ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ರಂಜಿತ್​ ಎಚ್​ ಅಶ್ವತ್ಥ್

columnist

[email protected]

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ಪ್ರಾದೇಶಿಕ ಪಕ್ಷಗಳ ಬವಣೆಯಾದರೂ ಏನು ?

ಪ್ರಾದೇಶಿಕ ಪಕ್ಷಗಳ ಬವಣೆಯಾದರೂ ಏನು ?

ದಶಕಗಳ ಕಾಲ ಡಿಎಂಕೆ-ಎಐಎಡಿಎಂಕೆಯ ಹೊರತಾಗಿ ಮೂರನೇ ಶಕ್ತಿಯೇ ತಮಿಳುನಾಡಿನಲ್ಲಿ ಎಂದು ಹೇಳಲಾಗಿತ್ತು. ಈಗಲೂ ತಮಿಳುನಾಡಿನಲ್ಲಿ ಬಿಜೆಪಿ, ಕಾಂಗ್ರೆಸ್‌ನ ಪರಿಸ್ಥಿತಿ ಭಿನ್ನವಾಗಿಯೇನು ಇಲ್ಲ. ನಟ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚೆಂದರೆ 15 ಸ್ಥಾನ ಬರಬಹುದು ಎಂದು ಬಹುತೇಕ ಸಮೀಕ್ಷೆಗಳು ಷರ ಬರೆದಿದ್ದವು.

Ranjith H Ashwath Column: ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

ಒಕ್ಕಲಿಗರ ಅಸ್ಮಿತೆ ಕದಲಿಸಲು ಕೈ ಪ್ರಯತ್ನ ?

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಉಪಮುಖ್ಯಮಂತ್ರಿಯಾದ ಬಳಿಕ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸಿ, ಡಿ.ಕೆ.ಶಿವಕುಮಾರ್ ಇದರಲ್ಲಿ ಪೂರ್ಣ ಯಶಸ್ಸು ಪಡೆಯದಿದ್ದರೂ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕೆಲ ಭದ್ರಕೋಟೆಗಳನ್ನು ಬೇಧಿಸು ವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಇದು ಕಾಂಗ್ರೆಸ್ ಯಶಸ್ಸು ಎನಿಸಿದರೂ, ಬಿಜೆಪಿ-ಜೆಡಿಎಸ್ ಮೈತ್ರಿಯೊಳಗಿದ್ದ ಒಳ ರಾಜಕೀಯದಿಂದ ಮತಗಳು ಚದುರಿ ಕಾಂಗ್ರೆಸ್‌ಗೆ ಲಾಭವಾಯಿತು ಎನ್ನುವ ದನ್ನು ಅರಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಖಾತೆ ಹಂಚಿಕೆಯ ಕ್ಷಣದಿಂದಲೂ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದು ಪೂರ್ಣ ಒಪ್ಪಿಗೆ ಇರಲಿಲ್ಲ. ಇದ ರೊಂದಿಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನ, ಜಿಬಿಎ ಚುನಾವಣೆಯಿಂದ ಅಂತರ ಕಾಯ್ದು ಕೊಳ್ಳುವುದಾಗಿ ರೆಡ್ಡಿ ಎಚ್ಚರಿಕೆ ನೀಡಿದ ಬೆನ್ನ, ಈ ಖಾತೆ ನನಗೆ ಬೇಡ ಎನ್ನುವ ಕ್ಯಾತೆಯನ್ನು ಕೃಷ್ಣ ಬೈರೇಗೌಡ ಎತ್ತಿದ್ದಾರೆ. ಈ ಖಾತೆಯ ಬದಲು ಬೇರೆ ಖಾತೆಯ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Ranjith H Ashwath Column: ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು

ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು

ರಾಜೀನಾಮೆ ಬಳಿಕವೂ, ಸಹಿ ಸಂಗ್ರಹ, ಪ್ರತಿಭಟನೆ, ಪತ್ರ ಚಳವಳಿಗೆ ಅವಕಾಶ ನೀಡದೇ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಡಿ.ಕೆ. ಶಿವಕುಮಾರ್ ಹೆಸರನ್ನು ತಾವೇ ಪ್ರಸ್ತಾಪಿಸುವ ಮೂಲಕ, ಯಾವುದೇ ರೀತಿಯ ವಿರೋಧಕ್ಕೆ ಅವಕಾಶ ನೀಡದೇ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸದ್ಯಕ್ಕಂತೂ ಸುಸೂತ್ರವಾಗಿ ಮುಗಿಸಿ ಕೊಟ್ಟಿದ್ದಾರೆ.

Ranjith H Ashwath Column: ಲೈಕ್ಸ್-ಕಾಮೆಂಟ್‌ ಬಿಟ್ಟು, ಬೂತ್‌ ಸಂಘಟಿಸಿ: ಕಮಲ ಪಾಠ

ಲೈಕ್ಸ್-ಕಾಮೆಂಟ್‌ ಬಿಟ್ಟು, ಬೂತ್‌ ಸಂಘಟಿಸಿ: ಕಮಲ ಪಾಠ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಸುದೀರ್ಘ ಅವಧಿಗೆ ಅಸ್ತಿತ್ವದಲ್ಲಿರ ಬೇಕೆಂದರೆ ಆ ಪಕ್ಷದ ದೂರದೃಷ್ಟಿಯ ಆಲೋಚನೆಗಳು ಪ್ರಮುಖವಾಗುತ್ತದೆ. ದೂರದೃಷ್ಟಿಯ ಜತೆಜತೆ ತಮ್ಮ ಪಕ್ಷದ ಕೇಡರ್‌ಗಳನ್ನು ಭದ್ರಪಡಿಸಿಕೊಂಡಾಗ ಮಾತ್ರ ಸೋಲು-ಗೆಲುವಿನಾ ಚೆಯ ಬಲವನ್ನು ಪಕ್ಷಗಳು ಹೊಂದುತ್ತವೆ.

Ranjith H Ashwath Column: ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?

ಅಭಿಮಾನೋತ್ಸವದಿಂದ ಸಂದೇಶ ಕೊಟ್ಟಿದ್ದು ಯಾರಿಗೆ ?

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿಯಲ್ಲಿ ವಿರೋಧಾಭಾಸದ ಹೊರತಾಗಿಯೂ, ಇಡೀ ಬಿಜೆಪಿಯನ್ನು ಒಂದು ವೇದಿಕೆಯಲ್ಲಿ ತರುವ ಶಕ್ತಿ ಉಳಿದಿರುವುದು ಯಡಿಯೂರಪ್ಪ ಎನ್ನುವ ಹೆಸರಿಗೆ ಮಾತ್ರ ಎನ್ನುವುದು ಪ್ರಶ್ನಾತೀತ. ರಾಜ್ಯ ಬಿಜೆಪಿಯ ಈ ನಾಡಿಮಿಡಿತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಹೆಸರಿನಲ್ಲಿಯೇ ಬೃಹತ್ ಸಮಾವೇಶ ಆಯೋಜಿಸಿ ಕೇವಲ ಪಕ್ಷದ ನಾಯಕರನ್ನು ಮಾತ್ರವಲ್ಲದೇ, ಸರ್ವ ಜಾತಿಗಳ ಮಠಾಧೀಶರು, ಜಗದ್ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದರು.

Ranjith H Ashwath Column: ಕೈ ಮೌನದಾಟದ ಹಿಂದಿನ ಗುಟ್ಟೇನು ?

ಕೈ ಮೌನದಾಟದ ಹಿಂದಿನ ಗುಟ್ಟೇನು ?

ತಮ್ಮ ಮಾತಿನಿಂದಲೇ ರಾಜಕೀಯವನ್ನು ಹಾಳು ಮಾಡಿಕೊಂಡಿರುವ ಅನೇಕ ನಾಯಕರನ್ನು ನೋಡಿ ದ್ದೇವೆ. ಆದರೆ ಮಾತನ್ನು ಎಲ್ಲಿ ಎಷ್ಟರ ಮಟ್ಟಿಗೆ ಆಡಬೇಕು? ಯಾವ ಸಮಯದಲ್ಲಿ ಮೌನ ವಾಗಿರಬೇಕು ಎನ್ನುವುದೇ ರಾಜಕೀಯ ಪಠ್ಯದ ಮೊದಲ ಪಾಠ. ಮಾತು-ಮೌನ ಎನ್ನುವ ಅಸ್ತ್ರ- ಪ್ರತ್ಯಸ್ತ್ರದ ನಡುವೆ ಇರುವ ಸಣ್ಣ ಅಂತರವನ್ನು ಅರಿಯುವುದೇ ಮುತ್ಸದ್ದಿ ರಾಜಕಾರಣಿಯ ಮೊದಲ ಗುಣ ಎನ್ನುವುದು ರಾಜಕೀಯ ಮೊಗಸಾಲೆಯಲ್ಲಿರುವ ಮಾತು.

Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್‌ ಮಾಡೋಕಲ್ಲ !

Ranjith H Ashwath Column: ಪರೀಕ್ಷೆ ನಡೆಸೋದು ಬರೀ ಪಾಸ್‌ ಮಾಡೋಕಲ್ಲ !

ಫಲಿತಾಂಶ ಹೆಚ್ಚಾಗಿರುವಷ್ಟೇ ಪ್ರಮಾಣದಲ್ಲಿ ಪಿಯುಸಿ ಪ್ರವೇಶವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿ ಸರಕಾರ ಸಿಲುಕಿದೆ. ಹಾಗೆಂದು, ಸರಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶ ಸಂಖ್ಯೆ ಏರಿಸುವುದಕ್ಕೆ ಉಪನ್ಯಾಸಕರ ಕೊರತೆ ಸಹಜವಾಗಿಯೇ ಕಾಡುತ್ತದೆ. ಈಗಲೇ ಅನೇಕ ಕಾಲೇಜು ಗಳು ಅತಿಥಿ ಉಪನ್ಯಾಸಕರ ಮೇಲೆ ನಡೆಯುತ್ತಿದೆ.

Ranjith H Ashwath Column: ಮೀಸಲು ವಿಧೇಯಕದ ಸೋಲು ಯಾರ ಗೆಲುವು ?

ಮೀಸಲು ವಿಧೇಯಕದ ಸೋಲು ಯಾರ ಗೆಲುವು ?

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಶತಾಯಗತಾಯ ಅಧಿಕಾರದ ಗದ್ದುಗೆ ಏರಬೇಕು ಎನ್ನುವುದು ಬಿಜೆಪಿ ಯ ಗುರಿಯಾಗಿದೆ. ತಮಿಳುನಾಡಿನಲ್ಲಿ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಅರಿವು ಬಿಜೆಪಿಗ ರಿಗೂ ಇದೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿರುವ ಶೇ.50ರಷ್ಟು ಮಹಿಳಾ ಮತದಾರರನ್ನು ಗಮನ ದಲ್ಲಿರಿಸಿಕೊಂಡೇ ಈ ವಿಧೇಯಕ ‘ತಂತ್ರ’ ಹೆಣೆದರೇ ಎನ್ನುವ ಅನುಮಾನಗಳು ಶುರುವಾಗಿದೆ.

Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

ಯಾವುದೇ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಿಂದ ಹಿಡಿದು, ಚುನಾವಣಾ ಪ್ರಚಾರದಲ್ಲಿ ಯಾರು ಭಾಗವಹಿಸಬೇಕು ಎನ್ನುವುದೂ ಸಹ ಬಹುತೇಕ ಸಮಯದಲ್ಲಿ ಇದೇ ಜಾತಿ-ಧರ್ಮದ ಮೇಲೆ ತೀರ್ಮಾನ ವಾಗುತ್ತದೆ. ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಉಪಚುನಾವಣೆಯ ವಿಷಯದಲ್ಲಿಯೂ ಇದೇ ಜಾತಿ-ಧರ್ಮದ ವಿಷಯದಲ್ಲಿ ಶುರುವಾದ ಗದ್ದಲ, ಇದೀಗ ಆಡಳಿತಾ ರೂಢ ಕಾಂಗ್ರೆಸ್‌ನಲ್ಲಿ ಜ್ವಾಲೆ ಯಾಗಿ ಉರಿಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ಅನುಕಂಪದ ಅಲೆ ಎರಡೂ ಸೇರಿದರೆ ಗೆಲ್ಲುವುದು ಬಹುದೊಡ್ಡ ಸವಾಲೇನಲ್ಲ ಎನ್ನುವುದು ರಾಜಕೀಯದ ಮೊದಲ ಮೆಟ್ಟಿಲು ಇಡುತ್ತಿರುವವರಿಗೂ ಗೊತ್ತಿರುವ ವಿಷಯ. ಆದರೆ ಎರಡೂ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದ ಬಳಿಕ ನಡೆದ ಆಂತರಿಕ ಸಂಘರ್ಷ, ಮತದಾನ ಹತ್ತಿರವಾಗುತ್ತಿದ್ದಂತೆ ಬರುತ್ತಿರುವ ‘ಗುಪ್ತ’ ಮಾಹಿತಿಗಳು ಪಕ್ಷದ ನಾಯಕರನ್ನು ಗೊಂದಲ ಹಾಗೂ ಆತಂಕಕ್ಕೆ ಸಿಲುಕಿಸಿವೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಬೇಕು ಎನ್ನುವ ಕಾರಣಕ್ಕೆ ಹಾಗೂ ಕರ್ನಾಟಕ ದಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎನ್ನುವ ಸಂದೇಶ ರವಾನಿಸಬೇಕು ಎನ್ನುವ ಕಾರಣಕ್ಕೆ ತೃತೀಯ ಭಾಷೆಯ ಅಂಕವನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಪರಿಗಣಿಸುವ ಬದಲು ಗ್ರೇಡಿಂಗ್ ಕೊಟ್ಟು ಕೈತೊಳೆದುಕೊಳ್ಳುವುದಾಗಿ ಇಲಾಖೆ ಹೇಳಿದೆ.

Ranjith H Ashwath Column: ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?

ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?

ಅಂದಿನ ಅನಿವಾರ್ಯತೆ ಹಾಗೂ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದ ಮೈತ್ರಿಯು ಸದ್ಯ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ದಕ್ಷಿಣ ಭಾರತ ದಲ್ಲಿ ಬಿಜೆಪಿ ನೆಚ್ಚಿಕೊಳ್ಳಬಹುದಾದ ಏಕೈಕ ರಾಜ್ಯ ಕರ್ನಾಟಕವಾಗಿದ್ದರೂ, ಈವರೆಗೆ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಿದ್ದಕ್ಕಿಂತ ಮೈತ್ರಿ, ಆಪರೇಷನ್ ಕಮಲದ ಮೂಲಕ ‘ಮ್ಯಾಜಿಕ್ ನಂಬರ್’ ದಾಟಿರುವುದು ವಾಸ್ತವ.

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

ಖಾಲಿ ಹುದ್ದೆಗಳ ಭರ್ತಿಗೆ ಹತ್ತಾರು ಕಾರಣಗಳಿದ್ದರೂ, ಪ್ರತಿವರ್ಷ ನಿವೃತ್ತಿಯಾಗುವ ನೌಕರರ, ಸಿಬ್ಬಂದಿಯ ಸಂಖ್ಯೆಯಂತೂ ಸರಾಸರಿ ಒಂದೇ ರೀತಿಯಲ್ಲಿರುತ್ತದೆ. ಇದರೊಂದಿಗೆ ಅಸಹಜ ವಾಗಿ ಮೃತಪಡುವ, ವಿವಿಧ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆಯೂ ಸೇರಿಕೊಳ್ಳುವುದರಿಂದ ಆಯಾ ವರ್ಷದ ಭರ್ತಿಯನ್ನು ಆಯಾ ವರ್ಷವೇ ಮಾಡದೇ ಹೋದರೆ ಇರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಲೇ ಸಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ.

Ranjith H Ashwath Column: ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ಅಧಿಕಾರಕ್ಕೆ ಬರುವ ಬಹುತೇಕ ಸರಕಾರಗಳು ಶಿಕ್ಷಣಕ್ಕೆ ಒತ್ತು ನೀಡುವ ಮಾತುಗಳನ್ನು ಆಡು ತ್ತವೆ. ಅದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ, ಬೋಧಕ ಸಿಬ್ಬಂದಿಯ ನೇಮಕ, ಮೂಲಸೌಕರ್ಯ ಮಾಡುವುದಾಗಿ ಘೋಷಿಸುತ್ತವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿ ವರ್ಷ ಒಂದಿಲ್ಲೊಂದು ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸುತ್ತವೆ.

Ranjith H Ashwath Column: ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !

ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !

ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸರಕಾರಗಳು ಬದಲಾಗುವುದಕ್ಕೆ ಭ್ರಷ್ಟಾಚಾರದೊಂದಿಗೆ ನಿರುದ್ಯೋಗ ಸಮಸ್ಯೆಯೂ ಪ್ರಮುಖ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಉದ್ಯೋಗ ಸೃಷ್ಟಿಗೆ ಸರಕಾರದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಗಳನ್ನು ನೀಡುತ್ತಾ ಬಂದಿವೆ.

Ranjith H Ashwath Column: ವಿವಿ ಚುನಾವಣೆ ವಿಷಯದಲ್ಲೇಕೆ ಗೊಂದಲ ?

Ranjith H Ashwath Column: ವಿವಿ ಚುನಾವಣೆ ವಿಷಯದಲ್ಲೇಕೆ ಗೊಂದಲ ?

ಜೆಎನ್‌ಯು ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಯ ಬಳಿಕ ಗಲಾಟೆ, ಅಶಾಂತಿ ಸೃಷ್ಟಿಯಾಗಿರುವ ಉದಾಹರಣೆಗಳಿವೆ. ಇದರೊಂದಿಗೆ ರಾಜಕೀಯ ಪಕ್ಷಗಳನ್ನು ಪೂರ್ಣ ಪ್ರಮಾಣದಲ್ಲಿ ಹೊರಗಿಟ್ಟು ಚುನಾವಣೆ ನಡೆಸುವುದು ಕರ್ನಾಟಕ ದಲ್ಲಿ ಸದ್ಯಕ್ಕೆ ತೀರಾ ಕಷ್ಟ. ಒಂದು ವೇಳೆ ನೇರ ಅಥವಾ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಪ್ರಭಾವದೊಂದಿಗೆ ಚುನಾವಣೆ ನಡೆದರೆ, ಶೈಕ್ಷಣಿಕ ಕಾರ್ಯಕ್ಕೆ ಸಮಸ್ಯೆಯಾಗಲಿದೆ ಎನ್ನುವ ಆತಂಕವನ್ನು ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳು ವ್ಯಕ್ತಪಡಿಸಿದ್ದಾರೆ.

Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

Ranjith H Ashwath Column: ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !

ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !

ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿ, ಬಿಜೆಪಿಯ ಒಳಜಗಳ, ಒಳ ಕಿತ್ತಾಟದ ಫಲ ವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಬಹುಮತ ಬಂದಿತ್ತು. ಬಳಿಕ ನಡೆದ ಉಪಚುನಾವಣೆ, ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ 139 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.

SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿರ್ಬಂಧ ಹೇರಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದೊಳಗೆ ಈ ರೀತಿ ಅಕ್ರಮ ಕಟ್ಟಡ ಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ, ವನ್ಯಜೀವಿ ಗಳನ್ನು ರಕ್ಷಿಸಬೇಕು ಎನ್ನುವ ಆಲೋಚನೆ ಇದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯನ್ನು ಸ್ಥಗಿತಗೊಳಿಸುವುದಕ್ಕಿಂತ ಮೊದಲು ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಜಮೀನು ಮಾಡಿಕೊಂಡಿರುವವರು, ಎಲೆಕ್ಟ್ರಿಕ್ ಫೆನ್ಸಿಂಗ್ಗಳನ್ನು ಮಾಡಿಕೊಂಡಿರುವವರನ್ನು ಮಟ್ಟಹಾಕಬೇಕಿದೆ

Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

Safari for VIPs?: ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಂಪೂರ್ಣವಾಗಿ ಸಫಾರಿ ನಿರ್ಬಂಧವಾಗಿಲ್ಲ. ಬದಲಿಗೆ ಅಧಿಕಾರಿ ವರ್ಗ, ರಾಜಕೀಯ ನಾಯಕರು, ಅವರ ಕುಟುಂದವರು ಬಂದರೆ ಈಗಲೂ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ನಲ್ಲಿಯೇ ರಾಜಾತಿಥ್ಯ ನೀಡಿ, ಸಫಾರಿಗೆ ಕರೆದುಕೊಂಡು ಹೋಗಲಾಗು ತ್ತಿದೆ ಎನ್ನುವ ಮಾತುಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ.

Safari: ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ಈ ಹಿಂದೆ ಬಂಡೀಪುರ, ನಾಗರಹೊಳೆ ಭಾಗದಲ್ಲಿ ಅರಣ್ಯದ ಅಂಚಿನಿಂದ ಮೂರು ಕಿಮೀ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಆ ಪ್ರದೇಶದಲ್ಲಿ ಯಾವುದೇ ಕಟ್ಟಡ ಕಾಮಗಾರಿಗೆ ಅಥವಾ ಕೃಷಿಗೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಪ್ರಾಣಿಗಳು ಕಾಡಿನಿಂದ ಹೊರ ಬಂದರೂ ಮನುಷ್ಯರ ಸಂಪರ್ಕ ಸಿಗುತ್ತಿರಲಿಲ್ಲ. ಆದರೆ ಸಚಿವ ಸಂಪುಟ ಉಪಸಮಿತಿ ಈ ನಿರ್ಬಂಧವನ್ನು ಮೂರು ಕಿಮೀ ನಿಂದ ಒಂದು ಕಿಲೋ ಮೀಟರ್‌ಗೆ ಇಳಿಸಿದೆ.

Safari Bandh: ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಬಂಡೀಪುರ-ನಾಗರಹೊಳೆ ಭಾಗದ ರೆಸಾರ್ಟ್ ಮಾಲೀಕರು ಇಡೀ ವರ್ಷದ ಲಾಭದ ಶೇ.50ರಷ್ಟು ಲಾಭ ವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಸಫಾರಿ ನಿರ್ಬಂಧದ ತೀರ್ಮಾನದಿಂದಾಗಿ, ನಷ್ಟ ಇರಲಿ, ಇಷ್ಟು ವರ್ಷದ ಲಾಭ ವನ್ನೂ ಕಳೆದು ಕೊಳ್ಳುವ ಆತಂಕ ರೆಸಾರ್ಟ್ ಮಾಲೀಕರದ್ದಾಗಿದೆ.

Loading...