ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಮೋಹನ್‌ ವಿಶ್ವ

columnist

info77@vishwavani.news

ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

Articles
Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

ಭಾರತ ಇನ್ನೆರಡು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವುದು ಖಚಿತ ವೆಂದು ಅನೇಕ ತಜ್ಞರು ಹೇಳುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಜಗತ್ತಿನ ಹಿಂದುಳಿದ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಇಂದು ಮುಂದುವರಿಯುತ್ತಿರುವ ದೇಶಗಳ ಪಟ್ಟಿಯಲ್ಲಿ ಮೇಲಕ್ಕೇರುತ್ತಿರುವುದು ಹಲವರ ನಿದ್ದೆಗೆಡಿಸಿದೆ.

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

Mohan Vishwa Column: ನಗರ ನಕ್ಸಲರ ಬುಡಕ್ಕೆ ಬಿತ್ತು ಬೆಂಕಿ !

ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪ ಪ್ರಚಾರದಲ್ಲಿ ಭಾಗಿಯಾಗಿರುವ ಮತ್ತೊಬ್ಬ ವ್ಯಕ್ತಿ ಬಾಲನ್. ಈ ವ್ಯಕ್ತಿಯ ಮಾತುಗಳನ್ನು ಕೇಳಿದರೆ ನಗಲೂ ಆಗದು, ಅಳಲೂ ಆಗದು. ಒಮ್ಮೆ ಮಾಧ್ಯಮ ದಲ್ಲಿ ನಡೆಯುತ್ತಿದ್ದ ಚರ್ಚೆಯೊಂದರಲ್ಲಿ ‘ಭಾರತ್ ಮಾತಾ ಕಿ ಜೈ’ ಹೇಳಿಕೆಯು ಸಂವಿಧಾನ ವಿರೋಧಿ ಎಂದು ಹೇಳಿದ್ದ ನಟೋರಿಯಸ್ ಎಡಚರ ವ್ಯಕ್ತಿ ಈ ಬಾಲನ್.

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

M‌ohan Vishwa Column: ಈಗ ಕರ್ನಾಟಕದ ದೇವಸ್ಥಾನಗಳು ಟಾರ್ಗೆಟ್

ಹಿಂದೂ ಧರ್ಮದ ಸಾವಿರಾರು ದೇವಸ್ಥಾನಗಳ ನಾಡಿನಲ್ಲಿ ಹಿಂದೂ ಸಂಸ್ಕೃತಿಗೆ ಇವು ಮಾಡಿದ ಅಪಮಾನಗಳು ಒಂದೆರಡಲ್ಲ. ಜನಿವಾರ ಧರಿಸಿದವರನ್ನು ನೋಡಿ ನಗುವಂತೆ ಮಾಡಲಾಯಿತು, ದೇವಸ್ಥಾನಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಆದರೆ ಹಿಂದೂ ಧರ್ಮದ ಆಚರಣೆ ಗಳ ವಿರುದ್ಧ ಶುರುವಾದಂಥ ದ್ರಾವಿಡ ರಾಜಕಾರಣದಲ್ಲಿ ಬಳಕೆಯಾದದ್ದು ಹಿಂದೂ ದೇವಸ್ಥಾನಗಳ ಹಣ. ತಮಿಳುನಾಡಿನ ಹಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ರಾಜಕೀಯ ನಾಯಕರ ಮಧ್ಯಸ್ಥಿಕೆಯಿಂದ ಚುನಾಯಿಸಲ್ಪಡುತ್ತವೆ.

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಧರ್ಮಸ್ಥಳದ ಮಂಜುನಾಥನೆಂದರೆ ಅಸಾಮಾನ್ಯ ಶಕ್ತಿ. ವರ್ಷಕ್ಕೆ ಒಮ್ಮೆಯಾದರೂ ಸ್ವಾಮಿಯ ದರ್ಶನ ಮಾಡಿದರೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಬೃಹತ್ ಧಾರ್ಮಿಕ ಶಕ್ತಿಕೇಂದ್ರ ಧರ್ಮಸ್ಥಳ. ಹಲವು ದಶಕಗಳಿಂದ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

Mohan Vishwa Column: ಸಾವರ್ಕರ್‌ ಮತ್ತು ಬೋಸರ ಭಾರತೀಯ ಸೇನೆ

ಸಾವರ್ಕರ್‌ ಮತ್ತು ಬೋಸರ ಭಾರತೀಯ ಸೇನೆ

ಶತ್ರುವನ್ನು ತಡೆಗಟ್ಟುವುದು ಹಾಗೂ ಕಟ್ಟಿ ಹಾಕುವುದೇ ಹೊರತು ನಾವು ಸಿಕ್ಕಿಹಾಕಿಕೊಳ್ಳುವುದಲ್ಲ ಎಂಬುದನ್ನು ಸಾವರ್ಕರರು ಸುಭಾಷರಿಗೆ ಅಂದು ಮನವರಿಕೆ ಮಾಡಿಕೊಟ್ಟರು. ಸುಭಾಷರ ಬಳಿ ಸಾವರ್ಕರರು ಸೈನಿಕ ಕ್ರಾಂತಿಯ ಬಗ್ಗೆ ಮಾತನಾಡುವಾಗ, ಮೊದಲನೇ ಮಹಾಯುದ್ಧದಲ್ಲಿ ಭಾರತೀಯ ಕ್ರಾಂತಿಕಾರಿಗಳು ಜರ್ಮನಿಯಲ್ಲಿದ್ದ ಯುದ್ಧಕೈದಿಗಳ ಜತೆಗೂಡಿ ‘ಕ್ರಾಂತಿಸೈನ್ಯ’ ಕಟ್ಟಿದ್ದ ವಿಷಯವನ್ನು ಚರ್ಚಿಸಿದರು.

Mohan Vishwa Column: ಕೇಸರಿ ಭಯೋತ್ಪಾದನೆಯ ಪಿತೂರಿ ಬಯಲಾಯಿತು

ಕೇಸರಿ ಭಯೋತ್ಪಾದನೆಯ ಪಿತೂರಿ ಬಯಲಾಯಿತು

2008ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಬ್ಲಾ ಪ್ರಕರಣವನ್ನು ಹಿಂದೂಗಳ ತಲೆಗೆ ಕಟ್ಟಿದ್ದ ಕಾಂಗ್ರೆಸ್ ಪಕ್ಷ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಶ್ರೀಕಾಂತ್ ಪುರೋಹಿತ್, ಮೇಜರ್ ರಮೇಶ್ ಮತ್ತಿತರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಕೇಸರಿ ಭಯೋತ್ಪಾದನೆ ಎಂಬ ನಿರೂಪಣೆಯನ್ನು ದೇಶದಲ್ಲಿ ಹರಿಬಿಡಲಾಗಿತ್ತು

Mohan Vishwa Column: ಜಿಎಸ್‌ಟಿ ನೋಟಿಸ್‌ ತಕರಾರಿನ ಸುತ್ತಮುತ್ತ !

ಜಿಎಸ್‌ಟಿ ನೋಟಿಸ್‌ ತಕರಾರಿನ ಸುತ್ತಮುತ್ತ !

ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ರಾಜ್ಯಗಳದ್ದು ಪ್ರಮುಖ ಪಾತ್ರವಾಗಿದೆ. ಜಿಎಸ್‌ಟಿ ಕಾಯ್ದೆಗೆ ಸಂಬಂಧಪಟ್ಟಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜ್ಯಗಳ ಪ್ರಾತಿನಿಧ್ಯ 2/3 ರಷ್ಟಿದ್ದರೆ ಕೇಂದ್ರದ ಪ್ರಾತಿನಿಧ್ಯ 1/3ಗೆ ಮಾತ್ರ ಸೀಮಿತ. ಜಿಎಸ್‌ಟಿಗೆ ಸಂಬಂಧಪಟ್ಟಿರುವ ನಿರ್ಧಾರ ಗಳನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಳ್ಳುತ್ತದೆ.

Mohan Vishwa Column: ಮತಬ್ಯಾಂಕ್‌ ರಾಜಕಾರಣಕ್ಕೆ ಆರೆಸ್ಸೆಸ್‌ ಟೀಕೆ

Mohan Vishwa Column: ಮತಬ್ಯಾಂಕ್‌ ರಾಜಕಾರಣಕ್ಕೆ ಆರೆಸ್ಸೆಸ್‌ ಟೀಕೆ

ಸಂಘವನ್ನು ಬೈದರೆ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಮೆಚ್ಚುಗೆಗೆ ತಾವು ಪಾತ್ರರಾಗಬಹುದು ಎಂಬ ತಿಕ್ಕಲು ಯೋಚನೆ ಪ್ರಿಯಾಂಕ್ ಖರ್ಗೆಯವರದ್ದು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧವಿರುವ ಕಾಂಗ್ರೆಸ್, ದೇಶವಿರೋಧಿಗಳ ಜತೆ ಕೈಜೋಡಿಸಲು ಸದಾ ಸಿದ್ಧವಾಗಿರುತ್ತದೆ.

Mohan Vishwa Column: ಜಪಾನಿನಲ್ಲಿ ಮೇಡ್‌ ಇನ್‌ ಇಂಡಿಯಾ ಕಾರು

ಜಪಾನಿನಲ್ಲಿ ಮೇಡ್‌ ಇನ್‌ ಇಂಡಿಯಾ ಕಾರು

ದೇಶಕ್ಕಾಗಿ ದಿನಪೂರ್ತಿ ದುಡಿಯುವ ಜಪಾನಿಯರು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದರೆ ಕೈಗೆ ಕಪ್ಪುಬಟ್ಟೆ ಕಟ್ಟಿ ಎರಡು ತಾಸು ಹೆಚ್ಚಾಗಿ ದುಡಿಯುತ್ತಾರೆ. ರಸ್ತೆ ತಡೆ, ಬಂದ್, ಕಲ್ಲು ತೂರಾಟ ದಂಥ ಪ್ರತಿಭಟನೆ ನಡೆದ ಉದಾಹರಣೆಗಳು ಜಪಾನಿನಲ್ಲಿ ಕಾಣುವುದಿಲ್ಲ. 1.40 ಕೋಟಿ ಜನಸಂಖ್ಯೆ ಇರುವ ಟೋಕಿಯೋ ನಗರದಲ್ಲಿ ನಿರ್ಮಿಸಿರುವ ಮೂಲಭೂತ ಸೌಕರ್ಯಗಳು ಜಗತ್ತಿಗೆ ಮಾದರಿಯಾಗಿವೆ.

Mohan Vishwa Column: ಯುದ್ಧಭೂಮಿಯಲ್ಲಿ ಮೋದಿಯವರ ತಾಕತ್‌ !

ಯುದ್ಧಭೂಮಿಯಲ್ಲಿ ಮೋದಿಯವರ ತಾಕತ್‌ !

ರಷ್ಯಾ ನಿರ್ಮಿತ ‘ಎಸ್-400’ ಸಾಧನವು ಸುದರ್ಶನ ಚಕ್ರದಂತೆ ನಿಂತು ಪಾಕಿಸ್ತಾನದ ಡ್ರೋನ್‌ ಗಳನ್ನು ಹೊಡೆದುರುಳಿಸಿತು. ರಷ್ಯಾ ನೇರವಾಗಿ ಭಾರತದ ಪರವಾಗಿ ನಿಂತಿತ್ತು. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ‘ಭಾರತವು ಸೇಡು ತೀರಿಸಿಕೊಳ್ಳುವ ಹಕ್ಕನ್ನು ಹೊಂದಿದೆ’ ಎಂದು ಹೇಳಿದ್ದರು. ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು, ಪಾಕಿಸ್ತಾನದ ದಾಳಿಯನ್ನು ಖಂಡಿಸಿ ಭಾರತದ ಪರ ನಿಂತರು.

Mohan Vishwa Column: ಪ್ಯಾಲಿಸ್ತೀನಿಯರ ನರಮೇಧ ನಡೆಸಿದ್ದ ಪಾಕಿಸ್ತಾನ

ಪ್ಯಾಲಿಸ್ತೀನಿಯರ ನರಮೇಧ ನಡೆಸಿದ್ದ ಪಾಕಿಸ್ತಾನ

ಆರು ದಿನಗಳ ಯುದ್ಧದ ಸೋಲಿನಿಂದ ಕೆಂಗೆಟ್ಟಿದಂತಹ ಅರಬ್ಬರ ನಾಡಿನಿಂದ ಸಾವಿರಾರು ಯುವಕರು ಈ ಸಂಘಟನೆಗೆ ಸೇರಿಕೊಂಡರು. ಜಗತ್ತಿನಾದ್ಯಂತ ಹಲವು ಮುಸಲ್ಮಾನರು ಈ ಸಂಘಟನೆಗೆ ಸೇರಿ ಕೊಂಡರು, 1969ರಲ್ಲಿ ಜೋರ್ಡಾನಿನಲ್ಲಿದ್ದಂತಹ ಪ್ಯಾಲೆಸ್ತೀನಿಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದವು.

Mohan Vishwa Column: ತುರ್ತು ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ಹೋರಾಟ

ತುರ್ತು ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ಹೋರಾಟ

ಇಂದಿರಾರ ವಕೀಲರು ನೀಡಿದ್ದ ಸಂಘದ ನಿಷೇಧದ ಸಲಹೆ ಪತ್ರಕರ್ತ ರಿಗೆ ಸೋರಿಕೆಯಾಗಿ 20-06-1975ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಪರಿಣಾಮ, ದೇಶದಾದ್ಯಂತ ಸರಕಾರದ ವಿರುದ್ಧ ದೊಡ್ಡಮಟ್ಟದ ಆಕ್ರೋಶ ಕೇಳಿ ಬಂತು. ಹಾಗಾಗಿ ಇಂದಿರಾರು ಸಂಘವನ್ನು ನಿಷೇಧಿಸುವ ನಿರ್ಧಾರವನ್ನು ಕೈ ಬಿಡಬೇಕಾಯಿತು.

Mohan Vishwa Column: ಸೀಮೆಎಣ್ಣೆಯಿಂದ ಅಡುಗೆ ಅನಿಲದವರೆಗಿನ ಹಾದಿ !

ಸೀಮೆಎಣ್ಣೆಯಿಂದ ಅಡುಗೆ ಅನಿಲದವರೆಗಿನ ಹಾದಿ !

ಎತ್ತಿನಗಾಡಿಯಲ್ಲಿ ಸೀಮೆಎಣ್ಣೆ ಬಂದೊಡನೆ ಪಡಿತರ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ವರಿಗೆ ಎಲ್ಲಿಲ್ಲದ ಸಂಭ್ರಮ. ಪಡಿತರ ಅಂಗಡಿಯ ಮಾಲೀಕ ಪುಸ್ತಕವೊಂದನ್ನು ಹೊರ ತೆಗೆದು ನಮ್ಮ ತಿಂಗಳ ಪಡಿತರದ ಸೀಮೆಎಣ್ಣೆ ಪಾಲನ್ನು ಬರೆಯುತ್ತಿದ್ದ. ಸರತಿ ಸಾಲಿನಲ್ಲಿ ಮೊದಲು ನಿಂತವರಿಗೆ ಸೀಮೆಎಣ್ಣೆ ಸಿಕ್ಕಕೂಡಲೆ ಎಲ್ಲಿಲ್ಲದ ಸಂಭ್ರಮ. ಕೊನೆಯಲ್ಲಿ ಇದ್ದವರಿಗೆ ಸೀಮೆಎಣ್ಣೆ ಸಿಗದೆ ಬೇಜಾರಿನಲ್ಲಿ ಮನೆಗೆ ಹೊರಡುವ ದೃಶ್ಯಗಳು ಸಾಮಾನ್ಯವಾಗಿತ್ತು.

Mohan Vishwa Column: ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಅಖಂಡ ಭಾರತದ ಸಾವಿರಾರು ಕಿ.ಮೀ. ಭೂಭಾಗವನ್ನು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಲಾಗಿದೆ. ಭಾರತವನ್ನು 7 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು, ಪಾಕಿಸ್ತಾನ ಮತ್ತು ಚೀನಾದ ವಿಷಯದಲ್ಲಿ ತೋರಿದ ಮೃದುಧೋರಣೆ ಇಷ್ಟಕ್ಕೆಲ್ಲ ಕಾರಣ. ಚೀನಾ ಎಂಬ ನಯವಂಚಕ ರಾಷ್ಟ್ರವನ್ನು ದೊಡ್ಡ ಶಕ್ತಿಯೆಂದು ದೇಶದೆದುರು ಬಿಂಬಿಸಿದ್ದು ಕಾಂಗ್ರೆಸ್ ಪಕ್ಷವೇ.

Mohan Vishwa Column: ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ ಕಳೆದ ಹತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ನಾಲ್ಕನೇ ಸ್ಥಾನಕ್ಕೆ ತಲುಪಿರುವುದು, ಎಡಚರರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. 2014 ರಲ್ಲಿ ಭಾರತದ ತಲಾದಾಯ ಅಂದಾಜು 1100 ಅಮೆರಿಕನ್ ಡಾಲರ್ ನಷ್ಟಿತ್ತು. 2025ರಲ್ಲಿ ತಲಾ ದಾಯ 2800 ಅಮೆರಿಕನ್ ಡಾಲರ್ ನಷ್ಟಿದೆ. ಮೋದಿ ಅವಧಿಯ ತಲಾದಾಯದ ಬಗ್ಗೆ ಮಾತ ನಾಡುವ ಕಾಂಗ್ರೆಸ್ ಮತ್ತು ಎಡಚರ ಪಟಾಲಂ, 1991ರಲ್ಲಿ ಭಾರತದ ತಲಾದಾಯ ಕೇವಲ 300 ಅಮೆರಿಕನ್ ಡಾಲರ್‌ ನಷ್ಟಿದ್ದ ಬಗ್ಗೆ ಮಾತನಾಡುವುದಿಲ್ಲ.

Mohan Vishwa Column: ಪಾಕಿಸ್ತಾನದ ಭ್ರಷ್ಟ ಪ್ರಧಾನಮಂತ್ರಿಗಳು

ಪಾಕಿಸ್ತಾನದ ಭ್ರಷ್ಟ ಪ್ರಧಾನಮಂತ್ರಿಗಳು

ಪಾಕಿಸ್ತಾನದಲ್ಲಿ, ಅದರ ಹುಟ್ಟಿನಿಂದಲೂ ರಾಜಕೀಯದ ಅಸ್ಥಿರತೆ ಕಾಡುತ್ತಿದೆ. ಅಲ್ಲಿನ ಮಿಲಿಟರಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ಆಡಳಿತ ನಡೆಸಲು ಬಿಟ್ಟಿಲ್ಲ. ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮಿಂದೆದ್ದು ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿರುವ ಆರೋಪಗಳಿವೆ. ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದಲ್ಲಿ ತೊಡಗಿ ವಿದೇಶಗಳಲ್ಲಿ ಆಸ್ತಿ ಮಾಡಿ ರುವ ಆರೋಪಗಳಿವೆ.

Mohan Vishwa Column: ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

360 ಡಿಗ್ರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ‘ಡಿ-4’ ರೆಡಾರ್ ಸಾಧನವು, ರೇಡಿಯೋ ತರಂಗ ಹೊಂದಿ ರುವ ಸೆನ್ಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿದೆ. ಇದು ಶತ್ರು ದೇಶದ ಅಷ್ಟ ದಿಕ್ಕುಗಳಲ್ಲಿನ ಡ್ರೋನ್‌ಗಳನ್ನು ದೂರದಿಂದಲೇ ಪತ್ತೆಮಾಡಿ, ಗಡಿ ಯೊಳಗೆ ಪ್ರವೇಶಿಸದಂತೆ ಜಾಮ್ ಮಾಡುತ್ತದೆ. ಭಾರತದ ಮೇಲೆ ಹಾರಿಬರುವ ಶತ್ರುದೇಶದ ಡ್ರೋನ್‌ಗಳ ದಾರಿ ತಪ್ಪಿಸುವ ತಂತ್ರಜ್ಞಾನ ವನ್ನು ಇದರಲ್ಲಿ ಅಳವಡಿಸಲಾಗಿದೆ. ಸಣ್ಣ ಡ್ರೋನ್ ಜತೆಗೆ, ಮಾನವರಹಿತ ದೊಡ್ಡ ಡ್ರೋನ್‌ಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

Mohan Vishwa Column: ಪಾಕ್‌ನ ಆದಾಯ ಮೂಲ: ಉಗ್ರರ ಫೋಷಣೆ

ಪಾಕ್‌ನ ಆದಾಯ ಮೂಲ: ಉಗ್ರರ ಫೋಷಣೆ

ಅನೇಕ ಚರ್ಚುಗಳ ಮೇಲೆ ನಡೆದ ಭಯೋತ್ಪಾದಕ ದಾಳಿಗಳಲ್ಲೂ ಈ ಭಯೋತ್ಪಾದಕ ಸಂಘಟ ನೆಯ ಹೆಸರು ಕೇಳಿಬಂದಿತ್ತು. 1980ರ ಜನವರಿಯಲ್ಲಿ, ಇಸ್ಲಾಮಿಕ್ ಕಾನರೆನ್ಸ್‌ನ 34 ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಅಫ್ಘಾನಿಸ್ತಾನದಿಂದ ಸೋವಿಯತ್ ಪಡೆಗಳನ್ನು ಬೇಷರತ್ತಾಗಿ, ತುರ್ತಾಗಿ ಹಿಂತೆಗೆದು ಕೊಳ್ಳಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದರು.

Mohan Vishwa Column: ಹಿಂದೂ ಹಬ್ಬಗಳ ಆರ್ಥಿಕತೆ

ಹಿಂದೂ ಹಬ್ಬಗಳ ಆರ್ಥಿಕತೆ

ಭಾರತದ ಆರ್ಥಿಕತೆಯಲ್ಲಿ ಹಿಂದೂ ಹಬ್ಬಗಳು ದೊಡ್ಡಮಟ್ಟದ ಕೊಡುಗೆಯನ್ನು ನೀಡುತ್ತವೆ. ಯುಗಾದಿ, ದಸರಾ, ದೀಪಾವಳಿ, ನವರಾತ್ರಿ ಹಬ್ಬಗಳು ಬಂತೆಂದರೆ ಸಾಕು ಸಾಲುಸಾಲಾಗಿ ನೂತನ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ನೂತನ ವಸ್ತು ಗಳನ್ನು ಮಾರುಕಟ್ಟೆಗೆ ತರಲು ಹಿಂದೂ ಹಬ್ಬಗಳನ್ನು ಬಳಸಿಕೊಳ್ಳುತ್ತವೆ. ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ನೂತನ ಯೋಜನೆಗಳನ್ನು ಹಿಂದೂ ಹಬ್ಬಗಳಂದು ಮಾರ್ಕೆಟ್ ಮಾಡುತ್ತವೆ

Mohan Vishwa Column: ಹಿಮಾಲಯನ್‌ ಬ್ಲಂಡರ್‌ ಮಾಡಿದ್ದ ನೆಹರು

ಹಿಮಾಲಯನ್‌ ಬ್ಲಂಡರ್‌ ಮಾಡಿದ್ದ ನೆಹರು

ಕಳೆದ 77 ವರ್ಷಗಳಲ್ಲಿ ಒಮ್ಮೆ ಮಾತ್ರ ನೀರನ್ನು ನಿಲ್ಲಿಸುವ ಪ್ರಯತ್ನವು ಅಧಿಕಾರಿಗಳಿಂದ ಆಗಿತ್ತು; ಆದರೆ ಅಧಿಕಾರಿಗಳ ಮಾತು ಕೇಳದೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ನೆಹರು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರು. 1948ರ ಏಪ್ರಿಲ್ 1ರಂದು, ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಭಾರತದಲ್ಲಿ ಪಂಜಾಬ್‌ನ ಎಂಜಿನಿಯರ್‌ಗಳು ಫಿರೋಜ್‌ಪುರದ ಮುಖ್ಯ ಕಾಮಗಾರಿ ಪ್ರದೇಶದಿಂದ ದೇಪಾಲ್ಪುರ ಕಾಲುವೆ ಮತ್ತು ಲಾಹೋರ್‌ಗೆ ನೀರು ಸರಬರಾಜನ್ನು ಸ್ಥಗಿತಗೊಳಿಸಿದ್ದರು.

Mohan Vishwa Column: ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ

ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ

ಅಖಂಡ ಭಾರತದ ವಿಭಜನೆಯ ವೇಳೆ ಪಾಕಿಸ್ತಾನದಲ್ಲೇ ಉಳಿಯಬೇಕಾಗಿಬಂದ ಹಿಂದೂಗಳು ಇಂದಿಗೂ ಅಲ್ಲಿ ಅಲ್ಪಸಂಖ್ಯಾತರಾಗಿ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ನಾಡಿನಲ್ಲಿ ಜನ್ಮತಳೆದು ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿಯವರು ತಮ್ಮ ದರ್ಬಾರಿನಲ್ಲಿ ಸ್ವಾಮೀಜಿಯ ಆದರ್ಶಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ, ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ಆಶ್ರಯ ನೀಡುವ ಮೂಲಕ ತಮ್ಮ ಮತ ಬ್ಯಾಂಕ್ ತುಷ್ಟೀಕರಣ ರಾಜಕೀಯದಲ್ಲಿ ನಿರತ ರಾಗಿದ್ದಾರೆ.

Mohan Vishwa Column: ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಬ್ರಿಟಿಷರ ಕಾಲದಿಂದಲೂ ಮುಸ್ಲಿಮರನ್ನು ಓಲೈಸುವ ಕೆಲಸವು ವಕ್ಫ್ ಕಾಯಿದೆಯ ಮೂಲಕ ನಡೆದು ಕೊಂಡು ಬಂದಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ವಕ್ಫ್ ಬೋರ್ಡ್‌ಗಳು ಅಂದಾಜು 8,94,509 ಆಸ್ತಿ ಗಳನ್ನು ಹೊಂದಿವೆ. 2013ರಲ್ಲಿ ಅಂದಾಜು 18 ಲಕ್ಷ ಎಕರೆಯಷ್ಟಿದ್ದ ವಕ್ಫ್ ಆಸ್ತಿ, 2025ರ ಹೊತ್ತಿಗೆ 37 ಲಕ್ಷ ಎಕರೆಯಷ್ಟಾಗಿತ್ತು.

Mohan Vishwa Column: ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !

ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !

ಗಂಡು ಮಕ್ಕಳ ಮೇಲೆ ಹೆಚ್ಚಿನ ವ್ಯಾಮೋಹವಿರುವ ಪೋಷಕರು ಒಂದೆಡೆಯಾದರೆ, ಹೆಣ್ಣು ಮಕ್ಕಳ ಮೇಲೆ ಮಮಕಾರ ವಿರುವ ಪೋಷಕರು ಮತ್ತೊಂದೆಡೆ. ಮೊಮ್ಮಕ್ಕಳ ಮೇಲಿನ ಅಪಾರ ವಾದ ಪ್ರೀತಿಯಿಂದ, ಮಕ್ಕಳನ್ನೂ ಮೀರಿ ಅವರ ಹೆಸರಿಗೆ ಉಯಿಲು ಮಾಡುವ ಅಜ್ಜಂದಿರನ್ನೂ ನೋಡಿದ್ದೇವೆ.

Mohan Vishwa Column: ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ನಕ್ಸಲ್ ಚಳವಳಿಯು 1980ರ ದಶಕದಲ್ಲಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ಆಂಧ್ರಪ್ರದೇಶದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ 1980 ರಲ್ಲಿ ನಕ್ಸಲ್ ಸಂಘಟನೆ ಸ್ಥಾಪನೆಯಾಯಿತು. ಭೂಮಾಲೀಕರನ್ನು ಅಪಹರಿಸಿ ಹಳ್ಳಿಯ ಜನರ ಮುಂದೆ ಕ್ಷಮೆ ಯಾಚಿಸುವಂತೆ ಬಲವಂತ ಮಾಡುವುದು, ಹಣ ನೀಡುವಂತೆ ಒತ್ತಾಯಿಸು ವುದು ಅವರ ಚಳವಳಿಯ ನಿತ್ಯದ ಕೆಲಸವಾಗಿತ್ತು

Loading...