Lokesh Kayarga Column: ಕೆಪಿಎಸ್ʼಸಿಗೂ ಜಿರಳೆ ನುಗ್ಗಬೇಕಿತ್ತು...!
ಒಂದು ವೇದಿಕೆ ಬೇಕಿತ್ತು. ಅದು ಸಿಕ್ಕಾಕ್ಷಣ ಅವರು ಎದ್ದು ನಿಂತ ಪರಿ ಮಾತ್ರ ಬೆರಗು ಮೂಡಿಸು ವಂಥದ್ದು. ಕೇಂದ್ರ ಸರಕಾರವಾಗಲಿ, ನಮ್ಮ ಗುಪ್ತಚರ ಸಂಸ್ಥೆಗಳಾಗಲಿ, ಪೊಲೀಸ್ ಇಲಾಖೆ ಯಾಗಲಿ ಈ ಮಟ್ಟದ ಪ್ರತಿಭಟನೆ ನಡೆಯುತ್ತದೆ ಎಂದು ನಿರೀಕ್ಷಿಸಿಯೇ ಇರಲಿಲ್ಲ. ಸಿಜೆಐ ಹೇಳಿಕೆ ಖಂಡಿಸಿ ವಿದೇಶ ದಲ್ಲಿ ಓದುತ್ತಿದ್ದ ಅಭಿಜಿತ್ ದಿಪ್ಕೆ ಎಂಬ ಒಬ್ಬ ವಿದ್ಯಾರ್ಥಿ ಹಾಕಿದ ವ್ಯಂಗ್ಯಭರಿತ ಪೋಸ್ಟ್ ದಿನ ಬೆಳಗಾಗುವದರೊಳಗೆ ಸಂಚಲನ ಸೃಷ್ಟಿಸಿತ್ತು.