ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿರಾಮ

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.

Poornima kamalashile Column: ನಮ್ಮ ಹಳ್ಳಿಯ ವೀರ ವನಿತೆ !

ನಮ್ಮ ಹಳ್ಳಿಯ ವೀರ ವನಿತೆ !

ಆಕೆಗೆ ಮಕ್ಕಳ ಡ್ಯಾನ್ಸ್, ಮತ್ತಿನ್ನೇನೊ ನೋಡುವುದಕ್ಕಿಂತ, ಅವರನ್ನು ಸಭೆ ಮೇಲೆ ಕಳುಹಿಸು ವುದೇ ಮಹಾ ಸಂಭ್ರಮ. ಜೊತೆಗೆ ಕೆಲವು ಶಾಲೆಯಲ್ಲಿ, ಅಕಸ್ಮಾತ್ ಆಗಿ ಕೆಲವು ಶಿಕ್ಷಕರ ಕಾಮುಕತನ ಗೊತ್ತಾದರೆ ಆಕೆ ಮಹಾಕಾಳಿಯಾಗಿದ್ದೂ ಇದೆ. ಜೊತೆಗೆ, ನಮ್ಮೂರ ಹೆಣ್ಮಕ್ಕಳಿಗೆಲ್ಲ ಅಂತ ಕಾಮಪಿಪಾಸುಗಳಿಂದ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆಯ ಪಾಠ ಮಾಡಿದ ದಿಟ್ಟ ಹೆಂಗಸಾಕೆ.

ಅಪೂರ್ವ ಒಳನೋಟಗಳು

ಅಪೂರ್ವ ಒಳನೋಟಗಳು

ಒಂದು ಉದಾಹರಣೆಯನ್ನು ನೋಡುವುದಾದರೆ, ‘ಸಂಕೀರ್ಣ ಸಂರಚನೆಯ ವದರಿಂಗ್ ಹೈಟ್ಸ್’ ಲೇಖನದಲ್ಲಿ ಬಂದಿರುವ ಆರಂಭದ ಸಾಲುಗಳಿವು: “ಕನ್ನಡದ ನವೋದಯ ಸಾಹಿತ್ಯ ಸಂದರ್ಭ ದಲ್ಲಿ ಇಂಗ್ಲಿಷ್ ಸಾಹಿತ್ಯಾಭ್ಯಾಸದ ಫಲವಾಗಿ ಕಾವ್ಯ, ಸಣ್ಣಕತೆ, ಕಾದಂಬರಿ, ಲಲಿತ ಪ್ರಬಂಧ ಹೀಗೆ ಹೊಸ ಸಾಹಿತ್ಯದ ವಿವಿಧ ಪ್ರಕಾರಗಳು ಹುಟ್ಟಿಕೊಂಡವು.

Pragati Shetty Interview: ಸವಾಲಿನ ಕೆಲಸದಲ್ಲಿ ಮಿಂಚಿದ ಮಹಿಳೆ !

Pragati Shetty Interview: ಸವಾಲಿನ ಕೆಲಸದಲ್ಲಿ ಮಿಂಚಿದ ಮಹಿಳೆ !

ಚಾರ್ಲಿ, ಬೆಲ್ ಬಾಟಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ, ಕಾಂತಾರ ಚಾಪ್ಟರ್ 1 ಹೀಗೆ ಸಾಲು ಸಾಲು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದವರು ಇವರೇ! ಖ್ಯಾತ ನಟ ರಿಷಬ್ ಶೆಟ್ಟಿಯವರ ಅವರ ಮುದ್ದಿನ ಮಡದಿ ಯಾಗಿ, ಅವರ ಪ್ರತಿ ಸಿನಿಮಾಗಳಿಗೂ ಬೆನ್ನೆಲುಬಾಗಿ ನಿಂತು ಹೊಸತನಕ್ಕೆ ನಾಂದಿ ಹಾಡಿದವರು.

Rajashree T Rai Column : ರಾಗಿ ಮತ್ತು ಭತ್ತದ ಗೆಳೆತನ !

Rajashree T Rai Column : ರಾಗಿ ಮತ್ತು ಭತ್ತದ ಗೆಳೆತನ !

ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ರಾಗಿ ಅಕ್ಕಿಯ ಕುರಿತು ಜನಪದ ಕಥೆಯ ಬೇರೆ ಬೇರೆ ಅವತರಣಿಕೆಗಳು ಲಭ್ಯವಿವೆ. ಒಂದು ಪಠ್ಯದಲ್ಲಿ ಇದು ತುಳುನಾಡಿನಲ್ಲಿ ಬೆಳೆಯುತ್ತಿದ್ದ ‘ಅತಿಕಾರೆ’ ಎನ್ನುವ ಭತ್ತದ ತಳಿಯು ದೈವತ್ವಕ್ಕೆ ಏರಿದ ಕಥೆ ಆದರೆ ಇನ್ನೊಂದು ಪಠ್ಯದಲ್ಲಿ ಇದು ಭತ್ತ ರಾಗಿಗೆ ಬುದ್ಧಿ ಹೇಳುವ ಕಥೆ, ಹಾಗೆಯೇ ಮತ್ತೊಂದು ಅವತರಣಿಕೆಯಲ್ಲಿ ರಾಗಿ ಭತ್ತಕ್ಕೆ ಸಮಾಧಾನ ಹೇಳುವ ಕತೆ. ಹೀಗೆ ಬೇರೆ ಬೇರೆ ರೀತಿಯ ಕಥನಗಳು ಲಭ್ಯವಿವೆ.

Dr N Bhaskar Acharya Column: ವೈದ್ಯರ ದ್ವಂದ್ವ

Dr N Bhaskar Acharya Column: ವೈದ್ಯರ ದ್ವಂದ್ವ

ಹೊಟ್ಟೆಯೊಳಗೆ ಮಗುವಿನ ಕೈಕಾಲುಗಳ ಚಲನೆ, ಹೃದಯ ಬಡಿತ ಸರಿಯಾದ ಮಿತಿಯೊಳಗೇ ಇತ್ತು. ಹದಿನೈದು ದಿನಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ಮಾಡಿದ ಹೊಟ್ಟೆಯ ಅಲ್ಟ್ರಾಸೌಂಡ್ ವರದಿ ಕೂಡಾ ಈತ ಕಂಡುಕೊಂಡ ಅಂಶಗಳನ್ನೇ ಪುಷ್ಟೀ ಕರಿಸುತ್ತಿತ್ತು. ಅದರ ಪ್ರಕಾರ ಮಗುವಿನ ತೂಕ ಸಾಧಾರಣ ಎರಡೂವರೆ ಕೆಜಿಯಷ್ಟಿದ್ದು, ಈ ನಂತರದ ಹತ್ತು ಹದಿನೈದು ದಿನಗಳಲ್ಲಿ ಐನೂರು ಗ್ರಾಂಗಳಷ್ಟಾದರೂ ಹೆಚ್ಚಾಗಿರಬೇಕೆಂದುಕೊಂಡನು ಡಾ. ಎಸ್. ಮಗು ಸಸೂತ್ರವಾಗಿ ಎಡಕ್ಕೆ ತಿರುಗಿ ಬಂದರೆ ಸರಿ.

Shashidhara Halady Column: ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಪಶ್ಚಿಮ ಘಟ್ಟಗಳು ಮತ್ತು ಅದರ ಆಶ್ರಯದಲ್ಲಿ ಬೆಳೆದಿರುವ ವನಸಿರಿ - ಇದನ್ನು ಪಡೆದಿರುವ ನಮ್ಮ ರಾಜ್ಯವು ನಿಜಕ್ಕೂ ಅದೃಷ್ಟವಂತ ರಾಜ್ಯ! ಇಂತಹದೊಂದು ಅಪರೂಪದ ಕಾಡು ಪ್ರದೇಶವನ್ನು ಪಡೆದಿರುವ ನಮ್ಮ ರಾಜ್ಯದ ಜನರು ಸಹ ಅದೃಷ್ಟ ವಂತರು. ಇಂತಹ ಅಪರೂಪದ ಕಾಡು, ವನಸಿರಿ, ಜೀವ ವೈವಿಧ್ಯ ನಮ್ಮ ದೇಶದ ಅವೆಷ್ಟೋ ರಾಜ್ಯಗಳಲ್ಲಿ ಕಾಣ ಸಿಗದು!

50 ವರ್ಷಗಳ ಹಿಂದೆ..

50 ವರ್ಷಗಳ ಹಿಂದೆ..

ನಮ್ಮ ಬಾಲ್ಯದಲ್ಲಿ ಅಂದರೆ 50-60 ವರ್ಷಗಳ ಹಿಂದೆ ಮಲೆನಾಡಿನ ಮೂಲೆಯಲ್ಲಿದ್ದ ನಮ್ಮ ಮನೆಯಲ್ಲಿ ಶಿವರಾತ್ರಿಗೆ ಸುಮಾರು ಒಂದು ತಿಂಗಳ ಮೊದಲೇ ಸಿದ್ಧತೆ ಆರಂಭ ವಾಗುತ್ತಿತ್ತು. ಶಿವರಾತ್ರಿಯ ದಿನ ಬೆರಣಿ ಸುಟ್ಟು ಇಡೀ ವರ್ಷಕ್ಕಾಗುವಷ್ಟು ವಿಭೂತಿ ತಯಾರಿಸಿ, ಅದನ್ನು ಮುಂದಿನ ಶಿವರಾತ್ರಿಯ ತನಕ ಬಳಸುತ್ತಿದ್ದೆವು!

Keshav Prasad Column: ಸಂಯೋಜಿತ ಚಿಕಿತ್ಸೆಯ ಹರಿಕಾರ

ಸಂಯೋಜಿತ ಚಿಕಿತ್ಸೆಯ ಹರಿಕಾರ

ಭಾರತದಲ್ಲಿ ಬಿಹಾರ, ಉತ್ತರಪ್ರದೇಶ, ಕೇರಳ, ಆಂಧ್ರಪ್ರದೇಶದಲ್ಲಿ ಆನೆಕಾಲು ರೋಗ ಹೆಚ್ಚಾಗಿ ಕಾಡುತ್ತಿದೆ. ಜಗತ್ತಿನ ಶೇಕಡಾ 40ರಷ್ಟು ರೋಗಪೀಡಿತರು ಭಾರತದಲ್ಲಿ ಇರುವುದು ಕಳವಳಕಾರಿ. ಗಡಿನಾಡು ಕಾಸರಗೋಡಿನ ಕನ್ನಡಿಗ ವೈದ್ಯ ಡಾ.ಎಸ್.ಆರ್.ನರಹರಿ ಅವರು ಸಂಯೋಜಿತ ವಿಧಾನದಲ್ಲಿ ಆನೆಕಾಲು ರೋಗದ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದಿ ನಾಯಿಯೊಂದರ ಆಧ್ಯಾತ್ಮಿಕ ಪಯಣ

ಬೀದಿ ನಾಯಿಯೊಂದರ ಆಧ್ಯಾತ್ಮಿಕ ಪಯಣ

ಇದು ಕೇವಲ ಒಂದು ನಾಯಿಯ ಬದುಕಿನ ಕಥೆಯಲ್ಲ; ಬೀದಿ ನಾಯಿಯಾಗಿ ಹುಟ್ಟಿ, ನಂಬಿಕೆ, ಕರುಣೆ ಮತ್ತು ಅಧ್ಯಾತ್ಮದ ಶಕ್ತಿಯನ್ನು ಜಗತ್ತಿಗೆ ಸಾರಿ, ಶಾಂತಿಯ ಸಂದೇಶ ಸಾರುತ್ತಿರುವ ಒಂದು ಮೌನ ಯಾತ್ರಿಕನ ಪಯಣವಾಗಿದೆ. ಅಲೋಕ ಎಂಬ ಹೆಸರು ಹೊತ್ತ ಈ ನಾಯಿ ಈಗ ಅಮೆರಿಕದಲ್ಲಿದೆ!

Narayana Yaji Column: ನಗುವಿನೊಳಗಿನ ಬದುಕು

Narayana Yaji Column: ನಗುವಿನೊಳಗಿನ ಬದುಕು

ಶಿರಸಿಯೇ ಇರಲಿ, ತಾಷ್ಕೆಂಟೇ ಇರಲಿ ಮನುಷ್ಯ ತಾನೇ ಸೃಸ್ಟಿಸಿಕೊಂಡ ಬಲೆಯಲ್ಲಿ ಬಿದ್ದು ಗೊಂದಲ ವನ್ನುಂಟುಮಾಡಿಕೊಳ್ಳುತ್ತಾನೆ. ಪನ್ ಮತ್ತು ವಿಟ್‌ಗಳನ್ನು ಇನ್ನೊಬ್ಬರನ್ನು ಹೀಗೆಯೆಳೆಯಲು ಅವರು ಬಳಸಿಕೊಳ್ಳುವುದಿಲ್ಲ; ಅದಕ್ಕೆ ಕಾರಣವನ್ನು “ಪತ್ರಕರ್ತನ ವಿನೋದಾ ವಳಿಯ ಹಾವಳಿ"ಯಲ್ಲಿ ವಿವರಿಸಿದ್ದಾರೆ.

ತುಳುನಾಡಿನ ಬೆರ್ಮರು

ತುಳುನಾಡಿನ ಬೆರ್ಮರು

ದ್ರಾವಿಡ ಮೂಲದ ತುಳು ಶಬ್ದವಾದ ‘ಬೆರ್ಮೆರ್’ ಎನ್ನುವುದರ ಅರ್ಥ ದೇವರು ಎಂದು. ‘ಬೆರ್ಮೆರ್’ ಎನ್ನುವುದು ರೂಢನಾಮವೇ ಹೊರತು ಅಂಕಿತನಾಮವಲ್ಲ. ಅಂದರೆ ಅದು ದೇವರು ಎನ್ನುವ ಅರ್ಥ ಕೊಡುವ ದ್ರಾವಿಡ ಮೂಲದ ತುಳು ಶಬ್ದ. ಇದಕ್ಕೆ ಸಮಾನ ಎನಿಸುವ ತಮಿಳು ಪದ ‘ಪೆರುಮಾನ್; ಅಥವಾ ‘ಪೆರುಮಾಳ್’ ಎನ್ನುವುದು. ವೈದಿಕ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ತುಳುನಾಡಿಗೆ ಬರುವ ಮುನ್ನ, ಇಲ್ಲಿ ದೇವತಾ ಸಂಕಲ್ಪಕ್ಕೆ ಇದ್ದಿರಬಹುದಾದ ದ್ರಾವಿಡ ಮೂಲದ ಶಬ್ದವೇ ‘ಬೆರ್ಮೆರ್’.

ಕಪಿಗೆ ʼಚಪಲತೆʼ ಸಹಜಂ !

ಕಪಿಗೆ ʼಚಪಲತೆʼ ಸಹಜಂ !

ಒಮ್ಮೊಮ್ಮೆ ಪ್ರವಾಸಿಗರೊಂದಿಗೆ ಹಲ್ಲು ಮಸಿಯುತ್ತ ಅವರನ್ನು ಹೆದರಿಸುತ್ತ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತವೆ. ಅಷ್ಟರಲ್ಲೇ ಜೊತೆಗಾರರೂ ಹಾಜರೂ! ಅಲ್ಲಿಂದ ಗುಹಾಂತರ ದೇವಾಲಯ, ಮ್ಯೂಸಿಯಂ, ಕಪ್ಪೆ ಆರೆಭಟ್ಟನ ಶಾಸನ, ರಂಗನಾಥ ಮಂದಿರ, ಭೂತನಾಥ ಟೆಂಪಲ್ ಎಂದೆಲ್ಲಾ ಬಂದ ಪ್ರವಾಸಿಗರ ಪ್ರಫುಲ್ಲ ಮನಸಿನಲ್ಲಿ ಈ ಕೋತಿಗಳು ಅವ್ಯಕ್ತ ಭಯವನ್ನಂತೂ ಹುಟ್ಟು ಹಾಕಿ ಬಿಡುತ್ತವೆ.

Shashank Muduri Column: ಪರಿಸರ ರಕ್ಷಣೆಯ ʼಹರಿಕಾರʼ !

Shashank Muduri Column: ಪರಿಸರ ರಕ್ಷಣೆಯ ʼಹರಿಕಾರʼ !

ಪಶ್ಚಿಮ ಘಟ್ಟವನ್ನು ಕಾಪಾಡುವ ಕುರಿತು ಶಿಫಾರಸು ಮಾಡಿದ ಈ ವರದಿಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ಗಂಭೀರವಾಗಿ ತೆಗೆದುಕೊಂಡಿತು ಮತ್ತು ಪಶ್ಚಿಮ ಘಟ್ಟಗಳ ಹಲವು ತಾಣಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಿತು. ಆದರೆ, ಪಶ್ಚಿಮ ಘಟ್ಟಗಳು ಹರಡಿರುವ ಕೇರಳ ಮತ್ತು ಕರ್ನಾಟಕ ಸರಕಾರಗಳು ಆ ವರದಿಯನ್ನು ಪೂರ್ತಿಯಾಗಿ ಒಪ್ಪಲಿಲ್ಲ!

Pavan Kumar Shirva Column: ದೇಗುಲನಗರಿ ಉಡುಪಿಯಲ್ಲಿ 253ನೆಯ ದ್ವೈವಾರ್ಷಿಕ ಪರ್ಯಾಯ ಸಂಭ್ರಮ !

ದೇಗುಲನಗರಿ ಉಡುಪಿಯಲ್ಲಿ 253ನೆಯ ದ್ವೈವಾರ್ಷಿಕ ಪರ್ಯಾಯ ಸಂಭ್ರಮ !

ಅಷ್ಟ ಮಠದ ಯತಿಗಳಿಗೆ ರಥ ಬೀದಿಯಲ್ಲಿ ಪ್ರತ್ಯೇಕ ಮಠಗಳನ್ನು ಕಲ್ಪಿಸಿದರು. ದ್ವೈವಾರ್ಷಿಕ ಪದ್ಧತಿ ಬಂದ ಮೇಲೆ ಮೊದಲ ಪರ್ಯಾಯವನ್ನು ಶ್ರೀ ವಾದಿರಾಜ ತೀರ್ಥರು ನೆರವೇರಿಸಿದರು. ಮೊದಲ ಪರ್ಯಾಯವು ಶ್ರೀ ಪಲಿಮಾರು ಮಠದಿಂದ ಆರಂಭವಾಗಿತ್ತು. ಈಗ 253ನೆಯ ದ್ವೈ ವಾರ್ಷಿಕ ಪರ್ಯಾಯ ನಡೆಯುತ್ತಿದೆ.

M V Negalur Column:  ಸಾಲುಮರದ ಸಾಧಕಿಯೊಂದಿಗೆ ಮೊದಲ ಭೇಟಿ

M V Negalur Column: ಸಾಲುಮರದ ಸಾಧಕಿಯೊಂದಿಗೆ ಮೊದಲ ಭೇಟಿ

ಮರಗಳ ತಾಯಿ ಎಂದೇ ಖ್ಯಾತರಾದ ಸಾಲುಮರದ ಸಂಗಾತಿ ತಿಮ್ಮಕ್ಕ ದೈಹಿಕವಾಗಿ ನಮ್ಮನ್ನು ಅಗಲಿ ದ್ದರೂ (14-11-2025), ಅವರ ನೆನಪು, ಆ ಮುಗ್ಧ ನಗು, ಸರ್ವರನ್ನು ಅಪ್ಪಿಕೊಳ್ಳುವ ಮನೋಭಾವ, ಸಾಲುಮರ ಬೆಳೆಸಿದ ಸಂದೇಶ ಸದಾ ಹಚ್ಚ ಹಸಿರು. ಉಸಿರು ನಿಂತ ನಂತರವೂ ಮರಗಳಲ್ಲಿ ಜೀವಂತ ವಾಗಿ ಉಸಿರಾಡುತ್ತಿದ್ದಾರೆ ತಿಮ್ಮಕ್ಕ.

ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !

ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !

ಧುರಂಧರ್ ಬಂದು ಭೇಟಿಯಾದ: ‘ನಮ್ಮ ಪಕ್ಕದ ದೇಶಕ್ಕೆ ಹೋಗೋಣ ಬನ್ನಿ, ಬರೀ ಮೂರೂ ಮುಕ್ಕಾಲು ಗಂಟೆಯೊಳಗೆ ವಾಪಸ್ಸು ಬರೋಣ’ ಅಂದ. ‘ಓ ಗುಡ್ ಡೀಲ್’ ಅಂತ ರಾತ್ರಿ ಒಂಬತ್ತಕ್ಕೆ ಮನೆ ಬಿಟ್ಟೆ. ನಡುರಾತ್ರಿ ಎರಡೂವರೆಗೆ ವಾಪಸ್ಸು ಕರೆದುಕೊಂಡು ಬಂದು ಭಾರತದಲ್ಲಿ ಬಿಟ್ಟು ಹೋದ. ಆಗಿನಿಂದ ಹೊಟ್ಟೇಲಿ, ಎದೇಲಿ, ಮನಸಲ್ಲಿ ಹೇಳಲಾಗದ ಸಂಕಟ.

G Nagendra Kavoor Column: ಬಯಸದೇ ಬಂದ ಭಾಗ್ಯ !

G Nagendra Kavoor Column: ಬಯಸದೇ ಬಂದ ಭಾಗ್ಯ !

ಮರುದಿನ ಬೆಳಿಗ್ಗೆ ಸ್ಥಳೀಯ ಪತ್ರಿಕೆಗಳ ಪುಟಗಳಲ್ಲಿ ನಮ್ಮ ಪ್ರಯಾಣದ ಕಥೆ, ಚಿತ್ರಸಹಿತ ಪ್ರಕಟಗೊಂಡದ್ದನ್ನು ಕಂಡು ಮನಸ್ಸು ಆನಂದದಿಂದ ತುಂಬಿಬಿಟ್ಟಿತು. ಬಯಸದೇ ಬಂದ ಈ ಭಾಗ್ಯವು ನಮ್ಮ ಸರಳ ಬೈಕ್ ಯಾತ್ರೆಗೆ ಅರ್ಥ, ಗೌರವ ಮತ್ತು ಶಾಶ್ವತ ಸ್ಮೃತಿಯನ್ನು ನೀಡಿತು. ಆ ಕ್ಷಣದ ಸಂತೋಷ ಹೃದಯದೊಳಗೆ ಮೌನವಾಗಿ ಅರಳಿದ ಹೂವಿನಂತಿತ್ತು.

Santhoshkumar Mehendale Column: ಜೀವ ಹೆಚ್ಚೋ ? ಸರಂಜಾಮು ಹೆಚ್ಚೋ ?

ಜೀವ ಹೆಚ್ಚೋ ? ಸರಂಜಾಮು ಹೆಚ್ಚೋ ?

ಅಕಸ್ಮಾತ್ ಕಡ್ಡಿ ಗೀರಿದರೆ ಮೂವತ್ತೇ ಸೆಕೆಂಡ್‌ನಲ್ಲಿ ದಾವಾನಲವಾಗಲು ಏನು ಬೇಕೋ ಅದೆಲ್ಲ ಇಲ್ಲಿ ಬೆರಳಂಚಿಗೆ ಲಭ್ಯ. ಜೀವ ಮಾತ್ರ ದಕ್ಕುವುದಿಲ್ಲ. ಇದು ಸಣ್ಣ ಸರಳ ವಿವರಣೆ; ಮೊನ್ನೆ ಚಿತ್ರದುರ್ಗದ ಸನಿಹ ಮತ್ತು ಕಳೆದ ಹತ್ತು ವರ್ಷದಲ್ಲಿ ಹೀಗೆ ಉರಿದು ಬಲಿಯಾದ ಸುಮಾರು ನೂರಾರು ಹೆಚ್ಚು ಜೀವ ಪಡೆದ ಬಸ್ಸುಗಳ ಮಾಹಿತಿ.

Shashidhara Halady Column: ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ನಮ್ಮ ಮನೆಯ ಮೇಲ್ಭಾಗದಲ್ಲಿ ಹಲಸಿನ ಮರವೊಂದಿತ್ತು; ಅದರ ನೆರಳಿನಿಂದಾಗಿ, ಬೇಸಗೆಯಲ್ಲಿ ಸೆಕೆ ಕಡಿಮೆಯಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕೆಲವು ಕಿ.ಮೀ. ಪೂರ್ವ ದಿಕ್ಕಿಗೆ ಸಾಗಿದರೆ, ಪಶ್ಚಿಮ ಘಟ್ಟ ಸಾಲಿನ ಗರ್ಭದಲ್ಲೇ ಎಂಬಂತೆ ಇರುವ ಕೆಲವು ಹಳ್ಳಿಗಳಲ್ಲಂತೂ, ಮನೆಗಳನ್ನೇ ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಂತೆ ಮರ, ಗಿಡ, ಬಳ್ಳಿಗಳು ಬೆಳೆದಿರುತ್ತಿದ್ದವು.

Surendra Pai Column: ಇಪ್ಪತ್ತು ರೂಪಾಯಿ ಡಾಕ್ಟರ್‌ !

Surendra Pai Column: ಇಪ್ಪತ್ತು ರೂಪಾಯಿ ಡಾಕ್ಟರ್‌ !

ಅವರೇ ಹೊಸದುರ್ಗ ತಾಲೂಕಿನ ಡಾ.ಇ ಎಸ್. ಬ್ರಹ್ಮರಾಜು. ಇಂದಿನ ದುಬಾರಿ ಜಗತ್ತಿನಲ್ಲೂ ಕೇವಲ ಇಪ್ಪತ್ತು ರೂಪಾಯಿ ಪಡೆದು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಬಡವರಿಗೆ ಆರೋಗ್ಯ ಸೇವೆ ಯನ್ನು ನೀಡುತ್ತಾ ಎಲ್ಲರಿಂದಲ್ಲೂ ‘ಇಪ್ಪತ್ತು ರೂಪಾಯಿ ಡಾಕ್ಟರ್’ ಎಂದು ಜನಮನ್ನಣೆಯನ್ನು ಪಡೆದ ಸರಳ, ಸಜ್ಜನ ಪ್ರತಿಭಾನ್ವಿತ ವೈದ್ಯರು ಇವರು.

Narayan Yaji Column: ಭಯೋತ್ಪಾದನೆಯ ಕರಾಳ ಕೃತ್ಯಕ್ಕೆ ಒಂದು ಸಾಕ್ಷಿ

ಭಯೋತ್ಪಾದನೆಯ ಕರಾಳ ಕೃತ್ಯಕ್ಕೆ ಒಂದು ಸಾಕ್ಷಿ

ಮಾನವೀಯತೆಯ ಯಾವ ಅಂಶವನ್ನೂ ಹುಡುಕಲಾಗದ ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಅಂದು ನಡೆಸಿದ ಹಿಂಸೆಯು ಮನಸ್ಸನ್ನು ಕಲಕುತ್ತದೆ. ಗಾಜಾ ಗಡಿಗೆ ಸಮೀಪ ನಡೆದ ಯುವಕರ ಸಂಗೀತ ಮಹೋತ್ಸವ (ಫೆಸ್ಟಿವಲ್) ನಡೆದ ಜಾಗವನ್ನು ಗುರಿಯಾಗಿಸಿಕೊಂಡು 2023ರ ಅಕ್ಟೋಬರ್ ೭ರ ಬೆಳಗಿನ ಜಾವ, ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಯನ್ನು ನಡೆಸಿದರು.

ಭೈರಪ್ಪನವರ ಬದುಕಿನ ಒಳನೋಟಗಳು

ಭೈರಪ್ಪನವರ ಬದುಕಿನ ಒಳನೋಟಗಳು

ಭೈರಪ್ಪನವರ ಬರವಣಿಗೆಯಷ್ಟೇ ಬದುಕೂ ಚೊಕ್ಕವಾದದ್ದು. ನಾಡು ಮಾತ್ರವಲ್ಲದೇ ಭಾಷೆ-ಗಡಿ ಗಳನ್ನೂ ಮೀರಿ ವಿಶ್ವಸಾಹಿತ್ಯವೂ ಮೆಚ್ಚಿಕೊಂಡ ಭೈರಪ್ಪನವರ ಖಾಸಗಿ ಬದುಕು ಹಾಗೂ ವ್ಯಕ್ತಿತ್ವದ ಬಗೆಗೆ ಅನೇಕರಿಗೆ ಅಷ್ಟಾಗಿ ತಿಳಿದಿಲ್ಲ. ಇಂತದ್ದೇ ವಿಚಾರಗಳನ್ನು ಓದುಗನಿಗೆ ಮೊಗೆದು ಕೊಡುವ ಕೃತಿ ಲೇಖಕ ದೀಕ್ಷಿತ್ ನಾಯರ್ ಅವರು ಬರೆದಿರುವ ‘ಎತ್ತರೆತ್ತರ ಭೈರಪ್ಪ-ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು’.

Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

ನಮ್ಮ ವಸತಿ ಸಂಕೀರ್ಣದ ಮುಂಭಾಗದ ವಿಶಾಲವಾದ ರಸ್ತೆಯಲ್ಲಿ ಬಸ್ಸುಗಳು ಬರುತ್ತವಾದರೂ, ಕೆಲವೇ ಕೆಲವು; ಅಂದರೆ ದಿನಕ್ಕೆ ನಾಲ್ಕಾರು ಮಾತ್ರ. ಆದ್ದರಿಂದ, ನಮ್ಮ ಮಗಳು ಕಚೇರಿಯಿಂದ ವಾಪಸು ಬರುವುದನ್ನೇ ಕಾದು ಕುಳಿತಿದ್ದು, ಸಂಜೆಯ ಹೊತ್ತಿನಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ವಾಚನಾಲಯಕ್ಕೆ ಭೇಟಿ ನೀಡುವುದು, ಅಲ್ಲಿನ ಸೋಜಿಗಳನ್ನು ಗಮನಿಸುವುದು ನಮ್ಮ ಹವ್ಯಾಸ ಎನಿಸಿತು.

Loading...