Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ
ಕೆಲ ಕ್ಷಣದ ನಂತರ ‘ಬುದ್ಧೀ.... ನನ್ನಪ್ಪಾ...’ ಅಂತ ದೂರದಿಂದ ಅದ್ಯಾರೋ ಕರೆದಂತಾಯಿತು. ಅದು ‘ಅಪರಿಚಿತವಾಗಿದ್ದರೂ ಪರಿಚಿತ’ ಎನಿಸುವ ಬಾಲೆಯೊಬ್ಬಳ ದಿವ್ಯದನಿ. ಅದು ಶಾರದೆಯದ್ದು! ಗುರುಪೂರ್ಣಿಮೆಯ ದಿನದಂದು ‘ಗುರುಸೂತ್ರ’ದ ಪ್ರಭಾವವು ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ತೀವ್ರವಾಗಿರುತ್ತದೆ ಎಂಬ ಅನುಪಮ ಮಾಹಿತಿಯನ್ನು ಅದೆಲ್ಲಿಂದಲೋ ದಕ್ಕಿಸಿಕೊಂಡಿದ್ದ ಜಾಣೆ ಶಾರದೆ, ದೂರದಲ್ಲಿದ್ದು ಕೊಂಡೇ ನನ್ನೊಡನೆ ಸಂವಹಿಸಲು ಗುರುಪೂರ್ಣಿಮೆಯ ದಿನವನ್ನೇ ಆಯ್ದುಕೊಂಡಿದ್ದಳು!