ಅಗೋಚರ ಪತಂಗದ ಅನ್ವೇಷಣೆಯ ಚಾರಣ
“ಕರ್ವಾಲೋ" ಮತ್ತು ತೇಜಸ್ವಿಯವರಿಂದ ಪ್ರಭಾವ ಇಲ್ಲಿದೆ ಎಂದರೂ, ಅದರ ಜೊತೆ ಚಾರ್ಮಾಡಿ ಯ ಚಾರಣಗಳ ಅನುಭವ ಹದವಾಗಿ ಸೇರಿಕೊಂಡು “ಕರ್ವಾಲೋ" ದ ಹಾರುವ ಓತಿಯಂತೆ, ಇಲ್ಲಿ ಮಡಗಾಸ್ಕರ ಕಾಮೆಟ್ ಎನ್ನುವ ಹಳದೀ ಬಣ್ಣದ ಪತಂಗವನ್ನು ಹುಡುಕಿಕೊಂಡು ಹೋಗುವ ಘಟನೆಗಳ ಸುತ್ತ ನಡೆಯುತ್ತದೆ.
ಹೊಸ ಪದ್ಧತಿ ಇದೇ ಸೆಪ್ಟಂಬರ್ ತಿಂಗಳ 22ರಿಂದ ಜಾರಿಗೆ ಬರಲಿದೆ. ಅದರ ಪ್ರಕಾರ ಇನ್ನು ಮುಂದೆ ಮುಖ್ಯವಾಗಿ ಕೇವಲ ಎರಡೇ ಸ್ತರದ ಶೇ 5, ಮತ್ತು 18 ರ ವ್ಯಾಪ್ತಿಯಲ್ಲಿ ಹೆಚ್ಚಿನ ವ್ಯಾಪಾರಗಳು ಬರಲಿವೆ. ಇನ್ನೊಂದು ಶೇ 40 ರ ವ್ಯಾಪ್ತಿಯಲ್ಲಿ ಪಾಪಪೂರಿತ (ಸಿನ್ ಅಂಡ್ ಲಕ್ಷುರಿ ಗೂಡ್ಸ್) ಮತ್ತು ಐಶಾರಾಮಿ ವಸ್ತುಗಳು ಬರಲಿವೆ. ರಾಜ್ಯಗಳಿಗೆ ಇದು ತನಕ ಇದ್ದ ಪರಿಹಾರದ ಸುಂಕ ಇನ್ನು ಮುಂದೆ ಇರುವುದಿಲ್ಲ. ವಿಶೇಷವಾಗಿ ಯಾವುದೇ ವಿಮಾ ಪಾಲಿಸಿಗೆ ಇನ್ನು ಮುಂದೆ ಕರಗಳಿರುವುದಿಲ್ಲ. ಈ ತನಕ ಅವುಗಳು ಶೇ.18 ವ್ಯಾಪ್ತಿಯಲ್ಲಿದ್ದವು
ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ
ಒಂದು ಯಃಕಶ್ಚಿತ್ ಪತಂಗಕ್ಕಾಗಿ ನಾವಿಷ್ಟು ಜನರನ್ನು ಕರೆದು ಕೂರಿಸಿಕೊಂಡಿದ್ದಾರಲ್ಲ ಎಂದು ಆಶ್ಚರ್ಯ, ಕುತೂಹಲ, ಸ್ವಲ್ಪ ಅಸಮಾಧಾನ ಒಟ್ಟಿಗೇ ಮೂಡಿದವು. ಏನೋ ಮಹತ್ವದ ಸಂಶೋ ಧನೆ ಎಂದು ಬಂದರೆ ಈಗ ಬರೀ ಪತಂಗ ಪಾತರಗಿತ್ತಿ ಅಂತಾ ಇದಾರಲ್ಲ. ಇವರಿಗೇನು ಮಂಡೆ ಸಮ ಇದೆಯಾ, ಒಂದು ಚಿಟ್ಟೆ ಹಿಡಿಯಲು ನಾವಿಷ್ಟು ಜನ ಬೇಕಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ ಮುಳುಗಿದವು.
ಸೇವೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾದ ದೇವಾಲಯದ ಈ ಪಟ್ಟಣವನ್ನು ಅನ್ಯಾಯವಾಗಿ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಲಾಯಿತು. ವಿದೇಶದಲ್ಲಿರುವ ಕನ್ನಡಿಗರು ಅವಮಾನಕರ ಪ್ರಶ್ನೆಗಳನ್ನು ಕೇಳಬೇಕಾಯಿತು: ಅವರ ರಾಜ್ಯವು ಸಾಮೂಹಿಕ ಸಮಾಧಿಗಳನ್ನು ಮರೆಮಾಚಿದೆಯೇ, ಅವರ ಧರ್ಮವು ಈ ಭಯಾನಕ ಅತ್ಯಾಚಾರಗಳಿಗೆ ಸಮ್ಮತಿ ನೀಡಿತ್ತೇ? ಮತ್ತೊಮ್ಮೆ, ರಾಜ್ಯ ಸರ್ಕಾರದ ಬಳಿ ಯಾವುದೇ ಕಾರ್ಯತಂತ್ರವಿರಲಿಲ್ಲ, ಸುಸಂಬದ್ಧ ಸಂವಹನ ವಿರಲಿಲ್ಲ, ಅಕಾಲಿಕ ತೀರ್ಪಿನ ವಿರುದ್ಧ ತನ್ನದೇ ಜನರನ್ನು ರಕ್ಷಿಸಲು ಯಾವುದೇ ಯೋಜನೆಗಳಿರ ಲಿಲ್ಲ.
ಈ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹೊಂದಿದ್ದು, ಇದನ್ನು 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ 10 ವರ್ಷಗಳು/2 ಲಕ್ಷ ಕಿಮೀ ವರೆಗಿನ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು, ಕೇವಲ ಕಿಮೀಗೆ 22 ಪೈಸೆ ಅಥವಾ ಪ್ರತಿ ದಿನಕ್ಕೆ 12 ರೂ. ಬೆಲೆಯಲ್ಲಿ ಸಂಪೂರ್ಣ ರಕ್ಷಣೆ ದೊರೆಯುತ್ತದೆ.
ಭಾರತ ಮತ್ತು ಅಮೆರಿಕಗಳ ನಡುವಿನ ವ್ಯಾಪಾರದ ಪಾಲುದಾರಿಕೆಯನ್ನು ಒಮ್ಮೆ ಗಮನಿಸೋಣ. ಅಮೆರಿಕದ ಒಟ್ಟೂ ಆಮದಿನಲ್ಲಿ ಸಿಂಹಪಾಲು ಯುರೋಪಿಯನ್ ಯೂನಿಯನ್ ಮತ್ತು ಚೈನಾ ದಿಂದ ಕ್ರಮವಾಗಿ 605.76 ಮತ್ತು 438.95 ಬಿಲಿಯನ್ ಡಾಲರಗಳಷ್ಟಾದರೆ, ಭಾರತದಿಂದ ಕೇವಲ 129.02 ಬಿಲಿಯನ್ ಡಾಲರಗಳಷ್ಟಾಗಿದೆ. ಅದರಲ್ಲಿ ರಪ್ತು 87.4 ಬಿಲಿಯ ಡಾಲರ್ ಆದರೆ ಆಮದು 41.08 ಡಾಲರ ಗಳು.
ಹೊನ್ನಪ್ಪ ಭಾಗವತರ್ ಅವರ ತಂಡದಲ್ಲಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳು, ಪರಮೇಶ್, ರಾಮನಾಥ್ ಎಲ್ಲರೂ ಮೇಕಪ್ ಟೆಸ್ಟ್ ನಂತರ ‘ಕಣ್ಣಿನಲ್ಲಿ ಒಂದು ಮಚ್ಚೆ ಇದೆ, ಸಣ್ಣ ಅಪರೇಷನ್ ಮಾಡಿ ಅದನ್ನು ತೆಗೆದರೆ ಪಾತ್ರ ಮಾಡಬಹುದು’ ಎಂದು ರೇಗಿಸಿದರು. ಚಿಕ್ಕ ಹುಡುಗಿ ಭಯದಿಂದ ‘ಈಗಲೇ ಬೆಂಗಳೂರಿಗೆ ಹೋಗೋಣ’ ಎಂದು ಅಳಲು ಆರಂಭಿಸಿದಳು.
ಅಪ್ಪ, ಮಕ್ಕಳು ತಮ್ಮ ಕೌಟುಂಬಿಕ ನೆಲೆಯ ವಾಸ್ತವ ಪ್ರಪಂಚದಲ್ಲಿ ಮಾತ್ರವಲ್ಲದೆ, ಭಾವನಾ ಪ್ರಪಂಚ ದಲ್ಲಿಯೂ ಇರುತ್ತಾರೆ. ಅಪ್ಪನ ಬಗ್ಗೆ ಪ್ರಾಮಾಣಿಕವಾಗಿ ಬರೆಯಿರಿ ಎಂದರೆ, ಮಕ್ಕಳಿಗೆ ಬಲು ಕಷ್ಟ. ತೀರಾ ಪ್ರಾಮಾಣಿಕವಾಗಿ ಬರೆಯುವಾಗ ಅದೆಲ್ಲಿಯೋ ತನ್ನನ್ನೂ ಪ್ರತಿನಿಧಿಸುತ್ತದೆ ಎಂಬ ಹಿಂಜರಿಕೆಯೂ ಇರುತ್ತದೆ. ಈ ಸಂದಿಗ್ಧತೆಯು, ಕೆ.ಎಸ್.ನ. ಅವರ ಮಗ ಮಹಾಬಲ ರನ್ನೂ ಕಾಡಿರಬೇಕು.
ನಮ್ಮ ನಾಡಿನ ಒಂದೊಂದು ಊರಿನಲ್ಲೂ, ಅಲ್ಲಿನ ವಿಶಿಷ್ಟ ತಿಂಡಿ ತಿನಿಸುಗಳು ಜನರ ನಾಲಗೆಗೆ ಹಿತವಾಗಿವೆ, ಪ್ರಸಿದ್ಧಿಯನ್ನೂ ಪಡೆದಿವೆ. ದಾವಣಗೆರೆ ಎಂದಾಕ್ಷಣ ಮಂಡಕ್ಕಿ ಮೆಣಸಿನ ಕಾಯಿ ಮತ್ತು ಬೆಣ್ಣೆ ದೋಸೆ ನೆನಪಾಗುತ್ತದೆ. ಮಂಡಕ್ಕಿ ಮೆಣಸಿನ ಕಾಯಿಯ ತಯಾರಿ, ತಿನ್ನುವ ಅನುಭವದ ಕುರಿತು ಇಲ್ಲೊಂದು ಬರಹವಿದೆ. ನಿಮ್ಮ ಊರಿನ ವಿಶಿಷ್ಟ ತಿನಿಸಿನ ಕುರಿತು ನೀವೂ ಏಕೆ ಬರೆಯಬಾರದು!
ಅಂತಾರಾಷ್ಟ್ರೀಯ ‘ಅಪ್ಪಂದಿರ ದಿನ’ದ ಆಚರಣೆ ಇಂದು ನಡೆಯುತ್ತಿದೆ. ಕೆಲವೇ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ವಿಶೇಷವಾಗಿ ಆಚರಣೆ ಆರಂಭಿಸಿದ ‘ಫಾದರ್ಸ್ ಡೇ’, ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಇಂತಹ ಹಲವು ವಿದೇಶಿ ಆಚರಣೆಗಳು ಒಂದರ ಹಿಂದೆ ಒಂದರಂತೆ ನಮ್ಮ ದೇಶವನ್ನು ಪ್ರವೇಶಿಸುತ್ತಿವೆ ಮತ್ತು ನಮ್ಮವರು ಸಂಭ್ರಮದಿಂದಲೇ ಅವುಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ!
ಎಂದಿನಂತೆ ವಾಕಿಂಗ್ ಮುಗಿಸಿ ಒಳಹೋಗುವಾಗ, ಥಟ್ ಅಂತ ನಿಲ್ಲಿಸಿ ಬಿಟ್ಟಿತು ಪಕ್ಕದ ಮನೆಯ ಸುಗಂಧಕ್ಕಾನ ಮುಖದ ನೋವು. ‘ಏಕೆ? ಮಗಳು ಸುವ್ವಿ ಮಲಗಿದ್ದಾಳಾ?’ ಎಂದಾಗ ಸುಗಂಧಿ ಕಣ್ಣು ಇನ್ನಷ್ಟು ತೇವಗೊಂಡವು/ ‘ಮೇಡಂ ರಾತ್ರಿಯಿಂದ ಒಂಥರಾ ಸಂಕಟ. ಸ್ಕೂಲಿನಲ್ಲಿ ಫಾದರ್ಸ ಡೇಗೆ ಅಪ್ಪಯ್ಯನ ಕರಕೊಂಡು, ಅವರ ಜೊತೆ ಇರುವ ಫೋಟೋ ತರಲಿಕ್ಕೆ ಸುವ್ವಿಗೆ ಹೇಳಿದಾರಂತೆ.
ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಅಳಿಮನದವರಾಗಿ ಮನುಷ್ಯ ಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆ ಯೆಂದಿಗೂ ಶರಣಾ ಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ.
ಲೇಖಕ ತಮ್ಮದೇ ಆದ ಸಂಸಾ ರದ ನೋವುಗಳನ್ನು, ಸಾಮಾಜಿಕ ಶೋಷಣೆಯ ಘಟಕಗಳನ್ನು ಮತ್ತು ಸಾಂಸ್ಕೃತಿಕ ವಿನ್ಯಾಸದ ಭ್ರಷ್ಟ ರೂಪವನ್ನೇ ತನ್ನ ನಿರೂಪಣೆಯಲ್ಲಿ ಧೈರ್ಯದಿಂದ ಎದುರುಗೊಳ್ಳು ತ್ತಾರೆ. ಅವರ ಶಬ್ದಗಳು ನಾಟಕೀಯತೆಯ ಅಲಂಕಾರವನ್ನು ತಿರಸ್ಕರಿಸಿ, ಸತ್ಯಾನುಭವದ ನಿಜತೆಯನ್ನು ಹಿಡಿದು ನಿಲ್ಲುತ್ತವೆ. ಈ ಶುದ್ಧ ಅನುಭವವೇ ಕಾದಂಬರಿಯ ಪ್ರಭಾವಶೀಲತೆಯ ಮೂಲವಾಗಿದೆ.
ಅದು ನಮ್ಮ ಬಾಲ್ಯದ ದಿನಗಳ ಆಕರ್ಷಣೆಯಾಗಿದ್ದ ಚಿತ್ರದುರ್ಗದ ಕೋಟೆಯ ರಹಸ್ಯಗಳ ಕುರಿತೇ ಇತ್ತು. ಅದನ್ನು ಹತ್ತಾರು ಸಲ ಓದಿದ್ದಷ್ಟೇ ಅಲ್ಲ ಪಾರಾಯಣ ಮಾಡಿದ್ದೂ ಆಯಿತು. ಮುಂದಿನ ಸಲ ಚಿತ್ರದುರ್ಗಕ್ಕೆ ಹೋದಾಗ ಚಂದ್ರವಳ್ಳಿಗೆ ಹೋಗಿ ಅಲ್ಲಿ ಧವಳಗಿರಿ, ನಾಮದ ಜಲಪಾತ, ಶಿಲಾದುರ್ಗ ಗಳನ್ನು ಹುಡುಕಿದ್ದೂ ಆಯಿತು. ಅವು ಕವಿಯ ಕಲ್ಪನೆ ಎಂಬ ತಿಳಿವಳಿಕೆ ಇರುವ ವಯಸ್ಸಲ್ಲವಾದ್ದ ರಿಂದ ನಿರಾಶರಾಗಿದ್ದೂ ಆಯಿತು
‘ನಾವು ಮಾಡಬೇಕಾದದ್ದನ್ನೆಲ್ಲ ಆಯಾ ಕಾಲಕಾಲಕ್ಕೆ ಮಾಡಿಬಿಡಬೇಕು ನೋಡು. ಇಲ್ಲದಿದ್ದರೆ ಒಂದಲ್ಲ ಒಂದಿನ ಅವು ನಮ್ಮನ್ನು ಕಾಡುತ್ತವೆ’ ಎಂಬ ಅವರ ನುಡಿಯನ್ನು ನಾನು ಮರೆತದ್ದೇ ಇಲ್ಲ. ಕಾರಣ ಅವರ ಮಡದಿ ಇದ್ದಾಗಲೇ ಆಕೆಗೆ ಅರ್ಪಿಸಬಹುದಾದ ಸಾಧ್ಯತೆಯನ್ನು ಅವರು ಮುಂದೂಡುತ್ತಲೇ ಬಂದು ಅದು ಉಳಿದೇ ಹೋದದ್ದು ಅವರಿಗೆ ಅಗಾಗ ಚುಚ್ಚುತ್ತಲೇ ಇದ್ದ ದಾರುಣ ನೋವು ನಂತರ ದಲ್ಲೂ ಅವರನ್ನು ಕಾಡಿತ್ತು
ಕವಿತೆಗೆ ಹಾಡುವ ಗುಣ ಕೊಡುವುದು ಬಹಳ ಸರಳ ಸಂಗತಿ. ಆದರೆ ಸಂಗೀತದ ಬೇರೆ ಸಾಧ್ಯತೆಗಳ ಕುರಿತು ಬೇಂದ್ರೆ ಅವರಿಗೆ ಕುತೂಹಲವಿತ್ತು. ಶಬ್ದ ಮತ್ತು ಅರ್ಥ ಎರಡನ್ನೂ ದಾಟಿದ ನಾದದ ಕುರಿತು ಅವರಿಗೆ ಕುತೂಹಲವಿತ್ತು. ಭಾರತೀಯ ಸಂಗೀತ ಎಂದರೆ ೨೨/೭ ಎಂದರು ಬೇಂದ್ರೆ; ಈ ಸಂಖ್ಯಾಶೇಷವು ಪೈ ಯನ್ನು ಸೂಚಿಸುತ್ತದೆ; ಹೀಗೆ ಚಿಂತಿಸಿದವರಲ್ಲಿ ಬೇಂದ್ರೆಯವರೇ ಮೊದಲಿಗರು ಎನ್ನುತ್ತಾರೆ ಭಾಸ್ಕರ್ ಚಂದಾವರ್ಕರ್. ನಮಗೆ ಸ್ವರಗಳನ್ನು ಹಿಡಿಯಲು ಕಷ್ಟವಾಗುವುದು ರಾಗಗಳ ಸೂತ್ರದಿಂದ. ರಾಗಗ ಳನ್ನೇ ಬಿಟ್ಟು ಸ್ವರದ ನೆಲೆಯಲ್ಲಿ ಹೋದರೆ.. ಬೇಂದ್ರೆ ಇಂತಹ ಸಾಧ್ಯತೆ ಯೋಚಿಸಿದ್ದರೆ? ಹೀಗೆ ಊಹಿಸಲು ಸಾಕಷ್ಟು ಕಾರಣಗಳಿವೆ.
ಇತ್ತೀಚೆಗೆ ಆರನೆಯ ತರಗತಿಯ ಬಾಲಕನೊಬ್ಬ ತನಗಿಂತ ಹಿರಿಯ ವಿದ್ಯಾರ್ಥಿಯನ್ನು ಕೊಲೆ ಮಾಡಿದ ನೋವಿನ ಸುದ್ದಿ ಹುಬ್ಬಳ್ಳಿಯಿಂದ ವರದಿಯಾಗಿದೆ. ಇಂತಹ ದುರಂತಗಳು ನಿಜಕ್ಕೂ ಆಘಾತ ಹುಟ್ಟಿಸು ವಂತಹವು. ಕೆಲವೇ ದಶಕಗಳ ಹಿಂದೆ ಇಂತಹ ದುರ್ಘಟನೆಗಳನ್ನು ಊಹಿಸಲೂ ಅಸಾಧ್ಯ ಎನಿಸು ವಂತಿತ್ತು. ಇಂದಿನ ಅಂತರ್ಜಾಲ ಯುಗ ಮತ್ತು ಆ ಮೂಲಕ ಸುಲಭವಾಗಿ ದೊರೆಯುವ ಹಿಂಸಾಭರಿತ ದೃಶ್ಯಗಳು, ಇಂತಹ ಎಳೆಯ ಮತ್ತು ಯು ತಲೆಮಾರಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆಯೆ?