Chikkaballapur News: ಯುವಶಕ್ತಿಗೆ ದೊರೆತಿರುವ ರಾಷ್ಟ್ರಮಟ್ಟದ ಅವಕಾಶ ಸದುಪಯೋಗವಾಗಲಿ: ಭಾನು ಚೈತನ್ಯ ವರ್ಮಾ
ದೇಶಾದ್ಯಂತ ಲಕ್ಷಾಂತರ ಮಂದಿ ಯುವಜನತೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ದೇಶದ ೧೧ ರಾಜ್ಯಗಳಿಂದ ೧೨೦ ವಿದ್ಯಾರ್ಥಿಗಳು ಬಂದಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ. ಎಲ್ಲರೂ ಇದರ ಸದುಪಯೋಗಪಡಿಸಿ ಕೊಳ್ಳಬೇಕು.
-
ಚಿಕ್ಕಬಳ್ಳಾಪುರ: ನಮ್ಮ ದೇಶದ ಯುವಶಕ್ತಿಗೆ ರಾಷ್ಟ್ರಮಟ್ಟದ ಅವಕಾಶ ದೊರೆತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಪ್ರತಿಯೊಬ್ಬ ಸ್ಪರ್ಧಾರ್ಥಿಯೂ ತಮ್ಮಲ್ಲಿರುವ ಪ್ರಾಯೋಗಿಕ ಮತ್ತು ತಂತ್ರಜ್ಞಾನ ಕೌಶಲ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕಿದೆ ಎಂದು ನಾಗಾರ್ಜುನ ಇಂಜಿನಿಯ ರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಿಓಓ ಭಾನು ಚೈತನ್ಯ ವರ್ಮಾ ಹೇಳಿದರು.
ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - 2025 ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಾದ್ಯಂತ ಲಕ್ಷಾಂತರ ಮಂದಿ ಯುವಜನತೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಗೆ ದೇಶದ ೧೧ ರಾಜ್ಯಗಳಿಂದ ೧೨೦ ವಿದ್ಯಾರ್ಥಿಗಳು ಬಂದಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣ ಸಚಿವಾಲಯ ಮತ್ತು ಎಐಸಿಟಿಇ ನಮ್ಮಲ್ಲಿ ನಂಬಿಕೆ ಯಿಟ್ಟು ಈ ಸದಾವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಇಂತಹ ಕಾರ್ಯಕ್ರಮ ಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ನಾಗಾರ್ಜುನ ಸಂಸ್ಥೆ ಸದಾ ಬದ್ದವಾಗಿರುತ್ತದೆ ಎಂದು ಹೇಳಿದರು.
ನವದೆಹಲಿ ಡಿಆರ್ಡಿಒ ಮುಖ್ಯಕಚೇರಿಯ ಓಎಸ್ ಮತ್ತು ನಿರ್ದೆಶಕರಾದ ಡಾ.ಎನ್.ರಂಜನ ಮಾತನಾಡಿ, ಎಸ್ಐಎಚ್-೨೦೨೫ ನಮ್ಮ ದೇಶದ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಕ್ರಮ. ಯಾವುದೇ ಸಮಸ್ಯೆಯನ್ನು ಒಂದು ಆಯಾಮದಿಂದ ಬಗೆಹರಿಸಲು ಸಾಧ್ಯವಿಲ್ಲ, ಬಹುಶಿಸ್ತೀಯ ಆಯಾಮಗಳಿಂದ ಪ್ರಯತ್ನಿಸಿದಾಗ ಮಾತ್ರ ಸಮಸ್ಯೆಗಳ ಬಗೆಹರಿಸುವಿಕೆ ಸಾಧ್ಯವಾಗುತ್ತದೆ.
ಕೆಲವರು ಕೋಡಿಂಗ್ ಮಾಡುತ್ತಾರೆ. ಇನ್ನೂ ಕೆಲವರು ಬೇರೆ ರೀತಿಯ ತಂತ್ರಜ್ಞಾನ ಪ್ರಾವೀಣ್ಯತೆ ಹೊಂದಿರುತ್ತಾರೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದರಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಎಲ್ಲರೂ ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಿರಿ. ನಿಮ್ಮ ಪರಿಹಾರ ಎಲ್ಲಾ ರೀತಿಯಲ್ಲೂ ಸರಿಯಾಗಿದ್ದರೆ, ಅದನ್ನೇ ಮುಂದಿನ ದಿನಗಳಲ್ಲಿ ಕಂಪನಿ ಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳನ್ನು ಭರವಸೆ ನೀಡಿದರು.
ವಾಲ್ಮಾರ್ಟ್ ಇಂಡಿಯಾ ಲಿಮಿಟೆಡ್ನ ಇಂಜಿನಿಯರಿಂಗ್ ಲೀಡರ್ ಡಾ.ರಾಧಾಕೃಷ್ಣನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಿಮ್ಮಲ್ಲಿ ಆವಿಷ್ಕಾರ ಶಕ್ತಿ ಇದೆ ಎಂಬುದನ್ನು ಹೊರ ಜಗತ್ತಿಗೆ ತೋರಿಸಬೇಕಿದೆ. ಅದಕ್ಕಾಗಿ ಯುವಜನರು ಒಗ್ಗಟ್ಟಾಗಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಹೇಳಿದರು.
ಎಲ್ಲರೂ ಎಚ್ಚರವಾಗಿರಿ, ಯೋಚಿಸಿ ಮರುಯೋಚಿಸಿ, ಕೋಡಿಂಗ್ ಮತ್ತು ರಿಕೋಡಿಂಗ್ ಮಾಡು ವುದು ಬಹಳ ಮುಖ್ಯ. ನಿಮಗೆ ಸಮಸ್ಯೆ ಪರಿಹರಿಸುವ ಶಕ್ತಿ ಇದೆ. ದೇಶದ ರಕ್ಷಣೆಗಾಗಿ ಅವಕಾಶಗಳು ಬಂದಾಗ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಟಿಸಿಎಸ್ ಲಿ. ಕಂಪನಿಯ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ.ರಾಜನ್ ಎಂ ಎ ಮಾತನಾಡಿ, ಜ್ಞಾನಕ್ಕೆ ಸಮನಾದ ಶಕ್ತಿ ಮತ್ತೊಂದಿಲ್ಲ. ನಾವು ನಿರಂತರವಾಗಿ ಚುರುಕುತನವನ್ನು ಹೊಂದುವ ಮೂಲಕ ಅತ್ಯುತ್ತಮ ಸಾಧನೆಗಳನ್ನು ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗಾರ್ಜುನ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕರಾದ ಡಾ.ಎ.ಜಿ. ಗೋಪಾಲಕೃಷ್ಣ, ಎನ್.ಸಿ.ಇ.ಟಿ ಪ್ರಾಂಶುಪಾಲರಾದ ಡಾ.ತಿಪ್ಪೇಸ್ವಾಮಿ, ಆಡಳಿತ ಮಂಡಳಿ ಪ್ರಮುಖರಾಗಿ ಕಿಶನ್, ದಾಖಲಾತಿ ವಿಭಾಗದ ಶಿಬು, ಡಾ.ಯೋಗೇಶ, ಡಾ.ಸರ್ವೇಶ್, ಡಾ.ಗೋಪಿ ನಾಥ್, ಡಾ.ಲೋಹಿತ್, ಡಾ.ವೆಂಕಟೇಶ್, ಡಾ.ಗೋವರ್ಧನಸ್ವಾಮಿ, ಡಾ.ಮಹೇಶ್ ಕೆ ಕೆ ಹಾಗೂ ಕಾಲೇಜು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.