ಮುದನೂರಿನಲ್ಲಿ ಹುದುಗಿದ ಇತಿಹಾಸ ಪರಂಪರೆ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮ ಈ ಹಿಂದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ನಂತರ ಸದ್ಯ ಪುಣ್ಯ ಕ್ಷೇತ್ರವಾಗಿದೆ. ಹಾಗೆಯೇ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಪರಿಚಯಿಸಿದ 10ನೇ ಶತಮಾನದ ದಾಸಿಮಯ್ಯ ಅವರ ಜನ್ಮಭೂಮಿ ಕೂಡಾ ಇದಾಗಿದೆ.