ಭಯೋತ್ಪಾದನೆಯ ಕರಾಳ ಕೃತ್ಯಕ್ಕೆ ಒಂದು ಸಾಕ್ಷಿ
ಮಾನವೀಯತೆಯ ಯಾವ ಅಂಶವನ್ನೂ ಹುಡುಕಲಾಗದ ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಅಂದು ನಡೆಸಿದ ಹಿಂಸೆಯು ಮನಸ್ಸನ್ನು ಕಲಕುತ್ತದೆ. ಗಾಜಾ ಗಡಿಗೆ ಸಮೀಪ ನಡೆದ ಯುವಕರ ಸಂಗೀತ ಮಹೋತ್ಸವ (ಫೆಸ್ಟಿವಲ್) ನಡೆದ ಜಾಗವನ್ನು ಗುರಿಯಾಗಿಸಿಕೊಂಡು 2023ರ ಅಕ್ಟೋಬರ್ ೭ರ ಬೆಳಗಿನ ಜಾವ, ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಯನ್ನು ನಡೆಸಿದರು.