ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಡಾ.ನಾ. ಸೋಮೇಶ್ವರ

columnist

[email protected]

ಔದ್ಯೋಗಿಕ ವೈದ್ಯಕೀಯ ತಜ್ಞರು. 67 ಆರೋಗ್ಯ ಪುಸ್ತಕಗಳ ಪ್ರಕಟಣೆ. ಪ್ರಸ್ತುತ ವಿಶ್ವವಾಣಿಯಲ್ಲಿ “ಹಿಂದಿರುಗಿ ನೋಡಿದಾಗ’ ಅಂಕಣ ಬರಹ. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಕ್ವಿಜ಼್ ಮಾಸ್ಟರ್. ಸತತವಾಗಿ 4800 ಕಂತುಗಳ ಪ್ರಸಾರ. ಲಿಮ್ಕ ದಾಖಲೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ. ಕ್ವಿಜ಼್ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.

Articles
D‌r N Someshwar Column: ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್‌ ಮೆಂಡಲ್

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದ ಗ್ರೆಗರ್‌ ಮೆಂಡಲ್

ಒಂದು ಸಣ್ಣ ಮಠ. ಮಠದ ಹಿಂಭಾಗದಲ್ಲಿ ಒಂದು ತೋಟ. ಆ ತೋಟದಲ್ಲಿ ಸಾಮಾನ್ಯ ಬಟಾಣಿ ಗಿಡ ಗಳು. ಅವುಗಳಲ್ಲಿ ಕೆಲವಕ್ಕೆ ನೇರಳೆ ಹೂವು, ಕೆಲವಕ್ಕೆ ಬಿಳಿ ಹೂವು. ಕೆಲವಕ್ಕೆ ಉದ್ದ ಕಾಂಡ, ಕೆಲವಕ್ಕೆ ಗಿಡ್ಡ ಕಾಂಡ. ಕೆಲವು ಬೀಜಗಳ ಮೇಲ್ಮೆ ನುಣುಪು, ಕೆಲವು ಬೀಜಗಳ ಮೇಲ್ಮೆ ಮುದುಡಿಕೆ. ಜನ ಸಾಮಾನ್ಯರ ಕಣ್ಣಿಗೆ ಇದು ತೋಟಗಾರಿಕೆಯ ಒಂದು ಸಾಮಾನ್ಯ ವಿಷಯ ಮಾತ್ರ.

Dr N Someshwara Column: ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...

ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...

ಐನ್'ಸ್ಟೀನರ ಮಿದುಳನ್ನು ಒಡಲಿನಿಂದ ಪ್ರತ್ಯೇಕಿಸಿದರು. ಅದನ್ನು 240 ಚೂರುಗಳನ್ನಾಗಿ ಕತ್ತರಿಸಿದರು. ಗಾಜಿನ ಸೀಸೆಗಳಲ್ಲಿ ಸಂರಕ್ಷಕ ದ್ರಾವಣವನ್ನು ತುಂಬಿ ಅದರಲ್ಲಿ ಈ ಚೂರು ಗಳನ್ನು ಇರಿಸಿದರು. ನಂತರ ಆ ಗಾಜಿನ ಸೀಸೆಗಳನ್ನು ತಮ್ಮ ಮನೆಗೆ ಕೊಂಡೊಯ್ದು ಬಹಳ ಜತನದಿಂದ ಕಾಪಾಡಲಾರಂಭಿಸಿದರು.

Dr N Someshwara Column: ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ಯಾವುದೇ ಪ್ರಯತ್ನವಿಲ್ಲದೆ ಅವನಿಂದ ನಗುವಿನ ಹೊಳೆ ಹರಿಯಲಾರಂಭಿಸಿತು. ಶಾರೀರಿಕ ನೋವೆಲ್ಲ ಮಾಯವಾಯಿತು. ಕೊನೆಗೆ ಬ್ರಿಸ್ಟಲ್ ನಗರದ ‘ನ್ಯುಮಾಟಿಕ್ ಇನ್‌ಸ್ಟಿಟ್ಯೂಷನ್’ ಎಂಬಲ್ಲಿ ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಎಲ್ಲರಿಗೂ ಹೊಸ ಅನಿಲವನ್ನು ಸೇವಿಸಲು ಹೇಳಿದ. ಎಲ್ಲರೂ ಹುಚ್ಚೆದ್ದು ಕುಣಿಯಲಾರಂಬಿಸಿದರು. ಅವರಿಗೆ ವಿನಾಕಾರಣ ಸಂತೋಷವಾಗಿ, ಮುಕ್ತಮನಸ್ಸಿನಿಂದ ನಗಲಾರಂಭಿಸಿದರು.

Dr N Someshwara Column: ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ !

Dr N Someshwara Column: ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ !

ಸಿಡಿಲು ಹೊಡೆದರೆ ಮನುಷ್ಯನು ಬದುಕಲಾರ ಎನ್ನುವುದು ನಮಗೆ ತಿಳಿದ ವಿಚಾರ. ಆದರೆ ವ್ಯಕ್ತಿಯ ಯೊಬ್ಬರು ಒಂದಲ್ಲ ಏಳುಬಾರಿ ಸಿಡಿಲಿನ ಹೊಡೆತಕ್ಕೆ ತುತ್ತಾಗಿ ಬದುಕಿದರು ಎಂದರೆ ನಂಬಲು ಕಷ್ಟ ವಾಗುತ್ತದೆ. ಅಂಥ ವ್ಯಕ್ತಿಯೊಬ್ಬರು ಇದ್ದದ್ದು ನಿಜ. ಅವರೇ ರಾಯ್ ಕ್ಲೀವ್ ಲ್ಯಾಂಡ್ ಸಲಿವಾನ್ (1912-1983). ಸಲಿವಾನ್ ಅವರ ಈ ಕಥನವು ಕೇವಲ ವಿಚಿತ್ರ ಘಟನೆಯ ಕಥೆಯಲ್ಲ.

Dr N Someshwara Column: ಹಿಮಶಿಲ್ಪಕ್ಕೆ ಜೀವ ತಂದ ಎಲ್-ಡೋಪ

Dr N Someshwara Column: ಹಿಮಶಿಲ್ಪಕ್ಕೆ ಜೀವ ತಂದ ಎಲ್-ಡೋಪ

ರೋಗಿಗಳಲ್ಲಿ ಅಸಾಮಾನ್ಯ ನಿದ್ರಾಹೀನತೆ, ಕಣ್ಣಿನ ವಿಚಿತ್ರ ಚಲನೆಯ ಸಮಸ್ಯೆಗಳು, ಜ್ವರ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬರಲಾರಂಬಿಸಿದವು. ಕೆಲವರು ಮಹಾನ್ ದಡ್ಡ ಶಿಖಾಮಣಿ ಗಳಂತೆ ವರ್ತಿಸಲಾರಂಭಿಸಿದರು. ಹಲವರು ತೀವ್ರ ಮಾನಸಿಕ ಪ್ರಕ್ಷುಬ್ಧತೆ ಅಥವಾ ಮನೋ ವೈಕಲ್ಯಕ್ಕೆ ಒಳಗಾದರು.

Dr N Someshwara Column: ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆ ಹಚ್ಚುತ್ತಿದ್ದಳು !

ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆ ಹಚ್ಚುತ್ತಿದ್ದಳು !

ಜಾಯ್, ತನ್ನ ಗಂಡ ಲೆಸ್‌ನ ದೇಹದಲ್ಲಿ ಒಂದು ಬದಲಾವಣೆಯಾಗುತ್ತಿರುವುದನ್ನು ಗಮನಿಸಿ ದಳು. ಅವನ ದೇಹದಿಂದ ಗಾಢವಾದ ಕಸ್ತೂರಿ ವಾಸನೆಯನ್ನು (ಮಸ್ಕಿ ಓಡರ್) ಹೋಲುವಂಥ ವಾಸನೆಯು ಹೊರಬರಲಾರಂಭಿಸಿತು. ವಿಶೇಷವಾಗಿ ಲೆಸ್‌ನ ಕುತ್ತಿಗೆ ಮತ್ತು ಬಾಹುಗಳಿಂದ ಈ ರೀತಿಯ ವಾಸನೆಯು ಹೊರಡುತ್ತಿತ್ತು. ವಾಸನೆಯು ಏನೂ ಅಹಿತರಕರವಾಗಿರಲಿಲ್ಲ. ಆದರೂ ಆ ವಾಸನೆಯು ಅಸಹಜವಾಗಿತ್ತು

Dr N Someshwara Column: ನ್ಯೂಗಿನಿಯ ನೂಂಬಾ ನನಗಂತೂ ಬೇಕೇ ಬೇಕು. ನಿಮಗೆ ?!

ನ್ಯೂಗಿನಿಯ ನೂಂಬಾ ನನಗಂತೂ ಬೇಕೇ ಬೇಕು. ನಿಮಗೆ ?!

ಮಾನವಶಾಸ್ತ್ರಜ್ಞರು ನೂಂಬಾವನ್ನು ಗುಟುಕು ಗುಟುಕಾಗಿ ಚಪ್ಪರಿಸಿ ಕುಡಿದರು. ಕುಡಿಯು ತ್ತಿರುವಂತೆ ದಣಿವು ಮರೆಯಾಯಿತು. ನವ ಚೈತನ್ಯವು ಮೂಡಿತು. ಹೊಸ ಚುರುಕಿನೊಡನೆ ಉತ್ಸಾಹವೂ ಮೂಡಿತು. ಈ ಪಾನೀಯ ಅವರಿಗೆ ಅದ್ಭುತವಾಗಿ ಕಂಡಿತು. ಮರುದಿವಸ ಪಾನೀಯ ಕುಡಿದು ಕಾಡಿನೊಳಗೆ ಹೊರಟರು.

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

Dr N Someshwara Column: ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಆಯುರ್ವೇದವು ಮಕ್ಕಳಿಲ್ಲದ ಸ್ಥಿತಿಯನ್ನು ‘ವಂಧ್ಯತ್ವ’ ಎಂದು ಕರೆದಿದೆ. ಮಕ್ಕಳಾಗ ಬೇಕಾದರೆ ‘ನಾಲ್ಕು ಗರ್ಭ ಸಂಭವ ಸಾಮಾಗ್ರಿ’ಗಳು ಅಗತ್ಯ. ಮೊದಲನೆಯದು ಋತು. ಒಂದು ಬೀಜವು ಮೊಳೆಯಬೇಕಾದರೆ ಅದಕ್ಕೆ ಅನುಕೂಲಕರ ಋತು ಅಗತ್ಯ. ಎಲ್ಲ ಋತುಗಳಲ್ಲೂ ಬೀಜ ಮೊಳೆಯದು. ಹಾಗಾಗಿ ಮಕ್ಕಳಾಗಲೂ ‘ಫಲವಂತಿಕೆಯ ಅವಧಿ’ (ಫರ್ಟೈಲ್ ವಿಂಡೋ) ಎನ್ನುವುದು ಇರುತ್ತದೆ.

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

ವೇದಕಾಲದ ಋಷಿಗಳಿಗೆ ಯಾವುದೋ ಒಂದು ಕ್ಷಣದಲ್ಲಿ ಹೇಗೆ ನಿರ್ದಿಷ್ಟ ಮಂತ್ರವು ಸುರಿಸು ತ್ತದೆಯೋ, ಹಾಗೆಯೇ ವಿಜ್ಞಾನಿಗಳಿಗೂ ಪರಿಹಾರವು ಮಿಂಚಿನಂತೆ ಹೊಳೆಯುತ್ತದೆ. ಅಂಥ ಮಿಂಚಿನ ಹೊಳಹು ‘ಹೃದಯದ ಗತಿನಿಯಂತ್ರಕ’ದ (ಕಾರ್ಡಿಯಾಕ್ ಪೇಸ್‌ ಮೇಕರ್) ಆವಿಷ್ಕಾರಕ್ಕೆ ಅನುವು ಮಾಡಿಕೊಟ್ಟ ಕಥೆಯು ರೋಚಕವಾಗಿದೆ.

Dr N Someshwara Column: ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ರಕ್ತವು 120-140 ಎಂಎಂಎಚ್‌ಜಿ ಒತ್ತಡದಲ್ಲಿ ಮಹಾಧಮನಿಯನ್ನು ಪ್ರವೇಶಿಸುತ್ತದೆ. ಮಹ ಧಮನಿಯಿಂದ ಹೊರಡುವ ಅನೇಕ ರಕ್ತನಾಳಗಳ ಮೂಲಕ, ರಕ್ತವು ದೇಹದ ಎಲ್ಲ ಭಾಗಗಳಿಗೆ ರವಾನೆಯಾಗುತ್ತದೆ. ಕೆಲವರು ರಕ್ತದ ಏರೊತ್ತಡದಿಂದ (ಹೈ ಬ್ಲಡ್ ಪ್ರೆಶರ್) ನರಳುವುದುಂಟು. ಈ ಏರೊತ್ತಡವನ್ನು ನಿಯಂತ್ರಿಸದಿದ್ದರೆ, ಗರಿಷ್ಠ 140 ಎಂಎಂಎಚ್‌ಜಿ ಯಲ್ಲಿ ಸಾಗಬೇಕಾದ ರಕ್ತವು 180 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಸಾಗಬಹುದು.

Dr N Someshwara Column: ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣ, ಕಲ್ಲಿದ್ದಿಲಿನ ಉಪಯೋಗವು ಮಿತಿಮೀರಿತ್ತು. ಎಲ್ಲೆಲ್ಲೂ ಕಪ್ಪು ಮಸಿಯದೇ ಕಾರು ಬಾರು. ಮನೆಯ ಒಳ-ಹೊರ ಗೋಡೆಗಳಲ್ಲಿ ಕಪ್ಪು ಛಾಯೆ ಯಿಂದ ಕೂಡಿದ್ದ ಕಾರಣ, ಜನರ ಮನಸ್ಸೂ ಸಹ ಒಂದು ರೀತಿ ಮಂಕುಬಡಿದಂತಿತ್ತು.

Dr N Someshwara Column: ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಮಾನವ ಮತ್ತೊಬ್ಬ ಮಾನವನೊಂದಿಗೆ ಮಾತಿನ ಮೂಲಕ, ಪಶು-ಪಕ್ಷಿಗಳು ತಮಗೆ ಅರ್ಥವಾಗು ವಂಥ ಶಬ್ದಗಳ ಮೂಲಕ ಸಂಪರ್ಕ ನಡೆಸುತ್ತವೆ. ಇವೆರಡರ ಲಭ್ಯವಿಲ್ಲದ ಕೆಲವು ಜೀವಿಗಳು ವಾಸನಾಯುಕ್ತ ವಾದ ಹಲವು ಸಾವಯವ ಸಂಕೀರ್ಣ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವುದರ ಮೂಲಕ ಸಂಪರ್ಕ ನಡೆಸುತ್ತವೆ.

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

ಛೇದನಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರುರೂಪಿಸುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಸುರೂಪಿಕಾ ಶಸ್ತ್ರ ವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರಬುನಾದಿ ಹಾಕಿ ‘ಸುರೂಪಿಕ ಶಸ ವೈದ್ಯಕೀಯ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರರಾದವರು ಸುಶ್ರುತ ಮಹರ್ಷಿಗಳು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

ವೈಜ್ಞಾನಿಕ ಕಥೆ ಎಂದರೆ ತಮ್ಮ ತಮ್ಮ ಕಲ್ಪನೆಯನ್ನು ಮನಸ್ಸಿಗೆ ಬಂದ ಹಾಗೆ ಹರಿಯಬಿಡುವ ಹಾಗೆ ಇಲ್ಲ. ವೈಜ್ಞಾನಿಕ ಕಥೆ, ಕಾದಂಬರಿ ಇಲ್ಲವೇ ಚಲನಚಿತ್ರಗಳಲ್ಲಿ ಒಂದು ವೈಜ್ಞಾನಿಕ ಎಳೆಯಿಲ್ಲದ ಕಥೆಯನ್ನು ವಿಸ್ತರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಅಂಥ ಒಂದು ಎಳೆಯು ನಾವೀ ಜನರ ನೀಲಿ ಚರ್ಮದ ಹಿನ್ನೆಲೆಯಲ್ಲಿದೆ.

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

‘ಸ್ಟಾರೋ ಕ್ಲಾಡಿಯ’ ಎಂಬ ಅಂಬಲಿ ಮೀನು ಕೇವಲ 0.5 ಮಿ.ಮೀ. ಇರುತ್ತದೆ. ಅದೇ ‘ಸಯನಿಯ ಕ್ಯಾಪಿಲ್ಲೇಟ’ ಎಂಬ ಬೃಹತ್ ಅಂಬಲಿ ಮೀನಿನ ಲತಾಬಾಹುಗಳು 100-120 ಅಡಿ ಉದ್ದವಿರುತ್ತವೆ. ಹಾಗಾಗಿ ಕೆಲವರು ಈ ಅಂಬಲಿ ಮೀನನ್ನು ‘ಸಾಗರದ ಅತ್ಯಂತ ಉದ್ದನೆಯ ಜೀವಿ’ ಎಂದು ಕರೆಯುವರು.

Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

ಆಕೆಯು ನೇರವಾಗಿ ಬುದ್ಧನ ಬಳಿಗೆ ಬಂದು, ಅವನ ಪದತಲದಲ್ಲಿ ಮಗನ ಕಳೇಬರವನ್ನು ಇಟ್ಟು, ತನ್ನ ಮಗನಿಗೆ ಜೀವಕೊಡುವಂತೆ ಪ್ರಾರ್ಥಿಸುತ್ತಾಳೆ. ಆಕೆಯ ಅಳಲನ್ನು ಕೇಳಿದ ಭಗವಾನ್ ಬುದ್ಧ “ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತಂದರೆ ನಿನ್ನ ಮಗನನ್ನು ಬದುಕಿಸುವೆ" ಎನ್ನುತ್ತಾನೆ. ಕಿಸಾ ಗೌತಮಿಯು ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತರಲು ಇಡೀ ಶ್ರಾವಸ್ತಿ ನಗರದ ಮನೆಯೊಂದನ್ನೂ ಬಿಡದೆ ಸುತ್ತುತ್ತಾಳೆ. ಆದರೆ ಎಲ್ಲರ ಮನೆಯಲ್ಲಿಯೂ ಒಬ್ಬರಲ್ಲ ಒಬ್ಬರು ಸತ್ತೇ ಇರುತ್ತಾರೆ. ಸಂಜೆಯ ವೇಳೆಗೆ ಕಿಸಾ ಗೌತಮಿಗೆ ಜ್ಞಾನೋದಯವಾಗುತ್ತದೆ.

Dr N Someshwara Column: ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಆಸ್ಪತ್ರೆಯ ಹೊರಗೆ ವೈದ್ಯರು ಜೋಲುಮುಖವನ್ನು ಹಾಕಿಕೊಂಡು ನಿಂತಿದ್ದರು. ಹರ್ನಿಯವು ಸಿಡಿದಿರಬೇಕು, ಸೋಂಕು ಉದರಾದ್ಯಂತ ವ್ಯಾಪಿಸಿದೆ. ಅಂತಿಮ ಘಟ್ಟವನ್ನು ತಲುಪಿದೆ. ಈ ಮಗು ಇನ್ನು ಕೆಲವೇ ಗಂಟೆಗಳ ಅತಿಥಿ ಮಾತ್ರ... ಎಂದು ಮೆಲುದನಿಯಲ್ಲಿ ಅಲವತ್ತು ಕೊಂಡರು.

Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಅಕ್ಟೋಬರ್ ೧೪, 1984. ಸ್ಟಿಫಾನಿ ಫೇ ಬ್ಲ್ಯೂಕ್ಲೈರ್ (ಬೇಬಿ ಫೇ) ಎಂಬ ಹೆಣ್ಣು ಮಗುವು ಹುಟ್ಟಿತು. ಈ ಮಗುವಿಗೆ ಹುಟ್ಟುವಾಗಲೇ, ಹೃದಯದ ಎಡಭಾಗವು ಬೆಳೆದಿರಲಿಲ್ಲ. ಹಾಗಾಗಿ ಹೃದಯವು ಶರೀರಕ್ಕೆ ಅಗತ್ಯವಾಗಿದ್ದ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗಿತ್ತು. ಇದನ್ನು ತಾಂತ್ರಿಕ ವಾಗಿ ‘ಅರೆಬೆಳೆದ ಎಡ ಹೃದಯ ಲಕ್ಷಣಾವಳಿ’ (ಹೈಪೋಪ್ಲಾಸ್ಟಿಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್, ಎಚ್‌ಎಲ್‌ಎಚ್‌ಎಸ್) ಎಂದು ಕರೆಯುವ ಪದ್ಧತಿಯಿದೆ.

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

ದಂಶಕಗಳು (ರೋಡೆಂಟ್ಸ್) ಎಂಬ ಪ್ರಾಣಿಗಳಿವೆ. ಇಲಿ, ಅಳಿಲು, ಮೊಲ, ಮುಳ್ಳು ಹಂದಿ, ಗಿನಿಪಿಗ್, ಬೀವರ್, ಹ್ಯಾಮ್‌ಸ್ಟರ್ ಮುಂತಾದ ಪ್ರಾಣಿಗಳಿವೆ. ಇದೇ ವರ್ಗಕ್ಕೆ ಸೇರಿದ ಹಾಗೂ ಅಮೆರಿಕ ಮತ್ತು ಕೆನಡಗಳಲ್ಲಿ ವಿಶೇಷವಾಗಿ ವಾಸಿಸುವ ಗ್ರೌಂಡ್‌ಹಾಗ್ (ಮಾರ್ಮೋಟ ಮೊನಾಕ್ಸ್) ಎಂಬ ಜೀವಿಯಿದೆ. ಹಾಗ್ ಎಂದರೆ ಹಂದಿಯಲ್ಲ. ಸ್ವಲ್ಪ ದೊಡ್ಡ ಅಳಿಲು. ಹಾಗಾಗಿ ಇದನ್ನು ನೆಲಅಳಿಲು ಎಂದು ಕರೆಯಬಹುದು.

Dr N Someshwara Column: ಬದುಕು ನೀಡುವ ಬದಲಿ ಜೋಡಣೆ

Dr N Someshwara Column: ಬದುಕು ನೀಡುವ ಬದಲಿ ಜೋಡಣೆ

ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮಾಂಸಲಿ (ಪ್ಯಾನ್‌ಕ್ರಿಯಾಸ್) ಮತ್ತು ಕರುಳು. ಎರಡನೆಯ ವರ್ಗದಲ್ಲಿ ಯಶಸ್ವಿಯಾಗಿರುವ ಆದರೆ ಅಪರೂಪಕ್ಕೆ ನಡೆಸುವ ಬದಲಿ ಜೋಡಣೆಗಳು- ಗರ್ಭಕೋಶ, ಜಠರ ಮತ್ತು ಥೈಮಸ್ ಗ್ರಂಥಿ. ಮೂರನೆಯ ವರ್ಗದಲ್ಲಿ ಸಂಯುಕ್ತ ಅಂಗಗಳನ್ನು (ಒಂದಕ್ಕಿಂತ ಹೆಚ್ಚು ಅಂಗಗಳನ್ನು) ಬದಲಿ ಜೋಡಿಸುವುದುಂಟು- ಕೈ ಅಥವಾ ಬಾಹು, ಮುಖ, ಶಿಶ್ನ, ಧ್ವನಿ ಪೆಟ್ಟಿಗೆ ಹಾಗೂ ವಾಯುನಾಳ (ಟ್ರೇಕಿಯ).

Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ರೈಲು ಮಾರ್ಗವನ್ನು ನಿರ್ಮಿಸಲು ಅಡ್ಡ ಬರುತ್ತಿದ್ದ ಎಲ್ಲ ಬಂಡೆಗಳನ್ನು ಸಿಡಿಸಬೇಕಿತ್ತು. ಈ ಕೆಲಸವನ್ನು ಮಾಡುವುದರಲ್ಲಿ ಗೇಜ್ ಪರಿಣತನಾಗಿದ್ದ. ಮೊದಲು ಭೈರಿಗೆಯ ನೆರವಿನಿಂದ ಬಂಡೆಯಲ್ಲಿ ಒಂದು ಕುಣಿಯನ್ನು ಕೊರೆಯಬೇಕಿತ್ತು. ಆ ಕುಣಿಯೊಳಗೆ ಸಿಡಿಮದ್ದು (ಗನ್ ಪೌಡರ್) ತುಂಬಬೇಕಿತ್ತು. ಒಂದು ಫ್ಯೂಸ್ ಇಡಬೇಕಿತ್ತು.

Dr N Someshwara Column: ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಒಂದು ವೇಳೆ ವಿದ್ಯುಚ್ಛಕ್ತಿ ಉತ್ಪಾದನೆ ಏನಾದರೂ ನಿಂತುಹೋದರೆ, ತಕ್ಷಣ ಅದರ ಕೆಲಸವನ್ನು ನಿಭಾಯಿಸುವಂಥ ‘ಸ್ಟ್ಯಾಂಡ್ ಬೈ’ ವ್ಯವಸ್ಥೆಯೂ ಇರಬೇಕು. ವಿದ್ಯುತ್ತಿನ ಜತೆಯಲ್ಲಿ, ತನ್ನ ಅಗತ್ಯಕ್ಕೆ ಬೇಕಾದ ಇತರ ಎಲ್ಲ ವಸ್ತುಗಳನ್ನು ತಾನೇ ಪೂರೈಸಿ ಕೊಳ್ಳಬೇಕು. ಈ ಪಂಪು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಾಗುತ್ತದೆ; ಕೆಲವು ಸಲ ಸಾವಕಾಶವಾಗಿ ಪಂಪ್ ಮಾಡಬೇಕಾಗುತ್ತದೆ.

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

ಪ್ರತಿಯೊಂದು ಶವಪೆಟ್ಟಿಗೆಯ ಒಳಗೆ ಒಂದು ಗಂಟೆಯನ್ನು ಇಡುತ್ತಿದ್ದರು. ಶವಪೆಟ್ಟಿಗೆಯಲ್ಲಿ ಇರುವವನು ನಿಜಕ್ಕೂ ಸತ್ತಿಲ್ಲದಿದ್ದರೆ, ಅವನು ಗಂಟೆಯನ್ನು ನಿರಂತರವಾಗಿ ಬಾರಿಸುತ್ತಿದ್ದನು. ಆಗ ಸ್ಮಶಾನದಲ್ಲಿ ನಿತ್ಯ ಕಾವಲಿರುವ ಯಾರಾದರೂ ಬಂದು ಅವನನ್ನು ಕಾಪಾಡುತ್ತಿದ್ದರು. ಆಗ ಒಂದು ಪ್ರಶ್ನೆಯು ವೈದ್ಯ ವಿಜ್ಞಾನಿಗಳನ್ನು ಕಾಡಿತು.

Loading...