ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಹಿಂತಿರುಗಿ ನೋಡದೆ ಓಡಿದೆವು- ಭಯೋತ್ಪಾದಕ ದಾಳಿಯಿಂದ ಪಾರಾದ ಮಹಾರಾಷ್ಟ್ರ ದಂಪತಿ

Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ಭೀಕರ ನಾಗರಿಕರ ಮೇಲಿನ ದಾಳಿಯಾಗಿದೆ. ಆದರೆ, ಕೇವಲ 20 ನಿಮಿಷಗಳ ಅಂತರದಿಂದ ಮಹಾರಾಷ್ಟ್ರದ ಕುಟುಂಬವೊಂದು ಅದೃಷ್ಟವಶಾತ್ ಬದುಕುಳಿದಿದೆ. ದಾಳಿಯ ಇಂಚಿಂಚು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ಉಗ್ರರ ಕಣ್ಣಿನಿಂದ ಪಾರಾದ ಮಹಾರಾಷ್ಟ್ರ ದಂಪತಿ ಹೇಳಿದ್ದೇನು..?

ದಾಳಿಯಿಂದ ಪಾರಾಗಿ ಬಂದ ವ್ಯಕ್ತಿ

Profile Sushmitha Jain Apr 23, 2025 10:49 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (PahalgamTerror Attack) ನಡೆದ ಭಯೋತ್ಪಾದಕ ದಾಳಿಯಲ್ಲಿ (Terrorist Attack) 26 ಪ್ರವಾಸಿಗರು ಸಾವನ್ನಪ್ಪಿದ್ದು, ಇತ್ತೀಚಿನ ವರ್ಷಗಳಲ್ಲಿನ ಅತ್ಯಂತ ಭೀಕರ ನಾಗರಿಕರ ಮೇಲಿನ ದಾಳಿಯಾಗಿದೆ. ಆದರೆ, ಕೇವಲ 20 ನಿಮಿಷಗಳ ಅಂತರದಿಂದ ಮಹಾರಾಷ್ಟ್ರದ ಕುಟುಂಬವೊಂದು (Family from Maharashtra) ಅದೃಷ್ಟವಶಾತ್ ಬದುಕುಳಿದಿದೆ. ಶ್ರೀನಗರದಿಂದ ರಸ್ತೆ ಮೂಲಕ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಪಹಲ್ಗಾಮ್‌ನ ಬೇಸಿಗೆಯ ಏಕಾಂತ ಸ್ಥಳದಲ್ಲಿ ನಡೆದ "ಹೇಯ ಕೃತ್ಯ"ವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ದಾಳಿಕೋರರನ್ನು "ನ್ಯಾಯಕ್ಕೆ ಒಳಪಡಿಸಲಾಗುವುದು" ಎಂದು ಪ್ರತಿಜ್ಞೆ ಮಾಡಿದ್ದಾರೆ.

ನಾಗ್ಪುರದಿಂದ ಆಗಮಿಸಿದ್ದ ಕುಟುಂಬವೊಂದು ಘಟನಾ ಸ್ಥಳವನ್ನು ಕೇವಲ 20 ನಿಮಿಷಗಳ ಹಿಂದೆ ತೊರೆದಿದ್ದರಿಂದ ಬದುಕುಳಿದಿದೆ. “ನಾವು ಸ್ಥಳವನ್ನು ಬಿಟ್ಟ ಕೂಡಲೇ ಗುಂಡಿನ ಸದ್ದು ಕೇಳಿತು. ಎಲ್ಲರೂ ಓಡುತ್ತಿದ್ದರು. ನಾವು ಹಿಂತಿರುಗಿ ನೋಡದೆ ಓಡಿದೆವು” ಎಂದು ಕುಟುಂಬದ ಮುಖ್ಯಸ್ಥ ತಿಳಿಸಿದ್ದಾರೆ. ನಿರ್ಗಮನ ದ್ವಾರ ಕೇವಲ 4 ಅಡಿ ಅಗಲವಾಗಿದ್ದು, ಜನಸಂದಣಿಯಿಂದ ಓಡಲು ಕಷ್ಟವಾಯಿತು ಎಂದ ಅವರು, “ನನ್ನ ಹೆಂಡತಿ ಮತ್ತು ಮಗನ ಸುರಕ್ಷತೆಯ ಬಗ್ಗೆ ಚಿಂತೆಯಾಗಿತ್ತು. ಓಡುವಾಗ ನನ್ನ ಹೆಂಡತಿಯ ಕಾಲು ಮುರಿದಿದೆ” ಎಂದರು.

ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಅವರ ಪತ್ನಿ, “ಗುಂಡಿನ ಶಬ್ದ ಕೇಳಿದ ತಕ್ಷಣ ಜನರು ಗುಂಡು ಹಾರಿಸುತ್ತಿದ್ದಾರೆ, ಓಡಿ ಎಂದು ಕೂಗಿದರು. ಹಿಂದಿನಿಂದ ಜನರು ತಳ್ಳುತ್ತಿದ್ದರು. ಮಕ್ಕಳೂ ಇದ್ದರು, ಓಡಲು ತುಂಬಾ ಕಷ್ಟವಾಯಿತು” ಎಂದು ವಿವರಿಸಿದ್ದಾರೆ. ಪ್ರವಾಸಿ ಮಾರ್ಗದರ್ಶಿ ವಹೀದ್ ಎಂಬಾತ ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಕುದುರೆಯ ಮೇಲೆ ಸ್ಥಳಾಂತರಿಸಿದ್ದಾನೆ. “ಕೆಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಅವರು ಸತ್ತಂತೆ ಕಾಣುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ.



ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲಿನ ಯಾವುದೇ ದಾಳಿಗಿಂತ ಇದು ದೊಡ್ಡದಾಗಿದೆ. ಈ ದಾಳಿಯು ನಮ್ಮ ಅತಿಥಿಗಳ ಮೇಲಿನ ಅಪರಾಧವಾಗಿದೆ. ದಾಳಿಕೋರರು ಪ್ರಾಣಿಗಳಿಗಿಂತ ಕೀಳು, ಅವರು ಖಂಡನೆಗೆ ಅರ್ಹರು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೌದಿ ಅರೇಬಿಯಾ ಪ್ರಚಾಸದಲ್ಲಿದ್ದ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪರ್ಕಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ. ಅಮಿತ್ ಶಾ ಅವರು ರಾತ್ರಿ 9 ಗಂಟೆಯ ನಂತರ ಶ್ರೀನಗರಕ್ಕೆ ಆಗಮಿಸಿದ್ದಾರೆ. “ಈ ಕೃತ್ಯದಲ್ಲಿ ಭಾಗಿಯಾದವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು,” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Pahalgam Terror Attack: ಉಗ್ರರ ಅಟ್ಟಹಾಸಕ್ಕೆ 3ನೇ ಕನ್ನಡಿಗ ಬಲಿ, ಬೆಂಗಳೂರಿನ ಮಧುಸೂದನ್‌ ರಾವ್‌ ಸಾವು

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಈ ಹತ್ಯೆಗಳು ಹೃದಯವಿದ್ರಾವಕವಾಗಿವೆ. ದೇಶವೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿ, ಕೇಂದ್ರ ಸರ್ಕಾರ “ಜವಾಬ್ದಾರಿಯನ್ನು ಸ್ವೀಕರಿಸಬೇಕು” ಎಂದು ಒತ್ತಾಯಿಸಿದ್ದಾರೆ. ಪಹಲ್ಗಾಮ್‌ನ ಈ ದಾಳಿಯು ಪ್ರವಾಸಿ ಋತುವಿನ ಆರಂಭದಲ್ಲೇ ಆಘಾತವನ್ನುಂಟು ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು.