IND vs ENG: ಶುಭಮನ್ ಗಿಲ್ ಶತಕ ಸಿಡಿಸುತ್ತಿದ್ದಂತೆ ಯೂಟರ್ನ್ ಹೊಡೆದ ಸಂಜಯ್ ಮಾಂಜ್ರೇಕರ್!
Sanjay Manjrekar on Shubman Gill: ಭಾರತ ತಂಡದ ನಾಯಕ ಶುಭಮನ್ ಗಿಲ್ ಶತಕ ಸಿಡಿಸಿದ ಬಳಿಕ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಯೂಟರ್ಬ್ ಹೊಡದಿದ್ದಾರೆ. ಆರಂಭದಲ್ಲಿ ಗಿಲ್ಗೆ ನಾಯಕತ್ವ ನೀಡಿದ್ದ ಬಗ್ಗೆ ಮಾಂಜ್ರೇಕರ್ ಟೀಕಿಸಿದ್ದರು. ಆದರೆ, ಇದೀಗ ಅವರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡಿದ್ದಾರೆ.

ಶುಭಮನ್ ಗಿಲ್ಗೆ ಸಂಜಯ್ ಮಾಂಜ್ರೇಕರ್ ಮೆಚ್ಚುಗೆ.

ಲೀಡ್ಸ್: ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಶುಭಮನ್ ಗಿಲ್ಗೆ (Shubman Gill) ನೀಡಿದ ಬಳಿಕ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay manjrekar) ಟೀಕಿಸಿದ್ದರು ಹಾಗೂ ಟೆಸ್ಟ್ ನಾಯಕತ್ವವನ್ನು ಗಿಲ್ ಬದಲಿಗೆ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾಗೆ (Jasprit Bumrah) ನೀಡಬೇಕಾಗಿತ್ತು ಎಂದು ಹೇಳಿದ್ದರು. ಆದರೆ, ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs ENG) ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಕಾಮೆಂಟರಿ ಮಾಡುತ್ತಿದ್ದ ಸಂಜಯ್ ಮಾಂಜ್ರೇಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಗಿಲ್ ಅವರ ಮನೋ ಸ್ವಭಾವ ಮತ್ತು ಅವರು ವಿಕಸನಗೊಳ್ಳುತ್ತಿರುವ ತಂತ್ರಗಾರಿಕೆಯನ್ನು ಮೆಚ್ಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್ ತಂಡಕ್ಕೆ ನಾಯಕನಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ವೇಳೆ ಶುಭಮನ್ ಗಿಲ್ಗೆ ಟೆಸ್ಟ್ ನಾಯಕತ್ವವನ್ನು ನೀಡಲಾಗಿತ್ತು. ಈ ವೇಳೆ ಸಂಜಯ್ ಮಾಂಜ್ರೇಕರ್ ಇದನ್ನು ವಿರೋಧಿಸಿದ್ದರು ಹಾಗೂ ಟೆಸ್ಟ್ ನಾಯಕತ್ವಕ್ಕೆ ಜಸ್ಪ್ರೀತ್ ಬುಮ್ರಾ ಸೂಕ್ತ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
IND vs ENG: ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಟಾಪ್ 5 ಬ್ಯಾಟರ್ಸ್!
ಆದರೆ, ಗಿಲ್ಗೆ ಟೆಸ್ಟ್ ನಾಯಕತ್ವ ನೀಡಿದ ಬಳಿಕ ಮಾತನಾಡಿದ್ದ ಜಸ್ಪ್ರೀತ್ ಬುಮ್ರಾ, ಬಿಸಿಸಿಐನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ತಾವೇ ನಾಯಕತ್ವದ ರೇಸ್ನಿಂದ ಹೊರ ಬಂದಿರುವುದಾಗಿ ಹೇಳಿಕೊಂಡಿದ್ದರು. ಏಕೆಂದರೆ ಗಾಯದ ಸಮಸ್ಯೆಯಿಂದ ಅವರು ಪೂರ್ಣ ಪ್ರಮಾಣದಲ್ಲಿ ತಂಡಕ್ಕೆ ಲಭ್ಯರಾಗಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಂಡ ತಿಳಿಸಿದೆ ಎಂದಿದ್ದರು. ಇದೀಗ ಶುಭಮನ್ ಗಿಲ್ ಅವರು ಟೆಸ್ಟ್ ನಾಯಕತ್ವ ತಮ್ಮ ಮೊದಲನೇ ಪಂದ್ಯದಲ್ಲಿ ಶತಕ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
HUNDRED from the Skipper! 💯
— BCCI (@BCCI) June 20, 2025
First match as Test Captain and Shubman Gill has scored a sublime century! 👏👏
His 6th Ton in Test cricket 🙌
Updates ▶️ https://t.co/CuzAEnBkyu#TeamIndia | #ENGvIND | @ShubmanGill pic.twitter.com/CVTE7wK2g0
ಯೂಟರ್ನ್ ಹೊಡೆದ ಸಂಜಯ್ ಮಾಂಜ್ರೇಕರ್
"ಅವರನ್ನು ನಾಯಕನನ್ನಾಗಿ ನೇಮಕ ಮಾಡಿದ್ದ ಸಮಯಕ್ಕೆ ನಾನು ಹಿಂತಿರುಗಿ ಹೋಗುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅದರ ವಿರುದ್ಧ ಇದ್ದೆ. ಭವಿಷ್ಯವನ್ನು ಹೆಚ್ಚು ಯೋಚಿಸದೆ ಜಸ್ಪ್ರೀತ್ ಬುಮ್ರಾ ಟೆಸ್ಟ್ ತಂಡದ ನಾಯಕತ್ವಕ್ಕೆ ಸೂಕ್ತ ಹಾಗೂ ತರ್ಕಬದ್ದ ಆಯ್ಕೆ ಎಂದು ನಾನು ಯೋಚನೆ ಮಾಡಿದ್ದೆ. ಇದು ಸರಿಯಾದ ನಿರ್ಧಾರ ಎಂದು ನಾನು ಅಂದು ಯೋಚನೆ ಮಾಡಿರಲಿಲ್ಲ. ಆದರೆ, ಶುಭಮನ್ ಗಿಲ್ ವೈಫಲ್ಯದ ನಾಯಕರಾಗುತ್ತಾರಾ? ಇಲ್ಲವೇ ಇಲ್ಲ," ಎಂದು ಸಂಜಯ್ ಮಾಂಜ್ರೇಕರ್ಹೇಳಿದ್ದಾರೆ.
IND vs ENG: ಕೆಎಲ್ ರಾಹುಲ್ರನ್ನು ಶ್ಲಾಘಿಸಿ, ವಿರಾಟ್ ಕೊಹ್ಲಿಯನ್ನು ಟೀಕಿಸಿದ ಸಂಜಯ್ ಮಾಂಜ್ರೇಕರ್!
ಶುಭಮನ್ ಗಿಲ್ ಬ್ಯಾಟಿಂಗ್ಗೆ ಮಾಂಜ್ರೇಕರ್ ಮೆಚ್ಚುಗೆ
"ಮನೋಧರ್ಮದ ದೃಷ್ಟಿಯಿಂದ, ಅವರು ನಾಯಕತ್ವದ ಆತಂಕವನ್ನು ತಮ್ಮ ಬ್ಯಾಟಿಂಗ್ಗೆ ತರುವುದಿಲ್ಲ ಎಂದು ನಮಗೆ ತಿಳಿದಿತ್ತು. ಅದು ಯಾವಾಗಲೂ ಸ್ಪಷ್ಟವಾಗಿತ್ತು. ವಿಶೇಷವಾಗಿ ವಿದೇಶಿ ಕಂಡೀಷನ್ಸ್ನಲ್ಲಿ ಅವರು ಇನ್ನೂ ವಿಕಸನಗೊಳ್ಳುತ್ತಿದ್ದಾರೆ ಎಂಬುದು ಒಂದೇ ಕಳವಳವಾಗಿತ್ತು. ಆದರೆ ಇಂದು, ಅವರು ವಿದೇಶಿ ನೆಲದಲ್ಲಿ ಶತಕ ಗಳಿಸುವುದನ್ನು ತಡೆಯುತ್ತಿದ್ದ ಪ್ರಮುಖ ತಂತ್ರವನ್ನು ಸರಿ ಮಾಡಿಕೊಂಡಿದ್ದಾರೆ. ಹೌದು, ಪಿಚ್ ಉತ್ತಮವಾಗಿತ್ತು ಮತ್ತು ಬೌಲಿಂಗ್ ತುಂಬಾ ಸವಾಲಿನದ್ದಾಗಿರಲಿಲ್ಲ. ಆದರೆ ಆ ತಾಂತ್ರಿಕ ನ್ಯೂನತೆಗಳನ್ನು ನಿವಾರಿಸಿದ ನಂತರ ವಿಶೇಷವಾಗಿ ಅವರ ಮನೋಧರ್ಮ ಒಂದು ಶಕ್ತಿಯಾಗಿ ಎದ್ದು ಕಾಣುತ್ತಿದೆ," ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.