ಮುಸ್ಲಿಂ ವ್ಯಾಪಾರಿಗೆ ಬೆಂಬಲ ನೀಡಿದ ಮೊಹಮ್ಮದ್ ದೀಪಕ್ ಜಿಮ್ ಸೇರಲಿದ್ದಾರೆ ರಾಹುಲ್ ಗಾಂಧಿ
Rahul Gandhi meets Hindu gym owner: ಉತ್ತರಾಖಂಡದ ಜಿಮ್ ಮಾಲಕ ಮೊಹಮ್ಮದ್ ದೀಪಕ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಯ ನೀಡಿದ್ದಾರೆ. ʼʼರಾಹುಲ್ ಗಾಂಧಿ ನನ್ನನ್ನು ಭೇಟಿಯಾಗಿದ್ದಾರೆ. ಅವರು ನನ್ನ ಕುಟುಂಬದೊಂದಿಗೆ ಮಾತನಾಡಿದ್ದು, ಭಯಪಡುವ ಅಗತ್ಯವಿಲ್ಲ. ನೀವು ಯಾವುದೇ ತಪ್ಪು ಮಾಡಿಲ್ಲʼʼ ಎಂದು ನನಗೆ ಅಭಯ ನೀಡಿದ್ದಾರೆ ಎಂಬುದಾಗಿ ದೀಪಕ್ ತಿಳಿಸಿದ್ದಾರೆ.
ಹಿಂದೂ ಜಿಮ್ ಮಾಲಕನನ್ನು ಭೇಟಿಯಾದ ರಾಹುಲ್ ಗಾಂಧಿ -
ನವದೆಹಲಿ, ಫೆ. 23: ಉತ್ತರಾಖಂಡದ ಜಿಮ್ ಮಾಲಕ ಮೊಹಮ್ಮದ್ ದೀಪಕ್ ಅವರಿಗೆ ಭಯ ಪಡಬೇಡಿ ಎಂದು ರಾಹುಲ್ ಗಾಂಧಿ (Rahul Gandhi) ಅಭಯ ನೀಡಿದ್ದಾರೆ. ಅವರು ತಮ್ಮನ್ನು ಮೊಹಮ್ಮದ್ ದೀಪಕ್ ಎಂದು ಪರಿಚಯಿಸಿಕೊಂಡು ಬಜರಂಗದಳ (Bajrang Dal) ಕಾರ್ಯಕರ್ತರಿಂದ 70 ವರ್ಷದ ಮುಸ್ಲಿಂ ವ್ಯಾಪಾರಿಯನ್ನು ರಕ್ಷಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ʼʼರಾಹುಲ್ ಗಾಂಧಿ ನನ್ನನ್ನು ಭೇಟಿಯಾಗಲು ಕರೆದಿದ್ದರು. ಅವರು ನನ್ನ ಕುಟುಂಬದೊಂದಿಗೆ ಮಾತನಾಡಿದ್ದು, ಭಯಪಡುವ ಅಗತ್ಯವಿಲ್ಲ. ನೀವು ಯಾವುದೇ ತಪ್ಪು ಮಾಡಿಲ್ಲʼʼ ಎಂದು ನನಗೆ ವಿವರಿಸಿದರು ಎಂದು ದೀಪಕ್ ಹೇಳಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಅವರು ಮಾತನಾಡಿದರು.
ಇಲ್ಲಿದೆ ದೀಪಕ್ ಮಾತನಾಡಿರುವ ವಿಡಿಯೊ:
राहुल गांधी जी ने मुझे मिलने के लिए बुलाया था।
— Congress (@INCIndia) February 23, 2026
उन्होंने मेरे परिवार से बात की और मुझे समझाया कि डरने की कोई जरूरत नहीं, आपने कोई गलत काम नहीं किया है।
राहुल जी ने ये भी कहा कि वे कोटद्वार आकर मुझसे मिलेंगे और मेरे जिम की मेंबरशिप लेंगे।
: नेता विपक्ष @RahulGandhi जी से मिलने… pic.twitter.com/9GheWSOyPB
ಜನವರಿ 26ರಂದು ಈ ವಿವಾದ ಆರಂಭವಾಯಿತು. ಗುಂಪೊಂದು ವಕೀಲ್ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ ಅಂಗಡಿಯನ್ನು ಗುರಿಯಾಗಿಸಿ ದಾಳಿ ನಡೆಸಿತು. ಬಾಬಾ ಎಂಬ ಹೆಸರನ್ನು ಸ್ಥಳೀಯ ಸಿದ್ಧಬಲಿ ಬಾಬಾ ದೇವಾಲಯದೊಂದಿಗೆ ಗೊಂದಲವಾಗಬಹುದು ಎಂದು ಆ ಗುಂಪು ಆಕ್ಷೇಪ ವ್ಯಕ್ತಪಡಿಸಿತು. ಆದರೆ ಈ ಪ್ರದೇಶದ ಇತರ ಅನೇಕರು ಬಾಬಾ ಎಂಬ ಪದವನ್ನು ಯಾವುದೇ ಸಮಸ್ಯೆಯಿಲ್ಲದೆ ಬಳಸುತ್ತಿವೆ ಎಂದು ಸ್ಥಳೀಯರು ಹೇಳಿದರು. ಅಹ್ಮದ್ ಅವರ ಧಾರ್ಮಿಕ ಗುರುತಿಗಾಗಿ ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
नेता विपक्ष श्री @RahulGandhi ने उत्तराखंड के 'मोहम्मद दीपक' से मुलाकात की।
— Congress (@INCIndia) February 23, 2026
मोहम्मद दीपक ने एकता, भाईचारे और हिम्मत की वो मिसाल पेश की है- जो देश के हर युवा को अन्याय और नफरत के खिलाफ लड़ने का हौसला देगा।
दीपक 'मोहब्बत की दुकान' के योद्धा हैं- पूरे देश को इन पर गर्व है।
📍… pic.twitter.com/pxGkXZCVKI
उत्तराखंड कोटद्वार के "मोहब्बत के दीपक" को सम्मानित करके उनका हौसला बढ़ाया।
— Imran Pratapgarhi (@ShayarImran) February 23, 2026
दीपक जैसे नौजवान ही भारत का भविष्य हैं,
नफ़रत के ख़िलाफ़ दीपक के हौसले को सलाम। pic.twitter.com/a436VnY1MC
ವೃದ್ಧ ವ್ಯಾಪಾರಿಯನ್ನು ರಕ್ಷಿಸಲು ದೀಪಕ್ ಮಧ್ಯ ಪ್ರವೇಶಿಸಿದರು. ಈ ವೇಳೆ ಗುಂಪು ದೀಪಕ್ ಬಳಿ ಹೆಸರೇನೆಂದು ಕೇಳಿದೆ. ಈ ವೇಳೆ ಅವರು ನನ್ನ ಹೆಸರು ಮೊಹಮ್ಮದ್ ದೀಪಕ್ ಎಂದು ಹೇಳಿದರು. ಅಂದಿನಿಂದ ಅವರು ತೀವ್ರ ಬಹಿಷ್ಕಾರವನ್ನು ಎದುರಿಸಿದ್ದಾರೆ. ವಿವಾದಕ್ಕೂ ಮುನ್ನ, ಕೋಟ್ದ್ವಾರದ ಬದರಿನಾಥ್ ರಸ್ತೆಯಲ್ಲಿರುವ ದೀಪಕ್ ಅವರ ಹಲ್ಕ್ ಜಿಮ್ 150 ಸದಸ್ಯರನ್ನು ಹೊಂದಿತ್ತು. ಆದರೆ ವಿವಾದ ಆದಾಗಿನಿಂದ ಆ ಸಂಖ್ಯೆ ಕೇವಲ 15ಕ್ಕೆ ಇಳಿದಿದೆ.
ʼʼರಾಹುಲ್ ನನ್ನನ್ನು ಭೇಟಿ ಮಾಡಲು ಮತ್ತು ನನ್ನ ಜಿಮ್ನಲ್ಲಿ ಸದಸ್ಯತ್ವ ಪಡೆಯಲು ಕೋಟ್ದ್ವಾರಕ್ಕೆ ಬರುವುದಾಗಿಯೂ ಹೇಳಿದ್ದಾರೆʼʼ ಎಂದು ದೀಪಕ್ ತಿಳಿಸಿದರು. ಇದಕ್ಕೂ ಮೊದಲು, ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ದೀಪಕ್ ಅವರೊಂದಿಗೆ ಅನೇಕರು ಸಾಂಕೇತಿಕವಾಗಿ ಜಿಮ್ ಸದಸ್ಯತ್ವಕ್ಕೆ ಸಹಿ ಹಾಕಿದರು.
ಹಿಂಸಾಚಾರಕ್ಕೆ ತಿರುಗಿದ ಜೆಎನ್ಯು ಪ್ರತಿಭಟನೆ; ವಿದ್ಯಾರ್ಥಿ ಗುಂಪುಗಳಿಂದ ಪರಸ್ಪರ ದಾಳಿ
ಮೊಹಮ್ಮದ್ ದೀಪಕ್ ಏಕತೆ, ಸಹೋದರತ್ವ ಮತ್ತು ಧೈರ್ಯದ ಉದಾಹರಣೆಯಾಗಿದ್ದಾರೆ. ಇದು ದೇಶದ ಪ್ರತಿಯೊಬ್ಬ ಯುವಕರಿಗೂ ಅನ್ಯಾಯ ಮತ್ತು ದ್ವೇಷದ ವಿರುದ್ಧ ಹೋರಾಡುವ ಧೈರ್ಯವನ್ನು ತುಂಬುತ್ತದೆ. ದೇಶವೇ ಅವರ ಮೇಲೆ ಹೆಮ್ಮೆ ಪಡುತ್ತದೆ ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಘರ್ಹಿ ಕೂಡ ಉತ್ತರಾಖಂಡ ವೀರನನ್ನು ಸನ್ಮಾನಿಸಿದರು. ಉತ್ತರಾಖಂಡದ ಕೋಟ್ದ್ವಾರದಿಂದಲೂ ದೀಪಕ್ ಅವರನ್ನು ಗೌರವಿಸಲಾಯಿತು. ದೀಪಕ್ ಅವರಂತಹ ಯುವಕರು ಭಾರತದ ಭವಿಷ್ಯ, ದ್ವೇಷದ ವಿರುದ್ಧ ಅವರ ಧೈರ್ಯಕ್ಕೆ ನಮನಗಳು ಎಂದು ಕಾಂಗ್ರೆಸ್ ಸಂಸದರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.