ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಮೋಹನ್‌ ವಿಶ್ವ

columnist

info77@vishwavani.news

ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

Articles
Mohan Vishwa Column: ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಅಖಂಡ ಭಾರತದ ಸಾವಿರಾರು ಕಿ.ಮೀ. ಭೂಭಾಗವನ್ನು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಲಾಗಿದೆ. ಭಾರತವನ್ನು 7 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು, ಪಾಕಿಸ್ತಾನ ಮತ್ತು ಚೀನಾದ ವಿಷಯದಲ್ಲಿ ತೋರಿದ ಮೃದುಧೋರಣೆ ಇಷ್ಟಕ್ಕೆಲ್ಲ ಕಾರಣ. ಚೀನಾ ಎಂಬ ನಯವಂಚಕ ರಾಷ್ಟ್ರವನ್ನು ದೊಡ್ಡ ಶಕ್ತಿಯೆಂದು ದೇಶದೆದುರು ಬಿಂಬಿಸಿದ್ದು ಕಾಂಗ್ರೆಸ್ ಪಕ್ಷವೇ.

Mohan Vishwa Column: ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ ಕಳೆದ ಹತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ನಾಲ್ಕನೇ ಸ್ಥಾನಕ್ಕೆ ತಲುಪಿರುವುದು, ಎಡಚರರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. 2014 ರಲ್ಲಿ ಭಾರತದ ತಲಾದಾಯ ಅಂದಾಜು 1100 ಅಮೆರಿಕನ್ ಡಾಲರ್ ನಷ್ಟಿತ್ತು. 2025ರಲ್ಲಿ ತಲಾ ದಾಯ 2800 ಅಮೆರಿಕನ್ ಡಾಲರ್ ನಷ್ಟಿದೆ. ಮೋದಿ ಅವಧಿಯ ತಲಾದಾಯದ ಬಗ್ಗೆ ಮಾತ ನಾಡುವ ಕಾಂಗ್ರೆಸ್ ಮತ್ತು ಎಡಚರ ಪಟಾಲಂ, 1991ರಲ್ಲಿ ಭಾರತದ ತಲಾದಾಯ ಕೇವಲ 300 ಅಮೆರಿಕನ್ ಡಾಲರ್‌ ನಷ್ಟಿದ್ದ ಬಗ್ಗೆ ಮಾತನಾಡುವುದಿಲ್ಲ.

Mohan Vishwa Column: ಪಾಕಿಸ್ತಾನದ ಭ್ರಷ್ಟ ಪ್ರಧಾನಮಂತ್ರಿಗಳು

ಪಾಕಿಸ್ತಾನದ ಭ್ರಷ್ಟ ಪ್ರಧಾನಮಂತ್ರಿಗಳು

ಪಾಕಿಸ್ತಾನದಲ್ಲಿ, ಅದರ ಹುಟ್ಟಿನಿಂದಲೂ ರಾಜಕೀಯದ ಅಸ್ಥಿರತೆ ಕಾಡುತ್ತಿದೆ. ಅಲ್ಲಿನ ಮಿಲಿಟರಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ಆಡಳಿತ ನಡೆಸಲು ಬಿಟ್ಟಿಲ್ಲ. ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮಿಂದೆದ್ದು ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿರುವ ಆರೋಪಗಳಿವೆ. ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದಲ್ಲಿ ತೊಡಗಿ ವಿದೇಶಗಳಲ್ಲಿ ಆಸ್ತಿ ಮಾಡಿ ರುವ ಆರೋಪಗಳಿವೆ.

Mohan Vishwa Column: ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

360 ಡಿಗ್ರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ‘ಡಿ-4’ ರೆಡಾರ್ ಸಾಧನವು, ರೇಡಿಯೋ ತರಂಗ ಹೊಂದಿ ರುವ ಸೆನ್ಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿದೆ. ಇದು ಶತ್ರು ದೇಶದ ಅಷ್ಟ ದಿಕ್ಕುಗಳಲ್ಲಿನ ಡ್ರೋನ್‌ಗಳನ್ನು ದೂರದಿಂದಲೇ ಪತ್ತೆಮಾಡಿ, ಗಡಿ ಯೊಳಗೆ ಪ್ರವೇಶಿಸದಂತೆ ಜಾಮ್ ಮಾಡುತ್ತದೆ. ಭಾರತದ ಮೇಲೆ ಹಾರಿಬರುವ ಶತ್ರುದೇಶದ ಡ್ರೋನ್‌ಗಳ ದಾರಿ ತಪ್ಪಿಸುವ ತಂತ್ರಜ್ಞಾನ ವನ್ನು ಇದರಲ್ಲಿ ಅಳವಡಿಸಲಾಗಿದೆ. ಸಣ್ಣ ಡ್ರೋನ್ ಜತೆಗೆ, ಮಾನವರಹಿತ ದೊಡ್ಡ ಡ್ರೋನ್‌ಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

Mohan Vishwa Column: ಪಾಕ್‌ನ ಆದಾಯ ಮೂಲ: ಉಗ್ರರ ಫೋಷಣೆ

ಪಾಕ್‌ನ ಆದಾಯ ಮೂಲ: ಉಗ್ರರ ಫೋಷಣೆ

ಅನೇಕ ಚರ್ಚುಗಳ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲೂ ಈ ಭಯೋತ್ಪಾದಕ ಸಂಘಟ ನೆಯ ಹೆಸರು ಕೇಳಿಬಂದಿತ್ತು. 1980ರ ಜನವರಿಯಲ್ಲಿ, ಇಸ್ಲಾಮಿಕ್ ಕಾನರೆನ್ಸ್‌ನ 34 ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಅಫ್ಘಾನಿಸ್ತಾನದಿಂದ ಸೋವಿಯತ್ ಪಡೆಗಳನ್ನು ಬೇಷರತ್ತಾಗಿ, ತುರ್ತಾಗಿ ಹಿಂತೆಗೆದು ಕೊಳ್ಳಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದರು.

Mohan Vishwa Column: ಹಿಂದೂ ಹಬ್ಬಗಳ ಆರ್ಥಿಕತೆ

ಹಿಂದೂ ಹಬ್ಬಗಳ ಆರ್ಥಿಕತೆ

ಭಾರತದ ಆರ್ಥಿಕತೆಯಲ್ಲಿ ಹಿಂದೂ ಹಬ್ಬಗಳು ದೊಡ್ಡಮಟ್ಟದ ಕೊಡುಗೆಯನ್ನು ನೀಡುತ್ತವೆ. ಯುಗಾದಿ, ದಸರಾ, ದೀಪಾವಳಿ, ನವರಾತ್ರಿ ಹಬ್ಬಗಳು ಬಂತೆಂದರೆ ಸಾಕು ಸಾಲುಸಾಲಾಗಿ ನೂತನ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ನೂತನ ವಸ್ತು ಗಳನ್ನು ಮಾರುಕಟ್ಟೆಗೆ ತರಲು ಹಿಂದೂ ಹಬ್ಬಗಳನ್ನು ಬಳಸಿಕೊಳ್ಳುತ್ತವೆ. ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ನೂತನ ಯೋಜನೆಗಳನ್ನು ಹಿಂದೂ ಹಬ್ಬಗಳಂದು ಮಾರ್ಕೆಟ್ ಮಾಡುತ್ತವೆ

Mohan Vishwa Column: ಹಿಮಾಲಯನ್‌ ಬ್ಲಂಡರ್‌ ಮಾಡಿದ್ದ ನೆಹರು

ಹಿಮಾಲಯನ್‌ ಬ್ಲಂಡರ್‌ ಮಾಡಿದ್ದ ನೆಹರು

ಕಳೆದ 77 ವರ್ಷಗಳಲ್ಲಿ ಒಮ್ಮೆ ಮಾತ್ರ ನೀರನ್ನು ನಿಲ್ಲಿಸುವ ಪ್ರಯತ್ನವು ಅಧಿಕಾರಿಗಳಿಂದ ಆಗಿತ್ತು; ಆದರೆ ಅಧಿಕಾರಿಗಳ ಮಾತು ಕೇಳದೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ನೆಹರು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರು. 1948ರ ಏಪ್ರಿಲ್ 1ರಂದು, ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಭಾರತದಲ್ಲಿ ಪಂಜಾಬ್‌ನ ಎಂಜಿನಿಯರ್‌ಗಳು ಫಿರೋಜ್‌ಪುರದ ಮುಖ್ಯ ಕಾಮಗಾರಿ ಪ್ರದೇಶದಿಂದ ದೇಪಾಲ್ಪುರ ಕಾಲುವೆ ಮತ್ತು ಲಾಹೋರ್‌ಗೆ ನೀರು ಸರಬರಾಜನ್ನು ಸ್ಥಗಿತಗೊಳಿಸಿದ್ದರು.

Mohan Vishwa Column: ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ

ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ

ಅಖಂಡ ಭಾರತದ ವಿಭಜನೆಯ ವೇಳೆ ಪಾಕಿಸ್ತಾನದಲ್ಲೇ ಉಳಿಯಬೇಕಾಗಿಬಂದ ಹಿಂದೂಗಳು ಇಂದಿಗೂ ಅಲ್ಲಿ ಅಲ್ಪಸಂಖ್ಯಾತರಾಗಿ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ನಾಡಿನಲ್ಲಿ ಜನ್ಮತಳೆದು ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿಯವರು ತಮ್ಮ ದರ್ಬಾರಿನಲ್ಲಿ ಸ್ವಾಮೀಜಿಯ ಆದರ್ಶಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ, ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ಆಶ್ರಯ ನೀಡುವ ಮೂಲಕ ತಮ್ಮ ಮತ ಬ್ಯಾಂಕ್ ತುಷ್ಟೀಕರಣ ರಾಜಕೀಯದಲ್ಲಿ ನಿರತ ರಾಗಿದ್ದಾರೆ.

Mohan Vishwa Column: ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಬ್ರಿಟಿಷರ ಕಾಲದಿಂದಲೂ ಮುಸ್ಲಿಮರನ್ನು ಓಲೈಸುವ ಕೆಲಸವು ವಕ್ಫ್ ಕಾಯಿದೆಯ ಮೂಲಕ ನಡೆದು ಕೊಂಡು ಬಂದಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ವಕ್ಫ್ ಬೋರ್ಡ್‌ಗಳು ಅಂದಾಜು 8,94,509 ಆಸ್ತಿ ಗಳನ್ನು ಹೊಂದಿವೆ. 2013ರಲ್ಲಿ ಅಂದಾಜು 18 ಲಕ್ಷ ಎಕರೆಯಷ್ಟಿದ್ದ ವಕ್ಫ್ ಆಸ್ತಿ, 2025ರ ಹೊತ್ತಿಗೆ 37 ಲಕ್ಷ ಎಕರೆಯಷ್ಟಾಗಿತ್ತು.

Mohan Vishwa Column: ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !

ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !

ಗಂಡು ಮಕ್ಕಳ ಮೇಲೆ ಹೆಚ್ಚಿನ ವ್ಯಾಮೋಹವಿರುವ ಪೋಷಕರು ಒಂದೆಡೆಯಾದರೆ, ಹೆಣ್ಣು ಮಕ್ಕಳ ಮೇಲೆ ಮಮಕಾರ ವಿರುವ ಪೋಷಕರು ಮತ್ತೊಂದೆಡೆ. ಮೊಮ್ಮಕ್ಕಳ ಮೇಲಿನ ಅಪಾರ ವಾದ ಪ್ರೀತಿಯಿಂದ, ಮಕ್ಕಳನ್ನೂ ಮೀರಿ ಅವರ ಹೆಸರಿಗೆ ಉಯಿಲು ಮಾಡುವ ಅಜ್ಜಂದಿರನ್ನೂ ನೋಡಿದ್ದೇವೆ.

Mohan Vishwa Column: ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ನಕ್ಸಲ್ ಚಳವಳಿಯು 1980ರ ದಶಕದಲ್ಲಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ಆಂಧ್ರಪ್ರದೇಶದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ 1980 ರಲ್ಲಿ ನಕ್ಸಲ್ ಸಂಘಟನೆ ಸ್ಥಾಪನೆಯಾಯಿತು. ಭೂಮಾಲೀಕರನ್ನು ಅಪಹರಿಸಿ ಹಳ್ಳಿಯ ಜನರ ಮುಂದೆ ಕ್ಷಮೆ ಯಾಚಿಸುವಂತೆ ಬಲವಂತ ಮಾಡುವುದು, ಹಣ ನೀಡುವಂತೆ ಒತ್ತಾಯಿಸು ವುದು ಅವರ ಚಳವಳಿಯ ನಿತ್ಯದ ಕೆಲಸವಾಗಿತ್ತು

Mohan Vishwa Column: ಅಂಬೇಡ್ಜರ್‌ ಮತ್ತು ಆರೆಸ್ಸೆಸ್:‌ ಸಮಾನ ಚಿಂತನೆಗಳು

ಅಂಬೇಡ್ಜರ್‌ ಮತ್ತು ಆರೆಸ್ಸೆಸ್:‌ ಸಮಾನ ಚಿಂತನೆಗಳು

ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಷಯದಲ್ಲಿ ಸದಾ ಟ್ರೋಲ್ ಆಗುವ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲೂ ಹಿಂದೆ ಬೀಳಲಿಲ್ಲ. ಬಿಜೆಪಿಯ ಶಾಸಕರು ಇಂದಿಗೂ ಸಂಘದ ಶಾಖೆಗೆ ಶಿಸ್ತಾಗಿ ಹೋಗುವ ವಿಷಯವನ್ನು ಪ್ರಿಯಾಂಕ್ ಖರ್ಗೆಯವರು ತಿಳಿದುಕೊಳ್ಳಬೇಕು. ಕೆಲವ ರಂತೂ, ‘ಸಂಘವು ಬ್ರಾಹ್ಮಣರ ಪರ, ಅವರು ಮನುವಾದಿಗಳು’ ಎಂಬ ಹಸಿಸುಳ್ಳನ್ನು ಆಗಾಗ ಹೇಳುತ್ತಲೇ ಇರು ತ್ತಾರೆ; ‘ಸಂಘದವರು ದಲಿತ ವಿರೋಧಿಗಳು’ ಎಂಬುದು ಇವರು ದಶಕಗಳಿಂದ ಹೇಳಿಕೊಂಡೇ ಬಂದಿರುವ ಮತ್ತೊಂದು ಸುಳ್ಳು.

Mohan Vishwa Column: ಮಹಾತ್ಮ ಗಾಂಧಿಯವರ ಹಿಂದಿ ಪ್ರಚಾರ !

ಮಹಾತ್ಮ ಗಾಂಧಿಯವರ ಹಿಂದಿ ಪ್ರಚಾರ !

ಒಂದೆಡೆ ಮಹಾತ್ಮ ಗಾಂಧಿಯವರ ಹೆಸರನ್ನು ಎಳೆದು ತಂದು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ‘ಇಂಡಿಯ’ ಒಕ್ಕೂಟದ ದಕ್ಷಿಣ ಭಾರತದ ನಾಯಕರು, ಗಾಂಧಿಯವರ ಹಿಂದಿ ಪ್ರೇಮ ಎಷ್ಟಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಿಲ್ಲ. ಶಿಕ್ಷಣದಲ್ಲಿ ಹಿಂದಿ, ಸಂಸ್ಕೃತ, ಪರ್ಷಿ ಯನ್, ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆ ಗಳನ್ನು ಕಲಿಯಬೇಕು ಎಂದಿದ್ದಾರೆ ಗಾಂಧೀಜಿ.

Mohan Vishwa Column: ಧರ್ಮಾಧಾರಿತ ಮೀಸಲಾತಿ ಸಲ್ಲದು

ಧರ್ಮಾಧಾರಿತ ಮೀಸಲಾತಿ ಸಲ್ಲದು

ಮುಸಲ್ಮಾನರ ಋಣ ಸಂದಾಯದ ಮುಂದುವರಿದ ಭಾಗವಾಗಿ ಸರಕಾರಿ ಟೆಂಡರ್‌ಗಳಲ್ಲಿ ಮುಸಲ್ಮಾನರಿಗೆ ಶೇ.4ರ ಮೀಸಲಾತಿ ದಕ್ಕಿತು. ಸಂವಿಧಾನದ ಪ್ರಕಾರ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ನಿಷೇಧವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೇರವಾಗಿ ಮೀಸ ಲಾತಿ ನೀಡುವ ಅವಕಾಶವನ್ನು ಸಂವಿಧಾನದ ಪರಿಚ್ಛೇದ 15 ಮತ್ತು 42ರಲ್ಲಿ ಕಲ್ಪಿಸಲಾಗಿದೆ.

Mohan Vishwa Column: ಆರ್‌ಎಸ್‌ಎಸ್‌ ಒಂದು ಆನೆಯಿದ್ದಂತೆ

ಆರ್‌ಎಸ್‌ಎಸ್‌ ಒಂದು ಆನೆಯಿದ್ದಂತೆ

ತಮ್ಮ ಪ್ರಚಾರಕ್ಕಾಗಿ ಮತ್ತು ಒಂದು ಸಮುದಾಯದ ಓಲೈಕೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿನಾಕಾರಣ ಮುನ್ನೆಲೆಗೆ ತರುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಭಾರತೀ ಯ ಜನತಾಪಕ್ಷವನ್ನು ವಿರೋಧಿಸುವ ಭರದಲ್ಲಿ ಕೆಲವರು ಸಂಘವನ್ನು ಎಳೆದು ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪರಿಪಾಠವು ಹಲವು ದಶಕಗಳಿಂದ ನಡೆದು ಕೊಂಡು ಬಂದಿದೆ

Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

ಮರ್ಕೆಲ್ ಅವರ ಈ ಅಭ್ಯಾಸ ಕ್ರಮೇಣ ದೊಡ್ಡ ಪ್ರಚಾರವಾಗಿ ಬದಲಾಯಿತು, ದಿನದಿಂದ ದಿನಕ್ಕೆ ಜರ್ಮನ್ನರ ಮನೆಮಾತಾಯಿತು. ಜರ್ಮನ್ ಪ್ರಜೆಗಳೂ ಈ ಅಭ್ಯಾಸ ಮಾಡಿಕೊಂಡರು. ಇದನ್ನು ಮರ್ಕೆಲ್ ಡೈಮಂಡ್ ಅಥವಾ ಇಂಗ್ಲಿಷ್ ಮಾಧ್ಯಮದವರು ‘ಶಕ್ತಿಯ ತ್ರಿಕೋನ’ ಎಂದು ಕರೆದರು. ಇದು ಕೈಗಳನ್ನು ಹೊಟ್ಟೆಯ ಮುಂದೆ ಇಡುವ ಮೂಲಕ ಮಾಡಲಾದ ಒಂದು ಕೈಸೂಚಕವಾಗಿದೆ. ಇದು ಬೆರಳ ತುದಿಗಳು, ಹೆಬ್ಬೆರಳು ಮತ್ತು ತೋರುಬೆರಳಿನ ಆಕಾರವನ್ನು ಹೊಂದಿರುತ್ತದೆ

‌Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್‌ ಹೊಸ ಡೀಲ್

‌Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್‌ ಹೊಸ ಡೀಲ್

ಅಧಿಕಾರಕ್ಕೆ ಬರುತ್ತಿದ್ದಂತೆ ಟ್ರಂಪ್ ತೆಗೆದುಕೊಳ್ಳುತ್ತಿರುವ ಹಲವು ನಿರ್ಧಾರಗಳು ಹೊರಜಗತ್ತಿಗೆ ಕಿರಿಕಿರಿ ಉಂಟು ಮಾಡುತ್ತಿರಬಹುದು. ಆದರೆ ಟ್ರಂಪ್ ಒಬ್ಬ ವ್ಯವಹಾರಸ್ಥರಾದ ಕಾರಣ, ತಮ್ಮ ದೇಶಕ್ಕೆ ಆಗ ಬಹುದಾದ ಉಪಯೋಗಗಳ ಬಗ್ಗೆ ಮಾತ್ರ ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ

Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಮುಗಿದಿದೆ. ಹಾವೇರಿ ಜಿಲ್ಲೆಯ ಹನುಮಂತ ವಿಜೇತನಾಗಿ ದ್ದಾನೆ, ಬಹುಮಾನ ಗೆದ್ದಿದ್ದಾನೆ. ಕುರಿಗಾಹಿಯಾಗಿದ್ದ ಹನು ಮಂತನ ಪ್ರತಿಭೆಯು ವಿವಿಧ ಕಾರ್ಯಕ್ರಮ ಗಳ ಮೂಲಕ ಮನೆಮನೆಗೂ ತಲುಪಿತ್ತು. ಅದರ ಮುಂದುವರಿದ ಭಾಗವಾಗಿ ಆತ ಬಿಗ್ ಬಾಸ್ ಸ್ಪರ್ಧೆ ಯಲ್ಲಿ ಗೆದ್ದಿದ್ದಾನೆ. ಹೀಗೆ ಗೆದ್ದ ನಂತರ ಆತನಿಗೆ ಕಲರ್ಸ್ ಕನ್ನಡ ವಾಹಿನಿಯು ನೀಡಿದ ಬಹುಮಾನದ ಮೇಲಿನ ತೆರಿಗೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ

Mohan Vishwa Column: ಸಾಂಸ್ಕೃತಿಕ, ಆರ್ಥಿಕ ಶಕ್ತಿಯ ಸಂಕೇತ ಮಹಾಕುಂಭ

Mohan Vishwa Column: ಸಾಂಸ್ಕೃತಿಕ, ಆರ್ಥಿಕ ಶಕ್ತಿಯ ಸಂಕೇತ ಮಹಾಕುಂಭ

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ತಮ್ಮ ನಾಸ್ತಿಕತೆಯ ಪ್ರದರ್ಶನಕ್ಕೆ ಎಡಚರರು ಹಿಂದೂ ದೇವರನ್ನು ಮಾತ್ರ ಟಾರ್ಗೆಟ್ ಮಾಡುತ್ತಾರೆ. ಹಿಂದೂಗಳು ಸಹಿಷ್ಣುಗಳು ಅವರ ನಂಬಿಕೆ, ಆಚಾರ, ವಿಚಾರ, ಸಂಸ್ಕೃತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ದರೂ ತಮ್ಮ ವಿರುದ್ಧ ತಿರುಗಿಬೀಳುವುದಿಲ್ಲವೆಂಬ ಧೈರ್ಯ ಎಡಚರ ವಲಯದಲ್ಲಿದೆ

Mohan Vishwa Column: ಇವರು ನಟೋರಿಯಸ್‌ ನಗರ ನಕ್ಸಲರು

Mohan Vishwa Column: ಇವರು ನಟೋರಿಯಸ್‌ ನಗರ ನಕ್ಸಲರು

ನಿಷೇಧದ ನಂತರ ಹಂಚಿಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಮತ್ತು ಸೇರಿದ ಕೆಲವೇ ತಿಂಗಳಲ್ಲಿ ಅದರಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ

Mohan Vishwa Column: 1991ರಲ್ಲಿ ಭಾರತ ದಿವಾಳಿಯಾದದ್ದು ಯಾಕೆ ?

Mohan Vishwa Column: 1991ರಲ್ಲಿ ಭಾರತ ದಿವಾಳಿಯಾದದ್ದು ಯಾಕೆ ?

1991 ರಲ್ಲಿ ದೇಶದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರು ಎಂಬ ಚರ್ಚೆ ಆಗುವುದೇ ಇಲ್ಲ, ಸ್ವಾತಂತ್ರ್ಯಾ ನಂತರ 40 ವರ್ಷಗಳ ಕಾಲ ಕೇಂದ್ರ ಮತ್ತು ದೇಶದ ಅನೇಕ ರಾಜ್ಯ

Mohan Vishwa Column: ಅಮೆರಿಕದಲ್ಲಿ ಯಹೂದಿ ಗಳ ಜಾಗಕ್ಕೆ ಭಾರತೀಯರು !

Mohan Vishwa Column: ಅಮೆರಿಕದಲ್ಲಿ ಯಹೂದಿ ಗಳ ಜಾಗಕ್ಕೆ ಭಾರತೀಯರು !

ಡೊನಾಲ್ಡ್ ಟ್ರಂಪ್ ಅವರ ಗೆಲುವಿನ ಹಿಂದೆ ಅನಿವಾಸಿ ಭಾರತೀಯರ ಕೊಡುಗೆ ಬಹಳಷ್ಟಿದೆ. ಹಲವು ದಶಕಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿ ನೆಲೆ ಕಂಡುಕೊಂಡಿರುವ

Mohan Vishwa Column: ಗೆದ್ದಾಗ EVM ಬೇಕು ಸೋತಾಗ ಬೇಡ !

Mohan Vishwa Column: ಗೆದ್ದಾಗ EVM ಬೇಕು ಸೋತಾಗ ಬೇಡ !

ಪ್ರಜಾಪ್ರಭುತ್ವದ ಗೆಲುವು, ಸಂವಿಧಾನದ ಗೆಲುವು, ಎಂದೆಲ್ಲ ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಚುನಾವಣಾ ಆಯೋಗಕ್ಕೆ ವಂದನೆ ಸಲ್ಲಿಸಿ, ಇಡೀ ಇಂಡಿ ಒಕ್ಕೂಟ ತಮ್ಮ ಬೆನ್ನನ್ನು ತಾವು

Mohan Vishwa Column: ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದ ಅಫ್ಘಾನಿಗಳು !

Mohan Vishwa Column: ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದ ಅಫ್ಘಾನಿಗಳು !

ಮುಸಲ್ಮಾನ್ ಆಚರಣೆಗಳ ಮೂಲಕ ತನ್ನದೇ ಆದ ಕಾನೂನಿನೊಂದಿಗೆ ಆಡಳಿತ ನಡೆಸುತ್ತಿದಂತಹ ದೇಶ ಅಫ್ಘಾನಿಸ್ತಾನ. ಈ ದೇಶದ ಮೇಲೆ ಮೊಟ್ಟ ಮೊದಲ