Jayashree Kalkundri Column: ಯೋಗಕ್ಕೀಗ ಸುಯೋಗ
ವಿಶ್ವಸಂಸ್ಥೆಯು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಿದ ದಿನದಿಂದ ಭಾರತ ಮಾತ್ರವಲ್ಲ, ವಿಶ್ವದೆಡೆ ಯೋಗದ ಕಂಪು ಪಸರಿಸಿದೆ. ವಿಶ್ವದ ಪ್ರಮುಖ ನಗರಗಳಲ್ಲಿ ಯೋಗ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಯೋಗದಿಂದ ಜನತೆಯನ್ನು ನಿರೋಗಿಗಳಾಗುವ ದಿಶೆಯಲ್ಲಿ, ಕೇಂದ್ರದ ಆಯುಷ್ ಮಂತ್ರಾಲಯವು ಕಾರ್ಯೋನ್ಮುಖ ವಾಗಿದೆ.


ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ವಿಶ್ವಸಂಸ್ಥೆಯು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಿದ ದಿನದಿಂದ ಭಾರತ ಮಾತ್ರವಲ್ಲ, ವಿಶ್ವದೆಡೆ ಯೋಗದ ಕಂಪು ಪಸರಿಸಿದೆ. ವಿಶ್ವದ ಪ್ರಮುಖ ನಗರಗಳಲ್ಲಿ ಯೋಗ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಯೋಗದಿಂದ ಜನತೆಯನ್ನು ನಿರೋಗಿಗಳಾಗುವ ದಿಶೆಯಲ್ಲಿ, ಕೇಂದ್ರದ ಆಯುಷ್ ಮಂತ್ರಾಲಯವು ಕಾರ್ಯೋನ್ಮುಖವಾಗಿದೆ.
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಅಂಟೋ ನಿಯೋ ಗುಟೆರಸ್ ಅವರು, ‘ಯೋಗ ಜನರನ್ನು ಒಗ್ಗೂಡಿಸುತ್ತದೆ. ದೇಹ ಮತ್ತು ಮನಸ್ಸನ್ನು ಬೆಸೆಯುತ್ತದೆ. ಶಿಸ್ತು ಮತ್ತು ಶಾಂತಿಯನ್ನು ಕಾಪಾಡಿ ಕೊಳ್ಳಲು, ಮಾರ್ಗ ದರ್ಶಕವಾಗಿದೆ. ಮಾನವೀಯತೆ ಮತ್ತು ಪ್ರಕೃತಿಯನ್ನು ಸಂಗಮಿಸುವ ಯೋಗ, ಬಲ, ಸೌಹಾರ್ದ ಮತ್ತು ಶಾಂತಿಗೆ ಮೂಲವಾಗಿದೆ.
ವಿಶ್ವ ವಿಘಟನೆಯಾಗುತ್ತಿರುವ ಈ ಸಂದರ್ಭಕ್ಕೆ, ಪ್ರಾಚೀನ ಅಭ್ಯಾಸವಾದ ಯೋಗ ಮದ್ದಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಮೂಲದ ಯೋಗ ಜನಪ್ರಿಯವಾಗಿದೆ. ಯೋಗದ ಮಹತ್ವ, ವೇದ, ಉಪನಿಷತ್ತು, ಭಗವದ್ಗೀತೆ ಹೀಗೆ ಇನ್ನೂ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.
ಐಹಿಕ ಕಾಮನೆಗಳಿಂದ ಮನಸ್ಸನ್ನು ವಿಮೋಚನೆಗೊಳಿಸುವ ಯೋಗವು, ಪ್ರಪಂಚಕ್ಕೆ ಭಾರತದ ಕೊಡುಗೆ ಯೆಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹ ವಿಷಯ. ಪತಂಜಲಿ ಮುನಿಗಳು ಯೋಗದ ಪಿತಾಮಹರೆನಿಸಿದ್ದಾರೆ.

ಸಂಸ್ಕೃತ ಪದ ವಾದ ಯೋಗದ ಮೂಲ ಪದ ಯುಜ ಎನ್ನಲಾಗಿದೆ. ಪತಂಜಲಿ ಮುನಿಗಳು, ಯೋಗ ಸಂಸ್ಥಾಪಕರು ಮಾತ್ರ ವಲ್ಲ, ಆಧ್ಯಾತ್ಮಿಕ ಚಿಂತಕರಾಗಿದ್ದರು. ಪತಂಜಲಿ ಯೋಗ ಸೂತ್ರ, ಹಿಂದೂ ತತ್ವಶಾಸ್ತ್ರದ ಪರಮ ಪವಿತ್ರ ಗ್ರಂಥವೆಂದೇ ಪರಿಗಣಿಸಲಾಗುತ್ತದೆ. 2014ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಂದ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ, ಜೂನ್ 21ರಂದು ಅಂತಾ ರಾಷ್ಟ್ರೀಯ ಯೋಗ ದಿವಸವೆಂದು ಘೋಷಿಸಬೇಕೆಂಬ ಪ್ರಸ್ತಾಪಕ್ಕೆ ಮನ್ನಣೆ ದೊರೆತು, ಭಾರತದ ಯೋಗದ ಹಿರಿಮೆಯ ಮುಕುಟಕ್ಕೆ ಗರಿ ಮೂಡಿರುವುದು ನಿಜಕ್ಕೂ ಪ್ರಶಂಶಾರ್ಹ.
ಜೂನ್ 21ರಂದು ಅತ್ಯಂತ ಹೆಚ್ಚು ಸಮಯ ಹಗಲಿರುವ ದಿನವೂ ಹೌದು. ಆರೋಗ್ಯಪೂರ್ಣ ಬದುಕು ಯಾರಿಗೆ ಬೇಡ? ಇಂದಿನ ನಿರಂತರ ಬದಲಾವಣೆಯ ವೇಗದಲ್ಲಿ, ನವೀನತೆ, ವೈವಿಧ್ಯ ಮತ್ತು ಐಹಿಕ ಸುಖಗಳನ್ನು ಅರಸುತ್ತಾ ಬರುತ್ತಿ ರುವ ಮಾನವನನ್ನು ಅನೇಕ ರೀತಿಯ ಚಿಂತೆ, ಒತ್ತಡ ಗಳು ಸುತ್ತುವರಿದಿವೆ.
ಅಧುನಿಕ ಜೀವನಶೈಲಿ, ಮಾನವ ನನ್ನು ಅನಾರೋಗ್ಯ ಮಾತ್ರವಲ್ಲ, ಕಷ್ಟ-ಕಾರ್ಪಣ್ಯಗಳ ಸಮುದ್ರ ದಲ್ಲಿ ಓಲಾಡುವಂತೆ ಮಾಡಿದೆ ಎನ್ನಬಹುದು. ಒತ್ತಡಗಳಿಂದ ಮಾನವನ ಮನಸ್ಸು, ದೇಹ ಗಳೆರಡೂ ಕುಸಿಯುತ್ತಿವೆ. ನಮ್ಮ ಪೂರ್ವಜರು, ಸ್ವಸ್ಥ ಮನಸ್ಸು, ದೇಹಾರೋಗ್ಯ ಹಾಗೂ ಆಧ್ಯಾತ್ಮಿಕ ಸಾಧನೆಗಾಗಿ ಸಂಶೋಧಿಸಿದ ಯೋಗಶಾಸ್ತ್ರದಲ್ಲಿ ಬಳಲಿ ಬೆಂಡಾದ ಮಾನವನ ನೋವು, ಶಾಂತಿ ಗಳಿಗೂ ಸಂಪೂರ್ಣ ಪರಿಹಾರವಿದೆ, ನುರಿತ ವೈದ್ಯರಿಂದಲೂ ಗುಣಪಡಿಸಲಾಗದ ಶಾರೀರಿಕ ಮತ್ತು ಮಾನಸಿಕ ವ್ಯಾಧಿಗಳಿಂದ ಬಳಲುತ್ತಿರುವ ಜನಸಾಮಾನ್ಯರು, ಈ ಸಮಸ್ಯೆಯ ಪರಿಹಾರಕ್ಕಾಗಿ ಯೋಗಾಭ್ಯಾಸದ ಮೊರೆ ಹೋಗುತ್ತಿದ್ದಾರೆ.
ಇದನ್ನೂ ಓದಿ: International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
ಲಿಂಗ, ವಯಸ್ಸು, ಜಾತಿ ಮತ್ತು ಧರ್ಮಗಳನ್ನು ಮೀರಿ ಜನತೆ ಯೋಗದ ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ. ತಪೋಬಲದಂತೆ ಸತತ ಯೋಗಾಭ್ಯಾಸದಿಂದಲೂ ಒಬ್ಬ ವ್ಯಕ್ತಿಯು ಅತ್ಯಂತ ಸೂಕ್ಷ್ಮರೂಪವನ್ನು ಪಡೆದು ಅದೃಶ್ಯನಾಗ ಬಹುದಾಂತಹ ಶಕ್ತಿಯನ್ನು ಪಡೆಯಬಹುದು ಎನ್ನ ಲಾಗಿದೆ. ನಾವು ಸೇವಿಸುವ ಆಹಾರ, ಜೀವಕೋಶಗಳನ್ನು ತಲುಪಿ, ದೇಹದ ಅಂಗಗಳು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದೇ ಆರೋಗ್ಯವೆಂಬ ಭಾವನೆ ಜನಸಾಮಾನ್ಯರಲ್ಲಿ ಮನೆ ಮಾಡಿದೆ.
ಶಾರೀರಿಕ ಆರೋಗ್ಯದ ಜತೆಗೆ, ಉತ್ತಮ ಮಾನಸಿಕ ಸ್ಥಿತಿಯೂ ಪೂರಕವಾಗಿದ್ದಾಗ ಮಾತ್ರ ಬದುಕು ಸುಗಮವಾಗಿ ಸಾಗಬಲ್ಲದು. ಯೋಗದ ದೃಷ್ಟಿಯಲ್ಲಿ, ಪ್ರತಿ ವ್ಯಕ್ತಿ, ಶಾರೀರಿಕ-ಮಾನಸಿಕ ಆರೋಗ್ಯ ಗಳ ಜತೆಗೆ ಆಧ್ಯಾತ್ಮಿಕವಾಗಿಯೂ ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯಪೂರ್ಣ ನೆನಿಸಿಕೊಳ್ಳು ತ್ತಾನೆ ಎನ್ನಲಾಗಿದೆ. ರೋಗ ನಿವಾರಣೆಯಲ್ಲಿ ಯೋಗದ ಪಾತ್ರ ವಿಶಿಷ್ಟವೆನಿಸಿದೆ. ವರ್ತಮಾನದ ವ್ಯಾಧಿಗಳು ಮಾತ್ರವಲ್ಲ, ಮುಂದೆ ಕಾಡಲಿರುವ ರೋಗಗಳನ್ನು ನಿಗ್ರಹಿಸುವ ಮಾಂತ್ರಿಕ ಶಕ್ತಿ ಯೋಗಕ್ಕಿದೆ.
ಯೋಗವೆಂಬುದು ರೋಗ ಸಂಸ್ಕಾರವನ್ನೇ ಕಿತ್ತು ಬಿಸಾಡುವಷ್ಟು ಪ್ರಬಲ ಅಸ್ತ್ರವೆನಿಸಿದೆ. ಯೋಗದ ಒಂದು ಭಾಗವೇ ಯೋಗಾಸನವೆನ್ನಬಹುದು. ಮನಸ್ಸಿನಿಂದ ಯಾವುದೇ ಸಾಧನೆ ಮಾಡಬೇಕೆಂದರೆ ಮೊದಲು ದೇಹವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವು ಅಗತ್ಯ. ಯೋಗವೆಂದರೆ ಧ್ಯಾನವೆಂದು ಸಂತವ್ಯಾಸರು ನುಡಿಯುತ್ತಾರೆ.
ದೀರ್ಘ ಧ್ಯಾನ ಮುದ್ರೆಗಳಿಂದ ಮನಸ್ಸಿಗೆ ಅನಿರ್ವಚನೀಯ ಶಾಂತಿ ದೊರೆತು, ಆತ್ಮ ಮತ್ತು ಪರಮಾತ್ಮಗಳೆರಡೂ ಒಂದೇ ಎನಿಸುತ್ತವೆ. ಅಜ್ಞಾನ, ಐಭೋಗದ ಲಾಲಸೆ, ಕಳವಳ, ಆತಂಕಗಳು ಮರೆಯಾಗಿ ನೆಮ್ಮದಿಯ ಭಾವ ಮೂಡುತ್ತದೆ. ಧ್ಯಾನವನ್ನು ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ (ಸುಮಾರು 20 ನಿಮಿಷಗಳ ಕಾಲ) ಮಾಡುವದರಿಂದ ಹಲವಾರು ಪ್ರಯೋಜನಗಳಿವೆ. ಧ್ಯಾನದಿಂದ ಕ್ರಿಯಾಶೀಲತೆ, ಏಕಾಗ್ರತೆ, ಚುರುಕುತನ, ನೆನಪಿನ ಶಕ್ತಿ ಮತ್ತು ದೈಹಿಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ: Jayashree Kalkundri Column: ಕೋಪವೆಂಬ ಪರಿತಾಪ
ಅತ್ಯಂತ ಆತಂಕಭರಿತ ಸನ್ನಿವೇಶಗಳು ಎದುರಾದಾಗ, ಧ್ಯಾನದ ಮೂಲಕ ಮನಸ್ಸಿನಲ್ಲಿ ಮೂಡುವ ಇತ್ಯಾತ್ಮಕ ಭಾವನೆಗಳನ್ನು ನಿರ್ವಹಣೆ ಮಾಡಲು ಸಾಧ್ಯ. ಇಷ್ಟು ಮಾತ್ರವಲ್ಲ, ದೀರ್ಘಕಾಲದಿಂದ ಕಾಡುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳೆನಿಸಿದ ಮೈಗ್ರೇನ್, ಖಿನ್ನತೆ, ಮಾದಕದ್ರವ್ಯ ವ್ಯಸನ, ನಿದ್ರಾರಾಹಿತ್ಯಗಳನ್ನು ನಿವಾರಿಸಿಕೊಳ್ಳಬಹುದು. ಯೋಗವೆಂದರೆ ಯೋಗವೂ ಹೌದು, ಅದೇ ರೀತಿ ಪ್ರಾಣಾಯಾಮವೂ ಹೌದು.
ನಮ್ಮ ಉಸಿರಿನಲ್ಲಿ ಪ್ರಾಣ ಶಕ್ತಿ ಹರಿಯುತ್ತದೆ. ಈ ಪ್ರಾಣ ಶಕ್ತಿಯನ್ನು ವ್ಯವಸ್ಥಿತವಾಗಿ ನಿಯಂತ್ರಿಸು ವುದರಿಂದ ದೇಹದಲ್ಲಿ ಹರಿಯುವ ಚೈತನ್ಯವನ್ನೂ ಕ್ರಮ ಬದ್ಧಗೊಳಿಸಬಹುದು. ಯೋಗವು ಎಂಟು ಅಂಗಗಳನ್ನು ಹೊಂದಿದೆ. ಅದೇ ಅಷ್ಟಾಂಗ ಯೋಗ. ಪ್ರಾಚೀನ ಋಷಿ-ಮುನಿಗಳು ಪ್ರತಿಪಾದಿಸಿದ ಎಂಟು ಯೋಗ ಸೂತ್ರಗಳೆಂದರೆ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಯಮಸೂತ್ರದಲ್ಲಿ, ಪಾಲಿಸ ಬೇಕಾದ ನಿಯಮಗಳೆಂದರೆ, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳು. ಯಾವುದೇ ಕಾಲದಲ್ಲಿ ಯಾರಿಗೂ ನೋವುಂಟು ಮಾಡದಿರುವದು ಅಹಿಂಸೆ, ಕೆಲಸ-ಕಾರ್ಯಗಳಲ್ಲಿ ಯಥಾರ್ಥತೆ ತೋರುವದು ಸತ್ಯ, ಧರ್ಮರಹಿತ ಹಣವನ್ನು ಗಳಿಸದಿರುವದು ಅಸ್ತೇಯ, ಧರ್ಮಾನುಸಾರ ವಿವಾಹ ವಾದ ಸಂಗಾತಿಗೆ ನಿಷ್ಟೆ ಯಿಂದಿರುವದು ಬ್ರಹ್ಮಚರ್ಯ ಮತ್ತು ಅಗತ್ಯಕ್ಕಿಂತಲೂ ಹೆಚ್ಚಾಗಿ ಏನನ್ನೂ ಸ್ವೀಕರಿಸದಿರುವದು. ಅಪರಿಗ್ರಹಗಳು ಯಮ ನಿಯಮ ಗಳೆನಿಸಿವೆ.
ಪತಂಜಲಿ ಮುನಿಗಳ ಉಪದೇಶಾಮೃತ ದಂತೆ, ಈ ಐದೂ ನಿಯಮಗಳನ್ನು ಪರಿಪಾಲಿಸಿದ ಮನುಜ ದೇವಮಾನವನೆನುಸುತ್ತಾನೆ. ಮಾನವನ ದೇಹವೇ ದೇಗುಲವೆನಿಸಿದೆ. ಇದರಲ್ಲಿ ಪ್ರಾಣ ಸ್ವರೂಪ ನಾದ ಭಗವಂತ ನೆಲೆಸಿರುವದರಿಂದ. ಈ ದೇಹವನ್ನು ಶುಚಿಗೊಳಿಸಿಕೊಳ್ಳುವುದರ ಜತೆಗೆ ಋಣಾತ್ಮಕ ಭಾವನೆಗಳನ್ನು ಹೊರತಳ್ಳಬೇಕು.
ಮನಸ್ಸಿನಿಂದ ಸಾಧನೆ ಮಾಡಲು ದೇಹದ ಆರೋಗ್ಯವೂ ಅತಿ ಮುಖ್ಯ. ದೇಹವನ್ನು ವಿವಿಧ ಭಂಗಿಗಳಲ್ಲಿ ತಿರುಗಿಸಿ, ಯೋಗಾಸನ ಮಾಡುವುದರಿಂದ ದೇಹದಲ್ಲಿ, ರಕ್ತದ ಪರಿಚಲನೆ ಸರಿಯಾಗು ವುದರೊಂದಿಗೆ, ವಾತ-ಶೀತ-ಪಿತ್ತಗಳು ಸಮಸ್ಥಿತಿಯಲ್ಲಿರುತ್ತವೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಗಳು ಸಮತೋಲನದಲ್ಲಿರುತ್ತವೆ. ಈ ನಿಯಮಗಳ ಪಾಲನೆಯೇ ಮಹಾವ್ರತ ಎನಿಸಿದೆ.
ಪ್ರಾಥಮಿಕವಾಗಿ ಗುರುಮುಖದಿಂದಲೇ ಯೋಗಾಸನಗಳನ್ನು ಕಲಿಯುವದು ಸೂಕ್ತ, ಆಭ್ಯಾಸದಿಂದ ಆಸನ ಸ್ಥಿರವಾಗಿರಬೇಕು ಮತ್ತು ನೋವುರಹಿತವಾಗಿರಬೇಕು, ಎಲ್ಲ ಆಸನಗಳನ್ನು ಆಭ್ಯಸಿಸುತ್ತಾ ಹೋದರೆ, ಆಧ್ಯಾತ್ಮ ವಿದ್ಯೆ ಗೋಚರವಾಗುತ್ತದೆ. ಭಗವಂತನಲ್ಲಿ ಶೃದ್ಧೆ- ಭಕ್ತಿಗಳು ಮೂಡಿ ಮನಸ್ಸು ಸದಾ ಪ್ರಸನ್ನ ಚಿತ್ತವಾಗಿರುತ್ತದೆ.
ಪತಂಜಲಿ ಮುನಿಗಳ ಪ್ರಕಾರ, ಯೋಗಾಸನವೆಂದರೆ, ಯೋಗಾಭ್ಯಾಸಿಯು ಧೃಡ ಮತ್ತು ಆರಾಮ ಸ್ಥಿತಿಯಲ್ಲಿ ಕುಳಿತುಕೊಳ್ಳುವ ಭಂಗಿ ಎಂದು ವ್ಯಾಖ್ಯಾನಿಸಿದ್ದಾರೆ. ಯೋಗದ ವಿವಿಧ ಆಸನಗಳನ್ನು ದೇಹದ ಭಾಗಗಳಿಗೆ ವ್ಯಾಯಾಮವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಜನಪ್ರಿಯ ಯೋಗಾಸನ ಗಳೆಂದರೆ, ಸೂರ್ಯ ನಮಸ್ಕಾರ, ಭುಜಂಗಾಸನ, ವೀರಭದ್ರಾಸನ, ಶೀರ್ಷಾಸನ, ಮತ್ತು ತಾಡಾಸನ ಗಳು. ಯೋಗಾಸನಗಳನ್ನು ನಿರಂತರ ಮಾಡುವದರಿಂದ ರಕ್ತ ಪರಿಚಲನೆ ಉತ್ತಮವಾಗಿ, ಸ್ನಾಯು ಬಲ ಸುಧಾರಿಸುವುದರೊಂದಿಗೆ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ.
ಯೋಗಾಭ್ಯಾಸಗಳಿಗೂ ಮತ್ತು ವ್ಯಾಯಾಮಗಳಿಗೂ ಹಲವಾರು ಅಂತರಗಳಿವೆ. ಯೋಗಾಭ್ಯಾಸ ಗಳನ್ನು ಮಾಡುವಾಗ ಮಿತವಾದ ಶಕ್ತಿ ವ್ಯಯವಾದರೆ, ವ್ಯಾಯಾಮಗಳನ್ನು ಮಾಡುವಾಗ ಹೆಚ್ಚಿನ ಶಕ್ತಿಯ ವ್ಯಯವಾಗುತ್ತದೆ. ಯೋಗಾಭ್ಯಾಸ ಗಳು ಆಯಾಸವನ್ನುಂಟು ಮಾಡದೆ, ದೇಹವನ್ನು ಹಗುರವಾಗಿಸುತ್ತದೆ. ಇದಕ್ಕೆ ವಿಪರೀತವಾಗಿ ವ್ಯಾಯಾಮಗಳು, ಆಯಾಸದ ಜತೆಗೆ ದೈಹಿಕ ಅಸ್ವಸ್ಥತೆ ಯನ್ನುಂಟು ಮಾಡುತ್ತವೆ.
ಯೋಗಾಭ್ಯಾಸಗಳಿಗೆ ವಯಸ್ಸು ತಡೆಗೋಡೆಯಾಗಲಾರದು. ವಯಸ್ಸು ಹೆಚ್ಚಾದಂತೆ ವ್ಯಾಯಾಮ ಗಳನ್ನು ಮಾಡುವುದು ಕಷ್ಟ ವೆನಿಸುತ್ತದೆ. ಯೋಗಾಸನಗಳು, ಶಾರೀರಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಣೆಯ ಗುರಿ ಹೊಂದಿದರೆ, ವ್ಯಾಯಾಮಗಳು ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯ ಗುರಿ ಹೊಂದಿವೆ.
ಇಂದಿನ ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು ಐದು ಕೋಟಿಗೂ ಮಿಕ್ಕು ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಗಮನಾರ್ಹ ವಿಷಯವೆಂದರೆ, ಅಮೆರಿಕದಲ್ಲಿ ಯೋಗ ವಾಣಿಜ್ಯ ಉದ್ಯಮವಾಗಿದೆ. ಯೋಗ ಸಾಧನೆಗೆ ಪೂರಕ ವಾಗಿರುವ ಯೋಗ ಪ್ಯಾಂಟ್ಸ್, ಯೋಗ ಮ್ಯಾಟ್, ಯೋಗ ಕ್ಲಬ್ಗಳು ಹೀಗೆ ಎಲ್ಲವೂ ವಾಣಿಜ್ಯೀಕರಣಗೊಂಡಿವೆ.
ಶಾಲೆಗಳಲ್ಲಿ, ಯೋಗಾ ಭ್ಯಾಸವನ್ನು ಕಡ್ಡಾಯಗೊಳಿಸುವುದು ಸೂಕ್ತ. ಶಾಲೆ ಗಳಲ್ಲಿ ಯೋಗ ಕಡ್ಡಾಯವಾದರೆ ಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆ. ಸರಿಯಾದ ಆಸನಗಳನ್ನು ಸರಿಯಾದ ಕ್ರಮಗಳಲ್ಲಿ ಮಾಡುವುದರಿಂದ ಮಕ್ಕಳಲ್ಲಿ ದೇಹಾಲಸ್ಯ ದೂರವಾಗಿ ಲವಲವಿಕೆ, ಉತ್ಸಾಹ, ಶುದ್ಧ ರಕ್ತ ಪರಿಚಲನೆ, ಉದ್ವೇಗರಹಿತ ಶಾಂತ ಮನಸ್ಥಿತಿ ಮೂಡುತ್ತವೆ.
ಯೋಗವನ್ನು ಕುರಿತು ಕೆಲವರಲ್ಲಿ, ಭಯ ಮತ್ತು ಭ್ರಮೆಗಳು ಮನೆ ಮಾಡಿವೆ. ಅಂತರಂಗದ ಕನ್ನಡಿ ಯಾದ ಯೋಗ ಹಿಂದೂ ಧರ್ಮವನ್ನು ಪ್ರಚುರಪಡಿಸುತ್ತದೆ ಎಂಬ ಅಪಾದನೆ, ಆಕ್ಷೇಪ, ಆರೋಪ ಗಳು ತೇಲಿ ಬರುತ್ತಿರುವುದು ವಿಪರ್ಯಾಸದ ಸಂಗತಿ. ಯೋಗ ಸಾಧನೆ ಚಿಂತನೆಯನ್ನಾ ಧರಿಸಿದ್ದೇ ಹೊರತು ಧರ್ಮವನ್ನಾಧರಿಸಿದ್ದಲ್ಲವೆಂಬ ಮಾತಿನಲ್ಲಿ ಸತ್ಯಾಂಶವಿಲ್ಲದಿಲ್ಲ.
ಯೋಗ ವ್ಯಕ್ತಿಯ ವಿಕಸನಕ್ಕೆ ಸಾಧನವೆಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳೇನೇ ಇರಲಿ, ಯೋಗಾಭ್ಯಾಸದ ಜನಪ್ರಿಯತೆ ಹೆಚ್ಚುತ್ತಲೇ ಇರುವುದು ಸಮಾಧಾನಕರ ಸಂಗತಿ. ಪ್ರಧಾನಿ ಮೋದಿಯವರು, ಅಭಿಪ್ರಾಯ ಪಡುವಂತೆ, ಭಿಯೋಗ ಪ್ರೀತಿ ಯನ್ನು ಧಾರೆಯೆರೆಯುತ್ತದೆ.
ಯೋಗದ ಮೂಲಕ ಏಕ ಭಾರತ, ಶ್ರೇಷ್ಠ ಭಾರತ ಎಂಬುದನ್ನು ಜಗತ್ತಿನ ಮುಂದೆ ನಾವು ಸಾದರ ಪಡಿಸಬಹುದು. ವಿಶ್ವಾದಾದ್ಯಂತ ಜನರು ಸ್ವಪ್ರೇರಣೆಯಿಂದ ಭಾಗಿಯಾಗಿರುವುದು ಯೋಗ ಶಕ್ತಿಯ ವಿಸ್ತರಣಶೀಲತೆಯನ್ನು ತೋರುತ್ತದೆ. ಹೀಗಾಗಿಯೇ ‘ವಸುಧೈವ ಕುಟುಂಬಕಮ್’ಗಾಗಿ ಯೋಗ ಅವಶ್ಯವಾಗಿದೆ. ಯೋಗಾಭ್ಯಾಸಗಳಿಂದ ಜಾಗತಿಕ ಆರೋಗ್ಯ ಸಮಸ್ಯೆಗಳು ಪರಿಹಾರವಾಗಿ, ವಿಶ್ವದೆಡೆ ಜನತೆ ಆರೋಗ್ಯ ವಂತರಾಗಲೆಂಬ ಸದಾಶಯ ಭಾರತೀಯರದು.
ಇಂದು ವಿಶ್ವ ಸಂಗೀತ ದಿನವೂ ಹೌದು
ಇಂದು ವಿಶ್ವ ಯೋಗ ದಿನಾಚರಣೆ ಅಲ್ಲದೆ, ವಿಶ್ವ ಸಂಗೀತ ದಿನವೂ ಹೌದು. ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಫ್ರಾನ್ಸ್ನಲ್ಲಿ 1982 ರಲ್ಲಿ ಪ್ರಾರಂಭಿಸಲಾಯಿತು. ಈಗ ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ಸಂಗೀತದ ಚೈತನ್ಯ ಮತ್ತು ಮಹತ್ವವನ್ನು ಗೌರವಿಸಲು ಇಂದು ವೃತ್ತಿಪರ ಮತ್ತು ಹವ್ಯಾಸಿ ಸಂಗೀತಗಾರರು ಸಾರ್ವಜನಿಕರಿಗಾಗಿ ಸಂಗೀತ ಕಚೇರಿಗಳನ್ನು ನಡೆಸುವುದು ರೂಢಿಯಲ್ಲಿದೆ.