ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಯಗಟಿ ರಘು ನಾಡಿಗ್

Senior Sub Editor and Columnist

naadigru@gmail.com

'ವಿಜಯವಾಣಿ', 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿನ ಸೇವೆಯ ನಂತರ, ಕಳೆದ 3 ವರ್ಷಗಳಿಂದ “ವಿಶ್ವವಾಣಿ ಕುಟುಂಬಿ”. ಪ್ರಸ್ತುತ ಪತ್ರಿಕೆಯ ಸಂಪಾದಕೀಯ ಪುಟಗಳ ನಿರ್ವಹಣೆಯ ನೊಗ ಹೆಗಲೇರಿದೆ. ಒಂದಷ್ಟು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು, ‘ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ’, ‘ಅಪ್ರತಿಮ ಕೊಡುಗೆ’, ‘ನಿಮ್ಮ ಸುಪ್ತಮನಸ್ಸಿನ ತಾಕತ್ತು ನಿಮಗೆ ಗೊತ್ತೇ?’, “ಬ್ಯಾಬಿಲೋನ್ ನಲ್ಲೊಬ್ಬ ಕುಬೇರ’, ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಮುಂತಾದವು ಅವುಗಳಲ್ಲಿ ಸೇರಿವೆ. ಗಾಯನ, ವ್ಯಂಗ್ಯಚಿತ್ರ ರಚನೆಯ ಚಾಳಿಯೂ ಉಂಟು!

Articles
Yagati Raghu Naadig Column: ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !

ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !

“ಕಿರೀಟಿಯನ್ನು ತರಬೇತಿ ಕೇಂದ್ರಕ್ಕೆ ಬಿಡಲೆಂದು ಬರುತ್ತಿದ್ದಾಗ ಆ ತಾಯಿ ‘ಪೃಥೆ’ಯನ್ನು ನೋಡಿದ್ದ ನೆನಪಿತ್ತು, ಹಾಗಾಗಿ ನಮಸ್ಕರಿಸಿದೆ. ನನ್ನ ಕೈಯಲ್ಲಿನ ಟ್ರಂಕನ್ನೂ, ಮುಖದಲ್ಲಿನ ಮಂಕನ್ನೂ ಕಣ್ಣ ಅಳೆದ ಕಾವಲುಗಾರ ರಾಜಣ್ಣ, “ಎಲ್ಲಿಗೆ ಹೊಂಟೆ ಮಗಾ?" ಎಂದ. “ಇನ್ನೆಲ್ಲಿಗೆ ರಾಜಣ್ಣಾ... ಸಾಕು ತಾಯಿಯ ಬಳಿಗೆ" ಎಂದೆ ಗದ್ಗದಿತನಾಗಿ. ಆಗ ನನ್ನನ್ನು ಬಾಚಿ ತಬ್ಬಿದ ರಾಜಣ್ಣ, “ನಿನ್ನ ನೋವು ಅರ್ಥವಾಯ್ತದೆ ಮಗಾ. ಮಾಡೋ ಊಟವ, ಓಡೋ ಓಟವ ಅರ್ಧಕ್ಕೇ ನಿಲ್ಲಿಸ್ತಾರಾ ಮಗಾ? ನೀನು ಬಿಲ್ವಿದ್ಯೆನಾಗೆ ರಾಜ್ಯಕ್ಕೆ ಎಸರು ತರಬೇಕು ಅಂತಲ್ವಾ ದಣಿಗಳು ಆಸೆ ಪಟ್ಟಿದ್ದೂ? ನೀನೂ ಒಂಟೋದ್ರೆ ಅವರ ಆತ್ಮ ಆ ಸ್ವರ್ಗದಾಗೂ ನರಳಾಕಿಲ್ವಾ?" ಎಂದು ಜಿಜ್ಞಾಸೆ ತೋಡಿಕೊಂಡ.

Yagati Raghu Naadig Column: ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!

Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಮಿಲಿಟರಿ ಸೇವೆಯ ನಂತರ ಸ್ವಯಂನಿವೃತ್ತಿ ಪಡೆದು ನಗರದ ಹೊರವಲಯದಲ್ಲಿ ಫಾರ್ಮ್‌ಹೌಸ್ ಮಾಡಿಕೊಂಡು ನೆಲೆಸಿದ್ದ ಮೀಸೆಮಾವ ಅವಿವಾಹಿತರಾಗಿದ್ದು, ಬಿಲ್ಲು ವಿದ್ಯೆಯನ್ನು ಆಸಕ್ತರಿಗೆ ಕಲಿಸು ತ್ತಿದ್ದರು. ‘ಧನಂಜಯ ಬಿಲ್ಲು ವಿದ್ಯಾ ತರಬೇತಿ ಕೇಂದ್ರ’ ಅವರದ್ದೇ ಆಗಿತ್ತು. ಕಥಾನಾಯಕ ಶ್ರಮಜೀವಿ ಯನ್ನು ನಯಾಪೈಸೆ ಶುಲ್ಕವಿಲ್ಲದೆ ತರಬೇತಿಗೆ ದಾಖಲಿಸಿಕೊಂಡ ಮಾತೃಹೃದಯಿ ಅವರು.

Yagati Raghu Naadig Column: 3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

ಡೊನಾಲ್ಡ್ ಟ್ರಂಪ್ ಎಂಬ ‘ಸುಂಕದ ಸರದಾರ’ ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೆರಿಕದಿಂದ ಅತಿರೇಕದ ಸುಂಕ ಹೇರಿಕೆಯ ಪ್ರಸ್ತಾವ ಹೊರಬೀಳುತ್ತಲೇ ಜಗತ್ತು ತಲ್ಲಣಗೊಂಡಿತು. ನಂತರದಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳು ಕುಸಿದಿದ್ದೂ ಆಯಿತು, ಸರಕು ಮಾರುಕಟ್ಟೆಗಳಲ್ಲೂ ಅನಿಶ್ಚಿತತೆ ತಲೆದೋರುವಂತಾಯಿತು.

Yagati Raghu Naadig Column: ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!

ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!

ಶ್ರಮಜೀವಿ ಖುಷಿಯಿಂದ ಒಪ್ಪಿ, “ಹೀಗೆ ಬನ್ನಿ ಸರ್, ಜುಬ್ಬಾ-ಪೈಜಾಮಾ ಕಳಚಿ, ಈ ದಿವಾನದ ಮೇಲೆ ಕೈಕಾಲು ಚಾಚಿ ನಿರಾಳರಾಗಿ ಮಲಗಿಕೊಳ್ಳಿ" ಎಂದ. ಕಥೆಗಾರ ಹಾಗೇ ಮಾಡಿದ. ನಂತರ, ಕಪಾಟಿನಲ್ಲಿದ್ದ ಹೂಜಿಯನ್ನು ಕೈಗೆತ್ತಿಕೊಂಡ ಶ್ರಮ ಜೀವಿ ಅದರಲ್ಲಿದ್ದ ಕಂದುಬಣ್ಣದ ಎಣ್ಣೆ ಯನ್ನು ಕೈಗೆ ಸುರಿದುಕೊಂಡು ಕಥೆಗಾರನ ಮೈ- ಕೈಗಳಿಗೆ ಲೇಪಿಸಿ ನೀವುತ್ತಾ, ತನ್ನ ಬಾಳಬುತ್ತಿ ಯನ್ನು ಬಿಚ್ಚಿ ಕಥೆಗಾರನಿಗೆ ಉಣಿಸಲು ಮುಂದಾದ....

Yagati Raghu Nadig Column: ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ನೇಪಾಳದಲ್ಲಿ ಈಗಿರುವ ಪ್ರಜಾಪ್ರಭುತ್ವ ತೊಲಗಿ ರಾಜಪ್ರಭುತ್ವ ಮರಳಬೇಕು, ದೇಶವನ್ನು ಮೊದ ಲಿನಂತೆ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಆಗ್ರಹಿಸಿ ನೇಪಾಳಿಗರು ಪ್ರತಿಭಟನೆಗೆ ಮುಂದಾ ಗಿದ್ದಾರೆ. ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು-ನೋವುಗಳೂ ಸಂಭವಿಸಿವೆ. ಈ ಕುರಿತಾದ ಪಕ್ಷಿ ನೋಟ ಇಲ್ಲಿದೆ.