ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎರಡು ತಿಂಗಳ ಹಿಂದೆ ತೆಂಡೂಲ್ಕರ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಪೃಥ್ವಿ ಶಾ!

ಭಾರತದ ಸ್ಪೋಟಕ ಬ್ಯಾಟಿಂಗ್‌ ಪ್ರತಿಭೆ ಪೃಥ್ವಿ ಶಾ ಸದ್ಯ ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಇತ್ತೀಚೆಗೆ ನ್ಯೂಸ್‌18 ಸಂದರ್ಶನದಲ್ಲಿ ಭಾಗವಹಿಸಿದ್ದರು ಹಾಗೂ ಅಲ್ಲಿ ಅವರು ಹಲವು ಪ್ರಮುಖ ಸಂಗತಿಗಳನ್ನು ಬಹಿರಂಗಪಡಿಸಿದ್ದರು. ಅದರಂತೆ ತಮಗೆ ಇತ್ತೀಚೆಗೆ ಸಚಿನ್‌ ತೆಂಡೂಲ್ಕರ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ್ದಾರೆ.

ನನ್ನ ಪಯಣದ ಬಗ್ಗೆ ಸಚಿನ್‌ ಸರ್‌ಗೆ ಚನ್ನಾಗಿ ಗೊತ್ತು: ಪೃಥ್ವಿ ಶಾ!

ಸಚಿನ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಪೃಥ್ವಿ ಶಾ.

Profile Ramesh Kote Jun 27, 2025 7:19 PM

ನವದೆಹಲಿ: ಭಾರತ ತಂಡಕ್ಕೆ (India) ಕಮ್‌ಬ್ಯಾಕ್‌ ಮಾಡುವ ಹಾದಿಯಲ್ಲಿರುವ ಸ್ಪೋಟಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ(Prithvi Shah) ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಇತ್ತೀಚೆಗೆ ನ್ಯೂಸ್‌ 18 ವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ್ದರು ಹಾಗೂ ತಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿನ ಕೆಲ ಪ್ರಮುಖ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಇತ್ತೀಚೆಗೆ ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar) ನೀಡಿದ್ದ ಮಹತ್ವದ ಸಲಹೆಯನ್ನು ಇದೀಗ ಪೃಥ್ವಿ ಶಾ ಬಹಿರಂಗಪಡಿಸಿದ್ದಾರೆ ಹಾಗೂ ನನ್ನ ಪಯಣದ ಬಗ್ಗೆ ಸಚಿನ್‌ ಸರ್‌ಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

2024-25ರ ಸಾಲಿನ ದೇಶಿ ಕ್ರಿಕೆಟ್‌ ಟೂರ್ನಿಯಾದ ರಣಜಿ ಟ್ರೋಫಿ ಟೂರ್ನಿಯ ಮುಂಬೈ ತಂಡದಿಂದ ಪೃಥ್ವಿ ಶಾ ಅವರನ್ನು ಕೈ ಬಿಡಲಾಯಿತು. ಇದರ ಬಳಿಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಅನ್‌ಸೋಲ್ಡ್‌ ಆಗಿದ್ದರು.

ತಮ್ಮ ಕಠಿಣ ದಿನಗಳಲ್ಲಿ ರಿಷಭ್‌ ಪಂತ್‌ ಬಿಟ್ರೆ ಬೇರೆ ಯಾರೂ ಕರೆ ಮಾಡಿರಲಿಲ್ಲ: ಪೃಥ್ವಿ ಶಾ!

ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಹಾಗೂ ಪೃಥ್ವಿ ಶಾ ಬಾಲ್ಯದ ಸ್ನೇಹಿತರು. ಶಾಲಾ ದಿನಗಳಿಂದಲೂ ಇವರು ಜೊತೆಯಲ್ಲಿ ಕ್ರಿಕೆಟ್‌ ಆಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಸಚಿನ್‌ ತೆಂಡೂಲ್ಲರ್‌ ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನು ಆರಂಭಿಕ ಬ್ಯಾಟ್ಸ್‌ಮನ್‌ ರಿವೀಲ್‌ ಮಾಡಿದ್ದಾರೆ ಹಾಗೂ ಈ ವೇಳೆ ಬ್ಯಾಟಿಂಗ್‌ ದಿಗ್ಗಜ ನೀಡಿದ್ದ ಸಲಹೆಯನ್ನು ಕೂಡ ಮುಂಬೈ ಬ್ಯಾಟರ್‌ ಬಹಿರಂಗಪಡಿಸಿದ್ದಾರೆ.

ಸಚಿನ್‌ ಸರ್‌ಗೆ ನನ್ನ ಪಯಣದ ಬಗ್ಗೆ ಗೊತ್ತಿದೆ

ನ್ಯೂಸ್‌18 ಸಂದರ್ಶನದಲ್ಲಿ ಭಾಗವಹಿಸಿದ್ದ ಪೃಥ್ವಿ ಶಾ, "ನನ್ನ ಪಯನದ ಬಗ್ಗೆ ಸಚಿನ್‌ ಸರ್‌ಗೂ ಗೊತ್ತಿದೆ. ನಾನು ಮತ್ತು ಅರ್ಜುನ್‌ 8-9 ವರ್ಷಗಳಿಂದಲೂ ಸ್ನೇಹಿತರು. ನಾವಿಬ್ಬರೂ ಜೊತೆಯಾಗಿ ಆಡಿದ್ದೇವೆ ಹಾಗೂ ಜೊತೆಯಲ್ಲಿ ಬೆಳೆದಿದ್ದೇವೆ. ಸಚಿನ್‌ ಸರ್‌ ಕೂಡ ಕೆಲವೊಮ್ಮೆ ನಮ್ಮ ಜೊತೆ ಇದ್ದರು. ಅವರು ನನ್ನನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡು ತಿಂಗಳ ಹಿಂದೆ. ಅವರು ಎಂಐಜಿನಲ್ಲಿ ಅಭ್ಯಾಸ ನಡೆಸುತ್ತಿದ್ದರು ಹಾಗೂ ನಾನು ಕೂಡ ಅಲ್ಲೇ ಇದ್ದೆ. ಈ ವೇಳೆ ನಾನು ಅವರೊಂದಿಗೆ ಮಾತನಾಡಿದ್ದೆ. ಸಂಗತಿಗಳು ಹದಗೆಟ್ಟು ನೀವು ದೂರ ಹೋದಾಗ, ನಿಮ್ಮೊಳಗೆ ಒಂದು ಕಿಡಿಯನ್ನು ಬೆಳಗಿಸುವ ಆ ಮಾರ್ಗದರ್ಶಕ ನಿಮಗೆ ಬೇಕಾಗುತ್ತಾರೆ, ” ಎಂದು ಹೇಳಿದ್ದಾರೆ.

Prithvi Shaw: ಸಹವಾಸ ದೋಷದಿಂದಾಗಿ ಕ್ರಿಕೆಟ್ ವೃತ್ತಿ ಬದುಕು ಹಾಳು ಮಾಡಿಕೊಂಡೆ; ಪೃಥ್ವಿ ಶಾ

ನಾನು ನಿಮ್ಮನ್ನು ನಂಬುತ್ತೇನೆ ಪೃಥ್ವಿ

"ಅವರು (ಸಚಿನ್‌ ತೆಂಡೂಲ್ಕರ್‌) ಇನ್ನೂ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು 'ಪೃಥ್ವಿ, ನಾನು ಇನ್ನೂ ನಿನ್ನ ಮೇಲೆ ನಂಬಿಕೆ ಇಡುತ್ತೇನೆ ಮತ್ತು ನಾನು ಹಾಗೆ ಮುಂದುವರಿಯುತ್ತೇನೆ' ಎಂದು ಹೇಳಿದ್ದರು. ಏಕೆಂದರೆ ಅವರು ನಾನು ಬೆಳೆಯುವುದನ್ನು ನೋಡಿದ್ದಾರೆ. ಇಂದಿಗೂ ಅವರು ನನಗೆ, ಹಿಂದಿನಂತೆಯೇ ಅದೇ ಟ್ರ್ಯಾಕ್‌ನಲ್ಲಿ ಹಿಂತಿರುಗಿ ಎಂದು ಹೇಳುತ್ತಾರೆ. ಮುಂದಿನ 13-14 ವರ್ಷಗಳಲ್ಲಿ ಎಲ್ಲವೂ ಸಾಧ್ಯ. ಆದ್ದರಿಂದ ಅವರು ನನ್ನ ಮೇಲೆ ನಂಬಿಕೆ ಇಡುತ್ತಾರೆ ಮತ್ತು ಅದು ಬಹಳಷ್ಟು ಅರ್ಥವನ್ನು ನೀಡುತ್ತದೆ," ಎಂದು ಅವರು ತಿಳಿಸಿದ್ದಾರೆ.

ಮುಂಬೈ ತಂಡವನ್ನು ತೊರೆಯಲು ಅಸಲಿ ಕಾರಣ ಬಹಿರಂಗಪಡಿಸಿದ ಪೃಥ್ವಿ ಶಾ!

ಮುಂಬೈ ತಂಡ ತೊರೆದ ಪೃಥ್ವಿ

ಮುಂದಿನ ಆವೃತ್ತಿಯ ದೇಶಿ ಕ್ರಿಕೆಟ್‌ ಅನ್ನು ಪೃಥ್ವಿ ಶಾ ಬೇರೆ ರಾಜ್ಯದ ತಂಡದ ಪರ ಆಡಲಿದ್ದಾರೆ. ಹಾಗಾಗಿ ಅವರು ಈಗಾಗಲೇ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ಗೆ ಎನ್‌ಓಸಿ ಕೋರಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. 2021ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಅವರು ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಟೀಮ್‌ ಇಂಡಿಯಾದಿಂದ ದೂರ ಉಳಿದಿದ್ದಾರೆ.