ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಲೋಕೇಶ್​ ಕಾಯರ್ಗ

Kaayarga@gmail.com

ಲೋಕೇಶ್ ಕಾಯರ್ಗ ವಿಶ್ವವಾಣಿ ಪತ್ರಿಕೆ ಮತ್ತು ಲೋಕಧ್ವನಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು. ಪತ್ರಕರ್ತನಾಗಿ ತಳಸ್ಪರ್ಶಿ ಅಧ್ಯಯನ, ವೃತ್ತಿಪರತೆ ಮತ್ತು ಜನಪರ ಕಾಳಜಿಯ ಅಂಕಣ ಬರಹಗಳಿಂದ ಮೆಚ್ಚುಗೆ ಪಡೆದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ.ಕಳೆದ 32 ವರ್ಷಗಳಲ್ಲಿ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಆಯಾ ಪತ್ರಿಕೆಗಳ ಸುದ್ದಿ ಮನೆ ಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಿಕೆಯ ಮೂಲಕ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದಾರೆ

Articles
Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

ರಾಜ್ಯ ಸರಕಾರ ಇದೇ ಶೈಕ್ಷಣಿಕ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಗೆ ನಿಗದಿಪಡಿಸಲಾದ ಕನಿಷ್ಠ ಅಂಕಗಳ ಮಟ್ಟವನ್ನು ಶೇ.33ಕ್ಕೆ ಇಳಿಸಲು ಹೊರಟಿದೆ. ಈ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಬದಲು ಎಸ್‌ಎಸ್‌ಎಲ್‌ಸಿವರೆಗೆ ‘ಉತ್ತೀರ್ಣ ಉಚಿತ’ ಎಂದು ಘೋಷಿಸಿದ್ದರೆ ವಿದ್ಯಾರ್ಥಿಗಳ ಪಾಲಿಗೆ ನಮ್ಮ ಶಿಕ್ಷಣ ಸಚಿವರು ಹೀರೋ ಆಗಿರುತ್ತಿದ್ದರು.

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

ಗ್ರಾಹಕರಿಗೆ ಸಾಲ ಕೊಡುವ ಬ್ಯಾಂಕ್‌ಗಳು ಕೇವಲ ಪ್ಯಾನ್ ಕಾರ್ಡ್ ಆಧಾರದಿಂದಲೇ ಕೆಲವೇ ನಿಮಿಷ ಗಳಲ್ಲಿ ನಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸಲು ಸಾಧ್ಯ ಎಂದಾದರೆ ಸರಕಾರಕ್ಕೆ ಇಂಥದ್ದೇ ಸಾಫ್ಟ್‌ ವೇರ್‌ವೊಂದನ್ನು ರಚಿಸಿ ನಮ್ಮ ಪೂರ್ವಾಪರ ಕಲೆ ಹಾಕುವುದು ಕಷ್ಟದ ವಿಚಾರವೇನಲ್ಲ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಕಂಪನಿಗಳು ತಮ್ಮ ವ್ಯವಹಾರ ಆರಂಭಕ್ಕೆ ಮುನ್ನ ಈ ರೀತಿಯ ಎಲ್ಲ ಕಸರತ್ತುಗಳನ್ನು ನಡೆಸುತ್ತವೆ. ಈ ಕಾಲದಲ್ಲಿ ಮನೆಮನೆಗೆ ಶಿಕ್ಷಕರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸುವ ಅಗತ್ಯವಿದೆಯೇ ಎಂದು ಸರಕಾರ ಮರು ಚಿಂತನೆ ನಡೆಸಬೇಕಾಗಿದೆ.

Lokesh Kaayarga Column: ಔಷಧ ನಕಲಿ, ವೈದ್ಯರೂ ನಕಲಿ; ಜೀವಕ್ಕೆಲ್ಲಿ ಖಾತ್ರಿ ?

ಔಷಧ ನಕಲಿ, ವೈದ್ಯರೂ ನಕಲಿ; ಜೀವಕ್ಕೆಲ್ಲಿ ಖಾತ್ರಿ ?

ವಿಷಕಾರಿ ಅಥವಾ ಮಾರಣಾಂತಿಕ ನಕಲಿ ಔಷಧ ಉತ್ಪಾದನೆ ಪ್ರಕರಣಗಳಲ್ಲಿ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ ಕೇವಲ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಆದರೆ ಇಷ್ಟು ವರ್ಷಗಳಲ್ಲಿ ನಕಲಿ ಔಷಧ ಮಾರಾಟದ ಕಾರಣಕ್ಕಾಗಿ ಯಾವುದೇ ವ್ಯಕ್ತಿ ಜೀವಾವಧಿ ಶಿಕ್ಷೆಗೊಳಗಾದ ಒಂದೇ ಒಂದು ಪ್ರಕರಣ ಈ ದೇಶದಲ್ಲಿ ವರದಿಯಾಗಿಲ್ಲ.

Lokesh Kaayarga Column: ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

ಒಂದು ವೇಳೆ ಈ ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುತ್ತಿದ್ದರೆ, ರಾಹುಲ್ ದ್ರಾವಿಡ್‌ರಂತಹ ಕೋಚ್ ಮಾರ್ಗದರ್ಶನ ಇರುತ್ತಿದ್ದರೆ, , ಬಾಬರ್ ಆಜಂ ಪಾಕ್ ತಂಡದ ನಾಯಕ ನಾಗಿದ್ದರೆ ದುಬೈ ಕ್ರೀಡಾಂಗಣದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ.

Lokesh Kaayarga Column: ‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

ಸರಕಾರದ ಪ್ರಕಾರ ಸಹಕಾರ ಸಂಘಗಳ (ತಿದ್ದುಪಡಿ) ಅಧಿನಿಯಮ-2025 ಮತ್ತು ಕರ್ನಾಟಕ ಸೌಹಾರ್ದ ಸಹಕಾರ ಅಧಿನಿಯಮ-2025 ಸಹಕಾರಿ ವಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆ ಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿವೆ. ಈ ವಿಚಾರದಲ್ಲಿ ಯಾರಿಗೂ ತಕರಾರೂ ಇಲ್ಲ. ಆದರೆ ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ ಎನ್ನುವ ವಿಚಾರದಲ್ಲಿ ಸಹಕಾರಿ ವಲಯದಲ್ಲಿ ಆತಂಕವಿದೆ.

Lokesh Kaayarga Column: ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

ತಾನು ಅಧಿಕಾರಕ್ಕೆ ಬಂದ ಕೂಡಲೇ ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪಿಸುತ್ತೇನೆ. ಇಸ್ರೇಲ್ -ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಸಮರವನ್ನು ನೂರು ದಿನಗಳ ಒಳಗೆ ನಿಲ್ಲಿಸುವುದಾಗಿ ಹೇಳಿದ್ದ ಟ್ರಂಪ್‌ಗೆ ಇದಾವುದೂ ಸಾಧ್ಯವಾಗಿಲ್ಲ. ಈಗ ಈ ಯುದ್ಧದಲ್ಲಿ ಅಮೆರಿಕವೇ ಪರೋಕ್ಷವಾಗಿ ಭಾಗಿ ಯಾಗಿದೆ. ಇರಾನ್ ಮೇಲಿನ ಇಸ್ರೇಲ್ ದಾಳಿ ಅಮೆರಿಕದ ಕುಮ್ಮಕ್ಕಿನಿಂದಲೇ ನಡೆದಿರುವುದು ಜಗತ್ತಿಗೆ ಗೊತ್ತಿರುವ ವಿಚಾರ.

Lokesh Kaayarga Column: ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?

ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?

ಸರಕಾರ ಉಚಿತ ಘೋಷಣೆಗಳ ಮೂಲಕ ಆಯ್ದ ಕೆಲವರ ನೆರವಿಗೆ ಬರಬಹುದು. ಆದರೆ ಬದುಕು ಹೊರೆಯಾಗದಿರಬೇಕಾದರೆ ಎಲ್ಲರಿಗೂ ಅನ್ವಯಿಸುವ ಕೆಲವೊಂದು ನೀತಿಗಳನ್ನು ಅಳವಡಿಸಿಕೊಳ್ಳಲೇ ಬೇಕು. ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ತೀರಾ ಏರದಂತೆ ನೋಡಿಕೊಳ್ಳು ವುದು, ವಿದ್ಯುತ್, ನೀರು, ಸಾರಿಗೆ ಸೌಕರ್ಯ ಜನರಿಗೆ ಎಟುಕುವಂತೆ ಮಾಡುವುದು, ಮಿತದರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಇವುಗಳಲ್ಲಿ ಮುಖ್ಯವಾದವುಗಳು.

Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್‌ ಗಳ ಪರಮ ಧ್ಯೇಯ !

Lokesh Kaayarga Column: ಗ್ರಾಹಕರ ಲೂಟಿಯೇ ಬ್ಯಾಂಕ್‌ ಗಳ ಪರಮ ಧ್ಯೇಯ !

ಬ್ಯಾಂಕುಗಳ ಈ ಸೇವಾಧರ್ಮದ ಹಿಂದಿನ ಮರ್ಮ ತಿಳಿಯಬೇಕಾದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ವಹಿವಾಟಿನ ಪ್ರಗತಿ ಪರಿಶೀಲನೆ ಮಾಡಬೇಕು. ಖಾಸಗಿ ಬ್ಯಾಂಕುಗಳಾಗಲಿ, ಸಾರ್ವಜನಿಕ ರಂಗ ಬ್ಯಾಂಕುಗಳಾಗಲಿ ಅವುಗಳ ವಹಿವಾಟಿನಲ್ಲಿ ಬಡ್ಡಿಯೇತರ ಆದಾಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅಂದರೆ ಬ್ಯಾಂಕುಗಳು ತಾವು ನೀಡಿದ ಸಾಲಕ್ಕೆ ಬಡ್ಡಿ ರೂಪದಲ್ಲಿ ಪಡೆದ ಹಣಕ್ಕಿಂತ ಹೆಚ್ಚಿನ ಹಣವನ್ನು ಸೇವಾ ಶುಲ್ಕ ಮತ್ತು ದಂಡದ ರೂಪದಲ್ಲಿ ಸಂಗ್ರಹಿಸಿವೆ.

Lokesh Kaayarga Column: ದೇಶದ ಏಕತೆ ವಿಷಯದಲ್ಲಿ ಒಡಕು ಧ್ವನಿ ಬೇಡ

ದೇಶದ ಏಕತೆ ವಿಷಯದಲ್ಲಿ ಒಡಕು ಧ್ವನಿ ಬೇಡ

ಟ್ರಂಪ್ ಬೂಟಾಟಿಕೆಯ ಮಾತನ್ನು ಸಮರ್ಥಿಸುವ ಭರದಲ್ಲಿ ರಾಹುಲ್, ದೇಶವಾಸಿಗಳ ಭಾವನೆ, ಅಭಿಪ್ರಾಯಗಳನ್ನು ಗಮನಿಸಿದಂತೆ ಕಾಣುತ್ತಿಲ್ಲ. ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಲು ರಾಹುಲ್‌ಗೆ ಟ್ರಂಪ್ ಹೇಳಿಕೆಯ ಅವಶ್ಯಕತೆ ಇರಲಿಲ್ಲ. ಟಿಸಿಎಸ್‌ನಂತಹ ಐಟಿ ದೈತ್ಯ ಕಂಪನಿ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿರುವುದನ್ನು ರಾಹುಲ್ ಉಲ್ಲೇಖಿಸಬಹುದಿತ್ತು.

Lokesh Kaayarga Column: ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?

ನಮ್ಮ ವಿವಿಗಳನ್ನು ಮುಚ್ಚುವ ಸ್ಥಿತಿ ಬರಬಹುದೇ ?

ಎರಡು ಮೂರು ದಶಕಗಳ ಹಿಂದೆ ಇದೇ ವಿವಿಗಳಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಪಡೆಯಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದರು. ಇಲ್ಲಿ ಸೀಟು ಸಿಕ್ಕಿದೆ ಎಂದರೆ ಅದು ಹೆಮ್ಮೆ, ಪ್ರತಿಷ್ಠೆಯ ವಿಷಯ ವಾಗಿರುತ್ತಿತ್ತು. ಈಗ ಇದೇ ವಿವಿಗಳಲ್ಲಿ ಎಂ.ಎ ಓದುವವರಿಗಿಂತ ಎಮ್ಮೆಗಳ ಸಂಖ್ಯೆಯೇ ಹೆಚ್ಚು ಕಾಣಿಸುತ್ತಿದೆ. ಅಧಿಕ ಮಾಸದಲ್ಲಿ ದುರ್ಭಿಕ್ಷ ಎಂಬಂತೆ ಕೆಲವು ವಿವಿಗಳು ದೈನಂದಿನ ಆಡಳಿತ ನಡೆಸಲೂ ದುಡ್ಡಿಲ್ಲದೆ ಪರದಾಡುತ್ತಿವೆ. ಕೆಲವು ವಿವಿಗಳು ಬೇಡಿಕೆ ಕಡಿಮೆ ಇರುವ ಕೋರ್ಸ್‌ಗಳನ್ನು ಮುಚ್ಚಲು ಮುಂದಾಗಿವೆ.

Lokesh Kaayarga Column: ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಈ ಸಾವನ್ನು ಖಂಡಿತವಾಗಿಯೂ ತಪ್ಪಿಸಬಹುದು !

ಬೆಂಕಿ, ನೀರಿನ ಜತೆ ಸರಸವಾಡಬಾರದೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ನೀರಿನ ವಿಚಾರದಲ್ಲಂತೂ ಇದು ಅಕ್ಷರಶ: ಸತ್ಯ. ಪ್ರತಿದಿನವೂ ಅದೆಷ್ಟೋ ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಪ್ಪುವುದನ್ನು ಕಂಡಾಗ ನಮ್ಮ ಹಿರಿಯರ ಮಾತು ಅದೆಷ್ಟು ನಿಜ ಎನಿಸುತ್ತದೆ. ನಮ್ಮ ರಾಜ್ಯದಲ್ಲಿ ಪ್ರತಿದಿನ ಆರರಿಂದ ಏಳು ಮಂದಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ವರದಿಯಾಗುತ್ತಿವೆ. ಸ್ವಲ್ಪವೇ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯುತ್ತಿದ್ದರು. ಅವರ ಕುಟುಂಬಕ್ಕೆ ಆಧಾರವಾಗಿ ಉಳಿಯುತ್ತಿದ್ದರು.

Lokesh Kaayarga Column: ಬೇಕಿರುವುದು ವ್ಯಾಧಿ ಮೂಲಕ್ಕೆ ಮದ್ದು  !

Lokesh Kaayarga Column: ಬೇಕಿರುವುದು ವ್ಯಾಧಿ ಮೂಲಕ್ಕೆ ಮದ್ದು !

ನಮ್ಮ ನಿರ್ಲಕ್ಷ್ಯದ ಕಾರಣದಿಂದ ಎಳವೆಯಲ್ಲಿಯೇ ದೈಹಿಕ ಚಟುವಟಿಕೆಗಳಿಂದ ವಂಚಿತರಾದ ಮಕ್ಕಳು ಸಣ್ಣ ಪ್ರಾಯದಲ್ಲಿಯೇ, ಬೊಜ್ಜು, ಮಧುಮೇಹ, ರಕ್ತದೊತ್ತಡದಂತಹ ಜೀವನ ಶೈಲಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ದೈಹಿಕ ಚಟುವಟಿಕೆಗಳು ಶರೀರಕ್ಕೆ ಮಾತ್ರವಲ್ಲ. ನಮ್ಮ ಮಕ್ಕಳ ಮಾನಸಿಕ ವಿಕಸನ ಕ್ಕೂ ಅಗತ್ಯವಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆಗಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಆದರೆ ದೈಹಿಕ ಚಟುವಟಿಕೆಗಳಿಂದ ದೂರವಾದ ಯುವಕರು ಸಣ್ಣಪುಟ್ಟ ಒತ್ತಡಗಳನ್ನೂ ನಿಭಾಯಿಸ ಲಾಗದೆ ಅತಿರೇಕದ ಕ್ರಮಗಳಿಗೆ ಕೈ ಹಾಕುತ್ತಿದ್ದಾರೆ. ದೈಹಿಕ ಚಟುವಟಕೆಗಳಿಂದ ದೂರವಾದ ಸ್ಥೂಲ ಕಾಯರಿಂದ ತುಂಬಿದ ಸಮಾಜ ಹೇಗಿರಬಹುದೆನ್ನುವುದಕ್ಕೆ ಭಾರತವೇ ಉದಾಹರಣೆಯಾಗಿ ನಿಲ್ಲುತ್ತಿದೆ.

Lokesh Kaayaraga Column: ನಮ್ಮ ರೈತರೆಲ್ಲರೂ ‘ಕೃಷ್ಣ’ ನಾಮ ಜಪಿಸುವಂತಾಗಲಿ !

ನಮ್ಮ ರೈತರೆಲ್ಲರೂ ‘ಕೃಷ್ಣ’ ನಾಮ ಜಪಿಸುವಂತಾಗಲಿ !

ಹೆಣ್ಣು, ಹೊನ್ನು, ಮಣ್ಣು ಕಲಹದ ಮೂರು ಕಾರಣಗಳೆಂದು ನಮ್ಮ ಹಿರಿಯರ ಮಾತು. ಇನ್ನಿತರ ಕಾರಣಗಳಿದ್ದರೂ ಹೆಣ್ಣು ಮತ್ತು ಮಣ್ಣಿನ ವಿಚಾರಕ್ಕೆ ಸಂಬಂಧಿಸಿ ಹೆಚ್ಚಿನ ಸಂಘರ್ಷಗಳಾಗಿರುವುದು ಇತಿಹಾಸದಲ್ಲಿ ದಾಖಲಾದ ಸತ್ಯ. ನಮ್ಮ ಕೆಳ ನ್ಯಾಯಾಲಯಗಳಲ್ಲಿ ಈಗಲೂ ಶೇ. 60ಕ್ಕಿಂತ ಹೆಚ್ಚಿನ ಪ್ರಕರಣಗಳು ಭೂ ವ್ಯಾಜ್ಯಕ್ಕೆ ಸಂಬಂಧಿಸಿವೆ. ಕಂದಾಯ ಸಚಿವ ಕೃಷ್ಣಬೈರೇಗೌಡ ತಮ್ಮ ಇಲಾಖೆಯಲ್ಲಿ ಆರಂಭಿಸಿರುವ ಸುಧಾರಣಾ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ರಾಜ್ಯದಲ್ಲಿ ಭೂ ವ್ಯಾಜ್ಯಗಳನ್ನು ಗಣನೀಯವಾಗಿ ಇಳಿಸಬಹುದು. ಭೂ ಒಡೆತನದ ಸಮರ್ಪಕ ದಾಖಲೆ ಪಡೆದ ಲಕ್ಷಾಂತರ ರೈತರ ಬಾಳು ಹಸನಾಗಬಹುದು.

Lokesh Kaayarga Column: ಆಟೋ-ಬೈಕ್ ಟ್ಯಾಕ್ಸಿ ‘ಡಿಕ್ಕಿ’ ತಪ್ಪಿಸಬಾರದೇಕೆ ?

ಆಟೋ-ಬೈಕ್ ಟ್ಯಾಕ್ಸಿ ‘ಡಿಕ್ಕಿ’ ತಪ್ಪಿಸಬಾರದೇಕೆ ?

‘‘ಅರ್ಧ ಎಕರೆ ಜಮೀನಿದೆ ಸಾರ್. ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ. ನನ್ನ ದುಡಿಮೆಯಲ್ಲಿಯೇ ತಂಗಿ ಮದುವೆ ಮಾಡ್ಬೇಕು. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಆಫೀಸ್‌ನಲ್ಲಿ ದುಡೀತೀನಿ. ಆರರಿಂದ 12 ಗಂಟೆ ತನಕ ಬೈಕ್ ಓಡಿಸ್ತೀನಿ. ಪರವಾಗಿಲ್ಲ ಸಾರ್, ಕೆಲವು ದಿನ ಒಳ್ಳೆಯ ಸಂಪಾದನೆ ಇರುತ್ತದೆ. ಕೆಲ ದಿನ ಅಷ್ಟಕ್ಕಷ್ಟೇ’’ ಅಂದ. ಆಗಲೇ ಬೈಕ್ ಟ್ಯಾಕ್ಸಿ ನಿಷೇಧದ ಕೂಗು ಜೋರಾಗಿತ್ತು.

Lokesh Kaayarga Column: ಎಲ್ಲೋಯ್ತು ನಮ್ಮ ಎಂಜಿನಿಯರುಗಳ (ಕ) ಮಿಷನ್‌ ?

ಎಲ್ಲೋಯ್ತು ನಮ್ಮ ಎಂಜಿನಿಯರುಗಳ (ಕ) ಮಿಷನ್‌ ?

ಚೆನಾಬ್ ಸೇತುವೆ ಕಂಡ ಎಂಜಿನಿಯರಿಂಗ್ ಕೌಶಲ್ಯ ನಮ್ಮಲ್ಲಿ ಯಾಕಿಲ್ಲ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜಿ. ಮಾಧವಿ ಲತಾ ಅವರು 17 ವರ್ಷಗಳ ಕಾಲ ಈ ಯೋಜನೆಯಲ್ಲಿ ತೊಡಗಿಸಿ ಕೊಂಡಿದ್ದರು. ಈ ಹಿತ್ತಲಗಿಡ ನಮಗೇಕೆ ಮದ್ದಾಗಲಿಲ್ಲ? ರಾಜಧಾನಿ ಬೆಂಗಳೂರಿ ನಲ್ಲಿ ಜೋರಾಗಿ ಅರ್ಧ ಗಂಟೆ ಮಳೆ ಬಂದರೆ ಸಾಕು. ರಸ್ತೆಗಳೇ ನದಿಗಳಾಗುತ್ತವೆ. ಸಂಚಾರ, ಜನಜೀವನ ಅಸ್ತವ್ಯಸ್ತ. ಬಸ್-ಕಾರುಗಳು ಬಿಡಿ, ಆಂಬುಲೆನ್ಸ್ ಕೂಡ ಹೋಗಲಿಕ್ಕಾಗದ ಸ್ಥಿತಿ.

Lokesh Kaayarga Column: ಆಡಳಿತ ಸೇವೆ, ಆಡಳಿತದಲ್ಲಿ ಇರುವವರ ಸೇವೆ ಅಲ್ಲ !

ಆಡಳಿತ ಸೇವೆ, ಆಡಳಿತದಲ್ಲಿ ಇರುವವರ ಸೇವೆ ಅಲ್ಲ !

ಮದ್ಯ ಕಂಪನಿಯ ಹೆಸರಿನ ಕೊನೆಯಲ್ಲಿ ಬೆಂಗಳೂರು ಸೇರಿಕೊಂಡಿದೆ ಎಂಬ ಕಾರಣಕ್ಕೆ ಕನ್ನಡಿಗ ರೆಲ್ಲರೂ ಆರ್‌ಸಿಬಿ ಎಂಬ ತಂಡವನ್ನು ಎದೆಯಲ್ಲಿರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ 18 ವರ್ಷಗಳ ಬಳಿಕ ಬಂದ ಗೆಲುವನ್ನು ಸಂಭ್ರಮಿಸಿದ್ದಾರೆ. ಸರಕಾರ ಜನರ ಸಂಭ್ರಮದಲ್ಲಿ ಭಾಗಿಯಾಗಿ ಅಭಿನಂದನೆ ಸಲ್ಲಿಸಿದ್ದರೆ ಸಾಕಿತ್ತು. ಹೆಚ್ಚೆಂದರೆ ಆಟಗಾರರನ್ನು ರಾಜಭವನ ಇಲ್ಲವೇ, ಸಿಎಂ ನಿವಾಸಕ್ಕೆ ಕರೆದು ಸನ್ಮಾನಿಸಬಹುದಿತ್ತು. ಆದರೆ ಅಭಿಮಾನಿಗಳಂತೆ ಸರಕಾರವೂ ಅತಿರೇಕದ ನಡೆ ಇಟ್ಟಿದ್ದು ಈ ದುರಂತದ ಮೂಲ. ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ಅವಸರದಲ್ಲಿ ಕಾರ್ಯಕ್ರಮ ಆಯೋಜಿಸುವುದರಿಂದ ಕಾನೂನು ಸುವ್ಯವಸ್ಥೆ ಏರುಪೇರಾಗುವ ಸಾಧ್ಯತೆಯನ್ನು ಐಎಎಸ್, ಐಪಿಎಸ್ ಅಧಿಕಾರಿಗಳು ಒಟ್ಟಾಗಿ ನಾಯಕರಿಗೆ ಮನದಟ್ಟು ಮಾಡಿಕೊಟ್ಟಿದ್ದರೆ ಈ ಅನಾಹುತ ನಡೆಯುತ್ತಿರಲ್ಲಿಲ್ಲ. ರಾಜಕೀಯ ನಾಯಕರ ಅಡಿಯಾಳುಗಳಾದ ಅಧಿಕಾರಿಗಳು ಮತ್ತು ಪೊಲೀಸರು ಗಟ್ಟಿ ಧ್ವನಿಯಲ್ಲಿ ಏನನ್ನೂ ಹೇಳಲಾಗದ ಅಸಹಾಯಕತೆ 11 ಅಮಾಯಕರ ಜೀವಕ್ಕೆರವಾಗಿದೆ.

Lokesh Kaayarga Column: ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ

ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ

ನ್ಯಾಯದಾನದ ವಿಚಾರದಲ್ಲಿ ಈಗಲೂ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ನಂಬಿಕೆ ಇಟ್ಟಿ ದ್ದೇವೆ. ಅಂತಿಮವಾಗಿ ನ್ಯಾಯಕ್ಕೆ ಜಯ, ಸತ್ಯಕ್ಕೆ ಗೆಲುವು ಎಂಬ ನಂಬಿಕೆಯನ್ನು ಇಂದಿಗೂ ಕಾಪಿಟ್ಟು ಕೊಳ್ಳಲು ಕಾರಣ ನ್ಯಾಯಾಂಗದ ಮೇಲಿನ ಭರವಸೆ. ಆದರೆ ನ್ಯಾಯಾಂಗವೂ ಕೂಡ ಇತರ ಅಂಗಗಳಂತೆ ಕಲುಷಿತವಾದರೆ ಏನು ಮಾಡಬೇಕು ?

Lokesh Kaayarga Column: ಕೆರೆ ನುಂಗಿದವರೂ ಮಳೆ ನೀರನ್ನೂ ನುಂಗಬಾರದೇ !?

ಕೆರೆ ನುಂಗಿದವರೂ ಮಳೆ ನೀರನ್ನೂ ನುಂಗಬಾರದೇ !?

ಚಂದ್ರನ ಅಂಗಳದಲ್ಲಿ ನೀರನ್ನು ಹುಡುಕುತ್ತಿರುವ ನಮಗೆ ಕಣ್ಣ ಮುಂದೆಯೇ ಸುರಿದ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭೂಮಿಯಡಿ ಇಂಗಬೇಕಾದ, ಕೆರೆಕಟ್ಟೆಗಳನ್ನು ತುಂಬ ಬೇಕಾದ ಮಳೆ ನೀರು ಕಾಂಕ್ರೀಟ್ ರಸ್ತೆಗಳಲ್ಲಿ ನದಿಯಂತೆ ಹರಿದು, ಇಲ್ಲಿನ ಕಸಕಡ್ಡಿ, ಪ್ಲಾಸ್ಟಿಕ್ ರಾಶಿ ಯೆಲ್ಲವನ್ನೂ ತನ್ನೊಡಲಲ್ಲಿ ತುಂಬಿಕೊಂಡು ನದಿ ಪಾತ್ರ ಸೇರುತ್ತಿದೆ.

Lokesh Kaayarga Column: ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !

ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !

ಕಾವೇರಿ ಆರತಿ ಕಾರ್ಯಕ್ರಮವು ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮವಾಗಿ ಬದಲಾದರೆ ಕನಿಷ್ಠ ಪಕ್ಷ ನಮ್ಮ ಧಾರ್ಮಿಕ ನಂಬಿಕೆಯ ನೆಲೆಯಲ್ಲಾದರೂ ನೀರಿನ ಮೂಲಗಳು ಸ್ವಚ್ಛತೆ ಕಾಣಲು ಸಾಧ್ಯವಿದೆ. ಇದರ ಮುಂದಿನ ಹಂತವಾಗಿ ಮಾಲಿನ್ಯಕ್ಕೆ ಕಾರಣವಾಗುವ ಉದ್ದಿಮೆ ಘಟಕಗಳ ರಾಸಾಯನಿಕ ಮಿಶ್ರಿತ ನೀರು, ಒಳಚರಂಡಿಯ ತ್ಯಾಜ್ಯ ನೀರು, ನಗರಗಳ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟಿದರೆ ನಮ್ಮಲ್ಲೂ ಸ್ವಚ್ಛ ನೀರನ್ನು ಕಾಣಲು ಸಾಧ್ಯವಿದೆ. ಇದಾವುದೂ ಇಲ್ಲದೆ ಕಾವೇರಿ ಆರತಿ ಇನ್ನೊಂದು ಧಾರ್ಮಿಕ ಕಾರ್ಯಕ್ರಮವಾದರೆ ಬಾಗಿನದ ನೆಪದಲ್ಲಿ ಹೂವು, ಹಣ್ಣುಗಳ ತ್ಯಾಜ್ಯ ರಾಶಿ ಸೇರಿ ನದಿ ಮತ್ತೊಂದಷ್ಟು ಕಲುಷಿತವಾಗುವುದು ಬಿಟ್ಟರೆ ಮತ್ತೆ ಯಾವ ಉದ್ದೇಶವೂ ಈಡೇರದು.

Lokesh Kaayarga Column: ಸೇನೆಯ ಆದರ್ಶ ನಮಗೆ ಪಾಠವಾಗಬೇಕಿದೆ

ಸೇನೆಯ ಆದರ್ಶ ನಮಗೆ ಪಾಠವಾಗಬೇಕಿದೆ

ಶತ್ರು ದೇಶದ ಮೇಲೆ ಮುಗಿ ಬೀಳಲು ರೋಷಾವೇಶ ಬೇಕೇಬೇಕು. ಆದರೆ ಹೇಗೆ ಯುದ್ಧ ಮಾಡಬೇಕು. ಹೇಗೆ ಸುಲಭವಾಗಿ ಮಣಿಸಬೇಕು‌ ಎನ್ನುವಲ್ಲಿ ನಮ್ಮ ಜಾಣ್ಮೆ ಮತ್ತು ವಿವೇಕ ಹೆಚ್ಚು ಕೆಲಸ ಮಾಡಬೇಕು. ಆಪರೇಶನ್ ಸಿಂದೂರ ಮತ್ತು ಆ ಬಳಿಕದ ಸಂಘರ್ಷದಲ್ಲಿ ಭಾರತೀಯ ಸೇನೆ ಪ್ರದರ್ಶಿಸಿದ ಸಮಯೋ ಚಿತ ನಡೆಯಲ್ಲಿ ಇವೆಲ್ಲವೂ ಇತ್ತು. ಪಹಲ್ಗಾಮ್ ದಾಳಿಗೆ ನಮ್ಮಲ್ಲಿಯೇ ಅವರಿವರನ್ನು ಬೊಟ್ಟು ಮಾಡುತ್ತಿದ್ದಾಗ ಸೇನೆ ತೆಗೆದುಕೊಂಡ ಸಾಂದರ್ಭಿಕ ‌ನಿರ್ಧಾರಗಳು ದೇಶವನ್ನು ಒಟ್ಟಾಗಿಸಿದ್ದು ಗಮನಾರ್ಹ. ದೇಶ ಮೊದಲು ಎಂಬ ಸೇನೆಯ ಧ್ಯೇಯ ನಮಗೆ ಮಾದರಿಯಾಗಬೇಕಿದೆ.

Lokesh Kaayarga Column: ಸೇನೆಯ ಜತೆಗೆ ನಾವೂ ಸಮರ ಸನ್ನದ್ಧರಾಗಬೇಕಿದೆ !

ಸೇನೆಯ ಜತೆಗೆ ನಾವೂ ಸಮರ ಸನ್ನದ್ಧರಾಗಬೇಕಿದೆ !

ವಿಶ್ವದ 30ಕ್ಕೂ ಹೆಚ್ಚು ದೇಶಗಳಲ್ಲಿ ಮಿಲಿಟರಿ ಶಿಕ್ಷಣ ಕಡ್ಡಾಯವಿದೆ. 150 ಕೋಟಿ ಜನಸಂಖ್ಯೆಯ ಭಾರತದಲ್ಲಿ ಇದು ಸಾಧ್ಯವೂ ಇಲ್ಲ. ಇದರ ಅಗತ್ಯವೂ ಇಲ್ಲ. ಆದರೆ ಯುದ್ಧ, ಅಗ್ನಿ ಅವಘಡ, ಪ್ರಾಕೃತಿಕ ದುರಂತಗಳಂತಹ ತುರ್ತು ಸಂದರ್ಭಗಳಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೆಂಬ ಪ್ರಾಥಮಿಕ ತಿಳಿವಳಿಕೆ ಎಲ್ಲರಿಗೂ ಅಗತ್ಯ. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ನೀಟ್, ಜೆಇಇ, ಸಿಇಟಿಗೆ ತಯಾರಿ ಮಾಡುವ ಭರದಲ್ಲಿ ಆಪತ್ಕಾಲದ ಶಿಕ್ಷಣ ನಮಗೆ ಗೌಣವಾಗಿದೆ. ಹೀಗಾಗಿ ಈ ದೇಶದಲ್ಲಿ ವರ್ಷವೊಂದಕ್ಕೆ 30 ಸಾವಿರಕ್ಕಿಂತ ಹೆಚ್ಚು ಮಂದಿ ನೀರಲ್ಲಿ ಮುಳುಗಿ ಸಾಯುತ್ತಾರೆ. ಅಲ್ಪ ಸ್ವಲ್ಪ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯಬಹುದು. ಯುದ್ಧ ಕಾರ್ಮೋಡ ಕವಿದಿರುವ ಈ ಹೊತ್ತಲ್ಲಿ ನಮ್ಮ ಶಿಕ್ಷಣ ಮತ್ತು ಬದುಕಿನ ಆದ್ಯತೆಗಳ ಬಗ್ಗೆಯೂ ಪುನರಾವಲೋಕನ ನಡೆಯಬೇಕಿದೆ.

Lokesh Kayarga Column: ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !

ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !

ನಾವಿನ್ನೂ ಯುದ್ಧ ಎಂದರೆ ಗಡಿ ಭಾಗದಲ್ಲಿ ನಡೆಯುವ ಸಂಘರ್ಷ ಎಂಬ ಭ್ರಮೆಯಲ್ಲಿದ್ದೇವೆ. ಮನೆ ಯಲ್ಲೇ ಕುಳಿತು 'ನಡೆಯಲಿ ಯುದ್ಧ' ಎಂದು ಅಬ್ಬರಿಸುತ್ತಿದ್ದೇವೆ. ಆದರೆ ಶತ್ರು ದೇಶದ ವಂಚಕರು ಅದಾ ಗಲೇ ನಮ್ಮ ಬೆಡ್ ರೂಮ್‌ಗಳಿಗೆ ನುಗ್ಗಿದ್ದಾರೆ. ನಮ್ಮ ಪ್ರತಿಯೊಂದು ಚಲನವಲನ, ವೈಯಕ್ತಿಕ ಮಾಹಿತಿ, ಇಷ್ಟಾನಿಷ್ಟಗಳೆಲ್ಲವೂ ಅವರ ಅಂಗೈಯಲ್ಲಿವೆ. ‘ರಮ್ಮಿ ಆಡಿ’ ಎಂದಾಗ ಖುಷಿಯಿಂದಲೇ ರಮ್ಮಿ ಆಡಿ ಅವರ ಜೇಬು ತುಂಬಿಸುತ್ತಿದ್ದೇವೆ. ಅವರು ಕಾಣದ ದೇಶದಲ್ಲಿ ಕುಳಿತು ಡಿಜಿಟಲ್ ಅರೆಸ್ಟ್‌ ಎಂದರೂ ನಾವು ಮುದುರಿ ಕೂರುತ್ತೇವೆ. ಅವರ ದುಡ್ಡು ಡಬಲ್ ಮಾಡುವ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರು.ಗಳನ್ನು ಕಳೆದುಕೊಂಡು ಕಂಗಾಲಾಗುತ್ತೇವೆ. ಈ ಎಲ್ಲ ವಂಚನೆಯೂ ಪಾಕಿಸ್ತಾನಿಯರು ಇಲ್ಲವೇ ಚೀನಿಯರು ಮಾಡಿದ್ದಾರೆಂದು ಅರ್ಥವಲ್ಲ. ಆದರೆ ಆಧುನಿಕ ಯುದ್ಧ ತಂತ್ರದ ಭಾಗವಾಗಿ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಈಗ ಸೈಬರ್ ದಾಳಿಯನ್ನು ಎದುರಿಸಲೇಬೇಕಿದೆ. ಪ್ರತಿ ದಾಳಿಗೆ ಸಜ್ಜಾಗಲೇ ಬೇಕಿದೆ.

Lokesh Kayarga Column: ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ಪಕ್ಷ ನಾಯಕರ ಬೆಂಬಲ, ಜಾತಿ ಬೆಂಬಲ ಇಲ್ಲವೇ ಕ್ಷೇತ್ರದ ಮತದಾರರ ಬೆಂಬಲ ಈ ಮೂರರ ಪೈಕಿ ಒಂದೂ ಇಲ್ಲದೇ ಹೋದರೆ ಎಷ್ಟೇ ಪ್ರಭಾವಿ ನಾಯಕರಾದರೂ ರಾಜಕೀಯದಲ್ಲಿ ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ. ಪಕ್ಷ ನಿಷ್ಠೆ, ಮೌಲ್ಯ, ತತ್ವ-ಸಿದ್ದಾಂತ, ವೈಯಕ್ತಿಕ ವರ್ಚಸ್ಸು ಇವು ಗಳಿಂದ ಸದ್ಯದ ಚುನಾವಣೆ ರಾಜಕೀಯವನ್ನು ಗೆಲ್ಲಲು ಸಾಧ್ಯವಿಲ್ಲ. ರಾಜಕೀಯ ಮೌಲ್ಯಗಳಿಗೆ ಹೆಸ ರಾದ ಎ.ಟಿ.ರಾಮಸ್ವಾಮಿ. ವೈಎಸ್‌ವಿ ದತ್ತ ಮುಂತಾದವರು ಜೆಡಿಎಸ್ ಮಾತ್ರವಲ್ಲ ಈಗ ಯಾವ ಪಕ್ಷದಲ್ಲೂ ಪ್ರಸ್ತುತರಾಗಲು ಸಾಧ್ಯವಿಲ್ಲ.

Lokesh Kayarga Column: ಆಯೋಗದ ಮೇಲೆ ಆಯೋಗ, ಸಂತ್ರಸ್ತರಿಗಿಲ್ಲ ಪರಿಹಾರ ಯೋಗ

ಆಯೋಗದ ಮೇಲೆ ಆಯೋಗ, ಸಂತ್ರಸ್ಥರಿಗೆಲ್ಲ ಪರಿಹಾರ ಆಯೋಗ

ಚಾಮರಾಜನಗರದ ನೆಲದಲ್ಲಿಯೇ ವಿಶೇಷ ಸಂಪುಟ ಸಭೆ ನಡೆಸಲು ಸರಕಾರ ಸಜ್ಜಾಗಿದೆ. ಶುಕ್ರವಾರ (ಏಪ್ರಿಲ್ 17) ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಾದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿರುವ ಗಡಿ ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು. ಆಕ್ಸಿಜನ್ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಆಗಬೇಕು. ಸಂತ್ರಸ್ತರಿಗೆ ಕೊಡಲು ಸರಕಾರದ ಬಳಿ ದುಡ್ಡಿಲ್ಲ ಎಂದಾದರೆ ಕೋವಿಡ್ ಕಾಲದ ಹಗರಣಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಿ ದುಡ್ಡು ಪೋಲು ಮಾಡುವ ಪ್ರಹಸನವನ್ನಾದರೂ ಕೈ ಬಿಡಬೇಕು.

Loading...