ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಲೋಕೇಶ್​ ಕಾಯರ್ಗ

[email protected]

ಲೋಕೇಶ್ ಕಾಯರ್ಗ ವಿಶ್ವವಾಣಿ ಪತ್ರಿಕೆ ಮತ್ತು ಲೋಕಧ್ವನಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರು. ಪತ್ರಕರ್ತನಾಗಿ ತಳಸ್ಪರ್ಶಿ ಅಧ್ಯಯನ, ವೃತ್ತಿಪರತೆ ಮತ್ತು ಜನಪರ ಕಾಳಜಿಯ ಅಂಕಣ ಬರಹಗಳಿಂದ ಮೆಚ್ಚುಗೆ ಪಡೆದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ.ಕಳೆದ 32 ವರ್ಷಗಳಲ್ಲಿ ರಾಜ್ಯದ ನಾನಾ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಆಯಾ ಪತ್ರಿಕೆಗಳ ಸುದ್ದಿ ಮನೆ ಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಿಕೆಯ ಮೂಲಕ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಗಮನ ಸೆಳೆದಿದ್ದಾರೆ

Articles
Lokesh Kayarga Column: ನಮ್ಮ ಹೆದ್ದಾರಿಗಳೆಂದರೆ ದರೋಡೆಗೆ ರಹದಾರಿಯೇ ?

ನಮ್ಮ ಹೆದ್ದಾರಿಗಳೆಂದರೆ ದರೋಡೆಗೆ ರಹದಾರಿಯೇ ?

ಅಭಿವೃದ್ಧಿ ಎಂದರೆ ಕೇವಲ ಅಗಲವಾದ ರಸ್ತೆಗಳಲ್ಲ, ಆ ರಸ್ತೆಗಳಲ್ಲಿ ಸಂಚರಿಸುವ ಅತ್ಯಂತ ಕಟ್ಟಕಡೆಯ ಮನುಷ್ಯನ ಹಸಿವು ಮತ್ತು ಹಕ್ಕುಗಳಿಗೆ ಗೌರವ ಸಿಗುವುದೇ ನಿಜವಾದ ಅಭಿವೃದ್ಧಿ. ಲಾಭ ಬಡುಕತನದ ಹೋಟೆಲ್ ಮಾಲೀಕರು ಮತ್ತು ಕೇವಲ ಆದಾಯದ ಕಡೆಗೆ ಗಮನ ಹರಿಸುವ ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಹೆದ್ದಾರಿಗಳು ಕೇವಲ ‘ದರೋಡೆಯ ಮಾರ್ಗ’ಗಳಾಗಿ ಉಳಿಯಲಿವೆ.

Lokesh Kayarga Column: ಬೈಕ್‌ ಟ್ಯಾಕ್ಸಿಗೆ ಬೇಕು ನಿಯಮದ ಲಗಾಮು !

Lokesh Kayarga Column: ಬೈಕ್‌ ಟ್ಯಾಕ್ಸಿಗೆ ಬೇಕು ನಿಯಮದ ಲಗಾಮು !

2026ರ ಜನವರಿ 23ರಂದು ಕರ್ನಾಟಕ ಹೈಕೋರ್ಟ್‌ʼನ ವಿಭಾಗೀಯ ಪೀಠವು ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಿ, ಅವುಗಳಿಗೆ ಅನುಮತಿ ನೀಡುವಂತೆ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರಕಾರವು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Lokesh Kayarga Column: ಕಾಡುಪ್ರಾಣಿಗಳ ಸಂತಾನಶಕ್ತಿ ಹರಣ: ಖಂಡ್ರೆ ಮಾತು ಚಿಂತನಾರ್ಹ !

ಕಾಡುಪ್ರಾಣಿಗಳ ಸಂತಾನಶಕ್ತಿ ಹರಣ: ಖಂಡ್ರೆ ಮಾತು ಚಿಂತನಾರ್ಹ !

ವಿಶ್ವದ ಹಲವು ದೇಶಗಳಲ್ಲಿ ವನ್ಯಪ್ರಾಣಿಗಳ ಸಂಖ್ಯೆಯನ್ನು ಸಮತೋಲನದಲ್ಲಿಡಲು ಬೇಟೆ ಮತ್ತು ಸಂತಾನಹರಣ ಚಿಕಿತ್ಸೆ ಎರಡನ್ನೂ ಪ್ರಮುಖ ಕ್ರಮಗಳಾಗಿ ಬಳಸಲಾಗುತ್ತದೆ. ಆಫ್ರಿಕಾ ರಾಷ್ಟ್ರಗಳಾದ ದ. ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ಆನೆ, ಕಾಡುಕೋಣ, ಕಾಡೆಮ್ಮೆಯಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ, ಅವುಗಳ ಕಲ್ಲಿಂಗ್(ಇ್ಠ್ಝ್ಝಜ್ಞಿಜ) ಇಲ್ಲವೇ ನಿಯಂತ್ರಿತ ಟ್ರೋಫಿ ಹಂಟಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಬೇಟೆಯಿಂದ ಬರುವ ಹಣವನ್ನು ಆ ಪ್ರಾಣಿಗಳ ಉಳಿದ ಸಂತತಿಯ ಸಂರಕ್ಷಣೆಗಾಗಿ ಬಳಸಲಾಗುತ್ತದೆ.

Lokesh Kayarga Column: ನಮ್ಮ ಬದುಕನ್ನೂ ಕೃತಕವಾಗಿಸಿದ ಕೃತಕ ಬುದ್ಧಿಮತ್ತೆ !

ನಮ್ಮ ಬದುಕನ್ನೂ ಕೃತಕವಾಗಿಸಿದ ಕೃತಕ ಬುದ್ಧಿಮತ್ತೆ !

ಅಂತಾರಾಷ್ಟ್ರೀಯ ಟೆಕ್ ದೈತ್ಯ ಒರಾಕಲ್ ಜಾಗತಿಕವಾಗಿ 30,000 ಉದ್ಯೋಗಿಗಳನ್ನು ವಜಾ ಗೊಳಿಸಲು ನಿರ್ಧರಿಸಿರುವುದು ಕೇವಲ ಒಂದು ಕಂಪನಿಯ ಆರ್ಥಿಕ ಶಿಸ್ತಿನ ಕ್ರಮವಲ್ಲ; ಬದಲಾಗಿ ಇದು ಮುಂಬ ರುವ ಆರ್ಥಿಕ ಸುನಾಮಿಯ ಮುನ್ಸೂಚನೆ. ಈ ಒಂದು ಕಂಪನಿಯ ನಿರ್ಧಾರದಿಂದ ಭಾರತ ವೊಂದರಲ್ಲೇ 12,000 ಮಂದಿ ಬೀದಿ ಪಾಲಾಗಿದ್ದಾರೆ.

Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?

Lokesh Kayarga Column: ಗ್ಯಾರಂಟಿ ಬೇಡ ಎನ್ನುವ ತಾಕತ್ತು ಯಾರಿಗಿದೆ ?

ಬಹುತೇಕ ರಾಜ್ಯಗಳು ಜನಪ್ರಿಯ ಯೋಜನೆಗಳ ಜಾರಿಯ ಭರದಲ್ಲಿ ಸಾಲದ ಬಲೆಗೆ ಸಿಲುಕಿವೆ. ಕೇಂದ್ರಸರಕಾರವೂ ಇದಕ್ಕೆ ಹೊರತಲ್ಲ. ಕೇಂದ್ರದ ಸಾಲ ಪ್ರಮಾಣ 200 ಲಕ್ಷ ಕೋಟಿಯ ಸಮೀಪ ತಲುಪಿದ್ದು ಸಾಲದ ಮೇಲಿನ ಬಡ್ಡಿ ಪಾವತಿಯೇ ಬಜೆಟ್‌ನ ಬಹು ದೊಡ್ಡ ಪಾಲನ್ನು ನುಂಗಿ ಹಾಕುತ್ತಿದೆ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕಾರ, ಜನರ ಕಲ್ಯಾಣವನ್ನು ಸಾಧಿಸುವುದು ಸರಕಾರದ ಪ್ರಮುಖ ಕರ್ತವ್ಯ. ಆದರೆ ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಯೋಜನೆಗಳ ಹಂಚಿಕೆ ಜನರ ತೆರಿಗೆ ಹಣದ ದುರುಪಯೋಗ.

Lokesh Kayarga Column: ಡಿಜಿಟಲ್ ಯುಗದ ʼಡೆಡ್ಲಿʼ ಮಕ್ಕಳು !

Lokesh Kayarga Column: ಡಿಜಿಟಲ್ ಯುಗದ ʼಡೆಡ್ಲಿʼ ಮಕ್ಕಳು !

ನಮ್ಮ ರಾಷ್ಟ್ರ ಆರ್ಥಿಕವಾಗಿ ಬಲಿಷ್ಠವಾಗಿರಬ ಹುದು. ನಮ್ಮ ಸೇನೆ ಬಲಶಾಲಿಯಾಗಿರ ಬಹುದು. ಆದರೆ ಸಮಾಜದ ಬುನಾದಿಯಾದ ಕುಟುಂಬ ವ್ಯವಸ್ಥೆ ಹಳಿ ತಪ್ಪಿದರೆ ಯಾರೂ ಅಂತಹ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚಿನ ಕೌಟುಂಬಿಕ ಭದ್ರತೆ ಮತ್ತು ಸುರಕ್ಷತೆಗೆ ಹೆಸರಾದ ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮಕ್ಕಳು ಹಂತಕರಾಗು ತ್ತಿದ್ದಾರೆ ಎಂದರೆ ಇದು ಅವರ ನೈತಿಕ ಅಧ:ಪತನವಲ್ಲ. ನಾವು ಕಟ್ಟಿದ ನಾಗರಿಕ ಸಮಾಜದ ಪತನ.

Lokesh Kaayarga Column: ಪ್ರವಾಸೋದ್ಯಮ ನಮ್ಮಲ್ಲೇಕೆ ʼಪ್ರಯಾಸೋದ್ಯಮʼ ?

ಪ್ರವಾಸೋದ್ಯಮ ನಮ್ಮಲ್ಲೇಕೆ ʼಪ್ರಯಾಸೋದ್ಯಮʼ ?

ಪ್ರವಾಸೋದ್ಯಮ ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬು. ರಾಜ್ಯದ ಜಿಡಿಪಿಗೆ ಪ್ರವಾಸಿ ಗರ ಕೊಡುಗೆ ಸುಮಾರು ಶೇ. 14.8 ರಷ್ಟಿದೆ. ಸರಿಸುಮಾರು 30 ಲಕ್ಷಕ್ಕೂ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಇಷ್ಟಾದರೂ ಈ ಉದ್ಯಮ ನಮ್ಮಲ್ಲಿ ನಿರ್ಲಕ್ಷಿತ ಕ್ಷೇತ್ರ. ರಾಜ್ಯದ ಒಂದು ಕೋಟಿಗಿಂತ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ತಾಕತ್ತು ಈ ಕ್ಷೇತ್ರಕ್ಕಿದೆ. ಅಧಿಕಾರಸ್ಥರು ಪ್ರವಾಸದ ಕುರಿತು ತಮ್ಮ ‘ದೃಷ್ಟಿಕೋನ’ ಬದಲಾಯಿಸಿಕೊಂಡರಷ್ಟೇ ಇದು ಸಾಧ್ಯ.

Lokesh Kaayarga Column: ಕಟ್ಟುವುದು ಸರಕಾರದ ಕೆಲಸ, ಮುರಿಯುವುದಲ್ಲ !

ಕಟ್ಟುವುದು ಸರಕಾರದ ಕೆಲಸ, ಮುರಿಯುವುದಲ್ಲ !

ಆಧುನಿಕ ಬೆಂಗಳೂರು ನಗರ ಅಕ್ರಮ ಕಟ್ಟಡಗಳ ಬೃಹತ್ ಸಮುಚ್ಚಯ. ಇಲ್ಲಿ ಸುಮಾರು ಶೇ.80ರಷ್ಟು ಮನೆ, ಕಟ್ಟಡಗಳು ಒಂದಲ್ಲ, ಒಂದು ರೀತಿಯಲ್ಲಿ ನಿಯಮ ಉಲ್ಲಂಘಿಸಿವೆ. ದುರಂತವೆಂದರೆ, ಅಕ್ರಮ ಬಡಾವಣೆಗಳು ತಲೆ ಎತ್ತುವಾಗ ಅಥವಾ ಅಕ್ರಮ ಕಟ್ಟಡದ ಪಾಯ ಹಾಕುವಾಗ ಮೌನವಾಗಿರುವ ಆಡಳಿತ ವ್ಯವಸ್ಥೆ, ಬಡ, ಮಧ್ಯಮ ವರ್ಗದ ಜನರು ತಮ್ಮ ಜೀವಮಾನದ ಉಳಿತಾಯವನ್ನು ವ್ಯಯಿಸಿ ಮನೆ ಕಟ್ಟಿದ ನಂತರ ‘ಅನಧಿಕೃತ’ ಎಂಬ ಹಣೆಪಟ್ಟಿ ಹಚ್ಚಿ ಜೆಸಿಬಿ ಹಿಡಿದು ಬರುತ್ತದೆ.

Lokesh Kaayarga Column: ನಮ್ಮ ಮೆಟ್ರೋ, ನಿಮ್ಮದೂ ಆಗುವುದು ಯಾವಾಗ ?

ನಮ್ಮ ಮೆಟ್ರೋ, ನಿಮ್ಮದೂ ಆಗುವುದು ಯಾವಾಗ ?

ಸಾಲ ಕಂತು ತುಂಬಬೇಕಾದರೆ ಆದಾಯ ಹೆಚ್ಚಳ ಆಗಲೇಬೇಕು. ಆಮೆಗತಿಯಲ್ಲಿ ಸಾಗುತ್ತಿರುವ ಬೆಂಗಳೂರು ಮೆಟ್ರೋ ಮಾರ್ಗ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದರೆ ಇನ್ನಷ್ಟು ಹಣ ಬೇಕು. ಹೀಗಾಗಿ ದರ ಹೆಚ್ಚಳ ಎರಡೂ ಸರಕಾರಗಳ ಜಂಟಿ ನಿರ್ಧಾರ. ಆದರೆ ದರ ಹೆಚ್ಚಳ ದಿಂದಾಗುವ ಜನಾಕ್ರೋಶವನ್ನು ಎದುರಿಸಲು ಎರಡೂ ಸರಕಾರಗಳು ಸಿದ್ಧವಿಲ್ಲ. ಹೀಗಾಗಿ ಬೆಂಗಳೂರಿನ ವಾಹನ ದಟ್ಟಣೆಗೆ ಮುಕ್ತಿ ನೀಡಬೇಕಿದ್ದ ‘ನಮ್ಮ ಮೆಟ್ರೋ’ ರಾಜಕೀಯದ ಕೆಸರಿನಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.

Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?

Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?

ಎತ್ತಿನಹೊಳೆಯ ವಿಚಾರದಲ್ಲಿ ನಡೆದಂತೆ ಕರಾವಳಿ ಮತ್ತು ಬಯಲುಸೀಮೆಯ ಜನರು ಮತ್ತೊಮ್ಮೆ ಈ ಯೋಜನೆ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ವರದಾ-ಬೇಡ್ತಿ ಯೋಜನೆ ವಿರುದ್ಧ ಅಭಿಯಾನ ಆರಂಭವಾಗಿದೆ. ಆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಪರಿಸರ ಹೋರಾಟಗಾರರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

Lokesh Kaayarga Column: ಶಿಕ್ಷಣ ಮಕ್ಕಳಿಗಷ್ಟೇ ಅಲ್ಲ, ಸರ್ಕಾರಕ್ಕೂ ಬೇಕಿದೆ !

ಶಿಕ್ಷಣ ಮಕ್ಕಳಿಗಷ್ಟೇ ಅಲ್ಲ, ಸರ್ಕಾರಕ್ಕೂ ಬೇಕಿದೆ !

ಕರ್ನಾಟಕವು ತಾಂತ್ರಿಕ ಶಿಕ್ಷಣ ಮತ್ತು ಐಟಿ-ಬಿಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ರಾಜ್ಯ. ಆದರೆ, ಈ ಹೊಳಪಿನ ಹಿಂದೆ ರಾಜ್ಯದ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯು ಗಂಭೀರವಾದ ಸವಾಲುಗಳನ್ನು ಮತ್ತು ಆಡಳಿತಾತ್ಮಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿನ ಮೂಲವನ್ನು ಪತ್ತೆ ಹಚ್ಚಿ, ತಕ್ಕ ಪರಿಹಾರ ಕಂಡುಕೊಳ್ಳಬೇಕಿದ್ದ ನಾಯಕರು, ಇನ್ನೆಲ್ಲೋ ಮುಲಾಮು ಹಚ್ಚಲು ಹೊರಟಿದ್ದಾರೆ.

Lokesh Kaayarga Column: ಕೇರಳದ ಹಿಡಿತದಿಂದ ಮಂಗಳೂರಿಗೆ ʼಮುಕ್ತಿʼ ಎಂದು ?

ಕೇರಳದ ಹಿಡಿತದಿಂದ ಮಂಗಳೂರಿಗೆ ʼಮುಕ್ತಿʼ ಎಂದು ?

ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವ ರೈಲೊಂದು ಕೇವಲ 50 ಕಿ.ಮೀ. ಮಾತ್ರ ಕರ್ನಾಟಕ ದಲ್ಲಿ ಸಂಚರಿಸಿ ಉಳಿದಂತೆ ತಮಿಳುನಾಡು, ಕೇರಳದಲ್ಲಿ ಸಂಚರಿಸಿ ಬಂದರು ನಗರ ಪ್ರವೇಶಿಸುತ್ತದೆ. ಇದು ಕೇರಳಿಗರ ತಾಕತ್ತು. ಕೇರಳದ ಗಡಿ ಭಾಗ ಪಾಣತ್ತೂರಿನಿಂದ ಸುಳ್ಯ ತಾಲ್ಲೂಕು ಮೂಲಕ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗವನ್ನು ಸಂಪರ್ಕಿಸುವ ಮಾರ್ಗದ ಸಮೀಕ್ಷೆಯೊಂದು ಚಾಲ್ತಿಯಲ್ಲಿದೆ.

Lokesh Kaayarga Column: ಕಾಸರಗೋಡಿನ ಮಲಯಾಳೀಕರಣಕ್ಕೆ ನಾವೂ ಕಾರಣ !

ಕಾಸರಗೋಡಿನ ಮಲಯಾಳೀಕರಣಕ್ಕೆ ನಾವೂ ಕಾರಣ !

ಸಂಕಷ್ಟದಲ್ಲಿ ಸಿಲುಕಿದ ಹೆಣ್ಣು ಮಗಳೊಬ್ಬಳು ತವರಿನ ಆಸರೆ, ಸಾಂತ್ವನ ಬಯಸುವುದು ಸಹಜ. ಆದರೆ ತವರು ಮನೆಯವರೇ ದೂರ ಮಾಡಿದರೆ ಆ ಹೆಣ್ಣು ಮಗಳು ಎಲ್ಲಿಗೆ ಹೋಗ ಬೇಕು? ಕಾಸರಗೋಡು ಕನ್ನಡಿಗರದ್ದೂ ಇದೇ ಪರಿಸ್ಥಿತಿ. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪಟ ಕನ್ನಡ ನೆಲವಾದ ಕಾಸರಗೋಡಿನ ಇತಿಹಾಸ ತಿಳಿಯದವರಷ್ಟೇ ಇಂತಹ ಮಾತುಗಳನ್ನು ಆಡಲು ಸಾಧ್ಯ.

Lokesh Kaayarga Column: ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?

ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?

2016 ಮತ್ತು 2017ರಲ್ಲೂ ದಕ್ಷಿಣ ಗೋವಾದ ವಾಸ್ಕೋ ಸಮೀಪವಿರುವ ‘ಬೈನಾ ಕಡಲತೀರ’ದಲ್ಲಿದ್ದ ನೂರಾರು ಮನೆಗಳನ್ನು ಕೆಡವಲಾಯಿತು. ಕರ್ನಾಟಕ ಮೂಲದವರಾದರೂ ಇವರಲ್ಲಿ ಹೆಚ್ಚಿನವರು ಗೋವಾದ ಕಾಯಂ ನಿವಾಸಿಗಳಾಗಿದ್ದರು. ಹೆಚ್ಚಿನವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಗಳಿದ್ದವು. ಆದರೆ ಅಕ್ರಮ ಒತ್ತುವರಿ ಮತ್ತು ಸಿಆರ್‌ಝೆಡ್ ನಿಯಮಗಳ ಉಲ್ಲಂಘನೆ ನೆಪದಲ್ಲಿ ಇವರನ್ನು ಹೊರ ದಬ್ಬ ಲಾಯಿತು.

Lokesh Kayarga Column: ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್‌ ನುಂಗಿ ಹಾಕಿತೇ ?

ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್‌ ನುಂಗಿ ಹಾಕಿತೇ ?

ಐ.ಟಿ ಕ್ರಾಂತಿಯ ಬಳಿಕ ಕಂಪ್ಯೂಟರ್ ಶಿಕ್ಷಣವೇ ಪ್ರಮುಖ ಎಂದೆನಿಸಿಕೊಂಡಿತು. ಈಗ ಕಂಪ್ಯೂಟರ್ ಕೋರ್ಸ್ ಎಂದರೆ ಸಾಕಾಗುವುದಿಲ್ಲ. ಅದರಲ್ಲಿ ಯಾವ ವಿಭಾಗ ಎಂದು ಪ್ರತ್ಯೇಕವಾಗಿ ಹೇಳಬೇಕು. ಕರ್ನಾಟಕದ ಬಹುತೇಕ ಎಲ್ಲ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಈಗ ಅಸ್ತಿತ್ವ ಉಳಿಸಿಕೊಂಡಿರು ವುದೇ ಕಂಪ್ಯೂಟರ್ ಕೋರ್ಸ್‌ಗಳ ಕಾರಣಕ್ಕಾಗಿ.

Lokesh Kaayarga Column: ಬಿರಿಯಾನಿ ತಿಂದ ನಾಯಿಗಳು ಕಚ್ಚೋದಿಲ್ವೇ ?!

Lokesh Kaayarga Column: ಬಿರಿಯಾನಿ ತಿಂದ ನಾಯಿಗಳು ಕಚ್ಚೋದಿಲ್ವೇ ?!

ಬೀದಿ ನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಇತ್ತೀಚೆಗೆ ಒಂದರ ಬಳಿಕ ಒಂದರಂತೆ ನೀಡಿರುವ ನಿರ್ದೇಶನಗಳು, ಅದನ್ನು ಪಾಲಿಸಲು ನಮ್ಮ ಸರಕಾರ ಮತ್ತು ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಈ ನಿಟ್ಟಿನಲ್ಲಿ ಅಂದಾಜಿಸಿರುವ ಹಣಕಾಸು ಬೇಡಿಕೆಗಳನ್ನು ನೋಡಿದರೆ ಖಂಡಿತ ವಾಗಿಯೂ ಬೀದಿ ನಾಯಿಗಳು, ಹುಲಿ, ಸಿಂಹ, ಚಿರತೆ ಮುಂತಾದ ವನ್ಯ ಪ್ರಾಣಿಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿವೆ.

Lokesh Kaayarga Column: ರಾಜ್ಯಕ್ಕೆ ಮುಳುವಾಯಿತೇ ಹೈಕಮಾಂಡ್‌ ಸಂಸ್ಕೃತಿ

Lokesh Kaayarga Column: ರಾಜ್ಯಕ್ಕೆ ಮುಳುವಾಯಿತೇ ಹೈಕಮಾಂಡ್‌ ಸಂಸ್ಕೃತಿ

ರಾಜ್ಯ ರಾಜಕೀಯದಲ್ಲಿ ಸದ್ಯ ನಡೆಯುತ್ತಿರುವ ನಾಯಕತ್ವದ ಪ್ರಶ್ನೆ ಬಂದಾಗಲೂ, ಕಾಂಗ್ರೆಸ್ ಪಕ್ಷದ ಶಾಸಕರಿಂದ ಹಿಡಿದು ನಾಯಕರವರೆಗೆ ಎಲ್ಲರೂ ಹೈಕಮಾಂಡ್ ನಿರ್ಧರಿಸಲಿದೆ ಎಂದೇ ಹೇಳುತ್ತಾ ಬಂದಿದ್ದಾರೆ. ತಮಾಷೆ ಎಂದರೆ ಹೈಕಮಾಂಡ್ ನಾಯಕನ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೂ ಇದೇ ಮಾತನ್ನು ಹೇಳು ತ್ತಿದ್ದಾರೆ.

Lokesh Kaayarga Column: ಸರಕಾರದ ಸರ್ವರ್ ಸ್ಲೋ ಸಾರ್ವಕಾಲಿಕ !

Lokesh Kaayarga Column: ಸರಕಾರದ ಸರ್ವರ್ ಸ್ಲೋ ಸಾರ್ವಕಾಲಿಕ !

ಯಾವುದೇ ತಂತ್ರಜ್ಞಾನ ತಾನಾಗಿಯೇ ಸೇವೆ ನೀಡುವುದಿಲ್ಲ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಕೈಗಳಿರಬೇಕು. ಸೇವೆ ನೀಡುವ ಮನಸ್ಸಿದ್ದರೆ, ನೀಡುವ ಕೈಗಳಿದ್ದರೆ ತಲುಪಿಸಲು ನೂರಾರು ಮಾರ್ಗಗಳಿವೆ. ಆದರೆ ‘ಕಾಣಿಕೆ’ ಸಂದಾಯವಾಗದ ಹೊರತು ಸೇವೆ ಸಲ್ಲಲೇಬಾರದು ಎಂದು ಯೋಚಿಸುವವರನ್ನು ಯಾವ ತಂತ್ರಜ್ಞಾನದಿಂದಲೂ ರಿಪೇರಿ ಮಾಡಲಾಗದು.

Lokesh Kaayarga Column: ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?

ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?

ಎಡ-ಬಲ ನಿಲುವಿನ ಕಾರ್ಮಿಕ ಸಂಘಟನೆಗಳು ತಮ್ಮ ನಿಲುವಿಗೆ ತಕ್ಕಂತೆ ಹೇಳಿಕೆ ನೀಡಿ ದ್ದನ್ನು ಬಿಟ್ಟರೆ ಹೊಸ ಕಾಯಿದೆಯ ಇನ್ನೂ ವಿಶದವಾಗಿ ಮಾತನಾಡಿಲ್ಲ. ಬ್ರಿಟಿಷರ ಅವಧಿಯ ಕಾನೂನುಗಳೂ ಸೇರಿದಂತೆ 29 ಹಳೆಯ ಕಾರ್ಮಿಕ ಕಾನೂನುಗಳನ್ನು ಪರಿಷ್ಕರಿಸಿ ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.

Lokesh Kaayarga Column: ವಂಚಕರ ಚಾಲಾಕಿತನಕ್ಕೆ  ಮದ್ದರೆಯುವವರಾರು ?

Lokesh Kaayarga Column: ವಂಚಕರ ಚಾಲಾಕಿತನಕ್ಕೆ ಮದ್ದರೆಯುವವರಾರು ?

ಕೇಂದ್ರ ಸರಕಾರ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ತಡೆಗೆ ಹಲವು ಕ್ರಮಗಳನ್ನು ಕೈಗೊಂಡರೂ ಸೈಬರ್ ಚಾಲಾಕಿಗಳ ಮುಂದೆ ಇವು ನಗಣ್ಯ ಎನಿಸಿವೆ. ವಂಚನೆಗೆ ಒಳಗಾದವರು ತಕ್ಷಣವೇ 1930ಕ್ಕೆ ಕರೆ ಮಾಡಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಆದರೆ ದಾಖ ಲಾದ ದೂರುಗಳ ಬೆನ್ನು ಹತ್ತಿ ವಂಚಕರನ್ನು ಪತ್ತೆ ಮಾಡಿ, ಹಣವನ್ನು ಮರಳಿ ಪಡೆಯುವ ವಿಧಾನ ಇನ್ನೂ ಓಬೀರಾಯನ ಕಾಲದಲ್ಲಿದೆ.

Lokesh Kaayarga Column: ಸೇನೆಯಲ್ಲೂ ಮತಭೇದ ರಾಜಕೀಯ !

Lokesh Kaayarga Column: ಸೇನೆಯಲ್ಲೂ ಮತಭೇದ ರಾಜಕೀಯ !

ನಮ್ಮ ಗುಪ್ತಚರ ಪಡೆ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೇ ಹೈ ಪ್ರೊಫೈಲ್ ಉಗ್ರರ ಕುರಿತ ಮಾಹಿತಿ ಕಲೆ ಹಾಕಿದ್ದು ದೇಶದ ಮೇಲಿನ ನಿಷ್ಠೆಯಿಂದ. ಈ ಮಾತು ಹೇಳಲು ಕಾರಣವಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭಾರತೀಯ ಸೇನೆಯು ಜನಸಂಖ್ಯೆಯ ಸುಮಾರು ಶೇ. ೧೦ರಷ್ಟಿರುವ ಮೇಲ್ಜಾತಿಯ ಜನರಿಂದ ನಿಯಂತ್ರಿಸಲ್ಪಡುತ್ತದೆ ಎಂದು ಆರೋಪಿಸಿದ್ದಾರೆ.

Lokesh Kaayarga Column: ವೀರಪ್ಪನ್ ಬದುಕಿದ್ದರೆ ಹೀಗಾಗುತ್ತಿರಲಿಲ್ಲವಂತೆ.... !

ವೀರಪ್ಪನ್ ಬದುಕಿದ್ದರೆ ಹೀಗಾಗುತ್ತಿರಲಿಲ್ಲವಂತೆ.... !

ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಆಗ ಕಾಡೊಳಗೆ ಅಕ್ರಮ ಗಣಿಗಾರಿಕೆ- ರೆಸಾರ್ಟ್ ಅವ್ಯವಹಾರಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ಪರವಾಗಿರಲಿಲ್ಲ ಎಂಬ ನಮ್ಮ ಕಾಡಂಚಿನ ಜನರ ಆಕ್ರೋಶದ ಹಿಂದೆ ನೋವು, ಹತಾಶೆಗಳಿವೆ. ಅಮಾಯಕರು ವನ್ಯಜೀವಿಗಳ ದಾಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ವನ್ಯಮೃಗಗಳು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿವೆ. ಸಂರಕ್ಷಿತ ಅರಣ್ಯದಂಚಿನಲ್ಲಿ ರೆಸಾರ್ಟ್, ಎಸ್ಟೇಟ್ ಚಟುವಟಿಕೆಗಳ ಹೆಚ್ಚಳ ವನ್ಯಜೀವಿಗಳು ನಾಡಿಗೆ ನುಗ್ಗಲು ಕಾರಣವಾಗಿವೆ ಎನ್ನುವುದು ಈ ಭಾಗದ ಜನರ ದೂರು.

Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

ರಾಜ್ಯ ಸರಕಾರ ಇದೇ ಶೈಕ್ಷಣಿಕ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಗೆ ನಿಗದಿಪಡಿಸಲಾದ ಕನಿಷ್ಠ ಅಂಕಗಳ ಮಟ್ಟವನ್ನು ಶೇ.33ಕ್ಕೆ ಇಳಿಸಲು ಹೊರಟಿದೆ. ಈ ಮೂಲಕ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ಬದಲು ಎಸ್‌ಎಸ್‌ಎಲ್‌ಸಿವರೆಗೆ ‘ಉತ್ತೀರ್ಣ ಉಚಿತ’ ಎಂದು ಘೋಷಿಸಿದ್ದರೆ ವಿದ್ಯಾರ್ಥಿಗಳ ಪಾಲಿಗೆ ನಮ್ಮ ಶಿಕ್ಷಣ ಸಚಿವರು ಹೀರೋ ಆಗಿರುತ್ತಿದ್ದರು.

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

Lokesh Kaayarga Column: ಗಣತಿ ಪ್ರಹಸನ ಬದಲು ಬೇರೆ ಆಯ್ಕೆಗಳಿಲ್ಲವೇ ?

ಗ್ರಾಹಕರಿಗೆ ಸಾಲ ಕೊಡುವ ಬ್ಯಾಂಕ್‌ಗಳು ಕೇವಲ ಪ್ಯಾನ್ ಕಾರ್ಡ್ ಆಧಾರದಿಂದಲೇ ಕೆಲವೇ ನಿಮಿಷ ಗಳಲ್ಲಿ ನಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸಲು ಸಾಧ್ಯ ಎಂದಾದರೆ ಸರಕಾರಕ್ಕೆ ಇಂಥದ್ದೇ ಸಾಫ್ಟ್‌ ವೇರ್‌ವೊಂದನ್ನು ರಚಿಸಿ ನಮ್ಮ ಪೂರ್ವಾಪರ ಕಲೆ ಹಾಕುವುದು ಕಷ್ಟದ ವಿಚಾರವೇನಲ್ಲ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಕಂಪನಿಗಳು ತಮ್ಮ ವ್ಯವಹಾರ ಆರಂಭಕ್ಕೆ ಮುನ್ನ ಈ ರೀತಿಯ ಎಲ್ಲ ಕಸರತ್ತುಗಳನ್ನು ನಡೆಸುತ್ತವೆ. ಈ ಕಾಲದಲ್ಲಿ ಮನೆಮನೆಗೆ ಶಿಕ್ಷಕರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸುವ ಅಗತ್ಯವಿದೆಯೇ ಎಂದು ಸರಕಾರ ಮರು ಚಿಂತನೆ ನಡೆಸಬೇಕಾಗಿದೆ.

Loading...