ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !
ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.
ಆಕೆಗೆ ಮಕ್ಕಳ ಡ್ಯಾನ್ಸ್, ಮತ್ತಿನ್ನೇನೊ ನೋಡುವುದಕ್ಕಿಂತ, ಅವರನ್ನು ಸಭೆ ಮೇಲೆ ಕಳುಹಿಸು ವುದೇ ಮಹಾ ಸಂಭ್ರಮ. ಜೊತೆಗೆ ಕೆಲವು ಶಾಲೆಯಲ್ಲಿ, ಅಕಸ್ಮಾತ್ ಆಗಿ ಕೆಲವು ಶಿಕ್ಷಕರ ಕಾಮುಕತನ ಗೊತ್ತಾದರೆ ಆಕೆ ಮಹಾಕಾಳಿಯಾಗಿದ್ದೂ ಇದೆ. ಜೊತೆಗೆ, ನಮ್ಮೂರ ಹೆಣ್ಮಕ್ಕಳಿಗೆಲ್ಲ ಅಂತ ಕಾಮಪಿಪಾಸುಗಳಿಂದ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆಯ ಪಾಠ ಮಾಡಿದ ದಿಟ್ಟ ಹೆಂಗಸಾಕೆ.
ಚಾರ್ಲಿ, ಬೆಲ್ ಬಾಟಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ, ಕಾಂತಾರ ಚಾಪ್ಟರ್ 1 ಹೀಗೆ ಸಾಲು ಸಾಲು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದವರು ಇವರೇ! ಖ್ಯಾತ ನಟ ರಿಷಬ್ ಶೆಟ್ಟಿಯವರ ಅವರ ಮುದ್ದಿನ ಮಡದಿ ಯಾಗಿ, ಅವರ ಪ್ರತಿ ಸಿನಿಮಾಗಳಿಗೂ ಬೆನ್ನೆಲುಬಾಗಿ ನಿಂತು ಹೊಸತನಕ್ಕೆ ನಾಂದಿ ಹಾಡಿದವರು.
ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ರಾಗಿ ಅಕ್ಕಿಯ ಕುರಿತು ಜನಪದ ಕಥೆಯ ಬೇರೆ ಬೇರೆ ಅವತರಣಿಕೆಗಳು ಲಭ್ಯವಿವೆ. ಒಂದು ಪಠ್ಯದಲ್ಲಿ ಇದು ತುಳುನಾಡಿನಲ್ಲಿ ಬೆಳೆಯುತ್ತಿದ್ದ ‘ಅತಿಕಾರೆ’ ಎನ್ನುವ ಭತ್ತದ ತಳಿಯು ದೈವತ್ವಕ್ಕೆ ಏರಿದ ಕಥೆ ಆದರೆ ಇನ್ನೊಂದು ಪಠ್ಯದಲ್ಲಿ ಇದು ಭತ್ತ ರಾಗಿಗೆ ಬುದ್ಧಿ ಹೇಳುವ ಕಥೆ, ಹಾಗೆಯೇ ಮತ್ತೊಂದು ಅವತರಣಿಕೆಯಲ್ಲಿ ರಾಗಿ ಭತ್ತಕ್ಕೆ ಸಮಾಧಾನ ಹೇಳುವ ಕತೆ. ಹೀಗೆ ಬೇರೆ ಬೇರೆ ರೀತಿಯ ಕಥನಗಳು ಲಭ್ಯವಿವೆ.
ಹೊಟ್ಟೆಯೊಳಗೆ ಮಗುವಿನ ಕೈಕಾಲುಗಳ ಚಲನೆ, ಹೃದಯ ಬಡಿತ ಸರಿಯಾದ ಮಿತಿಯೊಳಗೇ ಇತ್ತು. ಹದಿನೈದು ದಿನಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ಮಾಡಿದ ಹೊಟ್ಟೆಯ ಅಲ್ಟ್ರಾಸೌಂಡ್ ವರದಿ ಕೂಡಾ ಈತ ಕಂಡುಕೊಂಡ ಅಂಶಗಳನ್ನೇ ಪುಷ್ಟೀ ಕರಿಸುತ್ತಿತ್ತು. ಅದರ ಪ್ರಕಾರ ಮಗುವಿನ ತೂಕ ಸಾಧಾರಣ ಎರಡೂವರೆ ಕೆಜಿಯಷ್ಟಿದ್ದು, ಈ ನಂತರದ ಹತ್ತು ಹದಿನೈದು ದಿನಗಳಲ್ಲಿ ಐನೂರು ಗ್ರಾಂಗಳಷ್ಟಾದರೂ ಹೆಚ್ಚಾಗಿರಬೇಕೆಂದುಕೊಂಡನು ಡಾ. ಎಸ್. ಮಗು ಸಸೂತ್ರವಾಗಿ ಎಡಕ್ಕೆ ತಿರುಗಿ ಬಂದರೆ ಸರಿ.
ಪಶ್ಚಿಮ ಘಟ್ಟಗಳು ಮತ್ತು ಅದರ ಆಶ್ರಯದಲ್ಲಿ ಬೆಳೆದಿರುವ ವನಸಿರಿ - ಇದನ್ನು ಪಡೆದಿರುವ ನಮ್ಮ ರಾಜ್ಯವು ನಿಜಕ್ಕೂ ಅದೃಷ್ಟವಂತ ರಾಜ್ಯ! ಇಂತಹದೊಂದು ಅಪರೂಪದ ಕಾಡು ಪ್ರದೇಶವನ್ನು ಪಡೆದಿರುವ ನಮ್ಮ ರಾಜ್ಯದ ಜನರು ಸಹ ಅದೃಷ್ಟ ವಂತರು. ಇಂತಹ ಅಪರೂಪದ ಕಾಡು, ವನಸಿರಿ, ಜೀವ ವೈವಿಧ್ಯ ನಮ್ಮ ದೇಶದ ಅವೆಷ್ಟೋ ರಾಜ್ಯಗಳಲ್ಲಿ ಕಾಣ ಸಿಗದು!
ದ್ರಾವಿಡ ಮೂಲದ ತುಳು ಶಬ್ದವಾದ ‘ಬೆರ್ಮೆರ್’ ಎನ್ನುವುದರ ಅರ್ಥ ದೇವರು ಎಂದು. ‘ಬೆರ್ಮೆರ್’ ಎನ್ನುವುದು ರೂಢನಾಮವೇ ಹೊರತು ಅಂಕಿತನಾಮವಲ್ಲ. ಅಂದರೆ ಅದು ದೇವರು ಎನ್ನುವ ಅರ್ಥ ಕೊಡುವ ದ್ರಾವಿಡ ಮೂಲದ ತುಳು ಶಬ್ದ. ಇದಕ್ಕೆ ಸಮಾನ ಎನಿಸುವ ತಮಿಳು ಪದ ‘ಪೆರುಮಾನ್; ಅಥವಾ ‘ಪೆರುಮಾಳ್’ ಎನ್ನುವುದು. ವೈದಿಕ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ತುಳುನಾಡಿಗೆ ಬರುವ ಮುನ್ನ, ಇಲ್ಲಿ ದೇವತಾ ಸಂಕಲ್ಪಕ್ಕೆ ಇದ್ದಿರಬಹುದಾದ ದ್ರಾವಿಡ ಮೂಲದ ಶಬ್ದವೇ ‘ಬೆರ್ಮೆರ್’.
ಒಮ್ಮೊಮ್ಮೆ ಪ್ರವಾಸಿಗರೊಂದಿಗೆ ಹಲ್ಲು ಮಸಿಯುತ್ತ ಅವರನ್ನು ಹೆದರಿಸುತ್ತ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತವೆ. ಅಷ್ಟರಲ್ಲೇ ಜೊತೆಗಾರರೂ ಹಾಜರೂ! ಅಲ್ಲಿಂದ ಗುಹಾಂತರ ದೇವಾಲಯ, ಮ್ಯೂಸಿಯಂ, ಕಪ್ಪೆ ಆರೆಭಟ್ಟನ ಶಾಸನ, ರಂಗನಾಥ ಮಂದಿರ, ಭೂತನಾಥ ಟೆಂಪಲ್ ಎಂದೆಲ್ಲಾ ಬಂದ ಪ್ರವಾಸಿಗರ ಪ್ರಫುಲ್ಲ ಮನಸಿನಲ್ಲಿ ಈ ಕೋತಿಗಳು ಅವ್ಯಕ್ತ ಭಯವನ್ನಂತೂ ಹುಟ್ಟು ಹಾಕಿ ಬಿಡುತ್ತವೆ.
ಪಶ್ಚಿಮ ಘಟ್ಟವನ್ನು ಕಾಪಾಡುವ ಕುರಿತು ಶಿಫಾರಸು ಮಾಡಿದ ಈ ವರದಿಯನ್ನು ವಿಶ್ವಸಂಸ್ಥೆಯ ಯುನೆಸ್ಕೋ ಗಂಭೀರವಾಗಿ ತೆಗೆದುಕೊಂಡಿತು ಮತ್ತು ಪಶ್ಚಿಮ ಘಟ್ಟಗಳ ಹಲವು ತಾಣಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಿತು. ಆದರೆ, ಪಶ್ಚಿಮ ಘಟ್ಟಗಳು ಹರಡಿರುವ ಕೇರಳ ಮತ್ತು ಕರ್ನಾಟಕ ಸರಕಾರಗಳು ಆ ವರದಿಯನ್ನು ಪೂರ್ತಿಯಾಗಿ ಒಪ್ಪಲಿಲ್ಲ!
ಮರಗಳ ತಾಯಿ ಎಂದೇ ಖ್ಯಾತರಾದ ಸಾಲುಮರದ ಸಂಗಾತಿ ತಿಮ್ಮಕ್ಕ ದೈಹಿಕವಾಗಿ ನಮ್ಮನ್ನು ಅಗಲಿ ದ್ದರೂ (14-11-2025), ಅವರ ನೆನಪು, ಆ ಮುಗ್ಧ ನಗು, ಸರ್ವರನ್ನು ಅಪ್ಪಿಕೊಳ್ಳುವ ಮನೋಭಾವ, ಸಾಲುಮರ ಬೆಳೆಸಿದ ಸಂದೇಶ ಸದಾ ಹಚ್ಚ ಹಸಿರು. ಉಸಿರು ನಿಂತ ನಂತರವೂ ಮರಗಳಲ್ಲಿ ಜೀವಂತ ವಾಗಿ ಉಸಿರಾಡುತ್ತಿದ್ದಾರೆ ತಿಮ್ಮಕ್ಕ.
ಮರುದಿನ ಬೆಳಿಗ್ಗೆ ಸ್ಥಳೀಯ ಪತ್ರಿಕೆಗಳ ಪುಟಗಳಲ್ಲಿ ನಮ್ಮ ಪ್ರಯಾಣದ ಕಥೆ, ಚಿತ್ರಸಹಿತ ಪ್ರಕಟಗೊಂಡದ್ದನ್ನು ಕಂಡು ಮನಸ್ಸು ಆನಂದದಿಂದ ತುಂಬಿಬಿಟ್ಟಿತು. ಬಯಸದೇ ಬಂದ ಈ ಭಾಗ್ಯವು ನಮ್ಮ ಸರಳ ಬೈಕ್ ಯಾತ್ರೆಗೆ ಅರ್ಥ, ಗೌರವ ಮತ್ತು ಶಾಶ್ವತ ಸ್ಮೃತಿಯನ್ನು ನೀಡಿತು. ಆ ಕ್ಷಣದ ಸಂತೋಷ ಹೃದಯದೊಳಗೆ ಮೌನವಾಗಿ ಅರಳಿದ ಹೂವಿನಂತಿತ್ತು.
ನಮ್ಮ ಮನೆಯ ಮೇಲ್ಭಾಗದಲ್ಲಿ ಹಲಸಿನ ಮರವೊಂದಿತ್ತು; ಅದರ ನೆರಳಿನಿಂದಾಗಿ, ಬೇಸಗೆಯಲ್ಲಿ ಸೆಕೆ ಕಡಿಮೆಯಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕೆಲವು ಕಿ.ಮೀ. ಪೂರ್ವ ದಿಕ್ಕಿಗೆ ಸಾಗಿದರೆ, ಪಶ್ಚಿಮ ಘಟ್ಟ ಸಾಲಿನ ಗರ್ಭದಲ್ಲೇ ಎಂಬಂತೆ ಇರುವ ಕೆಲವು ಹಳ್ಳಿಗಳಲ್ಲಂತೂ, ಮನೆಗಳನ್ನೇ ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಂತೆ ಮರ, ಗಿಡ, ಬಳ್ಳಿಗಳು ಬೆಳೆದಿರುತ್ತಿದ್ದವು.
ಅವರೇ ಹೊಸದುರ್ಗ ತಾಲೂಕಿನ ಡಾ.ಇ ಎಸ್. ಬ್ರಹ್ಮರಾಜು. ಇಂದಿನ ದುಬಾರಿ ಜಗತ್ತಿನಲ್ಲೂ ಕೇವಲ ಇಪ್ಪತ್ತು ರೂಪಾಯಿ ಪಡೆದು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಬಡವರಿಗೆ ಆರೋಗ್ಯ ಸೇವೆ ಯನ್ನು ನೀಡುತ್ತಾ ಎಲ್ಲರಿಂದಲ್ಲೂ ‘ಇಪ್ಪತ್ತು ರೂಪಾಯಿ ಡಾಕ್ಟರ್’ ಎಂದು ಜನಮನ್ನಣೆಯನ್ನು ಪಡೆದ ಸರಳ, ಸಜ್ಜನ ಪ್ರತಿಭಾನ್ವಿತ ವೈದ್ಯರು ಇವರು.
ಮಾನವೀಯತೆಯ ಯಾವ ಅಂಶವನ್ನೂ ಹುಡುಕಲಾಗದ ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಅಂದು ನಡೆಸಿದ ಹಿಂಸೆಯು ಮನಸ್ಸನ್ನು ಕಲಕುತ್ತದೆ. ಗಾಜಾ ಗಡಿಗೆ ಸಮೀಪ ನಡೆದ ಯುವಕರ ಸಂಗೀತ ಮಹೋತ್ಸವ (ಫೆಸ್ಟಿವಲ್) ನಡೆದ ಜಾಗವನ್ನು ಗುರಿಯಾಗಿಸಿಕೊಂಡು 2023ರ ಅಕ್ಟೋಬರ್ ೭ರ ಬೆಳಗಿನ ಜಾವ, ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಯನ್ನು ನಡೆಸಿದರು.
ಭೈರಪ್ಪನವರ ಬರವಣಿಗೆಯಷ್ಟೇ ಬದುಕೂ ಚೊಕ್ಕವಾದದ್ದು. ನಾಡು ಮಾತ್ರವಲ್ಲದೇ ಭಾಷೆ-ಗಡಿ ಗಳನ್ನೂ ಮೀರಿ ವಿಶ್ವಸಾಹಿತ್ಯವೂ ಮೆಚ್ಚಿಕೊಂಡ ಭೈರಪ್ಪನವರ ಖಾಸಗಿ ಬದುಕು ಹಾಗೂ ವ್ಯಕ್ತಿತ್ವದ ಬಗೆಗೆ ಅನೇಕರಿಗೆ ಅಷ್ಟಾಗಿ ತಿಳಿದಿಲ್ಲ. ಇಂತದ್ದೇ ವಿಚಾರಗಳನ್ನು ಓದುಗನಿಗೆ ಮೊಗೆದು ಕೊಡುವ ಕೃತಿ ಲೇಖಕ ದೀಕ್ಷಿತ್ ನಾಯರ್ ಅವರು ಬರೆದಿರುವ ‘ಎತ್ತರೆತ್ತರ ಭೈರಪ್ಪ-ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು’.
ನಮ್ಮ ವಸತಿ ಸಂಕೀರ್ಣದ ಮುಂಭಾಗದ ವಿಶಾಲವಾದ ರಸ್ತೆಯಲ್ಲಿ ಬಸ್ಸುಗಳು ಬರುತ್ತವಾದರೂ, ಕೆಲವೇ ಕೆಲವು; ಅಂದರೆ ದಿನಕ್ಕೆ ನಾಲ್ಕಾರು ಮಾತ್ರ. ಆದ್ದರಿಂದ, ನಮ್ಮ ಮಗಳು ಕಚೇರಿಯಿಂದ ವಾಪಸು ಬರುವುದನ್ನೇ ಕಾದು ಕುಳಿತಿದ್ದು, ಸಂಜೆಯ ಹೊತ್ತಿನಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ವಾಚನಾಲಯಕ್ಕೆ ಭೇಟಿ ನೀಡುವುದು, ಅಲ್ಲಿನ ಸೋಜಿಗಳನ್ನು ಗಮನಿಸುವುದು ನಮ್ಮ ಹವ್ಯಾಸ ಎನಿಸಿತು.