ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

Yashaswi Devadiga

Sub Editor

[email protected]

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
Narendra Modi: ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ; ಕಾರಣ ಏನು?

ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಮೋದಿ!

Rajkumar: ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಡಾ. ರಾಜ್​​ಕುಮಾರ್ ಅವರ 'ಶ್ರೀ ಚಾಮುಂಡೇಶ್ವರಿ' ಹಾಡನ್ನು ಹಂಚಿಕೊಂಡಿರುವುದು ಕನ್ನಡಿಗರಿಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಖುಷಿ ತಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

Amruthadhaare Serial: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!

Amruthadhaare: ದೊಡ್ಡ ಮಗಳ ಮದುವೆಗೆ ಸಿದ್ಧವಾದ್ರು ಗೌತಮ್ - ಭೂಮಿಕಾ!

Amruthadhaare Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಮದುವೆ ಬಗ್ಗೆಯೇ ಕಥೆ ಸಾಗುತ್ತಿದೆ. ಒಂದು ಕಡೆ ಜೈದೇವ್‌ ಕುತಂತ್ರದ ನಡುವೆ ಮಲ್ಲಿ ಮದುವೆ ತಯಾರಿಯೂ ಜೋರಾಗಿದೆ. ದೊಡ್ಡ ಮಗಳ ಮದುವೆಗೆ ಗೌತಮ್ – ಭೂಮಿಕಾ ಸಿದ್ಧವಾಗುತ್ತಿದ್ದಾರೆ. ಮದುವೆ ಕಾರ್ಡ್‌ ಕೂಡ ಪ್ರಿಂಟ್‌ ಆಗಿದೆ.

Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು

ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್

Ravichandran Hamsalekha: ಕ್ರೇಜಿ ಸ್ಟಾರ್ ರವಿಚಂದ್ರನ್ಹಾ ಗೂ ನಾದಬ್ರಹ್ಮ ಹಂಸಲೇಖ ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮಾತಾಡಿದ್ದಾರೆ.

Dhurandhar 2 collection:  ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

Dhurandhar 2: ಧುರಂಧರ್: ದಿ ರಿವೆಂಜ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರ ಇನ್ನೂ ಉತ್ತಮ ಪ್ರದರ್ಶನ ನೀಡಿತು. ರಣವೀರ್ ಸಿಂಗ್ ಅವರ ಸ್ಪೈ ಥ್ರಿಲ್ಲರ್ ಚಿತ್ರವು ಮೊದಲ ದಿನವೇ ಜಾಗತಿಕವಾಗಿ ₹ 200 ಕೋಟಿ ಗಡಿ ದಾಟಿತ್ತು. ಆರಂಭಿಕ ವರದಿಗಳ ಪ್ರಕಾರ, ಶುಕ್ರವಾರ ಚಿತ್ರ ಸುಮಾರು 80 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಚಿತ್ರದ ಎರಡು ದಿನಗಳ ಒಟ್ಟು ಕಲೆಕ್ಷನ್ (ಪೂರ್ವವೀಕ್ಷಣೆಗಳು ಸೇರಿದಂತೆ) 200 ಕೋಟಿ ರೂ.ಗಳನ್ನು ದಾಟಿದೆ.

Maatrubhumi Movie: ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ? ಇಲ್ಲಿದೆ ಕಾರಣ

ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ?

Maatrubhumi Movie: ಗಲ್ವಾನ್ ಕದನ ಎಂದು ಕರೆಯಲ್ಪಡುತ್ತಿದ್ದ ಸಲ್ಮಾನ್ ಖಾನ್ ಅವರ 'ಮಾತೃಭೂಮಿ' ಚಿತ್ರದ ನಿರ್ಮಾಪಕರು ಅನಿರೀಕ್ಷಿತ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ-ಗಾಯಕ ಪ್ರಶಾಂತ್ ತಮಾಂಗ್ ಅವರ ನಿಧನದ ನಂತರ ಚಿತ್ರದ ಬಿಡುಗಡೆ ವಿಳಂಬವಾಗಿದೆ ಎಂದು ವರದಿಯಾಗಿದೆ . ಈ ಚಿತ್ರವು ಏಪ್ರಿಲ್ ಆರಂಭದಲ್ಲಿ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಬಾಕಿ ಇರುವ ಚಿತ್ರೀಕರಣದ ಅವಶ್ಯಕತೆಗಳು ಮತ್ತು ಅಗತ್ಯ ಸ್ಕ್ರಿಪ್ಟ್ ಹೊಂದಾಣಿಕೆಗಳಿಂದಾಗಿ ಸಿನಿಮಾ ರಿಲೀಸ್‌ ಮುಂದೂಡಲಾಗಿದೆ ಎಂದು ವರದಿಯಾಗಿದೆ.

Dhurandhar 2: ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಸಿಂಗ್‌ ಹೊಗಳಿ ಆರ್​ಜಿವಿ ಹೇಳಿದ್ದೇನು?

ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಹೊಗಳಿ RGV ಹೇಳಿದ್ದೇನು?

Dhurandhar 2: ಧುರಂಧರ್ 2 ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ , ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡರು. ಸಿನಿಮಾವನ್ನು ಶ್ಲಾಘಿಸಿದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ಎಂದು ಕರೆದರು. ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ? ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಅಲ್ವೇ ಅಲ್ಲ

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ?

Dhurandhar 2: ಕಥೆ, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಜೊತೆಗೆ, ಸ್ಪೈ ಥ್ರಿಲ್ಲರ್ ಧುರಂಧರ್ ತನ್ನ ತಾರಾಬಳಗಕ್ಕಾಗಿ ಪ್ರಶಂಸೆಯನ್ನು ಪಡೆಯಿತು. ಹಮ್ಜಾ ಪಾತ್ರದಲ್ಲಿ ರಣವೀರ್ ಸಿಂಗ್ ಆಗಿರಲಿ ಅಥವಾ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಆಗಿರಲಿ ಆದಿತ್ಯ ಧರ್ ಅವರ ಚಿತ್ರಕ್ಕೆ ಇಡೀ ತಾರಾಬಳಗವೇ ಸಿನಿಮಾಗೆ ಜೀವ ತುಂಬಿದೆ. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು. ಹಾಗಾದ್ರೆ ಈ ಪಾತ್ರ ನಿರ್ವಹಿಸಿರೋದು ಯಾರು?

Dhurandhar 2:'ಧುರಂಧರ್ 2' ಸಿನಿಮಾ ಅಲ್ಲ, ಟೈಮ್ ವೇಸ್ಟ್ ಮೂವಿ;  ರೊಚ್ಚಿಗೆದ್ದ ಸ್ಯಾಂಡಲ್‌ವುಡ್‌ ಕ್ವೀನ್‌ Video

'ಧುರಂಧರ್ 2' ಕಾಮಿಡಿ ಮೂವಿ, ನಿಮ್ಮ ಸಮಯ ವ್ಯರ್ಥ ಮಾಡಬೇಡಿ; ನಟಿ ರಮ್ಯಾ

Dhurandhar 2: `ಧುರಂದರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ನೆಗೆಟಿವ್ ಅಭಿಪ್ರಾಯ ನೀಡಿದ್ದಾರೆ. ‘’ಧುರಂದರ್‌ 2 ಚಿತ್ರದಲ್ಲಿ ಹಿಂಸಾಚಾರ ಹೆಚ್ಚಿದೆ. ಸುತ್ತಮುತ್ತ ಇರುವ ವಸ್ತುಗಳನ್ನೇ ಆಯುಧವಾಗಿಸಿದ್ದಾರೆ. ಇದು ಥಿಯೇಟರ್‌ನಲ್ಲಿ ನೋಡುವ ಚಿತ್ರವಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ರಮ್ಯಾ.

Rishab Shetty: ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!

ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್?

Hombale Films: ನಟ, ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಪೋಸ್ಟ್‌ ಬಂದಿದೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಬರೆದು ಪೋಸ್ಟ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಅನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿ, ತಮ್ಮದೇ ಬ್ಯಾನರ್ ಅಡಿಯಲ್ಲಿ "ಚಾಪ್ಟರ್ 2" ಘೋಷಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.

Dhurandhar 2 Review: ಧುರಂಧರ್‌ ಯಾರು? ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ Video

ಇದೊಂದು ಸೇಡಿನ ಕಥೆ! ಇಲ್ಲಿದೆ ಧುರಂಧರ್‌ 2 ಸಿನಿಮಾ ವಿಮರ್ಶೆ

Ranveer: ಗಲ್ಲು ಶಿಕ್ಷೆ ಪಡೆದು ಮರಣಹೊಂದಬೇಕಾಗಿದ್ದ ಪಂಜಾಬ್‌ನ ಸಣ್ಣ ಹಳ್ಳಿಯ ಹುಡುಗನೊಬ್ಬ ಪಾಕಿಸ್ತಾನದ ಒಳಗೆ ಹೋಗಿ ಅಲ್ಲಿನ ಆತಂಕವಾದಿ ಗುಂಪುಗಳನ್ನು ಸರ್ವನಾಶ ಮಾಡುವ ಕೆಲಸದಲ್ಲಿ ತೊಡಗುವ ರೋಚಕ ಕಥೆ ಧುರಂಧರ್. ʻಧುರಂಧರ್‌ 2ʼ ಸಿನಿಮಾ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರವನ್ನು ನೀಡಿದ್ದಾರೆ.

Amruthadhaare Serial: ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?

Amruthadhaare: ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ತಿರುವು ಪಡೆದು ಕಥೆ ಸಾಗುತ್ತಿದೆ. ಜೈದೇವ್‌ಗೆ ಮಲ್ಲಿ ವಿಚಾರದಲ್ಲಿ ಮುಖಭಂಗವಾಗಿದೆ. ಪರೀಕ್ಷೆಗೆ ಮಲ್ಲಿ ಕುಳಿತುಕೊಳ್ಳವಾರದು ಅಂತ ಎಷ್ಟೇ ಪ್ಲ್ಯಾನ್‌ ಮಾಡಿದ್ರೂ ಪ್ಲ್ಯಾನ್‌ ಪ್ಲಾಪ್‌ ಆಗಿದೆ. ಇದರ ಜೊತೆಗೆ ಹಿಂದೆ ಇರುವ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಜೈದೇವ್ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದೆ. ಸದ್ಯ ಜೈದೇವ್ ಎಂದಿನಂತೆ ಎಣ್ಣೆ ಕುಡಿಯುತ್ತಾ ಕುಂತಿದ್ದು, ಜೈದೇವ್‌ನ ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾನೆ. ಲಕ್ಷ್ಮೀಕಾಂತ್‌ಗೂ ಜೈದೇವ್‌ ಮೇಲೆ ಅನುಮಾನ ಶುರು ಆಗಿದೆ.

Dhurandhar 2: ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ; ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?

ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ

Ranveer Singh: 'ಧುರಂಧರ್‌: ದಿ ರಿವೆಂಜ್' ಘೋಷಣೆಯಾದ ದಿನವೇ ನಿರೀಕ್ಷೆಗಳು ಹೆಚ್ಚಾಗಿದ್ದವು. ರಣವೀರ್ ಸಿಂಗ್ ನಾಯಕನಾಗಿ ನಟಿಸಿದ ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಆ ನಿರೀಕ್ಷೆಗಳನ್ನು ಪೂರೈಸುವುದಲ್ಲದೆ, ಇನ್ನೂ ಹೆಚ್ಚಿನದನ್ನು, ನೀಡಿತು. ಬಾಕ್ಸ್ ಆಫೀಸ್ ಅಂಕಿಅಂಶಗಳು ಅದಕ್ಕೆ ಪುರಾವೆಯಾಗಿ ನಿಂತಿವೆ. ಭಾರತದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾದ ' ಧುರಂಧರ್‌: ದಿ ರಿವೆಂಜ್' ಮಾರ್ಚ್ 19, 2026 ರಂದು ಶುಕ್ರವಾರ 100 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅದರ ಒಟ್ಟು ಗಳಿಕೆ 150 ಕೋಟಿ ರೂ.ಗಳಿಗೆ ಹತ್ತಿರವಾಗಿದೆ ಎಂದು ವರದಿಯಾಗಿದೆ.

Rashmika Mandanna: ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ

ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ

Rashmika: ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 19 ರಂದು ಹೈದರಾಬಾದ್ ಹೈಟೆಕ್ಸ್‌ನಲ್ಲಿ ಯುಗಾದಿಯ ಸಂದರ್ಭದಲ್ಲಿ ಅದ್ಧೂರಿಯಾಗಿ ನಡೆಯಿತು. 2025 ರ ವರ್ಷದ ಗದ್ದರ್ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ!

PM Narendra Modi: ಆದಿತ್ಯ ಧರ್ ಅವರ ಧುರಂಧರ್ 2 ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014 ರ ವಿಜಯೋತ್ಸವ ಭಾಷಣವನ್ನು ಪ್ರಮುಖ ದೃಶ್ಯದಲ್ಲಿ ತೋರಿಸಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಚಿತ್ರದೊಳಗಿನ ದೂರದರ್ಶನದಲ್ಲಿ ತೋರಿಸಲಾದ ಈ ಕ್ಷಣವು, ವೀಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಿ ರಿಲೀಸ್‌ ಪ್ರಾರಂಭಿಸುತ್ತಿದ್ದಂತೆ, ಪ್ರೇಕ್ಷಕರು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Dhurandhar 2 Twitter Review: ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ಸಿನಿಮಾ ನೋಡಿದವರು ಏನಂದ್ರು?

ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ನೋಡಿದವರು ಏನಂದ್ರು?

Dhurandhar 2 : ಧುರಂಧರ್ ದಿ ರಿವೆಂಜ್ ಬಾಲಿವುಡ್ ಚಿತ್ರವಾಗಿದ್ದು, ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ. ಆದಿತ್ಯ ಧರ್ ಈ ಚಿತ್ರವನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಆಕ್ಷನ್, ಸ್ಪೈ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಆದಿತ್ಯ ಧರ್, ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಸಿನಿಮಾ ನೋಡಿದವರು ಧುರಂಧರ್ ದಿ ರಿವೆಂಜ್ ಗೆ ಪಾಸಿಟಿವ್ ರೇಟಿಂಗ್ಕೂ ಡ ನೀಡಿದ್ದಾರೆ. ಹಾಗಾದರೆ ಧುರಂಧರ್ ಭಾಗ 2 ಹೇಗಿದೆ ಮತ್ತು ಅದರ ರೇಟಿಂಗ್ ಏನು ಎಂದು ತಿಳಿದುಕೊಳ್ಳೋಣ.

Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

KD movie: ಜೋಗಿ ಪ್ರೇಮ್‌ ಅವರ ʻಕೆಡಿʼ ಚಿತ್ರದ ಐಟಂ ಸಾಂಗ್‌ ವಿವಾದ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂದು ಹಿಂದಿ ವರ್ಷನ್‌ ಅನ್ನು ತೆಗೆದು ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಕುರಿತ ಚರ್ಚೆಗೆ ಬ್ರೇಕ್‌ ಬಿದ್ದಿಲ್ಲ. ಅತ್ತ ಹಾಡಿನಲ್ಲಿ ಡ್ಯಾನ್ಸ್‌ ಮಾಡಿರುವ ನೋರಾ ಫತೇಹಿ ಕೂಡ ಪ್ರೇಮ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Dhurandhar 2: ಕೊನೆಯ ಕ್ಷಣದಲ್ಲಿ ‘ಧುರಂಧರ್ 2’ ಪ್ರೀಮಿಯರ್ ರದ್ದು; ಅಭಿಮಾನಿಗಳಿಗೆ ನಿರಾಸೆ

ಕೊನೆಯ ಕ್ಷಣದಲ್ಲಿ ‘ಧುರಂಧರ್ 2’ ಪ್ರೀಮಿಯರ್ ರದ್ದು!

Dhurandhar 2: ಧುರಂಧರ್‌ 2 ಭಾರತದಲ್ಲಿ ಹಿಂದಿ ಪ್ರೀಮಿಯರ್ ಶೋ ಹೊರತಾಗಿ ಇತರೆ ಭಾಷೆಯ ಎಲ್ಲ ಪ್ರೀಮಿಯರ್ ಶೋ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಪ್ಯಾನ್-ಇಂಡಿಯಾ ಚಿತ್ರವಾಗಿ ಸ್ಥಾನ ಪಡೆದಿರುವ ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳೊಂದಿಗೆ ಹಿಂದಿಯಲ್ಲಿ ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಕೊನೆಯ ಕ್ಷಣದ ತಾಂತ್ರಿಕ ದೋಷಗಳಿಂದಾಗಿ ಹಠಾತ್ ಪ್ರೀಮಿಯರ್ ಶೋ ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.

Nora Fatehi: ಪ್ರೇಮ್​​ಗೆ ಆ ದಿನವೇ ಹೇಳಿದ್ದೆ! ತಿರುಗಿಬಿದ್ದ ನೋರಾ ಫತೇಹಿ Video

ಪ್ರೇಮ್​​ಗೆ ಆ ದಿನವೇ ಹೇಳಿದ್ದೆ! ತಿರುಗಿಬಿದ್ದ ನೋರಾ ಫತೇಹಿ

Nora Fatehi: ಬಾಲಿವುಡ್ ನಟಿ ನೋರಾ ಫತೇಹಿ ಅವರು ಅಭಿನಯಿಸಿದ ‘ಸರ್ಸೆ ನಿನ್ನ ಸೆರಗ’ ಹಾಡು ವಿವಾದಕ್ಕೆ ಕಾರಣ ಆಗಿದೆ. ದೇಶಾದ್ಯಂತ ವಿರೋಧ ವ್ಯಕ್ತವಾದ ಬಳಿಕ ನೋರಾ ಫತೇಹಿ ಅವರೇ ಜನರ ಎದುರು ಬಂದು ಸ್ಪಷ್ಟನೆ ನೀಡಿದ್ದಾರೆ. ಇಷ್ಟೆಲ್ಲ ವಿವಾದ ಆಗಿದ್ದಕ್ಕೆ ನಟಿ ನೋರಾ ಫತೇಹಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂಬುದು ನನಗೆ ಗೊತ್ತೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

OTT releases: ಲ್ಯಾಂಡ್‌ಲಾರ್ಡ್, ವಲವಾರ ಸೇರಿದಂತೆ ಈ ವಾರ ಒಟಿಟಿಗೆ ಎಂಟ್ರಿಕೊಡಲಿರುವ ಚಿತ್ರಗಳಿವು

`ಲ್ಯಾಂಡ್‌ಲಾರ್ಡ್' ಸೇರಿದಂತೆ ಈ ವಾರ ಒಟಿಟಿಗೆ ಎಂಟ್ರಿಕೊಡಲಿರುವ ಚಿತ್ರಗಳಿವು

Friday OTT releases: ವಾರಾಂತ್ಯ ಸಮೀಪಿಸುತ್ತಿದೆ, ಅಂದರೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ (OTT Platform) ಹೊಸ ಚಲನಚಿತ್ರಗಳು ಮತ್ತು ಸಿರೀಸ್‌ ಸೇರಿದಂತೆ ಉಳಿದ ಕಾರ್ಯಕ್ರಮಗಳು ಬರಲಿವೆ. ಆಕ್ಷನ್-ಪ್ಯಾಕ್ಡ್ ಸೂಪರ್‌ಹೀರೋ, ಥ್ರಿಲ್ಲರ್‌ಗಳು ಅಥವಾ ಭಾವನಾತ್ಮಕ ಥರಹದ ಕಥೆಗಳನ್ನು ನೋಡಲು ಬಯಸೋದಾದರೆ ಹಲವು ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಟ್ಟಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ZEE5 ಮತ್ತು ಜಿಯೋಹಾಟ್‌ಸ್ಟಾರ್‌ನಂತಹ ವೇದಿಕೆಗಳಲ್ಲಿ ಹಲವಾರು ಹೊಸ ಮೂವೀಸ್‌ ಬಿಡುಗಡೆಯಾಗಲಿವೆ. ಯಾವೆಲ್ಲ?

Amruthadhaare Serial: ಗೌತಮ್ ಎಚ್ಚರಿಕೆಗೆ ಜೇಡಿಗೆ ಇಳಿದಿದೆ ಬೆವರಿನ ಹನಿ!

Amruthadhaare Serial: ಗೌತಮ್ ಎಚ್ಚರಿಕೆಗೆ ಜೇಡಿಗೆ ಇಳಿದಿದೆ ಬೆವರಿನ ಹನಿ!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಕೇಡಿ ಅಸಲಿ ಮುಖ ನೋಡಿ ಸುನಿ ಬೆಚ್ಚಿಬಿದ್ದಿದ್ದಾನೆ. ಹಾಗೇ ಮಲ್ಲಿ ಮೇಲೆ ಅಟ್ಯಾಕ್‌ ಮಾಡಿಸಿರೋ ಬಗ್ಗೆ ಗೌತಮ್‌ ದಿವಾನ್‌ ಜೈದೇವ್‌ಗೆಎಚ್ಚರಿಕೆಗೆ ಕೂಡ ನೀಡಿದ್ದಾನೆ. ಈ ಎಲ್ಲ ಕುತಂತ್ರಗಳ ಹಿಂದೆ ಜೈದೇವ್‌ ಕೈವಾಡ ಇದೆ ಅನ್ನೋದು ಗೌತಮ್‌ಗೆ ಅಂತೂ ಗೊತ್ತಾಗಿದೆ.

Bhagyalakshmi Serial Kannada: ಸಿಡಿಯಲಿದೆ ದ್ವೇಷದ ಜ್ವಾಲಾಮುಖಿ! ತಾಂಡವ್‌ ಅಸಲಿ ಮುಖ ರಿವೀಲ್‌

ಸಿಡಿಯಲಿದೆ ದ್ವೇಷದ ಜ್ವಾಲಾಮುಖಿ! ತಾಂಡವ್‌ ಅಸಲಿ ಮುಖ ರಿವೀಲ್‌

Bhagyalakshmi Serial Kannada: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಟ್ವಿಸ್ಟ್‌ನಿಂದ ಸಾಗುತ್ತಿದೆ. ಈ ಸೀರಿಯಲ್ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ಭಾಗ್ಯಾ ರಗಡ್‌ ಆಗಿದ್ದಾಳೆ. ತಾಂಡವ್ನ ಪ್ರತಿಯೊಂದು ನಡೆಯೂ ಈಗ ಭಾಗ್ಯಾನಿಗೆ ಸಂಶಯ ತರಿಸುತ್ತಿದೆ. ಇಷ್ಟು ದಿನ ತಾಳ್ಮೆಯಿಂದಿದ್ದ ಅವಳು, ಈಗ ತಾಳ್ಮೆ ಕಳೆದುಕೊಂಡಿದ್ದಾಳೆ. ಆದರೀಗ ತಾಂಡವ್‌ ಮುಖವಾಡವೂ ಬಯಲಾಗಿದೆ.

Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!

ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!

Kangana Ranaut: ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಕನ್ನಡ ಚಿತ್ರ ಕೆಡಿ - ದಿ ಡೆವಿಲ್‌ನ " ಸರ್ಕೆ ಚುನರ್ ತೇರಿ ಸರ್ಕೆ " ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ನೃತ್ಯ ಸಂಯೋಜನೆಯಿಂದಾಗಿ ಪ್ರೇಕ್ಷಕರಿಂದ ಭಾರಿ ಟೀಕೆಗೆ ಗುರಿಯಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇದರ ಬಗ್ಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ನಂತರ ಹಾಡನ್ನು ಯೂಟ್ಯೂಬ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ.

Rashmika Mandanna:  ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್‌

ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್‌

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರ ಮೂರು ದಿನಗಳ ಆಚರಣೆಯು ಪ್ರೀತಿ, ನಗು ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿತ್ತು. ಈ ಜೋಡಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ತಾರಾಬಳಗದ ಆರತಕ್ಷತೆಯನ್ನು ಸಹ ಆಯೋಜಿಸಿತ್ತು, ಇದರಲ್ಲಿ ಕರಣ್ ಜೋಹರ್, ಅಲ್ಲು ಅರ್ಜುನ್, ಕೃತಿ ಸನೋನ್, ರಾಮ್ ಚರಣ್, ಮೃಣಾಲ್ ಠಾಕೂರ್, ರಾಣಾ ದಗ್ಗುಬಾಟಿ ಮತ್ತು ಹಲವಾರು ಇತರ ಗಣ್ಯರು ಭಾಗವಹಿಸಿದ್ದರು.

Sara Ali Khan: ಕೇದಾರನಾಥ, ಬದ್ರಿನಾಥ್​​ ದೇವಾಲಯಕ್ಕೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾಗೆ ಪ್ರವೇಶವಿಲ್ಲ!ಕಾರಣ ಇದು

ಕೇದಾರನಾಥ ದೇವಾಲಯಕ್ಕೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾಗೆ ಪ್ರವೇಶವಿಲ್ಲ!

Sara Ali Khan: ಬಾಲಿವುಡ್ ನಟಿ ಸಾರಾ ಅಲಿ ಖಾನ್, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಪದೇ ಪದೇ ಭೇಟಿ ನೀಡುತ್ತಲೇ ಇರುತ್ತಾರೆ. ಸಾರಾ ಅಲಿ ಖಾನ್ಇತ್ತೀಚೆಗೆ ಮಹಾಶಿವರಾತ್ರಿಯಂದು ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಇನ್ನು ಮುಂದೆ ಅವರು ಈ ದೇವಾಲಯಗಳಿಗೆ ಭೇಟಿ ನೀಡುವಂತಿಲ್ಲ. ಕಾರಣ ಏನು?

Loading...