ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿರಾಮ
Suresh Gudaganavar Column: ತಲೆಕೂದಲಿನಲ್ಲಿ ದಾಖಲೆ !

ತಲೆಕೂದಲಿನಲ್ಲಿ ದಾಖಲೆ !

ಸ್ಮಿತಾ 14ನೇ ವಯಸ್ಸಿನವರೆಗೆ ಬಾಬ್ ಕಟ್ ಶೈಲಿಯನ್ನು ಹೊಂದಿದ್ದರೂ, 2012ರಲ್ಲಿ ತನ್ನ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಕೂದಲನ್ನು ಬೆಳೆಯಲು ಬಿಡಲು ನಿರ್ಧರಿಸಿದರು. ಸ್ಮಿತಾ ಸಾಮಾನ್ಯ ವಾಗಿ ವಾರಕ್ಕೆ ಎರಡು ಬಾರಿ ತನ್ನ ಕೂದಲನ್ನು ತೊಳೆಯುತ್ತಾರೆ. ಅವರು ಕೂದಲನ್ನು ತೊಳೆದು ಒಣಗಿಸುವ ಮೊದಲು 40-45 ನಿಮಿಷಗಳನ್ನು ಕಳೆಯುತ್ತಾರೆ. “ನಾನು ಒಂದು ಹಾಳೆಯನ್ನು ಕೆಳಗೆ ಇಡುತ್ತೇನೆ. ಅದರ ಮೇಲೆ ತನ್ನ ಹಾಸಿಗೆಯ ಮೇಲೆ ನಿಂತು ಕೂದಲನ್ನು ಉದ್ದವಾಗಿ ಬಿಡುತ್ತೇನೆ" ಎಂದು ಅವರು ಹೇಳುತ್ತಾರೆ

Raghavendra Rayalapadu Column: ಬದುಕು ಎಂದರೆ ಓದು ಬರಹ ಮಾತ್ರ ಅಲ್ಲ !

ಬದುಕು ಎಂದರೆ ಓದು ಬರಹ ಮಾತ್ರ ಅಲ್ಲ !

ಇಬ್ಬರೂ ವೃತ್ತಿಯಲ್ಲಿದ್ದುದರಿಂದ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಿದ್ದ ನಿಮಿತ್ತ ಮದು ವೆಗೆ ಹೆಚ್ಚಿನ ದಿನಗಳ ರಜೆ ಸಿಕ್ಕಿರಲಿಲ್ಲ. ಮದುವೆಯಾದ ಕೆಲವೇ ದಿನಗಳಿಗೆ ನಮ್ಮ ಕೆಲಸಗಳಿಗೆ ಹಾಜರಾದೆವು. ಕಾಲೇಜಿನ ವಸತಿ ನಿಲಯದಲ್ಲಿದ್ದ ನಾನು ವಾರಾಂತ್ಯದ ರಜೆಯಲ್ಲಿ ಅವರಿದ್ದೆ ಡೆಗೆ ಹೋಗಬಹುದಿತ್ತಷ್ಟೆ. ಪ್ರವಾಸದ ಉದ್ದೇಶಕ್ಕೆ ಹೆಚ್ಚು ರಜೆ ಹಾಕುವ ಅವಕಾಶವೂ ಇರಲಿಲ್ಲ.

Dr Niranjan Vanalli Column: ಏಪ್ರಿಲ್‌ ಹತ್ತು ಬಂತೆಂದರೆ

ಏಪ್ರಿಲ್‌ ಹತ್ತು ಬಂತೆಂದರೆ

ಅಧ್ಯಾಪಕರು ಮಕ್ಕಳಿಗೂ ಅವರ ಪಾಲಕರು ಬಂದರೆ ಅವರಿಗೂ ಮಕ್ಕಳ ಫಲಿತಾಂಶವನ್ನು ಹೇಳುತ್ತಾರೆ. ಅಂಕಪಟ್ಟಿಗಳನ್ನು ಕೊಡುತ್ತಾರೆ. ಕೆಲವರು ಖುಷಿಯಿಂದ ಕುಣಿದರೆ ಕೆಲವರು ಒಂದು ಅಂಕ ಕಡಿಮೆಯಾಗಿದ್ದರೂ ಭಾರೀ ಅನಾಹುತವಾದಂತೆ ಕೂಗಾಡುತ್ತಾರೆ. ಈಗ ಒಂಬತ್ತನೆ ತರಗತಿಯವರೆಗೂ ಮಕ್ಕಳನ್ನು ಫೈಲು ಮಾಡುವಂತಿಲ್ಲ. ಹೀಗಾಗಿ ರಿಸಲ್ಟಿನ ದಿನಕ್ಕೆ ಮೊದಲಿದ್ದ ಖದರಿಲ್ಲ.

ಮನುಕುಲದ ಮಾದರಿ ಹೆಣ್ಣು ಸುನೀತಾ !

ಕೊನೆಗೂ ಭೂಮಿಗೆ ಇಳಿದು ಬಂದ್ಯಾ ತಾಯಿ ಸುನೀತಾ?

ಗಗನಯಾನಿ, ಸಾಹಸಿ ಸುನೀತಾ ಅವರು, ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದ ಬಳಿಕ ನಾಸಾ ಸಂಸ್ಥೆಗೆ ಆಯ್ಕೆಯಾಗಿ ಕೈತುಂಬ ವೇತನ ಪಡೆದು ಹೇಗೋ ಸುಖ ವಾಗಿರಬಹು ದಿತ್ತಲ್ಲವೆ? ಆದರೆ ಮೊದಲಿನಿಂದಲೂ ಸಾಹಸಪ್ರವೃತ್ತಿಯವರಾದ ಅವರು ಬಾಹ್ಯಾಕಾಶಕ್ಕೆ ಗಗನಯಾತ್ರಿಯಾಗಿ ತೆರಳಲು ಹಿಂದೆಮುಂದೆ ಯೋಚಿಸದೆ ನಿರ್ಧಾರ ಕೈಗೊಂಡಾಗ, ನಾಸಾದ ಇತರ ವಿಜ್ಞಾನಿಗಳಿಗೇ ಆಶ್ಚರ್ಯವಾಗಿದ್ದಿರ ಬಹುದು. ಅವರ ಅಚಲ ಧೈರ್ಯ, ಸಾಹಸ, ಸ್ಥಿತಪ್ರಜ್ಞತೆ, ಪ್ರಸಂಗಾವ ಧಾನತೆ ಯಾವ ಗಂಡಸಿಗೂ ಕಮ್ಮಿ ಇಲ್ಲ; ಮಹಿಳಾ ಶಕ್ತಿಗೆ ಸುನೀತಾ ಅವರೊಂದು ರೂಪಕ. ಧೈರ್ಯ ಹೊಂದಿರುವ ಇಂತಹ ಕೆಲವರಿಂದಲೇ ನಾವಿವತ್ತು ಅತ್ಯಂತ ಆಧುನಿಕ ವೈಜ್ಞಾನಿಕ ಯುಗದಲ್ಲಿ ವಾಸಿಸುತ್ತಾ, ತಂತ್ರಜ್ಞಾನದ ಸವಲತ್ತುಗಳ ಫಲಗಳನ್ನು ಅನುಭವಿಸು ತ್ತಿದ್ದೇವೆ.

Narayana Yaji Column: ವಾಲ್ಮೀಕಿಗಿರಿಯಿಂದ ಹುಟ್ಟಿದ ರಾಮಾಯಣ ಮಹಾನದಿ

ವಾಲ್ಮೀಕಿಗಿರಿಯಿಂದ ಹುಟ್ಟಿದ ರಾಮಾಯಣ ಮಹಾನದಿ

ರಾಮನ ಕಲ್ಯಾಣ ಗುಣಗಳನ್ನು ಪ್ರತಿಪಾದಿಸುವ, ಸೀತೆಯ ಸಚ್ಛರಿತ್ರರೂಪವಾದ, ಪೌಲಸ್ತ್ಯ (ರಾವಣ) ವಧೆಯನ್ನು ನಿರೂಪಿಸುವ ರಾಮಾಯಣವೆನುವ ಮಹಾಕಾವ್ಯವನ್ನು ಚರಿತ ವ್ರತರು (ವಾಲ್ಮೀಕಿ) ರಚಿಸಿದರು. ರಾಮಾಯಣ ಪ್ರಾರಂಭವಾಗುವುದೇ ಪ್ರಪಂಚದಲ್ಲಿ ಆದರ್ಶ ಪುರುಷ ಅಥವಾ ಪರಿಪೂರ್ಣಗುಣಗಳುಳ್ಳ ವ್ಯಕ್ತಿ ನಿಜವಾಗಿಯೂ ಇದ್ದಾನೆಯೋ ಎನ್ನುವ ವಾಲ್ಮೀಕಿ ಮುನಿಗೆ ಸಂಶಯ ಹುಟ್ಟುವಲ್ಲಿಂದ.

ಯುಗಾದಿಯ ದಿನ ನಿಷ್ಕರ್ಷೆ

ಯುಗಾದಿಯ ದಿನ ನಿಷ್ಕರ್ಷೆ

ಭೂಮಿಯಲ್ಲಿ ನಿಂತು ನಾವು ನೋಡುವುದರಿಂದ ಭಾರತೀಯ ಪಂಚಾಂಗಕ್ಕೆ ಸೂರ್ಯನ ಚಲನೆ (ಇದು ವಾಸ್ತವದಲ್ಲಿ ಭೂಮಿಯ ಚಲನೆ ) ಮತ್ತು ಚಂದ್ರನ ಚಲನೆ ಎರಡೂ ಕೂಡ ಆಧಾರ ಬಿಂದುಗಳು. ಸೌರ ವರ್ಷದಲ್ಲಿ 365.26 ದಿನಗಳಿದ್ದರೆ ಚಾಂದ್ರ ವರ್ಷದಲ್ಲಿ 354.10 ದಿನಗಳಿವೆ. ಈ ವ್ಯತ್ಯಾಸ ಹಬ್ಬಗಳ ವ್ಯತ್ಯಾಸಕ್ಕೆ ಕೂಡ ಕಾರಣವಾಗುತ್ತದೆ.

ನವ ಯುಗದ ಆದಿ ಈ ಯುಗಾದಿ

ನವ ಯುಗದ ಆದಿ ಈ ಯುಗಾದಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ ಎಂದು ವರಕವಿ ಬೇಂದ್ರೆ ಹಾಡಿದರು; ಅದರಂತೆ, ನಮ್ಮೆಲ್ಲರ ಮನಸ್ಸಿನಲ್ಲಿ ಈ ಯುಗಾದಿಯು ಹೊಸ ಸಂತಸ ವನ್ನು ಮತ್ತು ಉತ್ಸಾಹವನ್ನು ತುಂಬಲಿ, ಬದುಕಿನ ಹೊಸ ಹೊಸ ಅಭಿಯಾನಗಳಿಗೆ ಸ್ಫೂರ್ತಿಯನ್ನು ತುಂಬಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು

Dr K S Chaithra Column: ಡಬ್ಬಾ ಕಾರ್ಟೆಲ್‌ !

ಡಬ್ಬಾ ಕಾರ್ಟೆಲ್‌ !

2025ರ ಫೆಬ್ರವರಿ ೨೮ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿರುವ ಹಿತೇಶ್ ಭಾಟಿಯಾ ನಿರ್ದೇಶಿಸಿ ರುವ ಏಳು ಸಂಚಿಕೆಗಳ ವೆಬ್ ಸರಣಿ ಡಬ್ಬಾ ಕಾರ್ಟೆಲ್! ಮುಖ್ಯ ಪಾತ್ರದಲ್ಲಿ ಶಬಾನ ಆಜ್ಮಿ ಜ್ಯೋತಿಕಾ, ಶಾಲಿನಿ ಪಾಂಡೆ, ಗಜರಾಜ್ ರಾವ್ ಮುಂತಾದವರಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ ಸಮಸ್ಯೆಯನ್ನು ತೋರಿಸುವ ವಿಭಿನ್ನ ಕಥಾವಸು; ಮುಂಬೈನ ಡಬ್ಬಾ ವ್ಯವಸ್ಥೆ ಪ್ರಸಿದ್ಧವಾದದ್ದು. ಬೆಳಿಗ್ಗೆ ಬೇಗನೆದ್ದು ದೂರದೂರದ ಆಫೀಸು- ಕಾಲೇಜುಗಳಿಗೆ ತೆರಳುವ ಉದ್ಯೋಗಿ/ ವಿದ್ಯಾರ್ಥಿಗಳು ಹೊತ್ತಿಗೆ ಸರಿಯಾಗಿ ಬಿಸಿಬಿಸಿಯಾಗಿ ಊಟವನ್ನು ಮಾಡಲು ಡಬ್ಬಾಗಳ ಮೊರೆ ಹೋಗುವುದು ಸಾಮಾನ್ಯ.

Sandhya Hegde Column: ಪಾದುಕಾ ಪುರಾಣ !

ಪಾದುಕಾ ಪುರಾಣ !

ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಅಂದು ಅಮ್ಮ, ನಮ್ಮ ಎರಡೂ ಜನ ಮಕ್ಕಳಿಗೂ ಶಾಲೆಗೆ ರಜೆ ಹಾಕಿಸಿ ಎಲ್ಲಿಗೋ ಕರೆದುಕೊಂಡು ಹೋಗು ತ್ತೇನೆಂದು ಘೋಷಿಸಿದ್ದರು. ಅಮ್ಮ ಬೆಳಿಗ್ಗೆ ಎಷ್ಟು ಗಂಟೆಗೆ ಎದ್ದಿದ್ದರೋ ಗೊತ್ತಿಲ್ಲ. ಇವತ್ತಂತೂ ನಮ್ಮನ್ನು 6.00 ಗಂಟೆಗೆಲ್ಲ ಎಬ್ಬಿಸಿದ್ದರು. ಇನ್ನೂ ನಸುಕು ಹರಿದಿರಲಿಲ್ಲ. ಬಚ್ಚಲು ಮನೆ ಹಂಡೆಯಲ್ಲಿ ಬಿಸಿನೀರು ಕಾಯುತ್ತಿತ್ತು. ಅಂತೂ ನಮ್ಮ ಮೈ ಬಿಸಿ ನೀರಿನ ಹಿತವನ್ನು ಅನುಭವಿಸಲು ಸಾಧ್ಯ ವಾಗುವುದಕ್ಕೆ ಮುನ್ನ ಸ್ನಾನವೇ ಮುಗಿದು ಹೋಗಿತ್ತು.

RSS: ರಾಷ್ಟ್ರೀಯ ಪುನರ್‌ ನಿರ್ಮಾಣದ ಆಂದೋಲನ

ನೂರನೇ ವರ್ಷದಲ್ಲಿ ಆರ್‌.ಎಸ್.ಎಸ್

’ಸಂಘವು ಯಾರನ್ನೂ ವಿರೋಧಿಸುವುದರಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ಸಂಘದ ಕೆಲಸವನ್ನು ವಿರೋಧಿಸುವ ಯಾರೇ ಆದರೂ, ಒಂದಲ್ಲಾ ಒಂದು ದಿನ ಸಂಘದ ಅಂಗಳವನ್ನು ಪ್ರವೇಶಿಸುತ್ತಾರೆ ಎಂಬ ವಿಶ್ವಾಸ ಹೊಂದಿದೆ. ಈಚಿನ ವಿದ್ಯಮಾನವಾದ ಹವಾಮಾನ ಬದಲಾವಣೆಯಿಂದ ಮೊದಲು ಗೊಂಡು, ಹಿಂಸಾತ್ಮಕ ಸಂಘರ್ಷಗಳವರೆಗೆ ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸನ್ನಿವೇಶದಲ್ಲಿ, ಭಾರತದ ಪ್ರಾಚೀನ ಮತ್ತು ಅನುಭವಾತ್ಮಕ ಜ್ಞಾನವು, ಈ ಸವಾಲುಗಳಿಗೆ ಪರಿಹಾರ ಗಳನ್ನು ಒದಗಿಸುವಲ್ಲಿ ಅತ್ಯಂತ ಸಮರ್ಥವಾಗಿದೆ. ಭಾರತ ಮಾತೆಯ ಪ್ರತಿಯೊಂದು ಮಗುವೂ ತನ್ನ ಕರ್ತವ್ಯವನ್ನು ಅರಿತುಕೊಂಡು ಇತರರೂ ಅನುಕರಿಸಲು ಪ್ರೇರೇ ಪಿಸುವ ದೇಶೀಯ ಮಾದರಿಯನ್ನು ನಿರ್ಮಿಸಲು ಕೊಡುಗೆ ನೀಡಿದಾಗ ಈ ಬೃಹತ್, ಆದರೆ ಅನಿವಾರ್ಯವಾದ ಕಾರ್ಯ ಸಾಧ್ಯವಾಗುತ್ತದೆ.’

AI: ಎ ಐ ಹೊರಟಿದೆ ಎಲ್ಲಿಗೆ ?

ಎ ಐ ಹೊರಟಿದೆ ಎಲ್ಲಿಗೆ ?

ವಿದೇಶಗಳಲ್ಲಿ ಇದರ ಇಂಗ್ಲೀಷ್ ವರ್ಷನ್ ಕೇಳಿದವರಿಗೆ ಮೋದಿಯವರು ಸೊಗಸಾದ ಇಂಗ್ಲಿಷ್‌ ನಲ್ಲಿ ಮಾತನಾಡುತ್ತಿರುವುದು ಕಂಡುಬಂತು. ಈ ರೀತಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವುದು ಹೊಸತಲ್ಲ. ಆದರೆ ಈ ಪಾಡ್ ಕ್ಯಾಸ್ಟ್ ನಲ್ಲಿ ಉಪಯೋಗಿಸಿದ ಕೃತಕ ಬುದ್ಧಿ ಮತ್ತೆ ಆಧರಿಸಿದ ತಂತ್ರಜ್ಞಾನ ಮೇಲ್ಮಟ್ಟದ್ದಾಗಿತ್ತು.

ಗುಜರಾತಿನಲ್ಲಿ ಮಹಿಳಾ ಸಬಲೀಕರಣ

ಗುಜರಾತಿನಲ್ಲಿ ಮಹಿಳಾ ಸಬಲೀಕರಣ

ಪ್ರದೀಪಕುಮಾರ ಎಂಬ ಶಿಲ್ಪಿ ನಿರ್ಮಿಸಿದ ಒಂದು ಅರ್ಥಪೂರ್ಣ ಶಿಲ್ಪವು, ವ್ಯಾಲಿ ಆಫ್ ಫ್ಲವರ‍್ಸ್‌ಗೆ ಸ್ವಾಗತಿಸುತ್ತದೆ. ವಿವಿಧ ವಿರೋಧಾತ್ಮಕ ವಿಚಾರಗಳನ್ನು ಈ ಶಿಲ್ಪವು ಪ್ರದರ್ಶಿಸುತ್ತದೆ ಎಂದು ಅಲ್ಲಿದ್ದ ಫಲಕದ ಮೇಲೆ ಬರೆಯಲಾಗಿದೆ. ವಿವಿಧ ಪ್ರಕಾರದ ಅಂದ ಚೆಂದದ ಹೂಗಳು, ವಿವಿಧ ಆಕಾರದಲ್ಲಿ ಕತ್ತರಿಸಿದ ಬಳ್ಳಿಗಳು ಇಲ್ಲಿನ ವಿಶೇಷ. ಇದರ ಕೊನೆಯಲ್ಲಿ ಏಕತಾ ಪ್ರತಿಮೆ ಕಂಡು ಬರುತ್ತದೆ.

Dr S Shishupala Column: ಹಾಲು ಉತ್ಪಾದಿಸುವ ಹಕ್ಕಿಗಳು

ಹಾಲು ಉತ್ಪಾದಿಸುವ ಹಕ್ಕಿಗಳು

ಹೆಚ್ಚಿನ ಹಕ್ಕಿಗಳಲ್ಲಿ ಗಂಡು ವೈವಿಧ್ಯಮಯ ವರ್ಣಗಳಿಂದ ಕೂಡಿದ್ದು ವಿಶೇಷವಾಗಿ ತನ್ನ ಸಂಗಾತಿ ಯನ್ನು ಆಕರ್ಷಿಸಲು ಸಹಕಾರಿಯಾಗಿವೆ. ಕೆಲವು ಪಕ್ಷಿ ಪ್ರಭೇದಗಳಲ್ಲಿ ಗಂಡು-ಹೆಣ್ಣುಗಳ ವರ್ಣ ಸಂಯೋಜನೆಯಲ್ಲಿ ವ್ಯತ್ಯಾಸ ಕಾಣಿಸದು. ಬಿಳಿ, ಕಪ್ಪು, ಕೆಂಪು, ಹಳದಿ, ನೀಲಿ, ಹಸಿರು ಮುಂತಾದ ಬಣ್ಣ ಗಳ ವಿಶಿಷ್ಟ ಮಿಶ್ರಣ ಹಕ್ಕಿಗಳಲ್ಲಿ ಕಾಣಬಹುದು.

Kaggere Prakash Column: ಸೈನಿಕರ ಕಥೆಗಳು

ಸೈನಿಕರ ಕಥೆಗಳು

ನಮ್ಮ ದೇಶದ ಸೈನ್ಯ ಕಂಟೋನ್ಮೆಂಟ್‌ಗಳು (ದಂಡು ಪ್ರದೇಶ) ಹೆಚ್ಚಾಗಿ ಉತ್ತರ ಭಾರತದಲ್ಲೇ ವ್ಯಾಪಿಸಿ ಕೊಂಡಿವೆ. ಕರ್ನಾಟಕದ ಬೆಂಗಳೂರು, ಬೆಳಗಾವಿ ನಗರ ಪ್ರದೇಶಗಳಲ್ಲಿ ಮಿಲಿಟರಿ ತರಬೇತಿ ಕೇಂದ್ರಗಳೂ ಹೊರವಲಯದಲ್ಲೇ ಇವೆ. ಆ ವಿಶಾಲ ಸೇನಾನೆಲೆಗಳಿಗೆ ಸುರಕ್ಷತಾ ಕಾರಣಗಳಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುವುದಿಲ್ಲ.

N S Sridharamurthy Column: ನಮ್ಮ ಚಾಮಯ್ಯ ಮೇಷ್ಟ್ರು

ನಮ್ಮ ಚಾಮಯ್ಯ ಮೇಷ್ಟ್ರು

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೆ ಘನತೆ ತಂದು ಕೊಟ್ಟು, ಹಿರಿತನಕ್ಕೆ ಭಾಷ್ಯ ಬರೆದು ‘ನಾಗರ ಹಾವು’ ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವವರು ಕೆ.ಎಸ್.ಅಶ್ವಥ್. ಪೋಷಕ ನಟ ಪಾತ್ರಗಳಿಗೆ ಅವರು ಜೀವತುಂಬುವ ಪರಿ ಯಾವ ರೀತಿ ಇರುತ್ತಿತ್ತೆಂದರೆ, ಅವರ ಅಭಿನಯದ ಎದುರು ಕೆಲವು ಬಾರಿ ಮುಖ್ಯ ನಟನೇ ಸಪ್ಪೆ ಎನಿಸುತ್ತಿದ್ದರು! ಜತೆಗೆ, ಕೆ.ಎಸ್. ಅಶ್ವಥ್ ಅವರು ಪೋಷಕನಟ ನಾಗಿ ಅಭಿನಯಿಸಿದರು, ಎಂದರೆ, ನಾಯಕ ನಟನ ವರ್ಚಸ್ಸು ಹೆಚ್ಚು ತ್ತಿತ್ತು. ಹಲವು ಚಲನಚಿತ್ರಗಳ ಯಶಸ್ಸಿಗೆ ಪೋಷಕನಟರಾಗಿ ಕೆ.ಎಸ್.ಅಶ್ವಥ್ ಅವರ ಮನೋಜ್ಞ ಅಭಿನಯದ ಕೊಡುಗೆ ಅಪಾರ.

B K Meenakshi Column: ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !

ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !

ಭೈರಪ್ಪನವರ ಆತ್ಮಕಥೆಯಲ್ಲಿ ಬರುವ ವ್ಯಕ್ತಿಗಳು, ಗೌರಮ್ಮನವರ ಬಗ್ಗೆ, ಭೈರಪ್ಪನವರ ಕಾದಂ ಬರಿಗಳ ಬಗ್ಗೆ ಅವರಿಗೆ ಎಷ್ಟು ಮಾತಾಡಿದರೂ ಸಾಲದು, ನಮಗೂ ಎಷ್ಟು ಕೇಳಿದರೂ ಇನ್ನೂ ಇನ್ನೂ ಕೇಳುತ್ತಲೇ ಇರುವಾಸೆ. ಆ ದಿನವಂತೂ ಭೈರಪ್ಪನವರು ಜನಾನುರಾಗಿ! ಪ್ರತಿಯೊಬ್ಬರ ಬಗ್ಗೆಯೂ ವಿವರಗಳು ಬೇಕು, ಅವರೊಂದಿಗೆ ಮಾತುಕತೆಯಾಡಲೇ ಬೇಕು, ಊರವರ ಪರಿಸರ ಮನೆಗಳನ್ನು ಸ್ವತಃ ವೀಕ್ಷಿಸಲೇ ಬೇಕು.

Geetha Kundapura Column: ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

ಅಪರೂಪದ ಕೆತ್ತನೆಗಳು ಅಸಾಧಾರಣ ವಾಸ್ತು

ಭಾರತೀಯ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ಪರಂಪರೆಗೆ ಉತ್ತಮ ಉದಾಹರಣೆಯಂತಿರುವ ಕೊನಾರ್ಕ್ ಸೂರ್ಯ ದೇವಾಲಯವನ್ನು ನೋಡಬೇಕೆನ್ನುವುದು ಬಹಳ ವರ್ಷಗಳ ಹಂಬಲ ವಾಗಿತ್ತು. 2025ರ ಫೆಬ್ರವರಿಯಲ್ಲಿ ಎಲ್ಲರೂ ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೊರಟರೆ ನಾವು ಕೊನಾರ್ಕ್‌ ನತ್ತ ಹೊರಟೆವು

G N Narasimhamurthy Column: ಬ್ಯಾಂಕಿಂಗ್‌ ಕನ್ನಡಕ್ಕಾಗಿ ಹೋರಾಡುತ್ತಿರುವವರು !

ಬ್ಯಾಂಕಿಂಗ್‌ ಕನ್ನಡಕ್ಕಾಗಿ ಹೋರಾಡುತ್ತಿರುವವರು !

ನಮ್ಮ ದೇಶದ ಬ್ಯಾಂಕುಗಳು 1960ರ ದಶಕದಲ್ಲಿ ಸಾರ್ವಜನಿಕರಿಗೆ ಅಷ್ಟೇನು ಪರಿಚಿತವಾಗಿರ ಲಿಲ್ಲ. 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಮೇಲೆ ಬ್ಯಾಂಕುಗಳು ಸಾರ್ವಜನಿಕರಿಗೆ ಮುಕ್ತವಾಗಿ ತೆರೆದುಕೊಂಡವು. ಪ್ರಾದೇಶಿಕ ಬ್ಯಾಂಕುಗಳಲ್ಲಿ ಗ್ರಾಹಕರ ಜೊತೆಗೆ ನಡೆಯುವ ವ್ಯವಹಾರಗಳು ಸಹಜವಾಗಿ ಆಯಾ ಪ್ರದೇಶದ ಭಾಷೆ ಯೆಲ್ಲಿಯೇ ನಡೆಯ ಬೇಕಿತ್ತು

Keshava Prasad B Column: ಜಿದ್ದಿದೆ ಬಿದ್ದು ಕನ್ನಡ ಕಲಿತ ತಾತ !

ಜಿದ್ದಿದೆ ಬಿದ್ದು ಕನ್ನಡ ಕಲಿತ ತಾತ !

ಭವಿಷ್ಯದಲ್ಲಿ ನೂರು ಪುಸ್ತಕಗಳನ್ನು ಬರೆಯುವ ಮಹತ್ತ್ವಾಕಾಂಕ್ಷೆ’ಯನ್ನು ಸಣ್ಣ ಆಸೆ ಎಂದು ಹೇಳಿಕೊಳ್ಳುವ ವಿನಮ್ರತೆ ಇದೆ. ಪೋಷಕರ ಮೂಲ ಕೇರಳವಾದರೂ, ಮಂಡ್ಯ ದಲ್ಲಿ ಹುಟ್ಟಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದಿ ರಾಜಧಾನಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಉತ್ಸಾಹಿ ಪತ್ರಕರ್ತ.

Dr Karthik J S Column: ಎಲ್ಲಿದ್ರಿ ಇಲ್ಲಿ ತನಕ ? ಎಲ್ಲಿಂದ ಬಂದಿರಿ !

ಎಲ್ಲಿದ್ರಿ ಇಲ್ಲಿ ತನಕ ? ಎಲ್ಲಿಂದ ಬಂದಿರಿ !

ಲಾಗಾರ್ ಹೆಡ್ ಆಮೆಯು ಸಾಗರದ ಮೃದ್ವಂಗಿ ಮತ್ತು ಇನ್ನಿತರ ಜಂತುಗಳನ್ನು ತಿಂದರೆ, ಹಸಿರು ಆಮೆ ಕಡಲಕಳೆಯನ್ನು ತಿನ್ನುತ್ತದೆ. ಕಡಲಾಮೆಗಳು ದೀರ್ಘಾಯುಷಿಗಳು. ಅವುಗಳ ರೆಕ್ಕೆಯಾಕಾರದ ಮುಂಗಾಲುಗಳು ಸುಗಮ ಸಂಚಾರಕ್ಕೆ ನೆರವಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಆಲಿವ್ ರಿಡ್ಲೆ ಮತ್ತು ಕೆಂಪ್ಸ್ ರೆಡ್ಲೆ ಕಡಲಾಮೆಗಳು ಕೆಲವು ಕಡಲು ತೀರಗಳಲ್ಲಿ ಒಟ್ಟುಗೂಡಿ, ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡಲು ತೀರಕ್ಕೆ ಬರುತ್ತವೆ

Shashank Mudoori Column: ದ್ವಾದಶ ಜ್ಯೋತಿರ್ಲಿಂಗ ದರ್ಶನ !

ಧಾರ್ಮಿಕ ಪ್ರವಾಸೋದ್ಯಮದಲ್ಲಿ ಮುಂದೇನು ?

ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಯಾತ್ರ ಕೈಗೊಳ್ಳುವುದು, ಯಾತ್ರೆಗೆ ಹೋದವರು ಯಾತ್ರಾ ಸ್ಥಳಗಳಲ್ಲಿ ಹಲವು ದಿನ ತಂಗುವುದು, ಯಾತ್ರಾ ದಾರಿಯುದ್ದಕ್ಕೂ ಅಗತ್ಯ ವಸ್ತುಗಳನ್ನು ಖರೀದಿಸುವುದು, ವಸತಿಗೃಹಗಳಲ್ಲಿ, ಛತ್ರಗಳಲ್ಲಿ ತಂಗುವುದು, ಸ್ಮರಣಿಕೆಗಳನ್ನು ಖರೀದಿಸಿವುದು - ಇವೆಲ್ಲವೂ ಧಾರ್ಮಿಕ ಪ್ರವಾಸೋದ್ಯಮದ ಭಾಗಗಳು, ಅಂಗಗಳು. ಬೇರೆ ಬೇರೆ ದೇಗುಲಗಳಲ್ಲಿ ಪೂಜೆ ಮಾಡಿಸುವುದು, ಪೂಜಾ ಸಾಮಗ್ರಿ ಖರೀದಿಸುವುದು, ಹುಂಡಿಗೆ ಕಾಣಿಕೆ ಹಾಕುವುದು, ದಾನ ಮಾಡುವುದು - ಇವುಗಳನ್ನೂ ಸಹ ಧಾರ್ಮಿಕ ಪ್ರವಾಸೋ ದ್ಯಮದ ಭಾಗಗಳೆಂದೇ ಪರಿಗಣಿಸಬಹುದು

Anil H T Column: ಕಾಫಿತೋಟದಲ್ಲಿ ನೆಮ್ಮದಿಯ ತಂಗಾಳಿ !

Anil H T Column: ಕಾಫಿತೋಟದಲ್ಲಿ ನೆಮ್ಮದಿಯ ತಂಗಾಳಿ !

ಕಾಫಿ ತೋಟಗಳು ಹೆಚ್ಚಾಗಿರುವ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಜಿಲ್ಲೆಗಳಲ್ಲಿ ಈಗ ಕಾಫಿ ಕುಯ್ಲು ಭರದಿಂದ ಸಾಗುತ್ತಿದೆ. ಡಿಸೆಂಬರ್ ಮೂರನೇ ವಾರದಿಂದ ಇಲ್ಲಿ ಕಾಫಿ ಫಸಲಿನ ಕುಯ್ಲು ಹಬ್ಬದ ಸಂಭ್ರಮದಂತೆ ನಡೆಯುತ್ತಿದೆ. ಕಳೆದ ಒಂದೂವರೆ ದಶಕಗಳಿಂದ ಕಾಫಿ ತೋಟಗಳಲ್ಲ ಮಹಾಮಳೆ, ಅತಿವೃಷ್ಟಿ, ಅನಾವೃಷ್ಟಿಯ ಹೊಡೆತದಿಂದಾಗಿ ಸ್ವಲ್ಪ ನಲುಗಿದ್ದವು

Shashidharaswamy R Hiremath Column: ಹಣ್ಣು ನುಂಗಿ ಬೀಜ ಬಿತ್ತುವ ಚಂಬುಕುಟಿಕ

Shashidharaswamy R Hiremath Column: ಹಣ್ಣು ನುಂಗಿ ಬೀಜ ಬಿತ್ತುವ ಚಂಬುಕುಟಿಕ

ಸನಿಹದಲ್ಲಿರುವ ದೊಡ್ಡ ಅರಳೆ ಮರದಿಂದ ಆ ಸದ್ದು ತೇಲಿ ಬರುತ್ತಿತ್ತು. ಆ ಅರಳಿ ಮರದಲ್ಲಿ ಕುಳಿತು ತಾಮ್ರದ ಕುಸುರಿ ಕೆಲಸ ಮಾಡುತ್ತಿರುವ ಕುಶಲಕರ್ಮಿ ಯಾರಿರಬಹುದು? ಎಂದು ಕಣ್ಣೋಟದಿಂದ ಮರವನೆಲ್ಲ ಜಾಲಾಡಿದೆ. ಹಸಿರೆಲ್ಲಗಳ ಮಧ್ಯ ಅಡಗಿದ ಹಸಿರು ವರ್ಣದ ಅಕ್ಕಸಾಲಿಗನ ದರ್ಶನವಾಗಿತು. ಈ ಹಕ್ಕಿಯೇ ‘ಕಂಚು ಕುಟಿಗ’ ಅಥವಾ ಚಂಬುಕುಟಿಕ.

Gundu Shankar Column: ಅಮೆರಿಕದ ಗರುಡ ಪುರಾಣ !

Gundu Shankar Column: ಅಮೆರಿಕದ ಗರುಡ ಪುರಾಣ !

ಉತ್ತರ ಅಮೆರಿಕ ಖಂಡದಲ್ಲಿ ನೆಲೆಯಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಮತ್ತು ನಂಬಿಕೆಗಳಲ್ಲಿ ಗರುಡ ಪಕ್ಷಿ ಬಹುಮುಖ್ಯ ಪಾತ್ರ ವಹಿಸಿದೆ. ಈ ಪಕ್ಷಿಯು ಇಲ್ಲಿನ ಆಚರಣೆಗಳಲ್ಲಿ, ಕಥೆಗಳಲ್ಲಿ ಹಾಸು ಹೊಕ್ಕಾಗಿದೆ. ಈ ಸಂಸ್ಕೃತಿಯಲ್ಲಿ ಗರುಡ ನೆಂದರೆ ಪ್ರಾಮಾಣಿಕತೆ, ಧೈರ್ಯ, ವಿವೇಕ, ಗಾಂಭೀರ್ಯ ಮತ್ತು ಸ್ವಾತಂತ್ರ್ಯಗಳ ಸಂಕೇತ; ಆಧ್ಯಾ ತ್ಮಿಕ ಜಗತ್ತಿಗೆ ತಮ್ಮನ್ನು ಬೆಸೆಯುವ ಕೊಂಡಿಯೆಂಬ ನಂಬಿಕೆ