ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕೇಶವ ಪ್ರಸಾದ್​ ಬಿ

Columnist

keshavaprasadb@gmail.com

ಕೇಶವ ಪ್ರಸಾದ್‌ ಬಿ ಅವರಿಗೆ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಇದೆ. ಈ ಹಿಂದೆ ವಿಜಯ ಕರ್ನಾಟಕ ದೈನಿಕದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ದೇಶೀಯ- ಅಂತಾರಾಷ್ಟ್ರೀಯ ವಿದ್ಯಮಾನಗಳು, ವಾಣಿಜ್ಯ- ಉದ್ದಿಮೆ, ಸಾಧಕರ ಸಂದರ್ಶನ ಹೀಗೆ ವೈವಿಧ್ಯಮಯ ಲೇಖನ, ವಿಶೇಷ ವರದಿ, ಮೇಕಿಂಗ್‌ ಇಂಡಿಯಾ ಅಂಕಣ ಬರೆದಿದ್ದಾರೆ. ವಿಸ್ತಾರ ನ್ಯೂಸ್‌ ಚಾನೆಲ್‌ನ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪರ್ಸನಲ್ ಫೈನಾನ್ಸ್‌, ಬಿಸಿನೆಸ್‌, ಕೃಷಿಗೆ ಸಂಬಂಧಿಸಿ ಹಲವಾರು ವಿಡಿಯೊ ಸಂದರ್ಶನಗಳನ್ನು ನಡೆಸಿದ್ದಾರೆ. ಪತ್ರಿಕೆ ಮತ್ತು ಡಿಜಿಟಲ್‌ ಮೀಡಿಯಾ ಎರಡರಲ್ಲೂ ಅನುಭವ ಗಳಿಸಿದ್ದಾರೆ. ಲೈಫ್‌ ಈಸ್‌ ವಂಡರ್‌ಫುಲ್‌, ಸಿರಿವಂತಿಕೆಗೆ 100% ಸೂತ್ರಗಳು ಕೃತಿಯನ್ನು ಬರೆದಿದ್ದಾರೆ.

Articles
Keshava Prasad B Column: ನೋಟಿಸ್‌ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್‌ !

ನೋಟಿಸ್‌ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್‌ !

‘ಯುಪಿಐ ಬೇಡ, ಕ್ಯಾಶ್ ಕೊಡ್ರಪ್ಪಾ’ ಎಂದು ವ್ಯಾಪಾರಿಗಳು ಹೊಸ ರಗಳೆಯನ್ನು ಸೃಷ್ಟಿಸಿದರೆ ಏನಾಗಲಿದೆ? ಕ್ರಮೇಣ ಅವರ ಬಿಸಿನೆಸ್‌ಗೇ ಹೊಡೆತ ಬೀಳುವುದು ಪಕ್ಕಾ. ಏಕೆಂದರೆ ಗ್ರಾಹಕರಿಗೆ ಬೇರೆ ಆಯ್ಕೆಗಳು ಸಾಕಷ್ಟಿವೆ. ನಾವೀಗ ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭರದಿಂದ ಸಾಗುತ್ತಿದ್ದೇವೆ. ಇಲ್ಲಿ ನಗದನ್ನು ಹೆಚ್ಚು ದಿನ ಕದ್ದುಮುಚ್ಚಿ ಬಳಸುವುದು ಕಷ್ಟಕರವಾಗಲಿದೆ.

Keshava Prasad B Column: 40 ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಣ್ಣದೇ? ಯುಪಿಐ, ಜಿಎಸ್‌ಟಿ ಬೇಡವೇ?!

40 ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಣ್ಣದೇ? ಯುಪಿಐ, ಜಿಎಸ್‌ಟಿ ಬೇಡವೇ?!

ರಾಜ್ಯ ವಾಣಿಜ್ಯ ಇಲಾಖೆ ಸಾವಿರಾರು ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಜಾರಿಗೊಳಿಸಿರುವುದು ಸಂಚಲನ ಮೂಡಿಸಿದೆ. ಬೇಕರಿ, ಕಾಂಡಿಮೆಂಟ್ಸ್‌ಗಳಿಗೆ, ಚಹಾ ಮಾರಾಟ ಮಾಡುವವರಿಗೆ 20-30 ಲಕ್ಷ ಕಟ್ಟಿ ಎಂದರೆ ಪಾಪ, ಅವರು ಎಲ್ಲಿಂದ ತಂದಾರು? ಇದು ಅನ್ಯಾಯವಲ್ಲವೇ ಎಂಬ ಕಾಳಜಿ ಸಹಜ. ಆದರೆ ವಾಸ್ತವವೇನು? ಯುಪಿಐ ಮೂಲಕ ನಡೆದಿರುವ ಹಣಕಾಸು ವರ್ಗಾವಣೆಗಳ ಅಧಾರದಲ್ಲಿ ಇಲಾಖೆ ನೋಟಿಸ್ ಕಳಿಸಿದ್ದು, 40 ಲಕ್ಷ ರುಪಾಯಿಗೂ ಹೆಚ್ಚು ಹಣದ ವರ್ಗಾವಣೆಗಳ ಬಗ್ಗೆ ವಿವರ ಗಳನ್ನು ಕೋರಿದೆ.

Keshava Prasad B Column: ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಇದು ನಿಜವಾಗಿಯೂ, ಕಾಲೇಜುಗಳ ಪದವಿಗೆ ಮುಕ್ತಾಯವಾಗುವ ಶಿಕ್ಷಣವಲ್ಲ, ಜೀವನ ಪರ್ಯಂತ ಕಲಿಕೆ ಅವಶ್ಯವಿರುವ ಕಲಿಕೆಯ ಯುಗ. ನಿತಿನ್ ಕೌಶಿಕ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಹೀಗೆನ್ನು ತ್ತಾರೆ- “25 ಕೋಟಿ ರುಪಾಯಿ ಸಂಪತ್ತಿನ ಒಡೆಯ 10 ಲಕ್ಷ ರುಪಾಯಿ ಮೌಲ್ಯದ ಸಾಧಾರಣ ಕಾರಿನಲ್ಲಿ ಓಡಾಡುತ್ತಾನೆ. ಆದರೆ ಕೇವಲ 1 ಕೋಟಿ 70 ಲಕ್ಷ ರುಪಾಯಿ ಆಸ್ತಿ ಇರುವ ವ್ಯಕ್ತಿ ಮರ್ಸಿಡಿಸ್ ಬ್ರ್ಯಾಂಡ್ ನ್ಯೂ ಲಕ್ಸುರಿ ಕಾರಿನಲ್ಲಿ ಮಿಂಚುತ್ತಾನೆ.

Keshav Prasad B Column: ಭಾರತದ ವಿದೇಶ ವ್ಯಾಪಾರ ನೆಟ್‌ ವರ್ಕ್‌ ಈಗ ಸರ್ವವ್ಯಾಪಿ !

ಭಾರತದ ವಿದೇಶ ವ್ಯಾಪಾರ ನೆಟ್‌ ವರ್ಕ್‌ ಈಗ ಸರ್ವವ್ಯಾಪಿ !

ಎಂಬತ್ತರ ದಶಕದ ಕೊನೆಯ ತನಕ ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ಭಾರತದ ಆರ್ಥಿಕತೆ 90ರ ದಶಕದಲ್ಲಿ ಉದಾರೀಕರಣದ ಹೊಸ್ತಿಲು ದಾಟಿತು. ಬಳಿಕ ಸಂಭವಿಸಿದ ಕ್ರಾಂತಿಕಾರಕ ಪರಿವರ್ತನೆ ಯ ಘಟ್ಟಗಳನ್ನು ನಾವು ನೋಡಿದ್ದೇವೆ. ಇದರ ಹಿಂದೆ ಉದಾರೀಕರಣದ ಫಲಶ್ರುತಿ ನಿಸ್ಸಂದೇಹ ವಾಗಿ ಇದ್ದೇ ಇದೆ.

Keshav Prasad B Column: ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !

ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !

ಕೇವಲ ಹೂಡಿಕೆಗೆ ಮಾತ್ರವಲ್ಲ, ಉದ್ಯೋಗದಲ್ಲಿ ಬೆಳವಣಿಗೆ, ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೂ ಸಹನೆ ಬೇಕು". ಮೋರ್ಗಾನ್ ಹೌಸೆಲ್ ಇದಕ್ಕಾಗಿ ಹಲವಾರು ಚಾರಿತ್ರಿಕ ಉದಾಹರಣೆಗಳನ್ನು ಕೊಟ್ಟು ಸಮರ್ಥಿಸಿ ದ್ದಾರೆ. ಅನೇಕ ಮಂದಿಗೆ ದೀರ್ಘಾವಧಿಯ ಹೂಡಿಕೆಗೆ ಬೇಕಾಗಿರುವ ತಾಳ್ಮೆ ಇರುವುದಿಲ್ಲ

Keshava Prasad B Column: ರಾಬರ್ಟ್‌ ಕಿಯೊಸಾಕಿ ಹೇಳಿದ ಮನಿ - ಮಂತ್ರಗಳಿಗೆ ಕಿವಿಗೊಡಿ !

ರಾಬರ್ಟ್‌ ಕಿಯೊಸಾಕಿ ಹೇಳಿದ ಮನಿ - ಮಂತ್ರಗಳಿಗೆ ಕಿವಿಗೊಡಿ !

ರಾಬರ್ಟ್ ಕಿಯೊಸಾಕಿ ಇತ್ತೀಚೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಂದು ಪೋಸ್ಟ್ ಮಾಡಿದ್ದರು- “ನೀವು ಈ ಎರಡು ನಿಯಮಗಳನ್ನು ಮುರಿಯುತ್ತಿದ್ದೀರಾ...?" ಬಹುತೇಕ ಜನರು ಈ ಎರಡು ಮಹತ್ವದ ನಿಯಮ ಗಳನ್ನು ಮುರಿಯುವುದರಿಂದ ಬಡವರಾಗಿ ಉಳಿಯುತ್ತಾರೆ. ಮೊದಲ ನಿಯಮ: ಕೆಟ್ಟ ಹಣ ವ್ಯವಸ್ಥೆ ಯನ್ನು ಪ್ರವೇಶಿಸುವಾಗ, ಒಳ್ಳೆಯ ಹಣ ಕಣ್ಮರೆಯಾಗುತ್ತದೆ. ಎರಡನೇ ನಿಯಮ: ನೆಟ್‌ವರ್ಕ್.

‌Keshava Prasad B Column: ಬೇಗನೆ ಶ್ರೀಮಂತರಾಗಲು ಸಾಧ್ಯವಿಲ್ಲ, ಸಂಬಳ ಒಂದೇ ಸಾಲದು !

ಬೇಗನೆ ಶ್ರೀಮಂತರಾಗಲು ಸಾಧ್ಯವಿಲ್ಲ, ಸಂಬಳ ಒಂದೇ ಸಾಲದು !

ಪೂರ್ಣ ಪ್ರಮಾಣದ ಲೇಖಕರಾಗುವುದಕ್ಕೆ ಮೊದಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರು 11 ವರ್ಷ ಗಳ ಸೇವೆ ಸಲ್ಲಿಸಿದ್ದರು. ಆದ್ದರಿಂದ ಹಣದ ಬಗ್ಗೆ ಅವರು ಆಗಿಂದಾಗ್ಗೆ ಬರೆಯುವ ಲೇಖನಗಳು ಸ್ವಾರಸ್ಯಕರ ವಾಗಿರುತ್ತವೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ಬ್ಯಾಂಕಿಂಗ್ ದಿಗ್ಗಜ ‘ಗೋಲ್ಡ್‌ ಮನ್ ಸ್ಯಾಕ್ಸ್’ನ ಹಾಂಕಾಂಗ್ ಕಚೇರಿಯಲ್ಲಿ ದುಡಿದಿದ್ದರು. ಡೊಯೆಚ್ ಬ್ಯಾಂಕ್‌ನ ಮುಂಬಯಿ ಶಾಖೆಯಲ್ಲೂ ಕೆಲ ಕಾಲ ನಿರ್ದೇಶಕರಾಗಿದ್ದರು.

Keshav Prasad B Column: ಐಪಿಎಲ್‌ ಹಣದ ಹೊಳೆಯೂ, ಅಭಿಮಾನಿಗಳ ಅಮಾಯಕತೆಯೂ  !

ಐಪಿಎಲ್‌ ಹಣದ ಹೊಳೆಯೂ, ಅಭಿಮಾನಿಗಳ ಅಮಾಯಕತೆಯೂ !

ರಾಯಲ್ ಚಾಲೆಂಜ್ ಎಂದರೆ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ವಿಸ್ಕಿ ಬ್ರಾಂಡ್‌ನ ಹೆಸರು. ಅದುವೇ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಅಥವಾ ಆರ್‌ಸಿಬಿ ಹೆಸರಾಯಿತು. ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಗೆದ್ದಿರುವ ತಂಡವಾದರೂ, ಇದು ಅತ್ಯಂತ ಜನಪ್ರಿಯ ತಂಡವಾಗಿ ಹೊರ ಹೊಮ್ಮಿದೆ. 2009, 2011 ಮತ್ತು 2016ರಲ್ಲಿ ಫೈನಲ್ ತನಕ ಅದು ಹೋಗಿತ್ತು.

Keshav Prasad B Column: ವಿಕಸಿತ ಭಾರತಕ್ಕಾಗಿ ಪ್ರತಿ ಹೆಜ್ಜೆಯೂ ಐತಿಹಾಸಿಕ, ಸಂಭ್ರಮ ಸ್ವಾಭಾವಿಕ !

ವಿಕಸಿತ ಭಾರತಕ್ಕಾಗಿ ಪ್ರತಿ ಹೆಜ್ಜೆಯೂ ಐತಿಹಾಸಿಕ, ಸಂಭ್ರಮ ಸ್ವಾಭಾವಿಕ !

‘ಆಪರೇಷನ್ ಸಿಂದೂರ’ದ ಬಳಿಕ ಭಾರತದ ಸೇನಾಪಡೆಯ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಶಕ್ತಿ ಪ್ರದರ್ಶನ ಜಗತ್ತನ್ನೇ ಬೆರಗುಗೊಳಿಸಿದೆ. ಪಾಕಿಸ್ತಾನದ ಅಣ್ವಸ ಬೆದರಿಕೆಯ ತಂತ್ರ ಮೊದಲ ಬಾರಿಗೆ ಮಣ್ಣುಮುಕ್ಕಿದೆ. ಇದೀಗ 4ನೇ ಅತಿ ದೊಡ್ಡ ಆರ್ಥಿಕತೆಯಾಗುವುದರೊಂದಿಗೆ, ಆರ್ಥಿಕವಾಗಿಯೂ ಭಾರತ-ಪಾಕಿಸ್ತಾನ ನಡುವೆ ಹೋಲಿಕೆಯೇ ಸಲ್ಲದು ಎಂಬುದು ಸಾಬೀತಾಗಿದೆ.

Keshav Prasad B Column: ಶಸ್ತ್ರಾಸ್ತ್ರ ಡೀಲರ್ ಪಾತ್ರದಲ್ಲಿ ಟ್ರಂಪ್‌ ಮಾಡುತ್ತಿರುವುದೇನು ?!

ಶಸ್ತ್ರಾಸ್ತ್ರ ಡೀಲರ್ ಪಾತ್ರದಲ್ಲಿ ಟ್ರಂಪ್‌ ಮಾಡುತ್ತಿರುವುದೇನು ?!

ಅಮೆರಿಕ ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿರಬಹುದು, ಆದರೆ ಈಗ ಪ್ರಬಲ ಇಕಾನಮಿ ಯಾಗಿ ಉಳಿದಿಲ್ಲ. ಜಿಡಿಪಿ ಬೆಳವಣಿಗೆಯೂ ಸ್ಥಿರವಾಗಿಲ್ಲ. ಇದನ್ನು ಸ್ವತಃ ಅಮೆರಿಕ ಮೂಲದ ರೇಟಿಂಗ್ ಏಜೆನ್ಸಿಗಳೇ ತಮ್ಮ ವರದಿಗಳ ಮೂಲಕ ಎಚ್ಚರಿಸುತ್ತಿವೆ. ಮೂಡೀಸ್ ವರದಿಯನ್ನು ಟ್ರಂಪ್ ಅಲ್ಲ ಗಳೆಯುತ್ತಿರಬಹುದು. ಆದರೆ ವಾಸ್ತವವನ್ನು ಹೆಚ್ಚು ದಿನ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

Keshav Prasad B Column: ಭಾರತದ ರಕ್ಷಣೆಗೆ ದೇವರು ಕಳಿಸಿದ ತೆರಿಗೆ ಜಿಎಸ್‌ಟಿ !

ಭಾರತದ ರಕ್ಷಣೆಗೆ ದೇವರು ಕಳಿಸಿದ ತೆರಿಗೆ ಜಿಎಸ್‌ಟಿ !

ಈಗ ಬಹುಶಃ ಯಾರೊಬ್ಬರೂ ಜಿಎಸ್‌ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆಯುವ‌ ಧೈರ್ಯ ಮಾಡಲಾರರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಂತೂ ಜಿಎಸ್ ಟಿಯನ್ನು “ಇದು ದೇವರು ಕಳಿಸಿದ ತೆರಿಗೆ ( God-SentTax). ರಫೆಲ್ ಜೆಟ್ ಯುದ್ಧ ವಿಮಾನಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಸೇನೆಗೆ ಒದಗಿಸಲು ಸಾಧ್ಯವಾಗಿದ್ದೇ ಜಿಎಸ್‌ಟಿಯ ಸಂಪನ್ಮೂಲದಿಂದ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Keshav Prasad B Column: ಸ್ವಂತ ಮಕ್ಕಳಿಗೆ ಉತ್ತರಾಧಿಕಾರ ಏಕೆ ನೀಡಲಿಲ್ಲ ?!

ಸ್ವಂತ ಮಕ್ಕಳಿಗೆ ಉತ್ತರಾಧಿಕಾರ ಏಕೆ ನೀಡಲಿಲ್ಲ ?!

ವಾರೆನ್ ಬಫೆಟ್ ಅವರು ತಮ್ಮ ಮಕ್ಕಳಾದ ಹೋವರ್ಡ್, ಪೀಟರ್ ಮತ್ತು ದಿವಂಗತ ಸುಸಾನ್ (ಪುತ್ರಿ) ಹೆಸರಿನಲ್ಲಿ ಸಾಕಷ್ಟು ಸಂಪತ್ತನ್ನು ಕೊಟ್ಟಿದ್ದರೂ, ಬರ್ಕ್‌ಶೈರ್ ಹಾಥ್‌ವೇ ಕಂಪನಿಯ ನಾಯಕತ್ವವನ್ನು ವಹಿಸಿಲ್ಲ. ಈ ಮೂಲಕ ನಾಯಕತ್ವದ ಪಾತ್ರಕ್ಕೆ ಕೌಟುಂಬಿಕ ರಕ್ತ ಸಂಬಂಧಗಳಿ ಗಿಂತ, ಪ್ರತಿಭೆ ಮತ್ತು ಸಾಮರ್ಥ್ಯವೇ ನಿರ್ಣಾಯಕ ಎಂಬುದನ್ನು ಸಾರಿದ್ದಾರೆ.

‌Keshava Prasad B Column: ದುರ್ಬಲವಾಗಿರುವ ಪಾಕಿಸ್ತಾನ ಯುದ್ಧ ಭರಿಸಬಲ್ಲದೇ ?

ದುರ್ಬಲವಾಗಿರುವ ಪಾಕಿಸ್ತಾನ ಯುದ್ಧ ಭರಿಸಬಲ್ಲದೇ ?

ಪಾಕಿಸ್ತಾನ ಎಂಥ ದುರ್ಭರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರೆ, ಒಂದು ಕಡೆ ಅಂತಾರಾ ಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಅದರ ಆರ್ಥಿಕ ಬೆಳವಣಿಗೆಯನ್ನು ಡೌನ್‌ಗ್ರೇಡ್ ಮಾಡಿದೆ. ಮತ್ತೊಂದು ಕಡೆ ಭಾರತವು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಸಿಂಧೂ ನದಿ ಜಲ ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ. ಇದರಿಂದಾಗಿ ಪಾಕಿಸ್ತಾನದ ಕೃಷಿ ಅಧಾರಿತ ಆರ್ಥಿಕತೆ ಮತ್ತಷ್ಟು ದುರ್ಬಲವಾಗಲಿದೆ.

Gold Rate: ಚಿನ್ನದ ದರ 3 ವರ್ಷಕ್ಕೆ ಡಬಲ್!‌ ಖರೀದಿಗೆ ಈಗ ಸಕಾಲವೆ?

ಚಿನ್ನದ ದರ 3 ವರ್ಷಕ್ಕೆ ಡಬಲ್!‌ ಖರೀದಿಗೆ ಈಗ ಸಕಾಲವೆ?

ಕಳೆದ ಮೂರೇ ವರ್ಷಗಳಲ್ಲಿ ಬಂಗಾರದ ದರ ಡಬಲ್‌ ಆಗಿದೆ. 2022ರಲ್ಲಿ 50,000 ರುಪಾಯಿಗಳ ಆಸುಪಾಸಿನಲ್ಲಿದ್ದ ಬಂಗಾರದ ದರ 2025ರಲ್ಲಿ 1 ಲಕ್ಷ ರುಪಾಯಿ ಗಡಿ ದಾಟಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ 25 ವರ್ಷಗಳಲ್ಲಿ ಚಿನ್ನದ ದರ ಹೇಗೆ, ಎಷ್ಟು ಸಲ ಡಬಲ್‌ ಆಗಿದೆ ಎನ್ನುವ ವಿರ ಇಲ್ಲಿದೆ.

Keshav Prasad B Column: ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

ಕಾಶ್ಮೀರದಲ್ಲೀಗ ಪ್ರವಾಸಿಗರು ಭಯಭೀತರಾಗಿ ದಿಕ್ಕೆಟ್ಟು ನಿರ್ಗಮಿಸುತ್ತಿರುವುದನ್ನು ಕಂಡು ಅಲ್ಲಿನ ವ್ಯಾಪಾರಿಗಳು, ಟ್ರಾವೆಲ್ ಏಜೆಂಟರು, ರೆಸ್ಟೊರೆಂಟ್ ಮಾಲೀಕರು ನಿರಾಸೆಗೊಂಡಿದ್ದಾರೆ. ಆದರೆ ಕಾಶ್ಮೀರಿ ಗರು ಒಂದನ್ನು ಮನವರಿಕೆ ಮಾಡಿಕೊಳ್ಳಲೇಬೇಕು. ಟೂರಿಸಂ ಮತ್ತು ಟೆರರಿಸಂ ಒಟ್ಟಿಗೆ ಇರಲು ಸಾಧ್ಯವೇ? ಸಾಮಾನ್ಯವಾಗಿ ಪ್ರವಾಸೋದ್ಯಮ ಇಲಾಖೆ ಎಂದರೆ ರಾಜಕಾರಣಿಗಳಿಗೆ ಅಷ್ಟಕ್ಕಷ್ಟೇ

Share Market: ಸೆನ್ಸೆಕ್ಸ್- ನಿಫ್ಟಿ ಹೈ ಜಂಪ್; 1 ಲಕ್ಷ ರೂ. ಗಡಿಯತ್ತ ಚಿನ್ನ: ಯಾವ ಷೇರು ಲಾಭದಾಯಕ?

ಸೆನ್ಸೆಕ್ಸ್- ನಿಫ್ಟಿ ಹೈ ಜಂಪ್ 1 ಲಕ್ಷ ರೂ. ಗಡಿಯತ್ತ ಚಿನ್ನ

Stock Market: ಸೆನ್ಸೆಕ್ಸ್‌ ಸೋಮವಾರ ಬೆಳಗ್ಗೆ 1,026 ಅಂಕಗಳ ಗಡಿಯನ್ನು ದಾಟಿ ಶುಭಾರಂಭ ಮಾಡಿತು. ನಿಫ್ಟಿ 24,000 ಅಂಕಗಳ ಮಟ್ಟಕ್ಕಿಂತ ಮೇಲಕ್ಕೆ ಜಿಗಿಯಿತು. ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳು ಜಿಗಿಯಿತು. ಅಂತಿಮವಾಗಿ ಸೆನ್ಸೆಕ್ಸ್‌ 855 ಅಂಕ ಏರಿಕೊಂಡು 79,408 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 273 ಅಂಕ ಹೆಚ್ಚಳದೊಂದಿಗೆ 24,125ಕ್ಕೆ ಸ್ಥಿರವಾಯಿತು. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

Multibagger Stocks: ಈ 2 ಸ್ಟಾಕ್ಸ್‌ಗಳಲ್ಲಿ ತಲಾ 1 ಲಕ್ಷ ರೂ. ಹೂಡಿಕೆಗೆ 5 ವರ್ಷದಲ್ಲಿ 50 ಲಕ್ಷ ರೂ. ಲಾಭ

ಈ ಸ್ಟಾಕ್ಸ್‌ಗಳಲ್ಲಿ 1 ಲಕ್ಷ ರೂ. ಹೂಡಿಕೆಗೆ 5 ವರ್ಷದಲ್ಲಿ 50 ಲಕ್ಷ ರೂ. ಲಾಭ

Stock Market: ನೀವು ಈ ಎರಡು ಕಂಪನಿಗಳ ಷೇರುಗಳಲ್ಲಿ ಒಂದು ವೇಳೆ ಕೇವಲ 5 ವರ್ಷಗಳ ಹಿಂದೆ ತಲಾ 1 ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ 50 ಲಕ್ಷ ರೂ.ಗೆ ಬೆಳೆದಿರುತ್ತಿತ್ತು. ವಾರ್ಷಿಕ 118% ದರದಲ್ಲಿ ವೃದ್ಧಿಸುತ್ತಿತ್ತು. ಕೆಲವು ಕಂಪನಿಗಳ ಷೇರುಗಳೇ ಹಾಗೆ. ಅಲ್ಪಾವಧಿಯಲ್ಲಿಯೇ ಅದ್ಭುತ ರಿಟರ್ನ್ಸ್‌ ಕೊಡುತ್ತವೆ. ಈ ರೀತಿಯಾಗಿ 100%ಗೂ ಹೆಚ್ಚು ರಿಟರ್ನ್‌ ಕೊಡುವ ಷೇರುಗಳನ್ನು ಮಲ್ಟಿ ಬ್ಯಾಗರ್ ಸ್ಟಾಕ್ಸ್‌ಎಂದು ಕರೆಯುತ್ತಾರೆ. ಕುರಿತಾದ ವಿವರ ಇಲ್ಲಿದೆ.

Keshav Prasad B Column: ಅಮೆರಿಕ-ಚೀನಾ ಮ್ಯಾಚ್ ಟೈ ಆದ್ರೆ, ಭಾರತಕ್ಕೆ ಕಪ್‌ ಸಿಗುತ್ತಾ ?!

ಅಮೆರಿಕ-ಚೀನಾ ಮ್ಯಾಚ್ ಟೈ ಆದ್ರೆ, ಭಾರತಕ್ಕೆ ಕಪ್‌ ಸಿಗುತ್ತಾ ?!

ಅಮೆರಿಕವು ಈಗ ಚೀನಾ ವಿರುದ್ಧ ಶೇ.245ರ ತನಕ ಪ್ರತಿಸುಂಕವನ್ನು ಹೇರಿದೆ. ಚೀನಾ ಶೇ.145ರ ಪ್ರತಿಸುಂಕ ವಿಧಿಸಿದೆ. ಇದರರ್ಥ ಉಭಯ ದೇಶಗಳು ಸುದೀರ್ಘ ವಾಣಿಜ್ಯ ಸಂಘರ್ಷಕ್ಕೆ ಸಜ್ಜಾಗಿವೆ. ಇದುವರೆಗೆ ಅಮೆರಿಕದ ಜತೆಗಿದ್ದ ಯುರೋಪ್, ವಾಣಿಜ್ಯ ಸಮರದ ನಂತರ ಕ್ರಮೇಣ ದೂರ ಸರಿಯು ತ್ತಿವೆ. ಆಗ್ನೇಯ ಏಷ್ಯಾದ ರಾಷ್ಟ್ರಗಳತ್ತ ಕೂಡ ಚೀನಾ ಮೈತ್ರಿ ಬಯಸುತ್ತಿದೆ.

‌Keshav Prasad B Column: ಅತಿ ದೊಡ್ಡ ಸಾಲಗಾರ ಅಮೆರಿಕ ಶ್ರೀಮಂತ ರಾಷ್ಟ್ರ ಯಾಕೆ ?

ಅತಿ ದೊಡ್ಡ ಸಾಲಗಾರ ಅಮೆರಿಕ ಶ್ರೀಮಂತ ರಾಷ್ಟ್ರ ಯಾಕೆ ?

ಪ್ರಪಂಚದ ಅತಿ ದೊಡ್ಡ ಸಾಲಗಾರ ಅಮೆರಿಕ. ಹೀಗಿದ್ದರೂ ಅದು ಅತ್ಯಂತ ಶ್ರೀಮಂತ ದೇಶವೂ ಆಗಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುತ್ತೀರಾ? ಒಂದಷ್ಟು ವಿವರಗಳನ್ನು ನೋಡೋಣ. ಹಲವಾರು ಕಾರಣ ಗಳಿಂದಾಗಿ ಅಮೆರಿಕ ತನ್ನ ಜಿಡಿಪಿಗಿಂತ ಹೆಚ್ಚು ಸಾಲವನ್ನು ಹೊಂದಿದ್ದರೂ, ಜಗತ್ತಿನ ನಂಬರ್ 1 ಶ್ರೀಮಂತ ರಾಷ್ಟ್ರವಾಗಿದೆ

Keshav Prasad B Column: ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ?

ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ?

ಟ್ರಂಪ್ ಟಾರಿಫ್ ಬಾಂಬ್ ಬಿದ್ದ ಬಳಿಕ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾ ದರೆ, ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ? ಅಥವಾ ಈ ತೆರಿಗೆ ದೊಣ್ಣೆಯ ಏಟಿಗೆ ಸ್ವತಃ ಅಮೆರಿಕನ್ನರೇ ಪೆಟ್ಟು ತಿನ್ನುವರೇ? ಇದು ‘ಲಿಬರೇಶನ್ ಡೇ’ ಆಗಲಿದೆಯೇ, ‘ರಿಸೆಶನ್ ಡೇ’ ಆಗಲಿ‌ ದೆಯೇ ಎಂಬ ಟೀಕಾಸ್ತ್ರಗಳು ಸಿಡಿದಿವೆ.

Gold Rate: ಬಂಗಾರದ ದರ ಸ್ಫೋಟ: 10 ಗ್ರಾಮ್‌ಗೆ 91,000 ರೂ.; ಕಾರಣವೇನು?

ಬಂಗಾರದ ದರ ಸ್ಫೋಟ: 10 ಗ್ರಾಮ್‌ಗೆ 91,000 ರೂ.

ಬಂಗಾರದ ದರ ಏ. 1ರಂದು ಹೊಸ ದಾಖಲೆಯ ಎತ್ತರಕ್ಕೇರಿದೆ. ಪ್ರತಿ 10 ಗ್ರಾಮ್‌ ಚಿನ್ನದ ದರ ಬರೋಬ್ಬರಿ 91,000 ರೂ.ಗೆ ಜಿಗಿದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ ಗ್ರಾಮ್‌ ಬಂಗಾರದ ದರ 9,284 ರುಪಾಯಿಗೆ ಏರಿಕೆಯಾಗಿದೆ. ಹಾಗಾದರೆ ನಿರಂತರವಾಗಿ ಬಂಗಾರದ ದರ ಏರುತ್ತಿರುವುದು ಏಕೆ? ಇಲ್ಲಿದೆ ವಿವರ.

Keshav Prasad B Column: ಭಾರತದ ಜಿಡಿಪಿಯ ಲಾಭ ಪಡೆಯಲು ಏನು ಮಾಡಬೇಕು ?!

ಭಾರತದ ಜಿಡಿಪಿಯ ಲಾಭ ಪಡೆಯಲು ಏನು ಮಾಡಬೇಕು ?!

ಬದಲಾವಣೆಯ ಪ್ರವೃತ್ತಿಯನ್ನು ಸ್ಪಷ್ಟವಾಗಿ ಗಮನಿಸಬಹುದು. ಬೆಂಗಳೂರಿನಂಥ ಮಹಾ ನಗರಗಳಿಂದ ಶುರುವಾಗಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮುಂತಾದ ಇತರ ನಗರ-ಪಟ್ಟಣಗಳಲ್ಲಿ ಹಲವು ವಿಧದ, ನವೀನ ಮಾದರಿಯ ಉದ್ಯೋಗಗಳು, ಸ್ವಂತ ಉದ್ಯೋಗ ಗಳು, ಅರೆಕಾಲಿಕ ಉದ್ಯೋಗಗಳು ಸಿಗುತ್ತಿವೆ.

Keshav Prasad B Column: ಸಾಲದ ರೈಟ್‌ ಆಫ್‌, ಮನ್ನಾ ಒಂದೇನಾ?, ಯಾವುದು ಉತ್ತಮ ?

ಸಾಲದ ರೈಟ್‌ ಆಫ್‌, ಮನ್ನಾ ಒಂದೇನಾ?, ಯಾವುದು ಉತ್ತಮ ?

ಕಳೆದ 10 ವರ್ಷಗಳಲ್ಲಿ ರೈಟ್ ಆಫ್ ಆಗಿರುವ ಸಾಲದ ಮೊತ್ತ 16 ಲಕ್ಷದ 35 ಸಾವಿರ ಕೋಟಿ ರುಪಾ ಯಿಗಳಾಗಿವೆ. ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2 ಲಕ್ಷದ 27 ಸಾವಿರದ 288 ಕೋಟಿ ರುಪಾ ಯಿಯಷ್ಟು ಸಾಲವನ್ನು ರಿಕವರಿ ಮಾಡಿವೆ. ಖಾಸಗಿ ಬ್ಯಾಂಕ್‌ಗಳು 55598‌ ಕೋಟಿ ರುಪಾಯಿ ಗಳನ್ನು ರಿಕವರಿ ಮಾಡಿವೆ. ಇದೊಂದು ಪ್ರಕ್ರಿಯೆ.

Keshava Prasad B Column: ಹಲ್ದಿರಾಮ್ಸ್‌ 90,000 ಕೋಟಿ ಬಿಸಿನೆಸ್‌ ಆಗಿದ್ದು ಹೇಗೆ ?

ಹಲ್ದಿರಾಮ್ಸ್‌ 90,000 ಕೋಟಿ ಬಿಸಿನೆಸ್‌ ಆಗಿದ್ದು ಹೇಗೆ ?

ಭಾರತದಲ್ಲಿ ಸ್ನಾಕ್ಸ್ ಮತ್ತು ‘ಈಸಿ ಟು ಈಟ್ ಫುಡ್ಸ್’ ವಲಯದಲ್ಲಿ ಅತಿ ದೊಡ್ಡ ಕಂಪನಿ‌ಯಾ ಗಿದೆ. ಇತ್ತೀಚಿನ ವರದಿಗಳ ಪ್ರಕಾರ ಸಿಂಗಾಪುರ ಮೂಲದ ಬಹುರಾಷ್ಟ್ರೀಯ ಹೂಡಿಕೆ ಕಂಪನಿ ಯಾದ ಟೆಮಾಸೆಕ್, ಹಲ್ದಿರಾಮ್ಸನ ಶೇ.10ರಷ್ಟು ಷೇರುಗಳನ್ನು ಖರೀದಿಸಿದೆ. ಇದು ಭಾರತದ ಎಫ್‌ ಎಂಸಿಜಿ ಸೆಕ್ಟರ್‌ನಲ್ಲಿ ಇತ್ತೀಚಿನ ಅತಿ ದೊಡ್ಡ ಡೀಲ್ ಆಗಿದೆ. ಸುಮಾರು 1 ಶತಕೋಟಿ ಡಾಲರ್‌ಗೆ ಈ ಷೇರು ಖರೀದಿ ನಡೆದಿದೆ.

Loading...