ಆತಂಕ ಇರುತ್ತದೆ. ಆದರೆ ಇದೊಂದೇ ಮಾತ್ರವಲ್ಲ ವಾಸ್ತುದೋಷಕ್ಕೂ ಇದು ಕಾರಣವಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಗದು, ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು ಎನ್ನುತ್ತಾರೆ ವಾಸ್ತು (Vastu Tips) ತಜ್ಞರು. ಒಂದು ವೇಳೆ ಹೀಗೆ ಇಟ್ಟರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಮನೆಯ ಆರ್ಥಿಕ ಸಮೃದ್ಧಿಯ ಮೇಲೆ ದುಷ್ಟ ಪ್ರಭಾವ ಬೀರುವ ಸಾಧ್ಯತೆಯೂ ಇದೆ.

Vastu Tips: ಮನೆಗೆ ಹೆಸರಿಡುವಾಗಲೂ ಪಾಲಿಸಬೇಕು ವಾಸ್ತು ನಿಯಮ

ಮನೆಯವರ ಹೆಸರನ್ನು ಮನೆಗೆ ಇಡಲೇಬಾರದು ಯಾಕೆ ಗೊತ್ತೇ?

ಸುಂದರವಾದ ಮನೆ ಕಟ್ಟುವುದು ಅದಕ್ಕೊಂದು ಒಳ್ಳೆಯ ಹೆಸರು (Name board) ಇಡುವ ಕನಸು ಎಲ್ಲರಿಗೂ ಇರುತ್ತದೆ. ಮನೆ ಕಟ್ಟಿ ಆಯಿತು, ಹೆಸರು ಸೆಲೆಕ್ಟ್ ಆಯಿತು. ಅದನ್ನು ಬೋರ್ಡ್ ಮೇಲೆ ಬರೆಸಿ ತಂದು ಮನೆಯ ಗೇಟ್ ನಲ್ಲೋ ಅಥವಾ ಬಾಗಿಲ ಬಳಿಯೋ ಇಡುವ ಯೋಚನೆ ಮಾಡುತ್ತಿದ್ದೀರಾ ಹಾಗಿದ್ದರೆ ಸ್ವಲ್ಪ ನಿಲ್ಲಿ. ಈ ಬಗ್ಗೆ ವಾಸ್ತು (Vastu tips) ಏನು ಹೇಳುತ್ತದೆ ಕೇಳಿ.

Vastu Tips: ಬಾಗಿಲ ಹಿಂದೆ ಬಟ್ಟೆ ತೂಗು ಹಾಕುವುದು ಒಳ್ಳೆಯದೇ ?

ಮನೆಯ ವಾಸ್ತು ದೋಷಕ್ಕೆ ಕಾರಣವಾಗುವ ಈ ಒಂದು ತಪ್ಪು ಮಾಡದಿರಿ

Vastu Shastra: ಮನೆಯಲ್ಲಿ ಕೆಲವೊಮ್ಮೆ ನಾವು ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸುತ್ತೇವೆ. ಇಂತಹ ಸಣ್ಣ ವಿಷಯಗಳಲ್ಲಿ ಏನಿದೆ ಎಂದುಕೊಳ್ಳುತ್ತೇವೆ. ಆದರೆ ಈ ಸಣ್ಣಪುಟ್ಟ ಸಂಗತಿಗಳೇ ಕೆಲವೊಮ್ಮೆ ಮನೆಯಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹೀಗಾಗಿ ಮನೆಯಲ್ಲಿ ಯಾವುದೇ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

Vastu Tips: ನಕಾರಾತ್ಮಕತೆಯನ್ನು ಆಹ್ವಾನಿಸದಿರಿ; ಉಡುಗೊರೆ ಕೊಡುವ ಮುನ್ನ ಯೋಚಿಸಿ

ಉಡುಗೊರೆಯಾಗಿ ನೀಡಲೇಬಾರದು ವಸ್ತುಗಳು ಯಾವುದು ಗೊತ್ತೇ?

ಮದುವೆ, ಸೀಮಂತ, ಹುಟ್ಟಿದ ಹಬ್ಬ.. ಹೀಗೆ ಯಾವುದೇ ಶುಭಕಾರ್ಯಗಳಿರಲಿ ಉಡುಗೊರೆಗಳನ್ನು ಪ್ರೀತಿಪಾತ್ರರಿಗೆ ಕೊಡುವುದು ವಾಡಿಕೆ. ಕೆಲವರಿಗೆ ಏನು ಉಡುಗೊರೆ ಕೊಡುವುದು ಎನ್ನುವ ಅತಿಯಾದ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಏನಾದರೂ ಕೊಟ್ಟರೆ ಸರಿ ಎನ್ನುವ ನಿರ್ಲಕ್ಷ್ಯದ ಧೋರಣೆಯೂ ಇರುತ್ತದೆ. ನಾವು ಕೊಡುವ ಉಡುಗೊರೆಯನ್ನು ತೆಗೆದುಕೊಳ್ಳುವವರಿಗೆ ಎಂದೂ ಕೆಟ್ಟದು ಆಗಬಾರದು ಎಂದಾದರೆ ಅದಕ್ಕಾಗಿ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸುವುದು ಮುಖ್ಯ ಎನ್ನುತ್ತದೆ ವಾಸ್ತು ನಿಯಮಗಳು.

Vastu Tips: ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ಮನೆ ಬಾಗಿಲಿನಲ್ಲೇ ತಡೆಯಿರಿ

ಉಪ್ಪಿಗೆ ಇರುವ ಬಹುದೊಡ್ಡ ಶಕ್ತಿ ಯಾವುದು ಗೊತ್ತೆ?

Vastu Tips: ನಿರಂತರ ಏನಾದರೊಂದು ಸಮಸ್ಯೆ ಬರುತ್ತಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದುಕೊಳ್ಳಬಹುದು. ಈ ನಕಾರಾತ್ಮಕ ಶಕ್ತಿಯನ್ನು ತಡೆಯಲು ಯಾವುದೋ ಪಂಡಿತರ ಬಳಿ ಹೋಗಬೇಕಿಲ್ಲ. ಅದಕ್ಕೆ ಪರಿಹಾರ ನಮ್ಮ ಅಡುಗೆ ಮನೆಯಲ್ಲೇ ಇದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಿ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಬಹುದು. ಆ ವಸ್ತು ಯಾವುದು, ಅದರಿಂದ ಏನು ಮಾಡಬಹುದು.. ಎಂಬುದನ್ನು ತಿಳಿದುಕೊಳ್ಳೋಣ.

Vastu Tips: ಹಳೆಯ ಪೀಠೋಪಕರಣದಿಂದ ಬರಬಹುದು  ಸಂಕಷ್ಟ

ಹಳೆಯ ಪೀಠೋಪಕರಣ ಮನೆಗೆ ಶುಭವಲ್ಲ

ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವು ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಬೇರೆಯವರು ಈ ಹಿಂದೆ ಬಳಸಿರುವ ಯಾವುದೇ ವಸ್ತುವನ್ನು ಮನೆಯಲ್ಲಿ ಇಡಬಾರದು ಎನ್ನಲಾಗುತ್ತದೆ. ಮುಖ್ಯವಾಗಿ ಹಳೆಯ ಪೀಠೋಪಕರಣಗಳು. ಇದನ್ನು ಬಳಸಿದರೆ ಅದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತದೆ.

Vastu Tips: ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು?

ಈ ದೇವರುಗಳ ವಿಗ್ರಹ ಕಾರಿನಲ್ಲಿದ್ದರೆ ಎದುರಾಗುವುದಿಲ್ಲ ಅಪಾಯ

Vastu Tips: ಮನೆ, ಅಂಗಡಿ, ಜಾಗ ಖರೀದಿ ಮಾತ್ರವಲ್ಲ ಹೊಸ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಯಾವ ದೇವರ ವಿಗ್ರಹವನ್ನು ಇಡಬೇಕು ಎಂಬುದನ್ನೂ ವಾಸ್ತುಶಾಸ್ತ್ರ ಹೇಳುತ್ತದೆ. ಅಲ್ಲದೇ ಹೊಸ ಕಾರಿನಲ್ಲಿ ದೇವರ ವಿಗ್ರಹವನ್ನು ಸ್ಥಾಪಿಸುವಾಗ ವಾಸ್ತುವಿನ ಕುರಿತು ಸರಿಯಾದ ಜ್ಞಾನ ಹೊಂದಿರಬೇಕು ಎನ್ನುತ್ತದೆ ವಾಸ್ತು ನಿಯಮ.

Vastu Tips: ವಾಸ್ತು ಪ್ರಕಾರ ಮನೆ ಮುಂದೆ ಗುಲಾಬಿ ಗಿಡಗಳನ್ನು ನೆಡಬಹುದಾ...?

ಮನೆಯ ಈ ದಿಕ್ಕಿಗೆ ಗುಲಾಬಿ ಗಿಡ ನೆಡಿ

Vastu Tips: ಮನೆಯಲ್ಲಿ ಗುಲಾಬಿ ಹೂವಿನ ಗಿಡ ನೆಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಗುಲಾಬಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮತ್ತು ಪೂಜಿಸಿದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸಾಲ ತೀರಿಸಲು ಸಹ ಇದು ಸಹಾಯಕವಾಗುತ್ತದೆ

Vastu Tips: ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ...?

ದೇವರ ಮನೆ ವಾಸ್ತು ಹೀಗೆ ಇರಲಿ...!

Vastu Tips: ದೇವರ ಕೋಣೆಯನ್ನು ಎಷ್ಟು ಉತ್ತಮ ರೀತಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ದೇವರ ಕೋಣೆ ನಿರ್ಮಿಸುವಾಗ ಶಾಸ್ತ್ರದಲ್ಲಿನ ನಿಯಮಗಳನ್ನು ಅನುಸರಿಸಬೇಕು. ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ.? ದೇವರ ಕೋಣೆಯನ್ನು ಹೀಗೆ ನಿರ್ಮಿಸಿ..

Astro Tips: ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಮಲಗುವ ಮುನ್ನ ಈ ಮಂತ್ರಗಳನ್ನು ಪಠಿಸಿ

ಉತ್ತಮ ನಿದ್ರೆಗಾಗಿ ಈ ಮಂತ್ರ ಪಠಿಸಿ

ದಿನಪೂರ್ತಿ ದುಡಿದು ಒಮ್ಮೆ ತಲೆಯನ್ನು ದಿಂಬಿನ ಮೇಲಿಟ್ಟು ನೆಮ್ಮದಿಯಾಗಿ ನಿದ್ರೆ  ಮಾಡಿದ್ದರೆ ಸಾಕು ಎನಿಸಿ ಬಿಡುತ್ತದೆ. ಬೆಳಗ್ಗೆಯಿಂದ ದಣಿದಿರುವ ದೇಹಕ್ಕೆ ವಿಶ್ರಾಂತಿ ಸಿಗುವುದೇ ಒಂದು ಗಾಢವಾದ ನಿದ್ರೆಯಿಂದ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದ್ರೂ, ಓಡಾಡಿದ್ರೂ ನಿದ್ರೆ ಕಣ್ಣಿಗೆ ಹತ್ತಲ್ಲ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ಪರಿಹಾರ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಗಣೇಶ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ಗಣೇಶ ವಿಗ್ರಹಕ್ಕೆ ಸಂಬಂಧಿಸಿರುವ ವಾಸ್ತು ನಿಯಮಗಳೇನು?

Vastu Tips : ಗಣೇಶ ಎಲ್ಲ ವಿಘ್ನಗಳನ್ನು ಕಳೆದು ಶುಭಫಲ ನೀಡುವಾತ. ನಾವು ಮನೆಯಲ್ಲಿ ಪೂಜಿಸೋ ಗಣೇಶನ ವಿಗ್ರಹ ಅಥವಾ ಫೋಟೋಗಳಿಗೂ ವಾಸ್ತು ನಿಯಮಗಳಿದ್ದು, ಅವುಗಳನ್ನು ಅರಿತು ಅನುಸರಿಸಿದ್ರೆ ಶುಭಫಲಗಳು ಸಿದ್ಧಿಸೋದು ಖಚಿತ ಎನ್ನುತ್ತಾರೆ ವಾಸ್ತು ತಜ್ಞರು.

Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ಮಾಹಿತಿ

ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ ...?

Vastu tips: ನಿಮ್ಮ ಮನೆಯ ಗೋಡೆಯ ಮೇಲೆ ಗಡಿಯಾರವನ್ನು ಹಾಕುವ ಮೊದಲು ಅದರ ಸರಿಯಾದ ದಿಕ್ಕು ತಿಳಿದುಕೊಳ್ಳಬೇಕು. ಸರಿಯಾದ ದಿಕ್ಕಿನಲ್ಲಿ ಹಾಕದಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿದೆ. ಹಾಗಾದ್ರೆ ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಯಾವ ದಿಕ್ಕನ್ನು ಆಯ್ಕೆ ಮಾಡಬೇಕು? ಇಲ್ಲಿದೆ ನೋಡಿ ಮಾಹಿತಿ.

Astro Tips: ಶುಕ್ರವಾರ ತಪ್ಪದೇ ಈ ಕೆಲಸಗಳನ್ನು ಮಾಡಿ, ಲಕ್ಷ್ಮಿ ಒಲಿಯುತ್ತಾಳೆ..!

ಶುಕ್ರವಾರ ಹೀಗೆ ಮಾಡಿದ್ರೆ ನಿಮ್ಮ ಹಣದ ಸಮಸ್ಯೆ ಪರಿಹಾರ ಆಗುತ್ತೆ.!

Astro Tips: ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಶುಕ್ರ ಮತ್ತು ಲಕ್ಷ್ಮೀ ಇಬ್ಬರೂ ಸಂಪತ್ತನ್ನು ಕರುಣಿಸುವವರು. ಈ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ತಾಯಿಯು ಸಂತೋಷಗೊಂಡರೆ, ಅವಳು ತನ್ನ ಸ್ಥಳೀಯರಿಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಹಾಗಾದ್ರೆ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಯಾವ ಕೆಲಸ ಮಾಡಬೇಕು...? ಎಂಬ ಮಾಹಿತಿ ಇಲ್ಲಿದೆ.

Vaastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಗೊತ್ತಾ? ಇದರ ಬಗ್ಗೆ ಇರಲಿ ಗಮನ

ವಾಸ್ತುಶಾಸ್ತ್ರದ ಪ್ರಕಾರ ಹನುಮನ ಫೋಟೋವನ್ನು ಯಾವ ದಿಕ್ಕಿಗೆ ಹಾಕಬೇಕು?

Vastu Shastra; ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಅಡುಗೆ ಮನೆಯನ್ನು ಬಹಳ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದ್ದು, ಪ್ರತಿಯೊಂದೂ ದಿಕ್ಕು ತನ್ನದೇ ಆದ ಮಹತ್ವವನ್ನು ಹೊಂದಿದೆ, ಆದ್ದರಿಂದ ನಾವಿಂದು ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಅನೋದನ್ನು ಹೇಳುತ್ತಿದ್ದೇವೆ.

Astro Tips:  ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ  ಮಂಗಳವಾರ ತಪ್ಪದೇ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ

ಹನುಮಂತನಿಗೆ ಇದನ್ನು ಅರ್ಪಿಸಿದರೆ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ

Astro Tips: ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡರೆ ನಿಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗುತ್ತವೆ. ಮಂಗಳವಾರ ಕೆಲ ವಸ್ತುಗಳನ್ನು ಹನುಮಂತನಿಗೆ ಅರ್ಪಿಸಿದ್ರೆ ನಿಮ್ಮ ಜೀವನದಲ್ಲಿನ ತೊಂದರೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ