ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tej Pratap Yadav: ನೀವೇ ನನ್ನ ಪ್ರಪಂಚ.... ಪಕ್ಷದಿಂದ ಉಚ್ಚಾಟನೆ ಬಳಿಕ ತಂದೆ ತಾಯಿಗೆ ಭಾವನಾತ್ಮಕ ಪತ್ರ ಬರೆದ ತೇಜ್‌ ಪ್ರತಾಪ್‌

ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, (Tej Pratap Yadav) ಪಕ್ಷದಿಂದ ಉಚ್ಚಾಟನೆಗೊಂಡ ನಂತರ ತಮ್ಮ ಕುಟುಂಬಕ್ಕೆ ಭಾವನಾತ್ಮಕವಾಗಿ ಪತ್ರವೊಂದು ಬರೆದಿದ್ದಾರೆ. ಈ ಕುರಿತು ತೇಜಸ್ವಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನೀವೇ ನನ್ನ ಪ್ರಪಂಚ.... ಲಾಲೂಗೆ ಪತ್ರ ಬರೆದ ಪುತ್ರ

Profile Vishakha Bhat Jun 1, 2025 10:17 AM

ಪಟನಾ: ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, (Tej Pratap Yadav) ಪಕ್ಷದಿಂದ ಉಚ್ಚಾಟನೆಗೊಂಡ ನಂತರ ತಮ್ಮ ಕುಟುಂಬಕ್ಕೆ ಭಾವನಾತ್ಮಕವಾಗಿ ಪತ್ರವೊಂದು ಬರೆದಿದ್ದಾರೆ. ಈ ಕುರಿತು ತೇಜಸ್ವಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.ತೇಜ್ ಪ್ರತಾಪ್ ತನ್ನ ಹೆತ್ತವರಾದ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿಯನ್ನು ಇಡೀ ಪ್ರಪಂಚ ಎಂದು ಬಣ್ಣಿಸಿದ್ದಾರೆ. ನೀವು ಖುಷಿಯಾಗಿರಿ ಎಂದು ತೇಜಸ್ವಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪಕ್ಷದ ಕುರಿತು ತೇಜಸ್ವಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಪ್ರೀತಿಯ ಅಮ್ಮ ಮತ್ತು ಅಪ್ಪ. ನನ್ನ ಇಡೀ ಪ್ರಪಂಚವು ನೀವಿಬ್ಬರು ಮಾತ್ರ. ನೀವು ಮತ್ತು ನೀವು ನೀಡುವ ಯಾವುದೇ ಆದೇಶವು ದೇವರಿಗಿಂತ ದೊಡ್ಡದು. ನೀವು ಅಲ್ಲಿದ್ದರೆ, ನನಗೆ ಎಲ್ಲವೂ ಇದೆ. ನನಗೆ ನಿಮ್ಮ ನಂಬಿಕೆ ಮತ್ತು ಪ್ರೀತಿ ಮಾತ್ರ ಬೇಕು, ಬೇರೇನೂ ಇಲ್ಲ" ಎಂದು ತೇಜ್ ಪ್ರತಾಪ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಅಪ್ಪಾ, ನೀವು ಇಲ್ಲದಿದ್ದರೆ ಈ ಪಾರ್ಟಿ ಇರುತ್ತಿರಲಿಲ್ಲ ಮತ್ತು ನನ್ನ ಜೊತೆ ರಾಜಕೀಯ ಮಾಡುವ ಜೈಚಂದ್‌ನಂತಹ ದುರಾಸೆಯ ಜನರು ಇರುತ್ತಿರಲಿಲ್ಲ. ಅಮ್ಮ ಅಪ್ಪಾ, ನೀವಿಬ್ಬರೂ ಯಾವಾಗಲೂ ಆರೋಗ್ಯವಾಗಿ ಮತ್ತು ಸಂತೋಷವಾಗಿರಲಿ" ಎಂದು ಅವರು ಹೇಳಿದರು.

ಮೇ 25 ರಂದು "ಬೇಜವಾಬ್ದಾರಿಯುತ ವರ್ತನೆ" ಮತ್ತು ಪಕ್ಷದ ಮೌಲ್ಯಗಳಿಗೆ ವಿರುದ್ಧವಾದ ನಡವಳಿಕೆಯನ್ನು ಉಲ್ಲೇಖಿಸಿ ಆರ್‌ಜೆಡಿ ನಾಯಕತ್ವವು ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದ ನಂತರ ಇದು ಬಂದಿದೆ. ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆ ನಮ್ಮ ಕುಟುಂಬದ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ... ನಾನು ಅವನನ್ನು ಪಕ್ಷ ಮತ್ತು ಕುಟುಂಬದಿಂದ ತೆಗೆದುಹಾಕುತ್ತೇನೆ. ಇಂದಿನಿಂದ, ಅವನಿಗೆ ಪಕ್ಷ ಅಥವಾ ಕುಟುಂಬದಲ್ಲಿ ಯಾವುದೇ ರೀತಿಯ ಪಾತ್ರವಿರುವುದಿಲ್ಲ. ಅವನನ್ನು ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ ಎಂದು ಲಾಲೂ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Tej Pratap Yadav: ಲಾಲು ಕುಟುಂಬಕ್ಕೆ ಗುಡ್‌ನ್ಯೂಸ್, ಅಪ್ಪನಾದ ತೇಜಸ್ವಿ ಯಾದವ್‌; ದೊಡ್ಡಪ್ಪನಾದೆ ಎಂದು ಟ್ವೀಟ್‌ ಮಾಡಿದ ತೇಜ್ ಪ್ರತಾಪ್!

ಅನುಷ್ಕಾ ಯಾದವ್ ಜೊತೆಗಿನ 12 ವರ್ಷಗಳ ಪ್ರಣಯ ಸಂಬಂಧವನ್ನು ಬಹಿರಂಗಪಡಿಸಿದ ವಿವಾದಾತ್ಮಕ ಫೇಸ್‌ಬುಕ್ ಪೋಸ್ಟ್‌ನ ನಂತರ ಅವರು ಶಿಸ್ತು ಕ್ರಮವನ್ನು ಎದುರಿಸಬೇಕಾಯಿತು. ತನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅವರ ಮತ್ತು ಅವರ ಕುಟುಂಬದ ಖ್ಯಾತಿಗೆ ಹಾನಿ ಮಾಡಲು ಚಿತ್ರಗಳನ್ನು ತಿರುಚಲಾಗಿದೆ ಎಂದು ತೇಜಸ್ವಿ ಆರೋಪಿಸಿದ್ದರು.