ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Yashaswi Devadiga

Sub Editor

yashaswidevadiga8@gmail.com

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹುಟ್ಟೂರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಜತೆಗೆ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ವಿಸ್ತಾರ ನ್ಯೂಸ್ ವೆಬ್ಸೈಟ್ ನಲ್ಲಿ ಉಪಸಂಪಾದಕಿಯಾಗಿ ವೃತ್ತಿ ಪ್ರಾರಂಭ. ಬಳಿಕ ನ್ಯೂಸ್ 18 ಕನ್ನಡದಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮೂರು ವರ್ಷಗಳಿಂದ ಕೆಲಸ ಮಾಡಿದ ಅನುಭವ. ಜೊತೆಗೆ ಕನ್ನಡ ಸಿನಿಮಾವೊಂದಕ್ಕೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಸಿನಿಮಾ ವೀಕ್ಷಣೆ, ಸಿನಿಮಾ ಮೇಕಿಂಗ್, ಸಿನಿಮಾ ವಿಮರ್ಶೆ, ಬರವಣಿಗೆ, ಓದು ನೆಚ್ಚಿನ ಹವ್ಯಾಸ.

Articles
S P Venkatesh: ʻಹೃದಯ ಸಮುದ್ರ ಕಲಕಿʼ ಹಾಡಿನ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ

ʻಹೃದಯ ಸಮುದ್ರ ಕಲಕಿʼ ಹಾಡಿನ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ

S P Venkatesh: ʼಹೃದಯ ಸಮುದ್ರ ಕಲಕಿ…ʼ ಸೇರಿದಂತೆ ಕನ್ನಡದಲ್ಲಿ ಹಲವು ಜನಪ್ರಿಯ ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಎಸ್‌.ಪಿ. ವೆಂಕಟೇಶ್‌ ( S P Venkatesh) (ಸಂಗೀತ ರಾಜ), ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 1955ರಲ್ಲಿ ಚೆನ್ನೈನಲ್ಲಿ ಜನಿಸಿದ ವೆಂಕಟೇಶ್‌, ಮಲಯಾಳಂ, ತೆಲುಗು, ಬಂಗಾಲಿ, ಹಿಂದಿ, ಕನ್ನಡ, ಒರಿಯಾ ಮುಂತಾದ ಭಾಷೆಗಳಲ್ಲಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

Sangeethaa Sringeri: ನೋಡಿದ ಮೊದಲ ಬಾರಿಯಲ್ಲಿ ಅವರಿಗೆ ಪ್ರೀತಿಯಾಗಿತ್ತು! ಲವ್ ಬಗ್ಗೆ ಮಾತನಾಡಿದ  ಸಂಗೀತಾ ಶೃಂಗೇರಿ

ಲವ್ ಬಗ್ಗೆ ಮಾತನಾಡಿದ ಸಂಗೀತಾ ಶೃಂಗೇರಿ

Sangeethaa Sringeri: ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ಈ ನಟಿ, 1996ರ ಮೇ 13ರಂದು ಜನಿಸಿದರು. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. 2016ರ 'ಹರ ಹರ ಮಹಾದೇವ' ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಜನಪ್ರಿಯರಾದ ಇವರು, 777 ಚಾರ್ಲಿ (2022) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಇದೇ ಮೊದಲ ಬಾರಿಗೆ ಸಂದರ್ಶವೊಂದರಲ್ಲಿ ನಟಿ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

Dance Karnataka Dance:  ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್! ಶಿವಣ್ಣ ಕೊಟ್ಟ ಭರವಸೆ ಏನು ಗೊತ್ತಾ?

ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್!

Dance Karnataka Dance: ಜೀ ಕನ್ನಡದ ಜನಪ್ರಿಯ ಶೋಗಳಾದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಈಗಾಗಲೇ ವೀಕ್ಷಕರ ಮನಗೆದ್ದಿವೆ. ಇದೀಗ ಈ ಎರಡೂ ಶೋಗಳ 'ಮಹಾ ಸಂಚಿಕೆ' ಪ್ರಸಾರವಾಗುತ್ತಿದ್ದು, ಇದರಲ್ಲಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಖ್ಯಾತಿಯ ಸುಬ್ಬು ಅಲಿಯಾಸ್ ಅಮೋಘ್‌ ವಿಶೇಷ ಆಕರ್ಷಣೆಯಾಗಿದ್ದಾರೆ.

Dhurandhar 2 teaser: ಧುರಂಧರ್ 2’ ಟೀಸರ್ ಔಟ್‌; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು

ಧುರಂಧರ್ 2’ ಟೀಸರ್ ಔಟ್‌; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು

Ranveer: ವರ್ಷದ ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರದ ಕ್ಷಣಗಣನೆ ಅಧಿಕೃತವಾಗಿ ಆರಂಭವಾಗಿದೆ. ಧುರಂಧರ್ 2 ಟೀಸರ್‌ ಔಟ್‌ ಆಗಿದೆ. ಆದರೆ ಹಿಂದಿನ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಮರುಬಳಕೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಮೊದಲೇ ಶೂಟಿಂಗ್ ಮುಗಿದಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲಾಗುತ್ತಿದೆ . ಈಗ ಸಿನಿಮಾದ ರಿಲೀಸ್ ದಿನಾಂಕವನ್ನು ಟೀಸರ್ ಮೂಲಕ ಖಚಿತಪಡಿಸಿಯಾಗಿದೆ.

Reliance Jio Studios: ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದುಕೊಂಡ ರಿಲಯನ್ಸ್!

ಈ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದುಕೊಂಡ ರಿಲಯನ್ಸ್!

Reliance’s Jio Studios : ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

Dhurandhar: ʼಧುರಂಧರ್ʼ ವಿರುದ್ಧ FIR ದಾಖಲು! ಟೀಸರ್‌ ರಿಲೀಸ್‌ ಬೆನ್ನಲ್ಲೇ ಚಿತ್ರತಂಡಕ್ಕೆ ಶಾಕ್‌

ʼಧುರಂಧರ್ʼ ವಿರುದ್ಧ FIR ದಾಖಲು!

Ranveer Singh: ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರಕ್ಕಾಗಿ ನಿರೀಕ್ಷೆ ಹೆಚ್ಚುತ್ತಿರುವ ನಡುವೆ , ಚಿತ್ರಕ್ಕೆ ಅನಿರೀಕ್ಷಿತ ಕಾನೂನು ತೊಡಕು ಎದುರಾಗಿದೆ. ದಕ್ಷಿಣ ಮುಂಬೈನ ಹೈ ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿ ಅನುಮತಿಯಿಲ್ಲದೆ ಡ್ರೋನ್ ಹಾರಿಸಿದ ಆರೋಪದ ಮೇಲೆ ಚಿತ್ರದ ಸ್ಥಳ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.

Dhurandhar Part 2 : ʻಧುರಂಧರ್ 2ʼ ಹೊಸ ಪೋಸ್ಟರ್‌ ಔಟ್‌! ಇಂದೇ ಟೀಸರ್ ಬಿಡುಗಡೆ

ʻಧುರಂಧರ್ 2ʼ ಹೊಸ ಪೋಸ್ಟರ್‌ ಔಟ್‌! ಇಂದೇ ಟೀಸರ್ ಬಿಡುಗಡೆ

Dhurandhar Part 2: ಆದಿತ್ಯ ಧರ್ ಅವರ 'ಧುರಂಧರ್ ಭಾಗ 2' ಚಿತ್ರದ ಬಹುನಿರೀಕ್ಷಿತ ಟೀಸರ್‌ಗಾಗಿ ಕಾಯುವ ಸಮುಯ ಬಹುತೇಕ ಮುಗಿದಿದೆ. ಏಕೆಂದರೆ 'ಧುರಂಧರ್: ದಿ ರಿವೆಂಜ್' ಚಿತ್ರದ ಅಧಿಕೃತ ಟೀಸರ್ ಇಂದೇ (ಫೆಬ್ರವರಿ 3, 2026) ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ರಣವೀರ್ ಸಿಂಗ್ (Ranveer Singh) ಚಿತ್ರದ ಹೊಸ ಪೋಸ್ಟರ್ ಜೊತೆಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

Sitara Ghattamaneni : ವೇದಿಕೆ ಮೇಲೆ ಸಿತಾರಾ ರ‍್ಯಾಂಪ್ ವಾಕ್;  ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್‌ ಫಿದಾ

ಸಿತಾರಾ ರ‍್ಯಾಂಪ್ ವಾಕ್; ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್‌ ಫಿದಾ

Mahesh Babu daughter: ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಆಭರಣ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಪಿಎಂಜೆ ಜ್ಯುವೆಲ್ಸ್ ಹೈದರಾಬಾದ್‌ನ ತಾಜ್ ಕೃಷ್ಣಾದಲ್ಲಿ ವಿಶ್ವದ ಅತಿದೊಡ್ಡ ಆಭರಣ ಪ್ರದರ್ಶನವನ್ನು ಉದ್ಘಾಟಿಸಿತು. ಕಾರ್ಯಕ್ರಮಗಳಿಗಾಗಿ 10,000 ಕ್ಕೂ ಹೆಚ್ಚು ವಿಶಿಷ್ಟ ವಿನ್ಯಾಸಗಳನ್ನು ಆಯ್ಕೆ ಮಾಡಲಾಗಿದ್ದು, ಈ ಕಾರ್ಯಕ್ರಮವು ಭಾರತದ ಅತ್ಯುತ್ತಮ ಕರಕುಶಲ ಆಭರಣಗಳ ಗಮನಾರ್ಹ ಪ್ರದರ್ಶನವಾಗಿತ್ತು. ಸಿತಾರಾ ರಾಂಪ್ ಮೇಲೆ ಕೇವಲ ಅತಿಥಿಯಾಗಿ ಮಾತ್ರವಲ್ಲದೆ ಪಿಎಂಜೆ ಜ್ಯುವೆಲ್ಲರ್ಸ್‌ ಬ್ರ್ಯಾಂಡ್‌ ಅಂಬಾಸಿಡರ್ ಆಗಿಯೂ ನಡೆದರು.

Rakshitha Shetty: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ! ರಕ್ಷಿತಾ ಶೆಟ್ಟಿ ಪೋಸ್ಟ್

ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ! ರಕ್ಷಿತಾ ಶೆಟ್ಟಿ ಪೋಸ್ಟ್

Bigg Boss Kannada 12: ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಮೊದಲ ರನ್ನರ್​ ಅಪ್​ ಆದ ಬಳಿಕ, ಹಲವಾರು ಕಾರ್ಯಕ್ರಮಗಳು, ಸಂದರ್ಶನಗಳು ಎಂದೆಲ್ಲಾ ಸಖತ್ ಬ್ಯೂಸಿಯಾಗಿದ್ದ ರನ್ನರ್ ಅಫ್ ರಕ್ಷಿತಾ ಶೆಟ್ಟಿ ಇದೀಗ ಸ್ವಲ್ಪ ಫ್ರೀ ಆದಂತೆ ಕಂಡುಬಂದಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ತಮ್ಮ ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ.

Parvathy Thiruvothu: ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

arvathy Thiruvothu Body Shamed : ಮಿಲನ ಖ್ಯಾತಿಯ ನಟಿ ಪಾರ್ವತಿ ತಿರುವೋತ್ ಮಲಯಾಳಂ ಚಲನಚಿತ್ರ ಪ್ರೇಕ್ಷಕರಿಗೆ ಅತ್ಯಂತ ಪ್ರಿಯವಾದ ನಟಿ. ಈಗ, ವೆರೈಟಿ ನಿಯತಕಾಲಿಕೆಯ ಭಾರತೀಯ ಬಿಡುಗಡೆ ಸಮಾರಂಭದಲ್ಲಿ ಪಾರ್ವತಿ ತಿರುವೋತ್ ಅವರ ಗ್ಲಾಮರಸ್ ಲುಕ್‌ನಲ್ಲಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಪಾರ್ವತಿ ಅಲ್ಟ್ರಾ-ಗ್ಲಾಮರಸ್ ಲುಕ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಆದರೆ ನಟಿಗೆ ಬಾಡಿ ಶೇಮಿಂಗ್ ಆಗಿದೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Kamal Haasan: ದಲೈ ಲಾಮಾರಿಗೆ ಒಲಿಯಿತು ಗ್ರ್ಯಾಮಿ ಪ್ರಶಸ್ತಿ; ಶ್ಲಾಘಿಸಿದ ಕಮಲ್ ಹಾಸನ್

ದಲೈ ಲಾಮಾರಿಗೆ ಒಲಿಯಿತು ಗ್ರ್ಯಾಮಿ ಪ್ರಶಸ್ತಿ; ಶ್ಲಾಘಿಸಿದ ಕಮಲ್ ಹಾಸನ್

Kamal Haasan: ಲಾಸ್ ಏಂಜಲೀಸ್‌ನಲ್ಲಿ ನಡೆದ 68 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 90 ವರ್ಷ ವಯಸ್ಸಿನ ದಲೈ ಲಾಮಾ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿದೆ. ಫೆ. 1ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಲೈ ಲಾಮಾ ಅವರ ಆಲ್ಬಂಗೆ ಬೆಸ್ಟ್ ಆಡಿಯೋ ಬುಕ್, ನರೇಷನ್, ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರನ್ನು ಅಭಿನಂದಿಸಿದರು.

Dhurandhar 2: ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌! ಏನಿದು ಅಪ್‌ಡೇಟ್‌?

ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌!

Actor Ranveer Singh: ರಣವೀರ್ ಸಿಂಗ್ ಅವರ ಬಹು ನಿರೀಕ್ಷಿತ ಧುರಂಧರ್ 2 ಸಿನಿಮಾದಿಂದ ಗುಡ್‌ ನ್ಯೂಸ್‌ ಬರೋ ಸಮಯ ಹತ್ತಿರವಾದಂತಿದೆ. ಸೋಮವಾರ, ರಣವೀರ್ ಸಿಂಗ್ , ಸಹನಟ ಸಾರಾ ಅರ್ಜುನ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲದಿಂದ ಕಾಯುತ್ತಿದ್ದ ಅಪ್‌ಡೇಟ್ ಸುಳಿವು ನೀಡಿದೆ. ರಣವೀರ್‌ ಇನ್‌ಸ್ಟಾ ಮೂಲಕ ಕೊಟ್ಟ ಹಿಂಟ್‌ ಏನು ಗೊತ್ತಾ? ‌

D55: ಶ್ರೀಲೀಲಾ ಬೆನ್ನಲ್ಲೇ ಧನುಷ್‌ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

ಶ್ರೀಲೀಲಾ ಬೆನ್ನಲ್ಲೇ ಧನುಷ್‌ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

Dhanush: ಧನುಷ್ಅ ವರ ಮುಂಬರುವ ತಮಿಳು ಚಿತ್ರ ಡಿ55 ರ ತಾರಾಗಣಕ್ಕೆ ಸಾಯಿ ಪಲ್ಲವಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇದು ಮಾರಿ 2 ರ ನಂತರ ಅವರೊಂದಿಗಿನ ಅವರ ಎರಡನೇ ಸಿನಿಮಾ ಇದಾಗಿದೆ . ಸೋಮವಾರ ಈ ಘೋಷಣೆ ಮಾಡಲಾಗಿದ್ದು, ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಬಹು ನಿರೀಕ್ಷಿತ ಯೋಜನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡಲಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಕೂಡ ನಟಿಸಿದ್ದಾರೆ. ಆದರೆ ಶ್ರೀಲೀಲಾ ಧನುಷ್ಅ ವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

Jai Movie OTT: ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ  ಈ ಒಟಿಟಿಗೆ ಎಂಟ್ರಿ!

ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ ಈ ಒಟಿಟಿಗೆ ಎಂಟ್ರಿ!

Roopesh Shetty: ತುಳುನಾಡಿನ ಸಾಮಾಜಿಕ ಸಾಂಸ್ಕೃತಿಕ ಛಾಯೆಯನ್ನು ಹೊಂದಿರುವ "ಜೈ" ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ಸತ್ಯ ಎಂಬ ಸಿಂಹಬೆಟ್ಟು ಹಳ್ಳಿಯ ವ್ಯಕ್ತಿಯ ಕಥೆಯಾಗಿರುತ್ತದೆ. ತನ್ನ ಸಮುದಾಯದ ಸಮಸ್ಯೆಗಳನ್ನು ಎತ್ತಿ ಹಿಡಿಯವ ಅವನು,‌ಅವುಗಳನ್ನು ಬಗೆಹರಿಸಲು ಮಾಡುವ‌ ಹೋರಾಟ,‌ ಮುಂತಾದವುಗಳನ್ನು ಚಿತ್ರ ಬಿಚ್ಚಿ ಇಡಲಿದೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ಧುರಂಧರ್‌ ನಂಬರ್‌ 1 ಟ್ರೆಂಡಿಂಗ್‌!

Pakistan on Netflix: ದೇಶೀಯವಾಗಿ ಮತ್ತು ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಅತ್ಯಂತ ಯಶಸ್ವಿ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಪಾಕಿಸ್ತಾನದಲ್ಲಿ ಬಿಡುಗಡೆಯಾಗದಿದ್ದರೂ , ಈ ಚಿತ್ರವು ವಿದೇಶಗಳಲ್ಲಿ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ ಈಗ, ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ನಂಬರ್ 1 ಸ್ಥಾನದಲ್ಲಿದೆ. ಧುರಂಧರ್ ಅವರ OTT ಬಿಡುಗಡೆಯು ಪಾಕಿಸ್ತಾನದಲ್ಲಿ ಲಭ್ಯವಾಗುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಧುರಂಧರ್ ನಂಬರ್ 1 ಸ್ಥಾನದಲ್ಲಿದೆ, ಏಕೆಂದರೆ ಅಲ್ಲಿನ ವೀಕ್ಷಕರು ಚಿತ್ರವು ಏಕೆ 'ವಿವಾದಾತ್ಮಕ'ವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

Bollywood stars: ಇದೊಂದು ಕಾರಣಕ್ಕೆ ಒಂದಾದ ಸಲ್ಮಾನ್ , ಅಮಿರ್, ಅಕ್ಷಯ್ , ಅಜಯ್ ದೇವಗನ್! ಶಾರುಖ್‌ ಎಲ್ಲಿ?

ಇದೊಂದು ಕಾರಣಕ್ಕೆ ಒಂದಾದ ಸಲ್ಮಾನ್, ಅಮಿರ್, ಅಕ್ಷಯ್ , ಅಜಯ್ ದೇವಗನ್!

Sharukh: ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ , ಅಮೀರ್ ಖಾನ್ ಮತ್ತು ಅಜಯ್ ದೇವಗನ್ ಇತ್ತೀಚೆಗೆ ವೆರೈಟಿ ಇಂಡಿಯಾದ ಮ್ಯಾಗಜೀನ್ ಮುಖಪುಟ ಚಿತ್ರೀಕರಣಕ್ಕಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್‌ ಆಗುತ್ತಿದ್ದಂತೆ ಶಾರುಖ್ ಖಾನ್ ಅನುಪಸ್ಥಿತಿಯ ಬಗ್ಗೆ ಅನೇಕ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದರು.

Ranbir Kapoor: ರಣಬೀರ್ ಕಪೂರ್  ʻರಾಮಾಯಣʼವನ್ನು ಆದಿಪುರುಷಕ್ಕೆ ಹೋಲಿಸಲು ಸಾಧ್ಯವಿಲ್ಲ; ಅರುಣ್ ಗೋವಿಲ್

ʻರಾಮಾಯಣʼವನ್ನು ಆದಿಪುರುಷಕ್ಕೆ ಹೋಲಿಸಲು ಸಾಧ್ಯವಿಲ್ಲ; ಅರುಣ್ ಗೋವಿಲ್

Ramayana: ರಾಮಾಯಣವನ್ನು ಲೆಕ್ಕವಿಲ್ಲದಷ್ಟು ಬಾರಿ ದೊಡ್ಡ ಪರದೆಯ ಸಿನಿಮಾವಾಗಿ ತರಲಾಗಿದೆ. ಅನೇಕ ನಟರು ಟಿವಿ ಮತ್ತು ಚಲನಚಿತ್ರಗಳಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರಲ್ಲಿ, ಅರುಣ್ ಗೋವಿಲ್ ಹೆಸರು ಇಂದಿಗೂ ಜೀವಂತ. ನಟ ನಿತೇಶ್ ತಿವಾರಿ ಅವರ ಮುಂಬರುವ ಚಲನಚಿತ್ರ ರಾಜ ದಶರಥನ ಪಾತ್ರದೊಂದಿಗೆ ಮಹಾಕಾವ್ಯಕ್ಕೆ ಮರಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಮುಂಬರುವ ರಾಮಾಯಣ ಚಿತ್ರ ಎದುರಿಸಲಿರುವ ಹೋಲಿಕೆಗಳನ್ನು ಗೋವಿಲ್ ಉಲ್ಲೇಖಿಸಿದ್ದಾರೆ.

Gilli Nata:  ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್‌ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ

ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಗಿಲ್ಲಿ ಬಗ್ಗೆ ಗಂಭೀರ ಆರೋಪವಿದು!

Gilli Nata Fan: ಬಿಗ್ ಬಾಸ್ 12 ಟ್ರೋಫಿ ಗೆದ್ದ ಕ್ಷಣದಿಂದಲೇ ಗಿಲ್ಲಿ ನಟನ ಕ್ರೇಜ್ ಹೆಚ್ಚಾಗಿದೆ. ಸಿನಿಮಾತಾರೆಯರು, ರಾಜಕಾರಣಿಗಳು, ವಿವಿಧ ರಿಯಾಲಿಟಿ ಶೋಗಳು, ಸಮಾರಂಭಗಳು, ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅತಿಥಿಯಾಗಿದ್ದಾರೆ. ಗಿಲ್ಲಿ ಸದ್ಯ ಕೈಗೆ ಸಿಗೋದು ಕಷ್ಟವೇ ಆಗಿದೆ. ಆದರೀಗ ಗಿಲ್ಲಿಗೆ ಅಭಿಮಾನವೇ ಸಮಸ್ಯೆಯಾಗಿರುವಂತಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿ ಅಭಿಮಾನಿಗಳನ್ನು ಗೌರವಿಸುವುದಿಲ್ಲ ಎಂದು ಹಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಆರೋಪಿಸಿದ್ದಾರೆ.

CCL 2026 Final: ಸೆಲೆಬ್ರಿಟಿ ಕ್ರಿಕೆಟ್ ಲೀಗ್; ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್; ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

Sudeep: ಕೊಯಮತ್ತೂರಿನಲ್ಲಿ ನಡೆದ ಫೈನಲ್​​ನಲ್ಲಿ ಬಂಗಾಳ ತಂಡವನ್ನು ಎದುರಿಸಿದ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಆಲ್​​ರೌಂಡ್ ಪ್ರದರ್ಶನ ತೋರಿ ಫೈನಲ್ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಎನಿಸಿಕೊಂಡಿದೆ. 16ನೇ ಓವರ್‌ನಲ್ಲಿ 7 ರನ್‌ಗಳನ್ನು ಬುಲ್ದೋಜರ್ಸ್ ಗಳಿಸಿತು. ಕೊನೆಯ 24 ಬಾಲ್‌ಗಳಲ್ಲಿ ಗೆಲುವಿಗೆ 10 ರನ್‌ಗಳು ಬೇಕಿದ್ದವು. ಅಂತಿಮವಾಗಿ ಮಂಜುನಾಥ್ಎ ರಡು ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವಿನ ದಡಕ್ಕೆ ತಲುಪಿಸಿದರು.

Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ

ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌

Ramcharan: ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಅವರಿಗೆ ನಿರೀಕ್ಷೆಯಂತೆಯೇ ಅವಳಿ ಮಕ್ಕಳು ಜನಿಸಿವೆ. ಚಿತ್ರೋದ್ಯಮದಿಂದ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿತು. ಆದರೆ ರಾಮ್ ಚರಣ್ ಅವರ ಅಭಿಮಾನಿಗಳು ಅವರ ಪತ್ನಿ ದಾಖಲಾಗಿರುವ ಆಸ್ಪತ್ರೆಗೆ ನುಗ್ಗಿ ಅವರು ಹೋಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದಾಗ ಪರಿಸ್ಥಿತಿ ಕೈ ಮೀರಿದೆ.

Sreeleela: ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

Dhanush in Rajkumar Periasamy's D55: ಧನುಷ್ ಅವರ ಮುಂದಿನ ಯೋಜನೆಯಾದ 'ಡಿ55' (D 55) ನಲ್ಲಿ ನಟಿ ಶ್ರೀಲೀಲಾ ನಟಿಸಲಿದ್ದಾರೆ . ಈ ಚಿತ್ರವನ್ನು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಶನಿವಾರ ಎಕ್ಸ್‌ ಖಾತೆಯಲ್ಲಿ ವುಂಡರ್‌ಬಾರ್ ಫಿಲ್ಮ್ಸ್ ಈ ಘೋಷಣೆ ಮಾಡಿದೆ. D55 ಚಿತ್ರದ ನಿರ್ಮಾಣ ಕಾರ್ಯ ಪ್ರಸ್ತುತ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣ 2026 ರ ಅಂತ್ಯದವರೆಗೆ ಮುಂದುವರಿಯಲಿದೆ.

Karikaada Trailer: ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

Kannada Movie: ರಿದ್ದಿ ಎಂಟರ್ಟೈನಮೆಂಟ್ ಅಡಿ ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರ‌ 'ಕರಿಕಾಡ' . ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರೆವೇರಿತು. ತನ್ನ ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಕೆ.ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ಹೇ ಳಿದ್ದಾರೆ.

Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು?

Rashmika: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಬಗ್ಗೆ ದಿನದಿಂದ ದಿನಕ್ಕೆ ವದಂತಿಗಳು ಹೆಚ್ಚಾಗುತ್ತಲೇ ಇವೆ. ಅಕ್ಟೋಬರ್ 2025ರಲ್ಲಿ ವಿಜಯ್ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ಉದಯಪುರದ ಐಕಾನಿಕ್ ಸಿಟಿ ಪ್ಯಾಲೇಸ್‌ನಲ್ಲಿ ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಹೇಳುತ್ತದೆ . ವಿಡಿಯೋ ಭರ್ಜರಿ ವೈರಲ್‌ ಆಗುತ್ತಿದೆ.

Alia Bhatt: ಆಲಿಯಾ ಭಟ್ ಅವರ ಇದೆಂಥ ನಿರ್ಧಾರ? ಫ್ಯಾನ್ಸ್‌ ಬೇಸರ

Alia Bhatt: ಆಲಿಯಾ ಭಟ್ ಅವರ ಇದೆಂಥ ನಿರ್ಧಾರ? ಫ್ಯಾನ್ಸ್‌ ಬೇಸರ

Alia Bhatt : 2022ರಲ್ಲಿ ಮಗಳು ರಾಹಾಳನ್ನು ಸ್ವಾಗತಿಸಿದ ನಂತರ , ಬಾಲಿವುಡ್ ನಟಿ ಆಲಿಯಾ ಭಟ್ ಅವರ ಜೀವನವು ಸಂಪೂರ್ಣವಾಗಿ ಬದಲಾಯಿತು. ತಾಯ್ತನವು ಅವರನ್ನು ಒಂದು ಹಂತಕ್ಕೆ ಪರಿವರ್ತಿಸಿತು, ಈಗ ಅವರು ಮೊದಲಿನ ಸ್ಥಿತಿಗೆ ಅಸಾಧ್ಯ ಎಂದು ಹೇಳುತ್ತಾರೆ. ಇತ್ತೀಚಿನ ಸಂವಾದವೊಂದರಲ್ಲಿ, ರಾಹಾ ಹುಟ್ಟಿದ ಬಳಿಕ ಸಾಮಾಜಿಕ ಮಾಧ್ಯಮದ ಬಗ್ಗೆ ಅವರನ್ನು ಹೇಗೆ ಹೆಚ್ಚು ಹಿಂಜರಿಯುವಂತೆ ಮಾಡಿದೆ ಮತ್ತು ಈಗ ನಟಿ ತನ್ನ ವೈಯಕ್ತಿಕ ಜೀವನವನ್ನು ಹೇಗೆ ಹೆಚ್ಚು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳುತ್ತಾರೆ ಎಂಬುದರ ಕುರಿತು ಆಲಿಯಾ ಮಾತನಾಡಿದರು.

Loading...