Bigg Boss Kannada 12: ಬಿಗ್ ಬಾಸ್ ಮನೆಗೆ ʻರಾಣಿʼ ಎಂಟ್ರಿ! ಅಶ್ವಿನಿ ಗೌಡ ಭಾವುಕ
Ashwini Gowda: 108ನೇ ದಿನ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ನಡೆದಿದ್ದು, ಧ್ರುವಂತ್ ಅವರ ಆಟ ಅಂತ್ಯ ಆಗಿದೆ. ಬಿಗ್ ಬಾಸ್ ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಮನೆಯವರೆಲ್ಲರೂ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿ ಬಂದಿದ್ದಾರೆ. ಅಶ್ವಿನಿ ಗೌಡ ಅವರು ಭಾವುಕರಾಗಿದ್ದಾರೆ.
ಬಿಗ್ ಬಾಸ್ ಕನ್ನಡ -
108ನೇ ದಿನ ಬಿಗ್ ಬಾಸ್ ಮಿಡ್ ವೀಕ್ (Bigg Boss Kannada Mid week Elimination) ಎಲಿಮಿನೇಷನ್ ನಡೆದಿದ್ದು, ಧ್ರುವಂತ್ ಅವರ ಆಟ ಅಂತ್ಯ ಆಗಿದೆ. ಬಿಗ್ ಬಾಸ್ ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್ (New Promo) ಆಗಿದೆ. ಮನೆಯವರೆಲ್ಲರೂ ಸಂಕ್ರಾಂತಿ (Sankranti Festival) ಹಬ್ಬ ಆಚರಿಸಿದ್ದಾರೆ. ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿ ಬಂದಿದ್ದಾರೆ. ಅಶ್ವಿನಿ ಗೌಡ (Ashwini Gowda) ಅವರು ಭಾವುಕರಾಗಿದ್ದಾರೆ.
ಕೈದಿಯೊಬ್ಬಳಿಗೆ ಹುಟ್ಟಿದ ಮಗುವಿನ ಕಥೆ
ಬಿಗ್ ಬಾಸ್ ಮನೆಗೆ ರಾಣಿ ಮತ್ತವಳ ತಾಯಿ ವಿಶೇಷ ಅತಿಥಿಗಳಾಗಿ ಬಂದಿದ್ದಾರೆ. 'ಕೃಷ್ಣ ಸುಂದರಿ' ಹಾಗೂ 'ಮುದ್ದು ಮಣಿಗಳು' ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಐಶ್ವರ್ಯಾ ಅವರ ಹೊಸ ಧಾರಾವಾಹಿ ಇದು. 'ರಾಣಿ' ಹೆಸರಿನ ಈ ಧಾರಾವಾಹಿಯಲ್ಲಿ ಧನ್ವಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. 'ಜೈಲಿನ ಕೈದಿಯೊಬ್ಬಳಿಗೆ ಹುಟ್ಟಿದ ಮಗುವಿನ ಕಥೆ ಇದು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಸ್ನೇಹಿತ ಅಭಿ ದಾಸ್!
ವೈರಲ್ ವಿಡಿಯೋ
ಸಂಕ್ರಾತಿಯ ಶುಭಾಶಯಗಳು 👏💯❤️
— Abhishek 💫 (@AbhishekVA7676) January 15, 2026
Seriel Promotion aste 😬#bbk12 #BBKSeason12 #BBK12live #Gilli pic.twitter.com/5y1mNTmjhT
ಅಶ್ವಿನಿ ಗೌಡ ಭಾವುಕ
ಇದೀಗ ಅಮ್ಮ ಮಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಪುಟ್ಟ ಕಲಾವಿದೆ ಕಂಡು ಅಶ್ವಿನಿ ಗೌಡ ಅವರು ಭಾವುಕರಾದರು. ಬಿಗ್ ಬಾಸ್ ತಂಡ ಅಮ್ಮ ಮಗಳಿಗೆ ವಿಶ್ ಮಾಡಿದ್ದಾರೆ. ಒಟ್ಟಿನಲ್ಲಿ, ಬಿಗ್ ಬಾಸ್ ಮುಗಿದ ತಕ್ಷಣ ಶುರುವಾಗಲಿರುವ ಸೀರಿಯಲ್ ಯಾವುದು ಎಂಬುದಕ್ಕೆ 'ರಾಣಿ' ವೀಕ್ಷಕರಿಗೆ ಉತ್ತರ ಸಿಕ್ಕಿದೆ.
ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲ ನಟ, ಧನುಷ್, ಮ್ಯೂಟೆಂಟ್ ರಘು ಮತ್ತು ಕಾವ್ಯಾ ಶೈವ ಅವರು ಈಗ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಪೈಪೋಟಿ ಜೋರಾಗಿದೆ. ಆದರೆ ಎಲ್ಲರಿಗಿಂತ ಗಿಲ್ಲಿ ನಟ ಅವರಿಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಅಭಿಪ್ರಾಯ ಬಲವಾಗಿದೆ.
ಆಕ್ಟಿವಿಟಿ ರೂಮ್ ಒಳಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧ್ರುವಂತ್, ರಘು, ಕಾವ್ಯ ಮತ್ತು ಅಶ್ವಿನಿ ಗೌಡ ಅವರು ಹೋಗಿದ್ದರು. ಅಲ್ಲಿಂದ ಒಬ್ಬರೊಬ್ಬರನ್ನೇ ಹೊರಗೆ ಕರೆದ ಬಿಗ್ ಬಾಸ್ ಸೇಫ್ ಮಾಡುತ್ತ ಹೋದರು. ಮೊದಲು ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಅಶ್ವಿನಿ ಗೌಡ. ರಘು ಅವರು ಕ್ರಮವಾಗಿ ಸೇಫ್ ಆದರು. ಅಂತಿಮವಾಗಿ ಕಾವ್ಯ ಮತ್ತು ಧ್ರುವಂತ್ ಮಾತ್ರ ಉಳಿದುಕೊಂಡರು. ಆದರಲ್ಲಿ ಕಾವ್ಯ ಅವರು ಸೇಫ್ ಆದರೆ, ಧ್ರುವಂತ್ ಎಲಿಮಿನೇಟ್ ಆದರು.