ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಯಗಟಿ ರಘು ನಾಡಿಗ್

Senior Sub Editor and Columnist

naadigru@gmail.com

'ವಿಜಯವಾಣಿ', 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿನ ಸೇವೆಯ ನಂತರ, ಕಳೆದ 3 ವರ್ಷಗಳಿಂದ “ವಿಶ್ವವಾಣಿ ಕುಟುಂಬಿ”. ಪ್ರಸ್ತುತ ಪತ್ರಿಕೆಯ ಸಂಪಾದಕೀಯ ಪುಟಗಳ ನಿರ್ವಹಣೆಯ ನೊಗ ಹೆಗಲೇರಿದೆ. ಒಂದಷ್ಟು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು, ‘ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ’, ‘ಅಪ್ರತಿಮ ಕೊಡುಗೆ’, ‘ನಿಮ್ಮ ಸುಪ್ತಮನಸ್ಸಿನ ತಾಕತ್ತು ನಿಮಗೆ ಗೊತ್ತೇ?’, “ಬ್ಯಾಬಿಲೋನ್ ನಲ್ಲೊಬ್ಬ ಕುಬೇರ’, ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಮುಂತಾದವು ಅವುಗಳಲ್ಲಿ ಸೇರಿವೆ. ಗಾಯನ, ವ್ಯಂಗ್ಯಚಿತ್ರ ರಚನೆಯ ಚಾಳಿಯೂ ಉಂಟು!

Articles
Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

ಕೆಲ ಕ್ಷಣದ ನಂತರ ‘ಬುದ್ಧೀ.... ನನ್ನಪ್ಪಾ...’ ಅಂತ ದೂರದಿಂದ ಅದ್ಯಾರೋ ಕರೆದಂತಾಯಿತು. ಅದು ‘ಅಪರಿಚಿತವಾಗಿದ್ದರೂ ಪರಿಚಿತ’ ಎನಿಸುವ ಬಾಲೆಯೊಬ್ಬಳ ದಿವ್ಯದನಿ. ಅದು ಶಾರದೆಯದ್ದು! ಗುರುಪೂರ್ಣಿಮೆಯ ದಿನದಂದು ‘ಗುರುಸೂತ್ರ’ದ ಪ್ರಭಾವವು ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ತೀವ್ರವಾಗಿರುತ್ತದೆ ಎಂಬ ಅನುಪಮ ಮಾಹಿತಿಯನ್ನು ಅದೆಲ್ಲಿಂದಲೋ ದಕ್ಕಿಸಿಕೊಂಡಿದ್ದ ಜಾಣೆ ಶಾರದೆ, ದೂರದಲ್ಲಿದ್ದು ಕೊಂಡೇ ನನ್ನೊಡನೆ ಸಂವಹಿಸಲು ಗುರುಪೂರ್ಣಿಮೆಯ ದಿನವನ್ನೇ ಆಯ್ದುಕೊಂಡಿದ್ದಳು!

Narada Sanchara: ಎಲ್ಲಾ ಗದ್ದುಗೆ ಮಹಿಮೆ!

ಎಲ್ಲಾ ಗದ್ದುಗೆ ಮಹಿಮೆ!

ಅಧಿಕಾರವನ್ನು ಬೆನ್ನತ್ತುವ ಪರಿಪಾಠವು ವ್ಯಕ್ತಿಯೊಬ್ಬನನ್ನು ಹೇಗೆಲ್ಲಾ ಪ್ರಲೋಭಿಸುತ್ತದೆ, ಯಾವೆಲ್ಲಾ ವಿಚಿತ್ರವಾದ ‘ಕತ್ತಲ ಹಾದಿ’ಗಳಲ್ಲಿ ಕರೆದೊಯ್ಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅಲ್ಲಿನ ರಾಯಗಢ ಜಿಲ್ಲೆಯ ಉಸ್ತುವಾರಿ ಸಚಿವರ ಹುದ್ದೆಯನ್ನು ದಕ್ಕಿಸಿಕೊಳ್ಳಲು ಶಿವಸೇನೆಯ (ಏಕನಾಥ್ ಶಿಂದೆ ಬಣದ) ಸಚಿವ ಭರತ್ ಗೋಗವಾಲೆ ಅವರು ‘ಅಘೋರಿ ಆಚರಣೆಗಳಿಗೆ’ ಮುಂದಾಗಿದ್ದಾರೆ ಎಂಬು ದು ಈಗ ಕೇಳಿ ಬಂದಿರುವ ಆರೋಪ.

Yagati Raghu Naadig Column: ಅಬಲೆಗೆ ಆತ್ಮಬಂಧುವಾದರಾ ಅವಧೂತರು..?

ಅಬಲೆಗೆ ಆತ್ಮಬಂಧುವಾದರಾ ಅವಧೂತರು..?

“ಅದೇನು ತಿಂಡಿ ಬೇಕು ಅಂತ ಹೇಳಿದ್ರೆ ನಾವೇ ಮಾಡಿಕೊಡೋಲ್ವೇ? ಗಂಡಸಿಗ್ಯಾಕೆ ಗೌರಿ ದುಃಖ? ನೀನ್ಯಾಕಪ್ಪಾ ಹೀಗೆ ಮೈ-ಕೈ ಮಸಿ ಮಾಡಿಕೊಳ್ಳೋಕೆ ಹೋದೆ..?" ಎಂಬ ವಾತ್ಸಲ್ಯಭರಿತ ದನಿಯುಕ್ಕಿಸಿದ ಗುರುಮಾತೆಯು, ಅವಧೂತರ ಮೈ-ಕೈಗಳಿಗೆ ಮೆತ್ತಿಕೊಂಡಿದ್ದ ಸೌದೆ ಒಲೆಯ ಮಸಿಯನ್ನು ತಮ್ಮ ಸೀರೆ ಸೆರಗಿನ ಅಂಚಿನಿಂದ ಒರೆಸಲು ಮುಂದಾದರು. “ಅಯ್ಯೋ ಬಿಡಮ್ಮಾ, ಪರವಾಗಿಲ್ಲಾ..." ಎಂದು ಅವಧೂತರು ಅಮ್ಮನಿಂದ ಬಿಡಿಸಿಕೊಳ್ಳುವ ವಿಫಲ ಯತ್ನದಲ್ಲಿದ್ದರು. ಆದರೆ ಅಮ್ಮ ಬಿಡಬೇಕಲ್ಲ?! ಮಗನು ಅಧ್ಯಾತ್ಮ ಸಿಂಹಾಸನದ ಸಾಮ್ರಾಟನೇ ಆಗಿದ್ದಿರಬಹುದು, ಆದರೆ ಅಮ್ಮನ ಕಣ್ಣಿನಲ್ಲಿ ಆತನಿನ್ನೂ ತುಂಟಪೋರನೇ, ಬಾಲಕೃಷ್ಣನೇ! ಅಷ್ಟೂ ಮಸಿಯನ್ನು ಒರೆಸಿದ ನಂತರ, ಅವಧೂತರನ್ನು ಒಂದೆಡೆ ನಿಲ್ಲಿಸಿ ಮಕ್ಕಳಿಗೆ ತೆಗೆಯುವಂತೆ ದೃಷ್ಟಿ ತೆಗೆದು ಕೈಬೆರಳುಗಳನ್ನು ಒಮ್ಮೆ ತಲೆಯ ಎರಡೂ ಬದಿಯಲ್ಲಿ ಮಡಿಸಿ ಪಟಗುಟ್ಟಿಸಿದರು ಗುರುಮಾತೆ. ವಾತ್ಸಲ್ಯದ ಖನಿಯೇ ಆಗಿದ್ದ ಅಮ್ಮನ ಕಾಲಿಗೆರಗಿದರು ಅವಧೂತರು.

Yagati Raghu Naadig Column: ಪೈಲಟ್-ಗೆಹ್ಲೋಟ್ ಕಾಳಗ

ಪೈಲಟ್-ಗೆಹ್ಲೋಟ್ ಕಾಳಗ

ರಾಜಸ್ಥಾನ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಸಾಕಷ್ಟು ತಿಕ್ಕಾಟ ನಡೆದಿದ್ದು ನಿಮಗೆ ಗೊತ್ತೇ ಇದೆ. ಅವರಿಬ್ಬರ ನಡುವೆ ಘರ್ಷಣೆಯ ಕಿಡಿ ಹೊತ್ತಿಕೊಂಡು ಜುಲೈಗೆ ಐದು ವರ್ಷಗಳು ತುಂಬುತ್ತವೆ. ಇಷ್ಟಾಗಿಯೂ ಅಶೋಕ್ ಗೆಹ್ಲೋಟ್ ಅವರು ಈ ಚರ್ಚಾವಿಷಯವನ್ನು ಕೈಬಿಡಲು ಸಿದ್ಧರಿಲ್ಲವಂತೆ.

Yagati Raghu Naadig Column: ಪ್ರಾಮಾಣಿಕ ಪ್ರಾರ್ಥನೆಗೆ ಪರವಶನಾಗನೇ ಪರಮಾತ್ಮ ?

ಪ್ರಾಮಾಣಿಕ ಪ್ರಾರ್ಥನೆಗೆ ಪರವಶನಾಗನೇ ಪರಮಾತ್ಮ ?

ಶಿಷ್ಯರು ಕಟ್ಟಿಕೊಂಡಿದ್ದ ಮೌನಕೋಟೆಯನ್ನು ಮುರಿಯುವವರಂತೆ ಅವಧೂತರು, “ಏನ್ರಯ್ಯಾ, ಕಥೆ ಮುಂದುವರಿಸಿ ಅಂತ ಇಷ್ಟೂ ಹೊತ್ತು ಪೀಡಿಸುತ್ತಿದ್ದವರು ಈಗ ಸುಮ್ಮನಾಗಿ ಬಿಟ್ಟಿರಿಲ್ಲಾ? ಯಾರಾದ ರೊಬ್ಬರು ಕಥೆ ಹೇಳುವಾಗ, ಕೇಳುವವರು ‘ಹೂಂ... ಹೂಂ’ ಅಂತ ‘ಹೂಂ’ ಗುಟ್ಟುತ್ತಿರಬೇಕು, ಇಲ್ಲವೇ ‘ಆಮೇಲೆ... ಆಮೇಲೆ..?’ ಅಂತ ಕೇಳುತ್ತಿರಬೇಕು ಎಂಬುದನ್ನು ಮರೆತೇ ಬಿಟ್ಟಿರಾ?" ಎಂದು ತಮಾಷೆ ಮಾಡಿದರು.

Narada Sanchara: ಸಾಫ್ಟ್‌ ಕಂಪನಿ ಹಾರ್ಡ್ ಆದಾಗ...!!

ಸಾಫ್ಟ್‌ ಕಂಪನಿ ಹಾರ್ಡ್ ಆದಾಗ...!!

‘ಆರ್ಥಿಕ ಅಸ್ಥಿರತೆ’ ಎಂಬ ಪೆಡಂಭೂತವು ಕಂಪನಿಯೊಂದನ್ನು ಅಮರಿಕೊಂಡಾಗ, ಅದು ಕೈ ಗೊಳ್ಳುವ ಒಂದಿಷ್ಟು ‘ರಕ್ಷಣಾತ್ಮಕ ಆಟ’ಗಳ ಪೈಕಿ ಉದ್ಯೋಗ ಕಡಿತವೂ ಒಂದು. ಒಂದು ಕಡೆ ‘ಕೃತಕ ಬುದ್ಧಿಮತ್ತೆ’ (ಎಐ) ಎಂಬ ಮಾಯಾಂಗನೆ ಒಂದೊಂದೇ ಉದ್ಯೋಗ ವಲಯವನ್ನು ತನ್ನ ಮೋಹಜಾಲಕ್ಕೆ ಸೆಳೆಯು ತ್ತಿದ್ದರೆ, ಮತ್ತೊಂದೆಡೆ ಹೀಗೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗುತ್ತಿದೆ.

Yagati Raghu Naadig Column: ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

ಹೊಸಶಿಷ್ಯರ ತವಕವನ್ನು ಕಂಡು ಮತ್ತೊಮ್ಮೆ ತುಂಟನಗೆ ನಕ್ಕ ಅವಧೂತರು ಕಥೆಯನ್ನು ಮುಂದುವರಿಸಲು ಉತ್ಸುಕರಾಗುತ್ತಿದ್ದಂತೆ, ಮೊಬೈಲ್ ಫೋನನ್ನು ಹಿಡಿದುಕೊಂಡೇ ಮನೆಯ ಹಜಾರದಿಂದ ಓಡಿಬಂದ ಅವಧೂತರ ಆಪ್ತ ಸಹಾಯಕರು, “ಬುದ್ಧೀ, ‘ನಳಪಾಕ’ನ ಫೋನು ಬಂದಿದೆ, ನಿಮ್ಮೊಂದಿಗೆ ಮಾತನಾಡಬೇಕಂತೆ" ಎಂದರು. ಆ ಮಾತಿಗೆ ಅವಧೂತರು, “ಅವನಿಗೆ ನಾಳೆ ಸಂಜೆ ಫೋನು ಮಾಡುವಂತೆ ತಿಳಿಸಿ ಸ್ವಾಮೀ" ಎಂದುತ್ತರಿಸಿದರು.

Yagati Raghu Naadig Column: ಕಳ್ಳಬೆಕ್ಕಿನ ಕಥಾನಕದಲ್ಲಿ ಕಾಲೂರಿದ ಖಾದಿ-ಖಾಕಿ...!

ಕಳ್ಳಬೆಕ್ಕಿನ ಕಥಾನಕದಲ್ಲಿ ಕಾಲೂರಿದ ಖಾದಿ-ಖಾಕಿ...!

“ನಮ್ಮ ಸಮಾಜದಲ್ಲಿ, ನಿಯೋಜಿತ ಕಾರ್ಯಭಾರದ ನೆರವೇರಿಕೆಗೆಂದು ಖಾಕಿ, ಖಾದಿ ಮತ್ತು ಕಾವಿ ವಸ್ತ್ರಗಳನ್ನು ಆಯ್ಕೆ ಮಾಡಿಕೊಂಡವರು ಭಾರಿ ಹುಷಾರಾಗಿರಬೇಕು; ಇವು ನಿರ್ದಿಷ್ಟ ಸ್ಥಾನಮಾನ ಅಥವಾ ಅಧಿಕಾರ ಭಾಗ್ಯವನ್ನು ದಕ್ಕಿಸಿಕೊಡುವ ದಿರಿಸುಗಳು ಎಂದೇ ಬಹುತೇಕರು ಭಾವಿಸಿದ್ದಾರೆ. ಒಂದು ಮಟ್ಟಕ್ಕೆ ಆ ಗ್ರಹಿಕೆ ನಿಜವೂ ಹೌದು.

Narada Sanchara: ಪಾತಾಳದಲ್ಲಿದ್ರೂ ಬಿಡಲ್ಲ!

Narada Sanchara: ಪಾತಾಳದಲ್ಲಿದ್ರೂ ಬಿಡಲ್ಲ!

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ್ದ ಪ್ರಭಾಕರ ರಾವ್ ಅವರು, ಸಂಭಾವ್ಯ ಬಂಧನದಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ ಒಂದು ವರ್ಷದವರೆಗೆ ಅಮೆರಿಕದಲ್ಲಿ ಠಿಕಾಣಿ ಹೂಡಿದ್ದರಂತೆ. ಈಗ ತನಿಖೆಯನ್ನು ಎದುರಿಸಲೇ ಬೇಕು ದೇಶದ ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವುದರಿಂದ ಪ್ರಭಾಕರ ರಾವ್ ಅವರು ತಲೆಬಾಗಲೇಬೇಕಾಗಿ ಬಂದಿದೆ

Narada Sanchara: ಎಲ್ಲಾ ಇದ್ದೂ ಏನೂ ಆಗ್ಲಿಲ್ಲ..!

ಎಲ್ಲಾ ಇದ್ದೂ ಏನೂ ಆಗ್ಲಿಲ್ಲ..!

ಪಕ್ಷದ ಅಧಿನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ಸಭೆಯ ನೇತೃತ್ವ ವಹಿಸಿ ಚೆನ್ನಾಗಿಯೇ ನಡೆಸಿದರಂತೆ; ಇದಕ್ಕೂ ಮೊದಲು ಅವರು ರೋಡ್‌ಷೋನಲ್ಲಿ ಉತ್ಸಾಹ ಭರಿತರಾಗಿ ಪಾಲ್ಗೊಂಡು ಬರೋಬ್ಬರಿ 19 ಕಿಲೋಮೀಟರ್‌ನಷ್ಟು ನಡೆದುಕೊಂಡು ಬಂದರಂತೆ ಹಾಗೂ ಅದರ ನಡುವೆಯೇ ಬಹಳ ವರ್ಷಗಳ ನಂತರ ತಮ್ಮ ಸೋದರ ಎಂ.ಕೆ.ಅಳಗಿರಿಯವರ ನೆಲೆಗೂ ಒಂದು ‘ಫ್ಲೈಯಿಂಗ್ ವಿಸಿಟ್’ ಕೊಟ್ಟರಂತೆ.

Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿದೆಯೇ ಕಾವಿಯ ಕರಾಮತ್ತು ?!

ಕಳ್ಳಬೆಕ್ಕಿನ ಕಥನದಲ್ಲಿದೆಯೇ ಕಾವಿಯ ಕರಾಮತ್ತು ?!

ಮಾತಿಗೆ ದೇಹ ಮತ್ತು ಮನಸ್ಸು ಸಹಕರಿಸದಿದ್ದರೂ, ಇದ್ದಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡ ಸ್ವಾಮೀಜಿ, “ಬುದ್ಧೀ, ನಿಮ್ಮ ಕಾಲಿಗೆ ಬೀಳ್ತೀನಿ. ದಯವಿಟ್ಟು ನನಗೆ ಪಾದಪೂಜೆ ಮಾಡಿಸಬೇಡಿ. ನಿಮ್ಮೊಂದಿಗೆ ಏಕಾಂತದಲ್ಲಿ ಒಂದಿಷ್ಟು ಮಾತಾಡುವುದಿದೆ. ಆ ಸೌಭಾಗ್ಯವನ್ನಷ್ಟೇ ನನಗೆ ದೊರಕಿಸಿ ಕೊಟ್ಟರೆ ಸಾಕು" ಎಂದು ಅವಧೂತರಿಗೆ ಮಾತ್ರವೇ ಕೇಳಿಸುವಷ್ಟು ಮೆಲುದನಿಯಲ್ಲಿ ಹೇಳುತ್ತಾ ಮತ್ತೊಮ್ಮೆ ಕೈಮುಗಿದರು.

Narada Sanchara : ಅವತ್ತೇ ಎಡವಿದ್ರಲ್ಲಾ ಟ್ರಂಪಣ್ಣ..!

Narada Sanchara : ಅವತ್ತೇ ಎಡವಿದ್ರಲ್ಲಾ ಟ್ರಂಪಣ್ಣ..!

ದೊಡ್ಡ ಮನುಷ್ಯರು ಎನಿಸಿಕೊಂಡವರು ಕೆನ್ನೆಗೆ ಪೌಡರ್ ಪೂಸಿದ್ದು, ಕೆಮ್ಮಿದ್ದು ಕೂಡ ಸುದ್ದಿಯಾಗಿ ಅದೆಷ್ಟು ವೈರಲ್ ಆಗಿ ಬಿಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಇದು, ‘ವಿಶ್ವದ ದೊಡ್ಡಣ್ಣ’ ಎಂದೇ ಕರೆಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಂಬಂಧಿಸಿದ್ದು. ನಮ್ ಟ್ರಂಪಣ್ಣ ನ್ಯೂಜೆರ್ಸಿಯ ಮಾರಿಸ್‌ಟೌನ್‌ನಲ್ಲಿರುವ ‘ಮುನಿಸಿಪಲ್’ ವಿಮಾನ ನಿಲ್ದಾಣದಲ್ಲಿ, ಏರ್ ಫೋರ್ಸ್-1 ವಿಮಾನವನ್ನೇರುವಾಗ ಮೆಟ್ಟಿಲುಗಳ ಮೇಲೆ ಎಡವಿ ಬಿಟ್ಟರಂತೆ.

Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಇದು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರ ಭಗವದ್ಗೀತೆ

ಇದು ಒಬ್ಬಿಬ್ಬರ ಮಾತಲ್ಲ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೂತ ಕಡೆ ಕೂರದೆ, ನಿಂತ ಕಡೆ ನಿಲ್ಲದೆ, ಗೋಲಿ ಗಾತ್ರದ ಕಂಗಳಲ್ಲಿ ಜಗವನ್ನೇ ತುಂಬಿಕೊಂಡು ಬೆರಗಾಗಲು ಹಾತೊರೆಯುವವರ ನಿತ್ಯ ಸ್ಲೋಗನ್ನು. ಇಂಥ ‘ಪರ್ಯಟನಾ-ಪ್ರಿಯ’ ಪಂಟರುಗಳ ತವಕ, ಕುತೂಹಲ, ಆಸಕ್ತಿಗಳನ್ನು ತಣಿಸಲೆಂದೇ ಇತ್ತೀಚೆಗೆ ಬಿಡುಗಡೆಯಾಗಿದೆ ‘ಪ್ರವಾಸಿ ಪ್ರಪಂಚ’ ವಾರ ಪತ್ರಿಕೆ. ಇದು ‘ವಿಶ್ವವಾಣಿ’ ಪತ್ರಿಕಾ ಬಳಗದ ಮತ್ತೊಂದು ಸಾಹಸ ಎಂಬುದು ನಿಮ್ಮ ಗಮನಕ್ಕೆ.

Yagati Raghu Naadig Column: ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

ಹತಭಾಗ್ಯೆಯ ಹಸಿಮಾಂಸಕ್ಕೆ ಹಾತೊರೆದ ಹದ್ದು...!

“ಪತ್ತೇದಾರಿ ಕಥೆಯ ತಿರುವು ನೀಡಿದ ‘ಹಿತವಾದ ಆಘಾತ’ವನ್ನು ಅನುಭವಿಸಲೆಂದು ನಾನು ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ಕಾರು ನಿಂತಿತು ಎಂದು ಭಾವಿಸಿದ್ದೆ; ಆದರೆ ಇಲ್ಲಿ ನೋಡಿದರೆ ಅದು ‘ನಾನು ಹಾಕಿದ’ ಬ್ರೇಕ್ ಅಲ್ಲ, ‘ಮೇಲಿನವ ಹಾಕಿಸಿದ’ ಬ್ರೇಕ್ ಅಂತ ಈಗ ಗೊತ್ತಾಯ್ತು" ಎಂದು ಚಾಲಕ ತನಗಾದ ಬೆರಗನ್ನು ಅವಧೂತರಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡ.

Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ಅವಧೂತರು ಹೀಗಂದಿದ್ದೇ ಅಂದಿದ್ದು, ‘ಕ್ರೀ...ಕ್’ ಎಂದು ಜೋರಾಗಿ ಸದ್ದುಮಾಡಿ ಕಾರು ಗಕ್ಕನೆ ನಿಂತು ಬಿಟ್ಟಿತು. ಅದಕ್ಕೆ ಕಾರಣ, ಅದರ ಚಾಲಕ. ಅವಧೂತರು ಹೋದಲ್ಲಿ ಬಂದಲ್ಲಿ ಅವರ ಜತೆಗೇ ಇದ್ದು ಕೊಂಡು ಪಯಣಕ್ಕೆ ಸಾಥ್ ನೀಡುತ್ತಿದ್ದ ಆತನಿಗೆ, ಅವಧೂತರು ಕಾರಿನೊಳಗೆ ಇದ್ದುಕೊಂಡೇ ತಮ್ಮ ಶಿಷ್ಯರೊಂದಿಗೆ ಹೀಗೆ ಲೋಕಾಭಿರಾಮದ ಮಾತುಕತೆ ನಡೆಸುವುದು ಗೊತ್ತಿತ್ತು, ಆ ವೈಖರಿಗೆ ಆತನೂ ಹೊಂದಿಕೊಂಡುಬಿಟ್ಟಿದ್ದ

Yagati Raghu Naadig Column: ಮುಂಚೂಣಿಯಲ್ಲಿ ಮೆರೆಯುತ್ತಲೇ ಮುಕ್ಕುತ್ತಿತ್ತಾ ಮಾರ್ಜಾಲ ?!

ಮುಂಚೂಣಿಯಲ್ಲಿ ಮೆರೆಯುತ್ತಲೇ ಮುಕ್ಕುತ್ತಿತ್ತಾ ಮಾರ್ಜಾಲ ?!

ಸದಾಶಯದೊಂದಿಗೆ ಶುರು ಮಾಡಲಾಗಿದ್ದ ಸಮಾಜ ಸೇವಾ ಸಂಸ್ಥೆಯ ಆವರಣವು ಕಳೆಗುಂದಿದೆ, ನಕಾರಾತ್ಮಕ ಛಾಯೆ ತಾಂಡವವಾಡುತ್ತಿದೆ ಎಂಬ ಅಹವಾಲು ಹೊತ್ತು ಅವಧೂತರ ಬಳಿಗೆ ಬರುವ ಸಂಸ್ಥೆಯ ಮ್ಯಾನೇಜರ್, ಇದಕ್ಕೆ ಪರಿಹಾರೋಪಾಯವನ್ನು ಸೂಚಿಸುವಂತೆ ಅವಧೂತರಲ್ಲಿ ಕೋರಿ ಕೊಳ್ಳುತ್ತಾರೆ. ಸಂಸ್ಥೆಯ ಆವರಣದಲ್ಲಿ ಸೇರಿಕೊಂಡಿರುವ ಒಂದು ‘ಕಳ್ಳ’ಬೆಕ್ಕನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವಧೂತರು ಸೂಚಿಸುತ್ತಾರೆ. ಅಂತೆಯೇ ಸದರಿ ಕಳ್ಳಬೆಕ್ಕನ್ನು ಹುಡುಕಲು ಹರಸಾಹಸಪಟ್ಟರೂ ಸಿಗದೆ ವಿಫಲರಾದ ಮ್ಯಾನೇಜರ್, ಮತ್ತೊಮ್ಮೆ ಅವಧೂತರಲ್ಲಿಗೆ ಬಂದು ನಡೆದುದನ್ನು ಹೇಳುತ್ತಾರೆ

Yagati Raghu Naadig Column: ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!

ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!

‘ಎಲ್ಲರಲ್ಲೂ ಇರುವುದು ಜೀವಾತ್ಮನೇ... ಪರಮಾತ್ಮನೇ...’ ಎಂಬ ಚಿಂತನೆ ಯೊಂದಿಗೆ ನಿಮ್ಮ ಸಂಸ್ಥೆಯಲ್ಲಿ ಸಾಕಷ್ಟು ಮನುಜರಿಗೆ, ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿರುವುದು ಸಂತಸದ ವಿಷಯವೇ. ಆದರೆ, ಇಂಥ ಆಶ್ರಿತರ ಪೈಕಿ ಒಂದು ‘ಕಳ್ಳಬೆಕ್ಕು’ ಸೇರಿಕೊಂಡು ಬಿಟ್ಟಿದ್ದು, ಅದು ಅಲ್ಲಿನ ವಾತಾವರಣವನ್ನು ಕಲುಷಿತ ಗೊಳಿಸುತ್ತಿದೆ. ಅದನ್ನು ಅಲ್ಲಿಂದ ವಿಲೇವಾರಿ ಮಾಡಿ ದಲ್ಲಿ, ನಿಮ್ಮ ಸಮಸ್ಯೆ ಬಗೆಹರಿಯುತ್ತೆ. ಆ ಕೆಲಸ ವನ್ನು ಮುಗಿಸಿ ಮತ್ತೊಮ್ಮೆ ನನ್ನಲ್ಲಿಗೆ ಬನ್ನಿ, ನೀವಿನ್ನು ಹೊರಡಬಹುದು.." ಎಂದು ಹೇಳಿ ಕೈಮುಗಿದರು

Yagati Raghu Naadig Column: ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್‌ ಗುನ್ನʼ

ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್‌ ಗುನ್ನʼ

ಟರ್ಕಿಯ ಹೆಗಲ ಮೇಲೆ ಬಂದೂಕವನ್ನಿಟ್ಟು ಭಾರತದೆಡೆಗೆ ಗುರಿ ಮಾಡುವ ಮೂಲಕ ಪಾಕಿಸ್ತಾನವು ಭಾರತದ ಜತೆಗಿನ ಹಣಾಹಣಿಯಲ್ಲಿ ಇದೇ ಮೊದಲ ಬಾರಿಗೆ ವಿದೇಶವೊಂದರ ಸೇನಾಪಡೆಯ ನೇರ ಬೆಂಬಲವನ್ನು ಪಡೆದಂತಾಗಿದೆ. ಆದರೆ, ಈ ‘ಬುಗುರಿ ಆಟ’ದಲ್ಲಿ ತನಗೆ ಭಾರತ ಕಡೆಯಿಂದ ‘ಮೈಸೂರ್ ಗುನ್ನ’ ಬೀಳಲಿದೆ ಎಂಬುದು ಟರ್ಕಿಗೆ ಇನ್ನೂ ಅರಿವಾದಂತಿಲ್ಲ. ಏಕೆಂದರೆ, ಟರ್ಕಿಯ ಈ ವಿಶ್ವಾಸ ಘಾತುಕತನದಿಂದಾಗಿ ಭಾರತದ ಜತೆಗಿನ ಅದರ ದ್ವಿಪಕ್ಷೀಯ ಸಂಬಂಧಕ್ಕೆ ಭಾರಿ ಹೊಡೆತ ಬೀಳಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು

Yagati Raghu Naadig Column: ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!

ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!

ಫೋನಿನ ಅತ್ತ ಕಡೆಯಿಂದ ಸಿಡಿದ ಸಂಪಾದಕರ ‘ತಾಂಬೂಲ-ಭರಿತ’ ನಗೆಯನ್ನು ಜೀರ್ಣಿಸಿ ಕೊಳ್ಳುವ ಹರಸಾಹಸದಲ್ಲಿದ್ದ ಕಥೆಗಾರ, “ಕಥೆಯ ಎಳೆ ಸಿಕ್ಕಿದೆ ಸರ್, ಇನ್ನೇನು ಮನೆಗೆ ಹೋಗಿ ನಿಮಗೆ ಮತ್ತೊಮ್ಮೆ ಫೋನ್ ಮಾಡುತ್ತೇನೆ" ಎಂದಷ್ಟೇ ಹೇಳಿ ಕರೆಯನ್ನು ತುಂಡರಿಸಿದ. ನಂತರ ಶ್ರಮಜೀವಿಯ ಕಂಗಳನ್ನೇ ಒಮ್ಮೆ ಅಭಿಮಾನಪೂರ್ವಕವಾಗಿ ದಿಟ್ಟಿಸಿ, ಅವನ ಕೈಗಳನ್ನು ಮೃದು ವಾಗಿ ಅದುಮಿ, “ನನ್ನನ್ನು ನೀವು ಹಗುರಮಾಡಿಬಿಟ್ಟಿರಿ" ಎಂದ. ಅದಕ್ಕೆ ಅಯೋಮಯಗೊಂಡ ಶ್ರಮಜೀವಿ, “ಅದರನು ಬಂತು ಸರ್? ಮಾಲೀಶ್ ಮಾಡಿಸಿಕೊಳ್ಳೋದೇ ದೇಹ-ಮನಸ್ಸು ಹಗುರ ವಾಗಲಿ ಅಂತಲ್ವೇ?" ಎಂದು ಮರುಪ್ರಶ್ನಿಸಿದ

Yagati Raghu Naadig Column: ಏಕ್‌ ಚುಟ್ಕೀ ʼಸಿಂದೂರ್‌ʼ ಕೀ ಕೀಮತ್‌ ತುಮ್‌ ಕ್ಯಾ ಜಾನೋ ʼಮುನೀರ್‌ʼ ಬಾಬು ?!

ಚುಟ್ಕೀ ʼಸಿಂದೂರ್‌ʼ ಕೀ ಕೀಮತ್‌ ತುಮ್‌ ಕ್ಯಾ ಜಾನೋ ʼಮುನೀರ್‌ʼ ಬಾಬು ?!

ಏಕ್ ಚುಟ್ಕೀ ಸಿಂದೂರ್ ಕಿ ಕೀಮತ್ ತುಮ್ ಕ್ಯಾ ಜಾನೋ ರಮೇಶ್ ಬಾಬು? ಈಶ್ವರ್ ಕಾ ಆಶೀರ್ವಾದ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್ | ಸುಹಾಗನ್ ಕೆ ಸರ್ ಕಾ ತಾಜ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್| ಹರ್ ಔರತ್ ಕಾ ಖ್ವಾಬ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್|| (ಒಂದು ಚಿಟಿಕೆ ಸಿಂದೂ ರದ ಮೌಲ್ಯ ನಿಮಗೆ ತಿಳಿದಿದೆಯೇ ರಮೇಶ್ ಬಾಬು? ಒಂದು ಚಿಟಿಕೆ ಸಿಂದೂರವು ಈಶ್ವರನ ಆಶೀರ್ವಾದವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ವಿವಾಹಿತೆಯೊಬ್ಬಳ ತಲೆಯ ಮೇಲಿನ ಕಿರೀಟವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ಪ್ರತಿಯೊಬ್ಬ ಮಹಿಳೆಯ ಕನಸಾಗಿರು ತ್ತದೆ).

Yagati Raghu Naadig Column: ದೀನ ಬಾಹುಗಳಿಗೆ ದಕ್ಕಿಬಿಟ್ಟಿತು ಜೈನಬಲ !

ದೀನ ಬಾಹುಗಳಿಗೆ ದಕ್ಕಿಬಿಟ್ಟಿತು ಜೈನಬಲ !

ಹತ್ತಾರು ವೈದ್ಯರಿಗೆ ತೋರಿಸಿದ ನಂತರವೂ ವಾಸಿಯಾಗದ ಅವರ ಬೆನ್ನುನೋವು ನನ್ನ ಮಾಲೀಶ್‌ ನಿಂದ ಗುಣವಾಗಿತ್ತಂತೆ! ಇದರ ಋಣಸಂದಾಯವೋ ಎಂಬಂತೆ ಅವರು, ‘ನಿನಗೆ ಅಡ್ವಾನ್ಸು-ಬಾಡಿಗೆ ಕೇಳಿದ್ಯಾರು? ವ್ಯವಹಾರ ಕುದುರುವವರೆಗೆ ನೀನೇನೂ ಕೊಡಬೇಕಿಲ್ಲ, ನಂತರ ಕೊಟ್ಟ ರಾಯ್ತು. ನಿನ್ನನ್ನು ನಂಬಬಹುದು ಅಂತ ನಮ್ಮ ತೀರ್ಥಂಕರ ವರ್ಧಮಾನ ಮಹಾವೀರರ ಪ್ರೇರಣೆಯಾಗಿದೆ ನನಗೆ’ ಎಂದರು....

Yagati Raghu Naadig Column: ಕದನ ಕುತೂಹಲ ಕಥನ

ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ !

ಪಹಲ್ಗಾಮ್‌ನಲ್ಲಿ ಪಾಕಿಸ್ತಾನ-ಕೃಪಾಪೋಷಿತ ಉಗ್ರರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಾಗತಿಕ ಸಮುದಾಯವೇ ಛೀಮಾರಿ ಹಾಕಿದೆ. ವಿವಿಧ ದೇಶಗಳ ಮುಖ್ಯಸ್ಥರು ಪಾಕಿಸ್ತಾನದ ಈ ಕುತ್ಸಿತ ಚಿಂತನೆಯನ್ನು ಖಂಡಿಸಿದ್ದಾರೆ. ಭಾರತದ ಮೇಲೆ ಮುರಕೊಂಡು ಬೀಳುವ ತನ್ನ ಯತ್ನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ನೀಡಿಬಿಡುತ್ತವೆ ಎಂಬ ಪಾಕಿಸ್ತಾನದ ನಿರೀಕ್ಷೆ ಮಣ್ಣು ಪಾಲಾಗಿದೆ. ಪರದೇಶಗಳ ಕಥೆಯಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಗಳೇ ತಮ್ಮ ದೇಶದ ಜನ ನಾಯಕರು ಮತ್ತು ಮಿಲಿಟರಿ ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

Yagati Raghu Naadig Column: ಅಮಾವಾಸ್ಯೆಯ ಬಾಳಿಗೆ ಲಾಂದ್ರ ಹಿಡಿದ ಚಂದ್ರ...

ಅಮಾವಾಸ್ಯೆಯ ಬಾಳಿಗೆ ಲಾಂದ್ರ ಹಿಡಿದ ಚಂದ್ರ...

“ನನ್ನ ಕಂಗಳನ್ನೇ ಅರೆಕ್ಷಣ ದಿಟ್ಟಿಸಿದ ಚಂದ್ರಣ್ಣ, ‘ಆಯ್ತು, ಮೊದಲು ಒಂಚೂರು ಚೂಡಾ ತಿಂದು ಆಮೇಲೆ ಆತ್ಮಹತ್ಯೆ ಮಾಡ್ಕಾ...’ ಎಂದು ಹೇಳಿ ಪತ್ರಿಕೆಯೊಂದರ ಭಾನುವಾರದ ಪುರವಣಿಯ ಮೇಲೆ ಚೂಡಾ ಸುರಿದು ಕೊಟ್ಟು, ಭುಜ ಹಿಡಿದು ಬಲವಂತವಾಗಿ ಕೂರಿಸಿದ. ಅದನ್ನು ತಿಂದ ಮೇಲೆ, ಆ ಪುರವಣಿಯಲ್ಲಿ ಮುದ್ರಿತವಾಗಿದ್ದ ಅಕ್ಷರಗಳ ಮೇಲೆ ಕಣ್ಣಾಡಿಸಿದೆ. ಅದರಲ್ಲಿ ‘ದುಡುಕಬೇಡ ಜೀವವೇ...’ ಎಂಬ ಶೀರ್ಷಿಕೆಯ ನಿಮ್ಮ ಕಥೆ ಪ್ರಕಟವಾಗಿತ್ತು

Yagati Raghu Naadig Column: ಪಹಲ್ಗಾಮ್‌ ಪ್ರಹಾರ

ಪಹಲ್ಗಾಮ್‌ ಪ್ರಹಾರ

ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣವು ಉಗ್ರರ ದಾಳಿಯಿಂದಾಗಿ ರಕ್ತಸಿಕ್ತವಾಯಿತು. ಪಾಕ್-ಪ್ರೇರಿತ ಭಯೋತ್ಪಾದಕರ ಕುಯುಕ್ತಿಯು 26 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣವಾಗಿದ್ದನ್ನು ಕಂಡು ಇಡೀ ಜಗತ್ತೇ ಬೆಚ್ಚಿದೆ. ಜತೆಗೆ, ಈ ಸಂಬಂಧವಾಗಿ ಹತ್ತು ದಿಕ್ಕುಗಳಿಂದ ಹಲವು ದನಿಗಳು ಹೊಮ್ಮುವುದಕ್ಕೆ ಸದರಿ ‘ಪಹಲ್ಗಾಮ್ ಪ್ರಹಾರ’ ಪ್ರಕರಣ ಕಾರಣವಾಗಿದೆ.

Loading...