Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್ ವರ್ಮಾರನ್ನು ಸ್ಲೆಡ್ಜ್ ಮಾಡಿದ ವೈಭವ್ ಸೂರ್ಯವಂಶಿ!
ಪೂರ್ವ ವಲಯ ತಂಡದ ಉಪನಾಯಕ ವೈಭವ್ ಸೂರ್ಯವಂಶಿ, ದಕ್ಷಿಣ ವಲಯ ತಂಡದ ನಾಯಕ ತಿಲಕ್ ವರ್ಮಾ ಅವರನ್ನು ಸ್ಲೆಡ್ಜ್ ಮಾಡಿದರು. ಸೌತ್ ಝೋನ್ ಇನಿಂಗ್ಸ್ ವೇಳೆ ಈ ಘಟನೆ ನಡೆಯಿತು. ಈ ಪಂದ್ಯದಲ್ಲಿ ಪೂರ್ವ ವಲಯ 708 ರನ್ಗಳನ್ನು ಕಲೆ ಹಾಕಿದರೆ, ದಕ್ಷಿಣ ವಲಯ ಪ್ರಥಮ ಇನಿಂಗ್ಸ್ನಲ್ಲಿ 336 ರನ್ಗಳಿಗೆ ಆಲ್ಔಟ್ ಆಯಿತು.
ತಿಲಕ್ ವರ್ಮಾಗೆ ವೈಭವ್ ಸೂರ್ಯವಂಶಿ ತಿರುಗೇಟು. -
ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ದುಲೀಪ್ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಕಾದಾಟ ನಡೆಸುತ್ತಿವೆ. ನಾಲ್ಕನೇ ದಿನದಾಟದ ವೇಳೆಯಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡ ಪಂದ್ಯದ ಮೇಲೆ ತನ್ನ ಬಿಗಿ ಹಿಡಿತವನ್ನು ಮುಂದುವರಿಸಿದೆ. ಇದರ ನಡುಎ ದಕ್ಷಿಣ ವಲಯ ನಾಯಕ ತಿಲಕ್ ವರ್ಮಾ (Tilak Verma) ಅವರನ್ನು ಉಪ ನಾಯಕ ವೈಭವ್ ಸೂರ್ಯವಂಶಿ (Vaibhav Sooryavanshi) ಸ್ಲೆಡ್ಜ್ ಮಾಡಿ ತಿರುಗೇಟು ನೀಡಿದ್ದಾರೆ.
ಪಂದ್ಯದ ಮೊದಲ ದಿನ ತಿಲಕ್ ವರ್ಮಾ ಅವರಿಂದ ಕೆಲವು ಮಾತುಗಳನ್ನು ಕೇಳಿಸಿಕೊಂಡಿದ್ದ ವೈಭವ್, ನಾಲ್ಕನೇ ದಿನ ದಕ್ಷಿಣ ವಲಯ ನಾಯಕನ ಬಳಿಗೆ ತೆರಳಿ ತಾವೂ ಕೆಲವು ಮಾತುಗಳನ್ನು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ನಾಲ್ಕನೇ ದಿನದ ಬೆಳಗಿನ ಅವಧಿಯ ಅಂತ್ಯದ ವೇಳೆಗೆ ಈ ಘಟನೆ ನಡೆಯಿತು. ಆಗ ದಕ್ಷಿಣ ವಲಯ ಈಗಾಗಲೇ ಎಂಟು ವಿಕೆಟ್ಗಳನ್ನು ಕಳೆದುಕೊಂಡು ಸೋಲಿನತ್ತ ಸಾಗುತ್ತಿತ್ತು.
ಈಸ್ಟ್ ಝೋನ್ ಮೊದಲ ಇನಿಂಗ್ಸ್ನಲ್ಲಿ ದಾಖಲಿಸಿದ್ದ ಭರ್ಜರಿ 708 ರನ್ಗಳ ಮೊತ್ತವನ್ನು ಬೆನ್ನಟ್ಟುತ್ತಿದ್ದ ಸೌತ್ ಝೋನ್, ಬ್ಯಾಟಿಂಗ್ಗೆ ಉತ್ತಮವಾಗಿದ್ದ ಪಿಚ್ನಲ್ಲೂ 330 ರನ್ಗಳ ಗಡಿ ತಲುಪುವ ಮುನ್ನವೇ ಎಂಟು ವಿಕೆಟ್ ಕಳೆದುಕೊಂಡಿತ್ತು. ಒಂದೆಡೆಯಿಂದ ತಿಲಕ್ ವರ್ಮಾ ಹೋರಾಟ ಮುಂದುವರಿಸಲು ಪ್ರಯತ್ನಿಸುತ್ತಿದ್ದಾಗ, ವೈಭವ್ ಬ್ಯಾಟರ್ ಬಳಿ ತೆರಳಿ ಕೆಲ ಮಾತುಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಯಾವುದೇ ಗಡಿಬಿಡಿಯಿಲ್ಲದೆ ಅಲ್ಲಿಂದ ಹಿಂದೆ ಸರಿದರು.
Duleep Trophy final: ಇಶಾನ್ ಕಿಶನ್ಗೆ ಡಿಆರ್ಎಸ್ ಸಲಹೆ ನೀಡಿದ ವೈಭವ್ ಸೂರ್ಯವಂಶಿ! ವಿಡಿಯೊ
ಫೈನಲ್ ಪಂದ್ಯದ ಆರಂಭಿಕ 10 ಓವರ್ಗಳಲ್ಲಿ ಪೂರ್ವ ವಲಯ ತಂಡದ ಆರಂಭಿಕ ಬ್ಯಾಟರ್ಗಳು ಅಬ್ಬರಿಸುತ್ತಿದ್ದಾಗ, ತಿಲಕ್ ವರ್ಮಾ ವೈಭವ್ ಸೂರ್ಯವಂಶಿ ಬಳಿ ತೆರಳಿ ಯುವ ಆಟಗಾರನೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದೀಗ ನಾಲ್ಕು ದಿನಗಳ ಬಳಿಕ, ವೈಭವ್ಗೆ ಆ ಘಟನೆಗೆ ತಿರುಗೇಟು ನೀಡುವ ಅವಕಾಶ ಸಿಕ್ಕಿತು. ಅದರಲ್ಲೂ ಮೊದಲ ದಿನದ ಆ ಘಟನೆಯ ನಂತರ ಪಂದ್ಯ ಸಂಪೂರ್ಣವಾಗಿ ಬದಲಾಗಿದ್ದರಿಂದ, ಈ ಬಾರಿ ವೈಭವ್ ನೀಡಿದ ತಿರುಗೇಟಿಗೆ ಹೆಚ್ಚಿನ ತೃಪ್ತಿ ಸಿಕ್ಕಿರಬಹುದು.
ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪೂರ್ವ ವಲಯ
ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡ, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಥಮ ಇನಿಂಗ್ಸ್ನಲ್ಲಿ ಭರ್ಜರಿ 708 ರನ್ ಕಲೆಹಾಕಿ ದಕ್ಷಿಣ ವಲಯದ ಮೇಲೆ ಭಾರೀ ಒತ್ತಡ ಹೇರಿತು. ಪೂರ್ವ ವಲಯದ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಲು ದಕ್ಷಿಣ ಭಾಗದ ಬ್ಯಾಟರ್ಗಳು ಪರದಾಡಿದರು. ಮೊಹಮ್ಮದ್ ಶಮಿ ಮತ್ತು ಮುಖೇಶ್ ಕುಮಾರ್ ನಿಯಮಿತವಾಗಿ ವಿಕೆಟ್ಗಳನ್ನು ಕಬಳಿಸುತ್ತಾ ಸೌತ್ ಝೋನ್ ಬ್ಯಾಟಿಂಗ್ ಕ್ರಮಾಂಕಕ್ಕೆ ಆಘಾತ ನೀಡಿದರು.
🚨 FUNNY CONVERSATION BETWEEN TILAK VERMA & VAIBHAV SOORYAVANSHI 🚨
— lndian Sports Network (@IS_Netwrk29) September 6, 2026
Tilak Verma Said 🗣️: You’re still too young. There’s no way you can score runs in this match because I’m the captain of the opposition team.
Vaibhav Sooryavanshi Said 🗣️: Bring any bowler you want I’ll smash…
ಪಿಚ್ ಬ್ಯಾಟಿಂಗ್ಗೆ ಅನುಕೂಲಕರವಾಗಿಯೇ ಇದ್ದರೂ ಸೌತ್ ಝೋನ್ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. ಅಂತಿಮವಾಗಿ ದಕ್ಷಿಣ ವಲಯ ತಂಡ 336 ರನ್ಗಳಿಗೆ ಆಲ್ಔಟ್ ಆಯಿತು. ತಿಲಕ್ ವರ್ಮಾ ಸೌತ್ ಝೋನ್ ಪರ ಪ್ರತಿರೋಧ ತೋರಿದರು. ಆದರೆ ಈಸ್ಟ್ ಝೋನ್ ದುಲೀಪ್ ಟ್ರೋಫಿ ಫೈನಲ್ನಲ್ಲಿ ಗೆಲುವಿನತ್ತ ವೇಗವಾಗಿ ಸಾಗುತ್ತಿದ್ದಂತೆ, ನಾಯಕ ತಿಲಕ್ ಅವರ ಹೋರಾಟ ಕೂಡ ಕಠಿಣ ಪರಿಸ್ಥಿತಿಗೆ ಸಿಲುಕಿತು.
😂 VAIBHAV SOORYAVANSHI SHARES A FUN MOMENT WITH TILAK VARMA! 🏏
— CricInformer (@CricInformer) September 9, 2026
A light-hearted moment on the field as Vaibhav Sooryavanshi playfully teased Tilak Varma and shared a laugh with him. 😄❤️
Vaibhav’s hilarious banter with Tilak was caught on camera! 📸🔥#DuleepTrophy
Image… pic.twitter.com/thTsdU5siv
ಮೊದಲ ದಿನ ತಿಲಕ್ ವರ್ಮಾ ವೈಭವ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು. ಆದರೆ ನಾಲ್ಕನೇ ದಿನ ಪಂದ್ಯ ಸಂಪೂರ್ಣವಾಗಿ ಈಸ್ಟ್ ಝೋನ್ ನಿಯಂತ್ರಣದಲ್ಲಿದ್ದಾಗ, 15 ವರ್ಷದ ವೈಭವ್ಗೆ ತಮ್ಮ ಭಾರತ ತಂಡದ ಸಹ ಆಟಗಾರನಿಗೆ ಅವರದ್ದೇ ರೀತಿಯಲ್ಲಿ ತಿರುಗೇಟು ನೀಡಲು ಸೂಕ್ತ ಅವಕಾಶ ದೊರೆಯಿತು.