ಪ್ರಧಾನಿ ಮೋದಿಯ ಮಾತನ್ನು ವಿಶ್ವದ ನಾಯಕರು ಎಚ್ಚರಿಕೆಯಿಂದ ಆಲಿಸುತ್ತಾರೆ: ಮೋಹನ್ ಭಾಗವತ್
ವಿಶ್ವದ ನಾಯಕರು ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸುತ್ತಿದ್ದಾರೆ. ಹೀಗಾಗಿ ಭಾರತ ಈಗ ಅಗತ್ಯವಿರುವ ಕಡೆ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅವರು ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಆಚರಣೆಯಲ್ಲಿ ಮಾತನಾಡಿದರು.
ಮೋಹನ್ ಭಾಗವತ್ (ಸಂಗ್ರಹ ಚಿತ್ರ) -
ಪುಣೆ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮಾತುಗಳನ್ನು ವಿಶ್ವದ ನಾಯಕರು ಎಚ್ಚರಿಕೆಯಿಂದ ಆಲಿಸುತ್ತಿದ್ದಾರೆ. ಭಾರತ ಈಗ ಅಗತ್ಯವಿರುವ ಕಡೆಗೆ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದರು. ಅವರು ಸೋಮವಾರ ಪುಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಯಂತಿಗಳು ಅಥವಾ ಶತಮಾನೋತ್ಸವಗಳಂತಹ ಮೈಲಿಗಲ್ಲುಗಳನ್ನು ಆಚರಿಸಲು ಯಾರೂ ಎದುರು ನೋಡಬಾರದು. ನಿಗದಿತ ಸಮಯದೊಳಗೆ ನೀಡಲಾದ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಭಾರತದ ಶಕ್ತಿ ಪರಿಚಯ ಈಗ ವಿಶ್ವಕ್ಕೆ ಆಗುತ್ತಿದೆ. ಹೀಗಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವಾಗ ವಿಶ್ವ ನಾಯಕರು ಎಚ್ಚರಿಕೆಯಿಂದ ಆಲಿಸುತ್ತಾರೆ ಎಂದ ಮೋಹನ್ ಭಾಗವತ್, ಭಾರತವು ಉದಯಿಸಿದಾಗ ಜಾಗತಿಕ ಸಮಸ್ಯೆಗಳು ಬಗೆಹರಿಯುತ್ತವೆ. ಸಂಘರ್ಷಗಳು ಕಡಿಮೆಯಾಗುತ್ತವೆ ಮತ್ತು ಶಾಂತಿ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.
BS Yediyurappa: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ತಂದ ಬಿಎಸ್ ಯಡಿಯೂರಪ್ಪ
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸವಾಲುಗಳು, ಅನೇಕ ಬಿರುಗಾಳಿಗಳನ್ನು ಎದುರಿಸಿ 100 ವರ್ಷಗಳನ್ನು ಪೂರೈಸಿದೆ. ಇಡೀ ಸಮಾಜವನ್ನು ಒಂದುಗೂಡಿಸುವ ಕಾರ್ಯವು ಏಕೆ ಇಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು ಎಂದು ಅವರು ತಿಳಿಸಿದರು.
Pune, Maharashtra: RSS chief Mohan Bhagwat says, "Today, people around the world listen to the Prime Minister of India. Why do they listen? Because India’s strength has begun to manifest wherever and whenever it should. That is when the world truly understood..." pic.twitter.com/RUO8dgiDx7
— IANS (@ians_india) December 1, 2025
1925ರಲ್ಲಿ ನಾಗ್ಪುರದಲ್ಲಿ ಹಿಂದುತ್ವ ಸಂಘಟನೆಯನ್ನು ಸ್ಥಾಪಿಸಿದ ಆರ್ಎಸ್ಎಸ್ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಮಾಡಿದ ತ್ಯಾಗಗಳನ್ನು ನೆನಪಿಸಿಕೊಂಡ ಭಾಗವತ್, ಸಂಘ ಸ್ವಯಂಸೇವಕರು ಹಲವಾರು ಪ್ರತಿಕೂಲತೆಗಳು ಮತ್ತು ಸವಾಲುಗಳ ನಡುವೆ ತಮಗೆ ನೀಡಲಾದ ಧ್ಯೇಯವನ್ನು ಸಾಧಿಸುವ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ಕೆಲಸವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂಬ ಖಚಿತತೆ ಇರಲಿಲ್ಲ ಎಂದು ತಿಳಿಸಿದರು.
ಸಂಘದ ಸ್ವಯಂ ಸೇವಕರು ಯಶಸ್ಸಿನ ಬೀಜಗಳನ್ನು ಬಿತ್ತಿ ತಮ್ಮ ಜೀವನವನ್ನು ದೇಶಕ್ಕೆ ಅರ್ಪಿಸುವ ಮೂಲಕ ಪರಿವರ್ತನೆಗೆ ದಾರಿ ಮಾಡಿಕೊಟ್ಟರು. ನಮ್ಮ ಕೃತಜ್ಞತೆ ಅವರೊಂದಿಗೆ ಇರಬೇಕು. ಆರ್ಎಸ್ಎಸ್ 30 ವರ್ಷ ತಡವಾಗಿ ಬಂತು ಎನ್ನಲಾಗುತ್ತದೆ. ಆದರೆ ನಾವು ತಡವಾಗಿ ಬಂದಿಲ್ಲ. ಬದಲಾಗಿ ನಮ್ಮ ಮಾತು ತಡವಾಗಿ ಕೇಳಲು ಪ್ರಾರಂಭಿಸಲಾಯಿತು ಎಂದು ಹೇಳಿದರು.
ಸಂಘವು ಸಂವಾದ ಮತ್ತು ಸಾಮೂಹಿಕ ಕೆಲಸದ ಬಲದ ಬಗ್ಗೆ ಮಾತನಾಡುವಾಗ ಅದು ಇಡೀ ಸಮಾಜವನ್ನು ಸೂಚಿಸುತ್ತದೆ. ನಮ್ಮ ಅಡಿಪಾಯವು ವೈವಿಧ್ಯತೆಯ ಮೂಲಕ ಏಕತೆಯಲ್ಲಿದೆ. ನಾವು ಒಟ್ಟಿಗೆ ನಡೆಯಬೇಕು ಮತ್ತು ಅದಕ್ಕಾಗಿ ಧರ್ಮ ಅತ್ಯಗತ್ಯ. ಭಾರತದಲ್ಲಿ ಎಲ್ಲಾ ತತ್ತ್ವ ಶಾಸ್ತ್ರಗಳು ಒಂದೇ ಮೂಲದಿಂದ ಹುಟ್ಟಿಕೊಂಡಿವೆ. ಯಾಕೆಂದರೆ ಎಲ್ಲವೂ ಪರಸ್ಪರ ಸಂಬಂಧ ಹೊಂದಿದ್ದು ನಾವು ಸಾಮರಸ್ಯದಿಂದ ಮುಂದುವರಿಯಬೇಕು ಎಂದು ಅವರು ಪ್ರತಿಪಾದಿಸಿದರು.