ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanju Samson: ಸಂಜು ಸ್ಯಾಮ್ಸನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರುವುದು ಖಚಿತ

ಮಹೇಂದ್ರ ಸಿಂಗ್‌ ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ ಆಡುವುದು ಅನುಮಾನ ಹೀಗಾಗಿ ತಂಡಕ್ಕೆ ಸೂಕ್ತ ವಿಕೆಟ್‌ ಕೀಪರ್‌ ಅಗತ್ಯವಿರುವ ಕಾರಣ ಈ ಸ್ಥಾನಕ್ಕೆ ಸಂಜು ಅವರು ಆಯ್ಕೆಯಾಗಬಹುದು. ಧೋನಿ ಜತೆ ಸಂಜು ಉತ್ತಮ ನಂಟು ಕೂಡ ಹೊಂದಿದ್ದಾರೆ. ಜತೆಗೆ ಚೆನ್ನೈ ಮೇಲೂ ಅಪಾರ ಅಭಿಮಾನ ಮತ್ತು ಪ್ರೀತಿ ಹೊಂದಿದ್ದಾರೆ. ಹೀಗಾಗಿ ಅವರು ಚೆನ್ನೈ ತಂಡ ಸೇರಿದರು ಅಚ್ಚರಿಯಿಲ್ಲ.

ಸಂಜು ಸ್ಯಾಮ್ಸನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರುವುದು ಖಚಿತ

Profile Abhilash BC Jun 28, 2025 1:08 PM

ಚೆನ್ನೈ: ಕೇರಳದ ಸ್ಟಂಪರ್‌ ಸಂಜು ಸ್ಯಾಮ್ಸನ್‌(Sanju Samson) ಅವರು 2026ರ ಐಪಿಎಲ್‌ಗೂ(IPL 2026) ಮೊದಲು ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಜತೆ ಕೈಜೋಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಟ್ರೇಡ್‌ ವಿಂಡೋ ನಿಯಮದ ಪ್ರಕಾರ ಸಂಜು ಅವರನ್ನು ಚೆನ್ನೈ ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಜತೆ ದೊಡ್ಡ ಒಪ್ಪಂದಕ್ಕೆ ಸಜ್ಜಾಗಿದೆ ಎನ್ನಲಾಗಿದೆ.

ಸಂಜು ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಲುವಾಗಿ ರವಿಚಂದ್ರನ್ ಅಶ್ವಿನ್ ಮತ್ತು ಶಿವಂ ದುಬೆ ಅವರನ್ನು ರಾಜಸ್ಥಾನಕ್ಕೆ ಕಳುಹಿಸುವ ಒಪ್ಪಂದ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಸಂಜು ತಮ್ಮ ಪತ್ನಿಯೊಂದಿಗೆ ರಸ್ತೆ ದಾಟುವ ಫೋಟೊವೊಂದನ್ನು ಹಂಚಿಕೊಂಡು "ಚಲಿಸುವ ಸಮಯ..!!" ಎಂದು ಶೀರ್ಷಿಕೆ ನೀಡಿದ್ದರು. ಈ ಫೋಟೊದಲ್ಲಿ ಸಂಜು ಹಳದಿ ಗೆರೆಗೆ ಕಾಲಿಡುತ್ತಿರುವುದು ಕಾಣಬಹುದು. ಹೀಗಾಗಿ ನೆಟ್ಟಿಗರು ಇದು ಸಂಜು ಚೆನ್ನೈ ಸೇರುವ ಸುಳಿವು ಎಂದು ಹೇಳಲಾರಂಭಿಸಿದ್ದರು. ಈ ಎಲ್ಲ ಬೆಳವಣಿಗೆ ಮಧ್ಯೆ ಫ್ರಾಂಚೈಸಿ ಸಂಜು ಖರೀದಿಗೆ ಮುಂದಾಗಿದೆ ಎಂಬ ಸುದ್ದಿ ಕೂಡ ಹೊರಬಿದ್ದಿದೆ.

ಮಹೇಂದ್ರ ಸಿಂಗ್‌ ಧೋನಿ ಮುಂದಿನ ಆವೃತ್ತಿಯ ಐಪಿಎಲ್‌ ಆಡುವುದು ಅನುಮಾನ ಹೀಗಾಗಿ ತಂಡಕ್ಕೆ ಸೂಕ್ತ ವಿಕೆಟ್‌ ಕೀಪರ್‌ ಅಗತ್ಯವಿರುವ ಕಾರಣ ಈ ಸ್ಥಾನಕ್ಕೆ ಸಂಜು ಅವರು ಆಯ್ಕೆಯಾಗಬಹುದು. ಧೋನಿ ಜತೆ ಸಂಜು ಉತ್ತಮ ನಂಟು ಕೂಡ ಹೊಂದಿದ್ದಾರೆ. ಜತೆಗೆ ಚೆನ್ನೈ ಮೇಲೂ ಅಪಾರ ಅಭಿಮಾನ ಮತ್ತು ಪ್ರೀತಿ ಹೊಂದಿದ್ದಾರೆ. ಹೀಗಾಗಿ ಅವರು ಚೆನ್ನೈ ತಂಡ ಸೇರಿದರು ಅಚ್ಚರಿಯಿಲ್ಲ.

ಇದನ್ನೂ ಓದಿ IPL Trophy: IPL​ ಟ್ರೋಫಿ ಮೇಲೆ ಸಂಸ್ಕೃತ ಶ್ಲೋಕ; ಏನಿದರ ಅರ್ಥ ನಿಮಗೆ ಗೊತ್ತಾ?

2021 ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಸ್ಯಾಮ್ಸನ್ ನೇತೃತ್ವದಲ್ಲಿ ರಾಯಲ್ಸ್ 33 ಪಂದ್ಯಗಳಲ್ಲಿ ಜಯಗಳಿಸಿದೆ ಮತ್ತು 32 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್‌ ಪರ ಸಂಜು 4027 ರನ್ ಗಳಿಸಿದ್ದಾರೆ. 18ನೇ ಆವೃತ್ತಿಯಲ್ಲಿ ಕೈ ಬೆರಳಿನ ಗಾಯದಿಂದ ಬಳಲಿದ್ದ ಸಂಜು ಬೆರಳೆಣಿಕೆಯ ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದರು. ಜತೆಗೆ ಕೋಚ್‌ ಗಂಭೀರ್‌ ಜತೆ ಮನಸ್ತಾಪ ಮಾಡಿಕೊಂಡಿದ್ದಾಗಿಯೂ ಸುದ್ದಿಯಾಗಿತ್ತು.