ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !
ಬೆಂಕಿ, ನೀರಿನ ಜತೆ ಸರಸವಾಡಬಾರದೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ನೀರಿನ ವಿಚಾರದಲ್ಲಂತೂ ಇದು ಅಕ್ಷರಶ: ಸತ್ಯ. ಪ್ರತಿದಿನವೂ ಅದೆಷ್ಟೋ ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪುವುದನ್ನು ಕಂಡಾಗ ನಮ್ಮ ಹಿರಿಯರ ಮಾತು ಅದೆಷ್ಟು ನಿಜ ಎನಿಸುತ್ತದೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಆರರಿಂದ ಏಳು ಮಂದಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಸ್ವಲ್ಪವೇ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯುತ್ತಿದ್ದರು. ಅವರ ಕುಟುಂಬಕ್ಕೆ ಆಧಾರವಾಗಿ ಉಳಿಯುತ್ತಿದ್ದರು.