Couple missing: ಇಂದೋರ್ ದಂಪತಿ ಮಿಸ್ಸಿಂಗ್ ಕೇಸ್; ನಾಪತ್ತೆಗೂ ಮೊದಲಿನ ಸಿಸಿಟಿವಿ ಫೂಟೇಜ್ ವೈರಲ್
ಮೇಘಾಲಯದಲ್ಲಿ (Meghalaya) ಇಂದೋರ್ನ (Indore) ನವವಿವಾಹಿತ ದಂಪತಿಯ ನಿಗೂಢವಾಗಿ ನಾಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶಿಲ್ಲಾಂಗ್ನ ಹೋಟೆಲ್ನ CCTV ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಮೇ 22ರಂದು ರಾಜಾ ರಘುವಂಶಿ (Raja Raghuvanshi) ಮತ್ತು ಅವರ ಪತ್ನಿ ಸೋನಮ್ ಹೋಟೆಲ್ಗೆ ಚೆಕ್-ಇನ್ ಮಾಡುವ ವಿಡಿಯೋಗಳು ಲಭ್ಯವಾಗಿವೆ.


ಇಂಫಾಲ್: ಮೇಘಾಲಯದಲ್ಲಿ (Meghalaya) ಇಂದೋರ್ನ (Indore) ನವವಿವಾಹಿತ ದಂಪತಿಯ ನಿಗೂಢವಾಗಿ ನಾಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಶಿಲ್ಲಾಂಗ್ನ ಹೋಟೆಲ್ನ CCTV ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಮೇ 22ರಂದು ರಾಜಾ ರಘುವಂಶಿ (Raja Raghuvanshi) ಮತ್ತು ಅವರ ಪತ್ನಿ ಸೋನಮ್ (Couple missing) ಹೋಟೆಲ್ಗೆ ಚೆಕ್-ಇನ್ ಮಾಡುವ ವಿಡಿಯೋಗಳು ಲಭ್ಯವಾಗಿವೆ. ದಂಪತಿಯನ್ನು ಕೊನೆಯದಾಗಿ ಮೇ 23ರಂದು ಕಂಡಿದ್ದು, ಅವರು ಬಾಡಿಗೆಗೆ ತೆಗೆದುಕೊಂಡ ಸ್ಕೂಟರ್ ಮರುದಿನ ಸೊಹ್ರಾರಿಮ್ನಲ್ಲಿ ಪತ್ತೆಯಾಗಿತ್ತು.
ಅದೇ ದಿನ ಅವರು ಕುಟುಂಬದೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದರು. ಜೂನ್ 2ರಂದು ಚಿರಾಪುಂಜಿಯ ಸೊಹ್ರಾರಿಮ್ ಬಳಿ ರಾಜಾ ಅವರ ಶವ ಪತ್ತೆಯಾಯಿತು. ಆದರೆ, ಸೋನಮ್ ಇನ್ನೂ ಕಾಣೆಯಾಗಿದ್ದು, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಮತ್ತು ವಿಶೇಷ ಕಾರ್ಯಾಚರಣಾ ತಂಡವು ಶೋಧ ಕಾರ್ಯದಲ್ಲಿ ತೊಡಗಿವೆ.
ಡ್ರೋನ್ ಬಳಸಿ ರಾಜಾರ ಶವವನ್ನು ಪಾರ್ಕಿಂಗ್ ಲಾಟ್ಗೆ ಹೊಂದಿಕೊಂಡ ಕಂದರದಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಅವರ ಫೋನ್ ಮತ್ತು ಕೊಲೆಗೆ ಬಳಸಿದ್ದೆಂದು ಶಂಕಿಸಲಾದ ಕತ್ತಿಯೂ ದೊರೆತಿದೆ. ಈಸ್ಟ್ ಖಾಸಿ ಹಿಲ್ಸ್ನ ಎಸ್ಪಿ ವಿವೇಕ್ ಸಿಯೆಮ್, “ಇದು ಸ್ಪಷ್ಟ ಕೊಲೆ ಪ್ರಕರಣ. ರಾಜಾ ಕೊಲೆಯಾಗಿದ್ದಾರೆ, ಇದರಲ್ಲಿ ಯಾವುದೇ ಸಂದೇಹವಿಲ್ಲ” ಎಂದಿದ್ದಾರೆ. ಮೇಘಾಲಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ.
ಇಂದೋರ್ನ ರಾಜಾ ಅವರ ಕುಟುಂಬವು ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸಬೇಕೆಂದು ಒತ್ತಾಯಿಸಿದೆ. ರಾಜಾರ ಸಹೋದರ ವಿಪಿನ್, “ಸ್ಕೂಟರ್ ಇದ್ದ ಸ್ಥಳದಿಂದ 25 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. ಅವನನ್ನು ಅಪಹರಿಸಿ, ಶವ ಪತ್ತೆಯಾದ ಸ್ಥಳಕ್ಕೆ ಕೊಂಡೊಯಲಾಗಿದೆ ಎಂದು ಶಂಕಿಸುತ್ತೇವೆ” ಎಂದಿದ್ದಾರೆ.
CCTV footage has surfaced in connection with the mysterious disappearance of the couple, who hail from Indore, in #Meghalaya’s Sohra.
— NENewsTV (@NENEWS24x7) June 5, 2025
The video shows Raja Raghuvanshi and his wife, Sonam Raghuvanshi, alive for the last time.#IndoreCouple #IndoreCoupleMissing #CCTV pic.twitter.com/k0H2mCBOma
ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, “ಸೊಹ್ರಾದಲ್ಲಿ ಕೊಲೆಯಾದ ಇಂದೋರ್ ಪ್ರವಾಸಿಗನ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗುವುದು. ಅವರ ಪತ್ನಿಯ ಶೋಧಕ್ಕೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದಿದ್ದಾರೆ. “ಈ ಘಟನೆ ನಮಗೆ ಆಘಾತವನ್ನುಂಟುಮಾಡಿದೆ. ಮೇಘಾಲಯದಲ್ಲಿ ಇಂತಹ ಘಟನೆ ಎಂದೂ ನಡೆದಿಲ್ಲ. CBI ತನಿಖೆಯ ಬೇಡಿಕೆ ಇದ್ದರೂ, ಪ್ರಸ್ತುತ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: 'ವಂದೇ ಮಾತರಂ’ ಹಾಡಿದ ಮೇಘಾಲಯದ ಹುಡುಗಿಯರು; ದೇಶಭಕ್ತಿಯ ಹಾಡಿಗೆ ನೆಟ್ಟಿಗರು ಫಿದಾ
ಶಿಲ್ಲಾಂಗ್ ಮತ್ತು ಮೇಘಾಲಯದ ಇತರ ಭಾಗಗಳು ಪ್ರಮುಖ ಪ್ರವಾಸಿ ತಾಣಗಳಾಗಿದ್ದು, ಈ ಘಟನೆಯಿಂದ ಭಯ ವ್ಯಾಪಿಸಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ಪಾಲ್ ಲಿಂಗ್ಡೋಹ್, “ನಾವು ಆತುರದ ತೀರ್ಮಾನಕ್ಕೆ ಬರುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕಾನೂನು ತನ್ನ ಕಾರ್ಯವನ್ನು ಮಾಡಲಿದೆ. ಥೈಲ್ಯಾಂಡ್ನಲ್ಲಿ ಒಬ್ಬ ವ್ಯಕ್ತಿ ಕಾಣೆಯಾದರೆ ಅದು ಥೈಲ್ಯಾಂಡ್ ಅಸುರಕ್ಷಿತವೆಂದಲ್ಲ” ಎಂದಿದ್ದಾರೆ.