ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Camp: ಲಯನ್ಸ್ ಸಂಸ್ಥೆಯಿಂದ 233ನೇ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ: 75ಕ್ಕೂ ಅಧಿಕ ವಯೋವೃದ್ಧರ ತಪಾಸಣೆ; 34 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ

ನಗರದ ಮುನೇಶ್ವರ ಬಡಾವಣೆಯಲ್ಲಿರುವ ಲಯನ್ಸ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ನಡೆದ 233ನೇ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವಯೋವೃದ್ಧರು ದೃಷ್ಟಿದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿತಿಂಗಳು ದಾನಿಗಳ ಸಹಕಾರದಿಂದ ಸಂಸ್ಥೆ ನಡೆಸುತ್ತಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳು ಇಂತಹವರಿಗೆ ಆಸರೆಯಾಗಿವೆ

ಲಯನ್ಸ್ ಸಂಸ್ಥೆಯಿಂದ 233ನೇ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

-

Profile
Ashok Nayak Sep 15, 2026 8:26 AM

ಗೌರಿಬಿದನೂರು: ದೃಷ್ಟಿದೋಷದಿಂದ ಬಳಲುತ್ತಿರುವ ಬಡ ಹಾಗೂ ವಯೋವೃದ್ಧರಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳು ವರದಾನವಾಗಿದ್ದು, ಅವರ ಬದುಕಿಗೆ ಮರು ದೃಷ್ಟಿ ಕಲ್ಪಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸುತ್ತಿವೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಎಸ್.ಜಗನ್ನಾಥ್ ತಿಳಿಸಿದರು.

ನಗರದ ಮುನೇಶ್ವರ ಬಡಾವಣೆಯಲ್ಲಿರುವ ಲಯನ್ಸ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ನಡೆದ 233ನೇ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವಯೋವೃದ್ಧರು ದೃಷ್ಟಿದೋಷದ ಸಮಸ್ಯೆಯಿಂದ ಬಳಲು ತ್ತಿದ್ದಾರೆ. ಪ್ರತಿತಿಂಗಳು ದಾನಿಗಳ ಸಹಕಾರದಿಂದ ಸಂಸ್ಥೆ ನಡೆಸುತ್ತಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳು ಇಂತಹವರಿಗೆ ಆಸರೆಯಾಗಿವೆ ಎಂದರು.

ಇದನ್ನೂ ಓದಿ: Health Camp: ಕ್ರೀಡೆಯ ಜೊತೆ ಆರೋಗ್ಯಕ್ಕೂ ಆದ್ಯತೆ: ಉಚಿತ ಆರೋಗ್ಯ ತಪಾಸಣಾ ಸೇವೆ ಯಶಸ್ವಿ!

ಅಸೆಡಾ ಸ್ವಯಂಸೇವಾ ಸಂಸ್ಥೆ ಮುಖ್ಯಸ್ಥ ಬಿ.ಆರ್.ಬಾಲಗಂಗಾಧರ್ ಮಾತನಾಡಿ, ಲಯನ್ಸ್ ಸಂಸ್ಥೆಯು ಕಳೆದ ಐದು ದಶಕಗಳಿಂದ ನಿರಂತರವಾಗಿ ನಡೆಸುತ್ತಿರುವ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು ಸಾವಿರಾರು ಮಂದಿಯ ಬದುಕಿಗೆ ಬೆಳಕು ನೀಡಿವೆ. ತಮ್ಮ ತಂದೆ ಬಿ.ಎನ್.ರಾಮಯ್ಯ ಅವರು 1976ರಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಅಂದಿನಿಂದಲೂ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇವೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಸಾಮಾಜಿಕ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ ಎಂದು ಹೇಳಿದರು.

ಶಿಬಿರದಲ್ಲಿ 75ಕ್ಕೂ ಅಧಿಕ ಮಂದಿ ವಯೋವೃದ್ಧರು ಕಣ್ಣಿನ ತಪಾಸಣೆಗೆ ಒಳಗಾಗಿದ್ದು, ಅವರಲ್ಲಿ 34 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಅಧಿಕ ಮಧುಮೇಹ ಹಾಗೂ ರಕ್ತದೊ ತ್ತಡದ ಸಮಸ್ಯೆ ಇರುವ ಕೆಲವರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿಲ್ಲ.

ಶಿಬಿರಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎನ್.ರಾಮಯ್ಯ ಅವರ ಕುಟುಂಬದ ಬಿ.ಎನ್.ವಿನಯ್, ಬಿ.ಆರ್.ನರಸಿಂಹಮೂರ್ತಿ ಹಾಗೂ ಜಿ.ಎನ್.ಆರ್. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿ.ಎನ್.ಚಂದ್ರಶೇಖರ ರೆಡ್ಡಿ ಸಹಕಾರ ನೀಡಿದರು.

ಲಯನ್ಸ್ ಪದಾಧಿಕಾರಿಗಳಾದ ಇ.ಎಸ್.ಸತೀಶ್ ಕುಮಾರ್, ಜಿ.ವಿ.ರವಿಶಂಕರ್, ಜಿ.ಎನ್.ಸೂರಜ್, ಲಕ್ಕೂರ್ ಶ್ರೀಧರ್, ದಸ್ತಗಿರಿ ಸಾಬ್, ಜಗನ್ನಾಥ್ ರೆಡ್ಡಿ, ಆರ್.ಜೆ.ಶ್ರೇಣಿಕ್, ಎಂ.ಎಸ್.ರಘುಬಾಬು, ಜಿ.ಆರ್.ಶ್ರೇಯಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.