ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 2nd Test: ದ್ವಿತೀಯ ಟೆಸ್ಟ್‌ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಅವರಿಗೆ ದ್ವಿತೀಯ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗಿದೆ. ಬುಮ್ರಾ ಹೊರಗುಳಿರೆ ಬೌಲಿಂಗ್‌ ವಿಭಾಗ ಮತ್ತಷ್ಟು ದುರ್ಬಲಗೊಳ್ಳಲಿದೆ. ಒಟ್ಟಾರೆ ಭಾರತಕ್ಕೆ ಈ ಬಾರಿ 11 ಆಯ್ಕೆಯ ಸಮಸ್ಯೆ ತಲೆದೂರಿದೆ.

ದ್ವಿತೀಯ ಟೆಸ್ಟ್‌ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ

Profile Abhilash BC Jun 26, 2025 9:29 AM

ಲಂಡನ್‌: ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ವೈಫಲ್ಯಕ್ಕೆ 11ರ ಬಳಗದ ಆಯ್ಕೆ ಎಡವಟ್ಟು ಕೂಡ ಕಾರಣವಾಗಿತ್ತು. ಹೀಗಾಗಿ ಜುಲೈ 2ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ(IND vs ENG 2nd Test) ಭಾರತ ತನ್ನ ಆಡುವ ಬಳಗದಲ್ಲಿ ಕನಿಷ್ಠ ಎರಡು ಬದಲಾವಣೆ ಮಾಡುವುದು ಖಚಿತವಾಗಿದೆ. ಚೈನಾಮನ್‌ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌(kuldeep yadav) ಮತ್ತು ಆಲ್‌ರೌಂಡರ್‌ ನಿತೀಶ್‌ ರೆಡ್ಡಿ(nithish reddy) ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ.

ಮೊದಲ ಟೆಸ್ಟ್‌ನಲ್ಲಿ ಏಕೈಕ ಸ್ಪಿನ್ನರ್‌ ಆಡಿಸುವಾಗ ರವೀಂದ್ರ ಜಡೇಜಾಗಿಂತ ಎಡಗೈ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ಉತ್ತಮ ಆಯ್ಕೆಯಾಗುತ್ತಿದ್ದರು. ಇನ್ನೊಂದೆಡೆ ನಾಲ್ಕನೇ ವೇಗಿಯಾಗಿ ಶಾರ್ದೂಲ್‌ ಠಾಕೂರ್‌ ಬದಲಿಗೆ ಆಲ್‌ರೌಂಡರ್‌ ಆಗಿರುವ ನಿತೀಶ್‌ ರೆಡ್ಡಿಯನ್ನು ಕಣಕ್ಕಿಳಿಸಬಹುದಿತ್ತು. ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ಮಾಡುವ ಸಾಮರ್ಥ್ಯ ಅವರು ಹೊಂದಿದ್ದಾರೆ. ಕಳೆದ ಆಸೀಸ್‌ ಪ್ರವಾಸದಲ್ಲಿ ಶತಕ ಕೂಡ ಬಾರಿಸಿ ಮಿಂಚಿದ್ದರು.

ಒಂದೊಮ್ಮೆ ಬೌಲಿಂಗ್‌ ವೈವಿಧ್ಯತೆ ಹೆಚ್ಚಿಸುವ ಯೋಚನೆಯಲ್ಲಿದ್ದರೆ ಆಗ ಶಾರ್ದೂಲ್‌ ಕೈಬಿಟ್ಟು ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ಗೆ ಅವಕಾಶ ನೀಡಬಹುದು. ಶಾರ್ದೂಲ್‌ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಉಪಯೋಗಕ್ಕೆ ಬರಲಿಲ್ಲ. 2ನೇ ಇನಿಂಗ್ಸ್‌ನಲ್ಲಿ ಸತತವಾಗಿ 2 ವಿಕೆಟ್‌ ಕಿತ್ತದ್ದು ಬಿಟ್ಟರೆ ಉಳಿದೆಡೆ ಅಷ್ಟಾಗಿ ಗಮನ ಸೆಳೆಯಲ್ಲಿಲ್ಲ. ಕ್ರಿಕೆಟ್‌ ತಜ್ಞರು ಕೂಡ ಶಾರ್ದೂಲ್‌ ಮತ್ತು ಜಡೇಜಾ ಕೈಬಿಟ್ಟರೆ ಒಳಿತು ಎಂದು ಸಲಹೆಯನ್ನು ನೀಡಿದ್ದಾರೆ.

ಇದನ್ನೂ ಓದಿ IND vs ENG: ಇಂಗ್ಲೆಂಡ್‌ 4-0 ಅಂತರದಲ್ಲಿ ಗೆಲ್ಲಬಹುದಾ? ಎಂದ ಮೈಕಲ್‌ ವಾನ್‌ಗೆ ಜಾಫರ್‌ ತಿರುಗೇಟು!

ಇನ್ನೊಂದೆಡೆ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಅವರಿಗೆ ದ್ವಿತೀಯ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗಿದೆ. ಬುಮ್ರಾ ಹೊರಗುಳಿರೆ ಬೌಲಿಂಗ್‌ ವಿಭಾಗ ಮತ್ತಷ್ಟು ದುರ್ಬಲಗೊಳ್ಳಲಿದೆ. ಒಟ್ಟಾರೆ ಭಾರತಕ್ಕೆ ಈ ಬಾರಿ 11 ಆಯ್ಕೆಯ ಸಮಸ್ಯೆ ತಲೆದೂರಿದೆ.