ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿರಾಮ
Chandrashekher Hegde Badami Column: ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಅಳಿಮನದವರಾಗಿ ಮನುಷ್ಯ ಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆ ಯೆಂದಿಗೂ ಶರಣಾ ಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ.

Narayana Yaji Column: ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಲೇಖಕ ತಮ್ಮದೇ ಆದ ಸಂಸಾ ರದ ನೋವುಗಳನ್ನು, ಸಾಮಾಜಿಕ ಶೋಷಣೆಯ ಘಟಕಗಳನ್ನು ಮತ್ತು ಸಾಂಸ್ಕೃತಿಕ ವಿನ್ಯಾಸದ ಭ್ರಷ್ಟ ರೂಪವನ್ನೇ ತನ್ನ ನಿರೂಪಣೆಯಲ್ಲಿ ಧೈರ್ಯದಿಂದ ಎದುರುಗೊಳ್ಳು ತ್ತಾರೆ. ಅವರ ಶಬ್ದಗಳು ನಾಟಕೀಯತೆಯ ಅಲಂಕಾರವನ್ನು ತಿರಸ್ಕರಿಸಿ, ಸತ್ಯಾನುಭವದ ನಿಜತೆಯನ್ನು ಹಿಡಿದು ನಿಲ್ಲುತ್ತವೆ. ಈ ಶುದ್ಧ ಅನುಭವವೇ ಕಾದಂಬರಿಯ ಪ್ರಭಾವಶೀಲತೆಯ ಮೂಲವಾಗಿದೆ.

N S SridharMurthy Column: ಹಾಡು ಮುಗಿಯುವುದಿಲ್ಲ, ಮುಗಿದರದು ಹಾಡಲ್ಲ !

ಹಾಡು ಮುಗಿಯುವುದಿಲ್ಲ, ಮುಗಿದರದು ಹಾಡಲ್ಲ !

ಅದು ನಮ್ಮ ಬಾಲ್ಯದ ದಿನಗಳ ಆಕರ್ಷಣೆಯಾಗಿದ್ದ ಚಿತ್ರದುರ್ಗದ ಕೋಟೆಯ ರಹಸ್ಯಗಳ ಕುರಿತೇ ಇತ್ತು. ಅದನ್ನು ಹತ್ತಾರು ಸಲ ಓದಿದ್ದಷ್ಟೇ ಅಲ್ಲ ಪಾರಾಯಣ ಮಾಡಿದ್ದೂ ಆಯಿತು. ಮುಂದಿನ ಸಲ ಚಿತ್ರದುರ್ಗಕ್ಕೆ ಹೋದಾಗ ಚಂದ್ರವಳ್ಳಿಗೆ ಹೋಗಿ ಅಲ್ಲಿ ಧವಳಗಿರಿ, ನಾಮದ ಜಲಪಾತ, ಶಿಲಾದುರ್ಗ ಗಳನ್ನು ಹುಡುಕಿದ್ದೂ ಆಯಿತು. ಅವು ಕವಿಯ ಕಲ್ಪನೆ ಎಂಬ ತಿಳಿವಳಿಕೆ ಇರುವ ವಯಸ್ಸಲ್ಲವಾದ್ದ ರಿಂದ ನಿರಾಶರಾಗಿದ್ದೂ ಆಯಿತು

Santhosh Kumar Mehandale Column: ಸಾಹಿತ್ಯವನ್ನೇ ಧೇನಿಸಿಕೊಂಡು ಬಂದ ಕವಿ

ಎರಡು ತಲೆಮಾರುಗಳ ಸಾಹಿತ್ಯ ಕೊಂಡಿ

‘ನಾವು ಮಾಡಬೇಕಾದದ್ದನ್ನೆಲ್ಲ ಆಯಾ ಕಾಲಕಾಲಕ್ಕೆ ಮಾಡಿಬಿಡಬೇಕು ನೋಡು. ಇಲ್ಲದಿದ್ದರೆ ಒಂದಲ್ಲ ಒಂದಿನ ಅವು ನಮ್ಮನ್ನು ಕಾಡುತ್ತವೆ’ ಎಂಬ ಅವರ ನುಡಿಯನ್ನು ನಾನು ಮರೆತದ್ದೇ ಇಲ್ಲ. ಕಾರಣ ಅವರ ಮಡದಿ ಇದ್ದಾಗಲೇ ಆಕೆಗೆ ಅರ್ಪಿಸಬಹುದಾದ ಸಾಧ್ಯತೆಯನ್ನು ಅವರು ಮುಂದೂಡುತ್ತಲೇ ಬಂದು ಅದು ಉಳಿದೇ ಹೋದದ್ದು ಅವರಿಗೆ ಅಗಾಗ ಚುಚ್ಚುತ್ತಲೇ ಇದ್ದ ದಾರುಣ ನೋವು ನಂತರ ದಲ್ಲೂ ಅವರನ್ನು ಕಾಡಿತ್ತು

Shashidhara Halady Column: ಸ್ಪೂರ್ತಿ ತುಂಬುವ ಬರಹಗಳು

ಸ್ಪೂರ್ತಿ ತುಂಬುವ ಬರಹಗಳು

ನಮ್ಮೊಳಗೆ ಇರುವ ಬುದ್ಧ ಅದೆಷ್ಟೋ ಬಾರಿ ಸುಶುಪ್ತನಾಗಿರಬಹುದು; ಇಂದಿನ ಒತ್ತಡದ ಬದುಕಿನ ಧಾವಂತದಲ್ಲಿ, ನಾಗಾಲೋಟದಲ್ಲಿ, ಆತನ ಮಾತುಗಳನ್ನು ನಾವು ಕೇಳಿಸಿಕೊಳ್ಳದೇ ಇರಬಹುದು; ಆದರೆ ನಿಜವಾದ ಬದುಕಿನ ಗುರಿಯ ದಾರಿಯಲ್ಲಿ ಸಾಗಲು ನಮ್ಮೊಳಗಿರುವ ಬುದ್ಧನ ಮಾತುಗಳನ್ನು ಆಲಿಸ ಬೇಕು, ಆತನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು.

Basavaraj M Yaraguppi Column: ಮೇ ಫ್ಲವರ್‌ನ ಕೆಂಬಣ್ಣ !

ಮೇ ಫ್ಲವರ್‌ನ ಕೆಂಬಣ್ಣ !

ಇಲ್ಲಿ ಹೇಳ ಹೊರಟಿರುವುದು ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಮೇ ತಿಂಗಳಲ್ಲಿ ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು!

S N SridharMurthy Column: ಬೇಂದ್ರ ಸಂಗೀತ: ಒಂದು ವಿಶ್ಲೇಷಣೆ: ರವೀಂದ್ರ ಸಂಗೀತ ಇದ್ದಂತೆ ಬೇಂದ್ರೆ ಸಂಗೀತ ಸಾಧ್ಯವೆ ?

ರವೀಂದ್ರ ಸಂಗೀತ ಇದ್ದಂತೆ ಬೇಂದ್ರೆ ಸಂಗೀತ ಸಾಧ್ಯವೆ ?

ಕವಿತೆಗೆ ಹಾಡುವ ಗುಣ ಕೊಡುವುದು ಬಹಳ ಸರಳ ಸಂಗತಿ. ಆದರೆ ಸಂಗೀತದ ಬೇರೆ ಸಾಧ್ಯತೆಗಳ ಕುರಿತು ಬೇಂದ್ರೆ ಅವರಿಗೆ ಕುತೂಹಲವಿತ್ತು. ಶಬ್ದ ಮತ್ತು ಅರ್ಥ ಎರಡನ್ನೂ ದಾಟಿದ ನಾದದ ಕುರಿತು ಅವರಿಗೆ ಕುತೂಹಲವಿತ್ತು. ಭಾರತೀಯ ಸಂಗೀತ ಎಂದರೆ ೨೨/೭ ಎಂದರು ಬೇಂದ್ರೆ; ಈ ಸಂಖ್ಯಾಶೇಷವು ಪೈ ಯನ್ನು ಸೂಚಿಸುತ್ತದೆ; ಹೀಗೆ ಚಿಂತಿಸಿದವರಲ್ಲಿ ಬೇಂದ್ರೆಯವರೇ ಮೊದಲಿಗರು ಎನ್ನುತ್ತಾರೆ ಭಾಸ್ಕರ್ ಚಂದಾವರ್ಕರ್. ನಮಗೆ ಸ್ವರಗಳನ್ನು ಹಿಡಿಯಲು ಕಷ್ಟವಾಗುವುದು ರಾಗಗಳ ಸೂತ್ರದಿಂದ. ರಾಗಗ ಳನ್ನೇ ಬಿಟ್ಟು ಸ್ವರದ ನೆಲೆಯಲ್ಲಿ ಹೋದರೆ.. ಬೇಂದ್ರೆ ಇಂತಹ ಸಾಧ್ಯತೆ ಯೋಚಿಸಿದ್ದರೆ? ಹೀಗೆ ಊಹಿಸಲು ಸಾಕಷ್ಟು ಕಾರಣಗಳಿವೆ.

Dr Bharathi Maravanthe Column: ವೀರು

ವೀರು

ಭಯೋತ್ಪಾದಕರನ್ನು, ಬಂದೂಕು ಹಿಡಿದು ಅಮಾಯಕ ಜನರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಸಾಯಿಸಿದವರನ್ನು ಸೇನೆಯು ಬೇಟೆಯಾಡಿದೆ. ಆದರೆ, ನಮ್ಮಲ್ಲೇ ಸುತ್ತ ಮುತ್ತ ವಾಸಿಸುತ್ತಿರುವ ಸೋಗು ವೇಷದ ಭಯೋತ್ಪಾದಕರನ್ನು ಹೇಗೆ ಶಿಕ್ಷಿಸುವುದು? ಇದೇ ಪ್ರಶ್ನೆ ವೀರುವಿನ ಮನದಲ್ಲಿ ಕಾಡುತ್ತಿತ್ತು.

Uma Ramanna Column: ಎಳೆ ಮನಸ್ಸಿನ ತಲ್ಲಣಗಳು

ಎಳೆ ಮನಸ್ಸಿನ ತಲ್ಲಣಗಳು

ಇತ್ತೀಚೆಗೆ ಆರನೆಯ ತರಗತಿಯ ಬಾಲಕನೊಬ್ಬ ತನಗಿಂತ ಹಿರಿಯ ವಿದ್ಯಾರ್ಥಿಯನ್ನು ಕೊಲೆ ಮಾಡಿದ ನೋವಿನ ಸುದ್ದಿ ಹುಬ್ಬಳ್ಳಿಯಿಂದ ವರದಿಯಾಗಿದೆ. ಇಂತಹ ದುರಂತಗಳು ನಿಜಕ್ಕೂ ಆಘಾತ ಹುಟ್ಟಿಸು ವಂತಹವು. ಕೆಲವೇ ದಶಕಗಳ ಹಿಂದೆ ಇಂತಹ ದುರ್ಘಟನೆಗಳನ್ನು ಊಹಿಸಲೂ ಅಸಾಧ್ಯ ಎನಿಸು ವಂತಿತ್ತು. ಇಂದಿನ ಅಂತರ್ಜಾಲ ಯುಗ ಮತ್ತು ಆ ಮೂಲಕ ಸುಲಭವಾಗಿ ದೊರೆಯುವ ಹಿಂಸಾಭರಿತ ದೃಶ್ಯಗಳು, ಇಂತಹ ಎಳೆಯ ಮತ್ತು ಯು ತಲೆಮಾರಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆಯೆ?

Raghavendra Rayalapadu Column: ರೇಡಿಯೋ ಕಿಯಾಸ್ಕ್‌ 1940 !

ರೇಡಿಯೋ ಕಿಯಾಸ್ಕ್‌ 1940 !

ರೇಡಿಯೋ ಕಿಯಾಸ್ಕ್ 1940 ಎಂದು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ, ಸಿಮೆಂಟ್ ಗಾರೆ ಯಲ್ಲೇ ಅಕ್ಷರ ರೂಪಿಸಿ, ರೇಡಿಯೋ ಕಿಯೋಸ್ಕ್ ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಬರಹ ವನ್ನೂ ಕಾಣಬಹುದು. ಏನಿದು ‘ರೇಡಿಯೋ ಕಿಯಾಸ್ಕ್’ ಎಂಬ ಕುತೂಹಲದಿಂದ ಫೇಸ್‌ಬುಕ್‌ನಲ್ಲಿ ಬರೆಹವೊಂದನ್ನು ಹಾಕಿದಾಗ ಇದನ್ನು ಕಂಡು ಕೇಳಿದ್ದ ಹಲವರು ತಮಗೆ ಗೊತ್ತಿದ್ದ ಮಾಹಿತಿಯನ್ನು ಆಸ್ಥೆಯಿಂದ ಹಂಚಿ ಕೊಂಡರು!

Prof G N Upadhyay Column: ಮೆಡಿಕಲ್‌ ಕಾಲೇಜು ಆರಂಭಕ್ಕೆ ಕಾರಂತರ ಕೊಡುಗೆ !

ಮೆಡಿಕಲ್‌ ಕಾಲೇಜು ಆರಂಭಕ್ಕೆ ಕಾರಂತರ ಕೊಡುಗೆ !

ಸ್ವತ: ವೈದ್ಯರೂ ಶಿಕ್ಷಣ ಪ್ರೇಮಿಗಳೂ ಆಗಿದ್ದ ಡಾ.ಮಾಧವ ಪೈ ಅವರು ಮಣಿಪಾಲದಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಿ ಕೊನೆಯ ಕ್ಷಣದಲ್ಲಿ ಅದಕ್ಕೆ ಸರಕಾರದ ಒಪ್ಪಿಗೆ ಸಿಗದೇ ಹೈರಾಣಾಗಿದ್ದರು. ಡಾ.ಪೈ ಅವರ ಆತ್ಮೀಯ ಸ್ನೇಹಿತರಾಗಿದ್ದ ಶಿವರಾಮ ಕಾರಂತರು ಈ ಸಂಗತಿ ಯನ್ನು ತಿಳಿದು ಛಲ ಬಿಡದೆ ಕೇಂದ್ರ ಸಚಿವರೊಬ್ಬರ ಸಹಾಯದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಮೂಲಕ ಮಣಿಪಾಲ ಮೆಡಿಕಲ್ ಕಾಲೇಜಿಗೆ ಬೇಕಾಗಿದ್ದ ಅನುಮತಿ ಕೊಡಿಸುವುದರಲ್ಲಿ ಯಶಸ್ವಿಯಾದರು.

Dr K S Chaithra Column: ಶಿಲಾಸಮಾಧಿಯೇ ವಿಶ್ವದ ಅದ್ಭುತ

ಶಿಲಾಸಮಾಧಿಯೇ ವಿಶ್ವದ ಅದ್ಭುತ

ಕ್ಯಾಟಕಾಂಬ್ ಭೂಗತವಾದ ಮೆಟ್ಟಿಲು, ಕಿರುಮಾರ್ಗ, ಗೂಡು, ಎಲ್ಲವನ್ನೂ ಹೊಂದಿರುವ ಕೋಣೆಗಳ ಜಾಲವಾಗಿದ್ದು ಮೃತರ ಅಂತ್ಯಕ್ರಿಯೆಗೆ ಬಳಸುವ ಸಮಾಧಿ ಸ್ಥಳಗಳು! ಈಜಿಪ್ಟಿನ ಜನರು ಮರಣ ನಂತರದ ಬದುಕಿನಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿದ್ದರು. ಹಾಗಾಗಿಯೇ ಘೆರೋಗಳು ಮತ್ತು ರಾಜ ಮನೆತನದವರಿಗೆ ವಿಶಾಲ ಮತ್ತು ವೈಭವಯುತವಾದ ಸಮಾಧಿಗಳನ್ನು ನಿರ್ಮಿಸಲಾಗುತ್ತಿತ್ತು.

ShashidharaSwamy R Hiremath Colummn: ಕರ್ಕಶ ಕೂಗೇ ಇವುಗಳ ಶಕ್ತಿ !

ಕರ್ಕಶ ಕೂಗೇ ಇವುಗಳ ಶಕ್ತಿ !

ದಂಪತಿ ಹಕ್ಕಿಗಳೆರಡು ಎದುರಿಗಿದ್ದ ಒಣಗಿದ ಟೊಂಗೆಯ ಮೇಲೆ ಬಂದು ಆಸೀನವಾದವು; ಏನೋ ಗಾಬರಿಗೊಂಡಂತೆ ಆ ಹಕ್ಕಿಗಳೆರಡೂ ಅಲ್ಲಿಂದ ಹಾರಿದವು, ಒಂದೇ ಒಂದು ಪೊಟೋ ಕ್ಲಿಕ್ಕಿಸಿದ ನಲ್ಲಾ ಎಂದು ಬೇಜಾರಿನಲ್ಲಿದ್ದವನಿಗೆ ಹತ್ತಿರದಲ್ಲಿದ್ದ ಒಣಗಿದ ಬಡ್ಡೆಯ ಮೇಲೆ ಬೂದು ಹರಟೆ ಮಲ್ಲ ಹಕ್ಕಿ ಬಂದು ಕುತು ಬಿಡೋದೆ! ತಕ್ಷಣವೇ ಪೊಟೊ ಕ್ಲಿಕ್ಕಿಸತೊಡಗಿದೆ.

B K Meenakshi Column: ಎಲ್ಲರ ದೋಸೆಯೂ ಒಂದೇ ಬಣ್ಣ !

ಎಲ್ಲರ ದೋಸೆಯೂ ಒಂದೇ ಬಣ್ಣ !

ಕಳೆದ ಬಾರಿ ಹಾಲಾಡಿ ಅಂತ ಬೋರ್ಡು ಓದಿಕೊಂಡು ಹೋಗಿದ್ದೆವು. ಈಗ ಇಳಿಯೋಣ ಅಂದುಕೊಳ್ಳು ತ್ತಲೇ ನೆನಪಾಯಿತು, ‘ಹಾಲಾಡಿಯ ದೋಸೆ ಹೋಟೆಲ್!’ ಶಶಿಧರ ಹಾಲಾಡಿಯವರು ಇದರ ಬಗ್ಗೆ ಒಂದು ಲೇಖನವನ್ನೇ ಬರೆದಿದ್ದರು. ನಾವೂ ಈ ಹೋಟೆಲ್‌ ನಲ್ಲಿ ದೋಸೆ ತಿನ್ನಲೇಬೇಕೆಂದು ನಿರ್ಧರಿಸಿ ಇಳಿದೆವು. ಹಾಲಾಡಿಯ ಪುಟ್ಟ ಹೊಟೇಲ್, ಗುರು ಕ್ಯಾಂಟೀನ್ ಮುಂದೆ ಇಳಿದು, ಮೊದಲು ಸಾಕ್ಷಿಗೆ ಒಂದು ಫೋಟೋ ತೆಗೆಸಿಕೊಂಡೆವು. ಒಳಗೆ ಹೋಗಿ ನೋಡುತ್ತೇವೆ......ಈಷ್ಟುದ್ದ ಕ್ಯೂ ಇದೆ.

Narayana Yaaji Column: ಮಧ್ಯಮ ಮಾರ್ಗ ಪ್ರವರ್ತಕ ತಥಾಗತ ಬುದ್ದ

ಮಧ್ಯಮ ಮಾರ್ಗ ಪ್ರವರ್ತಕ ತಥಾಗತ ಬುದ್ದ

ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿವಿಗೆ ಬಂತು. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು.

ʼಭಾರತದ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆʼ ಎಂದು ಸುಳ್ಳು ಬೊಗಳಿದ ಡಾನ್!‌

ʼಭಾರತದ 5 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆʼ ಎಂದು ಸುಳ್ಳು ಬೊಗಳಿದ ಡಾನ್!‌

Operation Sindoor: ಭಾರತ ದಾಳಿ ಎಸಗಿ 26 ಅಮಾಯಕ ಪಾಕ್‌ ನಾಗರಿಕರನ್ನು ಕೊಂದಿದೆ ಎಂದು ಡಾನ್ ವರದಿ ಮಾಡಿದೆ. ಹಾಗೇ, ದಾಳಿಗೆ ಪ್ರತೀಕಾರವಾಗಿ ಪಾಕ್‌ ಸೈನ್ಯ ಭಾರತದ 5 ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದಿದೆ. ಇಂಥ ಯಾವುದೇ ಘಟನೆ ನಡೆದಿರುವ ಕುರಿತು ಭಾರತ ಸೇನೆ ವರದಿ ಮಾಡಿಲ್ಲ.

Suresh Gudaganavar Column: ತಲೆಕೂದಲಿನಲ್ಲಿ ದಾಖಲೆ !

ತಲೆಕೂದಲಿನಲ್ಲಿ ದಾಖಲೆ !

ಸ್ಮಿತಾ 14ನೇ ವಯಸ್ಸಿನವರೆಗೆ ಬಾಬ್ ಕಟ್ ಶೈಲಿಯನ್ನು ಹೊಂದಿದ್ದರೂ, 2012ರಲ್ಲಿ ತನ್ನ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಕೂದಲನ್ನು ಬೆಳೆಯಲು ಬಿಡಲು ನಿರ್ಧರಿಸಿದರು. ಸ್ಮಿತಾ ಸಾಮಾನ್ಯ ವಾಗಿ ವಾರಕ್ಕೆ ಎರಡು ಬಾರಿ ತನ್ನ ಕೂದಲನ್ನು ತೊಳೆಯುತ್ತಾರೆ. ಅವರು ಕೂದಲನ್ನು ತೊಳೆದು ಒಣಗಿಸುವ ಮೊದಲು 40-45 ನಿಮಿಷಗಳನ್ನು ಕಳೆಯುತ್ತಾರೆ. “ನಾನು ಒಂದು ಹಾಳೆಯನ್ನು ಕೆಳಗೆ ಇಡುತ್ತೇನೆ. ಅದರ ಮೇಲೆ ತನ್ನ ಹಾಸಿಗೆಯ ಮೇಲೆ ನಿಂತು ಕೂದಲನ್ನು ಉದ್ದವಾಗಿ ಬಿಡುತ್ತೇನೆ" ಎಂದು ಅವರು ಹೇಳುತ್ತಾರೆ

Raghavendra Rayalapadu Column: ಬದುಕು ಎಂದರೆ ಓದು ಬರಹ ಮಾತ್ರ ಅಲ್ಲ !

ಬದುಕು ಎಂದರೆ ಓದು ಬರಹ ಮಾತ್ರ ಅಲ್ಲ !

ಇಬ್ಬರೂ ವೃತ್ತಿಯಲ್ಲಿದ್ದುದರಿಂದ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಿದ್ದ ನಿಮಿತ್ತ ಮದು ವೆಗೆ ಹೆಚ್ಚಿನ ದಿನಗಳ ರಜೆ ಸಿಕ್ಕಿರಲಿಲ್ಲ. ಮದುವೆಯಾದ ಕೆಲವೇ ದಿನಗಳಿಗೆ ನಮ್ಮ ಕೆಲಸಗಳಿಗೆ ಹಾಜರಾದೆವು. ಕಾಲೇಜಿನ ವಸತಿ ನಿಲಯದಲ್ಲಿದ್ದ ನಾನು ವಾರಾಂತ್ಯದ ರಜೆಯಲ್ಲಿ ಅವರಿದ್ದೆ ಡೆಗೆ ಹೋಗಬಹುದಿತ್ತಷ್ಟೆ. ಪ್ರವಾಸದ ಉದ್ದೇಶಕ್ಕೆ ಹೆಚ್ಚು ರಜೆ ಹಾಕುವ ಅವಕಾಶವೂ ಇರಲಿಲ್ಲ.

Dr Niranjan Vanalli Column: ಏಪ್ರಿಲ್‌ ಹತ್ತು ಬಂತೆಂದರೆ

ಏಪ್ರಿಲ್‌ ಹತ್ತು ಬಂತೆಂದರೆ

ಅಧ್ಯಾಪಕರು ಮಕ್ಕಳಿಗೂ ಅವರ ಪಾಲಕರು ಬಂದರೆ ಅವರಿಗೂ ಮಕ್ಕಳ ಫಲಿತಾಂಶವನ್ನು ಹೇಳುತ್ತಾರೆ. ಅಂಕಪಟ್ಟಿಗಳನ್ನು ಕೊಡುತ್ತಾರೆ. ಕೆಲವರು ಖುಷಿಯಿಂದ ಕುಣಿದರೆ ಕೆಲವರು ಒಂದು ಅಂಕ ಕಡಿಮೆಯಾಗಿದ್ದರೂ ಭಾರೀ ಅನಾಹುತವಾದಂತೆ ಕೂಗಾಡುತ್ತಾರೆ. ಈಗ ಒಂಬತ್ತನೆ ತರಗತಿಯವರೆಗೂ ಮಕ್ಕಳನ್ನು ಫೈಲು ಮಾಡುವಂತಿಲ್ಲ. ಹೀಗಾಗಿ ರಿಸಲ್ಟಿನ ದಿನಕ್ಕೆ ಮೊದಲಿದ್ದ ಖದರಿಲ್ಲ.

ಮನುಕುಲದ ಮಾದರಿ ಹೆಣ್ಣು ಸುನೀತಾ !

ಕೊನೆಗೂ ಭೂಮಿಗೆ ಇಳಿದು ಬಂದ್ಯಾ ತಾಯಿ ಸುನೀತಾ?

ಗಗನಯಾನಿ, ಸಾಹಸಿ ಸುನೀತಾ ಅವರು, ಸ್ನಾತಕೋತ್ತರ ವಿಜ್ಞಾನ ಪದವಿ ಪಡೆದ ಬಳಿಕ ನಾಸಾ ಸಂಸ್ಥೆಗೆ ಆಯ್ಕೆಯಾಗಿ ಕೈತುಂಬ ವೇತನ ಪಡೆದು ಹೇಗೋ ಸುಖ ವಾಗಿರಬಹು ದಿತ್ತಲ್ಲವೆ? ಆದರೆ ಮೊದಲಿನಿಂದಲೂ ಸಾಹಸಪ್ರವೃತ್ತಿಯವರಾದ ಅವರು ಬಾಹ್ಯಾಕಾಶಕ್ಕೆ ಗಗನಯಾತ್ರಿಯಾಗಿ ತೆರಳಲು ಹಿಂದೆಮುಂದೆ ಯೋಚಿಸದೆ ನಿರ್ಧಾರ ಕೈಗೊಂಡಾಗ, ನಾಸಾದ ಇತರ ವಿಜ್ಞಾನಿಗಳಿಗೇ ಆಶ್ಚರ್ಯವಾಗಿದ್ದಿರ ಬಹುದು. ಅವರ ಅಚಲ ಧೈರ್ಯ, ಸಾಹಸ, ಸ್ಥಿತಪ್ರಜ್ಞತೆ, ಪ್ರಸಂಗಾವ ಧಾನತೆ ಯಾವ ಗಂಡಸಿಗೂ ಕಮ್ಮಿ ಇಲ್ಲ; ಮಹಿಳಾ ಶಕ್ತಿಗೆ ಸುನೀತಾ ಅವರೊಂದು ರೂಪಕ. ಧೈರ್ಯ ಹೊಂದಿರುವ ಇಂತಹ ಕೆಲವರಿಂದಲೇ ನಾವಿವತ್ತು ಅತ್ಯಂತ ಆಧುನಿಕ ವೈಜ್ಞಾನಿಕ ಯುಗದಲ್ಲಿ ವಾಸಿಸುತ್ತಾ, ತಂತ್ರಜ್ಞಾನದ ಸವಲತ್ತುಗಳ ಫಲಗಳನ್ನು ಅನುಭವಿಸು ತ್ತಿದ್ದೇವೆ.

Narayana Yaji Column: ವಾಲ್ಮೀಕಿಗಿರಿಯಿಂದ ಹುಟ್ಟಿದ ರಾಮಾಯಣ ಮಹಾನದಿ

ವಾಲ್ಮೀಕಿಗಿರಿಯಿಂದ ಹುಟ್ಟಿದ ರಾಮಾಯಣ ಮಹಾನದಿ

ರಾಮನ ಕಲ್ಯಾಣ ಗುಣಗಳನ್ನು ಪ್ರತಿಪಾದಿಸುವ, ಸೀತೆಯ ಸಚ್ಛರಿತ್ರರೂಪವಾದ, ಪೌಲಸ್ತ್ಯ (ರಾವಣ) ವಧೆಯನ್ನು ನಿರೂಪಿಸುವ ರಾಮಾಯಣವೆನುವ ಮಹಾಕಾವ್ಯವನ್ನು ಚರಿತ ವ್ರತರು (ವಾಲ್ಮೀಕಿ) ರಚಿಸಿದರು. ರಾಮಾಯಣ ಪ್ರಾರಂಭವಾಗುವುದೇ ಪ್ರಪಂಚದಲ್ಲಿ ಆದರ್ಶ ಪುರುಷ ಅಥವಾ ಪರಿಪೂರ್ಣಗುಣಗಳುಳ್ಳ ವ್ಯಕ್ತಿ ನಿಜವಾಗಿಯೂ ಇದ್ದಾನೆಯೋ ಎನ್ನುವ ವಾಲ್ಮೀಕಿ ಮುನಿಗೆ ಸಂಶಯ ಹುಟ್ಟುವಲ್ಲಿಂದ.

ಯುಗಾದಿಯ ದಿನ ನಿಷ್ಕರ್ಷೆ

ಯುಗಾದಿಯ ದಿನ ನಿಷ್ಕರ್ಷೆ

ಭೂಮಿಯಲ್ಲಿ ನಿಂತು ನಾವು ನೋಡುವುದರಿಂದ ಭಾರತೀಯ ಪಂಚಾಂಗಕ್ಕೆ ಸೂರ್ಯನ ಚಲನೆ (ಇದು ವಾಸ್ತವದಲ್ಲಿ ಭೂಮಿಯ ಚಲನೆ ) ಮತ್ತು ಚಂದ್ರನ ಚಲನೆ ಎರಡೂ ಕೂಡ ಆಧಾರ ಬಿಂದುಗಳು. ಸೌರ ವರ್ಷದಲ್ಲಿ 365.26 ದಿನಗಳಿದ್ದರೆ ಚಾಂದ್ರ ವರ್ಷದಲ್ಲಿ 354.10 ದಿನಗಳಿವೆ. ಈ ವ್ಯತ್ಯಾಸ ಹಬ್ಬಗಳ ವ್ಯತ್ಯಾಸಕ್ಕೆ ಕೂಡ ಕಾರಣವಾಗುತ್ತದೆ.

ನವ ಯುಗದ ಆದಿ ಈ ಯುಗಾದಿ

ನವ ಯುಗದ ಆದಿ ಈ ಯುಗಾದಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ ಎಂದು ವರಕವಿ ಬೇಂದ್ರೆ ಹಾಡಿದರು; ಅದರಂತೆ, ನಮ್ಮೆಲ್ಲರ ಮನಸ್ಸಿನಲ್ಲಿ ಈ ಯುಗಾದಿಯು ಹೊಸ ಸಂತಸ ವನ್ನು ಮತ್ತು ಉತ್ಸಾಹವನ್ನು ತುಂಬಲಿ, ಬದುಕಿನ ಹೊಸ ಹೊಸ ಅಭಿಯಾನಗಳಿಗೆ ಸ್ಫೂರ್ತಿಯನ್ನು ತುಂಬಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು

Dr K S Chaithra Column: ಡಬ್ಬಾ ಕಾರ್ಟೆಲ್‌ !

ಡಬ್ಬಾ ಕಾರ್ಟೆಲ್‌ !

2025ರ ಫೆಬ್ರವರಿ ೨೮ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿರುವ ಹಿತೇಶ್ ಭಾಟಿಯಾ ನಿರ್ದೇಶಿಸಿ ರುವ ಏಳು ಸಂಚಿಕೆಗಳ ವೆಬ್ ಸರಣಿ ಡಬ್ಬಾ ಕಾರ್ಟೆಲ್! ಮುಖ್ಯ ಪಾತ್ರದಲ್ಲಿ ಶಬಾನ ಆಜ್ಮಿ ಜ್ಯೋತಿಕಾ, ಶಾಲಿನಿ ಪಾಂಡೆ, ಗಜರಾಜ್ ರಾವ್ ಮುಂತಾದವರಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ ಸಮಸ್ಯೆಯನ್ನು ತೋರಿಸುವ ವಿಭಿನ್ನ ಕಥಾವಸು; ಮುಂಬೈನ ಡಬ್ಬಾ ವ್ಯವಸ್ಥೆ ಪ್ರಸಿದ್ಧವಾದದ್ದು. ಬೆಳಿಗ್ಗೆ ಬೇಗನೆದ್ದು ದೂರದೂರದ ಆಫೀಸು- ಕಾಲೇಜುಗಳಿಗೆ ತೆರಳುವ ಉದ್ಯೋಗಿ/ ವಿದ್ಯಾರ್ಥಿಗಳು ಹೊತ್ತಿಗೆ ಸರಿಯಾಗಿ ಬಿಸಿಬಿಸಿಯಾಗಿ ಊಟವನ್ನು ಮಾಡಲು ಡಬ್ಬಾಗಳ ಮೊರೆ ಹೋಗುವುದು ಸಾಮಾನ್ಯ.