ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಾಸ್ತು ಲೋಕ

ದೇವರ ಕೋಣೆಯ ವಸ್ತುಗಳನ್ನು ಹೇಗೆ ಇಡಬೇಕು? ಈ ಬಗ್ಗೆ ವಾಸ್ತು ಶಾಸ್ತ್ರ ನೀಡೋ ಸಲಹೆ ಏನು?

ದೇವರ ಕೋಣೆಯಲ್ಲಿ ಏನು ಇಡಬೇಕು, ಏನು ಬೇಡ?

Vastu Tips: ಮನೆಯ ದೇವರ ಕೋಣೆ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಇಲ್ಲಿ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ನಿಯಮಬದ್ಧವಾಗಿ ಇಡುವುದು ಮುಖ್ಯ. ದೀಪವನ್ನು ವಿಗ್ರಹದ ಮುಂಭಾಗದಲ್ಲಿ ಇಡುವುದು, ಪೂಜಾ ಸಾಮಗ್ರಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಜೋಡಿಸುವುದು, ಮೃತರ ಛಾಯಾಚಿತ್ರಗಳನ್ನು ದೂರವಿಡುವುದು ಹಾಗೂ ನೈವೇದ್ಯವನ್ನು ಗೌರವದಿಂದ ಅರ್ಪಿಸುವುದು ವಾಸ್ತು ಮತ್ತು ಪರಂಪರೆಯ ಪ್ರಕಾರ ಒಳಿತು.

Vastu Tips: ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವಾಗ ಈ ನಿಯಮ ಪಾಲಿಸಿ; ಇಲ್ಲವಾದರೆ ಅಶುಭ ಫಲವೇ ಹೆಚ್ಚು

ಸ್ವಸ್ತಿಕ ಹಾಕುವ ಮುನ್ನ ಈ ವಿಚಾರಗಳನ್ನು ತಿಳಿದುಕೊಳ್ಳಿ

ಹಿಂದೂ ಸಂಪ್ರದಾಯದಲ್ಲಿ ಸ್ವಸ್ತಿಕ ಚಿಹ್ನೆಗೆ ವಿಶೇಷ ಮಹತ್ವವಿದೆ. ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವುದು ಶುಭಕರವೆಂದು ನಂಬಲಾಗುತ್ತದೆ. ಆದರೆ ಅದನ್ನು ಸಿಂಧೂರದಿಂದ, ಸ್ವಚ್ಛವಾದ ಬಾಗಿಲಿನ ಮೇಲೆ ಮತ್ತು ಸರಿಯಾದ ಗಾತ್ರದಲ್ಲಿ ಹಾಕಬೇಕು. ಸ್ವಸ್ತಿಕದ ಸುತ್ತ ಚಪ್ಪಲಿ ಇಡುವುದನ್ನು ತಪ್ಪಿಸಬೇಕು. ವಾಸ್ತು ಪ್ರಕಾರ ಸರಿಯಾದ ರೀತಿಯಲ್ಲಿ ಹಾಕಿದ ಸ್ವಸ್ತಿಕ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ತರಲಿದೆ ಎಂಬ ನಂಬಿಕೆ ಇದೆ.

Vastu Tips: ನಿದ್ರಾಹೀನತೆ ಹೆಚ್ಚಳಕ್ಕೆ ಮಲಗುವ ಕೋಣೆಯೇ ಕಾರಣವೇ? ವಾಸ್ತುಶಾಸ್ತ್ರ ಈ  ಬಗ್ಗೆ ಹೇಳೋದೇನು!

ವಾಸ್ತು ದೋಷವೇ ನಿದ್ರಾಹೀನತೆಗೆ ಕಾರಣ

ಇತ್ತೀಚಿನ ಜೀವನಶೈಲಿ ಬದಲಾವಣೆಗಳಿಂದ ನಿದ್ರಾಹೀನತೆ ಸಮಸ್ಯೆ ಹೆಚ್ಚುತ್ತಿದೆ. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಅನಗತ್ಯ ವಸ್ತುಗಳು, ಹಾಸಿಗೆಯ ಕೆಳಗಿನ ಅಸ್ತವ್ಯಸ್ತತೆ, ಫ್ರಿಡ್ಜ್‌–ಇನ್ವರ್ಟರ್‌ ಮುಂತಾದ ಸಾಧನಗಳು ಹಾಗೂ ಮುಳ್ಳಿನ ಸಸ್ಯಗಳು ನಿದ್ರೆಗೆ ಅಡ್ಡಿಯಾಗಬಹುದು. ಸರಿಯಾದ ವಿನ್ಯಾಸ ಮತ್ತು ಸ್ವಚ್ಛತೆ ಉತ್ತಮ ನಿದ್ರೆಗೆ ಸಹಕಾರಿ ಎಂದು ತಜ್ಞರು ಸೂಚಿಸಿದ್ದಾರೆ.

Vastu Tips: ದೇವರ ಕೋಣೆಯಲ್ಲಿ ಪೂಜಾ ತಟ್ಟೆ ಹೀಗೆ ಇಡಿ; ವಾಸ್ತು ಸೂಚಿಸುವ ನಿಯಮಗಳು ಇವು

ಪೂಜಾ ತಟ್ಟೆ ಇಡಲು ಸೂಕ್ತ ದಿಕ್ಕು ಯಾವುದು?

ಮನೆಯಲ್ಲಿ ಪೂಜೆ ಮಾಡುವಾಗ ಪೂಜಾ ತಟ್ಟೆ ಇಡುವ ದಿಕ್ಕಿಗೂ ವಾಸ್ತು ಪ್ರಕಾರ ವಿಶೇಷ ಮಹತ್ವವಿದೆ. ತಜ್ಞರ ಪ್ರಕಾರ, ಪೂಜೆಯಲ್ಲಿ ಬಳಸುವ ತಟ್ಟೆ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯದ್ದಾಗಿರಬೇಕು. ಪೂಜಾ ತಟ್ಟೆಯನ್ನು ಸಾಮಾನ್ಯವಾಗಿ ಉತ್ತರ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ನಂಬಲಾಗುತ್ತದೆ.

Vastu Tips: ಲಕ್ಷ್ಮೀ ದೇವಿಯ ವಾಹನ ಗೂಬೆ: ಮನೆಯಲ್ಲಿ ವಿಗ್ರಹ ಇಟ್ಟರೆ ಶುಭವೇ? ವಾಸ್ತು ಹೇಳುವುದು ಏನು?

ಮನೆಯಲ್ಲಿ ಗೂಬೆ ವಿಗ್ರಹ ಇಟ್ಟರೆ ಶುಭವೇ?

ಲಕ್ಷ್ಮಿ ದೇವಿ ಅವರ ವಾಹನವೆಂದು ಪರಿಗಣಿಸಲ್ಪಡುವ ಗೂಬೆಯ ವಿಗ್ರಹವನ್ನು ವಾಸ್ತು ಪ್ರಕಾರ ಮನೆಯಲ್ಲಿ ಇಟ್ಟರೆ ವಾಸ್ತು ದೋಷ ನಿವಾರಣೆ, ಧನಾತ್ಮಕ ಶಕ್ತಿ ವೃದ್ಧಿ ಹಾಗೂ ಆರ್ಥಿಕ ಸ್ಥಿರತೆ ಲಭಿಸುತ್ತದೆ ಎಂಬ ನಂಬಿಕೆ ಇದೆ. ವಾಯುವ್ಯ ದಿಕ್ಕಿನಲ್ಲಿ, ಮುಖ್ಯ ಬಾಗಿಲಿನತ್ತ ಮುಖವಾಗುವಂತೆ ಪ್ರತಿಮೆ ಇರಿಸುವುದು ಶುಭಕರವೆಂದು ಹೇಳಲಾಗುತ್ತದೆ. ಆದರೆ ಇವು ಧಾರ್ಮಿಕ ಮತ್ತು ವಾಸ್ತು ನಂಬಿಕೆಗಳ ಆಧಾರಿತ ಮಾಹಿತಿಗಳಾಗಿವೆ.

Vastu Tips: ತಪ್ಪಿಯೂ ಅಡುಗೆಮನೆಯಲ್ಲಿ ಇಂತಹ ಕೆಲಸ ಮಾಡಬೇಡಿ; ಆರೋಗ್ಯಕ್ಕೆ ಕುತ್ತು ಬರಬಹುದು

ಅಡುಗೆಮನೆಯಲ್ಲಿ ಮಾಡುವ ಈ ತಪ್ಪುಗಳು ಆರೋಗ್ಯಕ್ಕೆ ಹಾನಿಕರ

ಅಡುಗೆಮನೆ ಮನೆಯ ಹೃದಯಭಾಗ. ವಾಸ್ತುಶಾಸ್ತ್ರದ ಪ್ರಕಾರ ದಿಕ್ಕು, ಸ್ವಚ್ಛತೆ, ಗ್ಯಾಸ್-ನೀರಿನ ವ್ಯವಸ್ಥೆ, ಆಹಾರದ ಗೌರವ ಹಾಗೂ ಹಾಲು ಮುಚ್ಚಿಡುವಂತಹ ಸಣ್ಣ ಜಾಗ್ರತೆಗಳು ಮನೆಯ ಆರೋಗ್ಯ, ಶಾಂತಿ ಮತ್ತು ಆರ್ಥಿಕ ಸ್ಥಿರತಿಗೆ ಸಹಕಾರಿ ಎಂದು ನಂಬಲಾಗಿದೆ.

Vastu Tips: ಸುಖ ದಾಂಪತ್ಯಕ್ಕೆ ನಾಂದಿ ಹಾಡಲಿದೆ ರಾಧಾ–ಕೃಷ್ಣರ ಚಿತ್ರ; ಆದರೆ ವಾಸ್ತು ನಿಯಮ ಪಾಲಿಸಿದ್ರೆ ಮಾತ್ರ

ಮನೆಯ ಈ ಜಾಗದಲ್ಲಿ ರಾಧಾ–ಕೃಷ್ಣರ ಫೋಟೊ ಅಳವಡಿಸಿ

ವಾಸ್ತು ನಂಬಿಕೆಗಳ ಪ್ರಕಾರ ರಾಧಾ–ಕೃಷ್ಣರ ಚಿತ್ರವನ್ನು ಮನೆಯಲ್ಲಿ, ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇಡುವುದರಿಂದ ಪತಿ–ಪತ್ನಿಯರ ನಡುವೆ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮನೆಯ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಈ ಚಿತ್ರವನ್ನು ಹಾಕಬಾರದು ಎಂದು ಸಲಹೆ ನೀಡಲಾಗುತ್ತದೆ. ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಇದೆ.

Vastu Tips: ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕಾ..?; ಹಾಗಾದ್ರೆ ಈ ವಾಸ್ತು ನಿಯಮ ಪಾಲಿಸಿ

ಧನ–ಸಮೃದ್ಧಿಗೆ ಮುಖ್ಯ ದ್ವಾರ ವಾಸ್ತು ಟಿಪ್ಸ್

ಮನೆಯಲ್ಲಿ ಧನ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಲು ಮುಖ್ಯ ದ್ವಾರದ ವಾಸ್ತು ಅತ್ಯಂತ ಮಹತ್ವದ್ದು ಎಂದು ನಂಬಲಾಗಿದೆ. ಮುಖ್ಯ ಬಾಗಿಲಿನ ಮೇಲೆ ಗಣೇಶನ ಚಿತ್ರ ಇಡುವುದು, ಎಡಬದಿಯಲ್ಲಿ ಶಮಿ ಗಿಡ ನೆಡುವುದು, ಕೆಂಪು ಸಿಂಧೂರದಿಂದ ಸ್ವಸ್ತಿಕ ಚಿಹ್ನೆ ಹಾಕುವುದು ಹಾಗೂ ತಾಮ್ರದ ಸೂರ್ಯ ದೇವರ ಪ್ರತಿಮೆ ಅಳವಡಿಸುವುದು ಶುಭಕರ ಕ್ರಮಗಳೆಂದು ಹೇಳಲಾಗುತ್ತದೆ

Vastu Tips: ಮನೆಯ ಸಮೃದ್ಧಿಗೆ ಬೆಸ್ಟ್ ಈ ದಿಕ್ಕು; ಆದ್ರೆ ಅಲ್ಲಿ ಮಲಗುವ ಕೋಣೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ

ತಪ್ಪಿಯೂ ಈ ದಿಕ್ಕಿನಲ್ಲಿ ಮಲಗುವ ಕೋಣೆ ನಿರ್ಮಿಸಬೇಡಿ

ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕಿಗೆ ಅತ್ಯಂತ ಪವಿತ್ರ ಹಾಗೂ ಪ್ರಮುಖ ಸ್ಥಾನವಿದೆ. ಇದನ್ನು ಶಿವನ ದಿಕ್ಕು ಮತ್ತು ದೈವಿಕ ಶಕ್ತಿಯ ನೆಲೆ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಪೂಜಾ ಕೋಣೆ, ನೀರಿನ ಮೂಲ ಅಥವಾ ಅತಿಥಿ ಕೋಣೆ ಇರಿಸುವುದು ಶುಭಕರ ಎಂದು ಹೇಳಲಾಗುತ್ತದೆ. ಆದರೆ ಮಲಗುವ ಕೋಣೆ ಈ ಭಾಗದಲ್ಲಿ ಇರಿಸುವುದು ಅನುಕೂಲಕರವಲ್ಲ.

Vastu Tips: ಸಾಲದ ತಲೆನೋವು ಕಾಡುತ್ತಿದೆಯೇ? ಮನೆಯ ಈ ದಿಕ್ಕಿನಲ್ಲಿ ಈ ವಸ್ತು ಇಟ್ಟರೆ ಆರ್ಥಿಕ ಸಮಸ್ಯೆ  ದೂರ!

ಸಾಲದ ಸಮಸ್ಯೆ ದೂರವಾಗಲು ಮನೆಯ ಈ ದಿಕ್ಕಿನಲ್ಲಿ ಈ ವಸ್ತು ಇಡಿ!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಕೆಲವು ಪವಿತ್ರ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗಿ, ಆರ್ಥಿಕ ಸಮಸ್ಯೆಗಳು ಮತ್ತು ಸಾಲದ ಬಾಧೆ ಕಡಿಮೆಯಾಗಬಹುದು ಎಂದು ನಂಬಲಾಗುತ್ತದೆ. ತುಳಸಿ ಗಿಡ, ನೀರಿನಿಂದ ತುಂಬಿದ ಕಲಶ, ಶಂಖ, ಸ್ವಸ್ತಿಕ ಚಿಹ್ನೆ ಹಾಗೂ ಹಿತ್ತಾಳೆ ಅಥವಾ ತಾಮ್ರದ ಗಂಟೆಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಸಮೃದ್ಧಿ ಮತ್ತು ಲಕ್ಷ್ಮೀ ದೇವಿಯ ಕೃಪೆಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ.

Vastu Tips: ನಿಮ್ಮ ಮನೆಯ ವಾಶ್ ರೂಮ್‌ನಲ್ಲಿರುವ ಈ ಬಣ್ಣದ ಬಕೆಟ್ ವಾಸ್ತುದೋಷಕ್ಕೆ ಕಾರಣವಾಗಬಹುದು ಎಚ್ಚರ

ವಾಸ್ತು ಶಾಸ್ತ್ರದ ಪ್ರಕಾರ ವಾಶ್ ರೂಮ್‌ನಲ್ಲಿ ಈ ಬಣ್ಣದ ಬಕೆಟ್ ಇರಲಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಸ್ನಾನಗೃಹದ ದಿಕ್ಕು ಹಾಗೂ ಅಲ್ಲಿ ಬಳಸುವ ವಸ್ತುಗಳ ಬಣ್ಣವು ಮನೆಯ ಸಕಾರಾತ್ಮಕ-ನಕಾರಾತ್ಮಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಸ್ನಾನಗೃಹದಲ್ಲಿ ಗಾಢ ಬಣ್ಣದ, ವಿಶೇಷವಾಗಿ ಕೆಂಪು ಮತ್ತು ಕಪ್ಪು ಬಣ್ಣದ ಬಕೆಟ್ ಬಳಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

Vastu Tips: ಮನೆ ಗುಡಿಸುವುದಕ್ಕೆ ಮಾತ್ರವಲ್ಲ ಒರೆಸುವುದಕ್ಕೂ ಇದೆ ವಾಸ್ತು ನಿಯಮ! ಈ ಸಮಯದಲ್ಲಿ ನೆಲ ಒರೆಸಿದ್ರೆ ಅಪಾಯ ತಪ್ಪಿದ್ದಲ್ಲ

ಮನೆ ಒರೆಸುವಾಗಲೂ ಈ ವಾಸ್ತು ನಿಯಮ ಪಾಲಿಸಿ!

ಮನೆ ಕೇವಲ ವಾಸಿಸುವ ಸ್ಥಳವಲ್ಲ; ಅದು ಲಕ್ಷ್ಮೀದೇವಿಯ ವಾಸಸ್ಥಾನವಾಗಿರುವ ಪವಿತ್ರ ಸ್ಥಳವಾಗಿದೆ. ಆದ್ದರಿಂದ ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ, ಅದರಿಂದ ಆರೋಗ್ಯ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳು ಮತ್ತು ದುರದೃಷ್ಟವೂ ಎದುರಾಗಬಹುದು ಎನ್ನಲಾಗುತ್ತದೆ.

Vastu Tips: ಸ್ನಾನಗೃಹದಲ್ಲಿ ಇಡುವ ಈ ವಸ್ತುಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಚ್ಚರಿಕೆ!

ಸ್ನಾನಗೃಹದಲ್ಲಿ ಇವುಗಳಿದ್ದರೆ ವಾಸ್ತು ದೋಷ ಪಕ್ಕಾ

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹದಿಂದ ಹೆಚ್ಚು ನಕಾರಾತ್ಮಕ ಶಕ್ತಿ ಉಂಟಾಗುವ ಸಾಧ್ಯತೆ ಇದೆ. ಮುರಿದ ಚಪ್ಪಲಿಗಳು, ಒಡೆದ ಕನ್ನಡಿ, ಖಾಲಿ ಬಕೆಟ್, ನಲ್ಲಿಯಿಂದ ತೊಟ್ಟಿಕ್ಕುವ ನೀರು, ಒದ್ದೆ ಬಟ್ಟೆಗಳು, ಚರಂಡಿಯಲ್ಲಿ ಜಮೆಯಾಗುವ ಕೂದಲು ಹಾಗೂ ಬಾತ್ ರೂಮಿನಲ್ಲಿ ಸಸ್ಯಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇಂತಹ ವಸ್ತುಗಳನ್ನು ತಪ್ಪಿಸಿ ಸ್ವಚ್ಛತೆ ಮತ್ತು ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಗೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ.

Vastu Tips: : ವಾಸ್ತುಶಾಸ್ತ್ರದ ಪ್ರಕಾರ ಎಂಥ ಸಮಯದಲ್ಲಿಯೂ ಯಾರಿಂದಲೂ ಈ ವಸ್ತುಗಳನ್ನು ಸಾಲ ಪಡೆಯಬೇಡಿ!

ಇನ್ನೊಬ್ಬರ ಬಳಿಯಿಂದ ಪೆನ್ನು ಸಾಲ ಪಡೆಯುವುದು ದುರದೃಷ್ಟ!

ನಮ್ಮ ದೈನಂದಿನ ಜೀವನದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಂದ ವಸ್ತುಗಳನ್ನು ಎರವಲು ಪಡೆಯುವುದು ಸಾಮಾನ್ಯ. ಆದರೆ ವಾಸ್ತುಶಾಸ್ತ್ರದ ಪ್ರಕಾರ, ಕೈಗಡಿಯಾರ, ಪೊರಕೆ, ಪೆನ್ನು ಮತ್ತು ಉಪ್ಪು ಮುಂತಾದ ಕೆಲವು ವಸ್ತುಗಳು ವ್ಯಕ್ತಿಯ ಅದೃಷ್ಟ ಹಾಗೂ ಹಣೆಬರಹಕ್ಕೆ ಸಂಬಂಧಿಸಿರುತ್ತವೆ. ಇವುಗಳನ್ನು ಎರವಲು ಕೊಡುವುದು ಅಥವಾ ಪಡೆಯುವುದು ಅಶುಭಕರವೆಂದು ನಂಬಲಾಗುತ್ತದೆ.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಮನೆಯಲ್ಲಿ ಅತ್ತೆ ಸೊಸೆ ಸಂಬಂಧ ಗಟ್ಟಿಯಾಗಲು ಇಲ್ಲಿದೆ ವಾಸ್ತು ಟಿಪ್ಸ್!

ಅತ್ತೆ–‌ ಸೊಸೆ ನಡುವಿನ ಭಿನ್ನಾಭಿಪ್ರಾಯಗಳು ಮನೆಯ ಶಾಂತಿಗೆ ಧಕ್ಕೆ ತರಬಹುದು. ವಾಸ್ತು ಶಾಸ್ತ್ರದ ಪ್ರಕಾರ ನೈಋತ್ಯ ಮತ್ತು ಈಶಾನ್ಯ ದಿಕ್ಕಿನ ಸರಿಯಾದ ಬಳಕೆ, ಸ್ಫಟಿಕ ಕಲ್ಲು, ದೀಪ, ಮಲಗುವ ದಿಕ್ಕು ಹಾಗೂ ಬಣ್ಣಗಳ ಆಯ್ಕೆ, ಜೊತೆಗೆ ಆಧ್ಯಾತ್ಮಿಕ ಆಚರಣೆಗಳನ್ನು ಪಾಲಿಸಿದರೆ ಗೃಹಕ್ಲೇಶ ನಿವಾರಣೆಯಾಗಿ ಕುಟುಂಬದಲ್ಲಿ ಸೌಹಾರ್ದತೆ ಮತ್ತು ನೆಮ್ಮದಿ ಹೆಚ್ಚಾಗುತ್ತದೆ.

Vastu Tips: ವಾಸ್ತು ಸಲಹೆಯಂತೆ ಮನೆಯಲ್ಲಿ ಕರಿಬೇವು ಗಿಡ ನೆಟ್ಟರೆ ಹಣಕಾಸು ಸಮಸ್ಯೆಯೇ ಬರದು!

ಕೈಯಲ್ಲಿ ಹಣ ನಿಲ್ಲಬೇಕಾದರೆ ಇದೊಂದು ಗಿಡ ಮನೆಯಲ್ಲಿರಲಿ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕರಿಬೇವು ಗಿಡವನ್ನು ಬೆಳೆಸುವುದರಿಂದ ಅನೇಕ ಶುಭ ಪರಿಣಾಮಗಳು ಕಂಡುಬರುತ್ತವೆ. ವಿಶೇಷವಾಗಿ ಮನೆಯ ಹಿತ್ತಲಿನಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಗಿಡವಿದ್ದರೆ, ಧನಾತ್ಮಕ ಶಕ್ತಿ ಹೆಚ್ಚಾಗಿ ಮನೆಗೆ ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ. ಆದರೆ ಕರಿಬೇವು ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದು ಅತ್ಯಂತ ಮುಖ್ಯ. ಸರಿಯಾದ ದಿಕ್ಕಿನಲ್ಲಿ ಬೆಳೆದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

Vastu Tips: ನಿಮ್ಮ ದಾಂಪತ್ಯವನ್ನು ಸುಖಮಯಗೊಳಿಸುತ್ತದೆ ಗುಲಾಬಿ; ಆದ್ರೆ ಈ ವಾಸ್ತು ನಿಯಮ ಪಾಲಿಸಿದ್ರೆ ಮಾತ್ರ!

ಮನೆಗೆ ಶುಭ ತರುವ ಗುಲಾಬಿ; ಈ ವಾಸ್ತು ಟಿಪ್ಸ್‌ ಪಾಲಿಸಿ

ವಾಸ್ತು ಶಾಸ್ತ್ರದ ಪ್ರಕಾರ ಗುಲಾಬಿ ಹೂವುಗಳು ಮನೆಗೆ ಸಕಾರಾತ್ಮಕ ಶಕ್ತಿ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ. ವಿಭಿನ್ನ ಬಣ್ಣಗಳ ಗುಲಾಬಿಗಳು ಪ್ರೀತಿ, ಸಂಬಂಧಗಳ ಬಲ, ವೃತ್ತಿ ಪ್ರಗತಿ ಹಾಗೂ ಆಧ್ಯಾತ್ಮಿಕ ಸಮತೋಲನಕ್ಕೆ ಸಹಾಯಕವಾಗುತ್ತವೆ. ಸರಿಯಾದ ದಿಕ್ಕಿನಲ್ಲಿ ಗುಲಾಬಿ ಗಿಡಗಳನ್ನು ಇಡುವುದರಿಂದ ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

Vastu Tips: ನೀವು ಹೊಸ ಮನೆ ಕಟ್ಟುವ ಪ್ಲಾನ್ ಅಲ್ಲಿ ಇದ್ದೀರಾ?; ಹಾಗಾದ್ರೆ ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಿ!

ಹೊಸ ಮನೆ ಕಟ್ಟುತ್ತಿದೀರಾ? ಈ ವಿಷಯ ಮರೆಯಬೇಡಿ

ಹೊಸ ಮನೆ ನಿರ್ಮಾಣ ಮಾಡುವ ಮೊದಲು ವಾಸ್ತು ಶಾಸ್ತ್ರದ ಪ್ರಮುಖ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಭೂಮಿಯ ಆಯ್ಕೆ, ಮನೆ ದಿಕ್ಕು, ಪ್ರವೇಶ ದ್ವಾರ, ಅಡುಗೆಮನೆ, ಪೂಜಾಗೃಹ ಹಾಗೂ ನೀರಿನ ವ್ಯವಸ್ಥೆಗಳಿಗೆ ಸರಿಯಾದ ವಾಸ್ತು ಪಾಲನೆಯಿದ್ದರೆ ಮನೆಗೆ ಸುಖ, ಶಾಂತಿ, ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ಲಭಿಸುತ್ತದೆ. ತಪ್ಪಾದ ವಾಸ್ತು ಕ್ರಮಗಳಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಈ ವಾಸ್ತು ನಿಯಮಗಳು ಸಹಾಯಕವಾಗುತ್ತವೆ.

Vastu Tips: ವಿದ್ಯಾಭ್ಯಾಸದಲ್ಲಿ ನಿಮ್ಮ ಮಕ್ಕಳ ಏಕಾಗ್ರತೆ ಹೆಚ್ಚಾಗಬೇಕಾ? ಹಾಗಾದ್ರೆ ಅವರ  ಅಧ್ಯಯನದ ಟೇಬಲ್ ಮೇಲೆ ಈ ಒಂದು ವಸ್ತು ಇಡಿ

ಮಕ್ಕಳು ಓದುವಂತೆ ಮಾಡುವುದು ಹೇಗೆ.?

ಆಧುನಿಕ ಸ್ಪರ್ಧಾತ್ಮಕ ಜೀವನದಲ್ಲಿ ಪಾಲಕರ ನಿರೀಕ್ಷೆ ಮತ್ತು ಅಂಕಗಳ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ನಿರಾಸೆ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಯಶಸ್ಸಿಗೆ ಕೇವಲ ಶ್ರಮವಲ್ಲದೆ ಓದುವ ವಾತಾವರಣ, ಏಕಾಗ್ರತೆ ಮತ್ತು ಮನಸ್ಸಿನ ಸ್ಥಿತಿಯೂ ಮುಖ್ಯವಾಗಿದ್ದು, ವಾಸ್ತು ಶಾಸ್ತ್ರವು ಮಕ್ಕಳ ಅಧ್ಯಯನ ಹಾಗೂ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮಗೂ ನಿಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆ ಇದ್ದರೆ ಅವರ ಅಧ್ಯಯನ ಕೊಠಡಿಯನ್ನು ವಾಸ್ತು ಪ್ರಕಾರ ಹೀಗೆ ಇಡಿ

Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ

ಈ ವಾಸ್ತು ಟಿಪ್ಸ್ ಪಾಲಿಸಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕುಗಳು ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಪ್ರವೇಶದ್ವಾರ, ಕೊಠಡಿಗಳು ಹಾಗೂ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸುಖ, ಸಮೃದ್ಧಿ ಮತ್ತು ಶಾಂತಿ ದೊರೆಯುತ್ತದೆ. ಆದರೆ ಮನೆ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಪಾಲಿಸದೇ ಹೋದರೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

Vastu Tips: ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು? ಸಮ ಸಂಖ್ಯೆ ಇದ್ದರೆ ಒಳ್ಳೆಯದೋ? ಬೆಸ ಸಂಖ್ಯೆ ಇದ್ದರೆ ಶುಭವೋ?

ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು?

ವಾಸ್ತು ಪ್ರಕಾರ ಮನೆಯ ಮೆಟ್ಟಿಲುಗಳು ಸಂತೋಷ ಮತ್ತು ಶಾಂತಿಗೆ ಕಾರಣವಾಗುವುದಲ್ಲದೆ, ಹಣದ ಕೊರತೆಯನ್ನು ನಿವಾರಿಸುತ್ತದೆ. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವಾಗ ಅದರ ದಿಕ್ಕು, ಮೆಟ್ಟಿಲುಗಳ ಸಂಖ್ಯೆ ಹಾಗೂ ಅವುಗಳ ಕೆಳಭಾಗದ ವಿನ್ಯಾಸವನ್ನು ಗಮನಪೂರ್ವಕವಾಗಿ ಪರಿಗಣಿಸಬೇಕು. ಹಾಗಾದರೆ ವಾಸ್ತು ದೃಷ್ಟಿಯಿಂದ ಮನೆಯ ಮೆಟ್ಟಿಲುಗಳು ಹೇಗಿರಬೇಕು? ಯಾವ ರೀತಿಯ ಮೆಟ್ಟಿಲುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದನ್ನು ನೋಡೋಣ.

Vastu Tips: ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳನ್ನು ಇಟ್ಟುಕೊಂಡರೆ ಆರೋಗ್ಯ, ನೆಮ್ಮದಿ

ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳು ಇದ್ದರೆ ನೆಮ್ಮದಿ ನಿದ್ರೆ

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸಮಯದಲ್ಲಿ ತಲೆದಿಂಬಿನ ಬಳಿ ಕೆಲವು ವಸ್ತುಗಳನ್ನು ಇಡುವುದರಿಂದ ಉತ್ತಮ ನಿದ್ರೆ, ಮಾನಸಿಕ ನೆಮ್ಮದಿ ಹಾಗೂ ಸಕಾರಾತ್ಮಕ ಶಕ್ತಿ ಲಭಿಸುತ್ತದೆ. ಈ ಸರಳ ವಾಸ್ತು ಕ್ರಮಗಳನ್ನು ಅನುಸರಿಸಿದರೆ ಜೀವನದಲ್ಲಿ ಶಾಂತಿ ಮತ್ತು ಶುಭ ಫಲಗಳು ದೊರೆಯುತ್ತದೆ. ಹಾಗಾದ್ರೆ ಯಾವುವು ಆ ವಸ್ತುಗಳು?

ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ? ಹಾಗಾದ್ರೆ ತಪ್ಪದೇ ಈ ವಾಸ್ತು ನಿಯಮ ಪಾಲಿಸಲೇ ಬೇಕು

ಮಣ್ಣಿನ ಮಡಕೆಯನ್ನು ಯಾವ ದಿಕ್ಕಿನಲ್ಲಿಡಬೇಕು ಗೊತ್ತೆ?

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಸರಿಯಾದ ಸ್ಥಳದಲ್ಲಿ ಮಾಡುವುದು ಮುಖ್ಯ. ನೀರಿನ ಪಾತ್ರೆಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಪ್ರವೇಶಿಸುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳು ಮಂಗಳ ಗ್ರಹದ ಸಂಕೇತವಾಗಿದ್ದು, ಸಂತೋಷ, ಭಾಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಇದೆ.

Vastu Tips: ಹೊಸ ವರ್ಷಕ್ಕೆ ಮನೆಯ ಕ್ಯಾಲೆಂಡರ್‌ ಬದಲಾಯಿಸಿದ್ರಾ? ಈ ದಿಕ್ಕಿನಲ್ಲೇ ಅಳವಡಿಸಿ

ಮನೆಯ ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ತೂಗು ಹಾಕಬೇಕು ಗೊತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಆಯಾ ವಸ್ತುಗಳನ್ನು ಸರಿಯಾದ ಸ್ಥಾನದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ, ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನದಲ್ಲಿ ಸುಧಾರಣೆ ಕಾಣುತ್ತಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬಹುತೇಕ ಜನರು ತಮ್ಮ ಮನೆಯಲ್ಲಿ ಹಳೆಯ ಕ್ಯಾಲೆಂಡರ್ ತೆಗೆದು, ಹೊಸ ಕ್ಯಾಲೆಂಡರ್‌ನ್ನು ಅಳವಡಿಸುವುದು ವಾಡಿಕೆ. ಕ್ಯಾಲೆಂಡರ್‌ ಅಳವಡಿಸುವಾಗಲೂ ವಾಸ್ತು ಶಾಸ್ತ್ರ ಸೂಚಿಸುವ ದಿಕ್ಕಕ್ಕೇ ಪರಿಗಣಿಸಬೇಕು.

Loading...