ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಲೋಕೇಶ್​ ಕಾಯರ್ಗ

Kaayarga@gmail.com

ಲೋಕೇಶ್ ಕಾಯರ್ಗ ವಿಶ್ವವಾಣಿ ಪತ್ರಿಕೆ ಮತ್ತು ಲೋಕಧ್ವನಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು. ಪತ್ರಕರ್ತನಾಗಿ ತಳಸ್ಪರ್ಶಿ ಅಧ್ಯಯನ, ವೃತ್ತಿಪರತೆ ಮತ್ತು ಜನಪರ ಕಾಳಜಿಯ ಅಂಕಣ ಬರಹಗಳಿಂದ ಮೆಚ್ಚುಗೆ ಪಡೆದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ.ಕಳೆದ 32 ವರ್ಷಗಳಲ್ಲಿ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಆಯಾ ಪತ್ರಿಕೆಗಳ ಸುದ್ದಿ ಮನೆ ಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಿಕೆಯ ಮೂಲಕ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದಾರೆ

Articles
Lokesh Kaayarga Column: ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ

ನ್ಯಾ.ಗವಾಯಿ ನಡೆ ನ್ಯಾಯಾಂಗಕ್ಕೆ ಮೇಲ್ಪಂಕ್ತಿ

ನ್ಯಾಯದಾನದ ವಿಚಾರದಲ್ಲಿ ಈಗಲೂ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ನಂಬಿಕೆ ಇಟ್ಟಿ ದ್ದೇವೆ. ಅಂತಿಮವಾಗಿ ನ್ಯಾಯಕ್ಕೆ ಜಯ, ಸತ್ಯಕ್ಕೆ ಗೆಲುವು ಎಂಬ ನಂಬಿಕೆಯನ್ನು ಇಂದಿಗೂ ಕಾಪಿಟ್ಟು ಕೊಳ್ಳಲು ಕಾರಣ ನ್ಯಾಯಾಂಗದ ಮೇಲಿನ ಭರವಸೆ. ಆದರೆ ನ್ಯಾಯಾಂಗವೂ ಕೂಡ ಇತರ ಅಂಗಗಳಂತೆ ಕಲುಷಿತವಾದರೆ ಏನು ಮಾಡಬೇಕು ?

Lokesh Kaayarga Column: ಕೆರೆ ನುಂಗಿದವರೂ ಮಳೆ ನೀರನ್ನೂ ನುಂಗಬಾರದೇ !?

ಕೆರೆ ನುಂಗಿದವರೂ ಮಳೆ ನೀರನ್ನೂ ನುಂಗಬಾರದೇ !?

ಚಂದ್ರನ ಅಂಗಳದಲ್ಲಿ ನೀರನ್ನು ಹುಡುಕುತ್ತಿರುವ ನಮಗೆ ಕಣ್ಣ ಮುಂದೆಯೇ ಸುರಿದ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭೂಮಿಯಡಿ ಇಂಗಬೇಕಾದ, ಕೆರೆಕಟ್ಟೆಗಳನ್ನು ತುಂಬ ಬೇಕಾದ ಮಳೆ ನೀರು ಕಾಂಕ್ರೀಟ್ ರಸ್ತೆಗಳಲ್ಲಿ ನದಿಯಂತೆ ಹರಿದು, ಇಲ್ಲಿನ ಕಸಕಡ್ಡಿ, ಪ್ಲಾಸ್ಟಿಕ್ ರಾಶಿ ಯೆಲ್ಲವನ್ನೂ ತನ್ನೊಡಲಲ್ಲಿ ತುಂಬಿಕೊಂಡು ನದಿ ಪಾತ್ರ ಸೇರುತ್ತಿದೆ.

Lokesh Kaayarga Column: ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !

ಆರತಿ ನೆಪದಲ್ಲಾದರೂ ನಮ್ಮ ನದಿಗಳು ಸ್ವಚ್ಛತೆ ಕಾಣಲಿ !

ಕಾವೇರಿ ಆರತಿ ಕಾರ್ಯಕ್ರಮವು ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮವಾಗಿ ಬದಲಾದರೆ ಕನಿಷ್ಠ ಪಕ್ಷ ನಮ್ಮ ಧಾರ್ಮಿಕ ನಂಬಿಕೆಯ ನೆಲೆಯಲ್ಲಾದರೂ ನೀರಿನ ಮೂಲಗಳು ಸ್ವಚ್ಛತೆ ಕಾಣಲು ಸಾಧ್ಯವಿದೆ. ಇದರ ಮುಂದಿನ ಹಂತವಾಗಿ ಮಾಲಿನ್ಯಕ್ಕೆ ಕಾರಣವಾಗುವ ಉದ್ದಿಮೆ ಘಟಕಗಳ ರಾಸಾಯನಿಕ ಮಿಶ್ರಿತ ನೀರು, ಒಳಚರಂಡಿಯ ತ್ಯಾಜ್ಯ ನೀರು, ನಗರಗಳ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟಿದರೆ ನಮ್ಮಲ್ಲೂ ಸ್ವಚ್ಛ ನೀರನ್ನು ಕಾಣಲು ಸಾಧ್ಯವಿದೆ. ಇದಾವುದೂ ಇಲ್ಲದೆ ಕಾವೇರಿ ಆರತಿ ಇನ್ನೊಂದು ಧಾರ್ಮಿಕ ಕಾರ್ಯಕ್ರಮವಾದರೆ ಬಾಗಿನದ ನೆಪದಲ್ಲಿ ಹೂವು, ಹಣ್ಣುಗಳ ತ್ಯಾಜ್ಯ ರಾಶಿ ಸೇರಿ ನದಿ ಮತ್ತೊಂದಷ್ಟು ಕಲುಷಿತವಾಗುವುದು ಬಿಟ್ಟರೆ ಮತ್ತೆ ಯಾವ ಉದ್ದೇಶವೂ ಈಡೇರದು.

Lokesh Kaayarga Column: ಸೇನೆಯ ಆದರ್ಶ ನಮಗೆ ಪಾಠವಾಗಬೇಕಿದೆ

ಸೇನೆಯ ಆದರ್ಶ ನಮಗೆ ಪಾಠವಾಗಬೇಕಿದೆ

ಶತ್ರು ದೇಶದ ಮೇಲೆ ಮುಗಿ ಬೀಳಲು ರೋಷಾವೇಶ ಬೇಕೇಬೇಕು. ಆದರೆ ಹೇಗೆ ಯುದ್ಧ ಮಾಡಬೇಕು. ಹೇಗೆ ಸುಲಭವಾಗಿ ಮಣಿಸಬೇಕು‌ ಎನ್ನುವಲ್ಲಿ ನಮ್ಮ ಜಾಣ್ಮೆ ಮತ್ತು ವಿವೇಕ ಹೆಚ್ಚು ಕೆಲಸ ಮಾಡಬೇಕು. ಆಪರೇಶನ್ ಸಿಂದೂರ ಮತ್ತು ಆ ಬಳಿಕದ ಸಂಘರ್ಷದಲ್ಲಿ ಭಾರತೀಯ ಸೇನೆ ಪ್ರದರ್ಶಿಸಿದ ಸಮಯೋ ಚಿತ ನಡೆಯಲ್ಲಿ ಇವೆಲ್ಲವೂ ಇತ್ತು. ಪಹಲ್ಗಾಮ್ ದಾಳಿಗೆ ನಮ್ಮಲ್ಲಿಯೇ ಅವರಿವರನ್ನು ಬೊಟ್ಟು ಮಾಡುತ್ತಿದ್ದಾಗ ಸೇನೆ ತೆಗೆದುಕೊಂಡ ಸಾಂದರ್ಭಿಕ ‌ನಿರ್ಧಾರಗಳು ದೇಶವನ್ನು ಒಟ್ಟಾಗಿಸಿದ್ದು ಗಮನಾರ್ಹ. ದೇಶ ಮೊದಲು ಎಂಬ ಸೇನೆಯ ಧ್ಯೇಯ ನಮಗೆ ಮಾದರಿಯಾಗಬೇಕಿದೆ.

Lokesh Kaayarga Column: ಸೇನೆಯ ಜತೆಗೆ ನಾವೂ ಸಮರ ಸನ್ನದ್ಧರಾಗಬೇಕಿದೆ !

ಸೇನೆಯ ಜತೆಗೆ ನಾವೂ ಸಮರ ಸನ್ನದ್ಧರಾಗಬೇಕಿದೆ !

ವಿಶ್ವದ 30ಕ್ಕೂ ಹೆಚ್ಚು ದೇಶಗಳಲ್ಲಿ ಮಿಲಿಟರಿ ಶಿಕ್ಷಣ ಕಡ್ಡಾಯವಿದೆ. 150 ಕೋಟಿ ಜನಸಂಖ್ಯೆಯ ಭಾರತದಲ್ಲಿ ಇದು ಸಾಧ್ಯವೂ ಇಲ್ಲ. ಇದರ ಅಗತ್ಯವೂ ಇಲ್ಲ. ಆದರೆ ಯುದ್ಧ, ಅಗ್ನಿ ಅವಘಡ, ಪ್ರಾಕೃತಿಕ ದುರಂತಗಳಂತಹ ತುರ್ತು ಸಂದರ್ಭಗಳಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೆಂಬ ಪ್ರಾಥಮಿಕ ತಿಳಿವಳಿಕೆ ಎಲ್ಲರಿಗೂ ಅಗತ್ಯ. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ನೀಟ್, ಜೆಇಇ, ಸಿಇಟಿಗೆ ತಯಾರಿ ಮಾಡುವ ಭರದಲ್ಲಿ ಆಪತ್ಕಾಲದ ಶಿಕ್ಷಣ ನಮಗೆ ಗೌಣವಾಗಿದೆ. ಹೀಗಾಗಿ ಈ ದೇಶದಲ್ಲಿ ವರ್ಷವೊಂದಕ್ಕೆ 30 ಸಾವಿರಕ್ಕಿಂತ ಹೆಚ್ಚು ಮಂದಿ ನೀರಲ್ಲಿ ಮುಳುಗಿ ಸಾಯುತ್ತಾರೆ. ಅಲ್ಪ ಸ್ವಲ್ಪ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯಬಹುದು. ಯುದ್ಧ ಕಾರ್ಮೋಡ ಕವಿದಿರುವ ಈ ಹೊತ್ತಲ್ಲಿ ನಮ್ಮ ಶಿಕ್ಷಣ ಮತ್ತು ಬದುಕಿನ ಆದ್ಯತೆಗಳ ಬಗ್ಗೆಯೂ ಪುನರಾವಲೋಕನ ನಡೆಯಬೇಕಿದೆ.

Lokesh Kayarga Column: ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !

ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !

ನಾವಿನ್ನೂ ಯುದ್ಧ ಎಂದರೆ ಗಡಿ ಭಾಗದಲ್ಲಿ ನಡೆಯುವ ಸಂಘರ್ಷ ಎಂಬ ಭ್ರಮೆಯಲ್ಲಿದ್ದೇವೆ. ಮನೆ ಯಲ್ಲೇ ಕುಳಿತು 'ನಡೆಯಲಿ ಯುದ್ಧ' ಎಂದು ಅಬ್ಬರಿಸುತ್ತಿದ್ದೇವೆ. ಆದರೆ ಶತ್ರು ದೇಶದ ವಂಚಕರು ಅದಾ ಗಲೇ ನಮ್ಮ ಬೆಡ್ ರೂಮ್‌ಗಳಿಗೆ ನುಗ್ಗಿದ್ದಾರೆ. ನಮ್ಮ ಪ್ರತಿಯೊಂದು ಚಲನವಲನ, ವೈಯಕ್ತಿಕ ಮಾಹಿತಿ, ಇಷ್ಟಾನಿಷ್ಟಗಳೆಲ್ಲವೂ ಅವರ ಅಂಗೈಯಲ್ಲಿವೆ. ‘ರಮ್ಮಿ ಆಡಿ’ ಎಂದಾಗ ಖುಷಿಯಿಂದಲೇ ರಮ್ಮಿ ಆಡಿ ಅವರ ಜೇಬು ತುಂಬಿಸುತ್ತಿದ್ದೇವೆ. ಅವರು ಕಾಣದ ದೇಶದಲ್ಲಿ ಕುಳಿತು ಡಿಜಿಟಲ್ ಅರೆಸ್ಟ್‌ ಎಂದರೂ ನಾವು ಮುದುರಿ ಕೂರುತ್ತೇವೆ. ಅವರ ದುಡ್ಡು ಡಬಲ್ ಮಾಡುವ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರು.ಗಳನ್ನು ಕಳೆದುಕೊಂಡು ಕಂಗಾಲಾಗುತ್ತೇವೆ. ಈ ಎಲ್ಲ ವಂಚನೆಯೂ ಪಾಕಿಸ್ತಾನಿಯರು ಇಲ್ಲವೇ ಚೀನಿಯರು ಮಾಡಿದ್ದಾರೆಂದು ಅರ್ಥವಲ್ಲ. ಆದರೆ ಆಧುನಿಕ ಯುದ್ಧ ತಂತ್ರದ ಭಾಗವಾಗಿ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಈಗ ಸೈಬರ್ ದಾಳಿಯನ್ನು ಎದುರಿಸಲೇಬೇಕಿದೆ. ಪ್ರತಿ ದಾಳಿಗೆ ಸಜ್ಜಾಗಲೇ ಬೇಕಿದೆ.

Lokesh Kayarga Column: ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ಪಕ್ಷ ನಾಯಕರ ಬೆಂಬಲ, ಜಾತಿ ಬೆಂಬಲ ಇಲ್ಲವೇ ಕ್ಷೇತ್ರದ ಮತದಾರರ ಬೆಂಬಲ ಈ ಮೂರರ ಪೈಕಿ ಒಂದೂ ಇಲ್ಲದೇ ಹೋದರೆ ಎಷ್ಟೇ ಪ್ರಭಾವಿ ನಾಯಕರಾದರೂ ರಾಜಕೀಯದಲ್ಲಿ ದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲ. ಪಕ್ಷ ನಿಷ್ಠೆ, ಮೌಲ್ಯ, ತತ್ವ-ಸಿದ್ದಾಂತ, ವೈಯಕ್ತಿಕ ವರ್ಚಸ್ಸು ಇವು ಗಳಿಂದ ಸದ್ಯದ ಚುನಾವಣೆ ರಾಜಕೀಯವನ್ನು ಗೆಲ್ಲಲು ಸಾಧ್ಯವಿಲ್ಲ. ರಾಜಕೀಯ ಮೌಲ್ಯಗಳಿಗೆ ಹೆಸ ರಾದ ಎ.ಟಿ.ರಾಮಸ್ವಾಮಿ. ವೈಎಸ್‌ವಿ ದತ್ತ ಮುಂತಾದವರು ಜೆಡಿಎಸ್ ಮಾತ್ರವಲ್ಲ ಈಗ ಯಾವ ಪಕ್ಷದಲ್ಲೂ ಪ್ರಸ್ತುತರಾಗಲು ಸಾಧ್ಯವಿಲ್ಲ.

Lokesh Kayarga Column: ಆಯೋಗದ ಮೇಲೆ ಆಯೋಗ, ಸಂತ್ರಸ್ತರಿಗಿಲ್ಲ ಪರಿಹಾರ ಯೋಗ

ಆಯೋಗದ ಮೇಲೆ ಆಯೋಗ, ಸಂತ್ರಸ್ಥರಿಗೆಲ್ಲ ಪರಿಹಾರ ಆಯೋಗ

ಚಾಮರಾಜನಗರದ ನೆಲದಲ್ಲಿಯೇ ವಿಶೇಷ ಸಂಪುಟ ಸಭೆ ನಡೆಸಲು ಸರಕಾರ ಸಜ್ಜಾಗಿದೆ. ಶುಕ್ರವಾರ (ಏಪ್ರಿಲ್ 17) ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಾದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿರುವ ಗಡಿ ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು. ಆಕ್ಸಿಜನ್ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಆಗಬೇಕು. ಸಂತ್ರಸ್ತರಿಗೆ ಕೊಡಲು ಸರಕಾರದ ಬಳಿ ದುಡ್ಡಿಲ್ಲ ಎಂದಾದರೆ ಕೋವಿಡ್ ಕಾಲದ ಹಗರಣಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಿ ದುಡ್ಡು ಪೋಲು ಮಾಡುವ ಪ್ರಹಸನವನ್ನಾದರೂ ಕೈ ಬಿಡಬೇಕು.

Lokesh Kaayarga Column: ನಮ್ಮವರ ಹೊರೆ ಮಧ್ಯೆ ಟ್ರಂಪಾಸ್ತ್ರ ಏನು ಮಹಾ ?

ನಮ್ಮವರ ಹೊರೆ ಮಧ್ಯೆ ಟ್ರಂಪಾಸ್ತ್ರ ಏನು ಮಹಾ ?

ಟ್ರಂಪ್ ನೀತಿ ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಆಧರಿಸಿ ಇಂದಲ್ಲ ನಾಳೆ ಮರು ವಿಮರ್ಶೆ ಯಾಗಬಹುದು. ಆದರೆ ಬೆಲೆ ಏರಿಕೆ ಮತ್ತು ತೆರಿಗೆ ಏರಿಕೆಯನ್ನು ವಾರ್ಷಿಕ ಪರಂಪರೆ ಎಂದು ಪರಿಗಣಿಸಿ ರುವ ನಮ್ಮ ನಾಯಕರ ನಿರ್ಧಾರಗಳೂ ಜಪ್ಪಯ್ಯ ಎಂದರೂ ಬದಲಾಗುವುದಿಲ್ಲ. ಏಕೆಂದರೆ ನಮ್ಮಲ್ಲಿ ಏರಿಕೆ ಪ್ರಕ್ರಿಯೆ ಕುರ್ಚಿ ಏರಿದವರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರ. ಇಲ್ಲಿ ಅಹವಾಲುಗಳಿಗೆ ಸ್ಥಾನವಿಲ್ಲ.

Lokesh Kayarga Column: ಕನ್ನಡಿಗರು ಇನ್ನೆಷ್ಟು ಉದಾರಿಗಳಾಗಬೇಕು ?

ಕನ್ನಡಿಗರು ಇನ್ನೆಷ್ಟು ಉದಾರಿಗಳಾಗಬೇಕು ?

ಅನ್ಯರಾಜ್ಯಗಳ ವಿಚಾರದಲ್ಲಿ ನಾವು ಸಹೋದರತೆಯ ಭಾವದಿಂದ ವರ್ತಿಸದೆ, ರಾಜ್ಯದ ಹಿತಾಸಕ್ತಿ ಯೊಂದನ್ನೇ ಮುಂದಿಟ್ಟುಕೊಂಡು ಸಾಗಿದ್ದರೆ ಚೆನ್ನೈ ನಗರಕ್ಕೆ ಕುಡಿಯುವ ನೀರು ಕಲ್ಪಿಸಿದ ತೆಲುಗು-ಗಂಗಾ ಯೋಜನೆಗೆ ಕರ್ನಾಟಕ ಅಡ್ಡಗಾಲು ಹಾಕಬಹುದಿತ್ತು. ತಮಿಳುನಾಡಿನ ಹೊಗೇನಕಲ್ ಯೋಜನೆ ಯನ್ನು ತಡೆಯಬಹುದಿತ್ತು. ಆದರೆ ನಮ್ಮ ಅಮಾಯಕತನ ಮತ್ತು ಅಸಡ್ಡೆ ನೆರೆ ರಾಜ್ಯಗಳಿಗೆ ಅನುಕೂಲವಾಗಿದೆ.

Lokesh Kaayarga Column: ಅವರ ತೆಕ್ಕೆಯಲ್ಲಿ ಕರಗಿದ್ದು ನಮ್ಮ ಮಾನಧನ !

ಅವರ ತೆಕ್ಕೆಯಲ್ಲಿ ಕರಗಿದ್ದು ನಮ್ಮ ಮಾನಧನ !

ನಾಗರಿಕರಾಗಿ ನಾವು ಗಮನಿಸಬೇಕಾದ ಮುಖ್ಯ ವಿಚಾರ ಎಂದರೆ, ಯಾರನ್ನೂ ಬಲ ವಂತವಾಗಿ ಈ ಜಾಲದಲ್ಲಿ ಸಿಲುಕಿಸಿಲ್ಲ. ಎಲ್ಲರೂ ಹನಿಯಾಸೆಗೆ ಬಿದ್ದು ಈ ಜಾಲದಲ್ಲಿ ಸಿಲುಕಿದ್ದಾರೆ. ಅಂದರೆ ತಾವು ಬಲಾಢ್ಯರು, ಪ್ರಭಾವಿಗಳು ಎಂಬ ನಶೆಯಲ್ಲಿ ಸಮಾಜದ ನೈತಿಕ ಪರಿಧಿ ಮೀರಿ ಹೆಣ್ಣಿನ ಸಂಗ ಬಯಸಿzರೆ. ಅದು ತಮ್ಮನ್ನು ಕೆಡವಲು ಬೀಸಿದ ಜಾಲ ಎಂದು ತಿಳಿದಾಗ ವಿಲ ವಿಲನೇ ಒದ್ದಾಡಿದ್ದಾರೆ.

Lokesh Kaayarga Column: ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?

ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?

ಬದಲಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಶಿಥಿಲ ವಾಗಿರುವುದು ನಮ್ಮ ಕುಟುಂಬ ವ್ಯವಸ್ಥೆ. ಈ ಕುಟುಂಬ ವ್ಯವಸ್ಥೆಯನ್ನು ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿ, ಗೌರವಗಳಿಂದಷ್ಟೇ ಬಲಪಡಿಸಲು ಸಾಧ್ಯ. ಸಹಾಯವಾಣಿ, ದೂರಿನ ವ್ಯವಸ್ಥೆ, ಕಾನೂನುಗಳು ಹಿರಿಯ ನಾಗರಿಕರಿಗೆ ತಾತ್ಕಾಲಿಕ ಉರುಗೋಲುಗಳಾಗಬಹುದೇ ವಿನಾ ಮನಸ್ಸಿಗೆ ನೆಮ್ಮದಿ, ಸಾಂತ್ವನ ನೀಡಲಾರದು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರೀತಿ, ವಿಶ್ವಾಸದ ಒರತೆ ತುಂಬಿ ಮಾನವೀಯ ಮೌಲ್ಯಗಳು ಬತ್ತಿ ಹೋಗದಂತೆ ನೋಡಿಕೊಳ್ಳಬೇಕಿದೆ. ಹೆತ್ತವರ ಕೈಯಲ್ಲಿ ಆಸ್ತಿ ಬರೆಸಿಕೊಂಡು, ಹೊರ ತಳ್ಳುವ ಮಕ್ಕಳ ಸಂತಾನ ಹೆಚ್ಚಾಗದಿರಲೆಂದು ಪ್ರಾರ್ಥಿಸಬೇಕಿದೆ.

Lokesh Kaayarga Column: ಮತ್ತದೇ ಬೊಫೋರ್ಸ್‌ ಫಿರಂಗಿ ಸದ್ದು !

ಮತ್ತದೇ ಬೊಫೋರ್ಸ್‌ ಫಿರಂಗಿ ಸದ್ದು !

ಅಮೆರಿಕದ ಖಾಸಗಿ ಗೂಢಚರ, ಫೇರ್ ಫಾಕ್ಸ್ ಗ್ರೂಪ್‌ನ ಮುಖ್ಯಸ್ಥ ಮೈಕೆಲ್ ಹೆರ್ಷ್‌ಮನ್ ಬೊಫೋರ್ಸ್ ಹಗರಣ ಸಂಬಂಧ 2017ರಲ್ಲಿ ನೀಡಿದ ಹೇಳಿಕೆ ಆಧರಿಸಿ, ಹೆಚ್ಚಿನ ಮಾಹಿತಿ ಕೋರಿ ಸಿಬಿಐ ಅಮೆರಿಕದ ಮುಂದೆ ನ್ಯಾಯಾಂಗ ಕೋರಿಕೆ ಮಂಡಿಸಲು ಮುಂದಾಗಿದೆ. ಹಗರಣದ ಬಗ್ಗೆ ಮತ್ತೊಮ್ಮೆ ತನಿಖೆ‌ ನಡೆಸುವ ಸಿಬಿಐ ಮನವಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ತಿರಸ್ಕರಿಸಿದೆ. ಆದರೆ 37 ವರ್ಷಗಳ ಬಳಿಕ ಈ ಹಗರಣಕ್ಕೆ ಮತ್ತೊಮ್ಮೆ ಜೀವ ತುಂಬುವ ಪ್ರಯತ್ನ ನಡೆದಿದೆ.

Lokesh kaayarga Column: ಕೊಬ್ಬಿನ ಸಮಸ್ಯೆ ಕೊಬ್ಬಿದ ನಮ್ಮ ವ್ಯವಸ್ಥೆಯಲ್ಲಿದೆ !

ಕೊಬ್ಬಿನ ಸಮಸ್ಯೆ ಕೊಬ್ಬಿದ ನಮ್ಮ ವ್ಯವಸ್ಥೆಯಲ್ಲಿದೆ !

ಭಾರತೀಯರು ಪ್ರತಿ ತಿಂಗಳು ಶೇ.10ರಷ್ಟು ಕಡಿಮೆ ಅಡುಗೆ ಎಣ್ಣೆಯನ್ನು ಬಳಸಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸಲು ಇನ್ಫೋಸಿಸ್ ಸಹ-ಸಂಸ್ಥಾ ಪಕ ನಂದನ್ ನಿಲೇಕಣಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಸಂಸದೆ ಸುಧಾಮೂರ್ತಿ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರ ತಂಡವೊಂದನ್ನು ಪ್ರಧಾನಿ ಹೆಸರಿಸಿದ್ದಾರೆ