ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ವಾಸ್ತು ಸಮಸ್ಯೆಗಳಿಗೆ ಇದೆ ಸರಳ ಪರಿಹಾರ

ಮನೆಯಲ್ಲಿ ವಾಸ್ತು (Vastu Tips) ಸಮಸ್ಯೆಗಳಿದ್ದರೆ ಅದನ್ನು ಗುರುತಿಸುವುದು ಕಷ್ಟವೇನಲ್ಲ. ಕೆಲವೊಂದು ಸೂಚನೆಗಳು ಮೊದಲೇ ಸಿಗುತ್ತವೆ. ಅಂತೆಯೇ ಇವುಗಳ ಸುಳಿವು ಸಿಕ್ಕಿದೊಡನೆಯೇ ಅದಕ್ಕೆ ಸೂಕ್ತ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸಮಸ್ಯೆಗಳಿಂದ ಶೀಘ್ರದಲ್ಲಿ ಮುಕ್ತಿ ಪಡೆಯಬಹುದಾಗಿದೆ. ಮನೆ ವಾಸ್ತುವಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಗುರುತಿಸಿ ಇಲ್ಲವಾದರೆ ಕೆಲವು ಸರಳ ಪರಿಹಾರಗಳನ್ನು ಮಾಡಿ ಅವುಗಳನ್ನು ಸರಿಪಡಿಸಿ.

ಮನೆಯಲ್ಲಿರುವ ಸಮಸ್ಯೆಗಳಿಗೆ  ಪರಿಹಾರ ಹೇಗೆ?

ಬೆಂಗಳೂರು: ಮನೆಯಲ್ಲಿ (Vastu For Home) ವಾಸ್ತು (vastu tips) ನಿಯಮಗಳ ಪಾಲನೆ ಬಹುಮುಖ್ಯವೆಂದು ಪರಿಗಣಿಸಲಾಗಿದೆ. ಇಲ್ಲವಾದರೆ ಜೀವನದಲ್ಲಿ ಕೆಲವೊಂದು ಅಡೆತಡೆಗಳು ನಿರಂತರ ಎದುರಾಗುತ್ತದೆ. ಮನೆಯಾಗಿರಲಿ ಅಥವಾ ವ್ಯಾಪಾರ ಸಂಸ್ಥೆಯಾಗಿರಲಿ (Vastu For Office) ವಾಸ್ತು ದೋಷಗಳಿದ್ದರೆ ಅದು ಅಲ್ಲಿ ವಾಸ ಮಾಡುವ ಎಲ್ಲರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವಾಸ್ತು ದೋಷಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳು ಜೀವನದ ಪ್ರಗತಿ ಮತ್ತು ಸಮೃದ್ದಿಯ ಮೇಲೆ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ನಮ್ಮ ಮನೆ ವಾಸ್ತುವಿಗೆ ಅನುಗುಣವಾಗಿದೆಯೇ ಎಂಬುದನ್ನು ಗುರುತಿಸಿ ಇಲ್ಲವಾದರೆ ಕೆಲವು ಸರಳ ಪರಿಹಾರಗಳನ್ನು ಮಾಡಿ ಅವುಗಳನ್ನು ಸರಿಪಡಿಸಬಹುದು.

ಮನೆಯಾಗಿರಲಿ ಅಥವಾ ವ್ಯಾಪಾರ ಸಂಸ್ಥೆಯಾಗಿರಲಿ ವಾಸ್ತು ದೋಷವು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮನೆ ಮಂದಿಯ ಪ್ರಗತಿ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತದೆ. ಜನರ ಜೀವನದಲ್ಲಿ ವಾಸ್ತು ತತ್ತ್ವಗಳು ಮಹತ್ವದ ಪಾತ್ರ ವಹಿಸುತ್ತದೆ. ಮನೆ ಮತ್ತು ಅಂಗಡಿಗಳಲ್ಲಿರುವ ವಾಸ್ತು ದೋಷಗಳನ್ನು ಗುರುತಿಸಿ ಸರಿಪಡಿಸಲು ಜ್ಯೋತಿಷಿ ಪಂಡಿತ್ ಹೃದಯ್ ರಂಜನ್ ಶರ್ಮಾ ಅವರು ನೀಡಿರುವ ಪರಿಹಾರೋಪಾಯಗಳು ಇಂತಿವೆ.

ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಅದು ಮನೆ ಮಂದಿಯ ಜೀವನದಲ್ಲಿ ನಿಶ್ಚಲತೆಯನ್ನು ಉಂಟು ಮಾಡುತ್ತದೆ. ಇದರೊಂದಿಗೆ ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮುಖ್ಯವಾಗಿ ಮನೆ ಮಂದಿಯ ಪ್ರಗತಿ ಮತ್ತು ಯಶಸ್ಸಿನಲ್ಲಿ ಅಡೆತಡೆಗಳು ಎದುರಾಗುತ್ತವೆ. ಮನೆ ಮಂದಿಯಲ್ಲಿ ಪದೇ ಪದೇ ಅರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮದುವೆ, ಮಕ್ಕಳನ್ನು ಪಡೆಯುವಲ್ಲಿ ವಿಳಂಬಗಳು, ಮನೆ ಮಂದಿಯಲ್ಲಿ ನಿರಂತರ ಜಗಳ, ಕುಟುಂಬ ಬೆಳವಣಿಗೆ ಮತ್ತು ಸಮೃದ್ಧಿಯಲ್ಲಿ ತೊಂದರೆಗಳು ಉಂಟಾಗುತ್ತವೆ. ಇದರೊಂದಿಗೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ.

vas111

ವಾಸ್ತು ಸಂಬಂಧಿತ ಸಮಸ್ಯೆಗಳನ್ನು ಸರಿಪಡಿಸಲು ಕೆಲವು ಸರಳ ಪರಿಹಾರಗಳೂ ಇವೆ. ಹರಿಯುವ ನೀರು, ಕೊಳ ಅಥವಾ ಕಾಲುವೆಗಳಲ್ಲಿ ಮೀನುಗಳನ್ನು ಬಿಡುವುದು, ನಾಯಿ, ಇರುವೆಗಳಿಗೆ ಆಹಾರ ನೀಡುವುದು, ಹೆಣ್ಣು ಮಕ್ಕಳ ಶಿಕ್ಷಣ, ಮದುವೆಗೆ ಸಹಾಯ ಮಾಡುವುದು, ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಒದಗಿಸುವುದು, ಸೂರ್ಯನಿಗೆ ಅರ್ಘ್ಯ, ಪೂರ್ವಜರಿಗೆ ತರ್ಪಣ ನೀಡುವುದರಿಂದ ಮನೆಯ ವಾಸ್ತು ದೋಷಗಳನ್ನು ಸರಿಪಡಿಸಿಕೊಳ್ಳಬಹುದು.

ಇದಲ್ಲದೆ ಮನೆಯ ಮುಖ್ಯ ದ್ವಾರದ ಬಣ್ಣವು ಕೂಡ ವಾಸ್ತು ದೋಷಗಳನ್ನು ತೆಗೆದು ಹಾಕುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದಿಕ್ಕಿನ ಪ್ರಕಾರ ಅದು ಯಾವ ಬಣ್ಣ ಹೊಂದಿರಬೇಕು ಎಂಬುದನ್ನು ತಿಳಿದಿರುವುದು ಒಳ್ಳೆಯದು. ಮನೆಯ ಪ್ರವೇಶದ್ವಾರವು ಪೂರ್ವ ದಿಕ್ಕಿನಲ್ಲಿದ್ದರೆ ಕಿತ್ತಳೆ ಅಥವಾ ಚಿನ್ನದ ಬಣ್ಣ, ಉತ್ತರ ದಿಕ್ಕಿನಲ್ಲಿದ್ದರೆ ನೀಲಿ ಅಥವಾ ಆಕಾಶ ನೀಲಿ, ಪಶ್ಚಿಮ ದಿಕ್ಕಿನಲ್ಲಿದ್ದರೆ ಬಿಳಿ ಅಥವಾ ತಿಳಿ ಹಳದಿ ಬಣ್ಣ ಸೂಕ್ತವಾಗಿದೆ.

ಇನ್ನು ವಾಸ್ತು ದೋಷಗಳಿಗೆ ಮನೆಯ ಮೆಟ್ಟಿಲುಗಳು ಕೂಡ ಕಾರಣವಾಗುತ್ತವೆ. ಹೀಗಾಗಿ ಮೆಟ್ಟಿಲುಗಳ ನಿರ್ಮಾಣದಲ್ಲಿ ನಿರ್ದಿಷ್ಟ ವಾಸ್ತು ನಿಯಮಗಳನ್ನು ಅನುಸರಿಸಬೇಕು. ಮನೆಯ ಮೆಟ್ಟಿಲುಗಳನ್ನು ಯಾವತ್ತೂ ದಕ್ಷಿಣ, ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಮೆಟ್ಟಿಲುಗಳ ಸಂಖ್ಯೆ ಯಾವಾಗಲೂ ಬೆಸವಾಗಿರಬೇಕು. ಉದಾ. 3, 5, 7, 9, 11, 13, 17 ಮೆಟ್ಟಿಲುಗಳನ್ನು ವಿಶೇಷವಾಗಿ ಶುಭವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಹೀಗೆ ಮಾಡಿ

ಮೆಟ್ಟಿಲುಗಳ ಕೆಳಗೆ ಸ್ವಿಚ್ ಕೋಣೆಯನ್ನು ಇಡಬಹುದು. ಆದರೆ ಅಂಗಡಿ, ಶೌಚಾಲಯ, ಸ್ನಾನಗೃಹ, ಬೆಡ್ ರೂಮ್ ಅಥವಾ ಕುಳಿತುಕೊಳ್ಳುವ ಪ್ರದೇಶ ಎಂದಿಗೂ ಇರಬಾರದು. ಮೆಟ್ಟಿಲುಗಳು ಮನೆ, ಕಟ್ಟಡ ಅಥವಾ ಅಂಗಡಿಯ ಮಧ್ಯ ಭಾಗದಲ್ಲಿ ಎಂದಿಗೂ ನಿರ್ಮಿಸಬಾರದು. ಯಾಕೆಂದರೆ ಮನೆ, ಅಂಗಡಿಯ ಮಧ್ಯ ಭಾಗವು ಪವಿತ್ರ ಕೇಂದ್ರವಾಗಿರುತ್ತದೆ.

ಮನೆಯಲ್ಲಿ ಪ್ರಾರ್ಥನಾ ದೇವಾಲಯವನ್ನು ಈಶಾನ್ಯ ಮೂಲೆಯಲ್ಲಿ ನಿರ್ಮಿಸಬೇಕು. ಈ ದಿಕ್ಕಿನಲ್ಲಿ ಶಿವ ಅಥವಾ ಶಿವಲಿಂಗದ ವಿಗ್ರಹವನ್ನು ಸ್ಥಾಪಿಸುವುದು ವಿಶೇಷವಾಗಿ ಅನುಕೂಲಕರವಾಗಿದೆ. ದೇವಾಲಯದ ಪ್ರವೇಶದ್ವಾರವು ಪೂರ್ವ ಅಥವಾ ದಕ್ಷಿಣಕ್ಕೆ ಮುಖ ಮಾಡಬೇಕು. ಶಿವನ ಪ್ರಾಣ ಪ್ರತಿಷ್ಠೆಯನ್ನು ಮನೆಯೊಳಗೆ ಎಂದಿಗೂ ಮಾಡಬಾರದು ಎನ್ನುತ್ತಾರೆ ವಾಸ್ತು ತಜ್ಞರು.