ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಹರಿ ಪರಾಕ್‌

columnist

info78@vishwavani.news

ರಾಜ್ಯಮಟ್ಟದ ಕನ್ನಡ ಪತ್ರಿಕೆಯಾದ ವಿಶ್ವವಾಣಿಯ ʼತುಂಟರಗಾಳಿʼಯ ಅಂಕಣಕಾರ ಹರಿ ಪರಾಕ್ ಅವರು ಸಿನಿಮಾ ಪತ್ರಕರ್ತರಾಗಿ ಹದಿನೈದು ವರ್ಷಗಳ ಅನುಭವ ಹೊಂದಿದ್ದಾರೆ. 800ಕ್ಕೂ ಹೆಚ್ಚು ಸಿನಿಮಾಗಳ ವಿಮರ್ಶೆ, ಸಿನಿಮಾ ಪುರವಣಿಯ ಹೊಣೆ ಹೊತ್ತು ಹಲವಾರು ಸಿನಿಮಾ ಸಂಬಂಧಿತ ಲೇಖನಗಳನ್ನು ಬರೆದಿದ್ದು, ಚಿತ್ರರಂಗದ ಸಾಧಕರನ್ನು, ಎಲೆ ಮರೆಕಾಯಿಗಳನ್ನು ಸಂದರ್ಶನಗಳನ್ನು ಮಾಡಿದ ಅನುಭವ ಹೊಂದಿದಾರೆ. ಕನ್ನಡಪ್ರಭ, ವಿಶ್ವವಾಣಿ, ಪ್ರಜಾ ಟಿವಿಗಳಲ್ಲಿ ಕೆಲಸ. ಕನ್ನಡಪ್ರಭದ ಪಂಚಕಜ್ಜಾಯ ಅಂಕಣದ ಮೂಲಕ ಅಂಕಣಕಾರರಾಗಿ ಪರಿಚಿತರು. ನಂತರ ಹರಿಕಥೆ, ತುಂಟರಗಾಳಿ ಹೆಸರಿನಲ್ಲಿ ಇದೇ ಅಂಕಣ ಮುಂದುವರಿಕೆ. ಕನ್ನಡ ಸಿನಿಮಾರಂಗದಲ್ಲೂ ಗೀತ ಸಾಹಿತಿ, ಸಂಭಾಷಣೆಕಾರರಾಗಿ ಕೆಲಸ ಮಾಡಿರುತ್ತಾರೆ.

Articles
Hari Paraak Column: ಕರೋನಾ ಪ್ಯಾರ್‌ ಹೈ !

ಕರೋನಾ ಪ್ಯಾರ್‌ ಹೈ !

ಅತ್ತ ಸಿಎಂ ಸಿದ್ರಾಮಯ್ಯರನ್ನು ನೋಡಿದ್ರೆ ಸತ್ತವರಿಗೆ ‘ರೆಸ್ಟ್ ಇನ್ ಪೀಸ್’ ಎಂದು ಹೇಳಿ ಸುಮ್ಮನಾಗದೆ, ಸಿಕ್ಕ ಸಿಕ್ಕವರನ್ನ ‘ಅರೆ’ ಮಾಡುತ್ತಿದ್ದಾರೆ. ಸಸ್ಪೆಂಡ್ ಮಾಡುತ್ತಿದ್ದಾರೆ. ಕಾಲ್ತುಳಿತ ಆಗಿದ್ದು ಯಾರ ತಪ್ಪು ಅಂತ ಪ್ರಶ್ನೆ ಬಂದ್ರೆ, ನೀರಲ್ಲಿ ಆಳ ಗೊತ್ತಿಲ್ಲದೆ ಈಜೋಕೆ ಹೋಗಿ ಮುಳುಗಿ ಸತ್ತವರಿಗೂ ಇವರಿಗೂ ಏನೂ ವ್ಯತ್ಯಾಸ ಇಲ್ಲ.

Hari Paraak Column: ಕಮಲ್‌ ಹಸನ್‌ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?

ಕಮಲ್‌ ಹಸನ್‌ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?

ಸಿನಿಮಾ ನೋಡೋ ಸಾಮಾನ್ಯ ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿದ್ದೀರಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು. ಅಂದಿನ ಬಂಗಾ ರದ ಮನುಷ್ಯ, ನಾಗರಹಾವು ಚಿತ್ರಗಳಿಂದ ಹಿಡಿದು ನಂತರದ ನಂಜುಂಡಿ ಕಲ್ಯಾಣ, ರಾಮಾಚಾರಿ, ಯಜಮಾನ, ಜನುಮದ ಜೋಡಿ, ಮುಂಗಾರು ಮಳೆಯಂಥ ಸಿನಿಮಾ ಗಳನ್ನು, ‘ಅಯ್ಯೋ, ಕಡಿಮೆ ಬಜೆಟ್‌ನಲ್ಲಿ ಮಾಡಿದ್ದೀರಾ’ ಅಂತ ಅವನು ಯಾವತ್ತೂ ತಿರಸ್ಕಾರ ಮಾಡಿಲ್ಲ.

Hari Paraak Column: ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ

ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ

ಇಲ್ಲಿ ಸಿನಿಮಾ ಬಿಡುಗಡೆ ಮಾಡುವ ಬುದ್ಧಿವಂತ ನಿರ್ದೇಶಕರ ಸಿನಿಮಾಗಳೂ ಈ ಟೆಕ್ನಿಕ್‌ಗೆ ಹೊರತಾ ಗಿಲ್ಲ. ಹಾಗಾಗಿ ಇಂಥ ಚಿತ್ರಗಳು ನಮ್ಮಲ್ಲಿಯೂ 100 ದಿನ ಓಡಬೇಕು. ಇಲ್ಲದಿದ್ದರೆ ಪಾಪ ಆ ಸಿನಿಮಾಗಳ ಮರ್ಯಾದೆ ಹೋಗುತ್ತಲ್ಲ. ಹಾಗಾಗಿ, ಜನ ಬರಲಿ, ಬರದೇ ಇರಲಿ ಇಂಥ ಚಿತ್ರಗಳನ್ನು 100 ದಿನ ಓಡಿಸ ಬೇಕು ಎಂದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ರಾಜ್ಯದ ಚಿತ್ರಮಂದಿರಗಳಿಗೆ ಸರಕಾರ ಆದೇಶ ಹೊರಡಿ ಸಬೇಕಿದೆ.

Hari Paraak Column: ಟ್ರಂಪ್‌ ʼಕ್ರೆಡಿಟ್‌ʼ ತಗೊಂಡ್ರೆ ಅದು ಅಮೆರಿಕ ʼಸಾಲʼ ತಗೊಂಡಂತೆ

ಟ್ರಂಪ್‌ ʼಕ್ರೆಡಿಟ್‌ʼ ತಗೊಂಡ್ರೆ ಅದು ಅಮೆರಿಕ ʼಸಾಲʼ ತಗೊಂಡಂತೆ

ನಿರ್ಮಾಪಕ ಅವನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್‌ಶೀಟ್ ಕೊಡು ಅಂತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ನಾಯಕಿಗೆ ಕೇಳೋದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗುತ್ತದೆ. ಇಷ್ಟೆ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ

Hari Paraak Column: ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಒಂದು ಮಧ್ಯಾಹ್ನ ಕ್ಯೂಟ್ ನಾಯಿಮರಿಯೊಂದು ಅಷ್ಟೇ ಕ್ಯೂಟ್ ಆಗಿರೋ ಹೇಮಾ ಮನೆಗೆ ಬಂತು. ಬಾಗಿಲ ಹತ್ರನೇ ನಿಂತ್ಕಂಡಿದ್ದ ನಾಯಿಮರಿಯ ತಲೆ ಸವರಿದಳು ಹೇಮಾ, ನಾಯಿ ಮೆಲ್ಲನೆ ಮನೆಯೊಳಗೆ ಬಂತು. ಆ ಕಡೆ, ಈ ಕಡೆ ನೋಡಿ ಒಂದು ಮೂಲೆಯಲ್ಲಿ ಮಲಗಿ ಬಿಟ್ಟಿತು. ಒಂದೆರಡು ಗಂಟೆಗಳಾದ ಮೇಲೆ ಎದ್ದು ನಿಂತ ನಾಯಿಯನ್ನು ನೋಡಿ ಹೇಮಾ ಬಾಗಿಲು ತೆರೆದಳು. ಅವಳನ್ನೇ ಹಿಂಬಾಲಿಸಿದ ನಾಯಿ ಬಾಗಿಲು ತೆರೆದ ಕೂಡಲೇ ಹೊರಟು ಹೋಯಿತು.

Hari Paraak Column: ಸೋನು ನಿಗಮ್‌ ಹಾಡು ಮಾತು

ಸೋನು ನಿಗಮ್‌ ಹಾಡು ಮಾತು

ಸ್ವಂತ ಪ್ರತಿಭೆಯಿಂದ ದೊಡ್ಡ ಹೆಸರು ಮಾಡಿದವರು. ಕನ್ನಡ ಹಾಡು ಬೇಕು ಅಂತ ಕೇಳಿದವರು ಹೇಗೆ ಕೇಳಿದರು ಅನ್ನೋದಕ್ಕೂ ಒಂದು ವಿಡಿಯೋ ಮಾಡಿ ಹಾಕಿದ್ದಾರೆ ಸೋನು. ಕನ್ನಡ ಹಾಡು ಹಾಡಿ ಅಂತ ಕೇಳೋದಕ್ಕೂ ಹೆದರಿಸೋ ದಕ್ಕೂ ವ್ಯತ್ಯಾಸ ಇದೆ ಅಂತ ಎಕ್ಸ್‌ ಪ್ರೆಶನ್ ಸಮೇತ ತೋರಿಸಿದ್ದಾರೆ.

Hari Paraak Column: ʼಕಾಮಿಡಿ ವಿತ್‌ ಕಪಿಲ್ʼ ಕಾರ್ಯಕ್ರಮದ ಕಂಟೆಂಟ್‌ -ʼಕಪಿಲʼ ವಸ್ತು

ʼಕಾಮಿಡಿ ವಿತ್‌ ಕಪಿಲ್ʼ ಕಾರ್ಯಕ್ರಮದ ಕಂಟೆಂಟ್‌ -ʼಕಪಿಲʼ ವಸ್ತು

ಪ್ರಾಣಿಪ್ರಿಯರಾಗಿರುವ ದರ್ಶನ್ ಅವರು ಇದೇ ಸಂದರ್ಭದಲ್ಲಿ ತಮ್ಮ ನಾಯಕತ್ವದಲ್ಲಿ ಬರಲಿರುವ ‘ಗಂಧದಗುಡಿ ಪಾರ್ಟ್-3’ ಸಿನಿಮಾ ವನ್ನು ಅನೌನ್ಸ್ ಮಾಡಿದರು. ಹಾಗಾಗಿ ಡಾ.ರಾಜ್‌ಕುಮಾರ್ ಫ್ಯಾಮಿಲಿಗೂ ದರ್ಶನ್ ಅವರಿಗೂ ಆಗಿಬರೋದಿಲ್ಲ ಎಂಬ ಹಲವರ ನಂಬಿಕೆಗಳಿಗೆ ತೆರೆಬಿದ್ದಿದೆ.... ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮ ಮುಗಿಸಿ ಸುಸ್ತಾಗಿ ನಿನ್ನೆ ರಾತ್ರಿ 8 ಗಂಟೆಗೇ ಮಲಗಿದಾಗ ಹಿಂಗೆಲ್ಲ ಕನಸು ಬಿತ್ತು!

Hari Paraak Column: ಬಸವಣ್ಣ ʼಜಾತಿನ ಲೆಕ್ಕಕ್ಕೇ ಇಡಬೇಡಿʼ ಅಂದ್ರು, ಇವ್ರ್‌ ನೋಡಿದ್ರೆ ಜಾತಿ ಲೆಕ್ಕ ಹಾಕ್ತಾ ಇದ್ದಾರೆ

ಬಸವಣ್ಣ ʼಜಾತಿನ ಲೆಕ್ಕಕ್ಕೇ ಇಡಬೇಡಿʼ ಅಂದ್ರು, ಇವ್ರ್‌ ನೋಡಿದ್ರೆ...

ಹಾಗೆಯೇ ಯಕ್ಷಗಾನದ ಗಂಧಗಾಳಿ ಇಲ್ಲದವರು ಈ ಸಿನಿಮಾ ವಿಮರ್ಶೆ ಮಾಡುವುದೂ ತರವಲ್ಲ. ಯಾಕಂದ್ರೆ ಆ ಬಗ್ಗೆ ಜ್ಞಾನವೇ ಇಲ್ಲದೆ ಈ ಕೆಟಗರಿಯ ಸಿನಿಮಾವನ್ನು ಅಳೆಯುವುದು ಸರಿಯಲ್ಲ. ಆದರೆ ಅದನ್ನೂ ಮೀರಿ ‘ಎಐ’ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಇದ್ದಾರೆ ಮತ್ತು ಶಿವರಾಜ್‌ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಕಾರಣಕ್ಕಾದರೂ ಎಲ್ಲ ಬಗೆಯ ಕನ್ನಡಿಗರು ಈ ಸಿನಿಮಾ ನೋಡಲು ಕಾರಣಗಳಂತೂ ಇವೆ

Hari Paraak Column: ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

ಬ್ರೆಡ್‌ ಅರ್ನ್‌ ಮಾಡೋಕೆ ʼಬಟರ್ʼ ಹಚ್ಚಲೇಬೇಕಾ ?

“ನಾನು ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ ಅವರಿಗಿಂತ ಮುಂಚೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಬಂದವನು" ಅಂತ ಹೇಳಿದ್ದಾರೆ. ಮತ್ತೂ ಮುಂದುವರಿದು, “ಕನ್ನಡ ಚಿತ್ರರಂಗ ನನಗೆ ಕೊಡಬೇಕಾದ ಬೆಲೆ ಕೊಟ್ಟಿಲ್ಲ" ಎಂದಿ ದ್ದಾರೆ. ಇವೆರಡು ಬೇರೆ ಬೇರೆ ಹೇಳಿಕೆಗಳಾದರೆ ತೊಂದರೆ ಇಲ್ಲ. ಆದರೆ ಸಂದರ್ಶನ ಮಾಡಿದ ಯುಟ್ಯೂ ಬ್ ಚಾನೆಲ್ ಇವೆರಡನ್ನೂ ಸೇರಿಸಿ ಅದನ್ನು ಪ್ರಕಟ ಮಾಡಿತ್ತು

Hari Paraak Column: ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ನಾವೇನ್‌ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?

ಪ್ರತಿ ವಾರ ಏಳೆಂಟು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರ ಮಂದಿರಗಳಿಂದ ಮಾಯವಾಗುತ್ತಿವೆ. ಹೋಗ್ಲಿ, ಒಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೋಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಒಟಿಟಿಗೆ ಬರಲ್ಲ.

Hari Paraak Column: ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ? ʼಹೈದರಾಬಾದ್‌ ಕರ್ನಾಟಕʼ ಕ್ಕೆ

ಎಸ್‌ʼಆರ್‌ʼಎಚ್‌, ಆರ್‌ಸಿಬಿ ಮ್ಯಾಚ್‌ ಟೈ ಆದ್ರೆ ಪ್ರಶಸ್ತಿ ಯಾರಿಗೆ ?

ಪಾಪ ಅವರೇನೂ ಕರ್ಣನ ಥರ ‘ತೊಟ್ಟ ಬಾಣ ತೊಡಲ್ಲ’ ಅಂತ ಶಪಥ ಮಾಡಿಲ್ಲ. ಹಾಗಾಗಿ ಮತ್ತೆ ಅದೇ ಹಳೆಯ ಭಟ್ಟರ ಡೈರೆಕ್ಷನ್ ಕ್ಯಾಪ್ ಅನ್ನು ತೊಟ್ಟು ಈ ಸಿನಿಮಾ ಮಾಡಿದ್ದಾರೆ. ಈ ಕಾರಣಕ್ಕೆ, ‘ಗರಡಿ’, ‘ಕರಟಕ ದಮನಕ’ ಚಿತ್ರಗಳನ್ನ ನೋಡಿ “ಏನ್ ಭಟ್ರೇ, ಇತ್ತೀಚೆಗೆ ಕಾಣಿಸ್ತಾನೇ ಇಲ್ಲ" ಅಂತ ಪ್ರೀತಿಯ ದೂರು ಹೇಳಿದ ಪ್ರೇಕ್ಷಕರಿಗೆ ಮತ್ತೆ ರೆಗ್ಯುಲರ್ ಭಟ್ಟರು ಕಾಣಿಸಿಕೊಂಡಿ ದ್ದಾರೆ.

Hari Paraak Column: ಹನಿ ಹನಿ 'ಫ್ರೇಮ್‌' ಕಹಾನಿ

ಹನಿ ಹನಿ 'ಫ್ರೇಮ್‌' ಕಹಾನಿ

ಒಂದೊಮ್ಮೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕಿಳಿಯು ತ್ತಾರೆ. ಒಟ್ಟಿನಲ್ಲಿ ಫೇಸ್ ಬುಕ್‌ನಂಥ ಅಸುರಕ್ಷಿತ ಜಾಲತಾಣಗಳಲ್ಲಿ ಇಂಥ ಅನಿಷ್ಟಗಳಿಗೆ ಕೊನೆ ಇರೋ ದಿಲ್ಲ. ಇಂಥವರ ಬಗ್ಗೆ ಅದೆಷ್ಟು ತಲೆಕೆಡಿಸಿಕೊಳ್ಳೋಕಾಗುತ್ತೆ? ಒಂದೆರಡು ಸಲ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರಂತೆ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾ ಗಲ್ಲ ಅನ್ನೋದೇ ಇಂಥವರ ಭಂಡಧೈರ್ಯ.

Hari Paraak Column: ಮೇಕೆಗಳು ಮಾತಾಡೋ ಭಾಷೆ: ʼಆಡುʼ ಭಾಷೆ

ಮೇಕೆಗಳು ಮಾತಾಡೋ ಭಾಷೆ: ʼಆಡುʼ ಭಾಷೆ

‘ಗಜಪಡೆ’ ಅಂತ ತಮ್ಮನ್ನು ತಾವು ಕರೆದುಕೊಳ್ಳುವ, ಇತರರಿಂದ ಸೆಲೆಬ್ರಿಟೀಸ್ ಅಂತ ಕರೆಸಿ ಕೊಳ್ಳುವ ದರ್ಶನ್ ಅಭಿಮಾನಿಗಳ ಮೊನ್ನೆ ಇಬ್ಬಂದಿತನ ಆಗಿತ್ತು. ಅದಕ್ಕೆ ಕಾರಣ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ರೀ-ರಿಲೀಸ್ ಆಗಿದ್ದ ‘ಅಪ್ಪು’ ಚಿತ್ರ. ಸಹಜ ವಾಗಿ ಅಪ್ಪು ಅವರ 50ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಅನ್ನೋ ಸಕಾ ರಣಕ್ಕೆ ಪುನೀತ್ ಅಭಿಮಾನಿಗಳು ಅಪ್ಪು ಸಿನಿಮಾವನ್ನು ಬಿಡುಗಡೆ ಮಾಡಿಸಿ ನೋಡಿ ಸಂಭ್ರಮ ಪಡುತ್ತಿದ್ದರು

Hari Paraak Column: ಇರುವೆಗೆ ಸಿಕ್ಕದ ಸಕ್ಕರೆ- ಸೀಮೆಗಿಲ್ಲದ್ದು

ಇರುವೆಗೆ ಸಿಕ್ಕದ ಸಕ್ಕರೆ- ಸೀಮೆಗಿಲ್ಲದ್ದು

ನನ್ನ ಟ್ಯಾಲೆಂಟ್‌ಗೆ ಬೆಲೆ ಇಲ್ಲ ಅಂತ ಬೇಜಾರು. ಇಂಥವರಿಗೆ ನೆನಪಿದ್ದರೆ ಕೆ.ಮಾದೇಶ್ ಎಂಬ ನಿರ್ದೇಶಕರು ಕನ್ನಡ ಚಿತ್ರರಂಗ ದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವೆಲ್ಲವೂ ರಿಮೇಕ್ ಚಿತ್ರಗಳೇ. ಅವೆಲ್ಲವೂ ಸಾಕಷ್ಟು ಹಣ ಮಾಡಿದರೂ, ಅವರು ಎಂದೂ ಗ್ರೇಟ್ ನಿರ್ದೇಶಕ ಎನಿಸಿಕೊಳ್ಳಲಿಲ್ಲ ಮತ್ತು ಇವತ್ತು ಮಾದೇಶ್ ಅವರನ್ನು ಚಿತ್ರರಂಗ ಹೆಚ್ಚು ಕಮ್ಮಿ ಮರೆತೇ ಬಿಟ್ಟಿದೆ.

Hari Paraak Column: ಶಿವಕುಮಾರ ಅಂತ ಹೆಸರಿಟ್ಟುಕೊಂಡು ಶಿವನ ಪೂಜೆಗೆ ಹೋಗೋದೂ ತಪ್ಪಾ ?

ಶಿವಕುಮಾರ ಅಂತ ಹೆಸರಿಟ್ಟುಕೊಂಡು ಶಿವನ ಪೂಜೆಗೆ ಹೋಗೋದೂ ತಪ್ಪಾ ?

ನಾಟಕ ಚೆನ್ನಾಗಿಲ್ಲ ಅಂತ ಜನ ಬರದೇ ಇದ್ದಾಗ, ಅದರ ಮಾಲೀಕ ‘ಎಂಟ್ರಿ ಫ್ರೀ’ ಅಂತ ಮಾಡಿದ ನಂತೆ. ಆ ನಾಟಕ ಎಷ್ಟ್‌ ಕೆಟ್ಟದಾಗಿತ್ತು ಅಂತ ಅವನಿಗೂ ಗೊತ್ತಿತ್ತು. ಹಾಗಾಗಿ, ಜನ ಥಿಯೇಟರ್ ಒಳಗೆ ಹೋದ ಮೇಲೆ ಅಲ್ಲಿಂದ ಅರ್ಧಕ್ಕೇ ಎದ್ದು ಹೋಗಬೇಕು ಅಂದ್ರೆ ಮಾತ್ರ ಸಾವಿರ ರುಪಾ ಯಿ ಕೊಡ ಬೇಕು ಅಂತ ರೂಲ್ ಮಾಡಿದ್ನಂತೆ. ಈ ಚಿತ್ರದ ಕಥೆಯೂ ಒಂಥರಾ ಆ ನಾಟಕದ ಕಥೆಗೆ ತೀರಾ ಹತ್ತಿರವಾಗಿದೆ ಅನಿಸಿದರೆ ಸುಳ್ಳಲ್ಲ ಬಿಡಿ

Hari Paraak Column: 144 ವರ್ಷಕ್ಕೊಮ್ಮೆ ಬರುತ್ತೆ ಅಂತ,  ಸೆಕ್ಷನ್ 144 ಜಾರಿ ಮಾಡೋಕಾಗುತ್ತಾ?

144 ವರ್ಷಕ್ಕೊಮ್ಮೆ ಬರುತ್ತೆ ಅಂತ, ಸೆಕ್ಷನ್ 144 ಜಾರಿ ಮಾಡೋಕಾಗುತ್ತಾ?

ಕೆ.ವಿ.ರಾಜು ಅವರ ಪ್ರಮುಖ 3 ಚಿತ್ರಗಳನ್ನು ಹೆಸರಿಸಿ ಅಂದ್ರೆ ಪ್ರೇಕ್ಷಕ ಖಂಡಿತಾ ‘ಹುಲಿಯಾ’ ನನ್ನು ನೆನಪಿಸಿಕೊಳ್ಳುತ್ತಾನೆ. ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವ ಕನ್ನಡ ಪ್ರೇಕ್ಷಕನ ಮನಸ್ಸಿನಲ್ಲಿ ಹುಲಿಯಾ ಚಿತ್ರಕ್ಕೆ ಅಮೂಲ್ಯ ಜಾಗವಿದೆ. ಇದರ ಕಥೆ ಯನ್ನು ನೋಡಿದರೆ, ‘ಈಗ ಪರಭಾಷಾ ಚಿತ್ರರಂಗದವರು ಮಾಡುತ್ತಿರೋ, ದೌರ್ಜನ್ಯಕ್ಕೆ ಒಳಗಾದವರ ಕಥೆಗಳನ್ನ ರಾಜು ಅಂದೇ ಮಾಡಿದ್ದರು’ ಅನಿಸಿದರೆ ತಪ್ಪಿಲ್ಲ

Hari Paraak Column: ಟೈರ್ಡ್‌ ಆಗಿಲ್ಲ, ರಿಟೈರ್‌ ಹೆಂಗೆ ಆಗ್ಲಿ ?

Hari Paraak Column: ಟೈರ್ಡ್‌ ಆಗಿಲ್ಲ, ರಿಟೈರ್‌ ಹೆಂಗೆ ಆಗ್ಲಿ ?

ಇತ್ತೀಚೆಗೆ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಹಾಗಂತ ಇದನ್ನು ನ್ಯೂಸ್ ಚಾನೆಲ್‌ಗಳು ಮಾಡು ತ್ತಿವೆ ಎಂದುಕೊಳ್ಳಬೇಡಿ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ.

Hari Paraak Column: ಜನರಿಗೆ ಬೇರೆಯದೊಂದು ʼಆಪ್‌ʼಶನ್‌ ಬೇಕಿತ್ತು !

ಜನರಿಗೆ ಬೇರೆಯದೊಂದು ʼಆಪ್‌ʼಶನ್‌ ಬೇಕಿತ್ತು !

ಅದರಲ್ಲೂ ಈ ದುಬಾರಿ ದುನಿಯಾದಲ್ಲಿ ಒಂದ್ ಫ್ಯಾಮಿಲಿ ಒಂದ್ ಸಿನಿಮಾ ನೋಡಬೇಕು ಅಂದರೆ ಸಾವಿರಾರು ರುಪಾಯಿ ಖರ್ಚು ಮಾಡಬೇಕಾಗುತ್ತೆ. ಹಾಗಾಗಿ ಸಾಮಾನ್ಯ ಪ್ರೇಕ್ಷಕ, ಒಂದು ಚಿತ್ರದ ಬಗ್ಗೆ ತುಂಬಾ ಒಳ್ಳೆ ಒಪೀನಿಯನ್ ಬಂದರೆ ಮಾತ್ರ ಥಿಯೇಟರ್ ಕಡೆ ಮುಖ ಹಾಕುತ್ತಾನೆ. ಇನ್ನು, ಜನ ಬರಲ್ಲ ಅಂತ ಚಿತ್ರಮಂದಿರಗಳಿಂದ ಬೇಗನೆ ಸಿನಿಮಾಗಳನ್ನ ತೆಗೀತಾರೆ. ಆದರೆ, ನಾವ್ ನೋಡಬೇಕು ಅಂದ್ರೆ ಆಗ್ಲೇ ಥಿಯೇಟರ್‌ನಿಂದ ತೆಗೆದುಬಿಟ್ಟಿದ್ದಾರೆ ಅಂತಾರೆ ಜನ.

Hari Paraak Column: ಕಾಡಲ್ಲಿದ್ರೂ ಹುಲೀನೇ, ರೋಡಲ್ಲಿದ್ರೂ ಹುಲೀನೇ

Hari Paraak Column: ಕಾಡಲ್ಲಿದ್ರೂ ಹುಲೀನೇ, ರೋಡಲ್ಲಿದ್ರೂ ಹುಲೀನೇ

ನಿಮ್ಮಲ್ಲಿ ಅದೇ ಕಾಲೇಜ್ ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್ ಸಿನಿಮಾಗಳು ಇದ್ದರೆ ಅವನ್ನೆಲ್ಲ ಮೂಲೆ ಗೆ ಎತ್ತಿಡಿ ಅಂತ ಆದೇಶಿಸಿಬಿಟ್ಟಿದ್ದಾರೆ. ಇವೆಲ್ಲ, ಇತ್ತೀಚೆಗೆ ದೊಡ್ಡ ಬಜೆಟ್‌ನ, ಮಿತಿ ಮೀರಿದ ಅಬ್ಬರ ಇರೋ ಸಿನಿಮಾಗಳು ಬಂದಿದ್ದರ ಸೈಡ್ ಎಫೆಕ್ಟ್. ಸಾಮಾನ್ಯ ಪ್ರೇಕ್ಷಕರು ಇಂಥ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು‌ ಆಶ್ಚರ್ಯವೇನಲ್ಲ

Hari Paraak Column: ದಕ್ಷಿಣ ಭಾರತದ ಹೌಸ್‌ ವೈಫ್‌ - ಸೌಟ್‌ ಇಂಡಿಯನ್

Hari Paraak Column: ದಕ್ಷಿಣ ಭಾರತದ ಹೌಸ್‌ ವೈಫ್‌ - ಸೌಟ್‌ ಇಂಡಿಯನ್

ಕಾಡಿನಲ್ಲಿ ನಡೆಯೋ ಕಥೆ ಆದ್ರೂ ‘ಕಾಡ ನೋಡ ಹೋದೆ ಕವಿತೆಯೊಡನೆ ಬಂದೆ’ ಎನ್ನುವಂಥ ಕವನ ವಾಸ ಇಲ್ಲಿಲ್ಲ. ಇಲ್ಲಿ ಬರೀ ವನವಾಸ. ಅದರ ಜತೆಗೆ ಭೂತ, ಪ್ರೇತಗಳ ಸಹವಾಸ. ವೀರಪ್ಪನ್‌ನ ಅಟ್ಟ ಹಾಸ. ಒಟ್ಟಾರೆ ಹೇಳೋದಾದ್ರೆ, ಕಾಡಿನಲ್ಲಿ ನಡೆಯುವ ಘಟನೆಗಳ ಸರಮಾಲೆ ಆಗಿರುವ ಫಾರೆಸ್ಟ್ ಅನ್ನೋ ಈ ಸಿನಿಮಾ, ಚಂದ್ರಮೋಹನ್ ಅವರು ಮಾಡಿರುವ ಕಾಡು-ವ ಸಿನಿಮಾ ಅಂತ ಖಂಡಿತಾ ಹೇಳಬಹುದು

Hari Paraak Column: ಅಧ್ಯಾತ್ಮ ಬಾ, ಬಾ ಅಂತಿತ್ತು!

Hari Paraak Column: ಅಧ್ಯಾತ್ಮ ಬಾ, ಬಾ ಅಂತಿತ್ತು!

ಹಾಗಾಗಿ ಅದರ ಸೀಕ್ವೆಲ್ ಮಾಡೋದು ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭ ಎಂದು ಕೊಂಡು ಸಂಪೂರ್ಣ ಸಪ್ಪೆ ಸಿನಿಮಾ ಮಾಡಿದ್ದಾರೆ ನಾಗಶೇಖರ್

Hari Paraak Column: ಆಫೀಸಿಗೆ ರಜೆ ಹಾಕಿದವ- ಕೆಲಸಕ್ಕೆ ಬರದೇ ಇರೋನು

Hari Paraak Column: ಆಫೀಸಿಗೆ ರಜೆ ಹಾಕಿದವ- ಕೆಲಸಕ್ಕೆ ಬರದೇ ಇರೋನು

ಅವುಗಳ ಗುಣಮಟ್ಟ ನೋಡಿಯೇ, ‘ಇಲ್ಲೇ ಇಂಥ ಸಿನಿಮಾಗಳನ್ನ ಆಯ್ಕೆ ಮಾಡ್ತಾರೆ ಅಂದ್ರೆ, ಇನ್ನು ಫಾರಿನ್ ಭಾಷೆಯ ಇನ್ನೆಷ್ಟು ಒಳ್ಳೆಯ ಸಿನಿಮಾಗಳನ್ನ ತೋರಿಸ್ತಾರೆ ಇವರು?’ ಅನ್ನೋ ಅಸಡ್ಡೆ ನಮ್ಮವರಿಗೆ ಇದ್ದೇ ಇದೆ.

Hari Paraak Column: ಹೋಮ್‌ ಮಿನಿಸ್ಟರ್‌ ಅಂದರೆ ವಸತಿ ಸಚಿವರಾ ?

Hari Paraak Column: ಹೋಮ್‌ ಮಿನಿಸ್ಟರ್‌ ಅಂದರೆ ವಸತಿ ಸಚಿವರಾ ?

ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಕೆಲವು ಚಿತ್ರಗಳು, ಥಿಯೇಟರ್‌ನಲ್ಲಿ ಬಿಡುಗಡೆ ಆದ ತಿಂಗಳಿಗೇ ಬಿಡುಗಡೆ ಯಾಗುತ್ತವೆ. ಆದರೆ ಅದು ‘ರೆಂಟ್ ಬೇಸಿಸ್’ ಮೇಲೆ. ಅದಕ್ಕೆ ನಮ್ಮ ಸಿನಿಪ್ರಿ ಯರು, “ವಾರ್ಷಿಕ ಚಂದಾದಾರರಾದ ಮೇಲೂ ಮತ್ತೆ

Hari Paraak Column: ಎಲ್ಲಾ ಕಡೆ ಬರೀ ಮ್ಯಾಕ್ಸ್‌, ಟ್ಯಾನ್ಸ್‌ನದ್ದೇ ಟಾಕ್ಸ್

Hari Paraak Column: ಎಲ್ಲಾ ಕಡೆ ಬರೀ ಮ್ಯಾಕ್ಸ್‌, ಟ್ಯಾನ್ಸ್‌ನದ್ದೇ ಟಾಕ್ಸ್

ಹೆಸರಿಗೆ ಮ್ಯಾಕ್ಸ್ ಬುಕ್ ಆದ್ರೂ ಮನರಂಜ‌ನೆಗೆ‌ ಹಲವು ವಿಂಡೋಸ್ ಇವೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಆದ್ರೂ