ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮತ್ತೆ ಕೊರೋನಾ ಅಬ್ಬರ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯವಾಣಿ?

2030ರಲ್ಲಿ ಮಾರಕ ವೈರಸ್ ಮತ್ತೆ ಕಾಣಿಸಿಕೊಳ್ಳುತ್ತದೆ ಎಂದು ಮುನ್ಸೂಚನೆ ನೀಡಿದ್ದ ಜಪಾನಿನ ಪ್ರಸಿದ್ಧ ಕಾದಂಬರಿಕಾರ ರಿಯೋ ಟ್ಯಾಟ್ಸುಕಿ ಮತ್ತು ಜಪಾನ್‌ನ "ಬಾಬಾ ವಂಗಾ" ಅವರ ಭವಿಷ್ಯವಾಣಿ ನಿಜವಾಗಲಿದೆ. ಇದೀಗ ಭಾರತದಲ್ಲಿ ಕೋವಿಡ್(Covid) ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಆದರೆ ಸದ್ಯಕ್ಕೆ ಸೋಂಕಿನ ತೀವ್ರತೆಯು ಕಡಿಮೆ ಮಟ್ಟದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಬಾ ವಂಗಾ ಭವಿಷ್ಯವಾಣಿ; ಜೀವ ಸಂಕುಲಕ್ಕೆ ಕಾದಿದ್ಯಾ ಆಪತ್ತು?

Profile pavithra May 28, 2025 3:43 PM

ಬೆಂಗಳೂರು: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ವೈರಸ್ ಮತ್ತೆ ಕಾಣಿಸಿಕೊಂಡಿದೆ! ಇದೀಗ ಭಾರತದಲ್ಲಿ ಕೋವಿಡ್ (Covid Cases) ಪ್ರಕರಣಗಳು ನಿಧಾನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಜಪಾನಿನ ಪ್ರಸಿದ್ಧ ಕಾದಂಬರಿಕಾರ ರಿಯೋ ಟ್ಯಾಟ್ಸುಕಿ ಮತ್ತು ಜಪಾನ್‌ನ "ಬಾಬಾ ವಂಗಾ"(Baba Vanga ) ಅವರು 2030ರಲ್ಲಿ ಮಾರಕ ವೈರಸ್ ಮತ್ತೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ ಹಳೆಯ ಭವಿಷ್ಯವಾಣಿಯು ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗುತ್ತಿದೆ.

ಕೋವಿಡ್ ಸಾಂಕ್ರಾಮಿಕ ರೋಗ, ರಾಜಕುಮಾರಿ ಡಯಾನಾ ಸಾವು, ಫ್ರೆಡ್ಡಿ ಮರ್ಕ್ಯುರಿಯ ಮರಣ ಇಂತಹ ಘಟನೆಗಳ ಬಗ್ಗೆ ನಿಖರವಾದ ಮುನ್ಸೂಚನೆ ನೀಡಿ ಜನಪ್ರಿಯತೆ ಗಳಿಸಿದ ಬಾಬಾ ವಂಗಾ, ಮಾರಕ ಕೊರೊನಾ ವೈರಸ್‌ ಮತ್ತೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ್ದರು ಎಂದು ವರದಿಯಾಗಿತ್ತು.

ಜಪಾನಿನ ಕಾದಂಬರಿಕಾರ ರಿಯೋ ಟ್ಯಾಟ್ಸುಕಿ 1999 ರಲ್ಲಿ "ದಿ ಫ್ಯೂಚರ್ ಆಸ್ ಐ ಸೀ ಇಟ್" ಎಂಬ ಶೀರ್ಷಿಕೆಯ ಪುಸ್ತಕವನ್ನು ಬರೆದಿದ್ದರು. ಅದರಲ್ಲಿ ಅವರಿಗೆ ಮಧ್ಯರಾತ್ರಿಯಲ್ಲಿ ಬಿದ್ದ ದುಃಸ್ವಪ್ನಗಳ ಆಧಾರದ ಮೇಲೆ ಅಜ್ಞಾತ ವೈರಸ್ 2020 ರಲ್ಲಿ ಬರುತ್ತದೆ, ಏಪ್ರಿಲ್‌ನಲ್ಲಿ ನಂತರ ಕಣ್ಮರೆಯಾಗುತ್ತದೆ ಮತ್ತು 10 ವರ್ಷಗಳ ನಂತರ ಮತ್ತೆ ಕಾಣಿಸಿಕೊಳ್ಳುತ್ತದೆ" ಎಂದು ಅವರು ತಮ್ಮ ಪುಸ್ತಕದಲ್ಲಿ COVID-19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಬರೆದಿದ್ದಾರೆ. ಟ್ಯಾಟ್ಸುಕಿಯ 1999ರ ಲೇಖನಗಳ ಪ್ರಕಾರ, ವೈರಸ್ ಹೆಚ್ಚು ಭೀಕರವಾಗಿ ಮತ್ತೆ ಕಾಣಿಸಿಕೊಳ್ಳುತ್ತದೆ, ಹೆಚ್ಚಿನ ಜನರನ್ನು ಬಲಿ ತೆಗೆದುಕೊಳ್ಳುತ್ತದೆ ಮತ್ತು ಜಾಗತಿಕ ಆರೋಗ್ಯ ವ್ಯವಸ್ಥೆಗಳನ್ನು ಮತ್ತೊಮ್ಮೆ ಬುಡಮೇಲು ಮಾಡುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್

ಇದೀಗ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಡಾ. ರಾಜೀವ್ ಬೆಹ್ಲ್ ಸೋಮವಾರ(ಮೇ 26) ಸೋಂಕಿನ ತೀವ್ರತೆಯು ಪ್ರಸ್ತುತ ಸೌಮ್ಯವಾಗಿದ್ದು, ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. ಕಳೆದ ವಾರದಲ್ಲಿ ದೆಹಲಿಯಲ್ಲಿ ಕನಿಷ್ಠ 104 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಆದರೆ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇದೇ ಅವಧಿಯಲ್ಲಿ ಕ್ರಮವಾಗಿ 430 ಮತ್ತು 209 ಹೊಸ ಪ್ರಕರಣಗಳನ್ನು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಾದ್ಯಂತ ಒಟ್ಟು 1,009 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ 12, ರಾಜಸ್ಥಾನದಲ್ಲಿ 13, ಉತ್ತರ ಪ್ರದೇಶದಲ್ಲಿ 15, ತಮಿಳುನಾಡಿನಲ್ಲಿ 69, ಕರ್ನಾಟಕದಲ್ಲಿ 47 ಮತ್ತು ಗುಜರಾತ್‌ನಲ್ಲಿ 83 ಪ್ರಕರಣಗಳು ಸೇರಿವೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೊಸ ಸೋಂಕುಗಳು ಹೆಚ್ಚಾಗುತ್ತಿವೆ. ಆದರೆ, ಈ ಪ್ರಕರಣಗಳಲ್ಲಿ ಹೆಚ್ಚಿನವು ಸೌಮ್ಯವೆಂದು ಹೇಳಲಾಗಿವೆ ಮತ್ತು ಅವುಗಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವ ಮೂಲಕ ನಿರ್ವಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಮೂವರು ಯುವಕರ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು; ಶಾಕಿಂಗ್‌ ವಿಡಿಯೊ ಇಲ್ಲಿದೆ

ಈ ನಡುವೆ ಜಪಾನ್ ಮತ್ತು ಫಿಲಿಪೈನ್ಸ್ ನಡುವಿನ ಸಮುದ್ರದೊಳಗೆ ದೊಡ್ಡ ಬಿರುಕು ಉಂಟಾಗಲಿದ್ದು, ಇದು ಜುಲೈ 2025 ರಲ್ಲಿ ಭೀಕರ ಸುನಾಮಿಗೆ ಕಾರಣವಾಗಬಹುದು ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2011ರ ದುರಂತಕ್ಕಿಂತ ಮೂರು ಪಟ್ಟು ದೊಡ್ಡದಾದ ಸುನಾಮಿ ಬರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಜಪಾನ್ ಭೂಕಂಪಗಳ ಇತಿಹಾಸವನ್ನು ಹೊಂದಿದ್ದರಿಂದ, ಇದೀಗ ಜನರು ಈ ಮುನ್ಸೂಚನೆಯ ಬಗ್ಗೆ ಆತಂಕಗೊಂಡಿದ್ದಾರೆ.