ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಯಗಟಿ ರಘು ನಾಡಿಗ್

Senior Sub Editor and Columnist

naadigru@gmail.com

'ವಿಜಯವಾಣಿ', 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿನ ಸೇವೆಯ ನಂತರ, ಕಳೆದ 3 ವರ್ಷಗಳಿಂದ “ವಿಶ್ವವಾಣಿ ಕುಟುಂಬಿ”. ಪ್ರಸ್ತುತ ಪತ್ರಿಕೆಯ ಸಂಪಾದಕೀಯ ಪುಟಗಳ ನಿರ್ವಹಣೆಯ ನೊಗ ಹೆಗಲೇರಿದೆ. ಒಂದಷ್ಟು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು, ‘ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ’, ‘ಅಪ್ರತಿಮ ಕೊಡುಗೆ’, ‘ನಿಮ್ಮ ಸುಪ್ತಮನಸ್ಸಿನ ತಾಕತ್ತು ನಿಮಗೆ ಗೊತ್ತೇ?’, “ಬ್ಯಾಬಿಲೋನ್ ನಲ್ಲೊಬ್ಬ ಕುಬೇರ’, ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಮುಂತಾದವು ಅವುಗಳಲ್ಲಿ ಸೇರಿವೆ. ಗಾಯನ, ವ್ಯಂಗ್ಯಚಿತ್ರ ರಚನೆಯ ಚಾಳಿಯೂ ಉಂಟು!

Articles
Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಇದು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರ ಭಗವದ್ಗೀತೆ

“ಅಬಾಧಿತ ಜ್ಞಾನದ ಹರಿವು, ಜೀವನಾನುಭವ, ಆಮೋದ, ಖುಷಿ, ಹಿಗ್ಗು, ನಲಿವು, ವಿವಿಧ ಪ್ರಾಂತ್ಯ ಗಳ ಬಗೆಬಗೆಯ ಭಕ್ಷ್ಯ-ಭೋಜ್ಯಗಳನ್ನು ಸವಿದು ನಾಲಿಗೆಯ ರುಚಿಯನ್ನು ತಣಿಸಿಕೊಳ್ಳುವಿಕೆ ಮತ್ತು ಅಲ್ಲಿನ ಜೀವನಶೈಲಿಯನ್ನು ಆಸ್ವಾದಿಸುವ ಅವಕಾಶ ಇವೆಲ್ಲ ಒಂದೇ ಗುಕ್ಕಿಗೆ ದಕ್ಕಬೇಕೆಂದರೆ, ‘ಪ್ರಯಾಣ-ಪ್ರವಾಸ-ಪರ್ಯಟನೆ-ಯಾತ್ರೆ-ದೇಶ ಸಂಚಾರ’ ಎಂದೆಲ್ಲಾ ಕರೆಯಲ್ಪಡುವ ‘ಊರು ಸುತ್ತೋ ಕಸುಬು’ ಬೆಸ್ಟು ಕಣ್ರೀ!"

Yagati Raghu Naadig Column: ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

“ಪತ್ತೇದಾರಿ ಕಥೆಯ ತಿರುವು ನೀಡಿದ ‘ಹಿತವಾದ ಆಘಾತ’ವನ್ನು ಅನುಭವಿಸಲೆಂದು ನಾನು ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ಕಾರು ನಿಂತಿತು ಎಂದು ಭಾವಿಸಿದ್ದೆ; ಆದರೆ ಇಲ್ಲಿ ನೋಡಿದರೆ ಅದು ‘ನಾನು ಹಾಕಿದ’ ಬ್ರೇಕ್ ಅಲ್ಲ, ‘ಮೇಲಿನವ ಹಾಕಿಸಿದ’ ಬ್ರೇಕ್ ಅಂತ ಈಗ ಗೊತ್ತಾಯ್ತು" ಎಂದು ಚಾಲಕ ತನಗಾದ ಬೆರಗನ್ನು ಅವಧೂತರಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡ.

Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ಅವಧೂತರು ಹೀಗಂದಿದ್ದೇ ಅಂದಿದ್ದು, ‘ಕ್ರೀ...ಕ್’ ಎಂದು ಜೋರಾಗಿ ಸದ್ದುಮಾಡಿ ಕಾರು ಗಕ್ಕನೆ ನಿಂತು ಬಿಟ್ಟಿತು. ಅದಕ್ಕೆ ಕಾರಣ, ಅದರ ಚಾಲಕ. ಅವಧೂತರು ಹೋದಲ್ಲಿ ಬಂದಲ್ಲಿ ಅವರ ಜತೆಗೇ ಇದ್ದು ಕೊಂಡು ಪಯಣಕ್ಕೆ ಸಾಥ್ ನೀಡುತ್ತಿದ್ದ ಆತನಿಗೆ, ಅವಧೂತರು ಕಾರಿನೊಳಗೆ ಇದ್ದುಕೊಂಡೇ ತಮ್ಮ ಶಿಷ್ಯರೊಂದಿಗೆ ಹೀಗೆ ಲೋಕಾಭಿರಾಮದ ಮಾತುಕತೆ ನಡೆಸುವುದು ಗೊತ್ತಿತ್ತು, ಆ ವೈಖರಿಗೆ ಆತನೂ ಹೊಂದಿಕೊಂಡುಬಿಟ್ಟಿದ್ದ

Yagati Raghu Naadig Column: ಮುಂಚೂಣಿಯಲ್ಲಿ ಮೆರೆಯುತ್ತಲೇ ಮುಕ್ಕುತ್ತಿತ್ತಾ ಮಾರ್ಜಾಲ ?!

ಮುಂಚೂಣಿಯಲ್ಲಿ ಮೆರೆಯುತ್ತಲೇ ಮುಕ್ಕುತ್ತಿತ್ತಾ ಮಾರ್ಜಾಲ ?!

ಸದಾಶಯದೊಂದಿಗೆ ಶುರು ಮಾಡಲಾಗಿದ್ದ ಸಮಾಜ ಸೇವಾ ಸಂಸ್ಥೆಯ ಆವರಣವು ಕಳೆಗುಂದಿದೆ, ನಕಾರಾತ್ಮಕ ಛಾಯೆ ತಾಂಡವವಾಡುತ್ತಿದೆ ಎಂಬ ಅಹವಾಲು ಹೊತ್ತು ಅವಧೂತರ ಬಳಿಗೆ ಬರುವ ಸಂಸ್ಥೆಯ ಮ್ಯಾನೇಜರ್, ಇದಕ್ಕೆ ಪರಿಹಾರೋಪಾಯವನ್ನು ಸೂಚಿಸುವಂತೆ ಅವಧೂತರಲ್ಲಿ ಕೋರಿ ಕೊಳ್ಳುತ್ತಾರೆ. ಸಂಸ್ಥೆಯ ಆವರಣದಲ್ಲಿ ಸೇರಿಕೊಂಡಿರುವ ಒಂದು ‘ಕಳ್ಳ’ಬೆಕ್ಕನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವಧೂತರು ಸೂಚಿಸುತ್ತಾರೆ. ಅಂತೆಯೇ ಸದರಿ ಕಳ್ಳಬೆಕ್ಕನ್ನು ಹುಡುಕಲು ಹರಸಾಹಸಪಟ್ಟರೂ ಸಿಗದೆ ವಿಫಲರಾದ ಮ್ಯಾನೇಜರ್, ಮತ್ತೊಮ್ಮೆ ಅವಧೂತರಲ್ಲಿಗೆ ಬಂದು ನಡೆದುದನ್ನು ಹೇಳುತ್ತಾರೆ

Yagati Raghu Naadig Column: ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!

ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!

‘ಎಲ್ಲರಲ್ಲೂ ಇರುವುದು ಜೀವಾತ್ಮನೇ... ಪರಮಾತ್ಮನೇ...’ ಎಂಬ ಚಿಂತನೆ ಯೊಂದಿಗೆ ನಿಮ್ಮ ಸಂಸ್ಥೆಯಲ್ಲಿ ಸಾಕಷ್ಟು ಮನುಜರಿಗೆ, ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿರುವುದು ಸಂತಸದ ವಿಷಯವೇ. ಆದರೆ, ಇಂಥ ಆಶ್ರಿತರ ಪೈಕಿ ಒಂದು ‘ಕಳ್ಳಬೆಕ್ಕು’ ಸೇರಿಕೊಂಡು ಬಿಟ್ಟಿದ್ದು, ಅದು ಅಲ್ಲಿನ ವಾತಾವರಣವನ್ನು ಕಲುಷಿತ ಗೊಳಿಸುತ್ತಿದೆ. ಅದನ್ನು ಅಲ್ಲಿಂದ ವಿಲೇವಾರಿ ಮಾಡಿ ದಲ್ಲಿ, ನಿಮ್ಮ ಸಮಸ್ಯೆ ಬಗೆಹರಿಯುತ್ತೆ. ಆ ಕೆಲಸ ವನ್ನು ಮುಗಿಸಿ ಮತ್ತೊಮ್ಮೆ ನನ್ನಲ್ಲಿಗೆ ಬನ್ನಿ, ನೀವಿನ್ನು ಹೊರಡಬಹುದು.." ಎಂದು ಹೇಳಿ ಕೈಮುಗಿದರು

Yagati Raghu Naadig Column: ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್‌ ಗುನ್ನʼ

ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್‌ ಗುನ್ನʼ

ಟರ್ಕಿಯ ಹೆಗಲ ಮೇಲೆ ಬಂದೂಕವನ್ನಿಟ್ಟು ಭಾರತದೆಡೆಗೆ ಗುರಿ ಮಾಡುವ ಮೂಲಕ ಪಾಕಿಸ್ತಾನವು ಭಾರತದ ಜತೆಗಿನ ಹಣಾಹಣಿಯಲ್ಲಿ ಇದೇ ಮೊದಲ ಬಾರಿಗೆ ವಿದೇಶವೊಂದರ ಸೇನಾಪಡೆಯ ನೇರ ಬೆಂಬಲವನ್ನು ಪಡೆದಂತಾಗಿದೆ. ಆದರೆ, ಈ ‘ಬುಗುರಿ ಆಟ’ದಲ್ಲಿ ತನಗೆ ಭಾರತ ಕಡೆಯಿಂದ ‘ಮೈಸೂರ್ ಗುನ್ನ’ ಬೀಳಲಿದೆ ಎಂಬುದು ಟರ್ಕಿಗೆ ಇನ್ನೂ ಅರಿವಾದಂತಿಲ್ಲ. ಏಕೆಂದರೆ, ಟರ್ಕಿಯ ಈ ವಿಶ್ವಾಸ ಘಾತುಕತನದಿಂದಾಗಿ ಭಾರತದ ಜತೆಗಿನ ಅದರ ದ್ವಿಪಕ್ಷೀಯ ಸಂಬಂಧಕ್ಕೆ ಭಾರಿ ಹೊಡೆತ ಬೀಳಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು

Yagati Raghu Naadig Column: ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!

ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!

ಫೋನಿನ ಅತ್ತ ಕಡೆಯಿಂದ ಸಿಡಿದ ಸಂಪಾದಕರ ‘ತಾಂಬೂಲ-ಭರಿತ’ ನಗೆಯನ್ನು ಜೀರ್ಣಿಸಿ ಕೊಳ್ಳುವ ಹರಸಾಹಸದಲ್ಲಿದ್ದ ಕಥೆಗಾರ, “ಕಥೆಯ ಎಳೆ ಸಿಕ್ಕಿದೆ ಸರ್, ಇನ್ನೇನು ಮನೆಗೆ ಹೋಗಿ ನಿಮಗೆ ಮತ್ತೊಮ್ಮೆ ಫೋನ್ ಮಾಡುತ್ತೇನೆ" ಎಂದಷ್ಟೇ ಹೇಳಿ ಕರೆಯನ್ನು ತುಂಡರಿಸಿದ. ನಂತರ ಶ್ರಮಜೀವಿಯ ಕಂಗಳನ್ನೇ ಒಮ್ಮೆ ಅಭಿಮಾನಪೂರ್ವಕವಾಗಿ ದಿಟ್ಟಿಸಿ, ಅವನ ಕೈಗಳನ್ನು ಮೃದು ವಾಗಿ ಅದುಮಿ, “ನನ್ನನ್ನು ನೀವು ಹಗುರಮಾಡಿಬಿಟ್ಟಿರಿ" ಎಂದ. ಅದಕ್ಕೆ ಅಯೋಮಯಗೊಂಡ ಶ್ರಮಜೀವಿ, “ಅದರನು ಬಂತು ಸರ್? ಮಾಲೀಶ್ ಮಾಡಿಸಿಕೊಳ್ಳೋದೇ ದೇಹ-ಮನಸ್ಸು ಹಗುರ ವಾಗಲಿ ಅಂತಲ್ವೇ?" ಎಂದು ಮರುಪ್ರಶ್ನಿಸಿದ

Yagati Raghu Naadig Column: ಏಕ್‌ ಚುಟ್ಕೀ ʼಸಿಂದೂರ್‌ʼ ಕೀ ಕೀಮತ್‌ ತುಮ್‌ ಕ್ಯಾ ಜಾನೋ ʼಮುನೀರ್‌ʼ ಬಾಬು ?!

ಚುಟ್ಕೀ ʼಸಿಂದೂರ್‌ʼ ಕೀ ಕೀಮತ್‌ ತುಮ್‌ ಕ್ಯಾ ಜಾನೋ ʼಮುನೀರ್‌ʼ ಬಾಬು ?!

ಏಕ್ ಚುಟ್ಕೀ ಸಿಂದೂರ್ ಕಿ ಕೀಮತ್ ತುಮ್ ಕ್ಯಾ ಜಾನೋ ರಮೇಶ್ ಬಾಬು? ಈಶ್ವರ್ ಕಾ ಆಶೀರ್ವಾದ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್ | ಸುಹಾಗನ್ ಕೆ ಸರ್ ಕಾ ತಾಜ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್| ಹರ್ ಔರತ್ ಕಾ ಖ್ವಾಬ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್|| (ಒಂದು ಚಿಟಿಕೆ ಸಿಂದೂ ರದ ಮೌಲ್ಯ ನಿಮಗೆ ತಿಳಿದಿದೆಯೇ ರಮೇಶ್ ಬಾಬು? ಒಂದು ಚಿಟಿಕೆ ಸಿಂದೂರವು ಈಶ್ವರನ ಆಶೀರ್ವಾದವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ವಿವಾಹಿತೆಯೊಬ್ಬಳ ತಲೆಯ ಮೇಲಿನ ಕಿರೀಟವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ಪ್ರತಿಯೊಬ್ಬ ಮಹಿಳೆಯ ಕನಸಾಗಿರು ತ್ತದೆ).

Yagati Raghu Naadig Column: ದೀನ ಬಾಹುಗಳಿಗೆ ದಕ್ಕಿಬಿಟ್ಟಿತು ಜೈನಬಲ !

ದೀನ ಬಾಹುಗಳಿಗೆ ದಕ್ಕಿಬಿಟ್ಟಿತು ಜೈನಬಲ !

ಹತ್ತಾರು ವೈದ್ಯರಿಗೆ ತೋರಿಸಿದ ನಂತರವೂ ವಾಸಿಯಾಗದ ಅವರ ಬೆನ್ನುನೋವು ನನ್ನ ಮಾಲೀಶ್‌ ನಿಂದ ಗುಣವಾಗಿತ್ತಂತೆ! ಇದರ ಋಣಸಂದಾಯವೋ ಎಂಬಂತೆ ಅವರು, ‘ನಿನಗೆ ಅಡ್ವಾನ್ಸು-ಬಾಡಿಗೆ ಕೇಳಿದ್ಯಾರು? ವ್ಯವಹಾರ ಕುದುರುವವರೆಗೆ ನೀನೇನೂ ಕೊಡಬೇಕಿಲ್ಲ, ನಂತರ ಕೊಟ್ಟ ರಾಯ್ತು. ನಿನ್ನನ್ನು ನಂಬಬಹುದು ಅಂತ ನಮ್ಮ ತೀರ್ಥಂಕರ ವರ್ಧಮಾನ ಮಹಾವೀರರ ಪ್ರೇರಣೆಯಾಗಿದೆ ನನಗೆ’ ಎಂದರು....

Yagati Raghu Naadig Column: ಕದನ ಕುತೂಹಲ ಕಥನ

ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ !

ಪಹಲ್ಗಾಮ್‌ನಲ್ಲಿ ಪಾಕಿಸ್ತಾನ-ಕೃಪಾಪೋಷಿತ ಉಗ್ರರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಾಗತಿಕ ಸಮುದಾಯವೇ ಛೀಮಾರಿ ಹಾಕಿದೆ. ವಿವಿಧ ದೇಶಗಳ ಮುಖ್ಯಸ್ಥರು ಪಾಕಿಸ್ತಾನದ ಈ ಕುತ್ಸಿತ ಚಿಂತನೆಯನ್ನು ಖಂಡಿಸಿದ್ದಾರೆ. ಭಾರತದ ಮೇಲೆ ಮುರಕೊಂಡು ಬೀಳುವ ತನ್ನ ಯತ್ನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ನೀಡಿಬಿಡುತ್ತವೆ ಎಂಬ ಪಾಕಿಸ್ತಾನದ ನಿರೀಕ್ಷೆ ಮಣ್ಣು ಪಾಲಾಗಿದೆ. ಪರದೇಶಗಳ ಕಥೆಯಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಗಳೇ ತಮ್ಮ ದೇಶದ ಜನ ನಾಯಕರು ಮತ್ತು ಮಿಲಿಟರಿ ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

Yagati Raghu Naadig Column: ಅಮಾವಾಸ್ಯೆಯ ಬಾಳಿಗೆ ಲಾಂದ್ರ ಹಿಡಿದ ಚಂದ್ರ...

ಅಮಾವಾಸ್ಯೆಯ ಬಾಳಿಗೆ ಲಾಂದ್ರ ಹಿಡಿದ ಚಂದ್ರ...

“ನನ್ನ ಕಂಗಳನ್ನೇ ಅರೆಕ್ಷಣ ದಿಟ್ಟಿಸಿದ ಚಂದ್ರಣ್ಣ, ‘ಆಯ್ತು, ಮೊದಲು ಒಂಚೂರು ಚೂಡಾ ತಿಂದು ಆಮೇಲೆ ಆತ್ಮಹತ್ಯೆ ಮಾಡ್ಕಾ...’ ಎಂದು ಹೇಳಿ ಪತ್ರಿಕೆಯೊಂದರ ಭಾನುವಾರದ ಪುರವಣಿಯ ಮೇಲೆ ಚೂಡಾ ಸುರಿದು ಕೊಟ್ಟು, ಭುಜ ಹಿಡಿದು ಬಲವಂತವಾಗಿ ಕೂರಿಸಿದ. ಅದನ್ನು ತಿಂದ ಮೇಲೆ, ಆ ಪುರವಣಿಯಲ್ಲಿ ಮುದ್ರಿತವಾಗಿದ್ದ ಅಕ್ಷರಗಳ ಮೇಲೆ ಕಣ್ಣಾಡಿಸಿದೆ. ಅದರಲ್ಲಿ ‘ದುಡುಕಬೇಡ ಜೀವವೇ...’ ಎಂಬ ಶೀರ್ಷಿಕೆಯ ನಿಮ್ಮ ಕಥೆ ಪ್ರಕಟವಾಗಿತ್ತು

Yagati Raghu Naadig Column: ಪಹಲ್ಗಾಮ್‌ ಪ್ರಹಾರ

ಪಹಲ್ಗಾಮ್‌ ಪ್ರಹಾರ

ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣವು ಉಗ್ರರ ದಾಳಿಯಿಂದಾಗಿ ರಕ್ತಸಿಕ್ತವಾಯಿತು. ಪಾಕ್-ಪ್ರೇರಿತ ಭಯೋತ್ಪಾದಕರ ಕುಯುಕ್ತಿಯು 26 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣವಾಗಿದ್ದನ್ನು ಕಂಡು ಇಡೀ ಜಗತ್ತೇ ಬೆಚ್ಚಿದೆ. ಜತೆಗೆ, ಈ ಸಂಬಂಧವಾಗಿ ಹತ್ತು ದಿಕ್ಕುಗಳಿಂದ ಹಲವು ದನಿಗಳು ಹೊಮ್ಮುವುದಕ್ಕೆ ಸದರಿ ‘ಪಹಲ್ಗಾಮ್ ಪ್ರಹಾರ’ ಪ್ರಕರಣ ಕಾರಣವಾಗಿದೆ.

Yagati Raghu Naadig Column: ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !

ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !

“ಕಿರೀಟಿಯನ್ನು ತರಬೇತಿ ಕೇಂದ್ರಕ್ಕೆ ಬಿಡಲೆಂದು ಬರುತ್ತಿದ್ದಾಗ ಆ ತಾಯಿ ‘ಪೃಥೆ’ಯನ್ನು ನೋಡಿದ್ದ ನೆನಪಿತ್ತು, ಹಾಗಾಗಿ ನಮಸ್ಕರಿಸಿದೆ. ನನ್ನ ಕೈಯಲ್ಲಿನ ಟ್ರಂಕನ್ನೂ, ಮುಖದಲ್ಲಿನ ಮಂಕನ್ನೂ ಕಣ್ಣ ಅಳೆದ ಕಾವಲುಗಾರ ರಾಜಣ್ಣ, “ಎಲ್ಲಿಗೆ ಹೊಂಟೆ ಮಗಾ?" ಎಂದ. “ಇನ್ನೆಲ್ಲಿಗೆ ರಾಜಣ್ಣಾ... ಸಾಕು ತಾಯಿಯ ಬಳಿಗೆ" ಎಂದೆ ಗದ್ಗದಿತನಾಗಿ. ಆಗ ನನ್ನನ್ನು ಬಾಚಿ ತಬ್ಬಿದ ರಾಜಣ್ಣ, “ನಿನ್ನ ನೋವು ಅರ್ಥವಾಯ್ತದೆ ಮಗಾ. ಮಾಡೋ ಊಟವ, ಓಡೋ ಓಟವ ಅರ್ಧಕ್ಕೇ ನಿಲ್ಲಿಸ್ತಾರಾ ಮಗಾ? ನೀನು ಬಿಲ್ವಿದ್ಯೆನಾಗೆ ರಾಜ್ಯಕ್ಕೆ ಎಸರು ತರಬೇಕು ಅಂತಲ್ವಾ ದಣಿಗಳು ಆಸೆ ಪಟ್ಟಿದ್ದೂ? ನೀನೂ ಒಂಟೋದ್ರೆ ಅವರ ಆತ್ಮ ಆ ಸ್ವರ್ಗದಾಗೂ ನರಳಾಕಿಲ್ವಾ?" ಎಂದು ಜಿಜ್ಞಾಸೆ ತೋಡಿಕೊಂಡ.

Yagati Raghu Naadig Column: ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!

Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ಮಿಲಿಟರಿ ಸೇವೆಯ ನಂತರ ಸ್ವಯಂನಿವೃತ್ತಿ ಪಡೆದು ನಗರದ ಹೊರವಲಯದಲ್ಲಿ ಫಾರ್ಮ್‌ಹೌಸ್ ಮಾಡಿಕೊಂಡು ನೆಲೆಸಿದ್ದ ಮೀಸೆಮಾವ ಅವಿವಾಹಿತರಾಗಿದ್ದು, ಬಿಲ್ಲು ವಿದ್ಯೆಯನ್ನು ಆಸಕ್ತರಿಗೆ ಕಲಿಸು ತ್ತಿದ್ದರು. ‘ಧನಂಜಯ ಬಿಲ್ಲು ವಿದ್ಯಾ ತರಬೇತಿ ಕೇಂದ್ರ’ ಅವರದ್ದೇ ಆಗಿತ್ತು. ಕಥಾನಾಯಕ ಶ್ರಮಜೀವಿ ಯನ್ನು ನಯಾಪೈಸೆ ಶುಲ್ಕವಿಲ್ಲದೆ ತರಬೇತಿಗೆ ದಾಖಲಿಸಿಕೊಂಡ ಮಾತೃಹೃದಯಿ ಅವರು.

Yagati Raghu Naadig Column: 3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

ಡೊನಾಲ್ಡ್ ಟ್ರಂಪ್ ಎಂಬ ‘ಸುಂಕದ ಸರದಾರ’ ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೆರಿಕದಿಂದ ಅತಿರೇಕದ ಸುಂಕ ಹೇರಿಕೆಯ ಪ್ರಸ್ತಾವ ಹೊರಬೀಳುತ್ತಲೇ ಜಗತ್ತು ತಲ್ಲಣಗೊಂಡಿತು. ನಂತರದಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳು ಕುಸಿದಿದ್ದೂ ಆಯಿತು, ಸರಕು ಮಾರುಕಟ್ಟೆಗಳಲ್ಲೂ ಅನಿಶ್ಚಿತತೆ ತಲೆದೋರುವಂತಾಯಿತು.

Yagati Raghu Naadig Column: ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!

ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!

ಶ್ರಮಜೀವಿ ಖುಷಿಯಿಂದ ಒಪ್ಪಿ, “ಹೀಗೆ ಬನ್ನಿ ಸರ್, ಜುಬ್ಬಾ-ಪೈಜಾಮಾ ಕಳಚಿ, ಈ ದಿವಾನದ ಮೇಲೆ ಕೈಕಾಲು ಚಾಚಿ ನಿರಾಳರಾಗಿ ಮಲಗಿಕೊಳ್ಳಿ" ಎಂದ. ಕಥೆಗಾರ ಹಾಗೇ ಮಾಡಿದ. ನಂತರ, ಕಪಾಟಿನಲ್ಲಿದ್ದ ಹೂಜಿಯನ್ನು ಕೈಗೆತ್ತಿಕೊಂಡ ಶ್ರಮ ಜೀವಿ ಅದರಲ್ಲಿದ್ದ ಕಂದುಬಣ್ಣದ ಎಣ್ಣೆ ಯನ್ನು ಕೈಗೆ ಸುರಿದುಕೊಂಡು ಕಥೆಗಾರನ ಮೈ- ಕೈಗಳಿಗೆ ಲೇಪಿಸಿ ನೀವುತ್ತಾ, ತನ್ನ ಬಾಳಬುತ್ತಿ ಯನ್ನು ಬಿಚ್ಚಿ ಕಥೆಗಾರನಿಗೆ ಉಣಿಸಲು ಮುಂದಾದ....

Yagati Raghu Nadig Column: ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ನೇಪಾಳದಲ್ಲಿ ಈಗಿರುವ ಪ್ರಜಾಪ್ರಭುತ್ವ ತೊಲಗಿ ರಾಜಪ್ರಭುತ್ವ ಮರಳಬೇಕು, ದೇಶವನ್ನು ಮೊದ ಲಿನಂತೆ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಆಗ್ರಹಿಸಿ ನೇಪಾಳಿಗರು ಪ್ರತಿಭಟನೆಗೆ ಮುಂದಾ ಗಿದ್ದಾರೆ. ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು-ನೋವುಗಳೂ ಸಂಭವಿಸಿವೆ. ಈ ಕುರಿತಾದ ಪಕ್ಷಿ ನೋಟ ಇಲ್ಲಿದೆ.