ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದ್ದರ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ರಾಜ್ಯ ಸರಕಾರ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆಯೇ ಹೊರತು, ಪ್ರಕರಣ ಸಂಬಂಧ ಕೈಗೊಳ್ಳಬಹುದಾಗಿದ್ದ ತನಿಖೆಯ ಸ್ವರೂಪವನ್ನೇ ಪ್ರಶ್ನಿಸಿದಿರುವುದು ಪ್ರತಿಪಕ್ಷಗಳ ನಾಯಕರ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

Profile Ashok Nayak Jun 8, 2025 12:36 PM

ಧ್ಯಾನ್ ಪೂಣಚ್ಚ

ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಹಾಕಿಕೊಳ್ಳುವ ಭಯವೇ?

ಉನ್ನತಮಟ್ಟದ ತನಿಖೆಗೆ ಆಗ್ರಹಿಸಲು ಬಿಜೆಪಿ, ಜೆಡಿಎಸ್ ಹಿಂದೇಟು

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧವೇ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲೇ ಯಾವುದೇ ಅಹಿತಕರ ಘಟನೆ ನಡೆದರೂ ಕೇಂದ್ರ ತನಿಖಾ ಸಂಸ್ಥೆ ಗಳಿಂದಲೇ ತನಿಖೆಯಾಗಬೇಕೆಂದು ಆಗ್ರಹಿಸುತ್ತಿದ್ದ ಬಿಜೆಪಿ- ಜೆಡಿಎಸ್ ನಾಯಕರು, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಾತ್ರ ಮೃದು ಧೋರಣೆ ತಾಳಿದ್ದಾರೆ ಎಂಬ ಅಭಿಪ್ರಾಯ ಸಾರ್ವ ಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದ್ದರ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ರಾಜ್ಯ ಸರಕಾರ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ದ್ದಾರೆಯೇ ಹೊರತು, ಪ್ರಕರಣ ಸಂಬಂಧ ಕೈಗೊಳ್ಳಬಹುದಾಗಿದ್ದ ತನಿಖೆಯ ಸ್ವರೂಪವನ್ನೇ ಪ್ರಶ್ನಿಸಿ ದಿರುವುದು ಪ್ರತಿಪಕ್ಷಗಳ ನಾಯಕರ ಬಗ್ಗೆ ಅನುಮಾನ ಹುಟ್ಟುಹಾಕಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹುಬ್ಬಳ್ಳಿ ಗಲಭೆ, ಕರಾವಳಿಯ ಕೊಲೆಗಳು ಸೇರಿದಂತೆ ಯಾವುದೇ ಘಟನೆಯಾದರೂ ರಾಜ್ಯ ಬಿಜೆಪಿ ನಾಯಕರು ಸಿಬಿಐ ಇಲ್ಲವೇ ಎನ್‌ಐಎಯಿಂದ ತನಿಖೆ ನಡೆಸಿ ಎಂದು ಒತ್ತಾಯಿಸುತ್ತಿದ್ದರು. ಆದರೆ ಕಾಲ್ತುಳಿತದಂತಹ ಗಂಭೀರ ಪ್ರಕರಣ ನಡೆದು 11 ಮಂದಿ ಸಾವನ್ನಪ್ಪಿದರೂ ಈ ಪ್ರಕರಣ ವನ್ನು ಉನ್ನತ ತನಿಖೆಗಾಗಿ ಈವರೆಗೂ ಕೋರಿಲ್ಲ. ಇದಕ್ಕೆ ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರೇ ಐಸಿಸಿ ಮುಖ್ಯಸ್ಥರಾಗಿರುವು ದರಿಂದ ಈ ಘಟನೆಯನ್ನು ಉನ್ನತಮಟ್ಟದ ತನಿಖೆ ವಹಿಸುವಂತೆ ಯಾರೊಬ್ಬರೂ ಆಗ್ರಹಿಸುತ್ತಿಲ್ಲ. ಒಂದು ವೇಳೆ ಉನ್ನತಮಟ್ಟದ ತನಿಖೆಗೆ ವಹಿಸಿದರೆ, ಐಪಿಎಲ್‌ನಲ್ಲಿ ನಡೆದ ಕೆಲ ಘಟನೆಗಳು ಹಾಗೂ ಆರ್ ಸಿಬಿ ಗೆಲುವಿನ ಮುಂಚಿತವಾಗಿ ನಡೆದ ಕೆಲ ಘಟನೆಗಳು, ಪತ್ರಗಳು, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ನಂತರ ಅದನ್ನು ಕಿತ್ತು ಹಾಕಿರುವ ವಿಚಾರ ಕೂಡ ತನಿಖೆಗೆ ಒಳಪಡಲಿವೆ. ಆಗ ಕ್ರಿಕೆಟ್ ಕರಾಳತೆಯೂ ಹೊರಬರಲಿದೆ.

ಹೀಗಾಗಿಯೇ ಕಾಲ್ತುಳಿತ ಪ್ರಕರಣದ ಕುರಿತು ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡು ತ್ತಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಉನ್ನತ ತನಿಖೆಯ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ. ಇನ್ನು ರಾಜ್ಯ ಬಿಜೆಪಿ ನಾಯಕರಿಗಂತೂ ಈ ಬಗ್ಗೆ ಮಾತನಾ ಡುವುದು ಭಾರೀ ಕಷ್ಟಕರವಾಗಿದೆ. ಈ ಮೌನಕ್ಕೆ ಕೇಂದ್ರ ನಾಯಕರ ಹೆದರಿಕೆಯೋ ಅಥವಾ ಮತ್ಯಾವುದೋ ಕಾರಣ ವಿದೆಯೋ ಎಂಬ ಬಿಸಿಬಿಸಿ ಚರ್ಚೆ ವ್ಯಾಪಕವಾಗುತ್ತಿದೆ.

ಅಮಿತ್ ಶಾ ಕೈಗೆ ಗೌಪ್ಯ ವರದಿ?

ಕಾಲ್ತುಳಿತ ಘಟನೆ ಹಾಗೂ ಕಳೆದೆರಡು ವರ್ಷಗಳಲ್ಲಿ ನಡೆದ ಹಲವು ಘಟನೆಗಳ ಸಂಬಂಧ ಮೂವರು ಹಿರಿಯ ಅಧಿಕಾರಿಗಳು ಸುಮಾರು ಸಾವಿರ ಪುಟಗಳಷ್ಟು ಚಾರ್ಜ್‌ಶೀಟ್ ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಸಂಸದ ರಾಘವೇಂದ್ರ ಮಗನ ಆರತಕ್ಷತೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾ ಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡಾರಿಗೆ ಒಂದು ಗೌಪ್ಯ ವರದಿ ನೀಡಲಾಗಿದೆ. ಇಂದು ನಡೆಯ ಲಿರುವ ಮದುವೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಭಾಗ ವಹಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರನ್ನು ಮೂವರು ಹಿರಿಯ ಅಧಿಕಾರಿಗಳು ಭೇಟಿಯಾಗಿ ರಾಜ್ಯ ಸರಕಾರದ ವಿರುದ್ಧದ ಗೌಪ್ಯ ವರದಿ (ಚಾರ್ಜ್‌ಶೀಟ್) ನೀಡಲಿ ದ್ದಾರೆ ಎಂದು ಮೂಲಗಳು ತಿಳಿಸಿದೆ.

ಫೈನಲ್ ಮ್ಯಾಚ್ ಫಿಕ್ಸಿಂಗ್?

ಫೈನಲ್ ಪಂದ್ಯ ಗೆಲ್ಲುವ ಮುನ್ನವೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಸಿಎ), ಆರ್‌ಸಿಬಿ ಹಾಗೂ ಅದರ ವ್ಯವಹಾರ ನೋಡಿಕೊಳ್ಳುವ ಡಿಎನ್‌ಎ ಸಂಸ್ಥೆಯು ಸಂಭ್ರಮಾಚರಣೆಗೆ ಸಮಯಾವಕಾಶ ಹಾಗೂ ಭದ್ರತೆ ಕೋರಿತ್ತು. ಹೀಗಾಗಿ -ನಲ್ ಪಂದ್ಯ ‘ಮೊದಲೇ ಫಿಕ್ಸ್’ ಆಗಿತ್ತು ಎಂಬ ಅಂಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

*

ಪಂಜಾಬ್-ಆರ್‌ಸಿಬಿ ನಡುವಿನ ಫೈನಲ್ ಪಂದ್ಯದಲ್ಲಿ ಮ್ಯಾಚ್‌ ಫಿಕ್ಸ್ ಆಗಿತ್ತಾ?

ಆರ್‌ಸಿಬಿ ಗೆಲುವಿಗಿಂತ ಮುಂಚೆಯೇ ಪೊಲೀಸರ ಭದ್ರತೆ ಕೇಳಿದ್ದು ಯಾಕೆ?

ಒತ್ತಡ ಹಾಕಿ ಪೊಲೀಸ್ ಇಲಾಖೆಯ ಅನುಮತಿ ಪಡೆದ ಪ್ರಭಾವಿಗಳ್ಯಾರು?