Vastu Tips: ಸುದೀರ್ಘ ಕಾಲದಿಂದ ಮುಚ್ಚಿರುವ ಮನೆಯೊಳಗೆ ಪ್ರವೇಶಿಸುವ ಮುನ್ನ ಪಾಲಿಸಿ ವಾಸ್ತು ನಿಯಮ
ಒಂದು ಮನೆ ದೀರ್ಘ ಕಾಲದಿಂದ ಮುಚ್ಚಿದ್ದರೆ ಅಂತಹ ಮನೆ ಖರೀದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳು ವಾಸ ಮಾಡುತ್ತಿರಬಹುದು. ಹೀಗಾಗಿ ಹೊಸ ಮನೆ ಖರೀದಿ ಮಾಡಿ ಅಲ್ಲಿ ವಾಸಿಸುವ ಯೋಚನೆ ಇದ್ದರೆ ಮೊದಲು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಪರಿವರ್ತಿಸುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಮೊದಲು ಮನೆಯ ಶಕ್ತಿ ಮತ್ತು ಪರಿಸರವನ್ನು ಸಕಾರಾತ್ಮಕವಾಗಿಸುವುದು ಬಹು ಮುಖ್ಯ.


ಮನೆಯ ದಿಕ್ಕು, ಸ್ಥಿತಿ, ದಾರಿ ಸೇರಿದಂತೆ ಸಾಮಾನ್ಯವಾಗಿ ಹೊಸ ಮನೆ ಖರೀದಿ ಮಾಡುವಾಗ ಹಲವಾರು ಸಂಗತಿಗಳನ್ನು ಗಮನಿಸಬೇಕು. ಜೊತೆಗೆ ಹೊಸ ಮನೆಗೆ ಬಂದಾಗ ಕೆಲವೊಂದು ರೀತಿಯ ಸಸ್ಯಗಳನ್ನು ಇರಿಸಲು ಜಾಗದ ದಿಕ್ಕನ್ನೂ ಪರಿಗಣಿಸಬೇಕಾಗುತ್ತದೆ. ಅಲ್ಲದೇ ಒಂದು ಮನೆ ದೀರ್ಘ ಕಾಲದಿಂದ ಮುಚ್ಚಿದ್ದರೆ (vastu for closed house) ಅಂತಹ ಮನೆ ಖರೀದಿ (vastu for buy a house) ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳು (negative energies) ವಾಸ ಮಾಡುತ್ತಿರಬಹುದು. ಹೀಗಾಗಿ ಹೊಸ ಮನೆ ಖರೀದಿ ಮಾಡಿ ಅಲ್ಲಿ ವಾಸಿಸುವ ಯೋಚನೆ ಇದ್ದರೆ ಮೊದಲು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಪರಿವರ್ತಿಸುವುದು ಮುಖ್ಯವಾಗಿರುತ್ತದೆ.
ದೀರ್ಘ ಕಾಲದಿಂದ ಮುಚ್ಚಿರುವ ಮನೆಯನ್ನು ಖರೀದಿ ಮಾಡುವ ಮುನ್ನ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಶಕ್ತಿ ಮತ್ತು ಪರಿಸರವನ್ನು ಸಕಾರಾತ್ಮಕವಾಗಿಸುವುದು ಬಹು ಮುಖ್ಯ. ಇದಕ್ಕಾಗಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು.
ದೀರ್ಘಕಾಲದಿಂದ ಮುಚ್ಚಿರುವ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಅವರು ನೀಡಿರುವ ಕೆಲವು ಸಲಹೆಗಳು ಇಂತಿವೆ.

ಸಸ್ಯ ನೆಡಿ
ದೀರ್ಘಕಾಲದಿಂದ ಮುಚ್ಚಿರುವ ಮನೆಗೆ ಪ್ರವೇಶಿಸುವ ಮೊದಲು ಅದರ ಮುಖ್ಯ ದ್ವಾರದಲ್ಲಿ ತುಳಸಿ ಗಿಡವನ್ನು ನೆಡಬೇಕು. ಅಲ್ಲದೇ ಮನೆಯ ಮುಖ್ಯ ದ್ವಾರವನ್ನು ಬಂಧನವರ್ನಿಂದ ಅಲಂಕರಿಸಿ. ಇದು ಮನೆಗೆ ಶುಭವನ್ನು ಉಂಟು ಮಾಡುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಹಾಗೂ ಮನೆಯ ಪರಿಸರವು ಶುದ್ಧವಾಗುವುದು. ಮುಖ್ಯ ದ್ವಾರದಲ್ಲಿ ಸಸ್ಯಗಳನ್ನು ನೆಡುವುದರಿಂದ ಮನೆಗೆ ಪ್ರವೇಶಿಸುವ ಶಕ್ತಿಯು ಶುದ್ಧ ಮತ್ತು ಪವಿತ್ರವಾಗುತ್ತದೆ.
ಎಲ್ಲ ಕಿಟಕಿ, ಬಾಗಿಲುಗಳನ್ನು ತೆರೆಯಿರಿ
ದೀರ್ಘಕಾಲದಿಂದ ಮುಚ್ಚಲ್ಪಟ್ಟ ಮನೆಗೆ ತಾಜಾ ಗಾಳಿ ಮತ್ತು ಸೂರ್ಯನ ಬೆಳಕು ಬೀಳುವುದಿಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಾಗಿರುತ್ತವೆ. ಅದಕ್ಕಾಗಿ ಮೊದಲು ಅಂತಹ ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳನ್ನು ತೆರೆಯಬೇಕು. ಇದರಿಂದ ಮನೆಯೊಳಗೆ ತಾಜಾ ಗಾಳಿ ಮತ್ತು ಸೂರ್ಯನ ಬೆಳಕು ಪ್ರವೇಶಿಸುತ್ತದೆ. ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ಇದು ತೆಗೆದುಹಾಕುತ್ತದೆ.
ಇದನ್ನೂ ಓದಿ: Vastu Tips: ದಂಪತಿಯ ನಡುವೆ ಪ್ರೀತಿ ಹೆಚ್ಚಿಸಲು ಸಹಾಯ ಮಾಡುತ್ತೆ ಈ ಗಿಡಗಳು
ಅರಿಶಿನದಿಂದ ಸ್ವಸ್ತಿಕವನ್ನು ಬರೆಯಿರಿ
ದೀರ್ಘಕಾಲದವರೆಗೆ ಮುಚ್ಚಿರುವ ಮನೆಗೆ ಪ್ರವೇಶಿಸುವುದಾದರೆ ಮನೆಯ ಮುಖ್ಯ ಬಾಗಿಲಿನ ಮೇಲೆ ಅರಿಶಿನದಿಂದ ಸ್ವಸ್ತಿಕವನ್ನು ಬರೆಯಬೇಕು. ಮುಖ್ಯ ಬಾಗಿಲಿನ ಮೇಲೆ ಅರಿಶಿನ ಸ್ವಸ್ತಿಕವನ್ನು ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಅರಿಶಿನ ಸ್ವಸ್ತಿಕವನ್ನು ಹಾಕುವುದರಿಂದ ಮನೆಯ ಪರಿಸರ ಪವಿತ್ರ ಮತ್ತು ಶುದ್ಧವಾಗಿರುತ್ತದೆ. ಇದು ಮನೆಯಲ್ಲಿ ವಾಸಿಸುವ ಜನರ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಮತ್ತು ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸ್ವಸ್ತಿಕವು ಒಳ್ಳೆಯ ಶಕ್ತಿಗಳನ್ನು ತನ್ನ ಕಡೆಗೆ ಆಕರ್ಷಿಸಲು ಸಹಾಯ ಮಾಡುತ್ತದೆ.
ದೀರ್ಘಕಾಲದವರೆಗೆ ಮುಚ್ಚಲ್ಪಟ್ಟ ಮನೆಯನ್ನು ಖರೀದಿಸಿದ ಅನಂತರ ಈ ಕ್ರಮಗಳನ್ನು ಅನುಸರಿಸಿದರೆ ಮನೆಯ ಪರಿಸರ ಸಕಾರಾತ್ಮಕವಾಗುವುದು ಎನ್ನುತ್ತಾರೆ ವಾಸ್ತು ತಜ್ಞರು.