N Cheluvarayaswamy: ಕೃಷಿಗೆ ನವಚೇತನ: ನಮ್ಮ ಸರಕಾರದ ಸಾಧನೆ
ರೈತರಿಗೆ ಸ್ವಾವಲಂಬನೆಯ ಜೀವನವನ್ನು ಒದಗಿಸುವುದರ ಜತೆಗೆ ಕೃಷಿಯನ್ನು ರಾಜ್ಯದ ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯನ್ನಾಗಿಸುವ ಗುರಿಯನ್ನು ನಮ್ಮ ಸರಕಾರ ಹೊಂದಿದೆ. ಈ ದೃಷ್ಟಿಯು ರೈತರಿಗೆ ಕೇವಲ ಆರ್ಥಿಕ ಬೆಂಬಲವನ್ನು ಮಾತ್ರವಲ್ಲ, ಆಧುನಿಕ ತಂತ್ರಜ್ಞಾನ, ಶಿಕ್ಷಣ ಮತ್ತು ಮಾರು ಕಟ್ಟೆ ಅವಕಾಶಗಳ ಮೂಲಕ ಅವರ ಜೀವನಮಟ್ಟವನ್ನು ಉನ್ನತೀಕರಿಸುವ ದೀರ್ಘ ಕಾಲೀನ ಯೋಜನೆ ಯನ್ನು ಒಳಗೊಂಡಿದೆ.


ಎನ್.ಚೆಲುವರಾಯಸ್ವಾಮಿ, ಕೃಷಿ ಸಚಿವರು, ಕರ್ನಾಟಕ ಸರಕಾರ
ಕರ್ನಾಟಕದ ಕಾಂಗ್ರೆಸ್ ಸರಕಾರವು ಕಳೆದ ಎರಡು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ನಾಯ ಕತ್ವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅವಿರತ ಬೆಂಬಲ ಮತ್ತು ನಿರಂತರ ಪ್ರೋತ್ಸಾಹವೇ ಕಾರಣವಾಗಿದೆ. ಕೃಷಿ ಇಲಾಖೆಯನ್ನು ಮುನ್ನಡೆಸಲು ನನಗೆ ಸಿಕ್ಕಿರುವ ಅವಕಾಶ ದಲ್ಲಿ ಅವರಿಬ್ಬರ ಮಾರ್ಗದರ್ಶನ ಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ರೈತರ ಆರ್ಥಿಕ ಸ್ಥಿರತೆ, ಸಮೃದ್ಧ ಜೀವನ, ಮತ್ತು ಕೃಷಿಯ ಆಧುನೀಕರಣವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡ ನಮ್ಮ ಸರಕಾರವು, ಇಂದಿರಾ ಗಾಂಧಿ ಯವರ ರೈತ ಕಲ್ಯಾಣದ ಕನಸನ್ನು ನನಸಾಗಿಸಲು ಬದ್ಧ ವಾಗಿದೆ.
ರೈತರಿಗೆ ಸ್ವಾವಲಂಬನೆಯ ಜೀವನವನ್ನು ಒದಗಿಸುವುದರ ಜತೆಗೆ ಕೃಷಿಯನ್ನು ರಾಜ್ಯದ ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯನ್ನಾಗಿಸುವ ಗುರಿಯನ್ನು ನಮ್ಮ ಸರಕಾರ ಹೊಂದಿದೆ. ಈ ದೃಷ್ಟಿಯು ರೈತರಿಗೆ ಕೇವಲ ಆರ್ಥಿಕ ಬೆಂಬಲವನ್ನು ಮಾತ್ರವಲ್ಲ, ಆಧುನಿಕ ತಂತ್ರಜ್ಞಾನ, ಶಿಕ್ಷಣ ಮತ್ತು ಮಾರುಕಟ್ಟೆ ಅವಕಾಶಗಳ ಮೂಲಕ ಅವರ ಜೀವನಮಟ್ಟವನ್ನು ಉನ್ನತೀಕರಿಸುವ ದೀರ್ಘ ಕಾಲೀನ ಯೋಜನೆಯನ್ನು ಒಳಗೊಂಡಿದೆ.
ಕೃಷಿ ಇಲಾಖೆಯನ್ನು ಆಧುನಿಕ ತಂತ್ರಜ್ಞಾನ, ನವೀನ ಯೋಜನೆಗಳು, ಮತ್ತು ರೈತರೊಂದಿಗಿನ ನೇರ ಸಂಪರ್ಕದ ಮೂಲಕ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ. ಈ ದಿಶೆಯಲ್ಲಿ, ಕಾಂಗ್ರೆಸ್ ಸರಕಾರ ರಾಜ್ಯದ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು, ಬೆಳೆ ವಿಮೆ, ರಸಗೊಬ್ಬರ ಪೂರೈಕೆ, ಮತ್ತು ಅತ್ಯಾಧುನಿಕ ಕೃಷಿ ಉತ್ಪನ್ನಗಳನ್ನು ಒದಗಿಸುವ ಮೂಲಕ ಕೃಷಿ ಯಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ.
ಇದನ್ನೂ ಓದಿ: Yagati Raghu Naadig Column: ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!
ರಾಜ್ಯ ಬಜೆಟ್ನಲ್ಲಿ ಕೃಷಿಗೆ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡುವ ಮೂಲಕ, ರೈತರಿಗೆ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವ ಭರವಸೆಯನ್ನು ಕಾಂಗ್ರೆಸ್ ಸರಕಾರವು ನೀಡಿದೆ. ಈ ಅನುದಾನವು ಕೃಷಿ ಯಾಂತ್ರೀಕರಣ, ಸಂಶೋಧನೆ, ಮತ್ತು ರೈತರಿಗೆ ತರಬೇತಿಯಂತಹ ಕಾರ್ಯ ಕ್ರಮಗಳಿಗೆ ಮಾರ್ಗವನ್ನು ಸುಗಮಗೊಳಿಸಿದೆ, ಇದು ರೈತರ ಉತ್ಪಾದಕತೆಯನ್ನು ಹೆಚ್ಚಿಸುವ ಜತೆಗೆ ಅವರ ಆದಾಯವನ್ನು ಸ್ಥಿರಗೊಳಿಸಿದೆ.
ಅಧಿಕಾರ ಸ್ವೀಕಾರದಿಂದಲೇ ಕೃಷಿ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಬಗ್ಗೆ ತೃಪ್ತಿಯಿದೆಯಾದರೂ, ಸಾಗಬೇಕಾದ ದೂರ ಬಹಳಷ್ಟಿದೆ. ಬಿತ್ತನೆ ಬೀಜ ಪೂರೈಕೆಯಲ್ಲಿ ಶೇ.91.5 ರಷ್ಟು ಪ್ರಗತಿ ಸಾಧಿಸಿರುವುದು ಒಂದು ದಾಖಲೆಯಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಬೀಜ ಕೊರತೆ ಉಂಟಾಗದಂತೆ ನೋಡಿಕೊಂಡಿರುವುದು ರೈತರಿಗೆ ದೊಡ್ಡ ಆಸರೆಯಾಗಿದೆ. ಈ ಸಾಧನೆಯೂ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಬೀಜಗಳನ್ನು ಒದಗಿಸುವ ಸರಕಾರದ ಬದ್ಧತೆ ಯನ್ನು ತೋರಿಸುವುದರೊಂದಿಗೆ ರೈತರಿಗೆ ಬಿತ್ತನೆಯ ಸಮಯದಲ್ಲಿ ಯಾವುದೇ ತೊಂದರೆ ಯಾಗದಂತೆ ರಕ್ಷಣೆ ನೀಡಿದೆ.
2023-24ರ ತೀವ್ರ ಬರಗಾಲದ ಸಂದರ್ಭದಲ್ಲಿ, ಕಾಂಗ್ರೆಸ್ ಸರಕಾರವು 18.65 ಲಕ್ಷ ರೈತರಿಗೆ 2,107.50 ಕೋಟಿ ರು. ಗಳ ಬೆಳೆ ವಿಮೆ ಪರಿಹಾರವನ್ನು ವಿಮಾ ಸಂಸ್ಥೆಗಳಿಂದ ಇತ್ಯರ್ಥಪಡಿಸಿತು. ಇದು ಕರ್ನಾಟಕದ ಕೃಷಿ ಇತಿಹಾಸದಲ್ಲಿ ಹೊಸ ಮೈಲಿಗಗಿದೆ. ಈ ಕ್ರಮವು ರೈತರಿಗೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ಬೆಂಬಲವನ್ನು ಒದಗಿಸಿತು. ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಗಳಲ್ಲಿ ನೆಟ್ಟೆ ರೋಗದಿಂದ ಸಂಕಷ್ಟಕ್ಕೊಳಗಾದ 2,80,154 ರೈತರ ಬ್ಯಾಂಕ್ ಖಾತೆಗೆ 223 ಕೋಟಿ ರು. ಫಸಲ್ ವಿಮಾ ಪರಿಹಾರವನ್ನು ತ್ವರಿತವಾಗಿ ಜಮಾ ಮಾಡಲಾಯಿತು.
ಇ-ಸ್ಯಾಪ್ ಎನ್ನುವ ತಂತ್ರeನದ ಮೂಲಕ ಬೆಳೆಗಳ ಕೀಟ/ರೋಗ ಬಾಧೆಯನ್ನು ನಿಖರವಾಗಿ ಗುರುತಿಸಿ, ಸೂಕ್ತ ಪರಿಹಾರ ಕಂಡುಹಿಡಿಯಲಾಗಿದೆ, ಇದು ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿ ಕೊಳ್ಳುವ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ತಂತ್ರಜ್ಞಾನವು ರೈತರಿಗೆ ತಮ್ಮ ಬೆಳೆಗಳನ್ನು ರಕ್ಷಿಸಲು ಅಗತ್ಯವಾದ ಜ್ಞಾನ ಮತ್ತು ಸಂಪನ್ಮೂಲಗಳನ್ನು ಒದಗಿಸಿದೆ.
ಕೃಷಿ ಯಾಂತ್ರೀಕರಣವು ಕಾಂಗ್ರೆಸ್ ಸರಕಾರದ ಪ್ರಮುಖ ಆದ್ಯತೆಯಾಗಿದೆ. 2023-24ರಲ್ಲಿ 3,53,349 ರೈತರಿಗೆ 469.22 ಕೋಟಿ ರು. ಗಳ ಸಹಾಯಧನವನ್ನು ಒದಗಿಸಲಾಗಿದ್ದು, ಹೈಟೆಕ್ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆಗೆ 41.38 ಕೋಟಿ ರು. (2023-24) ಮತ್ತು 86.48 ಕೋಟಿ (2024-25) ಖರ್ಚು ಮಾಡ ಲಾಗಿದೆ. ಈ ಯೋಜನೆಗಳು ರೈತರ ಕೃಷಿ ಕಾರ್ಯಗಳನ್ನು ಸುಗಮಗೊಳಿಸಿ, ಶ್ರಮವನ್ನು ಕಡಿಮೆ ಮಾಡಿ, ಉತ್ಪಾದಕತೆಯನ್ನು ಗಣನೀಯವಾಗಿ ಹೆಚ್ಚಿಸಿವೆ.
ಕೃಷಿ ಭಾಗ್ಯ ಯೋಜನೆಯಲ್ಲಿ 300 ಕೋಟಿಗಳನ್ನು (202-24ರಲ್ಲಿ 100 ಕೋಟಿ, 2024-25ರಲ್ಲಿ 200 ಕೋಟಿ) ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಇದು ರೈತರಿಗೆ ನೀರಾವರಿ, ಯಾಂತ್ರೀಕರಣ, ಮತ್ತು ಇತರ ಸಂಪನ್ಮೂಲಗಳನ್ನು ಒದಗಿಸಿದೆ. ಕೃಷಿ ನವೋದ್ಯಮ ಯೋಜನೆ ಯಡಿ 40ಕ್ಕೂ ಹೆಚ್ಚು ನವೋದ್ಯಮಗಳನ್ನು ಸ್ಥಾಪಿಸಲಾಗಿದ್ದು, ಯುವ ರೈತರಿಗೆ ಕೃಷಿ ಆಧಾರಿತ ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಸಿರಿಧಾನ್ಯ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಮಟ್ಟದ ಮೇಳಗಳನ್ನು ಆಯೋಜಿಸಲಾಗಿದೆ.
ಇದು ಕರ್ನಾಟಕದ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸುವಂತೆ ಮಾಡಿದೆ. ಈ ಮೇಳಗಳು ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಹೊಸ ಮಾರುಕಟ್ಟೆ ಅವಕಾಶಗಳನ್ನು ತೆರೆಯಲು ಸಹಾಯ ಮಾಡಿವೆ. ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ರೈತ ಕರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯ ಬೀಜ ನಿಗಮವು 2023-24ರಲ್ಲಿ 2.03 ಲಕ್ಷ ಕ್ವಿಂಟಾಲ್ ಮತ್ತು 2024-25ರಲ್ಲಿ 2.45 ಲಕ್ಷ ಕ್ವಿಂಟಾಲ್ ವಿವಿಧ ಬೆಳೆಗಳ ಬೀಜೋತ್ಪಾದನೆ ಮಾಡಿದ್ದು, ಇಕ್ರಿಸ್ಯಾಟ್ ಸಂಸ್ಥೆಯೊಂದಿಗಿನ ಒಡಂಬಡಿಕೆಯ ಮೂಲಕ ತೊಗರಿ, ಕಡಲೆ, ಜೋಳ, ನೆಲಗಡಲೆ, ಸಜ್ಜೆ, ಮತ್ತು ಸಿರಿಧಾನ್ಯ ಬೆಳೆಗಳಲ್ಲಿ ಹೊಸ ತಳಿಗಳನ್ನು ಪರಿಚಯಿಸಲಾಗಿದೆ.
ಈ ಹೊಸ ತಳಿಗಳು ರೈತರಿಗೆ ಉತ್ತಮ ಇಳುವರಿಯನ್ನು ಒದಗಿಸಿದ್ದು, ಅವರ ಆದಾಯವನ್ನು ಸ್ಥಿರ ಗೊಳಿಸಿವೆ. ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಚುನಾವಣೆಯನ್ನು 14 ವರ್ಷಗಳ ಬಳಿಕ ಯಶಸ್ವಿಯಾಗಿ ನಡೆಸಲಾಗಿದೆ, ಇದು ರೈತರ ಪ್ರಾತಿನಿಧ್ಯವನ್ನು ಬಲಪಡಿಸಿದೆ.
ಮಂಡ್ಯದಲ್ಲಿ ಸ್ಥಾಪನೆಯಾಗಲಿರುವ ಕೃಷಿ ವಿಶ್ವವಿದ್ಯಾಲಯಕ್ಕೆ ಬಜೆಟ್ ಘೋಷಣೆಯ ಒಂದು ವರ್ಷದೊಳಗೆ ಚಾಲನೆ ದೊರೆತಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ನಿಂದ ಅನುಮೋದನೆ ಪಡೆಯಲಾಗಿದೆ. ಈ ವಿಶ್ವವಿದ್ಯಾಲಯವು ಕೃಷಿ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯ ಮೂಲಕ ರೈತರಿಗೆ ಆಧುನಿಕ ಜ್ಞಾನವನ್ನು ಒದಗಿಸಲಿದೆ. ಕರ್ನಾಟಕದ ಕೃಷಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಬೆಂಬಲಿಸುತ್ತದೆ.
ಜಿಲ್ಲಾ ಪ್ರವಾಸ ಕೈಗೊಳ್ಳುವ ಮೂಲಕ ರೈತರೊಂದಿಗೆ ನೇರ ಸಂವಾದವನ್ನು ನಡೆಸಲಾಗುತ್ತಿದೆ, ಅವರ ಅಹವಾಲುಗಳನ್ನು ಆಲಿಸಿ ತಕ್ಷಣ ಪರಿಹಾರ ಕಲ್ಪಿಸಲಾಗಿದೆ. ಮಂಡ್ಯದ ಐತಿಹಾಸಿಕ ಮೈಶುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ 50 ಕೋಟಿ ರು.ಗಳ ಅನುದಾನವನ್ನು ಒದಗಿಸಲಾಗಿದ್ದು. 30 ಮೆಗಾವ್ಯಾಟ್ ಟಬೊರ್ ಜನರೇಟನರ್ ಪ್ರಾಯೋಗಿಕ ಚಾಲನೆಯನ್ನು ಮಾಡಲಾಗಿದೆ. ಈ ಕ್ರಮವು ಮಂಡ್ಯ ಜನತೆಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಿದ್ದು, ಜಿಲ್ಲೆಯ ಕಬ್ಬು ಬೆಳೆಗಾರರ ಆರ್ಥಿಕ ಪ್ರಗತಿಗೆ ಬೆಂಬಲವಾಗಿ ನಿಲ್ಲುವ ನಮ್ಮ ಸರಕಾರದ ಗುರಿಗೆ ಸಾಕ್ಷಿಯಾಗಿದೆ.
ರಾಜ್ಯ ಬಜೆಟ್ನಲ್ಲಿ ಕೃಷಿಗೆ ಸಿಂಹಪಾಲು ಒದಗಿಸಲಾಗಿದೆ. ೨೦೨೩-೨೪ರ ಬಜೆಟ್ನಲ್ಲಿ ಕೃಷಿ ಭಾಗ್ಯ ಯೋಜನೆಗೆ ೧೦೦ ಕೋಟಿ, ಕೃಷಿ ನವೋದ್ಯಮಕ್ಕೆ ೧೦ ಕೋಟಿ, ಅತ್ಯಾಧುನಿಕ ಕಟಾವು ಯಂತ್ರ ಕೇಂದ್ರಗಳಿಗೆ ೫೦ ಕೋಟಿ, ಮತ್ತು ಕೇಂದ್ರ ಪ್ರಕೃತಿ ವಿಕೋಪ ನಿಧಿಯಿಂದ ಮಣ್ಣು ಮತ್ತು ನೀರು
ಸಂರಕ್ಷಣಾ ಕೇಂದ್ರಗಳಿಗೆ ೧೦೦ ಕೋಟಿ ರು.ಗಳನ್ನು ಮೀಸಲಿಡಲಾಗಿತ್ತು. ೨೦೨೪-೨೫ರ ಬಜೆಟ್ನಲ್ಲಿ ಕೃಷಿ ಭಾಗ್ಯಕ್ಕೆ ೨೦೦ ಕೋಟಿ ರು., ಸಮುದಾಯ ಬೀಜ ಬ್ಯಾಂಕ್ಗಳ ಸ್ಥಾಪನೆ, ಆಹಾರ ಬ್ಯಾಂಕ್ಗಳ ಸ್ಥಾಪನೆ, ೫,೦೦೦ ಸಣ್ಣ ಸರೋವರಗಳ ನಿರ್ಮಾಣ, ಸ್ಟಾಟ್ ಅಪ್ಗಳಿಗೆ ಉತ್ತೇಜನ ಮತ್ತು ಕೃಷಿ ಹಾಗೂ ಆರೋಗ್ಯ ವಿeನದ ಸುಧಾರಣೆಗೆ ಆಧುನಿಕ ಜೀನ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ ಅನುದಾನವನ್ನು ಒದಗಿಸಲಾಗಿದೆ.
ಕಾಂಗ್ರೆಸ್ ಸರಕಾರವು ಕೇವಲ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳೊಂದಿಗೆ ಅಭಿವೃದ್ಧಿಯ ಗ್ಯಾರಂಟಿಯನ್ನೂ ಜನರಿಗೆ ನೀಡಿದೆ. ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ, ಕೃಷಿ ಕ್ಷೇತ್ರವು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ರೈತರಿಗೆ ಸ್ವಾವಲಂಬನೆಯ ಜೀವನವನ್ನು ಒದಗಿಸಿದೆ. ಈ ಸಾಧನೆಗಳು ಕರ್ನಾಟಕದ ರೈತರಿಗೆ ಸಮೃದ್ಧ ಭವಿಷ್ಯದ ಭರವಸೆಯನ್ನು ಮೂಡಿಸಿದ್ದು, ರಾಜ್ಯ ವನ್ನು ಕೃಷಿಯಲ್ಲಿ ಮಾದರಿಯಾಗಿ ಪರಿವರ್ತಿಸುವ ಕಾಂಗ್ರೆಸ್ ಸರಕಾರದ ದೃಢಸಂಕಲ್ಪವನ್ನು ಎತ್ತಿಹಿಡಿಯುತ್ತವೆ.
ಸರಕಾರವು ರೈತರ ಏಳಿಗೆ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ, ಕೃಷಿಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಮೂಲಕ ರೈತರಿಗೆ ಸ್ಥಿರ ಆದಾಯವನ್ನು ಖಾತ್ರಿಪಡಿಸುವ ಗುರಿಯನ್ನು ಸರಕಾರ ಹೊಂದಿದೆ. ಡಿಜಿಟಲ್ ಕೃಷಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಮತ್ತು ಡ್ರೋನ್ ಆಧಾರಿತ ಕೃಷಿ ವಿಧಾನಗಳನ್ನು ರೈತರಿಗೆ ಒದಗಿಸುವ ಮೂಲಕ ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಯೋಜನೆಗಳನ್ನು ರೂಪಿಸ ಲಾಗಿದೆ.
ಜತೆಗೆ, ಸಮಗ್ರ ಕೃಷಿ ಪದ್ಧತಿಗಳನ್ನು ಉತ್ತೇಜಿಸಿ, ಸಾವಯವ ಕೃಷಿಯನ್ನು ವ್ಯಾಪಕಗೊಳಿಸುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಆರೋಗ್ಯಕರ ಆಹಾರ ಉತ್ಪಾದನೆಗೆ ಒತ್ತು ನೀಡಲಾಗುವುದು. ಈ ಎಲ್ಲ ಕ್ರಮಗಳ ಮೂಲಕ ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷ ಆರ್ಥಿಕ ಸಹಾಯ, ತರಬೇತಿ, ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು.
ಕೃಷಿ ಶಿಕ್ಷಣವನ್ನು ಗ್ರಾಮೀಣ ಯುವಕರಿಗೆ ತಲುಪಿಸುವ ಮೂಲಕ ಮುಂದಿನ ಪೀಳಿಗೆಯ ರೈತರನ್ನು ಸಿದ್ಧಪಸುವುದು ನಮ್ಮ ಗುರಿಯಾಗಿದೆ. ಈ ಎಲ್ಲಾ ಯೋಜನೆಗಳ ಮೂಲಕ, ಕರ್ನಾಟಕವನ್ನು ಕೃಷಿಯಲ್ಲಿ ರಾಷ್ಟ್ರದ ಪ್ರಮುಖ ರಾಜ್ಯವನ್ನಾಗಿಸುವ ಜತೆಗೆ ರೈತರಿಗೆ ಸಮೃದ್ಧ, ಸ್ವಾಭಿಮಾನಿ ಜೀವನವನ್ನು ಒದಗಿಸುವುದು ಸರಕಾರದ ದೃಢಸಂಕಲ್ಪವಾಗಿದೆ.