ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಓದುಗರ ಓಣಿ

Readers Colony: ವೇತನ ಎಲ್ಲಿ ಹೋಗುತ್ತಿದೆ?

Readers Colony: ವೇತನ ಎಲ್ಲಿ ಹೋಗುತ್ತಿದೆ?

ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಮುಗಿದರೂ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಣ ನೀಡಿಲ್ಲ. ಸಾಲ ಮಾಡಿದ ಆಸಾಮಿ ಇನ್ನೊಬ್ಬರ ಹತ್ತಿರ ಸಾಲ ಮಾಡಿ ಮೊದಲ ಸಾಲವನ್ನು ತೀರಿಸಿದಂತೆ ಸರಕಾರವೂ ಕೂಡ ಹಣವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಹಾಗೆ ಕಾಣುತ್ತಿದೆ.

Readers Colony: ಸರಕಾರ ಎಚ್ಚೆತ್ತುಕೊಳ್ಳಲಿ!

Readers Colony: ಸರಕಾರ ಎಚ್ಚೆತ್ತುಕೊಳ್ಳಲಿ!

ಹಿಮಾಚಲ ಪ್ರದೇಶ ಸರಕಾರವು ನೌಕರರಿಗೆ ಪೂರ್ಣ ಸಂಬಳ ನೀಡಲಾರದೇ ಶೇ.30ರಷ್ಟು ಕಡಿತಗೊಳಿ ಸಿದೆ. ನಮ್ಮ ಕರ್ನಾಟಕ ಸರಕಾರ ಖಾಲಿ ಹುದ್ದೆಗಳ ನೇಮಕಾತಿ ಮಾಡಿದರೆ ನೀಡಬೇಕಾಗುವ ಸಂಬಳದ ಹಣ ಉಳಿಸಿ, ಅದನ್ನೇ ಗ್ಯಾರಂಟಿಗಳಿಗೆ ಬಳಸಲು ಕಳೆದ ಮೂರು ವರ್ಷಗಳಿಂದಲೂ ವಿವಿಧ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಸುಮಾರು 3.75 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದ ಈ ಸರಕಾರ ನಿರುದ್ಯೋಗಿ ಯುವಜನಾಂಗದ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ.

Readers Colony: ವಿದ್ಯುತ್ ದರ ಏರಿಕೆ ಶಾಕ್

Readers Colony: ವಿದ್ಯುತ್ ದರ ಏರಿಕೆ ಶಾಕ್

ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಂಗಳು) ನಷ್ಟದ ಭೀತಿಯಿಂದ ಪ್ರಸ್ತಾಪನೆ ಸಲ್ಲಿಸಿರುವುದು ವಿಪರ್ಯಾಸವೇ ಸರಿ. ನಷ್ಟಕ್ಕೆ ಸರಿಯಾದ ಕಾರಣವನ್ನು ಹುಡುಕುವುದರ ಬದಲು ರಾಜ್ಯದ ಜನತೆಯ ಜೇಬಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೈ ಹಾಕಿ ದರ ಏರಿಕೆಗೆ ಆದೇಶ ನೀಡಿರುವುದು ಅನಗತ್ಯ ಬೆಳವಣಿಗೆ.

Readers Colony: ಇವರಿಗೇಕೆ ಭಾರತ ರತ್ನವಿಲ್ಲ?

Readers Colony: ಇವರಿಗೇಕೆ ಭಾರತ ರತ್ನವಿಲ್ಲ?

‘ಭಾರತ ರತ್ನ’ ಪ್ರಶಸ್ತಿ ವಿಷಯ ತಿಳಿದೇ ಇದೆ. ಯಾವುದೇ ಒಂದು ಕ್ಷೇತ್ರದಲ್ಲಿ ಅಭೂತ ಪೂರ್ವ ಸೇವೆ ಅಥವಾ ಸಾಧನೆ ಮಾಡಿದವರಿಗೆ ಸಲ್ಲುವ ಗೌರವ ಇದು. ಇದು ಪ್ರಾರಂಭವಾಗಿದ್ದು 1954ರಲ್ಲಿ. ಇಲ್ಲಿಯ ತನಕ 53 ಜನರಿಗೆ ಈ ಗೌರವ ನೀಡಲಾಗಿದೆ. ಅವುಗಳಲ್ಲಿ 35- 38 ರಾಜಕಾರಣಿಗಳಿಗೆ, 6-7 ಸಿನಿಮಾ ನಟ-ನಟಿಯರಿಗೆ, ಸಂಗೀತಗಾರರಿಗೆ, ವಿಜ್ಞಾನಿಗಳಿಗೆ, ಸಮಾಜ ಸೇವಕರಿಗೆ, ಕ್ರಿಕೆಟಿಗರಿಗೆ. ಆದರೆ ಕೇವಲ ಒಂದೇ ಒಂದು ಪ್ರಶಸ್ತಿ ಉದ್ಯಮಿಗೆ ಸಂದಿದೆ ಅದು ಜೆಆರ್‌ಡಿ ಟಾಟಾ ಅವರಿಗೆ !!

Readers Colony: ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ!

Readers Colony: ಮುಖ್ಯ ರಸ್ತೆಗೆ ಕಾಯಕಲ್ಪ ಬೇಕಾಗಿದೆ!

ಅತಿ ಹೆಚ್ಚಿನ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು, ರಾಜಕೀಯ ನಾಯಕರು, ಸುಶಿಕ್ಷಿತರು, ಖಾಸಗಿ ಕಂಪನಿಗಳ ನೌಕರರು ವಾಸ ಮಾಡುವಂತಹ ಪಟ್ಟಣದ ಪ್ರಮುಖ ಬಡಾವಣೆಯೆ ಕೆಎಚ್‌ಬಿ ಕಾಲೋನಿ ಆಗಿದ್ದು, ಗಮನಾರ್ಹ ಸಂಗತಿ ಏನೆಂದರೆ, ನಂಜನಗೂಡು ಪಟ್ಟಣದ ಭಾಗಶಃ ಜನಸಂಖ್ಯೆ ಈ ಭಾಗದ ಇದ್ದು ಹೌಸಿಂಗ್ ಬೋರ್ಡ್ ರಚನೆ ಆದ ನಂತರ ಇದರ ಅಕ್ಕ-ಪಕ್ಕ ಸರಿ ಸುಮಾರು 15-20ಕ್ಕೂ ಹೆಚ್ಚು ಲೇಔಟ್ʼಗಳು ಇವತ್ತಿನವರೆಗೆ ನಿರ್ಮಾಣಗೊಂಡಿವೆ.

Readers Colony: ಹಿಂದಿ ಇರಲಿ, ಹೇರಿಕೆ ವಿರೋಧಿಸೋಣ

ಹಿಂದಿ ಇರಲಿ, ಹೇರಿಕೆ ವಿರೋಧಿಸೋಣ

ಹಾಡಿನಲ್ಲಿ ಅಣ್ಣಾವ್ರೇ ಹೇಳಿಲ್ಲವೇ ’ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡಾ...ಕನ್ನಡಾ...’ ಅಂತ. ಹಾಗಾಗಿ ಹಿಂದಿಗೆ ಅಂಕ ಇಲ್ಲ ಎಂಬ ಆದೇಶವನ್ನು ಹಿಂಪಡೆಯು ವುದು ಸೂಕ್ತ. ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಹಾಗೂ ಎಲ್ಲ ಕಡೆ ಕನ್ನಡವೇ ಇರಲಿ. ಪರಭಾಷಿಕರಿಗೂ ಕನ್ನಡವನ್ನೇ ಬಳಸಲು ಕಲಿಸೋಣ.

Readers Colony: ಕಥೆಗಾರರ ಪಡಿಪಾಟಲು

Readers Colony: ಕಥೆಗಾರರ ಪಡಿಪಾಟಲು

‘ಲವ್ ಮಾಕ್‌ಟೈಲ್-3’ ಚಿತ್ರದ ಕಥೆಯು 1990ರಲ್ಲಿ ಬಿಡುಗಡೆಯಾಗಿದ್ದ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದ ಕಥೆಯನ್ನು ಹೋಲುವಂತಿದೆ ಎಂದು ಅಂಕಣಕಾರರು ತಿಳಿಸಿದ್ದಾರೆ; ಈ ಚಿತ್ರದ ನಿರ್ದೇಶಕರಾದ ಭಾರ್ಗವ ಅವರು ಈ ಕುರಿತಂತೆ ಸ್ಪಷ್ಟನೆ ನೀಡಿದರೆ ಒಳಿತು. ಕಿರುತೆರೆ ಯೂ ಇದಕ್ಕೆ ಹೊರತಾಗಿಲ್ಲ, ಅಲ್ಲಂತೂ ಕೇಳುವವರೇ ಇಲ್ಲ

Readers Colony: ಹೊಸ ಮನ್ವಂತರ

Readers Colony: ಹೊಸ ಮನ್ವಂತರ

‘ನೋಟ್ ಬ್ಯಾನ್ ನೆನಪಿಸಿದ ಧುರಂಧರ್’ ಶೀರ್ಷಿಕೆಯ ಮೋಹನ್ ವಿಶ್ವ ಅವರ ಅಂಕಣ ಬರಹ (ಮಾ.21) ತುಂಬಾ ಪ್ರಸ್ತುತವಾಗಿದೆ. ಭಾರತದ ಆರ್ಥಿಕತೆಯನ್ನು ಅಭದ್ರಗೊಳಿಸುವ ಯೋಜನೆ ಗಳು ನೆರೆಯ ಪಾಕಿಸ್ತಾನದಲ್ಲಿ ಬಹಳ ವರ್ಷಗಳಿಂದ ರೂಪುಗೊಳ್ಳುತ್ತಲೇ ಇವೆ. ಅವುಗಳಲ್ಲಿ ಮುಖ್ಯವಾದುದು ನಕಲಿ ನೋಟಿನ ದಂಧೆ.

Readers Colony: ಥ್ಯಾಂಕ್ಯೂ ವಾಟ್ಸಾಪ್!

Readers Colony: ಥ್ಯಾಂಕ್ಯೂ ವಾಟ್ಸಾಪ್!

ಒಂದು ಮೆಸೇಜ್ ಈ ಕಡೆಯಿಂದ ಫಾರ್ವರ್ಡ್ ಆದ್ರ, ‘ಧಡಕ್’ ಅಂತ ಇನ್ನೊಂದು ಫಾರ್ವರ್ಡ್ ಆ ಕಡೆಯಿಂದ ಬರ್ತದ! ಒಂಥರಾ ಲಗ್ನದಾಗ ಕೊಟ್ಟಂಥ ರವಿಕೆ ಖಣಾ ಇದ್ದಂಗ.. ಪ್ಯೂರ್‌ಲೀ ದಾಟಸ್ಲಿಕ್ಕೇ. ಮೆಸೇಜುಗಳ ಜಾವಕ-ಆವಕ ಸರಿಯಾಗಿ ಟ್ಯಾಲಿ ಆದ್ರ ಸಾಕು! ಯಾವುದೇ ಸಾರ್ವಜನಿಕ ಭೇಟಿ ಇಲ್ಲ, ಸಾಮೂಹಿಕ ಪ್ರಾರ್ಥನೆ ಇಲ್ಲ, ನಿಗದಿತ ಸಮಯ-ಸ್ಥಳ ಅನ್ನೋದೇ ಇಲ್ಲ, ನಿರ್ದಿಷ್ಟ ಉಡುಪೂ ಇಲ್ಲ, ಸೆಕ್ಯುಲರ್ ಹಿಂದೂಗಳು ನಾವು ಅದಕ್ಕ.

Readers Colony: ಕೇರಳ ಮಾದರಿಯಾಗಲಿ

Readers Colony: ಕೇರಳ ಮಾದರಿಯಾಗಲಿ

ಜನರಿಗೆ ‘ಉಚಿತ’ಗಳ ಭಾಗ್ಯವನ್ನು ನೀಡುವುದಕ್ಕಿಂತ, ಉಚಿತ ಶಿಕ್ಷಣ ಮತ್ತು ಆರೋಗ್ಯ ಚಿಕಿತ್ಸೆ ಯ ಭಾಗ್ಯವನ್ನು ನೀಡಬೇಕು ಎನ್ನುವ ಕೂಗು ಬಹುದಿನಗಳಿಂದ ಅಲ್ಲಿ ಕೇಳಿ ಬರುತ್ತಿತ್ತು; ಈ ಪೈಕಿ ಇನ್ನೊಂದು ಬೇಡಿಕೆಯೂ ಈಡೇರಲಿದೆ ಎಂಬ ಆಶಾಭಾವನೆ ಯಲ್ಲಿದ್ದಾರೆ ಅಲ್ಲಿನ ಜನರು

Readers Colony: ಮನುಷ್ಯನಿಗೆ ಜೇನು ಅಮೃತ, ನಾಯಿಯ ಪಾಲಿಗೆ ಯಮ!

ಮನುಷ್ಯನಿಗೆ ಜೇನು ಅಮೃತ, ನಾಯಿಯ ಪಾಲಿಗೆ ಯಮ!

ಆಯುರ್ವೇದದಲ್ಲಿ, ಜೇನು ತುಪ್ಪವನ್ನು ಅಮೃತ ಅಂತಲೇ ಪರಿಗಣಿಸುತ್ತಾರೆ. ಆದರೆ ಅಚ್ಚರಿಯ ಸಂಗತಿ ಅಂದರೆ, ಅದೇ ಜೇನನ್ನು ನೆಕ್ಕಿದರೆ ನಾಯಿ ಸಾಯುತ್ತದೆ. ದೇಸೀ ಹಸುವಿನ ತುಪ್ಪ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ. ಆದರೆ ಸದಾ ಕೊಳಕನ್ನೇ ತಿನ್ನುವ ನೊಣ ಇದೇ ತುಪ್ಪದ ರುಚಿ ನೋಡಲು ಬಯಸಿದರೆ, ನೋವಿನಿಂದ ವಿಲಾ-ವಿಲಾ ಒದ್ದಾಡಿಕೊಂಡು ಸಾಯುತ್ತದೆ.

Readers Colony: ಬದುಕಲು ಪ್ರೇರಣೆ

Readers Colony: ಬದುಕಲು ಪ್ರೇರಣೆ

ನಮ್ಮೊಳಗಿನ ಮೌನವನ್ನು ಆಲಿಸುವುದನ್ನು ಈ ಲೇಖನ ಕಲಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಜೀವನದ ಸಂಕಷ್ಟಗಳನ್ನು ಕಂಡು ಮರುಗುತ್ತೇವೆ; ಆದರೆ ‘ಗಾಯಗಳೇ ಬೆಳಕು ಪ್ರವೇಶಿ ಸುವ ದ್ವಾರಗಳು’ ಎಂಬ ರೂಮಿಯವರ ಮಾರ್ಮಿಕ ಮಾತುಗಳು ಕಷ್ಟಗಳನ್ನು ಕಾರಾತ್ಮಕವಾಗಿ ಸ್ವೀಕರಿಸುವ ದಾರಿಯನ್ನು ತೋರಿಸಿವೆ

Readers Colony: ದಂಡ ಕಟ್ಟಿದರೆ ಸಕ್ರಮವೇ?

Readers Colony: ದಂಡ ಕಟ್ಟಿದರೆ ಸಕ್ರಮವೇ?

ಕಟ್ಟಡಗಳ ಸೆಟ್‌ಬ್ಯಾಕ್ ಉಲ್ಲಂಘನೆ ಕುರಿತಂತೆ ಈ ಮೊದಲಿದ್ದ ಶೇ.5ರಷ್ಟು ದಂಡವನ್ನು ಈಗ ಶೇ.15ಕ್ಕೆ ಹೆಚ್ಚಿಸುವ ತೀರ್ಮಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಂದಿದ್ದು, ಈಗ ನಿರ್ಮಾಣವಾಗುತ್ತಿರುವ ಮತ್ತು ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ 5000 ಚದರಡಿಗಳ ನಿವೇಶ ನದ ಕಟ್ಟಡಕ್ಕೆ ಇದು ಅನ್ವಯ ಎಂದು ವರದಿಯಾಗಿದೆ.

Readers Colony: ಹಿಂದೂಗಳ ಮೇಲಿನ ದಬ್ಬಾಳಿಕೆ ಇನ್ನಾದರೂ ನಿಲ್ಲಲಿ

ಹಿಂದೂಗಳ ಮೇಲಿನ ದಬ್ಬಾಳಿಕೆ ಇನ್ನಾದರೂ ನಿಲ್ಲಲಿ

ಖುದ್ದು ಯುನೂಸ್ ಸರ್ಕಾರವೇ ಕಳೆದ ವರ್ಷದ ಅವಧಿಯಲ್ಲಿ ಹಿಂದೂಗಳಿಗೆ ಸಂಬಂಧಿ ಸಿದ 645 ಹಿಂಸಾಚಾರಗಳಾಗಿವೆ ಅಂತ ಮಾಹಿತಿ ಕೊಟ್ಟಿದೆ. ಎಲೆಕ್ಷನ್ ನಡೆಯೋವಾಗಲು ಇಬ್ಬರು ಹಿಂದೂಗಳ ಹತ್ಯೆಯಾಗಿದೆ. ಆದರೀಗ ಅಲ್ಲಿ ಜನರಿಂದ ಆಯ್ಕೆಯಾದ ಬಿಎನ್‌ಪಿ ಪಕ್ಷ ಅಿಕಾರಕ್ಕೆ ಬಂದಿದೆ. ಜನರ ಮೇಲೆ ಹತ್ಯಾಕಾಂಡ ಮಾಡಿಸಿದ್ದಾರೆ ಅಂತೇಳಿ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಈ ಸಲ ಚುನಾವಣೆಗೆ ಬ್ಯಾನ್ ಹೇರಲಾಗಿತ್ತು.

Readers Colony: ಇದು ಕಾಲದ ಮಹಿಮೆ!

Readers Colony: ಇದು ಕಾಲದ ಮಹಿಮೆ!

ಇನ್ನು ಅಂಕಣಕಾರರು ವಿವರಿಸಿರುವಂತೆ, ಒಂದು ಟೇಬಲ್ ಲ್ಯಾಂಪ್ ಎಷ್ಟೊಂದು ದೂರದಿಂದ, ಅದೆಷ್ಟು ಕಡಿಮೆ ಅವಧಿಯಲ್ಲಿ ಬಂದು ತಲುಪುತ್ತದೆ ಎಂಬುದು ಎಷ್ಟು ಅಚ್ಚರಿದಾಯಕವೋ, ಅದೇ ವಸ್ತುವಿಗೆ ಬೇಕಾದ ಕಚ್ಚಾವಸ್ತುಗಳೂ ಎಲ್ಲೆಲ್ಲಿಂದಲೋ ಬಂದು, ಎಲ್ಲೋ ಒಂದು ಕಡೆ ಜೋಡಣೆ ಗೊಂಡು ಪಕ್ಕಾ ಉತ್ಪನ್ನವಾಗಿ ಗ್ರಾಹಕರ ಕೈಸೇರುತ್ತವೆ ಎಂಬುದೂ ಕುತೂಹಲಕಾರಿಯೇ!

Readers Colony: ಎಚ್ಚರಿಸುವ ಲೇಖನ

Readers Colony: ಎಚ್ಚರಿಸುವ ಲೇಖನ

ವಿನಾಯಕ ಭಟ್ಟ ಅಂಬ್ಲಿಹೊಂಡ ಅವರ ‘ವಿದ್ಯಮಾನ’ ಅಂಕಣಬರಹ (ಜ.4) ಸಕಾಲಿಕ ವಾಗಿದೆ. ನಮ್ಮ ರಾಜ್ಯವು ಛತ್ರವಾಗುತ್ತಿದೆ. ಯಾರು ಎಲ್ಲಿಂದ ಬೇಕಾದರೂ ಬಂದು ಇಲ್ಲಿ ಠಿಕಾಣಿ ಹೂಡಿ ದರ್ಪ-ಧಿಮಾಕು ತೋರಿಸಬ ಹುದು ಎನ್ನುವಂತಾಗಿದೆ. ಬಾಂಗ್ಲಾ ನುಸುಳುಕೋರರು ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

Readers Colony: ಇದು ವಿಶಿಷ್ಠ ನಡೆ

Readers Colony: ಇದು ವಿಶಿಷ್ಠ ನಡೆ

ವಿವಿಧ ಕ್ಷೇತ್ರಗಳ ತಜ್ಞರು, ಜನಸಾಮಾನ್ಯರು, ವಿದ್ಯಾರ್ಥಿಗಳು ಜತೆಯಾಗಿ ಹಳ್ಳಿಗಳಿಗೆ ಸಾಗಿ ಅಲ್ಲಿಯ ಜನರೊಡನೆ ಬೆರೆತು ಅವರ ಸಂವೇದನೆ-ವೇದನೆಗಳಿಗೆ ಕಿವಿಯಾಗುವ ‘ನಮ್ಮ ನಡೆ, ಅಂತರಂಗದ ಕಡೆಗೆ’ ಹೆಸರಿನ ಪಾದಯಾತ್ರೆಯೊಂದು ಡಿ.27ರಂದು ಧಾರವಾಡ ನಗರದಿಂದ ಆರಂಭವಾಗಿದೆ. ಈ ನಡೆ ಅತ್ಯಂತ ಸ್ವಾಗತಾರ್ಹವಾದುದು.

Readers Colony: ಅಪೂರ್ವ ಕಥಾನಕ

Readers Colony: ಅಪೂರ್ವ ಕಥಾನಕ

ಶ್ರೀವತ್ಸ ಜೋಶಿಯವರು ಪ್ರತಿ ವಾರವೂ ಒಂದಿಂದು ಹೊಸ ವಿಷಯವನ್ನು ಆಯ್ದುಕೊಂಡು, ಅದನ್ನು ಆಳವಾಗಿ ಅಧ್ಯಯನ ಮಾಡಿ, eನಪ್ರಸರಣದ ಜತೆಗೆ ಅಲ್ಲಲ್ಲಿ ಕೊಡುವ ಗುದ್ದುಗಳು, ವ್ಯಂಗ್ಯ, ಅಣಕಗಳು ಒಳ್ಳೆಯ ಕಚಗುಳಿಯನ್ನೂ ನೀಡುತ್ತವೆ. ‘ತಿಳಿರು ತೋರಣ’ ನನ್ನ ಪ್ರೀತಿಯ ಅಂಕಣ. ಇದನ್ನು ಬರೆಯು ತ್ತಿರುವ ಜೋಶಿಯವರಿಗೂ, ಪ್ರಕಟಿಸುತ್ತಿರುವ ‘ವಿಶ್ವವಾಣಿ’ ಪ್ರತಿಕೆಗೂ ಅನಂತ ಧನ್ಯವಾದಗಳು.

Readers Colony: ಲೇಖನ ಚೆನ್ನಾಗಿದೆ

Readers Colony: ಲೇಖನ ಚೆನ್ನಾಗಿದೆ

ಗೋಪಾಡಿ ಶ್ರೀನಿವಾಸ ರಾವ್ ಅವರ ಕುರಿತಾಗಿ ಕೇಶವ ಪ್ರಸಾದ್ ಅವರು ಬರೆದ ಪರಿಚಯಾತ್ಮಕ ಲೇಖನ (ಡಿ.12) ಚೆನ್ನಾಗಿ ಮೂಡಿಬಂದಿದೆ. ನಮ್ಮ ಕರ್ನಾಟಕದ ಹೋಟೆಲ್ ಉದ್ಯಮವು ಇಡೀ ಜಗತ್ತನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಉಡುಪಿ ಹೋಟೆಲ್, ಅಡಿಗಾಸ್, ಮಯ್ಯಾ, ಕಾಮತ್, ಎಂಟಿಆರ್, ಶಾನಭಾಗ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

Readers Colony: ಜನ ಪ್ರತಿನಿಧಿಗಳು ಎಲ್ಲಿ?

Readers Colony: ಜನ ಪ್ರತಿನಿಧಿಗಳು ಎಲ್ಲಿ?

ಸುಮಾರು ಮೂರು ತಿಂಗಳಿನಿಂದ, ಬೆಂಗಳೂರು ಮಹಾನಗರಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆಯೇ ಮಾಧ್ಯಮಗಳು ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಹಜವಾಗಿ ವಿಪಕ್ಷೀಯರಿಂದ ಟೀಕೆಗಳು ಹೊಮ್ಮುತ್ತಲೇ ಇವೆ. ಸರಕಾರವೂ ನಿದ್ರೆಯಿಂದ ಎಚ್ಚೆತ್ತುಕೊಂಡಂತೆ, ಕೋಟ್ಯಂತರ ರುಪಾಯಿ ಮಂಜೂರು ಮಾಡಿ ರಸ್ತೆ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದೆ

Readers Colony: ಶಕ್ತಿಶಾಲಿಯ ಅಶಕ್ತತೆ

Readers Colony: ಶಕ್ತಿಶಾಲಿಯ ಅಶಕ್ತತೆ

ನಾವು ಯಶಸ್ಸನ್ನು ಸಾಧಿಸಲು ಯತ್ನಿಸುವಾಗ, ನಮ್ಮ ಆಪ್ತರನ್ನು ಕಡೆಗಣಿಸುವುದು ಅಥವಾ ನಮ್ಮ ವೈಯಕ್ತಿಕ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಸಾಮಾನ್ಯ. ಇಂಥ ಸನ್ನಿವೇಶಗಳನ್ನು ಎದುರಿಸು ವಾಗ ಹೇಗೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆಯೂ ಈ ಲೇಖನ ಸಂದೇಶ ವನ್ನು ನೀಡುವುದಲ್ಲದೆ, ಉತ್ತಮ ಜೀವನಕ್ಕೆ ಸೂಕ್ತವಾದ ಮಾರ್ಗವನ್ನೂ ಸೂಚಿಸುತ್ತದೆ.

Readers Colony: ಇದು ‘ಟಿವಿ’ ರಾಮಾಯಣ!

ಇದು ‘ಟಿವಿ’ ರಾಮಾಯಣ!

ನಮಗೆ ಯಾವುದೂ ಹೊಂದಾಣಿಕೆಯೇ ಆಗುವುದಿಲ್ಲ ಅಂತಾದರೆ, ನಾವು ನೋಡಬೇಕಾದ ವಾರ್ತೆ ಯಾವುದು? ಯಾವುದನ್ನು ನೋಡಬೇಕೆಂದು ನಾವು ಟಿವಿಯ ವಾರ್ತೆಯನ್ನು ಹಚ್ಚಿದ್ದು? ಎನ್ನು ವುದೇ ಕೊನೆಗೂ ನಿರ್ಣಯವಾಗುವುದಿಲ್ಲ. ಹೀಗಾಗಿ ವಾರ್ತೆಯ ಸಹವಾಸವೇ ಬೇಡ ಅಂತ ಹೆಂಗಸರು ನೋಡುವ ಧಾರಾವಾಹಿಗೆ ಬಂದರೆ, ಅದು ಒಂದು ತಿಂಗಳ ಹಿಂದೊಮ್ಮೆ ಹೀಗೆಯೇ ಬೇಜಾರು ಬಂದಾಗ ಹಚ್ಚಿದಾಗ ಇದ್ದ ಅದೇ ಜಾಗದಲ್ಲೇ, ಅಲ್ಲಿಯೇ ಕಥೆ ಬಿದ್ದಿರುತ್ತದೆ.

ಇವು ಕೃಷಿಗೂ ಪೂರಕ

ಇವು ಕೃಷಿಗೂ ಪೂರಕ

ದ್ವಿದಳ ಧಾನ್ಯದ ಸಸ್ಯಗಳು ಅತಿವೃಷ್ಟಿ ಅಥವಾ ಅನಾವೃಷ್ಟಿಯಂಥ ವಾತಾವರಣವನ್ನೂ ತಾಳಿಕೊಳ್ಳ ಬಲ್ಲ ಶಕ್ತಿಯನ್ನು ಹೊಂದಿವೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಈ ಬೆಳೆಗಳು ರೈತರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವುದರ ಜತೆಗೆ, ಪರಿಸರ ರಕ್ಷಣೆಯ ವಿಷಯದಲ್ಲೂ ದಾರಿ ತೋರುತ್ತವೆ.

Readers Colony: ಸಂವಿಧಾನದ ಜತೆ ಚೆಲ್ಲಾಟ

ಸಂವಿಧಾನದ ಜತೆ ಚೆಲ್ಲಾಟ

ರಾಜೇಂದ್ರ ಪ್ರಸಾದ್, ಹರೇಂದ್ರ ಕುಮಾರ್ ಮುಖರ್ಜಿ, ಬೆನೆಗಲ್ ನರಸಿಂಗ ರಾವ್, ಅಂಬೇಡ್ಕರ್ ಮೊದ ಲಾದ ಮಹಾಮಹಿಮರು ರಚಿಸಿದ ನಮ್ಮ ಸಂವಿಧಾನವನ್ನು, ತಮ್ಮ ಸ್ವಾರ್ಥಕ್ಕಾಗಿ ಮನ ಬಂದಂತೆ ಬದಲಾಯಿಸಿ, ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾರ ಕ್ರಮವನ್ನು ಮತ್ತು ಅದರ ಕರಾಳ ಪರಿಣಾಮವನ್ನು ಅತ್ಯಂತ ವಿವರವಾಗಿ ಪ್ರಸ್ತುತಪಡಿಸಿದ್ದಾರೆ ಗುರುರಾಜ ಗಂಟಿಹೊಳೆ (ಜುಲೈ 3). ಈ ದೇಶ ಮತ್ತು ಸಂವಿಧಾನವನ್ನು ತಮ್ಮ ಕುಟುಂಬದ ಆಸ್ತಿಯೇನೋ ಎಂಬಂತೆ ಧಾರ್ಷ್ಟ್ಯದಿಂದ ಅಹಂಕಾರದಿಂದ ನಡೆಸಿಕೊಂಡಿದ್ದರು ಇಂದಿರಾ ಗಾಂಧಿ

Loading...